*ಮೀಲಾದುನ್ನಬೀ*
*ಭಾಗ ---4.*
______________________________________
_*ಮುದಿ ವಹ್ಹಾಬಿಗಳ ಮೀಲಾದಾಚರಣೆ*_
ಮೀಲಾದಾಚರನೆಗೆ ಹಲವಾರು ಪುರಾವೆಗಳನ್ನು ಕಳೆದ ಭಾಗಗಳಲ್ಲಿ ವಿವರಿಸಲಾಗಿದೆ.
ಕೇರಳದಲ್ಲಿ ಜೀವಿಸಿದ್ದ ವಹ್ಹಾಬಿಗಳೇ ಈದ್ ಮೀಲಾದ್ ಆಚರಿಸುತ್ತಿದ್ದರು ಎಂದು ಹೇಳುವಾಗ ಅದ್ಭುತವಾಗುತ್ತಿದೆ.
ಸುನ್ನಿಗಳು ಈದ್ ಮೀಲಾದ್ ಆಚರಣೆ ಮಾಡುವಾಗ ಪುರಾವೆ ಕೇಳುವ ವಹ್ಹಾಬಿಗಳೇ!! ನಿಮ್ಮದೇ ನಾಯಕರು ಈದ್ ಮೀಲಾದ್ ಆಚರಿಸಿದ್ದರೆಂದು ನಿಮ್ಮದೇ ಪತ್ರಿಕೆಗಳಲ್ಲಿ ಬರೆಯಲಾಗಿದೆ.
ಈದ್ ಮೀಲಾದ್ ಆಚರಿಸಿದ ನಿಮ್ಮ ಪೂರ್ವೀಕ ನಾಯಕರು ನರಕದಲ್ಲೇ?
ಅವರಿಗೆ ನೀವು ಹೇಳುವ ಖುರ್ ಆನ್, ಹದೀಸ್ ತಿಳಿದಿರಲಿಲ್ಲವೇ?
ವಹ್ಹಾಬಿಗಳು ಈದ್ ಮೀಲಾದಿನ ಕುರಿತು ಬರೆದ ಲೇಖನಗಳನ್ನು ನೋಡಿರಿ,
"ಇಷ್ಟು ಹೇಳಿದ್ದರಿಂದ ಯಾವುದೇ ಹರಾಂ ,ಕರಾಹತ್ ,ಖಿಲಾಫುಲ್ ಅವ್'ಲಾ ಬೆರೆಯದ ರೂಪದಲ್ಲಿ ಶಫೀಉನಾ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಮೌಲಿದ್ ಆಚರಿಸುವುದರಿಂದ ಅವರು ನಮಗೆ ಕಲಿಸಿ ಕೊಟ್ಟ ಪವಿತ್ರ ದೀನನ್ನು ನೆಲೆನಿಲ್ಲಿಸುವುದಕ್ಕೆ ಮತ್ತು ಅವರ ಸುನ್ನತ್ತನ್ನು ಜೀವಂತಗೊಳಿಸುವುದಕ್ಕೆ ಅದು ಉತ್ಸಾಹ ನೀಡುತ್ತದೆ ಮತ್ತು ಆ ಪ್ರವಾದಿಯೊಂದಿಗೆ ಸ್ನೇಹ ಮತ್ತು ಗೌರವವನ್ನು ಅಧಿಕಗೊಳಿಸುತ್ತದೆ ಹಾಗೂ ಅದು ಕಾರಣ ನಮಗೆ ಅತೀ ಹೆಚ್ಚು ಪ್ರತಿಫಲ ಲಭಿಸಬಹುದೆಂದು ತಿಳಿಯಿತಲ್ಲವೇ.
(ಅಲ್ ಇರ್ಶಾದ್, (ಅರಬಿ ಮಲಯಾಳಂ ಮಾಸಿಕ) ಪ್ರಧಾನ ಸಂಪಾದಕರು:ಈ.ಕೆ ಮೌಲವಿ,ಹಿಜರಿ 1343 ರಬೀವುಲ್ ಅವ್ವಲ್,ಪುಟ :153)
ವಹ್ಹಾಬಿಗಳ ಇನ್ನೊಂದು ಪತ್ರಿಕೆಯಲ್ಲಿ ಬರೆಯುವುದು ನೋಡಿ,
ರಬೀವುಲ್ ಅವ್ವಲ್ ತಿಂಗಳು ಆಗಮಿಸುವಾಗ ಮುಸ್ಲಿಮರಿಗೆ ಎಲ್ಲಿಲ್ಲದ ಸಂತೋಷವುಂಟಾಗುತ್ತದೆ.ಅದರ ಕಾರಣವೇನೆಂದು ತಿಳಿಯಲು ಅಲೆದಾಡಬೇಕಾದ ಅಗತ್ಯವಿಲ್ಲ.ಲೋಕಗುರು ಮುಹಮ್ಮದ್ ಮುಸ್ತಫಾ (ಸ) ಜನಿಸಿದ ರಬೀವುಲ್ ಅವ್ವಲ್ ತಿಂಗಳಾಗಿದೆ ಅದು.ಆದುದರಿಂದಲೇ ಈ ತಿಂಗಳು ಆಗಮಿಸುವಾಗ ಮುಸ್ಲಿಮರು ಸಂತೋಷಪಡುತ್ತಾರೆ ಮತ್ತು ಆಹ್ಲಾದಿಸುತ್ತಾರೆ.
ನೆಬಿಯ್ಯುನಾ ಮುಹಮ್ಮದ್(ಸ)ಮರ ಕುರಿತು ತಿಳಿದ ಯಾವುದೇ ಮನುಷ್ಯನು ಈ ತಿಂಗಳು ಆಗಮಿಸುವಾಗ ಸಂತೋಷಪಡದಿರಲಾರ.
(ಅಲ್ ಮುರ್ಶಿದ್, ಪುಟ:153).
ವಹ್ಹಾಬೀ ನಾಯಕರು ಮೀಲಾದ್ ಆಚರಿಸೊದ ಬಗ್ಗೆ ಅಲ್ ಇರ್ಶಾದ್ ಮತ್ತು ಅಲ್ ಮುರ್ಶಿದ್ ಪತ್ರಿಕೆಯಲ್ಲಿ ಬರೆದ ಲೇಖನ ಇನ್ನೂ ತುಂಬಾ ಇದೆ.
ಅಗತ್ಯ ಬಂದರೆ ಬರೆಯುವೆನು.ಇಂಶಾ ಅಲ್ಲಾಹ್.
ಓ ವಹ್ಹಾಬೀ ಪಾದ್ರಿಗಳೇ!!
ನಿಮಗೆ ನಾಚಿಕೆ ಎಂಬುವುದು ಇದೆಯಾ?
ಮೀಲಾದಚರಣೆಯನ್ನು ಸಮರ್ಥಿಸಿ ಲೇಖನ ಬರೆದ ನಿಮ್ಮ ಅಜ್ಜಂದಿರಿಗೆ ಖುರ್ ಆನ್ ಮತ್ತು ಹದೀಸ್ ತಿಳಿದಿಲ್ಲವೇ?
*------------------------------------------*
ಜಮಾಅತೇ ಇಸ್ಲಾಮಿಗೂ ಇದು ಹಲಾಲ್ ಆಗಿತ್ತು.
ಜಮಾಅತೇ ಇಸ್ಲಾಮಿಯನ್ನರ "ಪ್ರಭೋದನಂ" ಪತ್ರಿಕೆಯಲ್ಲಿರುವ ಒಂದು ಲೇಖನ ನೋಡಿ,
*ರಬೀವುಲ್ ಅವ್ವಲ್ ಗೆ ಸ್ವಾಗತ*
ಮುಸ್ಲಿಂ ಜನತೆ ರಬೀವುಲ್ ಅವ್ವಲ್ ತಿಂಗಳನ್ನು ಬಹಳ ಕಾತರದಿಂದ ಕಾಯುತ್ತಿದ್ದಾರೆ.ಜನರು ಬಹಳ ಆನಂದದಲ್ಲಿದ್ದಾರೆ.ಮುಸ್ಲಿಂ ಆರಾಧಾನಲಯಗಳು ಮತ್ತು ಮನೆಗಳು, ವ್ಯಾಪಾರ ಸ್ಥಳಗಳು ಅಲಂಕಾರಗೊಂಡಿದೆ. ತೋರಣಗಳಿಂದ ಕಂಗೊಳಿಸುತ್ತಿದೆ.
ಮುಸ್ಲಿಮರ ಈ ಸಂತೋಷಕ್ಕಿರುವ ಕಾರಣವಾದರೂ ಏನು?
ಅದು ಬೇರೇನೂ ಅಲ್ಲ.ಕ್ರಿ.ಶ 571 ರ ರಬೀವುಲ್ ಅವ್ವಲ್'ನ ಸ್ಮರಣೆಯನ್ನು ನೆಲೆಗೊಳಿಸುವುದಾಗಿದೆ.ಆ ದಿನ ಏನು ಸಂಭವಿಸಿದೆ?ಲೋಕಾನುಗ್ರಹಿಯಾದ ಪ್ರವಾದೀ ಯವರ ಜನನ ನಡೆದ ದಿನ.ಗಜ ವರ್ಷ 1 ರಬೀವುಲ್ ಅವ್ವಲ್ 9 ಅಥವಾ 12 ನೇ ದಿನದಂದಾಗಿದೆ ಅದು ನಡೆದದ್ದು.....
ರಬೀವುಲ್ ಅವ್ವಲ್ ನ ಆರಂಭದಿಂದ ಹಿಡಿದು ಕೊನೆಯ ತನಕ ಆ ಮಹಾನುಭಾವರ ಕುರಿತು ಗದ್ಯ- ಪದ್ಯ ರೂಪದಲ್ಲಿ ಪ್ರಕೀರ್ತಿಸಲಾಗುತ್ತಿದೆ.
(ಇದನ್ನು ಸುನ್ನಿಗಳು ಮೌಲಿದ್ ಎನ್ನುತ್ತಾರೆ.😆)
ಇದೆಲ್ಲವೂ ಅವರೊಂದಿಗಿರುವ ಸ್ನೇಹ ಪ್ರಕಟವಾಗಿದೆ.ಆದರೆ ಇದು ರಬೀವುಲ್ ಅವ್ವಲ್ ಕೊನೆಗೊಳ್ಳುವಾಗ ಮುಕ್ತಾಯವಾಗುವುದಾಗಿ ಕಂಡು ಬರುತ್ತಿದೆ.
(ಪ್ರಭೋಧನಂ 1960,ನವಂಬರ್ 1,ಪುಟ:89)
ಓಲ್ಡ್ ಜಮಾಅತೇ ಇಸ್ಲಾಮಿಗಳಿಗೆ ರಬೀವುಲ್ ಅವ್ವಲ್ ನಲ್ಲಿ ಮೌಲಿದ್ ಮುಕ್ತಾಯವಾಗುತ್ತದೆ ಎಂಬ ಬೇಸರವಿತ್ತು.
ಸುನ್ನಿಗಳಿಗಿಂತ ಮೌಲಿದ್ ನ ವಿಷಯದಲ್ಲಿ ಜಮಾಅತೇ ಇಸ್ಲಾಮಿಗರಿಗೆ ಆಸಕ್ತಿಯಿತ್ತು.😀😀😀😀
ವರ್ಷ ಕಳೆದಾಗ ಜಮಾಅತೇ ಇಸ್ಲಾಮಿಯನ್ನರ ಮತ್ತು ವಹ್ಹಾಬೀ ಕಛೇರಿಗೆ ಮೌಲಿದ್ ,ಮೀಲಾದ್ ಶಿರ್ಕ್ ಎಂಬ ಹೊಸ ವಹ್ಯ್ ಬಂತು.
ಮರಿ ವಹ್ಹಾಬಿಗಳೊಂದಿಗೆ ಕೊನೆಯದಾಗಿ......
ಮೌಲಿದ್ ,ಮೀಲಾದ್ ಗಳಿಗೆ ಸುನ್ನಿಗಳೊಂದಿಗೆ ಪುರಾವೆ ಕೇಳುತ್ತೀರಾ?
ಹಳೇ ಕಾಲದಲ್ಲಿ ನಿಮ್ಮ ತಾತಂದಿರು (ವಹ್ಹಾಬೀ,ಮೌದೂದೀ ನಾಯಕರು) ಅದೆಲ್ಲವೂ ನಡೆಸಬೇಕೆಂದು ಬರೆದಿಟ್ಟಿದ್ದಾರೆ.ಪುರಾವೆ ಬೇಕಿದ್ದಲ್ಲಿ ಅವರ ಕಬ್'ರಿನ ಬಳಿ ಹೋಗಿ ಕೇಳಿರಿ.
______________________________________
*ವಹ್ಹಾಬಿಗಳ ಮೌಲಿದ್ ಮತ್ತು ಸೀರಣೆ ವಿತರಣೆ.*
ಈದ್ ಮೀಲಾದ್ ಗೆ ಪುರಾವೆ ಖುರ್'ಆನ್ ಮತ್ತು ಹದೀಸುಗಳಲ್ಲಿ ಹಾಗೂ ಇಮಾಮರುಗಳ ಗ್ರಂಥಗಳಲ್ಲಿ ಧಾರಾಳ ಇವೆ.
ಏನೇ ಪುರಾವೆ ಮಂಡಿಸಿದರೂ ಸಲಪಿಗಳು ಅಂಗೀಕರಿಸುವವರಲ್ಲ ಎಂಬುವುದು ಎಲ್ಲರಿಗೂ ತಿಳಿದ ವಿಚಾರ.
ಮೌಲಿದ್ ನಲ್ಲಿ ಸೀರಣೆ ವಿತರಣೆ ಮಾಡುವುದಕ್ಕೂ ಕೂಡಾ ಪ್ರಮಾಣವಿದೆ.
ಮೌಲಿದ್ ಮತ್ತು ಸೀರಣೆಯನ್ನು ಗೇಲಿ ಮಾಡುವ ಆಧುನಿಕ ಸಲಪಿಗಳಿಗೆ ಪೂರ್ವ ಕಾಲದ ಸಲಪಿಗಳು ಮೌಲಿದ್ ಮತ್ತು ಸೀರಣೆ ತಿಂದು ಮೌಲಿದ್ ಮಾಡಿದ ಬಗ್ಗೆ ಅವರದ್ದೇ ಪತ್ರಿಕೆಯಲ್ಲಿ ಬರೆದಿದ್ದಾರೆ.
ಈ ಲೇಖನ ಬರೆಯುವಾಗ ಮಿತ್ರರೊಬ್ಬರು "ರಬಿವುಲ್ ಅವ್ವಲ್ 12 ರಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಉಪವಾಸ ಆಚರಿಸಿದ್ದರು ಎಂಬುವುದನ್ನು ಹೇಳಿ ಸುನ್ನಿಗಳು ಮೀಲಾದ್'ನ ಹೆಸರಲ್ಲಿ ಹೊಟ್ಟೆ ತುಂಬಾ ತಿಂದು ಮೀಲಾದ್ ಆಚರಿಸುತ್ತಾರೆ" ಎಂಬ ಸುನ್ನಿಗಳನ್ನು ಹಿಯಾಳಿಸುವ ಸಲಪಿಯ ಲೇಖನವನ್ನು ಕಳುಹಿಸಿದರು.
ಮಾನ್ಯ ವಹ್ಹಾಬಿಗಳೇ!!
ಖುರ್'ಆನ್ ಮತ್ತು ಹದೀಸ್ ಪುರಾವೆ ಹೇಳುವ ಬದಲು ನಿಮ್ಮ ನಾಯಕರ ಮೀಲಾದ್ ಮತ್ತು ಸೀರಣೆಯ ಕುರಿತು ನೀವು ಬರೆದದ್ದನ್ನು ಇಲ್ಲಿ ನೀಡುತ್ತಿದ್ದೇನೆ.
ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಉಪವಾಸ ಆಚರಿಸಿ ಮೀಲಾದ್ ಆಚರಿಸಿದರೆ ನೀವು ಕೂಡಾ ಹಾಗೇ ಮಾಡಬಾರದೇಕೆ? ಎಂದು ಕೇಳಿದ ವಹ್ಹಾಬಿಯು ಈ ಪ್ರಶ್ನೆಯನ್ನು ಮೌಲಿದ್ ನಡೆಸಿ ಸೀರಣೆ ತಿಂದ ಮುದಿ ನಾಯಕರ ಕಬರಿಗೆ ಫ್ಯಾಕ್ಸ್ ಮಾಡಲಿ.
ವಹ್ಹಾಬಿಯ ಪತ್ರಿಕೆಯಲ್ಲಿ ಬರೆಯುವುದನ್ನು ನೋಡಿ,
_ರಬೀವುಲ್ ಅವ್ವಲ್ ತಿಂಗಳನ್ನು ಮುಸ್ಲಿಮರು ಎಲ್ಲರೂ_ _ಆಚರಿಸುತ್ತಾರೆ. ಆಚರಿಸಬೇಕಾಗಿದೆ. ಈ ಆಚರಣೆ ಹಲವು ಒಳಿತನ್ನು ಉಂಟು ಮಾಡುತ್ತದೆ. ಪುಣ್ಯ ಪ್ರವಾದಿಯೊಂದಿಗೆ ಸ್ನೇಹವನ್ನು ಹೃದಯದಲ್ಲಿ ಭಧ್ರಗೊಳಿಸುತ್ತದೆ. ಅವರ ಉತ್ತಮ ಗುಣಗಳನ್ನು ಸ್ಮರಿಸುವುದಕ್ಕೆ ಅದು ಹೇತುವಾಗುತ್ತದೆ._
(ಅಲ್ ಮುರ್ಶಿದ್; ಪುಸ್ತಕ 4, ಪುಟ 22).
ಈದ್ ಮೀಲಾದ್ ಆಚರಿಸಬೇಕೆಂದು ಇಲ್ಲಿ ಸಲಪಿಗಳೇ ಆಹ್ವಾನ ನೀಡಿದ್ದಾರೆ.
ಅಂದಿನ ಸಲಪಿಗಳಿಗೆ ಅನುವದನೀಯವಾದ್ದು ಈಗಿನ ಸಲಪಿಗೆ ಬಿದ್'ಅತ್ ಆದದ್ದು ಹೇಗೆ?
ಈ ಹೇಳಿದ ನಿಮ್ಮ ತಾತಂದಿರಾದ ವಹ್ಹಾಬಿಗಳು ನರಕದಲ್ಲಾ?
ನೀವು ಓದುವ ಆಯತ್, ಹದೀಸ್ ಅವರಿಗೆ ಸಿಗಲಿಲ್ಲವೇ?
*ವಹ್ಹಾಬಿಗಳ ಮೌಲಿದ್ ಮಜ್ಲಿಸ್*
ಸಲಪಿ ಬರೆಯುತ್ತಾನೆ;
_ರಬೀವುಲ್ ಅವ್ವಲ್ ತಿಂಗಳನ್ನು ಯಾವ ರೀತಿ ಆಚರಿಸಬೇಕೆಂದೂ ಪ್ರವಾದಿಯೊಂದಿಗೆ ಗೌರವವನ್ನು ಯಾವ ರೀತಿ ತೋರ್ಪಡಿಸಬೇಕೆಂದು ನಮಗೆ ಪರಿಶೀಲಿಸೋಣ._
_ರಬೀವುಲ್ ಅವ್ವಲ್ ತಿಂಗಳು ಆಗಮಿಸಿದಲ್ಲಿ ಮನೆ ಮನೆಗಳಲ್ಲಿ ಮೌಲಿದ್ ಓದುವ ಸಂಪ್ರದಾಯ ಕಾಲಾಂತರಗಳಿಂದ ನಮ್ಮ ಊರುಗಳಲ್ಲಿ ನಡೆದು ಬರುತ್ತಿದೆ._
(ಅಲ್ ಮುರ್ಶಿದ್, ಪುಸ್ತಕ:2; ಪುಟ 267)
_*ಮೌಲಿದ್ ಗಾಗಿ ಕಮಿಟಿ ಮತ್ತು ನೇರ್ಚೆ ಹಣ*_
_ಈ ರಬೀವುಲ್ ಅವ್ವಲ್ ರಲ್ಲಿ *ಸೀರಾ ಪ್ರಚಾರ ಸಂಘ* ಎಂಬ ಹೆಸರಲ್ಲಿ ಅಥವಾ *ಇಸ್ಲಾಮ್ ಸಂರಕ್ಷಣಾ ಸಂಘ* ಎಂಬ ಹೆಸರಲ್ಲಿ ಎಲ್ಲಾ ಪ್ರದೇಶಗಳಲ್ಲೂ ಕಮಿಟಿ ರೂಪೀಕರಿಸಬೇಕು. ಅದು ನಮ್ಮ ತೌಬಾಗಿರುವ ಕಾರಣವಾಗಿರಲಿ. ಆ ಸಂಘದಲ್ಲಿ ಸದಸ್ಯರಾದ ಎಲ್ಲರೂ ಅವರವರ ತಾಕತ್ತಿನಂತೆ ಸ್ವಂತವಾಗಿ *ಫೀ ಸಬೀಲಿಲ್ಲಾಹ್ ಫಂಡ್* ಎಂಬ ಹೆಸರಲ್ಲಿ ಫಂಡ್ ಶೇಕರಿಸಬೇಕು. ಎಲ್ಲಾ ರಬೀವುಲ್ ಅವ್ವಲ್ ತಿಂಗಳಿನಲ್ಲಿ ಮೌಲಿದ್ ಮಜ್ಲಿಸ್ ಮುಖಾಂತರ ಮುಶಾವರ ನಡೆಸಿ_
_ಈ ಫಂಡ್ ಹೇಗೆ ಖರ್ಚು ಮಾಡಬೇಕೆಂದು ತೀರ್ಮಾನಿಸಬಹುದಾಗಿದೆ._
(ಅಲ್ ಮುರ್ಶಿದ್; ಪುಸ್ತಕ 1, ಪುಟ:197)
_*ಸಲಪಿಗಳ ಭರ್ಜರಿ ಸೀರಣೆ ವಿತರಣೆ*_
_ಈ ಸಂದರ್ಭದಲ್ಲಿ ಎರಡು ವರ್ಷಗಳಿಂದ "ಮುಸ್ಲಿಂ ಐಕ್ಯ ಸಂಘಂ" ಎಂಬ ಸಂಘಟನೆಯ ವತಿಯಿಂದ ನಡೆಸುತ್ತಿರುವ ಮೌಲಿದ್ ಕಾರ್ಯಕ್ರಮ ಈ ವರ್ಷ ರಬೀವುಲ್ ಅವ್ವಲ್ 12 ರಂದು ಬಹಳ ಸೊಗಸಾಗಿ ನಡೆದ ಸಂಗತಿಯನ್ನು ಪ್ರೀತಿಯ ಓದುಗರಿಗೆ ಸಂತೋಷಪೂರ್ವಕ ತಿಳಿಸಬಯಸುತ್ತೇವೆ._
_ಸಭೆಯಲ್ಲಿ ಹಾಜರಾದವರಿಗೂ ಅಲ್ಲದವರಿಗೂ ಒಂದು ಆತಿಥ್ಯ ನೀಡಲಾಯಿತು._
(ಅಲ್ ಇರ್ಶಾದ್: ಪುಸ್ತಕ 1, ಸಂಚಿಕೆ 5; 1343 ಅಬೀವುಲ್ ಅವ್ವಲ್ :158)
ಸೀರಣೆ ಎಂಬುವುದನ್ನು ಸಲಪಿ ಮಲಯಾಳಂ ನಲ್ಲಿ "ವಿರುನ್ನ್" (ಆತಿಥ್ಯ) ಅಂತ ಹೇಳಿದ್ದಾನೆ.
ಸಲ್ಪಿಗಳೇ!
ಹೇಗಿದೆ ವಹ್ಹಾಬಿಗಳ ಮೌಲಿದ್ ಮತ್ತು ಸೀರಣೆ ವಿತರಣೆ.
ಪುರಾವೆ ಕೇಳಿ ಮುಸ್ಲಿಮರನ್ನು ವಸ್ವಾಸ್ ಮಾಡುವ ಬದಲು ನಿಮ್ಮ ಪೂರ್ವಿಕರು ಮೌಲಿದ್ ಮಾಡಿ ನೇರ್ಚೆ ಹಣ ಶೇಕರಿಸಿ, ಸೀರಣೆ ಕೊಟ್ಟ ಮಹಾ ಪಾಪಕ್ಕೆ (ಆಧುನಿಕ ಸಲಪಿಗಳ ಅಭಿಪ್ರಾಯ ಪ್ರಕಾರ) ಇಸ್ತಿಗ್'ಫಾರ್ ಕೇಳಿರಿ.
ಇದೆಲ್ಲವೂ ನಿಮ್ಮ ತಾತಂದಿರಿಗೆ ಹಲಾಲ್.
ನಿಮಗೆ ಶಿರ್ಕ್, ಬಿದ್'ಅತ್.
ಇದೆಂತಹಾ ದೀನಯ್ಯಾ?!
*📝ಮುನೀರ್ ಸಖಾಫಿ, ಸಾಲೆತ್ತೂರು*
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Wednesday, November 14, 2018
*ಮೀಲಾದುನ್ನಬೀ ಭಾಗ = 03*
*ಮೀಲಾದುನ್ನಬೀ*
*ಭಾಗ == 03*
----------------------------------------------------------
*_ಈದ್ ವರ್ಷಕ್ಕೆ 2 ಮಾತ್ರವೇ?_*
_*2018 ನೇ ಇಸವಿಯಲ್ಲಿ 55 ಈದ್ ಇದೆ.*
*2 ಪೆರ್ನಾಳ್.*
*1 ಈದ್ ಮೀಲಾದ್.*
*52 ಶುಕ್ರವಾರ.*
ಇನ್ನು ಕೆಳಗೆ ಓದಿ
👇👇👇
ಜಾಗತಿಕ ಮುಸ್ಲಿಮರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಮೀಲಾದ್ ಆಚರಿಸುವಾಗ ವಹ್ಹಾಬಿಗಳು ಹೇಳುವ ಒಂದು ಬಾಲಿಶ ವಾದವಾಗಿದೆ ಈದ್ ವರ್ಷಕ್ಕೆ ಎರಡು ಬಾರಿ ಮಾತ್ರ ಎಂಬುವುದು.ಅಥವಾ ಈದುಲ್ ಫಿತರ್ ಮತ್ತು ಈದುಲ್ ಅಳ್'ಹಾ.
ಸತ್ಯಕ್ಕೆ ವಿರುದ್ಧವಾದ ಒಂದು ವಾದವಾಗಿದೆ ಇದು.
ಅದಕ್ಕೆ ಅವರು ಒಂದು ಹದೀಸನ್ನು ದುರ್ವ್ಯಾಖ್ಯಾನಿಸುತ್ತಾರೆ.
ಅದು ಈ ರೀತಿ,
عَنْ أَنَسِ بْنِ مَالِكٍ، قَالَ: كَانَ لِأَهْلِ الْجَاهِلِيَّةِ يَوْمَانِ فِي كُلِّ سَنَةٍ يَلْعَبُونَ فِيهِمَا، فَلَمَّا قَدِمَ النَّبِيُّ صَلَّى اللهُ عَلَيْهِ وَسَلَّمَ الْمَدِينَةَ، قَالَ: " كَانَ لَكُمْ يَوْمَانِ تَلْعَبُونَ فِيهِمَا وَقَدْ أَبْدَلَكُمُ اللَّهُ بِهِمَا خَيْرًا مِنْهُمَا: يَوْمَ الْفِطْرِ، وَيَوْمَ الْأَضْحَى
(نسائي 3/179).
ಅನಸ್ (ರ)ಹೇಳುತ್ತಾರೆ.ಜಾಹಿಲಿಯ್ಯಾ ಕಾಲದಲ್ಲಿ ಅವರಿಗೆ 2 ದಿನಗಳು ವಿನೋದದ ದಿನವಾಗಿತ್ತು.ಪ್ರವಾದೀ ﷺ ರು ಮದೀನಾಗೆ ಹಿಜ್ರ ಹೋದಾಗ ಅವರೊಂದಿಗೆ ಹೇಳಿದರು;ಇದನ್ನು ಬದಲಾಯಿಸಿ ಇದಕ್ಕಿಂತ ಉತ್ತಮವಾದ ಈದುಲ್ ಫಿತ್ರ್ ಮತ್ತು ಈದುಲ್ ಅಳ್'ಹವನ್ನು ಅಲ್ಲಾಹನು ನಿಮಗೆ ನೀಡಿದ್ದಾನೆ.(ನಸಾಈ 3/179).
ವರ್ಷಕ್ಕೆ ಈದ್ 2 ಮಾತ್ರವೆಂದು ಇದರಿಂದ ತಿಳಿದು ಬರುತ್ತದೆ ಎಂದಾಗಿದೆ ಸಲಪಿಯ ವಾದ.
ಹದೀಸನ್ನು ಬೇಕಾದಂತೆ ಗ್ರಹಿಸದ ಕಾರಣದಿಂದ ಈ ರೀತಿಯ ವಿಚಿತ್ರ ವಾದವನ್ನು ಅವರು ಹೇಳುತ್ತಿದ್ದಾರೆ.
ವಾಸ್ತವದಲ್ಲಿ
ಪ್ರವಾದೀﷺ ಮರು ಅವರಲ್ಲಿ "ನೀವು ಉತ್ಸವವಾಗಿ ಕಾಣುವ ಈ ಎರಡು ದಿನಗಳಿಗೆ ಬದಲಾಗಿ 2 ಈದ್ ಗಳು ಪುಣ್ಯದಾಯಕವಾಗಿದೆ" ಎಂದು ಹೇಳಿದ್ದಾರೆಯೇ ಹೊರತು ಈದ್ 2 ಮಾತ್ರವಿರುವುದು ಎಂದು ಹೇಳಿಲ್ಲ.ಬುದ್ಧಿಯಿರುವ ಯಾರಿಗೂ ಇದು ತಿಳಿಯುವ ವಿಚಾರ.
ಮಂಗಳೂರು ಮತ್ತು ಪುತ್ತೂರು ದೊಡ್ಡ ಸಿಟಿ ಎಂದು ಹೇಳಿದ ಒಬ್ಬನಲ್ಲಿ ನಾನು ಹೇಳಿದೆ.ಅದಕ್ಕಿಂತಲೂ ದೊಡ್ಡ ಸಿಟಿ ಮೈಸೂರು ಮತ್ತು ಬೆಂಗಳೂರು ಇದೆ.
ಆವಾಗ ನನ್ನ ಮಾತನ್ನು ತಪ್ಪಾಗಿ ಅರ್ಥೈಸಿ ಸಿಟಿಯಿರುವುದು ಮೈಸೂರು ಮತ್ತು ಬೆಂಗಳೂರು ಮಾತ್ರವೆಂದು ಅವರು ಹೇಳಿದ್ದಾರೆ ಎಂದು ಒಬ್ಬ ಹೇಳಿದರೆ ಆತನನ್ನು ಹುಚ್ಚಾಸ್ಪತ್ರೆಯಲ್ಲಿ ಕಟ್ಟಿಯಿಡಬೇಕಾದೀತು.ಅದೇ ರೀತಿಯಾಗಿದೆ ಸಲಪಿಯ ಅರ್ಥ ಕೂಡಾ.
ಈ ಎರಡು "ಈದ್" ನ ಬಗ್ಗೆ ಹೇಳಿದ ಅದೇ ಪ್ರವಾದೀ ﷺಮರು
ಶುಕ್ರವಾರದ ಕುರಿತು ಹೇಳಿದ ಹದೀಸ್ ನೋಡಿ,
عن ابن عباس قال :قال رسول الله صلى الله عليه وسلم إن هذا يوم عيد .جعله الله للمسلمين. فمن جاء إلى الجمعة فليغتسل .وإن كان طيب فليمس منه. وعليكم بالسواك
(ابن ماجه 1/349 )
ಇಬ್ನ್ ಅಬ್ಬಾಸ್(ರ)ವರದಿ;
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಖಂಡಿತವಾಗಿಯೂ ಈ ದಿನ(ಶುಕ್ರವಾರ) ಮುಸ್ಲಿಮರಿಗೆ ಅಲ್ಲಾಹನು ಮಾಡಿದ ಈದ್ ಆಗಿದೆ.ಆದುದರಿಂದ ಜುಮುಅ ನಮಾಝ್ ಗೆ ಬರುವವನು ಸ್ನಾನ ಮಾಡಲಿ.ಸುಗಂಧ ದ್ರವ್ಯವಿದ್ದಲ್ಲಿ ಹಚ್ಚಲಿ.
(ಇಬ್ನ್ ಮಾಜ 1/349)
ಅದೇ ರೀತಿ ಮುವತ್ವ 1/65,
ಮುಸ್ನದು ಶ್ಶಾಫಿಈ 1/63
ರಲ್ಲೂ ಕಾಣಬಹುದಾಗಿದೆ.
*ಈ ಹದೀಸ್ ಸ್ವೀಕಾರ್ಯಯೋಗ್ಯವಾಗಿದೆಯೆಂದು ವಹ್ಹಾಬೀ ನಾಯಕ ಅಲ್ಬಾನಿಯೇ ಸಮ್ಮತಿಸಿದ್ದಾರೆ.*
*(ಇಬ್ನ್ ಮಾಜ ಟಿಪ್ಪಣಿ 1/349)*
ಎಲ್ಲಾ ವಾರಗಳಲ್ಲೂ *ಈದ್* ಇದೆ ಎಂದು ಈ ಹದೀಸಿನಿಂದ ಬಹಳ ಸ್ಪಷ್ಟ.
ಒಂದು ಹದೀಸನ್ನು ಅಂಗೀಕರಿಸಿ ಇನ್ನೊಂದು ಹದೀಸ್ ತಿರಸ್ಕರಿಸುವುದು ಒಮ್ಮೆಯೂ ಮುಸ್ಲಿಮನಿಗೆ ಭೂಷಣವಲ್ಲ.
ಶುಕ್ರವಾರ ದಿನ ಈದ್ ಆಗಲು ಕಾರಣವೇನೆಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೇ ಬೇರೊಂದು ಹದೀಸಿನಲ್ಲಿ ವಿವರಿಸಿದ್ದಾರೆ.
عن ابي هريرة قال قال رسول الله ﷺخير يوم طلعت فيه الشمس يوم الجمعة فيه خلق ادم وفيه ادخل الجنة وفيه اخرج من النار.
(مسلم 3/6)
ದಿವಸಗಳ ಪೈಕಿ ಶ್ರೇಷ್ಟವಾದ ದಿವಸ ಶುಕ್ರವಾರವಾಗಿದೆ.ಆ ದಿನ ಆದಮ್ ನೆಬಿಯನ್ನು ಸೃಷ್ಠಿಸಲಾಗಿದೆ.ಅದೇ ದಿನ ಸ್ವರ್ಗಕ್ಕೆ ಅವರನ್ನು ಪ್ರವೇಶಿಸಲಾಯಿತು ಹಾಗೂ ಶುಕ್ರವಾರ ಸ್ವರ್ಗದಿಂದ ಹೊರಕಳುಹಿಸಲಾಯಿತು.
(ಮುಸ್ಲಿಂ 3/6)
ಆದಮ್ ನೆಬಿಯವರನ್ನು ಸೃಷ್ಠಿಸಿದ ದಿವಸ ಎಂಬ ಕಾರಣಕ್ಕೆ ಶುಕ್ರವಾರಕ್ಕೆ ಮಹತ್ವ ಲಭಿಸಿರುವುದಾದರೆ ಅವರಿಗಿಂತಲೂ ಶ್ರೇಷ್ಠರಾದ ಪ್ರವಾದೀ ಮುಹಮ್ಮದ್ ﷺ ರು
ಜನಿಸಿದ ದಿವಸಕ್ಕೆ ಖಂಡಿತವಾಗಿಯೂ ಅದಕ್ಕಿಂತಲೂ ಮಹತ್ವ ಇದೆ ಎಂಬುವುದರಲ್ಲಿ ಸಂಶಯವಿಲ್ಲ.
ಆದಮ್ ನೆಬಿಯನ್ನು ಸೃಷ್ಠಿಸಲ್ಪಟ್ಟ ಶುಕ್ರವಾರವನ್ನು *ಈದ್* ಎಂದು ಹೇಳಬಹುದಾದರೆ ಪ್ರವಾದೀ ﷺ ರು ಜನಿಸಿದ ರಬೀವುಲ್ 12 ನೇ ದಿನಕ್ಕೆ *ಈದ್ ಮೀಲಾದ್* ಎನ್ನುದರಲ್ಲಿ ಯಾವುದೇ ತಪ್ಪಿಲ್ಲ.
ಆದುದರಿಂದಲೇ ಆ ದಿನ *"ಈದ್ ಮೀಲಾದ್"* ಎಂಬ ಹೆಸರಲ್ಲಿ ತಿಳಿಯಲ್ಪಡುತ್ತದೆ.
*ರಬೀವುಲ್ ಅವ್ವಲ್ 12 ರಂದು ದುಖಾಚರಣೆಯೇ?*
ಪ್ರವಾದೀ ﷺ ಮರು ರಬೀವುಲ್ 12 ರಂದು ಜನಿಸಿದಂತೆ ರಬೀವುಲ್ 12 ರಂದು ವಫಾತ್ ಆದರು.
ಈ ಕಾರಣದಿಂದ ವಹ್ಹಾಬಿಗಳು ಆ ದಿನದಂದು ದುಖಾಚರಣೆ ನಡೆಸಬೇಕೆಂದು ವಾದಿಸುತ್ತಾರೆ.
ಪ್ರವಾದೀ ﷺ ಮರು ವಫಾತ್ ಆದ ದಿನ ಸ್ವಹಾಬಿಗಳು ದುಃಖದಲ್ಲಿದ್ದರಂತೆ. ಆದುದರಿಂದ ಅಂದು ಯಾವುದೇ ಸಂತೋಷಪಡದೇ ದುಖಃದಲ್ಲಿರಬೇಕೆಂದು ಹೇಳುತ್ತಾರೆ.
ಇದು ಕೇವಲ ಅವರ ಬಾಯಿಯಿಂದ ಹೇಳುವರೇ ವಿನಃ ಯಾವುದೇ ವಹ್ಹಾಬೀ ದುಖಃಪಟ್ಟ ಚರಿತ್ರೆಯಿಲ್ಲ. ಎಲ್ಲಾ ದಿನಗಳಂತೆ ಎಲ್ಲಾ ವಹ್ಹಾಬಿಗಳು ಹೊಟ್ಟೆ ತುಂಬಾ ತಿಂದು ತೇಗುವುದಲ್ಲದೇ ಯಾರೂ ಕೂಡಾ ದುಖಾಚರಣೆ ನಡೆಸಿಲ್ಲ.
ರಬೀವುಲ್ ಅವ್ವಲ್ 12 ರಂದು ಇಬ್ಲೀಸನಿಗೆ ಬಹಳ ದುಖಃವುಂಟಾಗಿತ್ತೆಂದು ಚರಿತ್ರೆ ಗ್ರಂಥಗಳಲ್ಲಿ ಇದೆ.
ಆತನ ಅನುಯಾಯಿಗಳಿಗೂ ಇದೇ ರೀತಿಯ ದುಖಃವಾಗಿದೆ.
ಏನೇ ಇರಲಿ ವಿಷಯಕ್ಕೆ ಬರೋಣ.
*_ಇದರ ಕುರಿತು ವಿಧ್ವಾಂಸರ ನಿಲುವೇನು?_*
ಮೀಲಾದ್ ನ ಅದೇ ದಿನದಂದು ಅವರು ವಫಾತ್ ಆಗಿರುವುದರಿಂದ ಅಂದು ದುಖಾಚರಣೆ ನಡೆಸಬೇಕೆಂದು ಒಬ್ಬರು ಹೇಳಿದಾಗ
_51 ಪ್ರಗಲ್ಭರಾದ_ _ಇಮಾಮರುಗಳಿಂದ ವಿಧ್ಯೆ ಕಲಿತು 2 ಲಕ್ಷಕ್ಕಿಂತಲೂ ಹೆಚ್ಚು_ _ಹದೀಸ್ ಕಂಠಪಾಟ ಮಾಡಿದ,500 ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದ ಇಮಾಮ್ ಸುಯೂಥೀ_ _(ರ)ಹೇಳುವುದು ನೋಡಿ,_
*إن ولادته صلى الله عليه وسلم أعظم النعم علينا ، ووفاته أعظم المصائب لنا ، والشريعة حثت على إظهار شكر النعم والصبر والسكون والكتم عند المصائب ، وقد أمر الشرع بالعقيقة عند الولادة ، وهي إظهار شكر وفرح بالمولود ، ولم يأمر عند الموت بذبح ولا بغيره بل نهى عن النياحة وإظهار الجزع ، فدلت قواعد الشريعة على أنه يحسن في هذا الشهر إظهار الفرح بولادته صلى الله عليه وسلم دون إظهار الحزن فيه بوفاته*
(الحاوي للفتاوي 1/278)
_ಪ್ರವಾದಿ ﷺಮರ ಜನನವು ನಮ್ಮ ಮೇಲೆ ಅಲ್ಲಾಹನು ಮಾಡಿದ ಅತೀ ದೊಡ್ಡ ಅನುಗ್ರಹವಾಗಿದೆ. ಅವರ ವಫಾತ್ ಅತೀ ದೊಡ್ಡ ವಿಪತ್ತೂ ಆಗಿದೆ. ಅನುಗ್ರಹಕ್ಕೆ ಕೃತಞ್ಞತೆ ಸಲ್ಲಿಸಬೇಕೆಂದು ವಿಪತ್ತುಗಳನ್ನು ಮುಚ್ಚಿಟ್ಟು ಸಹನೆ ಪಾಲಿಸಬೇಕೆಂದೂ ಇಸ್ಲಾಮಿನ ನಿಯಮವಾಗಿದೆ. ಆದುದರಿಂದಲೇ ಮಗು ಹುಟ್ಟಿದಾಗ ಅಖೀಖ ನೀಡುವಂತೆ ಇಸ್ಲಾಮ್ ಆದೇಶಿಸಿದೆ. ಅದು ಮಗು ಲಭಿಸಿದ ಅನುಗ್ರಹಕ್ಕೆ ಸಂತೋಷ ಪ್ರಕಟ ಮತ್ತು ಕೃತಞ್ಞತೆ ಸಲ್ಲಿಸುವುದಾಗಿದೆ. ಅದೇ ವೇಳೆ, ಮರಣ ಹೊಂದಿದ್ದಕ್ಕಾಗಿ ಬಲಿಕೊಡುವುದನ್ನೋ ಇನ್ನಿತರ ಕಾರ್ಯ ಮಾಡುವುದನ್ನೋ ಇಸ್ಲಾಮ್ ಆದೇಶಿಸಿಲ್ಲ. ಅಷ್ಟೇಅಲ್ಲ ದು:ಖ ಪ್ರಕಟವನ್ನು ಇಸ್ಲಾಮ್ ವಿರೋಧಿಸಿದೆ._
_ಆದುದರಿಂದ ಈ ತಿಂಗಳಲ್ಲಿ ವಫಾತ್'ನ ಕಾರಣ ಹೇಳಿ ದು:ಖ ಆಚರಿಸದೆ ಪ್ರವಾದಿ ﷺ ಮರ ಜನನದಿಂದ ಸಂತೋಷ ಪ್ರಕಟಿಸುವುದು ಉತ್ತಮವೆಂದು ತಿಳಿದು ಬರುತ್ತದೆ._
(ಅಲ್-ಹಾವೀ ಲಿಲ್ ಫತಾವಾ 1/226)
ನಂತರ ಅವರು ಹೇಳುವುದು ನೋಡಿ,
*وقد قال ابن رجب في كتاب اللطائف في ذم الرافضة حيث اتخذوا يوم عاشوراء مأتما لأجل قتل الحسين : لم يأمر الله ولا رسوله باتخاذ أيام مصائب الأنبياء وموتهم مأتما ، فكيف ممن هو دونهم ؟!*
(الحاوي للفتاوي 1/226)
ಇಮಾಮ್ ಇಬ್ನ್ ರಜಬ್(ರ) ತನ್ನ "ಲತ್ವಾಯಿಫುಲ್ ಮಆರಿಫ್" ನಲ್ಲಿ ಹೇಳಿದರು; ರಾಫಿಳತ್ ಎಂಬ ನೂತನವಾದಿಗಳ ಒಂದು ಪಂಗಡ ಮುಹರ್ರಂ 10 ರಂದು ಹುಸೈನ್ (ರ) ಕೊಲ್ಲಲ್ಪಟ್ಟದಕ್ಕಾಗಿ ಅಲ್ಲಾಹನು ಮತ್ತು ರಸೂಲರು ಕಲಿಸದ ದುಖಾಚರಣೆಯನ್ನು ನಡೆಸಿದರು.
ಪ್ರವಾದಿಗಳಿಗೆ ಬಂದ ವಿಪತ್ತುಗಳಿಗೆ ಮತ್ತು ಮರಣಕ್ಕೆ ದುಃಖ ಆಚರನೆಯನ್ನು ಇಸ್ಲಾಂ ಕಲಿಸಿಲ್ಲ.
(ಅಲ್ ಹಾವೀ ಲಿಲ್ ಫತಾವಾ 1/226)
ಲಕ್ಷೋಪ ಲಕ್ಷ ಹದೀಸ್ ಕಲಿತ ಇಮಾಮರು ಈ ರೀತಿ ಹೇಳುವಾಗ ಅರೆಬರೆ ಕಲಿತ ಮೌಲವಿ ರಬೀವುಲ್ ಅವ್ವಲ್ 12 ರಂದು ಸಂತೋಷಪಡಬಾರದು.ದುಖಃಆಚರಿಸಬೇಕೆಂದು ಹೇಳಿದರೆ ಅದನ್ನು ಸ್ವೀಕರಿಸಲು ಮುಸ್ಲಿಮರು ತಯಾರಾಗಲಾರರು.
ಮಾತ್ರವಲ್ಲ, ಮರಣದಂತಹಾ ವಿಪತ್ತು ಬಂದಲ್ಲಿ ದುಃಖ ಆಚರಿಸಬಾರದೆಂದಾಗಿದೆ ಇಸ್ಲಾಮಿನ ನಿಲುವು.
*ಇಮಾಮ್ ಬುಖಾರೀ (ರ)ರವರ ಸ್ವಹೀಹುಲ್ ಬುಖಾರಿಯಲ್ಲಿ ಒಂದು ಅಧ್ಯಾಯವಿದೆ.*
ಅದು ಈ ರೀತಿಯಾಗಿದೆ.
*باب من لم يظهر حزنه عند المصيبة*
(بخاري 1/555 )
*(ವಿಪತ್ತುಗಳ ವೇಳೆ ದುಖಃ ಪ್ರಕಟಿಸದವರ ಕುರಿತಿರುವ ಅಧ್ಯಾಯ)*
ಈ ಅಧ್ಯಾಯದಲ್ಲಿ ಇಮಾಮ್ ಬುಖಾರೀ (ರ), ಅನಸ್ (ರ) ರಿಂದ ವರದಿ ಮಾಡಿದ ಬಹಳ ಪ್ರಸಿದ್ಧವಾದ ಒಂದು ಹದೀಸಿದೆ.
ಅಬೂ ತ್ವಲ್'ಹ (ರ)ರವರ ಮಗು ಮರಣ ಹೊಂದಿದಾಗ ಪತ್ನಿಯಾದ ಉಮ್ಮು ಸುಲೈಮ್ (ರ)ಮಗು ತೀರಿದ ವಿಷಯ ಪತಿಯೊಂದಿಗೆ ಹೇಳದೆ ಅಂದು ರಾತ್ರಿ ಊಟ ಮಾಡಿ ಮಲಗಿ ಬೆಳಿಗ್ಗೆ ಆ ಕುರಿತು ಹೇಳಿದ ಘಟನೆಯದು.
ಬೆಳಿಗ್ಗೆ ಪ್ರವಾದೀ ﷺ ರಲ್ಲಿ ಈ ಘಟನೆಯನ್ನು ಹೇಳಿದಾಗ ಅವರಿಗೆ ಸಮೃದ್ಧಿಗಾಗಿ ಪ್ರಾರ್ಥಿಸಿದರು.
(ಬುಖಾರೀ 1239).
عن أنس بن مالك رضي الله عنه يقول اشتكى ابن لأبي طلحة قال فمات وأبو طلحة خارج فلما رأت امرأته أنه قد مات هيأت شيئا ونحته في جانب البيت فلما جاء أبو طلحة،قال كيف الغلام قالت : قد هدأت نفسه وأرجو أن يكون قد استراح ،وظن أبو طلحة أنها صادقة ،قال :فبات فلما أصبح اغتسل ،فلما أراد أن يخرج، أعلمته أنه قد مات فصلى مع النبي صلى الله عليه وسلم ثم أخبر النبي صلى الله عليه وسلم بما كان منهما ،فقال رسول الله صلى الله عليه وسلم :
لعل الله أن يبارك لكما في ليلتكما
(صحيح البخاري 1214)
ಹಲವಾರು ಯುದ್ಧಗಳಲ್ಲಿ ಸ್ವಹಾಬಿಗಳನ್ನು ಕೊಲ್ಲಲ್ಪಡಲಾಗಿತ್ತು.
ಶತ್ರುಗಳಿಗೆ ವಿರುದ್ಧವಾಗಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ನಾಝಿಲತ್'ನ ಖುನೂತ್ (ಮುಸ್ಲಿಮರಿಗೆ ವಿಪತ್ತು ಉಂಟಾದಲ್ಲಿ ಎಲ್ಲಾ ನಮಾಝಿನ ಕೊನೆಯ ರಕ ಅತ್'ನ ಇಅ್'ತಿದಾಲ್ ನಲ್ಲಿ ನಡೆಸುವ ಪ್ರಾರ್ಥನೆ ) ನಿರ್ವಹಿಸುತ್ತಿದ್ದರು.
ದುಖಃವನ್ನು ಅದುಮಿಡುತ್ತಿದ್ದರು.
ಯಾವುದೇ ಶೋಕಾಚರಣೆಯನ್ನು ಪ್ರವಾದೀﷺ ರು ಅಥವಾ ಸ್ವಹಾಬಿಗಳು ನಡೆಸಿಲ್ಲ.
ಇದನ್ನು ಫತ್ ಹುಲ್ ಬಾರಿಯಲ್ಲಿ ವಿವರಿಸಲಾಗಿದೆ. (ಫತ್'ಹುಲ್ ಬಾರಿ.3/167)
ಮಾತ್ರವಲ್ಲ, ರಬೀವುಲ್ ಅವ್ವಲ್ 12 ರಂದು ಶೋಕಾಚರಣೆ ನಡೆಸಬೇಕೆಂದು ಒಬ್ಬರು ಹೇಳಿದಾಗ ಅದು ಸಲ್ಲದೆಂದು ಇಮಾಮ್ ಸುಯೂಥೀ (ರ) ಬಹಳ ಸ್ಪಷ್ಟವಾಗಿ ವಿವರಿಸುವಾಗ ಮತ್ತೆ ಅದೇ ವಾದವನ್ನು ವಾದಿಸುವುದು ಶುದ್ಧ ಮೂರ್ಖತನವಾಗಿದೆ.
*ಮುಹರ್ರಂ 10 ರಂದು ಹುಸೈನ್ (ರ) ಹೆಸರಲ್ಲಿ ಶಿಯಾಗಳು ಶೋಕಾಚಾರಣೆ ನಡೆಸುವಂತೆ ಪ್ರವಾದೀﷺ ರ ಹೆಸರಲ್ಲಿ ವಹ್ಹಾಬಿಗಳು ಶೋಕಾಚರಣೆ ಮಾಡುತ್ತಾರೆ.*
*ಎರಡು ಪಂಗಡವೂ ಅಹ್ಲುಸ್ಸುನ್ನತ್ ವಲ್ ಜಮಾಅತ್ ಗೆ ವಿರುದ್ಧವಾದ ಹಾದಿ ತಪ್ಪಿದ ಪಂಗಡವಾಗಿದೆ.*
*_ಈದ್ ಮೀಲಾದ್ ಕೇರಳ,ಕರ್ನಾಟಕದಲ್ಲಿ ಮಾತ್ರವೇ?_*
ವರ್ಷಗಳ ಮುಂಚೆ ವಹ್ಹಾಬಿಗಳು ಈದ್ ಮೀಲಾದ್ ಕೇರಳ ಮತ್ತು ಕರ್ನಾಟಕದಲ್ಲಿ ಮಾತ್ರ ನಡೆಯುವ ಆನಾಚಾರಗಳೆಂದು ಹೇಳಿ ಜನರನ್ನು ಮೋಸ ಮಾಡುತ್ತಿದ್ದರು.ಆದರೆ ಈಗ ಕಾಲ ಬದಲಾಗಿದೆ.ಬೆರಳ ತುದಿಯಲ್ಲೇ ಪ್ರಪಂಚವಿದೆ.ಜಗತ್ತಿನ ಮೂಲೆ ಮೂಲೆಗಳಲ್ಲಿ ಏನೇ ನಡೆದರೂ ನಿಮಿಷಾರ್ಧದಲ್ಲೇ ಅದು ಜಗತ್ತಿಗೆ ತಿಳಿಯುತ್ತದೆ.
ಭಾರತ ಮಾತ್ರವಲ್ಲದೆ ಇನ್ನಿತರ ರಾಷ್ಟ್ರಗಳಾದ ಲಂಡನ್ ,ಬ್ರಿಟನ್ ,ಮಲೇಶ್ಯ ಈಜಿಪ್ಟ್ ,ಫೆಲಸ್ತೀನ್ ಮುಂತಾದ ಅನೇಕ ರಾಷ್ಟ್ರಗಳಲ್ಲಿ ಈದ್ ಮೀಲಾದ್ ಆಚರಿಸುವ ವೀಡಿಯೋ ಮತ್ತು ಫೋಟೋಸ್ ಗಳನ್ನು ನಾವು ನೋಡಿದ್ದೇವೆ.ಈ ಹೇಳಿದ ಎಲ್ಲಾ ರಾಷ್ಟ್ರಗಳಲ್ಲಿ ನಡೆಯುವ ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಶೈಖುನಾ ಎ.ಪಿ.ಉಸ್ತಾದ್ ಭಾಗವಹಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಇದಲ್ಲದೆ ಮಕ್ಕಾದಲ್ಲೂ ಕೂಡಾ ಪೂರ್ವೀಕರು ಈದ್ ಮೀಲಾದ್ ಆಚರಿಸುತ್ತಿದ್ದದ್ದಾಗಿ ಗ್ರಂಥಗಳಲ್ಲಿ ವಿವರಿಸಲಾಗಿದೆ.
ವಹ್ಹಾಬಿಗಳ ಆಡಳಿತ ದೇಶವಾದ ಸೌದಿಯಲ್ಲಿ ಸುನ್ನೀ ಆಶಯವನ್ನು ಸಾಧ್ಯವಾದಷ್ಟು ವಹ್ಹಾಬಿಗಳು ನಿರ್ಮೂಲನೆಗೊಳಿಸಿದ್ದಾರೆ.
ಎತ್ತರಿಸಲ್ಪಟ್ಟ ಖಬ್'ರ್'ಗಳನ್ನು ನೆಲಸಮ ಮಾಡಿದ್ದು ಕೂಡಾ ಅವರೇ.
ಮರ್ಹೂಂ ಸೆಯ್ಯಿದ್ ಅಲವೀ ಅಲ್ ಮಾಲಿಕೀ ಅವರ ಮನೆಯಲ್ಲಿ ಮತ್ತು ಇನ್ನಿತರ ಸುನ್ನೀ ಕುಟುಂಬದ ಅರಬಿಗಳ ಮನೆಯಲ್ಲಿ ಬೃಹತ್ ಮೌಲಿದ್ ಗಳು ಇಂದು ಕೂಡಾ ನಡೆದು ಬರುತ್ತಿದೆ.
ಪುರಾತನ ಕಾಲದಲ್ಲಿ ಮಕ್ಕಾದಲ್ಲಿ ಎಲ್ಲಾ ಕಡೆಗಳಲ್ಲೂ ಈದ್ ಮೀಲಾದ್ ಇತ್ತು.ವಹ್ಹಾಬೀ ಬೀಕರರ ಉಪದ್ರವ ಹೆದರಿ ಕೆಲವು ಕಡೆಗಳಲ್ಲಿ ಗೌಪ್ಯವಾಗಿ ಈಗಲೂ ನಡೆಯುತ್ತಾ ಇದೆ.
ಮಕ್ಕಾದಲ್ಲಿ ಈದ್ ಮೀಲಾದ್ ಆಚರಿಸುತ್ತಿದ್ದ ಬಗ್ಗೆ ಇಮಾಮರುಗಳು ನೂರಾರು ವರ್ಷಗಳ ಮುಂಚೆಯೇ ಗ್ರಂಥಗಳಲ್ಲಿ ವಿವರಿಸಿದ್ದಾರೆ.
ಪ್ರಸಿದ್ಧ ಸಂಚಾರಿ ,ಹಿಜ್ರ 540 ರಲ್ಲಿ ಜನಿಸಿ 614 ರಲ್ಲಿ ಮರಣ ಹೊಂದಿದ ಮುಹಮ್ಮದ್ ಬಿನ್ ಅಹ್ಮದ್ ಬಿನ್ ಜುಬೈರ್ ಅಲ್ ಉಂದುಲುಸಿ(ರ)ಬರೆಯುವುದು ನೋಡಿ;
_" يفتح هذا الموضع المبارك فيدخله الناس كافة متبركين به في شهر ربيع الأول ويوم الاثنين منه، لأنه كان شهر مولد النبي صلى الله عليه وسلم، وفي اليوم المذكور الذي ولد فيه النبي صلى الله عليه وسلم، تفتح المواضع المقدسة المذكورة كلها. وهو يوم مشهود بمكة دائما_
(رحلة ابن جبير 1/34)
_ರಬೀವುಲ್ ಅವ್ವಲ್ 12 ರಂದು ಮಕ್ಕಾದಲ್ಲಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಮನೆಯ ಬಾಗಿಲನ್ನು ತೆರೆಯಲಾಗುತ್ತದೆ.ಜನರು ಬರ್ಕತ್'ಗಾಗಿ ಅದರೊಳಗೆ ಪ್ರವೇಶಿಸುತ್ತಾರೆ.ಕಾರಣ,ಆ ದಿನ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನವಾಗಿದೆ.ಮಹತ್ವವಿರುವ ಆ ಎಲ್ಲಾ ಸ್ಥಳಗಳನ್ನು ತೆರೆಯಲ್ಪಡಲಾಗುತ್ತದೆ._
(ರಿಹ್'ಲ ಇಬ್ನ್ ಜುಬೈರ್ 1/34)
ರಬೀವುಲ್ ಅವ್ವಲ್ 12 ರಂದು ಮಕ್ಕಾ ನಿವಾಸಿಗಳು ಇದು ನಿರ್ವಹಿಸುತ್ತಿದ್ದರೆಂದು ಹೇಳುವುದು ಇಲ್ಲಿನ ಸಮಸ್ತದ ಆಲಿಂಗಳಲ್ಲ.
ಎಸ್ಸೆಸ್ಸೆಫ್ ನಾಯಕರಲ್ಲ.
ಹೊರತು 800 ವರ್ಷಗಳ ಮುಂಚೆ ಮರಣ ಹೊಂದಿದ ಇಮಾಮರುಗಳಾಗಿದ್ದಾರೆ.
ಇದನ್ನೆಲ್ಲಾ ಮಕ್ಕಾದಿಂದ ನಿರ್ಮೂಲಗೊಳಿಸಿ ಮಕ್ಕಾ , ಮದೀನದಲ್ಲಿ ಇದು ಇಲ್ಲವಲ್ಲಾ ಎಂದು ಹೇಳುವುದು ವಹ್ಹಾಬಿಗಳ ಕಾಪಟ್ಯಕ್ಕಿರುವ ದೊಡ್ಡ ಉದಾಹರಣೆಯಾಗಿದೆ.
ಇನ್ನೊಬ್ಬ ಪ್ರಸಿದ್ಧ ಪ್ರಪಂಚ ಸಂಚಾರಿ ಹಿಜರಿ 703 ರಲ್ಲಿ ಜನಿಸಿ 779 ರಲ್ಲಿ ಮರಣ ಹೊಂದಿದ ಇಬ್ನ್ ಬತೂತ ರವರ ಮಾತು ನೋಡಿ,
_ويفتح الباب الكريم في كل يوم جمعة بعد الصلاة ،ويفتح في يوم مولد النبي صلي الله عليه وسلم_ (رحلة 60).
_ಪಾವನ ಕಅಬಾದ ಬಾಗಿಲನ್ನು ಎಲ್ಲಾ ಶುಕ್ರವಾರ ಜುಮುಅ ನಮಾಝಿನ ಬಳಿಕ ಮತ್ತು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನದಂದು ತೆರೆಯಲಾಗುತ್ತದೆ._
( ರಿಹ್'ಲ 60).
ಮತ್ತೊಂದು ಸ್ಥಳದಲ್ಲಿ ಅವರು ಹೇಳುತ್ತಾರೆ;
_قاضي مكة العالم الصالح العابد نجم الدين محمد بن إمام العالم محيي الدين الطبري، وهو فاضل كثير الصدقات والمواساة للمجاورين، حسن الأخلاق كثير الطواف والمشاهدة للكعبة الشريفة، يطعم الطعام الكثير في المواسم المعظمة، وخصوصاً في مولد رسول الله صلى الله عليه وسلم، فإنه يطعم فيه شرفاء مكة وكبراءها وفقراءها وخدام الحرم الشريف وجميع المجاورين. وكان سلطان مصر الملك الناصر رحمه الله يعظمه كثيراً، وجميع صدقاته وصدقات أمرائه تجرى على يديه. وولده شهاب الدين فاضل، وهو الآن قاضي مكة شرفها الله._
(رحلة 67)
_ಮಕ್ಕಾದಲ್ಲಿ ಹಿರಿಯ ಆಲಿಂ ನಜ್ಮುದ್ದೀನ್ ಮುಹಮ್ಮದ್ ಬಿನ್ ಮುಹ್ಯುದ್ದೀನ್ ಅತ್ತಬ್'ರೀ ಎಂಬವರು ಖಾಝಿಯಾಗಿದ್ದರು.ಅವರು ಮಹಾ ದಾನಿಯಾಗಿದ್ದರು.ಉತ್ತಮ ಗುಣ ನಡತೆಯುಳ್ಳ ವ್ಯಕ್ತಿಯಾಗಿದ್ದರು.ಅವರು ಇತರರಿಗೆ ಆಹಾರಗಳನ್ನು ನೀಡುತ್ತಿದ್ದರು. *ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನದಲ್ಲಿ ಮಕ್ಕಾದಲ್ಲಿರುವ ಬಡವರಿಗೂ ಶ್ರೀಮಂತರಿಗೂ ಊಟ ನೀಡುತ್ತಿದ್ದರು.* ಮಿಸ್ರಿನ ರಾಜ ನಾಸಿರ್ ರವರು ಅವರನ್ನು ಅತಿಯಾಗಿ ಗೌರವಿಸುತ್ತಿದ್ದರು.ಅವರ ಮಗ ಶಿಹಾಬುದ್ದೀನ್ ಎಂಬ ಆಲಿಂ ಈಗ ಮಕ್ಕಾದಲ್ಲಿ ಖಾಝಿಯಾಗಿರುವರು._
(ರಿಹ್'ಲ 67)
*ಪ್ರೀತಿಯ ಓದುಗರೇ !*
ಇನ್ನು ನೀವೇ ಹೇಳಿ,
ಮಕ್ಕಾದಲ್ಲಿ ಈದ್ ಮೀಲಾದ್ ಆಚರಿಸಲಾಗುತ್ತಿತ್ತೇ?ಇಲ್ಲವೇ?
ಅದನ್ನೆಲ್ಲಾ ತೊಡೆದು ಹಾಕಿ ಕೇರಳ ಕರ್ನಾಟಕದಲ್ಲಿ ಮಾತ್ರವಿರುವ ಕಾರ್ಯವೆಂದು ಹೇಳಿದ್ರೆ ಅಲ್ಲಾಹನು ಮೆಚ್ಚಲಾರನು.
*ಬಾಕಿ 4 ನೇ ಭಾಗದಲ್ಲಿ ಓದಿರಿ*
*ಭಾಗ == 03*
----------------------------------------------------------
*_ಈದ್ ವರ್ಷಕ್ಕೆ 2 ಮಾತ್ರವೇ?_*
_*2018 ನೇ ಇಸವಿಯಲ್ಲಿ 55 ಈದ್ ಇದೆ.*
*2 ಪೆರ್ನಾಳ್.*
*1 ಈದ್ ಮೀಲಾದ್.*
*52 ಶುಕ್ರವಾರ.*
ಇನ್ನು ಕೆಳಗೆ ಓದಿ
👇👇👇
ಜಾಗತಿಕ ಮುಸ್ಲಿಮರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಮೀಲಾದ್ ಆಚರಿಸುವಾಗ ವಹ್ಹಾಬಿಗಳು ಹೇಳುವ ಒಂದು ಬಾಲಿಶ ವಾದವಾಗಿದೆ ಈದ್ ವರ್ಷಕ್ಕೆ ಎರಡು ಬಾರಿ ಮಾತ್ರ ಎಂಬುವುದು.ಅಥವಾ ಈದುಲ್ ಫಿತರ್ ಮತ್ತು ಈದುಲ್ ಅಳ್'ಹಾ.
ಸತ್ಯಕ್ಕೆ ವಿರುದ್ಧವಾದ ಒಂದು ವಾದವಾಗಿದೆ ಇದು.
ಅದಕ್ಕೆ ಅವರು ಒಂದು ಹದೀಸನ್ನು ದುರ್ವ್ಯಾಖ್ಯಾನಿಸುತ್ತಾರೆ.
ಅದು ಈ ರೀತಿ,
عَنْ أَنَسِ بْنِ مَالِكٍ، قَالَ: كَانَ لِأَهْلِ الْجَاهِلِيَّةِ يَوْمَانِ فِي كُلِّ سَنَةٍ يَلْعَبُونَ فِيهِمَا، فَلَمَّا قَدِمَ النَّبِيُّ صَلَّى اللهُ عَلَيْهِ وَسَلَّمَ الْمَدِينَةَ، قَالَ: " كَانَ لَكُمْ يَوْمَانِ تَلْعَبُونَ فِيهِمَا وَقَدْ أَبْدَلَكُمُ اللَّهُ بِهِمَا خَيْرًا مِنْهُمَا: يَوْمَ الْفِطْرِ، وَيَوْمَ الْأَضْحَى
(نسائي 3/179).
ಅನಸ್ (ರ)ಹೇಳುತ್ತಾರೆ.ಜಾಹಿಲಿಯ್ಯಾ ಕಾಲದಲ್ಲಿ ಅವರಿಗೆ 2 ದಿನಗಳು ವಿನೋದದ ದಿನವಾಗಿತ್ತು.ಪ್ರವಾದೀ ﷺ ರು ಮದೀನಾಗೆ ಹಿಜ್ರ ಹೋದಾಗ ಅವರೊಂದಿಗೆ ಹೇಳಿದರು;ಇದನ್ನು ಬದಲಾಯಿಸಿ ಇದಕ್ಕಿಂತ ಉತ್ತಮವಾದ ಈದುಲ್ ಫಿತ್ರ್ ಮತ್ತು ಈದುಲ್ ಅಳ್'ಹವನ್ನು ಅಲ್ಲಾಹನು ನಿಮಗೆ ನೀಡಿದ್ದಾನೆ.(ನಸಾಈ 3/179).
ವರ್ಷಕ್ಕೆ ಈದ್ 2 ಮಾತ್ರವೆಂದು ಇದರಿಂದ ತಿಳಿದು ಬರುತ್ತದೆ ಎಂದಾಗಿದೆ ಸಲಪಿಯ ವಾದ.
ಹದೀಸನ್ನು ಬೇಕಾದಂತೆ ಗ್ರಹಿಸದ ಕಾರಣದಿಂದ ಈ ರೀತಿಯ ವಿಚಿತ್ರ ವಾದವನ್ನು ಅವರು ಹೇಳುತ್ತಿದ್ದಾರೆ.
ವಾಸ್ತವದಲ್ಲಿ
ಪ್ರವಾದೀﷺ ಮರು ಅವರಲ್ಲಿ "ನೀವು ಉತ್ಸವವಾಗಿ ಕಾಣುವ ಈ ಎರಡು ದಿನಗಳಿಗೆ ಬದಲಾಗಿ 2 ಈದ್ ಗಳು ಪುಣ್ಯದಾಯಕವಾಗಿದೆ" ಎಂದು ಹೇಳಿದ್ದಾರೆಯೇ ಹೊರತು ಈದ್ 2 ಮಾತ್ರವಿರುವುದು ಎಂದು ಹೇಳಿಲ್ಲ.ಬುದ್ಧಿಯಿರುವ ಯಾರಿಗೂ ಇದು ತಿಳಿಯುವ ವಿಚಾರ.
ಮಂಗಳೂರು ಮತ್ತು ಪುತ್ತೂರು ದೊಡ್ಡ ಸಿಟಿ ಎಂದು ಹೇಳಿದ ಒಬ್ಬನಲ್ಲಿ ನಾನು ಹೇಳಿದೆ.ಅದಕ್ಕಿಂತಲೂ ದೊಡ್ಡ ಸಿಟಿ ಮೈಸೂರು ಮತ್ತು ಬೆಂಗಳೂರು ಇದೆ.
ಆವಾಗ ನನ್ನ ಮಾತನ್ನು ತಪ್ಪಾಗಿ ಅರ್ಥೈಸಿ ಸಿಟಿಯಿರುವುದು ಮೈಸೂರು ಮತ್ತು ಬೆಂಗಳೂರು ಮಾತ್ರವೆಂದು ಅವರು ಹೇಳಿದ್ದಾರೆ ಎಂದು ಒಬ್ಬ ಹೇಳಿದರೆ ಆತನನ್ನು ಹುಚ್ಚಾಸ್ಪತ್ರೆಯಲ್ಲಿ ಕಟ್ಟಿಯಿಡಬೇಕಾದೀತು.ಅದೇ ರೀತಿಯಾಗಿದೆ ಸಲಪಿಯ ಅರ್ಥ ಕೂಡಾ.
ಈ ಎರಡು "ಈದ್" ನ ಬಗ್ಗೆ ಹೇಳಿದ ಅದೇ ಪ್ರವಾದೀ ﷺಮರು
ಶುಕ್ರವಾರದ ಕುರಿತು ಹೇಳಿದ ಹದೀಸ್ ನೋಡಿ,
عن ابن عباس قال :قال رسول الله صلى الله عليه وسلم إن هذا يوم عيد .جعله الله للمسلمين. فمن جاء إلى الجمعة فليغتسل .وإن كان طيب فليمس منه. وعليكم بالسواك
(ابن ماجه 1/349 )
ಇಬ್ನ್ ಅಬ್ಬಾಸ್(ರ)ವರದಿ;
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಖಂಡಿತವಾಗಿಯೂ ಈ ದಿನ(ಶುಕ್ರವಾರ) ಮುಸ್ಲಿಮರಿಗೆ ಅಲ್ಲಾಹನು ಮಾಡಿದ ಈದ್ ಆಗಿದೆ.ಆದುದರಿಂದ ಜುಮುಅ ನಮಾಝ್ ಗೆ ಬರುವವನು ಸ್ನಾನ ಮಾಡಲಿ.ಸುಗಂಧ ದ್ರವ್ಯವಿದ್ದಲ್ಲಿ ಹಚ್ಚಲಿ.
(ಇಬ್ನ್ ಮಾಜ 1/349)
ಅದೇ ರೀತಿ ಮುವತ್ವ 1/65,
ಮುಸ್ನದು ಶ್ಶಾಫಿಈ 1/63
ರಲ್ಲೂ ಕಾಣಬಹುದಾಗಿದೆ.
*ಈ ಹದೀಸ್ ಸ್ವೀಕಾರ್ಯಯೋಗ್ಯವಾಗಿದೆಯೆಂದು ವಹ್ಹಾಬೀ ನಾಯಕ ಅಲ್ಬಾನಿಯೇ ಸಮ್ಮತಿಸಿದ್ದಾರೆ.*
*(ಇಬ್ನ್ ಮಾಜ ಟಿಪ್ಪಣಿ 1/349)*
ಎಲ್ಲಾ ವಾರಗಳಲ್ಲೂ *ಈದ್* ಇದೆ ಎಂದು ಈ ಹದೀಸಿನಿಂದ ಬಹಳ ಸ್ಪಷ್ಟ.
ಒಂದು ಹದೀಸನ್ನು ಅಂಗೀಕರಿಸಿ ಇನ್ನೊಂದು ಹದೀಸ್ ತಿರಸ್ಕರಿಸುವುದು ಒಮ್ಮೆಯೂ ಮುಸ್ಲಿಮನಿಗೆ ಭೂಷಣವಲ್ಲ.
ಶುಕ್ರವಾರ ದಿನ ಈದ್ ಆಗಲು ಕಾರಣವೇನೆಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೇ ಬೇರೊಂದು ಹದೀಸಿನಲ್ಲಿ ವಿವರಿಸಿದ್ದಾರೆ.
عن ابي هريرة قال قال رسول الله ﷺخير يوم طلعت فيه الشمس يوم الجمعة فيه خلق ادم وفيه ادخل الجنة وفيه اخرج من النار.
(مسلم 3/6)
ದಿವಸಗಳ ಪೈಕಿ ಶ್ರೇಷ್ಟವಾದ ದಿವಸ ಶುಕ್ರವಾರವಾಗಿದೆ.ಆ ದಿನ ಆದಮ್ ನೆಬಿಯನ್ನು ಸೃಷ್ಠಿಸಲಾಗಿದೆ.ಅದೇ ದಿನ ಸ್ವರ್ಗಕ್ಕೆ ಅವರನ್ನು ಪ್ರವೇಶಿಸಲಾಯಿತು ಹಾಗೂ ಶುಕ್ರವಾರ ಸ್ವರ್ಗದಿಂದ ಹೊರಕಳುಹಿಸಲಾಯಿತು.
(ಮುಸ್ಲಿಂ 3/6)
ಆದಮ್ ನೆಬಿಯವರನ್ನು ಸೃಷ್ಠಿಸಿದ ದಿವಸ ಎಂಬ ಕಾರಣಕ್ಕೆ ಶುಕ್ರವಾರಕ್ಕೆ ಮಹತ್ವ ಲಭಿಸಿರುವುದಾದರೆ ಅವರಿಗಿಂತಲೂ ಶ್ರೇಷ್ಠರಾದ ಪ್ರವಾದೀ ಮುಹಮ್ಮದ್ ﷺ ರು
ಜನಿಸಿದ ದಿವಸಕ್ಕೆ ಖಂಡಿತವಾಗಿಯೂ ಅದಕ್ಕಿಂತಲೂ ಮಹತ್ವ ಇದೆ ಎಂಬುವುದರಲ್ಲಿ ಸಂಶಯವಿಲ್ಲ.
ಆದಮ್ ನೆಬಿಯನ್ನು ಸೃಷ್ಠಿಸಲ್ಪಟ್ಟ ಶುಕ್ರವಾರವನ್ನು *ಈದ್* ಎಂದು ಹೇಳಬಹುದಾದರೆ ಪ್ರವಾದೀ ﷺ ರು ಜನಿಸಿದ ರಬೀವುಲ್ 12 ನೇ ದಿನಕ್ಕೆ *ಈದ್ ಮೀಲಾದ್* ಎನ್ನುದರಲ್ಲಿ ಯಾವುದೇ ತಪ್ಪಿಲ್ಲ.
ಆದುದರಿಂದಲೇ ಆ ದಿನ *"ಈದ್ ಮೀಲಾದ್"* ಎಂಬ ಹೆಸರಲ್ಲಿ ತಿಳಿಯಲ್ಪಡುತ್ತದೆ.
*ರಬೀವುಲ್ ಅವ್ವಲ್ 12 ರಂದು ದುಖಾಚರಣೆಯೇ?*
ಪ್ರವಾದೀ ﷺ ಮರು ರಬೀವುಲ್ 12 ರಂದು ಜನಿಸಿದಂತೆ ರಬೀವುಲ್ 12 ರಂದು ವಫಾತ್ ಆದರು.
ಈ ಕಾರಣದಿಂದ ವಹ್ಹಾಬಿಗಳು ಆ ದಿನದಂದು ದುಖಾಚರಣೆ ನಡೆಸಬೇಕೆಂದು ವಾದಿಸುತ್ತಾರೆ.
ಪ್ರವಾದೀ ﷺ ಮರು ವಫಾತ್ ಆದ ದಿನ ಸ್ವಹಾಬಿಗಳು ದುಃಖದಲ್ಲಿದ್ದರಂತೆ. ಆದುದರಿಂದ ಅಂದು ಯಾವುದೇ ಸಂತೋಷಪಡದೇ ದುಖಃದಲ್ಲಿರಬೇಕೆಂದು ಹೇಳುತ್ತಾರೆ.
ಇದು ಕೇವಲ ಅವರ ಬಾಯಿಯಿಂದ ಹೇಳುವರೇ ವಿನಃ ಯಾವುದೇ ವಹ್ಹಾಬೀ ದುಖಃಪಟ್ಟ ಚರಿತ್ರೆಯಿಲ್ಲ. ಎಲ್ಲಾ ದಿನಗಳಂತೆ ಎಲ್ಲಾ ವಹ್ಹಾಬಿಗಳು ಹೊಟ್ಟೆ ತುಂಬಾ ತಿಂದು ತೇಗುವುದಲ್ಲದೇ ಯಾರೂ ಕೂಡಾ ದುಖಾಚರಣೆ ನಡೆಸಿಲ್ಲ.
ರಬೀವುಲ್ ಅವ್ವಲ್ 12 ರಂದು ಇಬ್ಲೀಸನಿಗೆ ಬಹಳ ದುಖಃವುಂಟಾಗಿತ್ತೆಂದು ಚರಿತ್ರೆ ಗ್ರಂಥಗಳಲ್ಲಿ ಇದೆ.
ಆತನ ಅನುಯಾಯಿಗಳಿಗೂ ಇದೇ ರೀತಿಯ ದುಖಃವಾಗಿದೆ.
ಏನೇ ಇರಲಿ ವಿಷಯಕ್ಕೆ ಬರೋಣ.
*_ಇದರ ಕುರಿತು ವಿಧ್ವಾಂಸರ ನಿಲುವೇನು?_*
ಮೀಲಾದ್ ನ ಅದೇ ದಿನದಂದು ಅವರು ವಫಾತ್ ಆಗಿರುವುದರಿಂದ ಅಂದು ದುಖಾಚರಣೆ ನಡೆಸಬೇಕೆಂದು ಒಬ್ಬರು ಹೇಳಿದಾಗ
_51 ಪ್ರಗಲ್ಭರಾದ_ _ಇಮಾಮರುಗಳಿಂದ ವಿಧ್ಯೆ ಕಲಿತು 2 ಲಕ್ಷಕ್ಕಿಂತಲೂ ಹೆಚ್ಚು_ _ಹದೀಸ್ ಕಂಠಪಾಟ ಮಾಡಿದ,500 ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದ ಇಮಾಮ್ ಸುಯೂಥೀ_ _(ರ)ಹೇಳುವುದು ನೋಡಿ,_
*إن ولادته صلى الله عليه وسلم أعظم النعم علينا ، ووفاته أعظم المصائب لنا ، والشريعة حثت على إظهار شكر النعم والصبر والسكون والكتم عند المصائب ، وقد أمر الشرع بالعقيقة عند الولادة ، وهي إظهار شكر وفرح بالمولود ، ولم يأمر عند الموت بذبح ولا بغيره بل نهى عن النياحة وإظهار الجزع ، فدلت قواعد الشريعة على أنه يحسن في هذا الشهر إظهار الفرح بولادته صلى الله عليه وسلم دون إظهار الحزن فيه بوفاته*
(الحاوي للفتاوي 1/278)
_ಪ್ರವಾದಿ ﷺಮರ ಜನನವು ನಮ್ಮ ಮೇಲೆ ಅಲ್ಲಾಹನು ಮಾಡಿದ ಅತೀ ದೊಡ್ಡ ಅನುಗ್ರಹವಾಗಿದೆ. ಅವರ ವಫಾತ್ ಅತೀ ದೊಡ್ಡ ವಿಪತ್ತೂ ಆಗಿದೆ. ಅನುಗ್ರಹಕ್ಕೆ ಕೃತಞ್ಞತೆ ಸಲ್ಲಿಸಬೇಕೆಂದು ವಿಪತ್ತುಗಳನ್ನು ಮುಚ್ಚಿಟ್ಟು ಸಹನೆ ಪಾಲಿಸಬೇಕೆಂದೂ ಇಸ್ಲಾಮಿನ ನಿಯಮವಾಗಿದೆ. ಆದುದರಿಂದಲೇ ಮಗು ಹುಟ್ಟಿದಾಗ ಅಖೀಖ ನೀಡುವಂತೆ ಇಸ್ಲಾಮ್ ಆದೇಶಿಸಿದೆ. ಅದು ಮಗು ಲಭಿಸಿದ ಅನುಗ್ರಹಕ್ಕೆ ಸಂತೋಷ ಪ್ರಕಟ ಮತ್ತು ಕೃತಞ್ಞತೆ ಸಲ್ಲಿಸುವುದಾಗಿದೆ. ಅದೇ ವೇಳೆ, ಮರಣ ಹೊಂದಿದ್ದಕ್ಕಾಗಿ ಬಲಿಕೊಡುವುದನ್ನೋ ಇನ್ನಿತರ ಕಾರ್ಯ ಮಾಡುವುದನ್ನೋ ಇಸ್ಲಾಮ್ ಆದೇಶಿಸಿಲ್ಲ. ಅಷ್ಟೇಅಲ್ಲ ದು:ಖ ಪ್ರಕಟವನ್ನು ಇಸ್ಲಾಮ್ ವಿರೋಧಿಸಿದೆ._
_ಆದುದರಿಂದ ಈ ತಿಂಗಳಲ್ಲಿ ವಫಾತ್'ನ ಕಾರಣ ಹೇಳಿ ದು:ಖ ಆಚರಿಸದೆ ಪ್ರವಾದಿ ﷺ ಮರ ಜನನದಿಂದ ಸಂತೋಷ ಪ್ರಕಟಿಸುವುದು ಉತ್ತಮವೆಂದು ತಿಳಿದು ಬರುತ್ತದೆ._
(ಅಲ್-ಹಾವೀ ಲಿಲ್ ಫತಾವಾ 1/226)
ನಂತರ ಅವರು ಹೇಳುವುದು ನೋಡಿ,
*وقد قال ابن رجب في كتاب اللطائف في ذم الرافضة حيث اتخذوا يوم عاشوراء مأتما لأجل قتل الحسين : لم يأمر الله ولا رسوله باتخاذ أيام مصائب الأنبياء وموتهم مأتما ، فكيف ممن هو دونهم ؟!*
(الحاوي للفتاوي 1/226)
ಇಮಾಮ್ ಇಬ್ನ್ ರಜಬ್(ರ) ತನ್ನ "ಲತ್ವಾಯಿಫುಲ್ ಮಆರಿಫ್" ನಲ್ಲಿ ಹೇಳಿದರು; ರಾಫಿಳತ್ ಎಂಬ ನೂತನವಾದಿಗಳ ಒಂದು ಪಂಗಡ ಮುಹರ್ರಂ 10 ರಂದು ಹುಸೈನ್ (ರ) ಕೊಲ್ಲಲ್ಪಟ್ಟದಕ್ಕಾಗಿ ಅಲ್ಲಾಹನು ಮತ್ತು ರಸೂಲರು ಕಲಿಸದ ದುಖಾಚರಣೆಯನ್ನು ನಡೆಸಿದರು.
ಪ್ರವಾದಿಗಳಿಗೆ ಬಂದ ವಿಪತ್ತುಗಳಿಗೆ ಮತ್ತು ಮರಣಕ್ಕೆ ದುಃಖ ಆಚರನೆಯನ್ನು ಇಸ್ಲಾಂ ಕಲಿಸಿಲ್ಲ.
(ಅಲ್ ಹಾವೀ ಲಿಲ್ ಫತಾವಾ 1/226)
ಲಕ್ಷೋಪ ಲಕ್ಷ ಹದೀಸ್ ಕಲಿತ ಇಮಾಮರು ಈ ರೀತಿ ಹೇಳುವಾಗ ಅರೆಬರೆ ಕಲಿತ ಮೌಲವಿ ರಬೀವುಲ್ ಅವ್ವಲ್ 12 ರಂದು ಸಂತೋಷಪಡಬಾರದು.ದುಖಃಆಚರಿಸಬೇಕೆಂದು ಹೇಳಿದರೆ ಅದನ್ನು ಸ್ವೀಕರಿಸಲು ಮುಸ್ಲಿಮರು ತಯಾರಾಗಲಾರರು.
ಮಾತ್ರವಲ್ಲ, ಮರಣದಂತಹಾ ವಿಪತ್ತು ಬಂದಲ್ಲಿ ದುಃಖ ಆಚರಿಸಬಾರದೆಂದಾಗಿದೆ ಇಸ್ಲಾಮಿನ ನಿಲುವು.
*ಇಮಾಮ್ ಬುಖಾರೀ (ರ)ರವರ ಸ್ವಹೀಹುಲ್ ಬುಖಾರಿಯಲ್ಲಿ ಒಂದು ಅಧ್ಯಾಯವಿದೆ.*
ಅದು ಈ ರೀತಿಯಾಗಿದೆ.
*باب من لم يظهر حزنه عند المصيبة*
(بخاري 1/555 )
*(ವಿಪತ್ತುಗಳ ವೇಳೆ ದುಖಃ ಪ್ರಕಟಿಸದವರ ಕುರಿತಿರುವ ಅಧ್ಯಾಯ)*
ಈ ಅಧ್ಯಾಯದಲ್ಲಿ ಇಮಾಮ್ ಬುಖಾರೀ (ರ), ಅನಸ್ (ರ) ರಿಂದ ವರದಿ ಮಾಡಿದ ಬಹಳ ಪ್ರಸಿದ್ಧವಾದ ಒಂದು ಹದೀಸಿದೆ.
ಅಬೂ ತ್ವಲ್'ಹ (ರ)ರವರ ಮಗು ಮರಣ ಹೊಂದಿದಾಗ ಪತ್ನಿಯಾದ ಉಮ್ಮು ಸುಲೈಮ್ (ರ)ಮಗು ತೀರಿದ ವಿಷಯ ಪತಿಯೊಂದಿಗೆ ಹೇಳದೆ ಅಂದು ರಾತ್ರಿ ಊಟ ಮಾಡಿ ಮಲಗಿ ಬೆಳಿಗ್ಗೆ ಆ ಕುರಿತು ಹೇಳಿದ ಘಟನೆಯದು.
ಬೆಳಿಗ್ಗೆ ಪ್ರವಾದೀ ﷺ ರಲ್ಲಿ ಈ ಘಟನೆಯನ್ನು ಹೇಳಿದಾಗ ಅವರಿಗೆ ಸಮೃದ್ಧಿಗಾಗಿ ಪ್ರಾರ್ಥಿಸಿದರು.
(ಬುಖಾರೀ 1239).
عن أنس بن مالك رضي الله عنه يقول اشتكى ابن لأبي طلحة قال فمات وأبو طلحة خارج فلما رأت امرأته أنه قد مات هيأت شيئا ونحته في جانب البيت فلما جاء أبو طلحة،قال كيف الغلام قالت : قد هدأت نفسه وأرجو أن يكون قد استراح ،وظن أبو طلحة أنها صادقة ،قال :فبات فلما أصبح اغتسل ،فلما أراد أن يخرج، أعلمته أنه قد مات فصلى مع النبي صلى الله عليه وسلم ثم أخبر النبي صلى الله عليه وسلم بما كان منهما ،فقال رسول الله صلى الله عليه وسلم :
لعل الله أن يبارك لكما في ليلتكما
(صحيح البخاري 1214)
ಹಲವಾರು ಯುದ್ಧಗಳಲ್ಲಿ ಸ್ವಹಾಬಿಗಳನ್ನು ಕೊಲ್ಲಲ್ಪಡಲಾಗಿತ್ತು.
ಶತ್ರುಗಳಿಗೆ ವಿರುದ್ಧವಾಗಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ನಾಝಿಲತ್'ನ ಖುನೂತ್ (ಮುಸ್ಲಿಮರಿಗೆ ವಿಪತ್ತು ಉಂಟಾದಲ್ಲಿ ಎಲ್ಲಾ ನಮಾಝಿನ ಕೊನೆಯ ರಕ ಅತ್'ನ ಇಅ್'ತಿದಾಲ್ ನಲ್ಲಿ ನಡೆಸುವ ಪ್ರಾರ್ಥನೆ ) ನಿರ್ವಹಿಸುತ್ತಿದ್ದರು.
ದುಖಃವನ್ನು ಅದುಮಿಡುತ್ತಿದ್ದರು.
ಯಾವುದೇ ಶೋಕಾಚರಣೆಯನ್ನು ಪ್ರವಾದೀﷺ ರು ಅಥವಾ ಸ್ವಹಾಬಿಗಳು ನಡೆಸಿಲ್ಲ.
ಇದನ್ನು ಫತ್ ಹುಲ್ ಬಾರಿಯಲ್ಲಿ ವಿವರಿಸಲಾಗಿದೆ. (ಫತ್'ಹುಲ್ ಬಾರಿ.3/167)
ಮಾತ್ರವಲ್ಲ, ರಬೀವುಲ್ ಅವ್ವಲ್ 12 ರಂದು ಶೋಕಾಚರಣೆ ನಡೆಸಬೇಕೆಂದು ಒಬ್ಬರು ಹೇಳಿದಾಗ ಅದು ಸಲ್ಲದೆಂದು ಇಮಾಮ್ ಸುಯೂಥೀ (ರ) ಬಹಳ ಸ್ಪಷ್ಟವಾಗಿ ವಿವರಿಸುವಾಗ ಮತ್ತೆ ಅದೇ ವಾದವನ್ನು ವಾದಿಸುವುದು ಶುದ್ಧ ಮೂರ್ಖತನವಾಗಿದೆ.
*ಮುಹರ್ರಂ 10 ರಂದು ಹುಸೈನ್ (ರ) ಹೆಸರಲ್ಲಿ ಶಿಯಾಗಳು ಶೋಕಾಚಾರಣೆ ನಡೆಸುವಂತೆ ಪ್ರವಾದೀﷺ ರ ಹೆಸರಲ್ಲಿ ವಹ್ಹಾಬಿಗಳು ಶೋಕಾಚರಣೆ ಮಾಡುತ್ತಾರೆ.*
*ಎರಡು ಪಂಗಡವೂ ಅಹ್ಲುಸ್ಸುನ್ನತ್ ವಲ್ ಜಮಾಅತ್ ಗೆ ವಿರುದ್ಧವಾದ ಹಾದಿ ತಪ್ಪಿದ ಪಂಗಡವಾಗಿದೆ.*
*_ಈದ್ ಮೀಲಾದ್ ಕೇರಳ,ಕರ್ನಾಟಕದಲ್ಲಿ ಮಾತ್ರವೇ?_*
ವರ್ಷಗಳ ಮುಂಚೆ ವಹ್ಹಾಬಿಗಳು ಈದ್ ಮೀಲಾದ್ ಕೇರಳ ಮತ್ತು ಕರ್ನಾಟಕದಲ್ಲಿ ಮಾತ್ರ ನಡೆಯುವ ಆನಾಚಾರಗಳೆಂದು ಹೇಳಿ ಜನರನ್ನು ಮೋಸ ಮಾಡುತ್ತಿದ್ದರು.ಆದರೆ ಈಗ ಕಾಲ ಬದಲಾಗಿದೆ.ಬೆರಳ ತುದಿಯಲ್ಲೇ ಪ್ರಪಂಚವಿದೆ.ಜಗತ್ತಿನ ಮೂಲೆ ಮೂಲೆಗಳಲ್ಲಿ ಏನೇ ನಡೆದರೂ ನಿಮಿಷಾರ್ಧದಲ್ಲೇ ಅದು ಜಗತ್ತಿಗೆ ತಿಳಿಯುತ್ತದೆ.
ಭಾರತ ಮಾತ್ರವಲ್ಲದೆ ಇನ್ನಿತರ ರಾಷ್ಟ್ರಗಳಾದ ಲಂಡನ್ ,ಬ್ರಿಟನ್ ,ಮಲೇಶ್ಯ ಈಜಿಪ್ಟ್ ,ಫೆಲಸ್ತೀನ್ ಮುಂತಾದ ಅನೇಕ ರಾಷ್ಟ್ರಗಳಲ್ಲಿ ಈದ್ ಮೀಲಾದ್ ಆಚರಿಸುವ ವೀಡಿಯೋ ಮತ್ತು ಫೋಟೋಸ್ ಗಳನ್ನು ನಾವು ನೋಡಿದ್ದೇವೆ.ಈ ಹೇಳಿದ ಎಲ್ಲಾ ರಾಷ್ಟ್ರಗಳಲ್ಲಿ ನಡೆಯುವ ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಶೈಖುನಾ ಎ.ಪಿ.ಉಸ್ತಾದ್ ಭಾಗವಹಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಇದಲ್ಲದೆ ಮಕ್ಕಾದಲ್ಲೂ ಕೂಡಾ ಪೂರ್ವೀಕರು ಈದ್ ಮೀಲಾದ್ ಆಚರಿಸುತ್ತಿದ್ದದ್ದಾಗಿ ಗ್ರಂಥಗಳಲ್ಲಿ ವಿವರಿಸಲಾಗಿದೆ.
ವಹ್ಹಾಬಿಗಳ ಆಡಳಿತ ದೇಶವಾದ ಸೌದಿಯಲ್ಲಿ ಸುನ್ನೀ ಆಶಯವನ್ನು ಸಾಧ್ಯವಾದಷ್ಟು ವಹ್ಹಾಬಿಗಳು ನಿರ್ಮೂಲನೆಗೊಳಿಸಿದ್ದಾರೆ.
ಎತ್ತರಿಸಲ್ಪಟ್ಟ ಖಬ್'ರ್'ಗಳನ್ನು ನೆಲಸಮ ಮಾಡಿದ್ದು ಕೂಡಾ ಅವರೇ.
ಮರ್ಹೂಂ ಸೆಯ್ಯಿದ್ ಅಲವೀ ಅಲ್ ಮಾಲಿಕೀ ಅವರ ಮನೆಯಲ್ಲಿ ಮತ್ತು ಇನ್ನಿತರ ಸುನ್ನೀ ಕುಟುಂಬದ ಅರಬಿಗಳ ಮನೆಯಲ್ಲಿ ಬೃಹತ್ ಮೌಲಿದ್ ಗಳು ಇಂದು ಕೂಡಾ ನಡೆದು ಬರುತ್ತಿದೆ.
ಪುರಾತನ ಕಾಲದಲ್ಲಿ ಮಕ್ಕಾದಲ್ಲಿ ಎಲ್ಲಾ ಕಡೆಗಳಲ್ಲೂ ಈದ್ ಮೀಲಾದ್ ಇತ್ತು.ವಹ್ಹಾಬೀ ಬೀಕರರ ಉಪದ್ರವ ಹೆದರಿ ಕೆಲವು ಕಡೆಗಳಲ್ಲಿ ಗೌಪ್ಯವಾಗಿ ಈಗಲೂ ನಡೆಯುತ್ತಾ ಇದೆ.
ಮಕ್ಕಾದಲ್ಲಿ ಈದ್ ಮೀಲಾದ್ ಆಚರಿಸುತ್ತಿದ್ದ ಬಗ್ಗೆ ಇಮಾಮರುಗಳು ನೂರಾರು ವರ್ಷಗಳ ಮುಂಚೆಯೇ ಗ್ರಂಥಗಳಲ್ಲಿ ವಿವರಿಸಿದ್ದಾರೆ.
ಪ್ರಸಿದ್ಧ ಸಂಚಾರಿ ,ಹಿಜ್ರ 540 ರಲ್ಲಿ ಜನಿಸಿ 614 ರಲ್ಲಿ ಮರಣ ಹೊಂದಿದ ಮುಹಮ್ಮದ್ ಬಿನ್ ಅಹ್ಮದ್ ಬಿನ್ ಜುಬೈರ್ ಅಲ್ ಉಂದುಲುಸಿ(ರ)ಬರೆಯುವುದು ನೋಡಿ;
_" يفتح هذا الموضع المبارك فيدخله الناس كافة متبركين به في شهر ربيع الأول ويوم الاثنين منه، لأنه كان شهر مولد النبي صلى الله عليه وسلم، وفي اليوم المذكور الذي ولد فيه النبي صلى الله عليه وسلم، تفتح المواضع المقدسة المذكورة كلها. وهو يوم مشهود بمكة دائما_
(رحلة ابن جبير 1/34)
_ರಬೀವುಲ್ ಅವ್ವಲ್ 12 ರಂದು ಮಕ್ಕಾದಲ್ಲಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಮನೆಯ ಬಾಗಿಲನ್ನು ತೆರೆಯಲಾಗುತ್ತದೆ.ಜನರು ಬರ್ಕತ್'ಗಾಗಿ ಅದರೊಳಗೆ ಪ್ರವೇಶಿಸುತ್ತಾರೆ.ಕಾರಣ,ಆ ದಿನ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನವಾಗಿದೆ.ಮಹತ್ವವಿರುವ ಆ ಎಲ್ಲಾ ಸ್ಥಳಗಳನ್ನು ತೆರೆಯಲ್ಪಡಲಾಗುತ್ತದೆ._
(ರಿಹ್'ಲ ಇಬ್ನ್ ಜುಬೈರ್ 1/34)
ರಬೀವುಲ್ ಅವ್ವಲ್ 12 ರಂದು ಮಕ್ಕಾ ನಿವಾಸಿಗಳು ಇದು ನಿರ್ವಹಿಸುತ್ತಿದ್ದರೆಂದು ಹೇಳುವುದು ಇಲ್ಲಿನ ಸಮಸ್ತದ ಆಲಿಂಗಳಲ್ಲ.
ಎಸ್ಸೆಸ್ಸೆಫ್ ನಾಯಕರಲ್ಲ.
ಹೊರತು 800 ವರ್ಷಗಳ ಮುಂಚೆ ಮರಣ ಹೊಂದಿದ ಇಮಾಮರುಗಳಾಗಿದ್ದಾರೆ.
ಇದನ್ನೆಲ್ಲಾ ಮಕ್ಕಾದಿಂದ ನಿರ್ಮೂಲಗೊಳಿಸಿ ಮಕ್ಕಾ , ಮದೀನದಲ್ಲಿ ಇದು ಇಲ್ಲವಲ್ಲಾ ಎಂದು ಹೇಳುವುದು ವಹ್ಹಾಬಿಗಳ ಕಾಪಟ್ಯಕ್ಕಿರುವ ದೊಡ್ಡ ಉದಾಹರಣೆಯಾಗಿದೆ.
ಇನ್ನೊಬ್ಬ ಪ್ರಸಿದ್ಧ ಪ್ರಪಂಚ ಸಂಚಾರಿ ಹಿಜರಿ 703 ರಲ್ಲಿ ಜನಿಸಿ 779 ರಲ್ಲಿ ಮರಣ ಹೊಂದಿದ ಇಬ್ನ್ ಬತೂತ ರವರ ಮಾತು ನೋಡಿ,
_ويفتح الباب الكريم في كل يوم جمعة بعد الصلاة ،ويفتح في يوم مولد النبي صلي الله عليه وسلم_ (رحلة 60).
_ಪಾವನ ಕಅಬಾದ ಬಾಗಿಲನ್ನು ಎಲ್ಲಾ ಶುಕ್ರವಾರ ಜುಮುಅ ನಮಾಝಿನ ಬಳಿಕ ಮತ್ತು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನದಂದು ತೆರೆಯಲಾಗುತ್ತದೆ._
( ರಿಹ್'ಲ 60).
ಮತ್ತೊಂದು ಸ್ಥಳದಲ್ಲಿ ಅವರು ಹೇಳುತ್ತಾರೆ;
_قاضي مكة العالم الصالح العابد نجم الدين محمد بن إمام العالم محيي الدين الطبري، وهو فاضل كثير الصدقات والمواساة للمجاورين، حسن الأخلاق كثير الطواف والمشاهدة للكعبة الشريفة، يطعم الطعام الكثير في المواسم المعظمة، وخصوصاً في مولد رسول الله صلى الله عليه وسلم، فإنه يطعم فيه شرفاء مكة وكبراءها وفقراءها وخدام الحرم الشريف وجميع المجاورين. وكان سلطان مصر الملك الناصر رحمه الله يعظمه كثيراً، وجميع صدقاته وصدقات أمرائه تجرى على يديه. وولده شهاب الدين فاضل، وهو الآن قاضي مكة شرفها الله._
(رحلة 67)
_ಮಕ್ಕಾದಲ್ಲಿ ಹಿರಿಯ ಆಲಿಂ ನಜ್ಮುದ್ದೀನ್ ಮುಹಮ್ಮದ್ ಬಿನ್ ಮುಹ್ಯುದ್ದೀನ್ ಅತ್ತಬ್'ರೀ ಎಂಬವರು ಖಾಝಿಯಾಗಿದ್ದರು.ಅವರು ಮಹಾ ದಾನಿಯಾಗಿದ್ದರು.ಉತ್ತಮ ಗುಣ ನಡತೆಯುಳ್ಳ ವ್ಯಕ್ತಿಯಾಗಿದ್ದರು.ಅವರು ಇತರರಿಗೆ ಆಹಾರಗಳನ್ನು ನೀಡುತ್ತಿದ್ದರು. *ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನದಲ್ಲಿ ಮಕ್ಕಾದಲ್ಲಿರುವ ಬಡವರಿಗೂ ಶ್ರೀಮಂತರಿಗೂ ಊಟ ನೀಡುತ್ತಿದ್ದರು.* ಮಿಸ್ರಿನ ರಾಜ ನಾಸಿರ್ ರವರು ಅವರನ್ನು ಅತಿಯಾಗಿ ಗೌರವಿಸುತ್ತಿದ್ದರು.ಅವರ ಮಗ ಶಿಹಾಬುದ್ದೀನ್ ಎಂಬ ಆಲಿಂ ಈಗ ಮಕ್ಕಾದಲ್ಲಿ ಖಾಝಿಯಾಗಿರುವರು._
(ರಿಹ್'ಲ 67)
*ಪ್ರೀತಿಯ ಓದುಗರೇ !*
ಇನ್ನು ನೀವೇ ಹೇಳಿ,
ಮಕ್ಕಾದಲ್ಲಿ ಈದ್ ಮೀಲಾದ್ ಆಚರಿಸಲಾಗುತ್ತಿತ್ತೇ?ಇಲ್ಲವೇ?
ಅದನ್ನೆಲ್ಲಾ ತೊಡೆದು ಹಾಕಿ ಕೇರಳ ಕರ್ನಾಟಕದಲ್ಲಿ ಮಾತ್ರವಿರುವ ಕಾರ್ಯವೆಂದು ಹೇಳಿದ್ರೆ ಅಲ್ಲಾಹನು ಮೆಚ್ಚಲಾರನು.
*ಬಾಕಿ 4 ನೇ ಭಾಗದಲ್ಲಿ ಓದಿರಿ*
*ಮೀಲಾದುನ್ನಬೀ ಭಾಗ = 02*
*ಮೀಲಾದುನ್ನಬೀ.*
-------------------------------
*ಭಾಗ ---2.*
______________________________________
ಮೀಲಾದುನ್ನಬೀ ಎಂಬುವುದು ಖಂಡಿತವಾಗಿಯೂ ಪ್ರತಿಫಲವಿರುವ ಕರ್ಮವಾಗಿದೆ. *ನೂತನ ವಾದಿಗಳ ನಾಯಕ ಇಬ್ನ್ ತೀಮಿಯ್ಯ ಕೂಡಾ ಇದನ್ನು ಅಂಗೀಕರಿಸಿದ್ದಾರೆ.*
ಶತಮಾನಗಳ ಪಾರಂಪರ್ಯವಿರುವ ಮೌಲಿದ್ ಕಾರ್ಯಕ್ರಮ ಎಲ್ಲರೂ ಆಚರಿಸಿದ್ದಾರೆ.
ಎಲ್ಲಾ ಕಾಲದಲ್ಲಿಯೂ ಉಲಮಾಗಳು ಮೌಲಿದನ್ನು ಒಳ್ಳೆಯ ಕಾರ್ಯವಾಗಿ ಸಮ್ಮತಿಸಿದ್ದಾರೆ. ಆದುದರಿಂದಲೇ ಎಲ್ಲಾ ರಾಷ್ಟ್ರಗಳಲ್ಲೂ, ಎಲ್ಲಾ ಊರುಗಳಲ್ಲೂ ಅದನ್ನು ಕಾಣಬಹುದಾಗಿದೆ. ಪೂರ್ವೀಕರಾದ ಇಮಾಮರು ಕೇವಲ ಮೌಲಿದ್ ಪಾರಾಯಣದಿಂದ ಮಾತ್ರ ಸೀಮಿತಗೊಳಿಸಿಲ್ಲ. ಹೊರತು ಅದಕ್ಕಾಗಿ ಅವರು ಬೃಹತ್ ಗ್ರಂಥಗಳನ್ನೇ ರಚಿಸಿದ್ದಾರೆ. ಎಲ್ಲಾ ಕಾಲದಲ್ಲೂ ಇದು ನೆಲೆ ನಿಲ್ಲಬೇಕೆಂಬ ಇರಾದೆಯೊಂದಿಗೆ ಅವರು ಇದನ್ನು ರಚಿಸಿದ್ದಾರೆ ಎಂದು ತಿಳಿದುಕೊಳ್ಳಬಹುದಾಗಿದೆ.
● *ಮೌಲಿದ್ ಬಿದ್'ಅತ್ ಆಗಿದ್ದಲ್ಲಿ ಆ ಇಮಾಮರುಗಳು ಇದನ್ನು ರಚಿಸುವರೇ?*
● *ತಪ್ಪು ಸಂದೇಶವನ್ನು ಮುಸ್ಲಿಂ ಸಮುದಾಯಕ್ಕೆ ಅವರು ಸಮರ್ಪಿಸಿದರು ಎಂದು ಒಬ್ಬ ಮುಸ್ಲಿಂ ಹೇಳುವನೇ?*
ಪುಟ್ಟ ಒಂದು ಕರಾಹತ್ ಎಂದು ಒಂದು ವಿಷಯದಲ್ಲಿ ಹೇಳುವಾಗ ಬಹಳ ಸೂಕ್ಷ್ಮತೆ ವಹಿಸಿದ್ದ ಅವರು ಶಿರ್ಕ್-ಬಿದ್'ಅತ್ ಗೆ ಬೇಕಾಗಿ ಸಪೋರ್ಟ್ ಮಾಡಿದರು ಎಂದು *ಬಹುಷ ಇಬ್ಲೀಸನಲ್ಲದೇ ಇನ್ಯಾರು ಹೇಳಲಾರರು.*
ಮೌಲಿದ್ ಗ್ರಂಥಗಳು ಹಲವಾರು ಇದೆಯಾದರು ಅವುಗಳಲ್ಲಿ ಕೆಲವೊಂದನ್ನು ಕೆಳಗೆ ನೀಡುತ್ತೇನೆ. ಅವುಗಳನ್ನು
ರಚಿಸಿದ ಇಮಾಮರ ಹೆಸರು, ಗ್ರಂಥದ ಹೆಸರು, ಅವರ ಹಿಜರಿ ವರ್ಷ ಕೆಳಗೆ ನೀಡುತ್ತಿದ್ದೇನೆ.
(ಅವರ ಚರಿತ್ರೆಗಳು ಗ್ರಂಥಗಳಲ್ಲಿ ಲಭ್ಯವಿದ್ದು ಬೇಕಾಗಿ ಬಂದಲ್ಲಿ ವಿವರಿಸುವೆನು. ಇಂಶಾ ಅಲ್ಲಾಹ್)
--------------------------------------------------------
1. _ಅತ್ತನ್'ವೀರ್ ಫೀ ಮೌಲಿದಿಲ್ ಬಶೀರಿನ್ನದೀರ್_
ಇಮಾಮ್ ಅಬುಲ್ ಖತ್ತಾಬ್ ಉಮರ್ ಬಿನ್ ಹಸನ್ ಬಿನ್ ಅಲಿಯ್ಯು ಬಿನ್ ಮುಹಮ್ಮದ್ ಬಿನ್ ಫರಜು ಬಿನ್ ಖಲಫ್ (ರ)
(ಹಿಜರಿ: 544--633)
2. _ಜಾಮಿಉಲ್ ಆಸಾರ್ ಫೀ ಮೌಲಿದಿನ್ನಬಿಯ್ಯಿಲ್ ಮುಖ್ತಾರ್_
ಹಾಫಿಲ್ ಮುಹಮ್ಮದ್ ಬಿನ್ ಅಬೀಬಕರ್ ಬಿನ್ ಅಬ್ದುಲ್ಲಾಹಿಲ್ ಅದ್ದಿಮಶ್ಖೀ (ರ)
ಹಿಜರಿ: 777---842
----------------------------------------------------
3. _ಅರ್ರಾಯಿಖ್ ಫೀ ಮೌಲಿದಿ ಖೈರಿಲ್ ಖಲಾಯಿಖ್_
ಮೇಲೆ ಹೇಳಿದ ಹಾಫಿಲ್ ಆಬೀಬಕರ್ (ರ) ಇದರ ರಚನೆಗಾರರು.
----------------------------------------------------
4. _ಅಲ್ ಮೌರಿದುಸ್ವಾದೀ ಫೀ ಮೌಲಿದಿಲ್ ಹಾದೀ_
ಮೇಲೆ ಹೇಳಿದ ಹಾಫಿಲ್ ಆಬೀಬಕರ್ (ರ) ಇದರ ರಚನೆಗಾರರು.
ಇದನ್ನು ಇಮಾಮ್ ಶೈಕ್ ಖಲೀಫ (ರ) ತನ್ನ ಕಶ್ಫುಲ್ಲುನೂನ್ ನ 319 ರಲ್ಲಿ ವಿವರಿಸಿದ್ದಾರೆ.
----------------------------------------------------
5. _ಅಲ್ ಮೌರಿದುಲ್ ಹನಿಯ್ಯ್ ಫಿಲ್ ಮೌಲಿದಿಸ್ಸನಿಯ್ಯ್._
_المورد الهني في المولد السني_
ಹಾಫಿಲುಲ್ ಇರಾಖೀ ಎಂಬ ಹೆಸರಿನಿಂದ ಪ್ರಸಿದ್ಧರಾದ ಹಾಫಿಲ್ ಅಬ್ದುರ್ರಹ್'ಮಾನ್ ಅಲ್ ಮಿಸ್ರಿ (ರ)
ಹಿಜರಿ: 725--808.
----------------------------------------------------
6. _ಅಲ್ ಫಖ್ರುಲ್ ಉಲ್'ವೀ ಫಿಲ್ ಮೌಲಿದಿನ್ನಬವೀ_
_الفخر العلوي في المولد النبوي_
ಹಾಫಿಲು ಸ್ಸಖಾವೀ ಎಂಬ ಹೆಸರಿನಿಂದ ಪ್ರಸಿದ್ಧರಾದ ಹಾಫಿಲ್ ಮುಹಮ್ಮದ್ ಅಬ್ದುರ್ರಹ್'ಮಾನ್ ಅಲ್ ಖಾಹಿರಿ.
ಹಿಜರಿ: 831
----------------------------------------------------
7. _ಅಲ್ ಮೌರಿದುರ್ರವಿಯ್ಯಿ ಫಿಲ್ ಮೌಲಿದಿನ್ನಬವಿಯ್ಯಿ_
_المورد الروي في المولد النبوي_
ಹನಫೀ ಮದ್ಸ್'ಹಬ್ ನ ಪ್ರಸಿದ್ಧ ಉಲಮಾಗಳಲೊಬ್ಬರಾದ ಮುಲ್ಲಾ ಅಲಿಯ್ಯುಲ್ ಖಾರೀ (ರ) ಇದರ ರಚನೆಗಾರ.
ಹಿಜರಿ: 1014.
----------------------------------------------------
8. _ಶರ್ರಫಲ್ ಅನಾಂ_
_شرف الانام_
ಅಲ್ಲಾಮಾ ಅಹ್ಮದ್ ಬಿನ್ ಖಾಸಿಂ ಅಲ್ ಹರೀರೀ (ರ)
ಹಿಜರಿ: 824.
ಇಮಾಮ್ ಇಬ್ನುಲ್ ಜೌಝೀ (ರ) ಬರೆದವುವೆಂದು ಅಭಿಪ್ರಾಯವಿದೆ.
ಹಲವಾರು ವ್ಯಾಖ್ಯಾನ ಗ್ರಂಥಗಳು ಈ ಮೌಲಿದ್ ಗೆ ಬರೆಯಲಾಗಿದ್ದು ದೇಶ- ವಿದೇಶಗಳಲ್ಲಿ ಈ ಮೌಲಿದ್ ಪ್ರಸಿದ್ಧಿ ಪಡೆದುಕೊಂಡಿದೆ.
---------------------------------------------------
9. _ಮೌಲಿದ್ ಇಬ್ನ್ ಕಸೀರ್_
_مولد ابن كثير_
ಇಬ್ನ್ ಕಸೀರ್ ಎಂಬ ಹೆಸರಿನಿಂದಲೇ ತಿಳಿಯಲ್ಪಡುವ ಹಾಫಿಲ್ ಇಮಾದುದ್ದೀನ್ ಇಸ್ಮಾಯೀಲ್ ಇಬ್ನ್ ಕಸೀರ್ ಇದರ ರಚನೆಗಾರ.
ಹಿಜರಿ: 774.
----------------------------------------------
10. _ಸುಬ್'ಹಾನ ಮೌಲಿದ್._
_سبحان مولد_
ಇಮಾಮ್ ಗಝ್ಝಾಲಿ (ರ) ಅಥವಾ ಶೈಖ್ ಖತೀಬ್ ಮುಹಮ್ಮದುಲ್ ಮದನೀ (ರ) ಬರೆದ ಮೌಲಿದೆಂದು ಅಭಿಪ್ರಾಯವಿದೆ.
ಇಮಾಮ್ ಗಝ್ಝಾಲೀ (ರ) ಬರೆದದ್ದೆಂಬುವುದಕ್ಕೆ ಆ ಮೌಲಿದ್ ನ ಕೊನೆಯಲ್ಲಿರುವ
واصفح ومن بجمع شمل واغفرن لمحمد بن محمد بن محمد
ಎಂಬ
ಪ್ರಯೋಗ ಪುಷ್ಠಿ ನೀಡುತ್ತಿದೆ.
ಕಾರಣ, ಮುಹಮ್ಮದ್ ಬಿನ್ ಮುಹಮ್ಮದ್ ಬಿನ್ ಮುಹಮ್ಮದ್ ಎಂಬ ಹೆಸರಲ್ಲಿ ಪ್ರಚಾರದಲ್ಲಿರುವುದು ಇಮಾಮ್ ಗಝ್ಝಾಲಿಯ ಹೆಸರಾಗಿದೆ.
----------------------------------------------
11. _ಮಂಕೂಸ್ ಮೌಲಿದ್_
_منقوص مولد_
500 ವರ್ಷಗಳ ಮುಂಚೆ ಪೊನ್ನಾಣಿ ಝೈನುದ್ದೀನ್ ಮಖ್ದೂಂ (ರ) ರಚಿಸಿದ ಮೌಲಿದಾಗಿದೆ ಇದು.
ಹಿಜರಿ: 872--928.
ಇಮಾಮ್ ಗಝ್ಝಾಲೀ (ರ) ರಚಿಸಿದ ಸುಬ್'ಹಾನ ಮೌಲಿದನ್ನು ಸಂಕ್ಷಿಪ್ತಗೊಳಿಸಿದ ಮೌಲಿದಾಗಿದೆ ಇದು.
ಆದುದರಿಂದಲೇ ಇದನ್ನು ಮಂಖೂಸ್ (ಸಂಕ್ಷಿಪ್ತಗೊಳಿಸಲ್ಪಟ್ಟದ್ದು) ಎಂಬ ಹೆಸರಿನಿಂದ ಕರೆಯಲ್ಪಡಲಾಯಿತು.
ಸ್ವಹಾಬಾ ಕಿರಾಮ್ ನ ಕಾಲದ ನಂತರ ಕೇರಳದಲ್ಲಿ ಇಸ್ಲಾಮ್ ಅಳಿದು ಹೋದ ಸಂದರ್ಭದಲ್ಲಿ ಇಸ್ಲಾಮ್ ಪ್ರಚುರಪಡಿಸಿದ ಮಖ್ದೂಂ ಕುಟುಂಬದವರೇ ಈ ಮೌಲಿದನ್ನು ರಚಿಸಿರುವಾಗ ಅವರು ಅದರಲ್ಲಿ ಶಿರ್ಕ್ - ಬಿದ್ ಅತ್ ಕಾಣಲಿಲ್ಲ.
ಇಸ್ಲಾಮನ್ನು ಬೇಕಾದಂತೆ ಅವರು ಕಲಿತಿರುವುದರಿಂದ ಅವರಿಗೆ ಅದರಲ್ಲಿ ಸಂಶಯಗಳಿರಲಿಲ್ಲ. ಇಸ್ಲಾಮಿನ ಪ್ರಾಥಮಿಕ ಜ್ಞಾನ ಕೂಡಾ ಇಲ್ಲದ ವಹ್ಹಾಬೀ ಪಾದ್ರಿಗಳಿಗೆ ಅದರಲ್ಲಿ ಶಿರ್ಕ್ - ಬಿದ್'ಅತ್ ಕಂಡದ್ದು ಅದ್ಭುತವೇ ಸರಿ.
-----------------------------------------------
12. _ಅಲ್ ಕವ್'ಕಬುಲ್ ಅನ್'ವರ್ ಅಲಾ ಇಖ್'ದಿಲ್ ಜೌಹರ್ ಫೀ ಮೌಲಿದಿಲ್ ಅಝ್'ಹರ್_
_الكوكب الأنور على عقد الجوهر في مولد النبي الأزهر_
ಸಯ್ಯಿದ್ ಜ'ಅಫರ್ ಬಿನ್ ಇಸ್ಮಾಯೀಲ್ ಬಿನ್ ಝೈನುಲ್ ಆಬಿದೀನ್ (ರ)
ಹಿಜರಿ: 1317.
----------------------------------------------
13. _ಇಖ್'ದಿಲ್ ಜೌಹರ್ ಫೀ ಮೌಲಿದಿಲ್ ಅಝ್'ಹರ್_
_عقد الجوهر في مولد النبي الأزهر_
ಸಯ್ಯಿದ್ ಜ'ಅಫರ್ ಬಿನ್ ಹಸನ್ ಬಿನ್ ಅಬ್ದುಲ್ ಕರೀಂ ಅಲ್ ಬಿರ್'ಝಂಜೀ (ರ)
ಹಿಜರಿ: 1177.
-----------------------------------------------
14. _ಫತ್'ಹುಲ್ಲಾಹಿ ಹಸ್'ಬೀ ವಕಫಾ ಫೀ ಮೌಲಿದಿಲ್ ಮುಸ್ತಾಫಾ_
فتح الله حسبي وكفى في مولد المصطفى
برهان الدين أبو الصفاء علي الحسني العراقي المقدسي الشافعي
ಅಲ್ಲಾಮಾ ಬುರ್'ಹಾನುದ್ದೀನ್ ಅಬುಸ್ವಫಾ ಅಲಿಯ್ಯುಲ್ ಹಸನ್ ಅಲ್ ಇರಾಖೀ ಅಶ್ಶಾಫಿಈ.
ಹಿಜರಿ: 810--887.
----------------------------------------------------
15. _ಲಿಲ್ಲುಮ್ ಗಮಾಮ ಫೀ ಮೌಲಿದಿ ತಿಹಾಮ_
ظل الغمامة في مولد تهامة.
ಅಹ್ಮದ್ ಬಿನ್ ಅಲಿಯ್ಯಿಬಿನ್ ಸಈದುಲ್ ಗರ್'ನಾತೀ (ರ)
ಹಿಜರಿ: 673.
----------------------------------------------------
16. _ಅಲ್ ಕವಾಕಿಬುದ್ದುರ್ರಿಯ್ಯ ಫೀ ಮೌಲಿದಿ ಖೈರಿಲ್ ಬರಿಯ್ಯಃ_
الكواكب الدرية في مولد خير البرية.
ಅಬೂಬಕರ್ ಬಿನ್ ಮುಹಮ್ಮದ್ ಬಿನ್ ಅಬೀಬಕರ್ ಹಬೀಶೀ ಅಶ್ಶಾಫಿಈ(ರ)
ಹಿಜರಿ: 930
----------------------------------------------------
17. _ಅದ್ದುರ್ರತುಸ್ಸನಿಯ್ಯ ಫೀ ಮೌಲಿದಿ ಖೈರಿಲ್ ಬರಿಯ್ಯ._
الدرة السنية في مولد خير البرية.
ಹಾಫಿಲ್ ಸ್ವಲಾಹುದ್ದೀನ್ ಖಲೀಲ್ ಬಿನ್ ಕೀಕಲದೀ ಅಲ್ ಅಲಾಈ (ರ).
ಹಿಜರಿ: 694--- 761.
----------------------------------------------------
18. _ಅಲ್ ಮವ್'ರಿದುಲ್ ಅದ್ಸ್'ಬುಲ್ ಮುಈನ್ ಫೀ ಮೌಲಿದಿ ಸಯ್ಯಿದಿಲ್ ಖಲ್'ಖಿ ಅಜ್ಮಈನ್._
المورد العذب المعين في مولد سيد الخلق أجمعين.
ಮುಹಮ್ಮದ್ ಬಿನ್ ಅಬ್ದಿಲ್ಲಾಹಿ ಬಿನ್ ಮುಹಮ್ಮದ್ ಬಿನ್ ಮುಹಮ್ಮದ್ ಬಿನ್ ಅಬೀಬಕರ್ ಅಲ್ ಜಝಾಇರಿ(ರ).
ಹಿಜರಿ: 707.
----------------------------------------------------
19. _ಅಲ್ ಕಲಾಮು ಸ್ಸನಿಯ್ಯುಲ್ ಮುಸಫ್ಫಾ ಫೀ ಮೌಲಿದಿಲ್ ಮುಸ್ತಫಾ._
الكلام السني المصفى في مولد المصطفى.
ಯೂಸುಫ್ ಝಾದಾ ರೂಮೀ(ರ).
ಹಿಜರಿ: 1085--1165.
----------------------------------------------------
20. _ಮತ್ವಾಲಿಉಲ್ ಅನ್'ವಾರ್ ಫೀ ಮೌಲಿದಿನ್ನಬಿಯ್ಯಿಲ್ ಮುಖ್ತಾರ್_
مطالع الأنوار في مولد النبي المختار
ಅಬ್ದುಲ್ಲಾಹಿ ಬಿನ್ ಅಲಿಯ್ಯು ಬಿನ್ ಅಬ್ದುರ್ರಹಮಾನ್ ಅಶ್ಶಾಫಿಈ (ರ)
ಹಿಜರಿ: 1234.
----------------------------------------------------
21. _ಸುರುರುಲ್ ಅಬ್'ರಾರ್ ಫೀ ಮೌಲಿದಿನ್ನಬಿಯ್ಯಿಲ್ ಮುಖ್ತಾರ್_
سرر الابرار في مولد النبي المختار.
ಅಬ್ದುಲ್ ಫತ್ತಾಹ್ ಬಿನ್ ಅಬ್ದುಲ್ ಖಾದಿರ್ ಬಿನ್ ಸ್ವಾಲಿಹ್ ದಿಮಶ್ಖೀ(ರ).
ಹಿಜರಿ:1250.
----------------------------------------------------
22. _ಅಲ್ ಮುಂತಖಬುಲ್ ಮುಸಫ್ಫ ಫೀ ಅಖ್'ಬಾರಿ ಮೌಲಿದಿಲ್ ಮುಸ್ತಫಾ_
المنتخب المصفي في أخبار مولد المصطفى
ಮುಹ್ಯುದ್ದೀನ್ ಅಬ್ದುಲ್ ಖಾದಿರ್ ಬಿನ್ ಶೈಖ್ ಬಿನ್ ಅಬ್ದಿಲ್ಲಾಹಿ ಅಲ್ ಹೈದರೂಸೀ ಅಲ್ ಹಳ್ರಮೀ (ರ).
ಹಿಜರಿ:987--1038).
----------------------------------------------------
23. _ಅಲ್ ಮನ್'ಹಲುಲ್ ಅದ್ಸ್'ಬುಲ್ ಖರೀರ್ ಫೀ ಮೌಲಿದಿಲ್ ಬಶೀರಿನ್ನದೀರ್._
المنهل العذب القرير في مولد الهادي البشير النذير.
ಶೈಖ್ ಅಲಿಯ್ಯ್ ಬಿನ್ ಸುಲೈಮಾನ್ ಬಿನ್ ಅಹ್ಮದ್ ಬಿನ್ ಮುಹಮ್ಮದ್ ಅಲ್ ಮರ್ದಾವೀ ಅಲ್ ಹಂಬಲೀ (ರ).
ಹಿಜರಿ:885.
----------------------------------------------------
24. _ಮನಾಸಿಕುಲ್ ಹಜ್'ಝಿಲ್ ಮುಂತಖಾ ಮಿನ್ ಸಿಯರಿ ಮೌಲಿದಿನ್ನಬಿಯ್ಯಿಲ್ ಮುಸ್ತಫಾ._
مناسك الحجز المنتقي من سير مولد النبي المصطفي.
ಮುಹಮ್ಮದ್ ಬಿನ್ ಮಸ್'ಊದ್ ಬಿನ್ ಮುಹಮ್ಮದ್ ಸಈದುದ್ದೀನ್ ಅಲ್ ಕಾಝರೂನೀ .
ಹಿಜರಿ:758.
----------------------------------------------------
25. _ತಅ್'ನೀಸು ಅರ್'ಬಾಬಿಸ್ಸಫಾ ಫೀ ಮೌಲಿದಿಲ್ ಮುಸ್ತಫಾ._
تأنيس ارباب الصفا في مولد المصطفي.
ಅಸ್ಸೆಯ್ಯಿದ್ ಅಲಿಯ್ಯ್ ಬಿನ್ ಇಬ್ರಾಹೀಂ ಬಿನ್ ಮುಹಮ್ಮದ್ ಬಿನ್ ಇಸ್ಮಾಯೀಲ್ ಬಿನ್ ಸ್ವಲಾಹ್ (ರ).
ಹಿಜರಿ:1171--1236.
----------------------------------------------------
26: _ಅನ್ನಫ್'ಹತುಲ್ ಅಂಬರಿಯ್ಯ ಫೀ ಮೌಲಿದಿ ಖೈರಿಲ್ ಬರಿಯ್ಯ._
النفحة العنبرية في مولد خير البرية.
ಮುಹಮ್ಮದ್ ಬಿನ್ ಯಅ್'ಖೂಬ್ ಬಿನ್ ಇಬ್ರಾಹೀಂ ಅಲ್ ಫೈರೂಝಾಬಾದೀ.
ಹಿಜರಿ:729--817.
----------------------------------------------------
27. _ಗೈಸುಲ್ ಮವಾಹಿಬಿಲ್ ಅಲಿಯ್ಯ ಫೀ ಶರಹಿ ಹುಕ್'ಮಿಲ್ ಅತ್ವಾಯಿಯ್ಯ._
غيث المواهب العلية في شرح حكم العطائية.
ಮುಹಮ್ಮದ್ ಬಿನ್ ಇಬ್ರಾಹೀಂ ಬಿನ್ ಅಬೀ ಬಕರ್ ಅಲ್ ಮಾಲಿಕೀ.
ಹಿಜರಿ:733--792.
----------------------------------------------------
28. _ಜಾಮಿಉಲ್ ಆಸಾರ್ ಫೀ ಮೌಲಿದಿಲ್ ಮುಖ್ತಾರ್._
جامع الاثار في مولد المختار.
----------------------------------------------------
29. _ಅಲ್ ಮೌರಿದುಸ್ಸ್ವಾದೀ ಫೀ ಮೌಲಿದಿಲ್ ಹಾದೀ._
المورد الصادي في مولد الهادي.
----------------------------------------------------
30. _ಅಲ್ಲಫ್'ಳುರ್ರಾಇಖ್ ಫೀ ಮೌಲಿದಿ ಖೈರಿಲ್ ಖಲಾಯಿಖ್._
اللفظ الرائق في مولد خير الخلائق
ಈ ಮೂರರ ರಚನೆಗಾರರು "ಇಬ್ನ್ ನಾಸಿರುದ್ದೀನ್ ಅದ್ದಿಮಶ್ಖೀ"ಎಂಬ ಹೆಸರಲ್ಲಿ ಪ್ರಸಿದ್ಧರಾದ ಮುಹಮ್ಮದ್ ಬಿನ್ ಅಬೀಬಕರ್ ಅಬ್ದುಲ್ಲಾಹಿ ಬಿನ್ ಮುಹಮ್ಮದ್ ಅಲ್ ಹಾಫಿಲ್ ಶಂಸುದ್ದೀನ್ ಅದ್ದಿಮಶ್ಖೀ
ಹಿಜರಿ:777---842.
----------------------------------------------------
● ಇವುಗಳನ್ನೆಲ್ಲಾ ರಚಿಸಿದ ಇಮಾಮರುಗಳನ್ನು ಮುಬ್'ತದಿಅ್
ಎಂದು ಹೇಳಲು ವಹ್ಹಾಬಿಗಳಿಗೆ ಧೈರ್ಯವಿದೆಯೇ?
● ಈ ಇಮಾಮರು ಶಿರ್ಕ್-ಬಿದ್ ಅತ್ ಗಳನ್ನು ಪ್ರಚಾರ ಮಾಡಿದರೆ?
ವಹ್ಹಾಬಿಗಳು ಇದಕ್ಕೆ ಉತ್ತರಿಸಬೇಕು.
*ಬಾಕಿ 3 ನೇ ಭಾಗದಲ್ಲಿ ಓದಿರಿ*
-------------------------------
*ಭಾಗ ---2.*
______________________________________
ಮೀಲಾದುನ್ನಬೀ ಎಂಬುವುದು ಖಂಡಿತವಾಗಿಯೂ ಪ್ರತಿಫಲವಿರುವ ಕರ್ಮವಾಗಿದೆ. *ನೂತನ ವಾದಿಗಳ ನಾಯಕ ಇಬ್ನ್ ತೀಮಿಯ್ಯ ಕೂಡಾ ಇದನ್ನು ಅಂಗೀಕರಿಸಿದ್ದಾರೆ.*
ಶತಮಾನಗಳ ಪಾರಂಪರ್ಯವಿರುವ ಮೌಲಿದ್ ಕಾರ್ಯಕ್ರಮ ಎಲ್ಲರೂ ಆಚರಿಸಿದ್ದಾರೆ.
ಎಲ್ಲಾ ಕಾಲದಲ್ಲಿಯೂ ಉಲಮಾಗಳು ಮೌಲಿದನ್ನು ಒಳ್ಳೆಯ ಕಾರ್ಯವಾಗಿ ಸಮ್ಮತಿಸಿದ್ದಾರೆ. ಆದುದರಿಂದಲೇ ಎಲ್ಲಾ ರಾಷ್ಟ್ರಗಳಲ್ಲೂ, ಎಲ್ಲಾ ಊರುಗಳಲ್ಲೂ ಅದನ್ನು ಕಾಣಬಹುದಾಗಿದೆ. ಪೂರ್ವೀಕರಾದ ಇಮಾಮರು ಕೇವಲ ಮೌಲಿದ್ ಪಾರಾಯಣದಿಂದ ಮಾತ್ರ ಸೀಮಿತಗೊಳಿಸಿಲ್ಲ. ಹೊರತು ಅದಕ್ಕಾಗಿ ಅವರು ಬೃಹತ್ ಗ್ರಂಥಗಳನ್ನೇ ರಚಿಸಿದ್ದಾರೆ. ಎಲ್ಲಾ ಕಾಲದಲ್ಲೂ ಇದು ನೆಲೆ ನಿಲ್ಲಬೇಕೆಂಬ ಇರಾದೆಯೊಂದಿಗೆ ಅವರು ಇದನ್ನು ರಚಿಸಿದ್ದಾರೆ ಎಂದು ತಿಳಿದುಕೊಳ್ಳಬಹುದಾಗಿದೆ.
● *ಮೌಲಿದ್ ಬಿದ್'ಅತ್ ಆಗಿದ್ದಲ್ಲಿ ಆ ಇಮಾಮರುಗಳು ಇದನ್ನು ರಚಿಸುವರೇ?*
● *ತಪ್ಪು ಸಂದೇಶವನ್ನು ಮುಸ್ಲಿಂ ಸಮುದಾಯಕ್ಕೆ ಅವರು ಸಮರ್ಪಿಸಿದರು ಎಂದು ಒಬ್ಬ ಮುಸ್ಲಿಂ ಹೇಳುವನೇ?*
ಪುಟ್ಟ ಒಂದು ಕರಾಹತ್ ಎಂದು ಒಂದು ವಿಷಯದಲ್ಲಿ ಹೇಳುವಾಗ ಬಹಳ ಸೂಕ್ಷ್ಮತೆ ವಹಿಸಿದ್ದ ಅವರು ಶಿರ್ಕ್-ಬಿದ್'ಅತ್ ಗೆ ಬೇಕಾಗಿ ಸಪೋರ್ಟ್ ಮಾಡಿದರು ಎಂದು *ಬಹುಷ ಇಬ್ಲೀಸನಲ್ಲದೇ ಇನ್ಯಾರು ಹೇಳಲಾರರು.*
ಮೌಲಿದ್ ಗ್ರಂಥಗಳು ಹಲವಾರು ಇದೆಯಾದರು ಅವುಗಳಲ್ಲಿ ಕೆಲವೊಂದನ್ನು ಕೆಳಗೆ ನೀಡುತ್ತೇನೆ. ಅವುಗಳನ್ನು
ರಚಿಸಿದ ಇಮಾಮರ ಹೆಸರು, ಗ್ರಂಥದ ಹೆಸರು, ಅವರ ಹಿಜರಿ ವರ್ಷ ಕೆಳಗೆ ನೀಡುತ್ತಿದ್ದೇನೆ.
(ಅವರ ಚರಿತ್ರೆಗಳು ಗ್ರಂಥಗಳಲ್ಲಿ ಲಭ್ಯವಿದ್ದು ಬೇಕಾಗಿ ಬಂದಲ್ಲಿ ವಿವರಿಸುವೆನು. ಇಂಶಾ ಅಲ್ಲಾಹ್)
--------------------------------------------------------
1. _ಅತ್ತನ್'ವೀರ್ ಫೀ ಮೌಲಿದಿಲ್ ಬಶೀರಿನ್ನದೀರ್_
ಇಮಾಮ್ ಅಬುಲ್ ಖತ್ತಾಬ್ ಉಮರ್ ಬಿನ್ ಹಸನ್ ಬಿನ್ ಅಲಿಯ್ಯು ಬಿನ್ ಮುಹಮ್ಮದ್ ಬಿನ್ ಫರಜು ಬಿನ್ ಖಲಫ್ (ರ)
(ಹಿಜರಿ: 544--633)
2. _ಜಾಮಿಉಲ್ ಆಸಾರ್ ಫೀ ಮೌಲಿದಿನ್ನಬಿಯ್ಯಿಲ್ ಮುಖ್ತಾರ್_
ಹಾಫಿಲ್ ಮುಹಮ್ಮದ್ ಬಿನ್ ಅಬೀಬಕರ್ ಬಿನ್ ಅಬ್ದುಲ್ಲಾಹಿಲ್ ಅದ್ದಿಮಶ್ಖೀ (ರ)
ಹಿಜರಿ: 777---842
----------------------------------------------------
3. _ಅರ್ರಾಯಿಖ್ ಫೀ ಮೌಲಿದಿ ಖೈರಿಲ್ ಖಲಾಯಿಖ್_
ಮೇಲೆ ಹೇಳಿದ ಹಾಫಿಲ್ ಆಬೀಬಕರ್ (ರ) ಇದರ ರಚನೆಗಾರರು.
----------------------------------------------------
4. _ಅಲ್ ಮೌರಿದುಸ್ವಾದೀ ಫೀ ಮೌಲಿದಿಲ್ ಹಾದೀ_
ಮೇಲೆ ಹೇಳಿದ ಹಾಫಿಲ್ ಆಬೀಬಕರ್ (ರ) ಇದರ ರಚನೆಗಾರರು.
ಇದನ್ನು ಇಮಾಮ್ ಶೈಕ್ ಖಲೀಫ (ರ) ತನ್ನ ಕಶ್ಫುಲ್ಲುನೂನ್ ನ 319 ರಲ್ಲಿ ವಿವರಿಸಿದ್ದಾರೆ.
----------------------------------------------------
5. _ಅಲ್ ಮೌರಿದುಲ್ ಹನಿಯ್ಯ್ ಫಿಲ್ ಮೌಲಿದಿಸ್ಸನಿಯ್ಯ್._
_المورد الهني في المولد السني_
ಹಾಫಿಲುಲ್ ಇರಾಖೀ ಎಂಬ ಹೆಸರಿನಿಂದ ಪ್ರಸಿದ್ಧರಾದ ಹಾಫಿಲ್ ಅಬ್ದುರ್ರಹ್'ಮಾನ್ ಅಲ್ ಮಿಸ್ರಿ (ರ)
ಹಿಜರಿ: 725--808.
----------------------------------------------------
6. _ಅಲ್ ಫಖ್ರುಲ್ ಉಲ್'ವೀ ಫಿಲ್ ಮೌಲಿದಿನ್ನಬವೀ_
_الفخر العلوي في المولد النبوي_
ಹಾಫಿಲು ಸ್ಸಖಾವೀ ಎಂಬ ಹೆಸರಿನಿಂದ ಪ್ರಸಿದ್ಧರಾದ ಹಾಫಿಲ್ ಮುಹಮ್ಮದ್ ಅಬ್ದುರ್ರಹ್'ಮಾನ್ ಅಲ್ ಖಾಹಿರಿ.
ಹಿಜರಿ: 831
----------------------------------------------------
7. _ಅಲ್ ಮೌರಿದುರ್ರವಿಯ್ಯಿ ಫಿಲ್ ಮೌಲಿದಿನ್ನಬವಿಯ್ಯಿ_
_المورد الروي في المولد النبوي_
ಹನಫೀ ಮದ್ಸ್'ಹಬ್ ನ ಪ್ರಸಿದ್ಧ ಉಲಮಾಗಳಲೊಬ್ಬರಾದ ಮುಲ್ಲಾ ಅಲಿಯ್ಯುಲ್ ಖಾರೀ (ರ) ಇದರ ರಚನೆಗಾರ.
ಹಿಜರಿ: 1014.
----------------------------------------------------
8. _ಶರ್ರಫಲ್ ಅನಾಂ_
_شرف الانام_
ಅಲ್ಲಾಮಾ ಅಹ್ಮದ್ ಬಿನ್ ಖಾಸಿಂ ಅಲ್ ಹರೀರೀ (ರ)
ಹಿಜರಿ: 824.
ಇಮಾಮ್ ಇಬ್ನುಲ್ ಜೌಝೀ (ರ) ಬರೆದವುವೆಂದು ಅಭಿಪ್ರಾಯವಿದೆ.
ಹಲವಾರು ವ್ಯಾಖ್ಯಾನ ಗ್ರಂಥಗಳು ಈ ಮೌಲಿದ್ ಗೆ ಬರೆಯಲಾಗಿದ್ದು ದೇಶ- ವಿದೇಶಗಳಲ್ಲಿ ಈ ಮೌಲಿದ್ ಪ್ರಸಿದ್ಧಿ ಪಡೆದುಕೊಂಡಿದೆ.
---------------------------------------------------
9. _ಮೌಲಿದ್ ಇಬ್ನ್ ಕಸೀರ್_
_مولد ابن كثير_
ಇಬ್ನ್ ಕಸೀರ್ ಎಂಬ ಹೆಸರಿನಿಂದಲೇ ತಿಳಿಯಲ್ಪಡುವ ಹಾಫಿಲ್ ಇಮಾದುದ್ದೀನ್ ಇಸ್ಮಾಯೀಲ್ ಇಬ್ನ್ ಕಸೀರ್ ಇದರ ರಚನೆಗಾರ.
ಹಿಜರಿ: 774.
----------------------------------------------
10. _ಸುಬ್'ಹಾನ ಮೌಲಿದ್._
_سبحان مولد_
ಇಮಾಮ್ ಗಝ್ಝಾಲಿ (ರ) ಅಥವಾ ಶೈಖ್ ಖತೀಬ್ ಮುಹಮ್ಮದುಲ್ ಮದನೀ (ರ) ಬರೆದ ಮೌಲಿದೆಂದು ಅಭಿಪ್ರಾಯವಿದೆ.
ಇಮಾಮ್ ಗಝ್ಝಾಲೀ (ರ) ಬರೆದದ್ದೆಂಬುವುದಕ್ಕೆ ಆ ಮೌಲಿದ್ ನ ಕೊನೆಯಲ್ಲಿರುವ
واصفح ومن بجمع شمل واغفرن لمحمد بن محمد بن محمد
ಎಂಬ
ಪ್ರಯೋಗ ಪುಷ್ಠಿ ನೀಡುತ್ತಿದೆ.
ಕಾರಣ, ಮುಹಮ್ಮದ್ ಬಿನ್ ಮುಹಮ್ಮದ್ ಬಿನ್ ಮುಹಮ್ಮದ್ ಎಂಬ ಹೆಸರಲ್ಲಿ ಪ್ರಚಾರದಲ್ಲಿರುವುದು ಇಮಾಮ್ ಗಝ್ಝಾಲಿಯ ಹೆಸರಾಗಿದೆ.
----------------------------------------------
11. _ಮಂಕೂಸ್ ಮೌಲಿದ್_
_منقوص مولد_
500 ವರ್ಷಗಳ ಮುಂಚೆ ಪೊನ್ನಾಣಿ ಝೈನುದ್ದೀನ್ ಮಖ್ದೂಂ (ರ) ರಚಿಸಿದ ಮೌಲಿದಾಗಿದೆ ಇದು.
ಹಿಜರಿ: 872--928.
ಇಮಾಮ್ ಗಝ್ಝಾಲೀ (ರ) ರಚಿಸಿದ ಸುಬ್'ಹಾನ ಮೌಲಿದನ್ನು ಸಂಕ್ಷಿಪ್ತಗೊಳಿಸಿದ ಮೌಲಿದಾಗಿದೆ ಇದು.
ಆದುದರಿಂದಲೇ ಇದನ್ನು ಮಂಖೂಸ್ (ಸಂಕ್ಷಿಪ್ತಗೊಳಿಸಲ್ಪಟ್ಟದ್ದು) ಎಂಬ ಹೆಸರಿನಿಂದ ಕರೆಯಲ್ಪಡಲಾಯಿತು.
ಸ್ವಹಾಬಾ ಕಿರಾಮ್ ನ ಕಾಲದ ನಂತರ ಕೇರಳದಲ್ಲಿ ಇಸ್ಲಾಮ್ ಅಳಿದು ಹೋದ ಸಂದರ್ಭದಲ್ಲಿ ಇಸ್ಲಾಮ್ ಪ್ರಚುರಪಡಿಸಿದ ಮಖ್ದೂಂ ಕುಟುಂಬದವರೇ ಈ ಮೌಲಿದನ್ನು ರಚಿಸಿರುವಾಗ ಅವರು ಅದರಲ್ಲಿ ಶಿರ್ಕ್ - ಬಿದ್ ಅತ್ ಕಾಣಲಿಲ್ಲ.
ಇಸ್ಲಾಮನ್ನು ಬೇಕಾದಂತೆ ಅವರು ಕಲಿತಿರುವುದರಿಂದ ಅವರಿಗೆ ಅದರಲ್ಲಿ ಸಂಶಯಗಳಿರಲಿಲ್ಲ. ಇಸ್ಲಾಮಿನ ಪ್ರಾಥಮಿಕ ಜ್ಞಾನ ಕೂಡಾ ಇಲ್ಲದ ವಹ್ಹಾಬೀ ಪಾದ್ರಿಗಳಿಗೆ ಅದರಲ್ಲಿ ಶಿರ್ಕ್ - ಬಿದ್'ಅತ್ ಕಂಡದ್ದು ಅದ್ಭುತವೇ ಸರಿ.
-----------------------------------------------
12. _ಅಲ್ ಕವ್'ಕಬುಲ್ ಅನ್'ವರ್ ಅಲಾ ಇಖ್'ದಿಲ್ ಜೌಹರ್ ಫೀ ಮೌಲಿದಿಲ್ ಅಝ್'ಹರ್_
_الكوكب الأنور على عقد الجوهر في مولد النبي الأزهر_
ಸಯ್ಯಿದ್ ಜ'ಅಫರ್ ಬಿನ್ ಇಸ್ಮಾಯೀಲ್ ಬಿನ್ ಝೈನುಲ್ ಆಬಿದೀನ್ (ರ)
ಹಿಜರಿ: 1317.
----------------------------------------------
13. _ಇಖ್'ದಿಲ್ ಜೌಹರ್ ಫೀ ಮೌಲಿದಿಲ್ ಅಝ್'ಹರ್_
_عقد الجوهر في مولد النبي الأزهر_
ಸಯ್ಯಿದ್ ಜ'ಅಫರ್ ಬಿನ್ ಹಸನ್ ಬಿನ್ ಅಬ್ದುಲ್ ಕರೀಂ ಅಲ್ ಬಿರ್'ಝಂಜೀ (ರ)
ಹಿಜರಿ: 1177.
-----------------------------------------------
14. _ಫತ್'ಹುಲ್ಲಾಹಿ ಹಸ್'ಬೀ ವಕಫಾ ಫೀ ಮೌಲಿದಿಲ್ ಮುಸ್ತಾಫಾ_
فتح الله حسبي وكفى في مولد المصطفى
برهان الدين أبو الصفاء علي الحسني العراقي المقدسي الشافعي
ಅಲ್ಲಾಮಾ ಬುರ್'ಹಾನುದ್ದೀನ್ ಅಬುಸ್ವಫಾ ಅಲಿಯ್ಯುಲ್ ಹಸನ್ ಅಲ್ ಇರಾಖೀ ಅಶ್ಶಾಫಿಈ.
ಹಿಜರಿ: 810--887.
----------------------------------------------------
15. _ಲಿಲ್ಲುಮ್ ಗಮಾಮ ಫೀ ಮೌಲಿದಿ ತಿಹಾಮ_
ظل الغمامة في مولد تهامة.
ಅಹ್ಮದ್ ಬಿನ್ ಅಲಿಯ್ಯಿಬಿನ್ ಸಈದುಲ್ ಗರ್'ನಾತೀ (ರ)
ಹಿಜರಿ: 673.
----------------------------------------------------
16. _ಅಲ್ ಕವಾಕಿಬುದ್ದುರ್ರಿಯ್ಯ ಫೀ ಮೌಲಿದಿ ಖೈರಿಲ್ ಬರಿಯ್ಯಃ_
الكواكب الدرية في مولد خير البرية.
ಅಬೂಬಕರ್ ಬಿನ್ ಮುಹಮ್ಮದ್ ಬಿನ್ ಅಬೀಬಕರ್ ಹಬೀಶೀ ಅಶ್ಶಾಫಿಈ(ರ)
ಹಿಜರಿ: 930
----------------------------------------------------
17. _ಅದ್ದುರ್ರತುಸ್ಸನಿಯ್ಯ ಫೀ ಮೌಲಿದಿ ಖೈರಿಲ್ ಬರಿಯ್ಯ._
الدرة السنية في مولد خير البرية.
ಹಾಫಿಲ್ ಸ್ವಲಾಹುದ್ದೀನ್ ಖಲೀಲ್ ಬಿನ್ ಕೀಕಲದೀ ಅಲ್ ಅಲಾಈ (ರ).
ಹಿಜರಿ: 694--- 761.
----------------------------------------------------
18. _ಅಲ್ ಮವ್'ರಿದುಲ್ ಅದ್ಸ್'ಬುಲ್ ಮುಈನ್ ಫೀ ಮೌಲಿದಿ ಸಯ್ಯಿದಿಲ್ ಖಲ್'ಖಿ ಅಜ್ಮಈನ್._
المورد العذب المعين في مولد سيد الخلق أجمعين.
ಮುಹಮ್ಮದ್ ಬಿನ್ ಅಬ್ದಿಲ್ಲಾಹಿ ಬಿನ್ ಮುಹಮ್ಮದ್ ಬಿನ್ ಮುಹಮ್ಮದ್ ಬಿನ್ ಅಬೀಬಕರ್ ಅಲ್ ಜಝಾಇರಿ(ರ).
ಹಿಜರಿ: 707.
----------------------------------------------------
19. _ಅಲ್ ಕಲಾಮು ಸ್ಸನಿಯ್ಯುಲ್ ಮುಸಫ್ಫಾ ಫೀ ಮೌಲಿದಿಲ್ ಮುಸ್ತಫಾ._
الكلام السني المصفى في مولد المصطفى.
ಯೂಸುಫ್ ಝಾದಾ ರೂಮೀ(ರ).
ಹಿಜರಿ: 1085--1165.
----------------------------------------------------
20. _ಮತ್ವಾಲಿಉಲ್ ಅನ್'ವಾರ್ ಫೀ ಮೌಲಿದಿನ್ನಬಿಯ್ಯಿಲ್ ಮುಖ್ತಾರ್_
مطالع الأنوار في مولد النبي المختار
ಅಬ್ದುಲ್ಲಾಹಿ ಬಿನ್ ಅಲಿಯ್ಯು ಬಿನ್ ಅಬ್ದುರ್ರಹಮಾನ್ ಅಶ್ಶಾಫಿಈ (ರ)
ಹಿಜರಿ: 1234.
----------------------------------------------------
21. _ಸುರುರುಲ್ ಅಬ್'ರಾರ್ ಫೀ ಮೌಲಿದಿನ್ನಬಿಯ್ಯಿಲ್ ಮುಖ್ತಾರ್_
سرر الابرار في مولد النبي المختار.
ಅಬ್ದುಲ್ ಫತ್ತಾಹ್ ಬಿನ್ ಅಬ್ದುಲ್ ಖಾದಿರ್ ಬಿನ್ ಸ್ವಾಲಿಹ್ ದಿಮಶ್ಖೀ(ರ).
ಹಿಜರಿ:1250.
----------------------------------------------------
22. _ಅಲ್ ಮುಂತಖಬುಲ್ ಮುಸಫ್ಫ ಫೀ ಅಖ್'ಬಾರಿ ಮೌಲಿದಿಲ್ ಮುಸ್ತಫಾ_
المنتخب المصفي في أخبار مولد المصطفى
ಮುಹ್ಯುದ್ದೀನ್ ಅಬ್ದುಲ್ ಖಾದಿರ್ ಬಿನ್ ಶೈಖ್ ಬಿನ್ ಅಬ್ದಿಲ್ಲಾಹಿ ಅಲ್ ಹೈದರೂಸೀ ಅಲ್ ಹಳ್ರಮೀ (ರ).
ಹಿಜರಿ:987--1038).
----------------------------------------------------
23. _ಅಲ್ ಮನ್'ಹಲುಲ್ ಅದ್ಸ್'ಬುಲ್ ಖರೀರ್ ಫೀ ಮೌಲಿದಿಲ್ ಬಶೀರಿನ್ನದೀರ್._
المنهل العذب القرير في مولد الهادي البشير النذير.
ಶೈಖ್ ಅಲಿಯ್ಯ್ ಬಿನ್ ಸುಲೈಮಾನ್ ಬಿನ್ ಅಹ್ಮದ್ ಬಿನ್ ಮುಹಮ್ಮದ್ ಅಲ್ ಮರ್ದಾವೀ ಅಲ್ ಹಂಬಲೀ (ರ).
ಹಿಜರಿ:885.
----------------------------------------------------
24. _ಮನಾಸಿಕುಲ್ ಹಜ್'ಝಿಲ್ ಮುಂತಖಾ ಮಿನ್ ಸಿಯರಿ ಮೌಲಿದಿನ್ನಬಿಯ್ಯಿಲ್ ಮುಸ್ತಫಾ._
مناسك الحجز المنتقي من سير مولد النبي المصطفي.
ಮುಹಮ್ಮದ್ ಬಿನ್ ಮಸ್'ಊದ್ ಬಿನ್ ಮುಹಮ್ಮದ್ ಸಈದುದ್ದೀನ್ ಅಲ್ ಕಾಝರೂನೀ .
ಹಿಜರಿ:758.
----------------------------------------------------
25. _ತಅ್'ನೀಸು ಅರ್'ಬಾಬಿಸ್ಸಫಾ ಫೀ ಮೌಲಿದಿಲ್ ಮುಸ್ತಫಾ._
تأنيس ارباب الصفا في مولد المصطفي.
ಅಸ್ಸೆಯ್ಯಿದ್ ಅಲಿಯ್ಯ್ ಬಿನ್ ಇಬ್ರಾಹೀಂ ಬಿನ್ ಮುಹಮ್ಮದ್ ಬಿನ್ ಇಸ್ಮಾಯೀಲ್ ಬಿನ್ ಸ್ವಲಾಹ್ (ರ).
ಹಿಜರಿ:1171--1236.
----------------------------------------------------
26: _ಅನ್ನಫ್'ಹತುಲ್ ಅಂಬರಿಯ್ಯ ಫೀ ಮೌಲಿದಿ ಖೈರಿಲ್ ಬರಿಯ್ಯ._
النفحة العنبرية في مولد خير البرية.
ಮುಹಮ್ಮದ್ ಬಿನ್ ಯಅ್'ಖೂಬ್ ಬಿನ್ ಇಬ್ರಾಹೀಂ ಅಲ್ ಫೈರೂಝಾಬಾದೀ.
ಹಿಜರಿ:729--817.
----------------------------------------------------
27. _ಗೈಸುಲ್ ಮವಾಹಿಬಿಲ್ ಅಲಿಯ್ಯ ಫೀ ಶರಹಿ ಹುಕ್'ಮಿಲ್ ಅತ್ವಾಯಿಯ್ಯ._
غيث المواهب العلية في شرح حكم العطائية.
ಮುಹಮ್ಮದ್ ಬಿನ್ ಇಬ್ರಾಹೀಂ ಬಿನ್ ಅಬೀ ಬಕರ್ ಅಲ್ ಮಾಲಿಕೀ.
ಹಿಜರಿ:733--792.
----------------------------------------------------
28. _ಜಾಮಿಉಲ್ ಆಸಾರ್ ಫೀ ಮೌಲಿದಿಲ್ ಮುಖ್ತಾರ್._
جامع الاثار في مولد المختار.
----------------------------------------------------
29. _ಅಲ್ ಮೌರಿದುಸ್ಸ್ವಾದೀ ಫೀ ಮೌಲಿದಿಲ್ ಹಾದೀ._
المورد الصادي في مولد الهادي.
----------------------------------------------------
30. _ಅಲ್ಲಫ್'ಳುರ್ರಾಇಖ್ ಫೀ ಮೌಲಿದಿ ಖೈರಿಲ್ ಖಲಾಯಿಖ್._
اللفظ الرائق في مولد خير الخلائق
ಈ ಮೂರರ ರಚನೆಗಾರರು "ಇಬ್ನ್ ನಾಸಿರುದ್ದೀನ್ ಅದ್ದಿಮಶ್ಖೀ"ಎಂಬ ಹೆಸರಲ್ಲಿ ಪ್ರಸಿದ್ಧರಾದ ಮುಹಮ್ಮದ್ ಬಿನ್ ಅಬೀಬಕರ್ ಅಬ್ದುಲ್ಲಾಹಿ ಬಿನ್ ಮುಹಮ್ಮದ್ ಅಲ್ ಹಾಫಿಲ್ ಶಂಸುದ್ದೀನ್ ಅದ್ದಿಮಶ್ಖೀ
ಹಿಜರಿ:777---842.
----------------------------------------------------
● ಇವುಗಳನ್ನೆಲ್ಲಾ ರಚಿಸಿದ ಇಮಾಮರುಗಳನ್ನು ಮುಬ್'ತದಿಅ್
ಎಂದು ಹೇಳಲು ವಹ್ಹಾಬಿಗಳಿಗೆ ಧೈರ್ಯವಿದೆಯೇ?
● ಈ ಇಮಾಮರು ಶಿರ್ಕ್-ಬಿದ್ ಅತ್ ಗಳನ್ನು ಪ್ರಚಾರ ಮಾಡಿದರೆ?
ವಹ್ಹಾಬಿಗಳು ಇದಕ್ಕೆ ಉತ್ತರಿಸಬೇಕು.
*ಬಾಕಿ 3 ನೇ ಭಾಗದಲ್ಲಿ ಓದಿರಿ*
*ಮೀಲಾದುನ್ನಬೀ ಭಾಗ = 01*
*ಮೀಲಾದುನ್ನಬೀ*
*ಭಾಗ =01*
*••••••••••••••••••••••••••••••••••••*
*📝 ಮುನೀರ್ ಸಖಾಫಿ, ಸಾಲೆತ್ತೂರು*
*°°°°°°°°°°°°°°°°°°°°°°°°°°°°°°°°°*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು, ಸ್ವಹಾಬಿಗಳು, ತಾಬಿವುಗಳು, ಇಮಾಮರುಗಳು (ಪುರಾವೆಗಳ ಮೂಲಕ) ನಮಗೆ ಕಲಿಸಿ ಕೊಟ್ಟ ಆದರ್ಶವಾಗಿದೆ ಸುನ್ನತ್ ಜಮಾಅತ್.
ಹಲವಾರು ಪುಣ್ಯ ಕರ್ಮಗಳನ್ನು ಕೆಟ್ಟ ಆಚಾರವಾಗಿ ಚಿತ್ರೀಕರಿಸಿ ಮುಸ್ಲಿಮರನ್ನು ಮುಶ್ರಿಕರೆಂದು, ಕಾಫಿರರೆಂದು ಹೇಳಿ ಸಮುದಾಯದ ಮಧ್ಯೆ ಭಿನ್ನತೆಯನ್ನು ಸೃಷ್ಠಿಸಿದವರಾಗಿದ್ದಾರೆ ಇಲ್ಲಿನ ನೂತನವಾದಿಗಳಾದ ಸಲಪಿ, ಜಮಾಅತೇ ಇಸ್ಲಾಮೀ, ತಬ್ಲೀಗಾದಿಗಳು.
ರಬೀವುಲ್ ಅವ್ವಲ್ 12 ರಂದು ಪ್ರವಾದೀ ಜನ್ಮ ದಿನಾಚರಣೆ ಮಾಡುವಾಗ ವಹ್ಹಾಬಿಗಳು ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ.
ಅವುಗಳಲ್ಲಿ ಕೆಲವೊಂದು ಈ ರೀತಿಯಾಗಿರಬಹುದು.
1. ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ತನ್ನ ಜನ್ಮ ದಿನಾಚರಣೆ ಆಚರಿಸಿದ್ದರೇ?
2. ಸ್ವಹಾಬಿಗಳು ಯಾರಾದರೂ ಅಚರಿಸಿದ್ದಾರೆಯೇ?
3. ಅವರು ಅಂದು ಓದಿದ ಮೌಲಿದ್ ಯಾವುದು?
4. ಅವರು ಮೆರವಣಿಗೆಗೆ ಹಿಡಿದ ಧ್ವಜದ ಬಣ್ಣ ಯಾವುದು?
ಹೀಗೇ ಹಲವಾರು ಪ್ರಶ್ನೆಗಳು.
ವಾಸ್ತವದಲ್ಲಿ ಮೌಡ್ಯತನದಿಂದ ಕೂಡಿದ ಪ್ರಶ್ನೆಯಾಗಿದೆ ಇದು.
ವಿಷಯವನ್ನು ಸರಿಯಾಗಿ ಗ್ರಹಿಸಿದಲ್ಲಿ ಇಂತಹಾ ಪ್ರಶ್ನೆಗಳು ಉದ್ಭವಿಸಲಾರದು.
ಇಂಶಾ ಅಲ್ಲಾಹ್ ಎಲ್ಲವನ್ನೂ ಸರಿಯಾಗಿಯೇ ವಿವರಿಸುವೆನು.
ರಬೀವುಲ್ ಅವ್ವಲ್ 12 ರಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮ ದಿನ ಆಚರಣೆಗೆ ಮೀಲಾದುನ್ನಬೀ, ಈದ್ ಮೀಲಾದ್ ಎನ್ನುತ್ತೇವೆ.
*ಪ್ರವಾದೀ ಜನ್ಮ ಯಾವಾಗ?*
ಈದ್ ಮೀಲಾದ್ ಆಚರಿಸುವವರಿಗೆ ಪ್ರವಾದಿವರ್ಯರು ಯಾವಾಗ ಜನಿಸಿದರು ಎಂಬ ನಿಖರವಾದ ಮಾಹಿತಿ ಇಲ್ಲ ಎಂಬ ಆರೋಪವನ್ನು ವಹ್ಹಾಬಿಗಳು ಹೊರಿಸುತ್ತಾರೆ.
ಹಿಜ್ರ 150 ರಲ್ಲಿ ಮರಣ ಹೊಂದಿದ ಇಮಾಮ್ ಇಬ್ನ್ ಇಸ್'ಹಾಕ್ (ರ)ಅದಕ್ಕೆ ಈ ರೀತಿ ಉತ್ತರಿಸುತ್ತಾರೆ,
*قال ابن اسحاق :ولد رسول الله صلي الله عليه وسلم يوم* *الاثنين ،لاثنتي عشرة ليلة خلت من شهر ربيع الاول ،عام الفيل*
*(سيرة ابن هشام 1/161)*
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಗಜ ವರ್ಷದ ರಬೀವುಲ್ ಅವ್ವಲ್ 12 ರಂದು ಸೋಮವಾರ ಜನಿಸಿದರು.*
*(ಸೀರತು ಇಬ್ನಿ ಹಿಶಾಂ 1/161).*
ಈ ರೀತಿ ನೂರಾರು ಗ್ರಂಥಗಳಲ್ಲಿ ದಾಖಲಿಸಲ್ಪಡಲಾಗಿದೆ.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಸೋಮವಾರ ದಿನ ಜನಿಸಿದರೆಂದು ಇಮಾಮ್ ಮುಸ್ಲಿಂ ವರದಿ ಮಾಡಿದ ಹದೀಸಿನಲ್ಲಿದೆ.
*عَنْ أبِي قَتَادَةَ الأنْصَارِيِّ رَضِيَ اللهُ عَنْهُ أنَّ رَسُولَ الله صلى الله عليه وسلم سُئِلَ، عَنْ صَوْمِ الاثْنَيْنِ؟ فَقَالَ: «فِيهِ وُلِدْتُ وَفِيهِ أُنْزِلَ عَلَيَّ». ( مسلم 2750)*
*ಅಬೂಖತಾದ (ರ) ನಿವೇದನೆ, ಸೋಮವಾರದ ಉಪವಾಸದ ಬಗ್ಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಕೇಳಲ್ಪಟ್ಟಾಗ ಅಂದು ನಾನು ಜನಿಸಿದ ದಿನವೆಂದೂ ಆ ದಿನ ನನಗೆ ಖುರ್ ಆನ್ ಅವತರಿಸಲ್ಪಟ್ಟಿದೆ ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಉತ್ತರಿಸಿದರು.*
*(ಮುಸ್ಲಿಂ, 2750)*
ಅಲ್ಲಾಮ ಮುನಾವೀ(ರ)ಬರೆಯುತ್ತಾರೆ,
الاصح انه ولد بمكة بالشعب بعيد فجر الاثنين ثاني عشر ربيع الاول عام الفيل ،ولم يكن يوم جمعة ولا شهر حرام دفعا لتوهم انه شرف بذلك الزمن الفاضل ،فجعل في المفضول لتظهر به رتبته علي الفاضل ،ونظيره دفنه بالمدينة دون مكة ،اذ لو دفن بها لقصد تبعا.(فيض القدير
3/768)
*ಗಜ ವರ್ಷದ ರಬೀವುಲ್ ಅವ್ವಲ್ 12 ರಂದು ಫಜ್'ರ್ ನ ಅಲ್ಪ ಸಮಯದ ಬಳಿಕ ಮಕ್ಕಾದಲ್ಲಿ ಹಾಶಿಂ ಕುಟುಂಬದಲ್ಲಿ* *ಜನಿಸಿದರು.ಅವರ ಜನನ ಶುಕ್ರವಾರ ದಿನ ಅಥವಾ ಯುದ್ಧ ನಿಷಿದ್ಧವಾದ ತಿಂಗಳಲ್ಲಿ (ದುಲ್ ಖ'ಅದ,ದುಲ್ ಹಿಜ್ಜ, ಮುಹರ್ರಮ್,ರಜಬ್)* *ನಡೆದಿಲ್ಲ.ಆ ಶ್ರೇಷ್ಟವಾದ ವೇಳೆ ನಡೆದಿದ್ದಲ್ಲಿ ಆ ಸಮಯದ ಕಾರಣದಿಂದ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ* *ಮಹತ್ವವುಂಟಾಗಿದೆ ಎಂಬ ತಪ್ಪುಧಾರಣೆ ಉಂಟಾಗಬಹುದು. ಅದನ್ನು ಹೊಗಲಾಡಿಸಲು ಬೇಕಾಗಿ ಬೇರೆಯೇ ದಿನದಲ್ಲಿ ಅವರ ಜನನ ಸಂಭವಿಸಿತು.*
*ಆದುದರಿಂದ ರಬೀವುಲ್ ಅವ್ವಲ್ ಸೋಮವಾರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಕಾರಣದಿಂದ ಆ ತಿಂಗಳಿಗೆ ಮತ್ತು ಸೋಮವಾರದ ದಿನಕ್ಕೆ ಇತರ ತಿಂಗಳಿಗಿಂತಲೂ, ದಿನಗಳಿಗಿಂತಲೂ ಮಹತ್ವವುಂತಾಯಿತು ಎಂದು ತಿಳಿಯಬಹುದಲ್ಲವೇ.*
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಮಕ್ಕಾದಲ್ಲಿ ದಫನ್ ಮಾಡದೆ ಮದೀನದಲ್ಲಿ ದಫನ್ ಮಾಡಲು ಇದೇ ಕಾರಣವಾಗಿದೆ.ಮಕ್ಕಾದಲ್ಲಿ ದಫನ್ ಮಾಡುತ್ತಿದ್ದಲ್ಲಿ ಜನರು ಮಕ್ಕಾ ಅವಲಂಬಿಸಿ ಹೋಗಿ ನಂತರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಗುರಿಯಿಡುತ್ತಿದ್ದರು.*(ಪ್ರಧಾನ ಉದ್ದೇಶ ಪವಾದೀ ಸಲ್ಲಲ್ಲಾಹು ಅಲೈಹಿವಸಲ್ಲಂ ಆಗುತ್ತಿರಲಿಲ್ಲ.)
*( ಫೈಳುಲ್ ಖದೀರ್ 3/768)*
ಮದೀನಾ ಗೆ ಹೋಗುವ ಮುಸ್ಲಿಮರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸಂದರ್ಶಿಸಲೆಂದೇ ಹೋಗುತ್ತಾರೆ.ಹೊರತು ಕೇವಲ ಮಸೀದಿ ಸಂದರ್ಶನವಲ್ಲ.ಮಸೀದಿ ಮಾತ್ರ ಗುರಿಯಾಗಿದ್ದರೆ ಅತ್ಯಂತ ಪುಣ್ಯ ಮಸೀದಿಯಾದ ಮಕ್ಕ ಮಸೀದಿಗಿಂತ ಕಡಿಮೆ ಮಹತ್ವವಿರುವ ಮದೀನ ಮಸೀದಿಗೆ ಹೋಗಬೇಕಾಗಿಲ್ಲ ತಾನೇ?.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ರಬೀವುಲ್ ಅವ್ವಲ್ 12 ರಂದು ಜನಿಸಿದರೆಂಬ ಕಾರಣಕ್ಕೆ ಮಕ್ಕ ನಿವಾಸಿಗಳು ಅಂದು ಪ್ರವಾದಿವರ್ಯರು ಜನಿಸಿದ ಸ್ಥಳ ಸಂದರ್ಶಿಸುತ್ತಿದ್ದರು.
ಇಮಾಮ್ ಖಸ್ತಲ್ಲಾನೀ (ರ)ಬರೆಯುತ್ತಾರೆ;
(وقيل )ولد (لاثني عشر)من ربيع الاول (وعليه عمل اهل مكة )قديما وحديثا في(زيارتهم موضع مولده في هذا الوقت )اي ثاني عشر ربيع .(المواهب اللدنية 1/132)
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ರಬೀವುಲ್ ಅವ್ವಲ್ 12 ರಂದು ಜನಿಸಿದ್ದಾರೆ ಎಂಬ ಅಭಿಪ್ರಾಯವಿದೆ.ಆದುದರಿಂದಲೇ ಪೂರ್ವ ಕಾಲದ ಮತ್ತು ಈ ಕಾಲದ ಮಕ್ಕಾ ನಿವಾಸಿಗಳು ರಬೀವುಲ್ ಅವ್ವಲ್ 12 ರಂದು ಅವರು ಜನಿಸಿದ ಸ್ಥಳ ಸಂದರ್ಶನ ನಡೆಸುವುದು.*
*(ಅಲ್ ಮವಾಹಿಬುಲ್ಲದುನ್ನಿಯ್ಯ ಝುರ್'ಖಾನಿ ಸಹಿತ ನೋಡಿರಿ 1/132)*
ಇದೇ ರೀತಿ ಇಮಾಮ್ ಹಲಬೀ(ರ)ಹೇಳಿದ್ದಾರೆ,
*وكانت ولادته صلي الله عليه وسلم يوم الاثنين في شهر ربيع الاول لعشر خلون منه........وقيل ولد ليلا وعليه عمل اهل مكة في زيارة موضع موله الشريف صلي الله عليه وشلم (سيرة الحلبية 3/496)*
*ರಬೀವುಲ್ ಅವ್ವಲ್ 12 ರಂದು ಮಕ್ಕಾ ನಿವಾಸಿಗಳು ಪ್ರವಾದಿ ಸಲ್ಲಲ್ಲಾಹು* *ಅಲೈಹಿವಸಲ್ಲಮರು ಜನಿಸಿದ ಸ್ಥಳವನ್ನು ಸಂದರ್ಶಿಸುತ್ತಿದ್ದರು.*
*(ಸೀರತುಲ್ ಹಲಬಿಯ್ಯ3/496)*
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಸ್ತಳ.*
ರಬೀವುಲ್ ಅವ್ವಲ್ 12 ರಂದು ಪ್ರವಾದಿ ವರ್ಯರು ಜನಿಸಿದ ಸ್ಥಳವನ್ನು ಮಕ್ಕಾ ನಿವಾಸಿಗಳು ಸಂದರ್ಶಿಸುತ್ತಿದ್ದರು ಎಂಬುವುದನ್ನು ಈಗಾಗಲೇ ವಿವರಿಸಿಯಾಗಿದೆ.
ಅದನ್ನು ಅವರು ಒಂದು ಸತ್ಕರ್ಮವಾಗಿ ಕಂಡಿದ್ದರು.
ಅವರ ಆ ಚರ್ಯೆಯನ್ನು ನಂತರದ ಉಲಮಾಗಳು ಅಂಗೀಕರಿಸಿದ್ದಾರೆ.ಒಂದು ವೇಳೆ ಅದು ಬಿದ್'ಅತ್ ಆಗಿದ್ದಲ್ಲಿ ವಿಧ್ವಾಂಸರು ಅದನ್ನು ಒಪ್ಪುತ್ತಿರಲಿಲ್ಲ.
ಮಾತ್ರವಲ್ಲ, ಮಕ್ಕಾ ಗೆ ತೆರಳಿದವರು ಸಂದರ್ಶಿಬೇಕಾದ ಸ್ಥಳಗಳನ್ನು ವಿವರಿಸುತ್ತಾ ಇಮಾಮ್ ನವವೀ (ರ)ಪ್ರಖ್ಯಾತ ಗ್ರಂಥವಾದ ಈಳಾಹ್ ನಲ್ಲಿ ಹೇಳುವುದನ್ನು ನೋಡಿ;
*الرابع عشرة :يستحب زيارة المواضع المشهورة بالفضل في مكة والحرم وقد قيل انها ثمانية موضعا ،منها البيت الذي ولد فيه رسول الله صلي الله عليه وسلم .*
*(كتاب الايضاح 404)*
*ಹಜ್ಜಾಜ್ ಗಳಿಗೆ ಸುನ್ನತ್ತಾದ 14 ನೇ ಕಾರ್ಯ.*
*ಮಕ್ಕಾದಲ್ಲಿರುವ ಪ್ರಸಿದ್ಧವಾದ ಸ್ಥಳಗಳನ್ನು ಸಂದರ್ಶಿಸುವುದಾಗಿದೆ.ಅದು 18 ಸ್ಥಳಗಳಿವೆ.ಅದರಲ್ಲೊಂದಾಗಿದೆ ಪುಣ್ಯ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಸ್ಥಳ.*
*(ಈಳಾಹ್ 404)*
'ಸೂಖುಲ್ಲೈಲ್' ಎಂಬ ಸ್ಥಳದಲ್ಲಿದ್ದ ಆ ಮನೆಯನ್ನು ಕೆಡವಿ ಅದರ ಬದಲು ಅಲ್ಲಿ ಒಂದು ಲೈಬ್ರರಿಯನ್ನು ಸ್ಥಾಪಿಸಲಾಗಿದೆ.
ಹಲವು ದರ್ಗಾಗಳನ್ನು,ಖುಬ್ಬಗಳನ್ನು ನೆಲಸಮ ಮಾಡಿದ ವಹ್ಹಾಬಿಗಳಿಂದ ಇದನ್ನಲ್ಲದೆ ಬೇರೆ ಏನನ್ನು ನಿರೀಕ್ಷಿಸಬಹುದು?
ಪ್ರವಾದೀ ಸಲ್ಲಲ್ಲಾಹು ಅಲೈಹಿ ಜನಿಸಿದ ಸ್ಥಳ ಪುಣ್ಯ ಸ್ಥಳವಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.
ಅದನ್ನು ಸಂದರ್ಶಿಸುವುದು ಈಮಾನಿನ ಭಾಗವಾಗಿದೆ.
ಮಕ್ಕಾ ನಿವಾಸಿಗಳು ಅದನ್ನು ಸಂದರ್ಶಿಸುತ್ತಿದ್ದರೆಂದು ಇಮಾಮರುಗಳು ಸ್ಪಷ್ಟಪಡಿಸಿದ್ದಾರೆ.
*ಮೀಲಾದ್ ರಾತ್ರಿ*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿ ಅತೀ ಮಹತ್ವವಿರುವ ರಾತ್ರಿಯಾಗಿದೆ.ಕಾರಣ ಯಾವುದೇ ರಾತ್ರಿ ಅಥವಾ ಹಗಲಿಗೆ ಮಹತ್ವವುಂಟಾಗಳು ಕಾರಣ ಆ ಸಮಯದಲ್ಲಿ ಯಾವುದಾದರೊಂದು ಕಾರ್ಯವುಂಟಾಗಿರುವುದರಿಂದಆಗಿದೆ.ಉದಾಹಣೆಗೆ ಶುಕ್ರವಾರ ದಿನಕ್ಕೆ ಮಹತ್ವ ಬರಲು ಕಾರಣ ಅಂದು ಆದಮ್ ಅಲೈಹಿಸ್ಸಲಾಮರನ್ನು ಸೃಷ್ಠಿಸಲಾಗಿದೆ ಎಂಬುವುದಾಗಿದೆ.ಇದನ್ನು
ಇಮಾಮ್ ಮುಸ್ಲಿಂ( ರ)ವರದಿ ಮಾಡಿದ 1976 ನಂಬ್ರ ಹದೀಸಿನಲ್ಲಿ ಕಾಣಬಹುದು.
*عن ابي هريرة رضي الله عنه قال قال رسول الله صلي الله عليه وسلم:خير يوم طلعت عليه الشمس يوم الجمعة فيه خلق ادم وفيه ادخل الجنة وفيه اخرج منها (مسلم )*
ಪವಿತ್ರ ರಂಝಾನ್ ಗೆ ಮಹತ್ವ ಉಂಟಾಗಲು ಕಾರಣ ಆ ತಿಂಗಳಲ್ಲಿ ಖುರ್'ಆನ್ ಅವತೀರ್ಣಗೊಂಡಿದೆ ಎಂಬುವುದಾಗಿದೆ.
ಎಲ್ಲವನ್ನೂ ಸೃಷ್ಠಿಸಲು ಕಾರಣಕರ್ತರಾದ
ಪುಣ್ಯ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿ ಲೈಲತುಲ್ ಖದ್'ರ್ ಗಿಂತಲೂ ಪುಣ್ಯ ದಿನವೆಂದು ಇಮಾಮ್ ಖಸ್ತಲ್ಲಾನೀ (ರ) ವಿವರಿಸಿದ್ದಾರೆ,
_فإن قلت: إذا قلنا بأنه عليه السلام ولد ليلا، فأيما أفضل: ليلة القدر أو ليلة مولده عليه السلام؟_
_أجيب: بأن ليلة مولده عليه السلام أفضل من ليلة القدر من وجوه ثلاثة:_
_أحدها: أن ليلة المولد ليلة ظهوره صلى الله عليه وسلم، وليلة القدر معطاة له، وما شرف بظهور ذات المشرف من أجله أشرف مما شرف بسبب ما أعطيه، ولا نزاع في ذلك، فكانت ليلة المولد أفضل من ليلة القدر._
_الثاني: أن ليلة القدر شرفت بنزول الملائكة فيها، وليلة المولد شرفت بظهوره صلى الله عليه وسلم. ومن شرفت به ليلة_ _المولد_ _أفضل ممن شرفت بهم ليلة القدر، على الأصح المرتضى، فتكون ليلة المولد أفضل._
_الثالث: أن ليلة القدر وقع فيها التفضيل على أمة محمد صلى الله عليه وسلم، وليلة المولد الشريف وقع التفضل فيها على_ _سائر الموجودات، فهو الذي بعثه الله عز وجل رحمة للعالمين،_ فعمت به النعمة على جميع_ _الخلائق، فكانت ليلة المولد أعم نفعًا، فكانت أفضل._
(المواهب اللدنية 1/136)
*ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ರಾತ್ರಿ ವೇಳೆ ಜನಿಸಿದ್ದಾರೆ.ಹಾಗಾದರೆ ಆ ರಾತ್ರಿಗಾ ಹೆಚ್ಚು ಮಹತ್ವ ?ಅಥವಾ ಲೈಲತುಲ್ ಖ'ದ್'ರ್ ಗಾ ಹೆಚ್ಚು ಮಹತ್ವ ಎಂದು ಕೇಳಿದರೆ 3 ಕಾರಣಕ್ಕೆ ಮೀಲಾದ್ ನ ರಾತ್ರಿಗೆ ಹೆಚ್ಚು ಮಹತ್ವವೆಂದು ಉತ್ತರಿಸಬಹುದು.*
*1.ಈ ರಾತ್ರಿಯಲ್ಲಿ ಜನಿಸಿದ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ನೀಡಲ್ಪಟ್ಟ ಒಂದಾಗಿದೆ ಲೈಲತುಲ್ ಖ'ದ್'ರ್.ಪ್ರವಾದೀ ಸಲ್ಲಲ್ಲಾಹು* *ಅಲೈಹಿವಸಲ್ಲಮರಿಗೆ ನೀಡಲ್ಪಟ್ಟ ಕಾರಣದಿಂದ ಆ ರಾತ್ರಿಗೆ ಮಹತ್ವ ಉಂಟಾಗಿದ್ದರೆ ಆ ಗೌರವಕ್ಕೆ ಕಾರಣ* *ಕರ್ತರಾದವರ ಪುಣ್ಯ ಹಬೀಬರ ಶರೀರ ಪ್ರತ್ಯಕ್ಷವಾದ ರಾತ್ರಿಗೆ ಯಾಗಿದೆಯಲ್ಲವೇ ಹೆಚ್ಚು ಮಹತ್ವ ?*
*ಇದರಲ್ಲಿ ಯಾವುದೇ ತರ್ಕಕ್ಕೆ ಆಸ್ಪದವಿಲ್ಲ.*
*ಆದುದರಿಂದ ಮೀಲಾದ್ ರಾತ್ರಿ ಲೈಲತುಲ್ ಖದ್ ರ್ ಗಿಂತ ಮಹತ್ವವಿರುವ ರಾತ್ರಿಯಾಗಿದೆ.*
*2.ಮಲಕುಗಳು ಇಳಿದು ಬರುವುದರಿಂದ ಲೈಲತುಲ್ ಖದ್ರ್ ಗೆ ಮಹತ್ವ ಲಭಿಸಿದೆ.ಮೀಲಾದ್ ರಾತ್ರಿಗೆ ಪ್ರವಾದೀವರ್ಯರು ಜನಿಸಿದರೆಂಬ ಕಾರಣದಿಂದಲೂ. ಪ್ರಬಲ ಅಭಿಪ್ರಾಯ ಪ್ರಕಾರ ಮಲಕ್ ಗಳಿಗಿಂತ ಶ್ರೇಷ್ಠತೆ ಪ್ರವಾದಿ ಸಲ್ಲಲ್ಲಾಹಿ ಅಲೈಹಿವಸಲ್ಲಮರಿಗೆ ಆಗಿದೆ.*
*ಆದುದರಿಂದ ಮಲಕ್ ಗಳಿಗಿಂತ ಶ್ರೇಷ್ಠರಾದ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿ ಮಲಕ್ ಗಳು ಇಳಿದು ಬರುವ ಲೈಲತುಲ್ ಖದ್ರ್ ನ ರಾತ್ರಿಗಿಂತ ಮಹತ್ವವಿರುವ ರಾತ್ರಿಯಾಯಿತು.*
*3.ಲೈಲತುಲ್ ಖದ್ರ್ ನ ಶ್ರೇಷ್ಠತೆ ಈ ಉಮ್ಮತ್ ಗೆ ಮಾತ್ರ ಸೀಮಿತವಾಗಿದೆ.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿಯ ಶ್ರೇಷ್ಠತೆ ಎಲ್ಲಾ ಸೃಷ್ಠಿಗಳಿಗೂ ಲಭ್ಯವಾಗಿದೆ.ಆದುದರಿಂದ ಈ ರಾತ್ರಿಯೂ ಲೈಲತುಲ್ ಖದ್ರ್ ನ ರಾತ್ರಿಗಿಂತಲೂ ಮಹತ್ವವಿರುವ ರಾತ್ರಿಯಾಯಿತು.*
*(ಅಲ್ ಮವಾಹಿಬುಲ್ಲದುನ್ನಿಯ್ಯ 1/136)*
ಇಮಾಮ್ ಶರ್'ವಾನಿ(ರ) ಬರೆಯುತ್ತಾರೆ;
*وان افضل الليالي ليلة المولد الشريف ،ثم ليلة القدر ،ثم ليلة الجمعة ،ثم ليلة الاسراء هذا* *بالنسبة لنا واما بالنسبة له* ﷺ
*فليلة الاسراء افضل الليالي؛لانه رأى فيها ربه بعيني رأسه علي الصحيح* (شرواني 2/405)
*ರಾತ್ರಿಗಳ ಪೈಕಿ ಅತೀ ಶ್ರೇಷ್ಟವಾದ ರಾತ್ರಿ ಪ್ರವಾದೀ ﷺ ಜನಿಸಿದ ರಾತ್ರಿಯಾಗಿದೆ. ನಂತರ ಲೈಲತುಲ್ ಖದ್ರ್ ತದ ನಂತರ ಶುಕ್ರವಾರ ರಾತ್ರಿ ಹಾಗೂ ಆಮೇಲೆ ಇಸ್ರಾ ನಡೆದ ರಾತ್ರಿಯೂ ಆಗಿದೆ. ಈ ಹೇಳಿದ್ದು ನಮ್ಮನ್ನು ಅಪೇಕ್ಷಿಸಿಯಾಗಿದೆ. ಪ್ರವಾದೀ ﷺ ರನ್ನು ಅಪೇಕ್ಷಿಸಿ ಶ್ರೇಷ್ಟವಾದ ರಾತ್ರಿ ಇಸ್ರಾ ರಾತ್ರಿಯಾಗಿದೆ. ಕಾರಣ ಅಲ್ಲಾಹನನ್ನು ದರ್ಶಿಸಿದ ರಾತ್ರಿಯಾಗಿದೆ ಇಸ್ರಾ ರಾತ್ರಿ.*
(ಶರ್'ವಾನಿ 2/405)
ಅದೇ ರೀತಿ ಶರ್'ವಾನಿಯ 3/462 ರಲ್ಲೂ ಕಾಣಬಹುದಾಗಿದೆ.
*-------------------------------------------*
ಇಮಾಮ್ ಬರೂಸವೀ (ರ)ಹೇಳುತ್ತಾರೆ;
*وافضل الليالي ليلة المولد المحمدي لولاه ما نزل القرأن ولا نعتت ليلة القدر وهو الاصح*
(روح البيان 6/360)
*ಅತೀ ಶ್ರೇಷ್ಟವಾದ ರಾತ್ರಿ ಮೀಲಾದ್ ರಾತ್ರಿಯಾಗಿದೆ. ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಇಲ್ಲದಿದ್ದರೆ ಖುರ್'ಆನ್ ಇರುತ್ತಿರಲಿಲ್ಲ, ಲೈಲತುಲ್ ಖದ್ರ್'ಗೆ ಮಹತ್ವ ಲಭಿಸುತ್ತಿರಲಿಲ್ಲ.*
(ರೂಹುಲ್ ಬಯಾನ್ 6/340)
*------------------------------------------*
*ಜನ್ಮ ದಿನ ಆಚರಣೆ*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮ ನಮಗೆ ಅಲ್ಲಾಹನು ನೀಡಿದ ಸೌಭಾಗ್ಯವಾಗಿದೆ.
ಆ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಬೇಕಾದದ್ದು ಸತ್ಯ ವಿಶ್ವಾಸಿಯ ಕರ್ತವ್ಯವಾಗಿದೆ.
ಅವರ ಜನ್ಮ ದಿನ ಆಚರಿಸುವುದು, ಆ ದಿನದಂದು ಸಂತೋಷಪಡುವುದು ಕೂಡಾ ಈಮಾನ್ ಇರುವ ಮನುಷ್ಯನ ಭಾಧ್ಯತೆ ಆಗಿದೆ.
ಇಮಾಮ್ ಸುಯೂಥೀ (ರ) ಹೇಳುತ್ತಾರೆ,
_وقد ظهر لي تخريجه على_ _أصل آخر ، وهو ما_ _أخرجه البيهقي عن أنس أن النبي صلى الله عليه وسلم عق عن نفسه بعد النبوة مع أنه قد ورد أن جده عبد المطلب عق عنه في سابع ولادته ، والعقيقة لا تعاد مرة ثانية ، فيحمل ذلك على أن_ _الذي فعله النبي صلى الله عليه وسلم إظهار للشكر على إيجاد الله إياه رحمة للعالمين وتشريع لأمته كما كان يصلي على نفسه لذلك ، فيستحب لنا أيضا إظهار_ _الشكر بمولده بالاجتماع وإطعام الطعام ونحو ذلك من وجوه القربات وإظهار المسرات_
(الحاوي للفتاوي 1/196)
_ಜನ್ಮ ದಿನ ಆಚರಣೆಗೆ ನಾನು ಮತ್ತೊಂದು ಆಧಾರವನ್ನು ಕಂಡು_ _ಹಿಡಿದಿದ್ದೇನೆ. ಅನಸ್ (ರ)ರಿಂದ ಇಮಾಮ್ ಬೈಹಖೀ (ರ) ವರದಿ ಮಾಡಿದ ಹದೀಸಿನಲ್ಲಿ ನುಬುವ್ವತ್ ನ ನಂತರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಅಖೀಖ ನೀಡಿದರು ಎಂದು ವರದಿಯಾಗಿದೆ. ಪ್ರವಾದೀ_ _ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಏಳನೇ ದಿನದಂದು ಅಜ್ಜ ಅಬ್ದುಲ್ ಮುತ್ತಲಿಬ್ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಅಖೀಖ ನೀಡಿದ ಬಗ್ಗೆ ಸ್ಥಿರಪಟ್ಟಿದೆ. ಅಖೀಖ_ _ಎರಡೆರಡು ಬಾರಿ ಕೊಡುವಂತದ್ದಲ್ಲ. ಆದುದರಿಂದ ಪ್ರಪಂಚಕ್ಕನುಗ್ರಹವಾಗಿ ತನ್ನನ್ನು ಸೃಷ್ಠಿಸಲ್ಪಟ್ಟಿದ್ದಕ್ಕೆ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ಭಾಗವಾಗಿ ತನ್ನ_ _ಸಮುದಾಯವನ್ನು ಕಲಿಸಿ ಕೊಡಲು ಅವರು ದ್ಸಬಹ್ ಮಾಡಿ ಕೊಟ್ಟಿದ್ದಾರೆ ಎಂದು ತಿಳಿದುಕೊಳ್ಳಬಹುದು. ಅದೇ ಉದ್ದೇಶಕ್ಕಾಗಿ ಅವರು ತನ್ನ ಮೆಲೇಯೇ ಸ್ವಲಾತ್_ _ಹೇಳುತ್ತಿದ್ದರು._
_ಒಟ್ಟಿನಲ್ಲಿ ಎಲ್ಲರೂ ಒಟ್ಟು ಸೇರಿ ಅನ್ನ ದಾನ ನಡೆಸಿಯೂ_ _ಹಾಗೂ ಇನ್ನಿತರ ಆರಾಧಾನ ಕರ್ಮಗಳ ಮೂಲಕವೂ ಪ್ರವಾದೀ ಸಲ್ಲಲ್ಲಾಹು_ ಅಲೈಹಿವಸಲ್ಲಮರ ಜನನಕ್ಕೆ ಕೃತಜ್ಞತೆ ಸಲ್ಲಿಸುವುದು ಮತ್ತು ಸಂತೋಷಪಡುವುದು ಸುನ್ನತ್ ಆಗಿದೆ._
(ಅಲ್ ಹಾವೀ ಲಿಲ್ ಫತಾವ 1/196)
*------------------------------------------*
ಇಮಾಮ್ ಸುಯೂಥಿಯ ಪ್ರಸ್ತುತ ಮಾತನ್ನು ನಂತರದ ಎಲ್ಲಾ ಉಲಮಾ ಅಂಗೀಕರಿಸಿದ್ದಾರೆ.
ಪ್ರಶಸ್ತ ಕರ್ಮ ಶಾಸ್ತ್ರ ವಿದ್ವಾಂಸರಾದ ಇಮಾಮ್ ಇಬ್ನ್ ಖಾಸಿಮ್ (ರ) ಹೇಳುತ್ತಾರೆ;
*وقد أطال في إيضاح الاحتجاج لكون المولد محمودا مثابا عليه بشرطه مع إيضاح الرد على من خالف في ذلك بما ينبغي استفادته وجعل ذلك كله مؤلفا سماه حسن المقصد في عمل المولد فجزاه الله تعالى ما هو أهله(حاشية ابن قاسم 7/425)*
*ಕೆಲವು ನಿಬಂಧನೆಗಳ ಮೂಲಕ ಮೀಲಾದ್ ಆಚರಣೆ ಸ್ತುತ್ಯರ್ಹವೂ ಪ್ರತಿಫಾಲರ್ಹವೆಂದು ದೃಢಪಡಿಸಲು ಇಮಾಮ್ ಸುಯೂಥೀ (ರ) ಸವಿಸ್ತಾರವಾಗಿ ಬರೆದಿದ್ದಾರೆ. ಅದನ್ನು ವಿರೋಧಿಸಿದವರಿಗೆ ಖಂಡನೆಯನ್ನೂ ಬರೆದಿದ್ದಾರೆ. ಅದಕ್ಕಾಗಿ ಅವರು "ಹುಸ್ನುಲ್ ಮಖ್'ಸಿದ್ ಫೀ ಅಮಲಿಲ್ ಮೌಲಿದ್" ಎಂಬ ಹೆಸರಲ್ಲಿ ಒಂದು ಗ್ರಂಥವನ್ನು ಕ್ರೋಡೀಕರಿಸಿದರು. ಅವರ ಈ ಕೆಲಸಕ್ಕೆ ಅಲ್ಲಾಹನು ಪ್ರತಿಫಲ ನೀಡಲಿ.*
(ಹಾಶಿತಯತು ಇಬ್ನಿ ಖಾಸಿಮ್ 7/425)
ಇದೇ ರೀತಿ ಶರ್ವಾನಿ 7/425 ರಲ್ಲೂ ಕಾಣಬಹುದಾಗಿದೆ.
*------------------------------------------*
ಇಮಾಮ್ ಸುಯೂಥಿ (ರ) ಇಲ್ಲಿ (ಜನ್ಮ ದಿನಾಚರಣೆಗೆ ಪುರಾವೆ ನೀಡಿ) ಬಿದ್ ಅತ್ ಪ್ರಚಾರ ಪಡಿಸಿರುವುದಾದರೆ ನಂತರದ ವಿದ್ವಾಂಸರು ಅದನ್ನು ಒಪ್ಪುತ್ತಿರಲಿಲ್ಲ.
ತಪ್ಪು ಯಾರೇ ಹೇಳಿದರೂ ಅದನ್ನು ಮುಖ ನೋಡದೆ ವಿಮರ್ಶಿಸುವುದು ಇಮಾಮರುಗಳ ಶೈಲಿಯಾಗಿದೆ., ಆದರೂ ಅವರು ಇದನ್ನು ವಿಮರ್ಶಿಸಿಲ್ಲ. ಮಾತ್ರವಲ್ಲ ಅದಕ್ಕೆ ಬೆಂಬಲವನ್ನೇ ಸೂಚಿಸಿದ್ದಾರೆ.
*ಬಾಕಿ 2 ನೇ ಭಾಗದಲ್ಲಿ ಓದಿರಿ*
*ಭಾಗ =01*
*••••••••••••••••••••••••••••••••••••*
*📝 ಮುನೀರ್ ಸಖಾಫಿ, ಸಾಲೆತ್ತೂರು*
*°°°°°°°°°°°°°°°°°°°°°°°°°°°°°°°°°*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು, ಸ್ವಹಾಬಿಗಳು, ತಾಬಿವುಗಳು, ಇಮಾಮರುಗಳು (ಪುರಾವೆಗಳ ಮೂಲಕ) ನಮಗೆ ಕಲಿಸಿ ಕೊಟ್ಟ ಆದರ್ಶವಾಗಿದೆ ಸುನ್ನತ್ ಜಮಾಅತ್.
ಹಲವಾರು ಪುಣ್ಯ ಕರ್ಮಗಳನ್ನು ಕೆಟ್ಟ ಆಚಾರವಾಗಿ ಚಿತ್ರೀಕರಿಸಿ ಮುಸ್ಲಿಮರನ್ನು ಮುಶ್ರಿಕರೆಂದು, ಕಾಫಿರರೆಂದು ಹೇಳಿ ಸಮುದಾಯದ ಮಧ್ಯೆ ಭಿನ್ನತೆಯನ್ನು ಸೃಷ್ಠಿಸಿದವರಾಗಿದ್ದಾರೆ ಇಲ್ಲಿನ ನೂತನವಾದಿಗಳಾದ ಸಲಪಿ, ಜಮಾಅತೇ ಇಸ್ಲಾಮೀ, ತಬ್ಲೀಗಾದಿಗಳು.
ರಬೀವುಲ್ ಅವ್ವಲ್ 12 ರಂದು ಪ್ರವಾದೀ ಜನ್ಮ ದಿನಾಚರಣೆ ಮಾಡುವಾಗ ವಹ್ಹಾಬಿಗಳು ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ.
ಅವುಗಳಲ್ಲಿ ಕೆಲವೊಂದು ಈ ರೀತಿಯಾಗಿರಬಹುದು.
1. ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ತನ್ನ ಜನ್ಮ ದಿನಾಚರಣೆ ಆಚರಿಸಿದ್ದರೇ?
2. ಸ್ವಹಾಬಿಗಳು ಯಾರಾದರೂ ಅಚರಿಸಿದ್ದಾರೆಯೇ?
3. ಅವರು ಅಂದು ಓದಿದ ಮೌಲಿದ್ ಯಾವುದು?
4. ಅವರು ಮೆರವಣಿಗೆಗೆ ಹಿಡಿದ ಧ್ವಜದ ಬಣ್ಣ ಯಾವುದು?
ಹೀಗೇ ಹಲವಾರು ಪ್ರಶ್ನೆಗಳು.
ವಾಸ್ತವದಲ್ಲಿ ಮೌಡ್ಯತನದಿಂದ ಕೂಡಿದ ಪ್ರಶ್ನೆಯಾಗಿದೆ ಇದು.
ವಿಷಯವನ್ನು ಸರಿಯಾಗಿ ಗ್ರಹಿಸಿದಲ್ಲಿ ಇಂತಹಾ ಪ್ರಶ್ನೆಗಳು ಉದ್ಭವಿಸಲಾರದು.
ಇಂಶಾ ಅಲ್ಲಾಹ್ ಎಲ್ಲವನ್ನೂ ಸರಿಯಾಗಿಯೇ ವಿವರಿಸುವೆನು.
ರಬೀವುಲ್ ಅವ್ವಲ್ 12 ರಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮ ದಿನ ಆಚರಣೆಗೆ ಮೀಲಾದುನ್ನಬೀ, ಈದ್ ಮೀಲಾದ್ ಎನ್ನುತ್ತೇವೆ.
*ಪ್ರವಾದೀ ಜನ್ಮ ಯಾವಾಗ?*
ಈದ್ ಮೀಲಾದ್ ಆಚರಿಸುವವರಿಗೆ ಪ್ರವಾದಿವರ್ಯರು ಯಾವಾಗ ಜನಿಸಿದರು ಎಂಬ ನಿಖರವಾದ ಮಾಹಿತಿ ಇಲ್ಲ ಎಂಬ ಆರೋಪವನ್ನು ವಹ್ಹಾಬಿಗಳು ಹೊರಿಸುತ್ತಾರೆ.
ಹಿಜ್ರ 150 ರಲ್ಲಿ ಮರಣ ಹೊಂದಿದ ಇಮಾಮ್ ಇಬ್ನ್ ಇಸ್'ಹಾಕ್ (ರ)ಅದಕ್ಕೆ ಈ ರೀತಿ ಉತ್ತರಿಸುತ್ತಾರೆ,
*قال ابن اسحاق :ولد رسول الله صلي الله عليه وسلم يوم* *الاثنين ،لاثنتي عشرة ليلة خلت من شهر ربيع الاول ،عام الفيل*
*(سيرة ابن هشام 1/161)*
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಗಜ ವರ್ಷದ ರಬೀವುಲ್ ಅವ್ವಲ್ 12 ರಂದು ಸೋಮವಾರ ಜನಿಸಿದರು.*
*(ಸೀರತು ಇಬ್ನಿ ಹಿಶಾಂ 1/161).*
ಈ ರೀತಿ ನೂರಾರು ಗ್ರಂಥಗಳಲ್ಲಿ ದಾಖಲಿಸಲ್ಪಡಲಾಗಿದೆ.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಸೋಮವಾರ ದಿನ ಜನಿಸಿದರೆಂದು ಇಮಾಮ್ ಮುಸ್ಲಿಂ ವರದಿ ಮಾಡಿದ ಹದೀಸಿನಲ್ಲಿದೆ.
*عَنْ أبِي قَتَادَةَ الأنْصَارِيِّ رَضِيَ اللهُ عَنْهُ أنَّ رَسُولَ الله صلى الله عليه وسلم سُئِلَ، عَنْ صَوْمِ الاثْنَيْنِ؟ فَقَالَ: «فِيهِ وُلِدْتُ وَفِيهِ أُنْزِلَ عَلَيَّ». ( مسلم 2750)*
*ಅಬೂಖತಾದ (ರ) ನಿವೇದನೆ, ಸೋಮವಾರದ ಉಪವಾಸದ ಬಗ್ಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಕೇಳಲ್ಪಟ್ಟಾಗ ಅಂದು ನಾನು ಜನಿಸಿದ ದಿನವೆಂದೂ ಆ ದಿನ ನನಗೆ ಖುರ್ ಆನ್ ಅವತರಿಸಲ್ಪಟ್ಟಿದೆ ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಉತ್ತರಿಸಿದರು.*
*(ಮುಸ್ಲಿಂ, 2750)*
ಅಲ್ಲಾಮ ಮುನಾವೀ(ರ)ಬರೆಯುತ್ತಾರೆ,
الاصح انه ولد بمكة بالشعب بعيد فجر الاثنين ثاني عشر ربيع الاول عام الفيل ،ولم يكن يوم جمعة ولا شهر حرام دفعا لتوهم انه شرف بذلك الزمن الفاضل ،فجعل في المفضول لتظهر به رتبته علي الفاضل ،ونظيره دفنه بالمدينة دون مكة ،اذ لو دفن بها لقصد تبعا.(فيض القدير
3/768)
*ಗಜ ವರ್ಷದ ರಬೀವುಲ್ ಅವ್ವಲ್ 12 ರಂದು ಫಜ್'ರ್ ನ ಅಲ್ಪ ಸಮಯದ ಬಳಿಕ ಮಕ್ಕಾದಲ್ಲಿ ಹಾಶಿಂ ಕುಟುಂಬದಲ್ಲಿ* *ಜನಿಸಿದರು.ಅವರ ಜನನ ಶುಕ್ರವಾರ ದಿನ ಅಥವಾ ಯುದ್ಧ ನಿಷಿದ್ಧವಾದ ತಿಂಗಳಲ್ಲಿ (ದುಲ್ ಖ'ಅದ,ದುಲ್ ಹಿಜ್ಜ, ಮುಹರ್ರಮ್,ರಜಬ್)* *ನಡೆದಿಲ್ಲ.ಆ ಶ್ರೇಷ್ಟವಾದ ವೇಳೆ ನಡೆದಿದ್ದಲ್ಲಿ ಆ ಸಮಯದ ಕಾರಣದಿಂದ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ* *ಮಹತ್ವವುಂಟಾಗಿದೆ ಎಂಬ ತಪ್ಪುಧಾರಣೆ ಉಂಟಾಗಬಹುದು. ಅದನ್ನು ಹೊಗಲಾಡಿಸಲು ಬೇಕಾಗಿ ಬೇರೆಯೇ ದಿನದಲ್ಲಿ ಅವರ ಜನನ ಸಂಭವಿಸಿತು.*
*ಆದುದರಿಂದ ರಬೀವುಲ್ ಅವ್ವಲ್ ಸೋಮವಾರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಕಾರಣದಿಂದ ಆ ತಿಂಗಳಿಗೆ ಮತ್ತು ಸೋಮವಾರದ ದಿನಕ್ಕೆ ಇತರ ತಿಂಗಳಿಗಿಂತಲೂ, ದಿನಗಳಿಗಿಂತಲೂ ಮಹತ್ವವುಂತಾಯಿತು ಎಂದು ತಿಳಿಯಬಹುದಲ್ಲವೇ.*
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಮಕ್ಕಾದಲ್ಲಿ ದಫನ್ ಮಾಡದೆ ಮದೀನದಲ್ಲಿ ದಫನ್ ಮಾಡಲು ಇದೇ ಕಾರಣವಾಗಿದೆ.ಮಕ್ಕಾದಲ್ಲಿ ದಫನ್ ಮಾಡುತ್ತಿದ್ದಲ್ಲಿ ಜನರು ಮಕ್ಕಾ ಅವಲಂಬಿಸಿ ಹೋಗಿ ನಂತರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಗುರಿಯಿಡುತ್ತಿದ್ದರು.*(ಪ್ರಧಾನ ಉದ್ದೇಶ ಪವಾದೀ ಸಲ್ಲಲ್ಲಾಹು ಅಲೈಹಿವಸಲ್ಲಂ ಆಗುತ್ತಿರಲಿಲ್ಲ.)
*( ಫೈಳುಲ್ ಖದೀರ್ 3/768)*
ಮದೀನಾ ಗೆ ಹೋಗುವ ಮುಸ್ಲಿಮರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸಂದರ್ಶಿಸಲೆಂದೇ ಹೋಗುತ್ತಾರೆ.ಹೊರತು ಕೇವಲ ಮಸೀದಿ ಸಂದರ್ಶನವಲ್ಲ.ಮಸೀದಿ ಮಾತ್ರ ಗುರಿಯಾಗಿದ್ದರೆ ಅತ್ಯಂತ ಪುಣ್ಯ ಮಸೀದಿಯಾದ ಮಕ್ಕ ಮಸೀದಿಗಿಂತ ಕಡಿಮೆ ಮಹತ್ವವಿರುವ ಮದೀನ ಮಸೀದಿಗೆ ಹೋಗಬೇಕಾಗಿಲ್ಲ ತಾನೇ?.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ರಬೀವುಲ್ ಅವ್ವಲ್ 12 ರಂದು ಜನಿಸಿದರೆಂಬ ಕಾರಣಕ್ಕೆ ಮಕ್ಕ ನಿವಾಸಿಗಳು ಅಂದು ಪ್ರವಾದಿವರ್ಯರು ಜನಿಸಿದ ಸ್ಥಳ ಸಂದರ್ಶಿಸುತ್ತಿದ್ದರು.
ಇಮಾಮ್ ಖಸ್ತಲ್ಲಾನೀ (ರ)ಬರೆಯುತ್ತಾರೆ;
(وقيل )ولد (لاثني عشر)من ربيع الاول (وعليه عمل اهل مكة )قديما وحديثا في(زيارتهم موضع مولده في هذا الوقت )اي ثاني عشر ربيع .(المواهب اللدنية 1/132)
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ರಬೀವುಲ್ ಅವ್ವಲ್ 12 ರಂದು ಜನಿಸಿದ್ದಾರೆ ಎಂಬ ಅಭಿಪ್ರಾಯವಿದೆ.ಆದುದರಿಂದಲೇ ಪೂರ್ವ ಕಾಲದ ಮತ್ತು ಈ ಕಾಲದ ಮಕ್ಕಾ ನಿವಾಸಿಗಳು ರಬೀವುಲ್ ಅವ್ವಲ್ 12 ರಂದು ಅವರು ಜನಿಸಿದ ಸ್ಥಳ ಸಂದರ್ಶನ ನಡೆಸುವುದು.*
*(ಅಲ್ ಮವಾಹಿಬುಲ್ಲದುನ್ನಿಯ್ಯ ಝುರ್'ಖಾನಿ ಸಹಿತ ನೋಡಿರಿ 1/132)*
ಇದೇ ರೀತಿ ಇಮಾಮ್ ಹಲಬೀ(ರ)ಹೇಳಿದ್ದಾರೆ,
*وكانت ولادته صلي الله عليه وسلم يوم الاثنين في شهر ربيع الاول لعشر خلون منه........وقيل ولد ليلا وعليه عمل اهل مكة في زيارة موضع موله الشريف صلي الله عليه وشلم (سيرة الحلبية 3/496)*
*ರಬೀವುಲ್ ಅವ್ವಲ್ 12 ರಂದು ಮಕ್ಕಾ ನಿವಾಸಿಗಳು ಪ್ರವಾದಿ ಸಲ್ಲಲ್ಲಾಹು* *ಅಲೈಹಿವಸಲ್ಲಮರು ಜನಿಸಿದ ಸ್ಥಳವನ್ನು ಸಂದರ್ಶಿಸುತ್ತಿದ್ದರು.*
*(ಸೀರತುಲ್ ಹಲಬಿಯ್ಯ3/496)*
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಸ್ತಳ.*
ರಬೀವುಲ್ ಅವ್ವಲ್ 12 ರಂದು ಪ್ರವಾದಿ ವರ್ಯರು ಜನಿಸಿದ ಸ್ಥಳವನ್ನು ಮಕ್ಕಾ ನಿವಾಸಿಗಳು ಸಂದರ್ಶಿಸುತ್ತಿದ್ದರು ಎಂಬುವುದನ್ನು ಈಗಾಗಲೇ ವಿವರಿಸಿಯಾಗಿದೆ.
ಅದನ್ನು ಅವರು ಒಂದು ಸತ್ಕರ್ಮವಾಗಿ ಕಂಡಿದ್ದರು.
ಅವರ ಆ ಚರ್ಯೆಯನ್ನು ನಂತರದ ಉಲಮಾಗಳು ಅಂಗೀಕರಿಸಿದ್ದಾರೆ.ಒಂದು ವೇಳೆ ಅದು ಬಿದ್'ಅತ್ ಆಗಿದ್ದಲ್ಲಿ ವಿಧ್ವಾಂಸರು ಅದನ್ನು ಒಪ್ಪುತ್ತಿರಲಿಲ್ಲ.
ಮಾತ್ರವಲ್ಲ, ಮಕ್ಕಾ ಗೆ ತೆರಳಿದವರು ಸಂದರ್ಶಿಬೇಕಾದ ಸ್ಥಳಗಳನ್ನು ವಿವರಿಸುತ್ತಾ ಇಮಾಮ್ ನವವೀ (ರ)ಪ್ರಖ್ಯಾತ ಗ್ರಂಥವಾದ ಈಳಾಹ್ ನಲ್ಲಿ ಹೇಳುವುದನ್ನು ನೋಡಿ;
*الرابع عشرة :يستحب زيارة المواضع المشهورة بالفضل في مكة والحرم وقد قيل انها ثمانية موضعا ،منها البيت الذي ولد فيه رسول الله صلي الله عليه وسلم .*
*(كتاب الايضاح 404)*
*ಹಜ್ಜಾಜ್ ಗಳಿಗೆ ಸುನ್ನತ್ತಾದ 14 ನೇ ಕಾರ್ಯ.*
*ಮಕ್ಕಾದಲ್ಲಿರುವ ಪ್ರಸಿದ್ಧವಾದ ಸ್ಥಳಗಳನ್ನು ಸಂದರ್ಶಿಸುವುದಾಗಿದೆ.ಅದು 18 ಸ್ಥಳಗಳಿವೆ.ಅದರಲ್ಲೊಂದಾಗಿದೆ ಪುಣ್ಯ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಸ್ಥಳ.*
*(ಈಳಾಹ್ 404)*
'ಸೂಖುಲ್ಲೈಲ್' ಎಂಬ ಸ್ಥಳದಲ್ಲಿದ್ದ ಆ ಮನೆಯನ್ನು ಕೆಡವಿ ಅದರ ಬದಲು ಅಲ್ಲಿ ಒಂದು ಲೈಬ್ರರಿಯನ್ನು ಸ್ಥಾಪಿಸಲಾಗಿದೆ.
ಹಲವು ದರ್ಗಾಗಳನ್ನು,ಖುಬ್ಬಗಳನ್ನು ನೆಲಸಮ ಮಾಡಿದ ವಹ್ಹಾಬಿಗಳಿಂದ ಇದನ್ನಲ್ಲದೆ ಬೇರೆ ಏನನ್ನು ನಿರೀಕ್ಷಿಸಬಹುದು?
ಪ್ರವಾದೀ ಸಲ್ಲಲ್ಲಾಹು ಅಲೈಹಿ ಜನಿಸಿದ ಸ್ಥಳ ಪುಣ್ಯ ಸ್ಥಳವಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.
ಅದನ್ನು ಸಂದರ್ಶಿಸುವುದು ಈಮಾನಿನ ಭಾಗವಾಗಿದೆ.
ಮಕ್ಕಾ ನಿವಾಸಿಗಳು ಅದನ್ನು ಸಂದರ್ಶಿಸುತ್ತಿದ್ದರೆಂದು ಇಮಾಮರುಗಳು ಸ್ಪಷ್ಟಪಡಿಸಿದ್ದಾರೆ.
*ಮೀಲಾದ್ ರಾತ್ರಿ*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿ ಅತೀ ಮಹತ್ವವಿರುವ ರಾತ್ರಿಯಾಗಿದೆ.ಕಾರಣ ಯಾವುದೇ ರಾತ್ರಿ ಅಥವಾ ಹಗಲಿಗೆ ಮಹತ್ವವುಂಟಾಗಳು ಕಾರಣ ಆ ಸಮಯದಲ್ಲಿ ಯಾವುದಾದರೊಂದು ಕಾರ್ಯವುಂಟಾಗಿರುವುದರಿಂದಆಗಿದೆ.ಉದಾಹಣೆಗೆ ಶುಕ್ರವಾರ ದಿನಕ್ಕೆ ಮಹತ್ವ ಬರಲು ಕಾರಣ ಅಂದು ಆದಮ್ ಅಲೈಹಿಸ್ಸಲಾಮರನ್ನು ಸೃಷ್ಠಿಸಲಾಗಿದೆ ಎಂಬುವುದಾಗಿದೆ.ಇದನ್ನು
ಇಮಾಮ್ ಮುಸ್ಲಿಂ( ರ)ವರದಿ ಮಾಡಿದ 1976 ನಂಬ್ರ ಹದೀಸಿನಲ್ಲಿ ಕಾಣಬಹುದು.
*عن ابي هريرة رضي الله عنه قال قال رسول الله صلي الله عليه وسلم:خير يوم طلعت عليه الشمس يوم الجمعة فيه خلق ادم وفيه ادخل الجنة وفيه اخرج منها (مسلم )*
ಪವಿತ್ರ ರಂಝಾನ್ ಗೆ ಮಹತ್ವ ಉಂಟಾಗಲು ಕಾರಣ ಆ ತಿಂಗಳಲ್ಲಿ ಖುರ್'ಆನ್ ಅವತೀರ್ಣಗೊಂಡಿದೆ ಎಂಬುವುದಾಗಿದೆ.
ಎಲ್ಲವನ್ನೂ ಸೃಷ್ಠಿಸಲು ಕಾರಣಕರ್ತರಾದ
ಪುಣ್ಯ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿ ಲೈಲತುಲ್ ಖದ್'ರ್ ಗಿಂತಲೂ ಪುಣ್ಯ ದಿನವೆಂದು ಇಮಾಮ್ ಖಸ್ತಲ್ಲಾನೀ (ರ) ವಿವರಿಸಿದ್ದಾರೆ,
_فإن قلت: إذا قلنا بأنه عليه السلام ولد ليلا، فأيما أفضل: ليلة القدر أو ليلة مولده عليه السلام؟_
_أجيب: بأن ليلة مولده عليه السلام أفضل من ليلة القدر من وجوه ثلاثة:_
_أحدها: أن ليلة المولد ليلة ظهوره صلى الله عليه وسلم، وليلة القدر معطاة له، وما شرف بظهور ذات المشرف من أجله أشرف مما شرف بسبب ما أعطيه، ولا نزاع في ذلك، فكانت ليلة المولد أفضل من ليلة القدر._
_الثاني: أن ليلة القدر شرفت بنزول الملائكة فيها، وليلة المولد شرفت بظهوره صلى الله عليه وسلم. ومن شرفت به ليلة_ _المولد_ _أفضل ممن شرفت بهم ليلة القدر، على الأصح المرتضى، فتكون ليلة المولد أفضل._
_الثالث: أن ليلة القدر وقع فيها التفضيل على أمة محمد صلى الله عليه وسلم، وليلة المولد الشريف وقع التفضل فيها على_ _سائر الموجودات، فهو الذي بعثه الله عز وجل رحمة للعالمين،_ فعمت به النعمة على جميع_ _الخلائق، فكانت ليلة المولد أعم نفعًا، فكانت أفضل._
(المواهب اللدنية 1/136)
*ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ರಾತ್ರಿ ವೇಳೆ ಜನಿಸಿದ್ದಾರೆ.ಹಾಗಾದರೆ ಆ ರಾತ್ರಿಗಾ ಹೆಚ್ಚು ಮಹತ್ವ ?ಅಥವಾ ಲೈಲತುಲ್ ಖ'ದ್'ರ್ ಗಾ ಹೆಚ್ಚು ಮಹತ್ವ ಎಂದು ಕೇಳಿದರೆ 3 ಕಾರಣಕ್ಕೆ ಮೀಲಾದ್ ನ ರಾತ್ರಿಗೆ ಹೆಚ್ಚು ಮಹತ್ವವೆಂದು ಉತ್ತರಿಸಬಹುದು.*
*1.ಈ ರಾತ್ರಿಯಲ್ಲಿ ಜನಿಸಿದ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ನೀಡಲ್ಪಟ್ಟ ಒಂದಾಗಿದೆ ಲೈಲತುಲ್ ಖ'ದ್'ರ್.ಪ್ರವಾದೀ ಸಲ್ಲಲ್ಲಾಹು* *ಅಲೈಹಿವಸಲ್ಲಮರಿಗೆ ನೀಡಲ್ಪಟ್ಟ ಕಾರಣದಿಂದ ಆ ರಾತ್ರಿಗೆ ಮಹತ್ವ ಉಂಟಾಗಿದ್ದರೆ ಆ ಗೌರವಕ್ಕೆ ಕಾರಣ* *ಕರ್ತರಾದವರ ಪುಣ್ಯ ಹಬೀಬರ ಶರೀರ ಪ್ರತ್ಯಕ್ಷವಾದ ರಾತ್ರಿಗೆ ಯಾಗಿದೆಯಲ್ಲವೇ ಹೆಚ್ಚು ಮಹತ್ವ ?*
*ಇದರಲ್ಲಿ ಯಾವುದೇ ತರ್ಕಕ್ಕೆ ಆಸ್ಪದವಿಲ್ಲ.*
*ಆದುದರಿಂದ ಮೀಲಾದ್ ರಾತ್ರಿ ಲೈಲತುಲ್ ಖದ್ ರ್ ಗಿಂತ ಮಹತ್ವವಿರುವ ರಾತ್ರಿಯಾಗಿದೆ.*
*2.ಮಲಕುಗಳು ಇಳಿದು ಬರುವುದರಿಂದ ಲೈಲತುಲ್ ಖದ್ರ್ ಗೆ ಮಹತ್ವ ಲಭಿಸಿದೆ.ಮೀಲಾದ್ ರಾತ್ರಿಗೆ ಪ್ರವಾದೀವರ್ಯರು ಜನಿಸಿದರೆಂಬ ಕಾರಣದಿಂದಲೂ. ಪ್ರಬಲ ಅಭಿಪ್ರಾಯ ಪ್ರಕಾರ ಮಲಕ್ ಗಳಿಗಿಂತ ಶ್ರೇಷ್ಠತೆ ಪ್ರವಾದಿ ಸಲ್ಲಲ್ಲಾಹಿ ಅಲೈಹಿವಸಲ್ಲಮರಿಗೆ ಆಗಿದೆ.*
*ಆದುದರಿಂದ ಮಲಕ್ ಗಳಿಗಿಂತ ಶ್ರೇಷ್ಠರಾದ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿ ಮಲಕ್ ಗಳು ಇಳಿದು ಬರುವ ಲೈಲತುಲ್ ಖದ್ರ್ ನ ರಾತ್ರಿಗಿಂತ ಮಹತ್ವವಿರುವ ರಾತ್ರಿಯಾಯಿತು.*
*3.ಲೈಲತುಲ್ ಖದ್ರ್ ನ ಶ್ರೇಷ್ಠತೆ ಈ ಉಮ್ಮತ್ ಗೆ ಮಾತ್ರ ಸೀಮಿತವಾಗಿದೆ.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿಯ ಶ್ರೇಷ್ಠತೆ ಎಲ್ಲಾ ಸೃಷ್ಠಿಗಳಿಗೂ ಲಭ್ಯವಾಗಿದೆ.ಆದುದರಿಂದ ಈ ರಾತ್ರಿಯೂ ಲೈಲತುಲ್ ಖದ್ರ್ ನ ರಾತ್ರಿಗಿಂತಲೂ ಮಹತ್ವವಿರುವ ರಾತ್ರಿಯಾಯಿತು.*
*(ಅಲ್ ಮವಾಹಿಬುಲ್ಲದುನ್ನಿಯ್ಯ 1/136)*
ಇಮಾಮ್ ಶರ್'ವಾನಿ(ರ) ಬರೆಯುತ್ತಾರೆ;
*وان افضل الليالي ليلة المولد الشريف ،ثم ليلة القدر ،ثم ليلة الجمعة ،ثم ليلة الاسراء هذا* *بالنسبة لنا واما بالنسبة له* ﷺ
*فليلة الاسراء افضل الليالي؛لانه رأى فيها ربه بعيني رأسه علي الصحيح* (شرواني 2/405)
*ರಾತ್ರಿಗಳ ಪೈಕಿ ಅತೀ ಶ್ರೇಷ್ಟವಾದ ರಾತ್ರಿ ಪ್ರವಾದೀ ﷺ ಜನಿಸಿದ ರಾತ್ರಿಯಾಗಿದೆ. ನಂತರ ಲೈಲತುಲ್ ಖದ್ರ್ ತದ ನಂತರ ಶುಕ್ರವಾರ ರಾತ್ರಿ ಹಾಗೂ ಆಮೇಲೆ ಇಸ್ರಾ ನಡೆದ ರಾತ್ರಿಯೂ ಆಗಿದೆ. ಈ ಹೇಳಿದ್ದು ನಮ್ಮನ್ನು ಅಪೇಕ್ಷಿಸಿಯಾಗಿದೆ. ಪ್ರವಾದೀ ﷺ ರನ್ನು ಅಪೇಕ್ಷಿಸಿ ಶ್ರೇಷ್ಟವಾದ ರಾತ್ರಿ ಇಸ್ರಾ ರಾತ್ರಿಯಾಗಿದೆ. ಕಾರಣ ಅಲ್ಲಾಹನನ್ನು ದರ್ಶಿಸಿದ ರಾತ್ರಿಯಾಗಿದೆ ಇಸ್ರಾ ರಾತ್ರಿ.*
(ಶರ್'ವಾನಿ 2/405)
ಅದೇ ರೀತಿ ಶರ್'ವಾನಿಯ 3/462 ರಲ್ಲೂ ಕಾಣಬಹುದಾಗಿದೆ.
*-------------------------------------------*
ಇಮಾಮ್ ಬರೂಸವೀ (ರ)ಹೇಳುತ್ತಾರೆ;
*وافضل الليالي ليلة المولد المحمدي لولاه ما نزل القرأن ولا نعتت ليلة القدر وهو الاصح*
(روح البيان 6/360)
*ಅತೀ ಶ್ರೇಷ್ಟವಾದ ರಾತ್ರಿ ಮೀಲಾದ್ ರಾತ್ರಿಯಾಗಿದೆ. ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಇಲ್ಲದಿದ್ದರೆ ಖುರ್'ಆನ್ ಇರುತ್ತಿರಲಿಲ್ಲ, ಲೈಲತುಲ್ ಖದ್ರ್'ಗೆ ಮಹತ್ವ ಲಭಿಸುತ್ತಿರಲಿಲ್ಲ.*
(ರೂಹುಲ್ ಬಯಾನ್ 6/340)
*------------------------------------------*
*ಜನ್ಮ ದಿನ ಆಚರಣೆ*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮ ನಮಗೆ ಅಲ್ಲಾಹನು ನೀಡಿದ ಸೌಭಾಗ್ಯವಾಗಿದೆ.
ಆ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಬೇಕಾದದ್ದು ಸತ್ಯ ವಿಶ್ವಾಸಿಯ ಕರ್ತವ್ಯವಾಗಿದೆ.
ಅವರ ಜನ್ಮ ದಿನ ಆಚರಿಸುವುದು, ಆ ದಿನದಂದು ಸಂತೋಷಪಡುವುದು ಕೂಡಾ ಈಮಾನ್ ಇರುವ ಮನುಷ್ಯನ ಭಾಧ್ಯತೆ ಆಗಿದೆ.
ಇಮಾಮ್ ಸುಯೂಥೀ (ರ) ಹೇಳುತ್ತಾರೆ,
_وقد ظهر لي تخريجه على_ _أصل آخر ، وهو ما_ _أخرجه البيهقي عن أنس أن النبي صلى الله عليه وسلم عق عن نفسه بعد النبوة مع أنه قد ورد أن جده عبد المطلب عق عنه في سابع ولادته ، والعقيقة لا تعاد مرة ثانية ، فيحمل ذلك على أن_ _الذي فعله النبي صلى الله عليه وسلم إظهار للشكر على إيجاد الله إياه رحمة للعالمين وتشريع لأمته كما كان يصلي على نفسه لذلك ، فيستحب لنا أيضا إظهار_ _الشكر بمولده بالاجتماع وإطعام الطعام ونحو ذلك من وجوه القربات وإظهار المسرات_
(الحاوي للفتاوي 1/196)
_ಜನ್ಮ ದಿನ ಆಚರಣೆಗೆ ನಾನು ಮತ್ತೊಂದು ಆಧಾರವನ್ನು ಕಂಡು_ _ಹಿಡಿದಿದ್ದೇನೆ. ಅನಸ್ (ರ)ರಿಂದ ಇಮಾಮ್ ಬೈಹಖೀ (ರ) ವರದಿ ಮಾಡಿದ ಹದೀಸಿನಲ್ಲಿ ನುಬುವ್ವತ್ ನ ನಂತರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಅಖೀಖ ನೀಡಿದರು ಎಂದು ವರದಿಯಾಗಿದೆ. ಪ್ರವಾದೀ_ _ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಏಳನೇ ದಿನದಂದು ಅಜ್ಜ ಅಬ್ದುಲ್ ಮುತ್ತಲಿಬ್ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಅಖೀಖ ನೀಡಿದ ಬಗ್ಗೆ ಸ್ಥಿರಪಟ್ಟಿದೆ. ಅಖೀಖ_ _ಎರಡೆರಡು ಬಾರಿ ಕೊಡುವಂತದ್ದಲ್ಲ. ಆದುದರಿಂದ ಪ್ರಪಂಚಕ್ಕನುಗ್ರಹವಾಗಿ ತನ್ನನ್ನು ಸೃಷ್ಠಿಸಲ್ಪಟ್ಟಿದ್ದಕ್ಕೆ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ಭಾಗವಾಗಿ ತನ್ನ_ _ಸಮುದಾಯವನ್ನು ಕಲಿಸಿ ಕೊಡಲು ಅವರು ದ್ಸಬಹ್ ಮಾಡಿ ಕೊಟ್ಟಿದ್ದಾರೆ ಎಂದು ತಿಳಿದುಕೊಳ್ಳಬಹುದು. ಅದೇ ಉದ್ದೇಶಕ್ಕಾಗಿ ಅವರು ತನ್ನ ಮೆಲೇಯೇ ಸ್ವಲಾತ್_ _ಹೇಳುತ್ತಿದ್ದರು._
_ಒಟ್ಟಿನಲ್ಲಿ ಎಲ್ಲರೂ ಒಟ್ಟು ಸೇರಿ ಅನ್ನ ದಾನ ನಡೆಸಿಯೂ_ _ಹಾಗೂ ಇನ್ನಿತರ ಆರಾಧಾನ ಕರ್ಮಗಳ ಮೂಲಕವೂ ಪ್ರವಾದೀ ಸಲ್ಲಲ್ಲಾಹು_ ಅಲೈಹಿವಸಲ್ಲಮರ ಜನನಕ್ಕೆ ಕೃತಜ್ಞತೆ ಸಲ್ಲಿಸುವುದು ಮತ್ತು ಸಂತೋಷಪಡುವುದು ಸುನ್ನತ್ ಆಗಿದೆ._
(ಅಲ್ ಹಾವೀ ಲಿಲ್ ಫತಾವ 1/196)
*------------------------------------------*
ಇಮಾಮ್ ಸುಯೂಥಿಯ ಪ್ರಸ್ತುತ ಮಾತನ್ನು ನಂತರದ ಎಲ್ಲಾ ಉಲಮಾ ಅಂಗೀಕರಿಸಿದ್ದಾರೆ.
ಪ್ರಶಸ್ತ ಕರ್ಮ ಶಾಸ್ತ್ರ ವಿದ್ವಾಂಸರಾದ ಇಮಾಮ್ ಇಬ್ನ್ ಖಾಸಿಮ್ (ರ) ಹೇಳುತ್ತಾರೆ;
*وقد أطال في إيضاح الاحتجاج لكون المولد محمودا مثابا عليه بشرطه مع إيضاح الرد على من خالف في ذلك بما ينبغي استفادته وجعل ذلك كله مؤلفا سماه حسن المقصد في عمل المولد فجزاه الله تعالى ما هو أهله(حاشية ابن قاسم 7/425)*
*ಕೆಲವು ನಿಬಂಧನೆಗಳ ಮೂಲಕ ಮೀಲಾದ್ ಆಚರಣೆ ಸ್ತುತ್ಯರ್ಹವೂ ಪ್ರತಿಫಾಲರ್ಹವೆಂದು ದೃಢಪಡಿಸಲು ಇಮಾಮ್ ಸುಯೂಥೀ (ರ) ಸವಿಸ್ತಾರವಾಗಿ ಬರೆದಿದ್ದಾರೆ. ಅದನ್ನು ವಿರೋಧಿಸಿದವರಿಗೆ ಖಂಡನೆಯನ್ನೂ ಬರೆದಿದ್ದಾರೆ. ಅದಕ್ಕಾಗಿ ಅವರು "ಹುಸ್ನುಲ್ ಮಖ್'ಸಿದ್ ಫೀ ಅಮಲಿಲ್ ಮೌಲಿದ್" ಎಂಬ ಹೆಸರಲ್ಲಿ ಒಂದು ಗ್ರಂಥವನ್ನು ಕ್ರೋಡೀಕರಿಸಿದರು. ಅವರ ಈ ಕೆಲಸಕ್ಕೆ ಅಲ್ಲಾಹನು ಪ್ರತಿಫಲ ನೀಡಲಿ.*
(ಹಾಶಿತಯತು ಇಬ್ನಿ ಖಾಸಿಮ್ 7/425)
ಇದೇ ರೀತಿ ಶರ್ವಾನಿ 7/425 ರಲ್ಲೂ ಕಾಣಬಹುದಾಗಿದೆ.
*------------------------------------------*
ಇಮಾಮ್ ಸುಯೂಥಿ (ರ) ಇಲ್ಲಿ (ಜನ್ಮ ದಿನಾಚರಣೆಗೆ ಪುರಾವೆ ನೀಡಿ) ಬಿದ್ ಅತ್ ಪ್ರಚಾರ ಪಡಿಸಿರುವುದಾದರೆ ನಂತರದ ವಿದ್ವಾಂಸರು ಅದನ್ನು ಒಪ್ಪುತ್ತಿರಲಿಲ್ಲ.
ತಪ್ಪು ಯಾರೇ ಹೇಳಿದರೂ ಅದನ್ನು ಮುಖ ನೋಡದೆ ವಿಮರ್ಶಿಸುವುದು ಇಮಾಮರುಗಳ ಶೈಲಿಯಾಗಿದೆ., ಆದರೂ ಅವರು ಇದನ್ನು ವಿಮರ್ಶಿಸಿಲ್ಲ. ಮಾತ್ರವಲ್ಲ ಅದಕ್ಕೆ ಬೆಂಬಲವನ್ನೇ ಸೂಚಿಸಿದ್ದಾರೆ.
*ಬಾಕಿ 2 ನೇ ಭಾಗದಲ್ಲಿ ಓದಿರಿ*
Monday, November 12, 2018
*♦♦ಸಹಸ್ರಾಯುಷಿ ಆಮೆ♦♦*
✒ಯೂಸುಪ್ ನಬ್ಹಾನೀ ಕುಕ್ಕಾಜೆ.
▪ಆಮೆ ಸುಮಾರು ಮುನ್ನೂರರಿಂದ ನಾನೂರು ವರ್ಷಗಳ ತನಕ ಬದುಕುವ ಒಂದು ವಿಶೇಷ ಜೀವಿಯಾಗಿದೆ. ಮಾತ್ರವಲ್ಲ ಕೆಲವು ಜಾತಿಯ ಆಮೆಗಳು ಒಂದು ಸಾವಿರ ವರ್ಷ ತನಕವೂ ಬದುಕುತ್ತದೆ. *"ಅವನಿಗೆ ಆಮೆಯ ಆಯುಷ್ಯವಿದೆ" ಎಂದು ನಮ್ಮ ಹಿರಿಯಂದಿರು ಹೇಳುತ್ತಿದ್ದದ್ದು ನಿಜಕ್ಕೂ ಸತ್ಯ*
▪ಆಮೆ ಮೊಟ್ಟೆಯಿಡುವ ಒಂದು ಜೀವಿ. ಆದರೆ ತಾನಿಟ್ಟ ಮೊಟ್ಟೆಗೆ ಅದರ ಮೇಲೆ ಕುಳಿತು ಕಾವು ಕೊಡುವ ಭಾಗ್ಯ ಈ ಆಮೆಗಿಲ್ಲ.. ಯಾಕೆಂದರೆ ಆಮೆಯ ಅಡಿ ಭಾಗದ ಚರ್ಮಕ್ಕೆ ಗರಗಸದ ಹಲ್ಲಿನಂತೆ ಹಲ್ಲಿದ್ದು ಅದು ಬಹಳ ಗಡಸುತನದಿಂದ ಕೂಡಿದೆ. ಆಮೆ ಮೊಟ್ಟೆಯ ಮೇಲೆ ಕುಳಿತರೆ ಮೊಟ್ಟೆ ಒಡೆಯುವ ಸಾದ್ಯತೆ ಇರುವುದರಿಂದ ಅಲ್ಲಾಹನು ಇದಕ್ಕೆ ಬೇರೆಯೇ ಸಾಮರ್ಥ್ಯವನ್ನು ಕೊಟ್ಟಿದ್ದಾನೆ. ಬಹಳ ಬಲಿಷ್ಠವಾದ ಲೇಸರ್ ಶಕ್ತಿ ಇರುವ ಎರಡು ಕಣ್ಣು ಇದಕ್ಕಿದೆ. ತನ್ನ ಈ ಎರಡು ಕಣ್ಣಿಗಳಿಂದ ಮೊಟ್ಟೆಯನ್ನು ಒಂದೇ ರೇಖೆಯಲ್ಲಿ ತುಂಬಾ ಸಮಯ ನೋಡುತ್ತದೆ. ತನ್ನ ಕಣ್ಣಿನಿಂದ ಹರಿಯುವ ಶಕ್ತಿಯುತ ಕಿರಣ ಮೊಟ್ಟೆಯ ಒಂದೇ ಕೇಂದ್ರದಲ್ಲಿ ಬೀಳುವಾಗ ಮೊಟ್ಟೆ ತಾನಾಗಿಯೇ ಬಿಸಿಯಾಗಿ ಒಡೆಯುತ್ತದೆ...!!
▪ಆಮೆಯು ಎಂತಹಾ ವಿಷಕಾರಿ ಹಾವನ್ನೂ ಕೊಂದು ತಿನ್ನುತ್ತದೆ. ಬೇರೆ ಪಕ್ಷಿ, ಪ್ರಾಣಿ, ಕೀಟ ಎಲ್ಲವನ್ನು ತಿನ್ನುವುದಾದರೂ ಹಾವುಗಳು ಇದರ ಅಚ್ಚುಮೆಚ್ಚಿನ ಆಹಾರವಾಗಿದೆ. ವಿಷ ಆಹಾರವನ್ನು ತಿಂದ ಕೂಡಲೇ ತಿಂದ ವಿಷದಿಂದ ಶರಿರಕ್ಕೆ ತೊಂದರೆ ಆಗದಿರಲು ತೋಡು, ಕೆರೆ, ನದಿಯ ದಡಗಳಲ್ಲಿ ಕಾಣಸಿಗುವ "ಸಾತರ್ ಗಿಡದ(Thyme) ಎಲೆಯನ್ನು ತಿನ್ನುತ್ತದೆ. ಎಂತಹಾ ಹಾನಿಕರ ವಿಷವನ್ನೂ ಹುಸಿ ಮಾಡುವ ಶಕ್ತಿ ಈ ಗಿಡಕ್ಕಿದೆ. ನೀರಿನಲ್ಲೂ ದಡದಲ್ಲೂ ಬದುಕುವ ಈ ಜೀವಿ ತೋಡು , ಕೆರೆ, ಹಳ್ಳ ಮುಂತಾದೆಡೆಗಳಲ್ಲಿ ನೀರಿಗೆ ಹೊಂದಿಕೊಂಡು ದಡದಲ್ಲಿ ಹೊಂಡ ಮಾಡಿ ಅವಿತು ಕುಳಿತಿರುತ್ತದೆ. ನೀರು ಕುಡಿಯಲು ಬರುವ ಪಕ್ಷಿಗಳನ್ನು ನಿರಾಯಾಸ ಹಿಡಿದು ತಿನ್ನುತ್ತದೆ. ದೊಡ್ಡ ಪಕ್ಷಿಯಾದರೆ ಹಿಡಿದ ಹಿಡಿತದಲ್ಲಿ ಸಾಯದಿದ್ದರೆ ನೀರಿನಲ್ಲಿ ಸಾಯುವ ತನಕ ಮುಳುಗಿಸಿಡುತ್ತದೆ.
▪ಗಂಡಾದರೂ ಹೆಣ್ಣಾದರೂ ಎರಡು ಜನನೇಂದ್ರಿಯವಿರುವ ಒಂದು ಅಪೂರ್ವ ಜೀವಿಯಾಗಿದೆ ಆಮೆ. ಇದರ ಶರಿರವನ್ನು ಎಲ್ಲಾ ಅನಾಹುತಗಳಿಂದ ಬಚಾವು ಮಾಡುವ ಬಹಳ ಬಲಿಷ್ಠವಾದ ಒಂದು ಕವಚ ಕೂಡ ಇದರ ದೇಹವನ್ನು ಆವರಿಸಿದೆ. ಒಬ್ಬ ವ್ಯಕ್ತಿ ದೊಡ್ಡ ಆಮೆಯ ಮೇಲೆ ನಿಂತರೆ ಆಮೆಗೆ ಏನೂ ತೊಂದರೆಯಾಗದು.
▪ಪಿತ್ತಕೋಶ ಸಂಬಂಧಿಸಿದ ಖಾಯಿಲೆ ಇರುವವನು ಇದರ ಪಿತ್ತಕೋಶವನ್ನು ಹಸಿಯಾಗಿಯೇ ತಿಂದರೆ ಖಾಯಿಲೆ ವಾಸಿಯಾಗುವುದಲ್ಲದೆ ಜೀವನಪರ್ಯಂತ ಆ ರೋಗ ಮತ್ತೆಂದಿಗೂ ಮರುಕಳಿಸದು.
▪ಗಂಟುನೋವು, ಸಂಧಿನೋವು, ಸ್ನಾಯುಗಳ ಎಳೆತ,ಸ್ನಾಯು ಹಿಡಿದು ಕೊಳ್ಳುವುದು ಇತ್ಯಾದಿ ಖಾಯಿಲೆ ಇರುವವರು ಇದರ ರಕ್ತವನ್ನು ಅಲ್ಲಿಗೆ ಕೆಲವು ದಿನಗಳ ಕಾಲ ಲೇಪಿಸಿದರೆ ರೋಗ ಸಂಪೂರ್ಣ ವಾಸಿಯಾಗುವುದು.
▪ಯಾವುದೇ ಚಿಕಿತ್ಸೆ ಮಾಡಿ ಫಲ ಕಾಣದ ಕಾಲಿನ ಹಿಮ್ಮಡಿ (ಮಡಂಬು) ಸೀಳುವ ರೋಗವಿರುವವರಿಗೆ ಕಡಲಾಮೆಯ ಕವಚವನ್ನು ಸುಟ್ಟು ಅದರ ಬೂದಿಯನ್ನು ಮೊಟ್ಟೆಯ ಒಳಗಿನ ಬಿಳಿ ಪದಾರ್ಥದೊಂದಿಗೆ ಮಿಶ್ರಣ ಮಾಡಿ ಅದನ್ನು ಸೀಳಿದ ಜಾಗಕ್ಕೆ ಕೆಲವು ದಿನಗಳು ಹಚ್ಚಿದರೆ ಈ ಖಾಯಿಲೆ ಬೆಟ್ಟ ಹತ್ತುತ್ತದೆ. ಮಾತ್ರವಲ್ಲ ಈ ಖಾಯಿಲೆಗೆ ಇದೊಂದು ಸಿದ್ದ ಔಷದಿ ಕೂಡ ಆಗಿದೆ.
▪ಆಮೆಯ ಕವಚವನ್ನು ತೆಗೆದು ನಾವು ಆಹಾರ ಪದಾರ್ಥಗಳನ್ನು ಬಿಸಿ ಮಾಡುವಾಗ ಪಾತ್ರೆಯ ಮುಚ್ಚಳಕ್ಕೆ ಬದಲು ಇದರಿಂದ ಮುಚ್ಚಿಟ್ಟರೆ ಹಾಲು ಸಮೇತ ಯಾವ ಆಹಾರ ಪದಾರ್ಥಗಳೂ ಕುದಿದು ಪಾತ್ರೆಯಿಂದ ಹೊರಗೆ ಬಾರದು.
▪ ತಲೆಯಲ್ಲಿ ಹೇನಿರುವವರಿಗೆ ಕಡಲಾಮೆಯ ಕವಚದಿಂದ ಮಾಡಿದ ಬಾಚಣಿಗೆಯಲ್ಲಿ ತಲೆ ಬಾಚುವುದರಿಂದ ಹೇನು ಸಂಪೂರ್ಣ ಹೋಗುತ್ತದೆ. ನಬಿ (ಸಲ್ಲಲ್ಲಾಹು ಅಲೈಹಿ ವಸಲ್ಲಮ್ ) ತಂಙಳ್'ರವರಲ್ಲಿ ಕಡಲಾಮೆಯ ಕವಚದಿಂದ ಮಾಡಿದ ಬಾಚಣಿಗೆ ಇತ್ತು. ಮಾತ್ರವಲ್ಲ ತನ್ನ ಮುದ್ದಿನ ಕಂದೆ ಫಾತಿಮಾ ಬೀವಿ (ರ) ರವರಿಗೆ ಆಮೆಯ ಕವಚದಿಂದ ಮಾಡಿದ ಎರಡು ಕೈಬಳೆ ಮಾರುಕಟ್ಟೆಯಿಂದ ತರಬೇಕೆಂದು ಸಹಾಬಿಯಾದ "ಸವ್ ಬಾನ್" (ರ) ರವರಲ್ಲಿ ಹೇಳಿದ್ದಾಗಿ ಇಮಾಮ್ ಅಹ್ಮದ್ (ರ) ರವರು ವರದಿ ಮಾಡಿದ್ದಾರೆ..
▪ಆಮೆಯ ಮಾಂಸವನ್ನು ತಿನ್ನುವ ಕನಸು ಕಂಡರೆ ದೊಡ್ಡ ಪಂಡಿತನಾಗುವ ಮತ್ತು ಶ್ರೀಮಂತನಾಗುವ ಲಕ್ಷಣವಾಗಿದೆ.
▪ಕಡಲಾಮೆಯನ್ನು ಕನಸು ಕಂಡರೆ ಅವನ ಮುಂದಿನ ವರ್ಷ ಐಶ್ವರ್ಯ ಭರಿತ ವಾಗಿರುತ್ತದೆ. ಹಾಗೆಯೇ ಶತ್ರುಗಳಿದ್ದರೆ ಅವರ ಉಪದ್ರವದಿಂದ ಬಚಾವು ಆಗುವುದರ ನಿಶಾನೆಯಾಗಿದೆ.
▪ಆಮೆಯ ಮಾಂಸವನ್ನು ತಿನ್ನುವುದು ಮತ್ತು ಕಾರಣವಿಲ್ಲದೆ ಆಮೆಯನ್ನು ಕೊಲ್ಲುವುದೂ ನಿಷಿದ್ದ.
ಸಂಗ್ರಹ: ಇಮಾಮ್ ಖಝ್ವೀನಿಯವರ *ಅಜಾಯಿಬುಲ್ ಮಖ್ಲೂಕಾತ್* ಮತ್ತು ಇಮಾಮ್ ದುಮೈರಿಯವರ *ಹಯಾತುಲ್ ಹಯವಾನ್* ಎಂಬ ಗ್ರಂಥ.
✒ಯೂಸುಪ್ ನಬ್ಹಾನೀ ಕುಕ್ಕಾಜೆ.
▪ಆಮೆ ಸುಮಾರು ಮುನ್ನೂರರಿಂದ ನಾನೂರು ವರ್ಷಗಳ ತನಕ ಬದುಕುವ ಒಂದು ವಿಶೇಷ ಜೀವಿಯಾಗಿದೆ. ಮಾತ್ರವಲ್ಲ ಕೆಲವು ಜಾತಿಯ ಆಮೆಗಳು ಒಂದು ಸಾವಿರ ವರ್ಷ ತನಕವೂ ಬದುಕುತ್ತದೆ. *"ಅವನಿಗೆ ಆಮೆಯ ಆಯುಷ್ಯವಿದೆ" ಎಂದು ನಮ್ಮ ಹಿರಿಯಂದಿರು ಹೇಳುತ್ತಿದ್ದದ್ದು ನಿಜಕ್ಕೂ ಸತ್ಯ*
▪ಆಮೆ ಮೊಟ್ಟೆಯಿಡುವ ಒಂದು ಜೀವಿ. ಆದರೆ ತಾನಿಟ್ಟ ಮೊಟ್ಟೆಗೆ ಅದರ ಮೇಲೆ ಕುಳಿತು ಕಾವು ಕೊಡುವ ಭಾಗ್ಯ ಈ ಆಮೆಗಿಲ್ಲ.. ಯಾಕೆಂದರೆ ಆಮೆಯ ಅಡಿ ಭಾಗದ ಚರ್ಮಕ್ಕೆ ಗರಗಸದ ಹಲ್ಲಿನಂತೆ ಹಲ್ಲಿದ್ದು ಅದು ಬಹಳ ಗಡಸುತನದಿಂದ ಕೂಡಿದೆ. ಆಮೆ ಮೊಟ್ಟೆಯ ಮೇಲೆ ಕುಳಿತರೆ ಮೊಟ್ಟೆ ಒಡೆಯುವ ಸಾದ್ಯತೆ ಇರುವುದರಿಂದ ಅಲ್ಲಾಹನು ಇದಕ್ಕೆ ಬೇರೆಯೇ ಸಾಮರ್ಥ್ಯವನ್ನು ಕೊಟ್ಟಿದ್ದಾನೆ. ಬಹಳ ಬಲಿಷ್ಠವಾದ ಲೇಸರ್ ಶಕ್ತಿ ಇರುವ ಎರಡು ಕಣ್ಣು ಇದಕ್ಕಿದೆ. ತನ್ನ ಈ ಎರಡು ಕಣ್ಣಿಗಳಿಂದ ಮೊಟ್ಟೆಯನ್ನು ಒಂದೇ ರೇಖೆಯಲ್ಲಿ ತುಂಬಾ ಸಮಯ ನೋಡುತ್ತದೆ. ತನ್ನ ಕಣ್ಣಿನಿಂದ ಹರಿಯುವ ಶಕ್ತಿಯುತ ಕಿರಣ ಮೊಟ್ಟೆಯ ಒಂದೇ ಕೇಂದ್ರದಲ್ಲಿ ಬೀಳುವಾಗ ಮೊಟ್ಟೆ ತಾನಾಗಿಯೇ ಬಿಸಿಯಾಗಿ ಒಡೆಯುತ್ತದೆ...!!
▪ಆಮೆಯು ಎಂತಹಾ ವಿಷಕಾರಿ ಹಾವನ್ನೂ ಕೊಂದು ತಿನ್ನುತ್ತದೆ. ಬೇರೆ ಪಕ್ಷಿ, ಪ್ರಾಣಿ, ಕೀಟ ಎಲ್ಲವನ್ನು ತಿನ್ನುವುದಾದರೂ ಹಾವುಗಳು ಇದರ ಅಚ್ಚುಮೆಚ್ಚಿನ ಆಹಾರವಾಗಿದೆ. ವಿಷ ಆಹಾರವನ್ನು ತಿಂದ ಕೂಡಲೇ ತಿಂದ ವಿಷದಿಂದ ಶರಿರಕ್ಕೆ ತೊಂದರೆ ಆಗದಿರಲು ತೋಡು, ಕೆರೆ, ನದಿಯ ದಡಗಳಲ್ಲಿ ಕಾಣಸಿಗುವ "ಸಾತರ್ ಗಿಡದ(Thyme) ಎಲೆಯನ್ನು ತಿನ್ನುತ್ತದೆ. ಎಂತಹಾ ಹಾನಿಕರ ವಿಷವನ್ನೂ ಹುಸಿ ಮಾಡುವ ಶಕ್ತಿ ಈ ಗಿಡಕ್ಕಿದೆ. ನೀರಿನಲ್ಲೂ ದಡದಲ್ಲೂ ಬದುಕುವ ಈ ಜೀವಿ ತೋಡು , ಕೆರೆ, ಹಳ್ಳ ಮುಂತಾದೆಡೆಗಳಲ್ಲಿ ನೀರಿಗೆ ಹೊಂದಿಕೊಂಡು ದಡದಲ್ಲಿ ಹೊಂಡ ಮಾಡಿ ಅವಿತು ಕುಳಿತಿರುತ್ತದೆ. ನೀರು ಕುಡಿಯಲು ಬರುವ ಪಕ್ಷಿಗಳನ್ನು ನಿರಾಯಾಸ ಹಿಡಿದು ತಿನ್ನುತ್ತದೆ. ದೊಡ್ಡ ಪಕ್ಷಿಯಾದರೆ ಹಿಡಿದ ಹಿಡಿತದಲ್ಲಿ ಸಾಯದಿದ್ದರೆ ನೀರಿನಲ್ಲಿ ಸಾಯುವ ತನಕ ಮುಳುಗಿಸಿಡುತ್ತದೆ.
▪ಗಂಡಾದರೂ ಹೆಣ್ಣಾದರೂ ಎರಡು ಜನನೇಂದ್ರಿಯವಿರುವ ಒಂದು ಅಪೂರ್ವ ಜೀವಿಯಾಗಿದೆ ಆಮೆ. ಇದರ ಶರಿರವನ್ನು ಎಲ್ಲಾ ಅನಾಹುತಗಳಿಂದ ಬಚಾವು ಮಾಡುವ ಬಹಳ ಬಲಿಷ್ಠವಾದ ಒಂದು ಕವಚ ಕೂಡ ಇದರ ದೇಹವನ್ನು ಆವರಿಸಿದೆ. ಒಬ್ಬ ವ್ಯಕ್ತಿ ದೊಡ್ಡ ಆಮೆಯ ಮೇಲೆ ನಿಂತರೆ ಆಮೆಗೆ ಏನೂ ತೊಂದರೆಯಾಗದು.
▪ಪಿತ್ತಕೋಶ ಸಂಬಂಧಿಸಿದ ಖಾಯಿಲೆ ಇರುವವನು ಇದರ ಪಿತ್ತಕೋಶವನ್ನು ಹಸಿಯಾಗಿಯೇ ತಿಂದರೆ ಖಾಯಿಲೆ ವಾಸಿಯಾಗುವುದಲ್ಲದೆ ಜೀವನಪರ್ಯಂತ ಆ ರೋಗ ಮತ್ತೆಂದಿಗೂ ಮರುಕಳಿಸದು.
▪ಗಂಟುನೋವು, ಸಂಧಿನೋವು, ಸ್ನಾಯುಗಳ ಎಳೆತ,ಸ್ನಾಯು ಹಿಡಿದು ಕೊಳ್ಳುವುದು ಇತ್ಯಾದಿ ಖಾಯಿಲೆ ಇರುವವರು ಇದರ ರಕ್ತವನ್ನು ಅಲ್ಲಿಗೆ ಕೆಲವು ದಿನಗಳ ಕಾಲ ಲೇಪಿಸಿದರೆ ರೋಗ ಸಂಪೂರ್ಣ ವಾಸಿಯಾಗುವುದು.
▪ಯಾವುದೇ ಚಿಕಿತ್ಸೆ ಮಾಡಿ ಫಲ ಕಾಣದ ಕಾಲಿನ ಹಿಮ್ಮಡಿ (ಮಡಂಬು) ಸೀಳುವ ರೋಗವಿರುವವರಿಗೆ ಕಡಲಾಮೆಯ ಕವಚವನ್ನು ಸುಟ್ಟು ಅದರ ಬೂದಿಯನ್ನು ಮೊಟ್ಟೆಯ ಒಳಗಿನ ಬಿಳಿ ಪದಾರ್ಥದೊಂದಿಗೆ ಮಿಶ್ರಣ ಮಾಡಿ ಅದನ್ನು ಸೀಳಿದ ಜಾಗಕ್ಕೆ ಕೆಲವು ದಿನಗಳು ಹಚ್ಚಿದರೆ ಈ ಖಾಯಿಲೆ ಬೆಟ್ಟ ಹತ್ತುತ್ತದೆ. ಮಾತ್ರವಲ್ಲ ಈ ಖಾಯಿಲೆಗೆ ಇದೊಂದು ಸಿದ್ದ ಔಷದಿ ಕೂಡ ಆಗಿದೆ.
▪ಆಮೆಯ ಕವಚವನ್ನು ತೆಗೆದು ನಾವು ಆಹಾರ ಪದಾರ್ಥಗಳನ್ನು ಬಿಸಿ ಮಾಡುವಾಗ ಪಾತ್ರೆಯ ಮುಚ್ಚಳಕ್ಕೆ ಬದಲು ಇದರಿಂದ ಮುಚ್ಚಿಟ್ಟರೆ ಹಾಲು ಸಮೇತ ಯಾವ ಆಹಾರ ಪದಾರ್ಥಗಳೂ ಕುದಿದು ಪಾತ್ರೆಯಿಂದ ಹೊರಗೆ ಬಾರದು.
▪ ತಲೆಯಲ್ಲಿ ಹೇನಿರುವವರಿಗೆ ಕಡಲಾಮೆಯ ಕವಚದಿಂದ ಮಾಡಿದ ಬಾಚಣಿಗೆಯಲ್ಲಿ ತಲೆ ಬಾಚುವುದರಿಂದ ಹೇನು ಸಂಪೂರ್ಣ ಹೋಗುತ್ತದೆ. ನಬಿ (ಸಲ್ಲಲ್ಲಾಹು ಅಲೈಹಿ ವಸಲ್ಲಮ್ ) ತಂಙಳ್'ರವರಲ್ಲಿ ಕಡಲಾಮೆಯ ಕವಚದಿಂದ ಮಾಡಿದ ಬಾಚಣಿಗೆ ಇತ್ತು. ಮಾತ್ರವಲ್ಲ ತನ್ನ ಮುದ್ದಿನ ಕಂದೆ ಫಾತಿಮಾ ಬೀವಿ (ರ) ರವರಿಗೆ ಆಮೆಯ ಕವಚದಿಂದ ಮಾಡಿದ ಎರಡು ಕೈಬಳೆ ಮಾರುಕಟ್ಟೆಯಿಂದ ತರಬೇಕೆಂದು ಸಹಾಬಿಯಾದ "ಸವ್ ಬಾನ್" (ರ) ರವರಲ್ಲಿ ಹೇಳಿದ್ದಾಗಿ ಇಮಾಮ್ ಅಹ್ಮದ್ (ರ) ರವರು ವರದಿ ಮಾಡಿದ್ದಾರೆ..
▪ಆಮೆಯ ಮಾಂಸವನ್ನು ತಿನ್ನುವ ಕನಸು ಕಂಡರೆ ದೊಡ್ಡ ಪಂಡಿತನಾಗುವ ಮತ್ತು ಶ್ರೀಮಂತನಾಗುವ ಲಕ್ಷಣವಾಗಿದೆ.
▪ಕಡಲಾಮೆಯನ್ನು ಕನಸು ಕಂಡರೆ ಅವನ ಮುಂದಿನ ವರ್ಷ ಐಶ್ವರ್ಯ ಭರಿತ ವಾಗಿರುತ್ತದೆ. ಹಾಗೆಯೇ ಶತ್ರುಗಳಿದ್ದರೆ ಅವರ ಉಪದ್ರವದಿಂದ ಬಚಾವು ಆಗುವುದರ ನಿಶಾನೆಯಾಗಿದೆ.
▪ಆಮೆಯ ಮಾಂಸವನ್ನು ತಿನ್ನುವುದು ಮತ್ತು ಕಾರಣವಿಲ್ಲದೆ ಆಮೆಯನ್ನು ಕೊಲ್ಲುವುದೂ ನಿಷಿದ್ದ.
ಸಂಗ್ರಹ: ಇಮಾಮ್ ಖಝ್ವೀನಿಯವರ *ಅಜಾಯಿಬುಲ್ ಮಖ್ಲೂಕಾತ್* ಮತ್ತು ಇಮಾಮ್ ದುಮೈರಿಯವರ *ಹಯಾತುಲ್ ಹಯವಾನ್* ಎಂಬ ಗ್ರಂಥ.
Subscribe to:
Comments (Atom)