*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
ಭಾಗ --7
📝 _ಮುನೀರ್ ಸಖಾಫಿ ಸಾಲೆತ್ತೂರು_
_*ಸೂತ್ರ 6:*_
*ನೆರೆಕರೆಯವರು ಉತ್ತಮರಾಗಿರಲಿ*
ನಾವು ಒಂದು ಸ್ಥಳ ಅಥವಾ ಮನೆ ಖರೀದಿಸುವಾಗ ಅಲ್ಲಿನ ನೆರೆಕರೆಯವರ ಬಗ್ಗೆ ಮೊದಲು ತಿಳಿದಿರಬೇಕಾದುದು ಅತೀ ಅಗತ್ಯವಾಗಿದೆ.
ಲಕ್ಷಾಂತರ ರೂ ಖರ್ಚು ಮಾಡಿ ಮನೆ ಕಟ್ಟಿ ಅದರಲ್ಲಿ ವಾಸ ಯೋಗ್ಯವಾಗಬೇಕಾದರೆ ಆ ಮನೆಯ ನೆರೆಕರೆಯವರು ಉತ್ತಮ ಜನರಾಗದಿದ್ದಲ್ಲಿ ಈ ದುಖಃ ಒಮ್ಮೆಯೂ ಮಾಯವಾಗುವುದಿಲ್ಲ.
ಚಿಕ್ಕ ಪುಟ್ಟ ವಿಷಯಗಳಿಗೆ ತಕರಾರೆತ್ತುವ ನೆರೆಕರೆಯವರಾದರೆ ನಮ್ಮ ಮನೆ ಎಷ್ಟೇ ದೊಡ್ಡದಿದ್ದರೂ ನೆಮ್ಮದಿ ಇರಲಾರದು.
ಲಕ್ಷಗಟ್ಟಲೆ ಖರ್ಚು ಮಾಡಿ ಮನೆ ಕಟ್ಟುವ ಮೊದಲು ನೆರೆಕರೆಯವರ ಬಗ್ಗೆ ತಿಳಿದುಕೊಂಡರೆ ಆ ಮಹಾ ವಿಪತ್ತನ್ನು ತಡೆಯಬಹುದು.
ಇಮಾಮ್ ಬುಖಾರಿ ವರದಿ ಮಾಡಿದ ಹದೀಸ್ ನೋಡಿ,
عَنْ نَافِعِ بْنِ عَبْدِ الْحَارِثِ رضي الله عنه قَالَ : قَالَ رَسُولُ اللَّهِ صَلَّى اللَّهُ عَلَيْهِ وَسَلَّمَ :مِنْ سَعَادَةِ الْمَرْءِ الْمَسْكَنُ الْوَاسِعُ, والْجَارُ الصَّالِحُ ، وَالْمَرْكَبُ الْهَنِيءُ .
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಒಬ್ಬನ ವಿಜಯದ ಲಕ್ಷಣಗಳು ಮೂರಾಗಿವೆ.
1.ವಾಸಯೋಗ್ಯವಾದ ಮನೆ.
2.ಉತ್ತಮ ನೆರೆಕರೆಯವ.
3.ಉತ್ತಮ ವಾಹನ.
(ಇಮಾಮ್ ಬುಖಾರಿಯ ಅದಬುಲ್ ಮುಫ್ರದ್ )
--------------------------------------------------------
ಇಮಾಮ್ ಬೈಹಖೀ ವರದಿ ಮಾಡಿದ ಒಂದು ಹದೀಸಲ್ಲಿ ಈ ರೀತಿ ಇದೆ,
وأربع من الشقاء فاما الشقاء فالزوجة السوء ، والجار السوء ، والمركب السوء ، وضيق المسكن (شعب الايمان)
ನಾಲ್ಕು ಕಾರ್ಯಗಳು ಸೋಲಿನ ಲಕ್ಷಣಗಳಾಗಿವೆ.
1.ಕೆಟ್ಟ ಪತ್ನಿ
2.ಕೆಟ್ಟ ನೆರೆಕರೆಯವ
3.ಕೆಟ್ಟ ವಾಹನ
4.ಕಿರಿದಾದ ಮನೆ
(ವರದಿ ಇಮಾಮ್ ಬೈಹಖಿ ಶುಹ್'ಬುಲ್ ಈಮಾನ್ 9556 ರಲ್ಲಿ)
--------------------------------------------------------
ಮನೆ ವಿಶಾಲವಾಗಿರಬೇಕು.
ಅಂದರೆ ಪುಟ್ಟ ಫ್ಯಾಮಿಲಿಗೆ 4000 ಸ್ಕ್ವಾರ್ ಫೀಟ್ ನ ಮನೆ ಬೇಕೆಂದಲ್ಲ.
ತನಗೆ ಮತ್ತು ತನ್ನ ಮನೆಗೆ ಬರುವ ಅತಿಥಿಗಳನ್ನು ಸ್ವಾಗತಿಸಲು ಬೇಕಾದ ವ್ಯವಸ್ಥೆ ಮನೆಯಲ್ಲಿರಬೇಕು.
ನಾಲ್ಕು ಜನ ಸೇರಿದರೆ ಕುಳಿತುಕೊಳ್ಳಲು ಸ್ಥಳ ಬೇಕು.
ಅವರು ತಂಗುವುದಾದರೆ ಅವರಿಗೆ ಮಲಗಳು ಸ್ಥಳ ಬೇಕು.ಆ ರೀತಿಯ ಪ್ಲಾನ್ ನೊಂದಿಗೆ ಮನೆ ನಿರ್ಮಿಸಬೇಕು ಎಂದಾಗಿದೆ ಪ್ರಸ್ತುತ ಹದೀಸ್ ನ ವ್ಯಾಖ್ಯಾನ.
ಪ್ರಖ್ಯಾತ ತತ್ವಜ್ಞಾನಿಯಾಗಿದ್ದ ಲುಕ್ಮಾನ್ ಅಲೈಹಿಸ್ಸಲಾಮ್ ತನ್ನ ಪುತ್ರನೊಂದಿಗೆ ಹೇಳಿದ ಒಂದು ವಸಿಯ್ಯತ್ ಈ ರೀತಿ ಇದೆ,
عن عمران بن سليمان رضي الله عنه قال بلغني ان لقمان عليه السلام قال لابنه يا بنى قد حملت الحجارة والحديد والحمل الثقيل فلم اجد شيئا أثقل قط من جار السوء يا بنى انى قد ذقت المر كله فلم أذق شيئا قط أمر من الفقر (شعب الايمان)
ಓ ಪ್ರೀತಿಯ ಮಗನೇ!
ನಾನು ಕಲ್ಲು ಮತ್ತು ಕಬ್ಬಿಣದಂತಹ ಬಾರದ ವಸ್ತುಗಳನ್ನು ಹೊತ್ತು ನಡೆದಿದ್ದೇನೆ.ಆದರೆ ಕೆಟ್ಟ ನೆರೆಕರೆಯವನನ್ನು ಹೊತ್ತು ನಡೆಯಲು ನನ್ನಿಂದ ಸಾಧ್ಯವಿಲ್ಲ.
ನಾನು ಹಲವಾರು "ಕಹಿ"ಯನ್ನು ಅನುಭವಿಸಿದ್ದೇನೆ.
ದಾರಿದ್ರ್ಯವೆಂಬ "ಕಹಿ" ಅನುಭವಿಸಲು ನನ್ನಿಂದ ಸಾಧ್ಯವಿಲ್ಲ.
(ಶುಹ್'ಬುಲ್ ಈಮಾನ್)
--------------------------------------------------------
ನಾವು ಎಷ್ಟೇ ಒಳ್ಳೆಯತನ ಮಾಡಿದರೂ ನೆರೆಕರೆಯವರು ಕೆಟ್ಟವರಾದರೆ ಆ ಮನೆಯಲ್ಲಿ ಒಮ್ಮೆಯೂ ನೆಮ್ಮದಿ ಇರಲಾರದು.
ಆದುದರಿಂದ ನೆಮ್ಮದಿಯ ವಾತಾವರಣ ನಮ್ಮ ಮನೆ ಪರಿಸರದಲ್ಲಿ ಬೇಕೆಂದಾದರೆ ನೆರೆಕರೆಯವರು ಹೇಗಿದ್ದಾರೆಂದು ಮೊದಲೇ ಆಲೋಚಿಸಿ.
--------------------------------------------------------
ಎಲ್ಲರಿಗೂ ಶೇರ್ ಮಾಡಿ
ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)
ಮುಂದುವರಿಯುವುದು........
No comments:
Post a Comment