*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
ಭಾಗ --14
📝 _ಮುನೀರ್ ಸಖಾಫಿ ಸಾಲೆತ್ತೂರು_
_*ಸೂತ್ರ 13:*_
*ಮನೆ ಕಟ್ಟಿದ ಜಾಗ ಮತ್ತು ಮನೆಗೆ ಉಪಯೋಗಿಸಿದ ಹಣ ಹಲಾಲ್ ಆಗಿರಲಿ*
ಭೂಮಿ ಅಲ್ಲಾಹನದ್ದಾಗಿದೆ.ಭೂಮಿ ವಿಶಾಲವಾಗಿದೆ.ಮನುಷ್ಯ ಈ ಲೋಕದಲ್ಲಿ ತಾತ್ಕಲಿಕವಾಗಿ ಎಲ್ಲವನ್ನೂ ತನ್ನದಾಗಿಸುತ್ತಾನೆ.ಶಾಶ್ವತವಾಗಿ ತನ್ನದಾಗಿಸುವುದು ಸ್ವರ್ಗದಲ್ಲಾಗಿದೆ.ಈ ನೆನಪು ಎಲ್ಲರಿಗೂ ಬೇಕಾಗಿದೆ.
ವಾಸಿಸಲು ಕಟ್ಟುವ ಮನೆಯ ಅಡಿಪಾಯದ ಭೂಮಿ ಹಲಾಲ್ ಆಗಿರಬೇಕು.
ಇನ್ನೊಬ್ಬನ ಸ್ಥಳವನ್ನು ಅಕ್ರಮವಾಗಿ ತನ್ನದಾಗಿಸುವವರಿದ್ದಾರೆ.
ಸಮೀಪದ ಭೂಮಿಯ ಮಾಲಕನಿಗೆ ತಿಳಿಯದ ರೂಪದಲ್ಲಿ ಬೇಲಿ/ಕಂಪೌಂಡ್' ಹಾಕಿ ಸ್ವಂತ ಭೂಮಿಗೆ ಸೇರಿಸುವ ವಂಚಕರಿದ್ದಾರೆ.
ಅಧಿಕಾರವಿರುವಾಗ ಅನ್ಯರ ಜಾಗವನ್ನು ನುಂಗುವ ನುಂಗಪ್ಪಗಳನ್ನು ನಾವು ನೋಡಿದ್ದೇವೆ.ಇನ್ನೊಬ್ಬನ ಜಾಗದ ರೆಕಾರ್ಡ್'ಸ್'ಗಳನ್ನು ದುರುಪಯೋಗಪಡಿಸಿ ಸ್ವಂತ ಭೂಮಿಯಾಗಿ ಪರಿವರ್ತಿಸುವ ಹಲವರಿದ್ದಾರೆ.
ಎಲ್ಲರೂ ಈ ಒಂದು ಹದೀಸ್ ತಿಳಿಯುವುದು ಒಳಿತು,
عَنْ سَعِيدِ بْنِ زَيْدٍ رَضِيَ اللَّهُ عَنْهُمَا: أَنَّ رَسُولَ اللَّهِ ﷺ قَالَ: مَنِ اقْتَطَعَ شِبْرًا مِنَ الْأَرْضِ ظُلْمًا طَوَّقَهُ اللَّهُ إِيَّاهُ يَوْمَ الْقِيَامَةِ مِنْ سَبْعِ أَرَضِينَ. مُتَّفَقٌ عَلَيْهِ
ಮತ್ತೊಬ್ಬನ ಭೂಮಿಯನ್ನು ಕಸಿದರೆ ಅಂತ್ಯ ದಿನದಲ್ಲಿ ಅವನ ಕೊರಳಿಗೆ ಕಸಿದ ಭೂಮಿಯ 7 ಪಟ್ಟು ಭೂಮಿಯನ್ನು ಹಾರವಾಗಿ ಹಾಕಲಾಗುವುದು.
(ವರದಿ :ಬುಖಾರಿ,ಮುಸ್ಲಿಂ)
------------------------------------------------------
ಇನ್ನೊಂದು ಹದೀಸ್ ನೋಡಿ,
عن عروة بن الزبير رحمه الله أن أروَى بنتَ أويس ادَّعَتْ على سعيد بن زيد أنه أخذَ شيئًا من أرضِها، فخاصَمَتْه إلى مَرْوان بن الحَكَم، فقال سعيد: أنا كنتُ آخذُ من أرضِها شيئًا بعد الذي سمِعتُ من رسولِ الله صلى الله عليه وسلم؟ قال: وما سمِعْتَ من رسولِ الله صلى الله عليه وسلم؟ قال: سمِعتُ رسولَ الله صلى الله عليه وسلم يقول: (من أخذَ شِبرًا من الأرضِ ظُلْمًا، طُوِّقَه إلى سبعِ أرَضِين)، فقال له مروان: لا أسألُك بيَّنَةً بعد هذا، فقال: "اللهمَّ إن كانت كاذبةً فعَمِّ بصرَها، واقتُلْهَا في أرضِها"، قال: "فما ماتتْ حتى ذهبَ بَصَرُها، ثم بيْنا هي تمشِي في أرضِها، إذْ وقعَتْ في حفرةٍ فماتَتْ (بخاري)
ಉರ್'ವತು ಬಿನ್ ಝುಬೈರ್ ಹೇಳುತ್ತಾರೆ,
ಸ್ವಹಾಬಿಯಾದ ಸಈದ್ ಬಿನ್ ಝೈದ್(ರ)ರವರ ವಿರುದ್ಧ ಅರ್'ವಾ ಬಿನ್ತ್ ಉವೈಸ್ ಎಂಬ ಮಹಿಳೆ ತನ್ನ ಜಾಗವನ್ನು ಕಬಳಿಸಿದ್ದಾಗಿ ಮರ್'ವಾನ್ ಬಿನ್ ಹಕಮ್ (ರ)ರೊಂದಿಗೆ ಹೇಳಿದರು.ಮರ್ವಾನ್ (ರ )ರವರು ಸಈದ್ (ರ)ರನ್ನು ಕರೆಸಿ ನೀವು ಅರ್ವಾ ಎಂಬ ಮಹಿಳೆಯ ಸ್ಥಳವನ್ನು ಕಬಳಿಸಿದ್ದೀರಾ ಎಂದು ತನಿಖೆ ಮಾಡಿದರು.ಆಗ ಸಈದ್ (ರ)ರವರು ಹೇಳಿದರು.ಭೂ ಕಬಳಿಕೆಯ ವಿರುದ್ಧ ಪ್ರವಾದೀ ಪೈಗಂಬರರು ಹೇಳಿದ್ದನ್ನು ಕೇಳಿದ ಬಳಿಕ ನಾನು ಭೂಮಿ ಕಬಳಿಸುವೆನಾ?
ಆಗ ಮರ್ವಾನ್ (ರ) ಕೇಳಿದರು.ನೀವು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಂದ ಏನೆಂದು ಕೇಳಿದ್ದೀರಿ?
ಆಗ ಸಈದ್ (ರ)ರವರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ
"ಮತ್ತೊಬ್ಬನ ಭೂಮಿಯನ್ನು ಕಸಿದರೆ ಅಂತ್ಯ ದಿನದಲ್ಲಿ ಅವನ ಕೊರಳಿಗೆ ಕಸಿದ ಭೂಮಿಯ 7 ಪಟ್ಟು ಭೂಮಿಯನ್ನು ಹಾರವಾಗಿ ಹಾಕಲಾಗುವುದು"
ಎಂಬ ಹದೀಸನ್ನು ಓದಿ ಹೇಳಿದರು.
ಇದು ಕೇಳಿದ ಮರ್ವಾನ್(ರ)ಹೇಳಿದರು.ಇದರ ಬಳಿಕ ನಾನು ಬೇರೆ ಯಾವುದೇ ಆಧಾರಗಳನ್ನು ನಿಮ್ಮಲ್ಲಿ ಕೇಳಲಾರೆ.(ಭೂ ಕಬಳಿಕೆಯ ನಿಷಿದ್ಧವೆಂದು ನಿಮಗೆ ಅತಿಯಾದ ತಿಳುವಳಿಕೆ ಇದೆ.ನೀವು ಕಬಳಿಸುವರೆಂದು ನಾನು ನಂಬುತ್ತಿಲ್ಲ)
ತನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದನ್ನು ಸಹಿಸದ ಸಈದ್ (ರ) ಈ ರೀತಿ ಪ್ರಾರ್ಥಿಸಿದರು.ಅಲ್ಲಾಹನೇ ಈ ಮಹಿಳೆ ಹೇಳುವುದು ಸುಳ್ಳಾಗಿದ್ದಲ್ಲಿ ಅವಳನ್ನು ನೀನು ಕುರುಡಾಗಿಸು.ಅವಳ ಭೂಮಿಯಲ್ಲೇ ಅವಳಿಗೆ ಮರಣ ನೀಡು.
ಜೀವನದ ಕೊನೆಯ ಗಳಿಗೆಯಲ್ಲಿ ಅರ್ವಾ ಬಿನ್ತ್ ಉವೈಸ್ ಎಂಬ ಆ ಮಹಿಳೆಗೆ ಕಣ್ಣಿನ ದೃಷ್ಠಿ ನಷ್ಟ ಹೊಂದಿ ತನ್ನದೇ ಜಾಗದಲ್ಲಿದ್ದ ಒಂದು ಹೊಂಡಕ್ಕೆ ಬಿದ್ದು ಮರಣ ಹೊಂದಿದರು.
(ಬುಖಾರಿ 3198 )
ಜಾಗದ ವಿಷಯದಲ್ಲಿ ತಕರಾರು ನಡೆಸಕೂಡದೆಂದು ಈ ಹದೀಸ್ ಬಹಳ ಸ್ಪಷ್ಟವಾಗಿ ತಿಳಿಸಿಕೊಡುತ್ತದೆ.
ಕೇಸ್,ಕೋರ್ಟ್,ಕೊಲೆ ಎಲ್ಲವೂ ಈ ಜಾಗದ ವಿಷಯದಲ್ಲಿ ನಡೆಯುತ್ತಿರುತ್ತದೆ.
ಸಂಬಂಧಗಳನ್ನು ಕೂಡಾ ಇದು ದೂರ ಮಾಡುತ್ತದೆ.
ಅಲ್ಲಾಹನ ಮತ್ತು ಅಂತ್ಯ ದಿನದ ಭಯವಿರುವವನು ಜಾಗದ ವಿಷಯದಲ್ಲಿ ತಕರಾರು ಮಾಡಬಾರದೆಂದು ಖುರ್'ಆನ್ ಮತ್ತು ಹದೀಸಿನಿಂದ ಬಹಳ ಸ್ಪಷ್ಟ.
ಕಟ್ಟಿದ ಮನೆಯಲ್ಲಿ ನೆಮ್ಮದಿ ಬೇಕೆಂದಾದರೆ ಆ ಮನೆಯ ಜಾಗದಲ್ಲಿ ತಕರಾರಿರಬಾರದು.
ಮನೆ ಕಟ್ಟಿದರೆ ಸಾಲವಾಗುವುದಂತೂ ಖಂಡಿತಾ.
ಗೆಳಯರಿಂದ/ಪರಿಚಯಸ್ಥರಿಂದ ಸಾಲ ಮಾಡಿಯಾದರೂ ಪರವಾಗಿಲ್ಲ.ಬಡ್ಡಿಗೆ ಹಣ ತೆಗೆದು ನೀವು ಮನೆಕಟ್ಟುವಿರಾ?
ಖಂಡಿತಾ ಸೋಲು ಕಟ್ಟಿಟ್ಟ ಬುತ್ತಿ.
ಲೋನ್ ಮಾಡಿ ಮನೆ ಕಟ್ಟಿದವರ್ಯಾರೂ ಕೂಡಾ ಆ ಮನೆಯಲ್ಲಿ ನೆಮ್ಮದಿಯ ಜೀವನ ನಡೆಸಿಲ್ಲ.
ವಿಜ್ರಂಭಣೆಯ ಗ್ರಹ ಪ್ರವೇಶ ಮಾಡಿ 2 ವರ್ಷ ಹೇಗೋ ಲೋನ್ ಕಟ್ಟಿ ಮುಂದಕ್ಕೆ ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ಬಂದಾಗ ಲೋನ್ ಕಟ್ಟಲು ಮನೆ ಮಾರಾಟ ಮಾಡಿ ಕೊನೆಗೆ ಮನೆಗೆ ಹಾಕಿದ ಹಣವೂ ಕೈಗೆ ಬರದೆ ಬಾಡಿಗೆ ಮನೆಯಲ್ಲಿ ವಾಸಿಸುವ ಎಷ್ಟೋ ಫ್ಯಾಮಿಲಿ ನನಗೆ ತಿಳಿದಿದೆ.
ಲೋನ್ ಮಾಡಿ ಭವ್ಯ ಬಂಗಲೆ ಕಟ್ಟುವುದಕ್ಕಿಂತ ಹಣ ಕೈಯಲ್ಲಾಗುವಾಗ ಅಲ್ಪಲ್ಪ ಕೆಲಸ ಮಾಡಿಸಿ ಮನೆಕಟ್ಟಿ ನೆಮ್ಮದಿಯಿಂದಿರುವವನೇ ಅರಸ.
ಬಡ್ಡಿಗೆ ಲೋನ್ ಪಡೆದು ಮನೆ ಕಟ್ಟಿದರೆ ಹೇಗೆ ತಾನೇ ಸಂತೋಷವಿರಬಹುದು?
ಬಡ್ಡಿಯ ವ್ಯವಹಾರದಲ್ಲಿ ಭಾಗಿಯಾಗುವ 10 ವಿಭಾಗವನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಬಹಳ ಖಡಕ್ಕಾಗಿ ಶಪಿಸಿದ್ದಾರೆ.ಜಾಗೃತಾಗಿರಿ
*ಎಲ್ಲರಿಗೂ ಶೇರ್ ಮಾಡಿ*
ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)
ಮುಂದುವರಿಯುವುದು........
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Tuesday, June 2, 2020
ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 13
*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
ಭಾಗ --13
📝 _ಮುನೀರ್ ಸಖಾಫಿ ಸಾಲೆತ್ತೂರು_
_*ಸೂತ್ರ 12:*_
*ಸಾತ್ವಿಕರನ್ನು ಮನೆಗೆ ಕರೆಸಿ*
ಭೂಮಿಯ ಮೇಲೆ ಅಲ್ಲಾಹನು ಸಾವಿರಾರು ಜೀವಿಗಳನ್ನು ಸೃಷ್ಥಿಸಿದ್ದಾನೆ.ಅವುಗಳ ಪೈಕಿ ಶ್ರೇಷ್ಠತೆಯ ಜೀವಿ ಮನುಷ್ಯನಾಗಿದ್ದಾನೆ.
ಮನುಷ್ಯರೆಲ್ಲರೂ ಒಂದೇ ರೀತಿಯಲ್ಲಿ ಅಲ್ಲ.
ಕೆಲವರನ್ನು ಅಲ್ಲಾಹನು ಉನ್ನತಗೊಳಿಸಿದ್ದಾನೆ.ಪ್ರವಾದಿಗಳ ಪೈಕಿ ಉಲುಲ್ ಅಝ್ಮ್,ಮುರ್ಸಲ್ ಗಳು,ಅಂಬಿಯಾಗಲು ವ್ಯತ್ಯಸ್ಥ ಸ್ಥಾನದಲ್ಲಿರುವವರಾಗಿದ್ದಾರೆ.ಸರ್ವ ಸೃಷ್ಟಿಗಳ ಪೈಕಿ ಉನ್ನತರು ಹಝ್ರತ್ ಪೈಗಂಬರ್ ಸಲ್ಲಲಾಹು ಅಲೈಹಿವಸಲ್ಲಮರಾಗಿದ್ದಾರೆ.
ಅವರ ಕುಟುಂಬಸ್ಥರಾದ ಅಹ್ಲು ಬೈತ್ ನಲ್ಲಿ ಒಳಪಟ್ಟವರು ಮಹೋನ್ನತಾರಾಗಿದ್ದಾರೆ.
(ಅಹ್ಲು ಬೈತ್ ನ ಬಗ್ಗೆ ಸವಿಸ್ತಾರವಾಗಿ ನಾನು ಲೇಖನ ಬರೆದಿದ್ದು,ಹೆಚ್ಚಿನ ವಿವವರಗಳಿಗಾಗಿ ಅದನ್ನು ಓದಿರಿ)
ಔಲಿಯಾಗಳು ಕೂಡಾ ಶ್ರೇಷ್ಠ ವ್ಯಕ್ತಿಗಳಾಗಿದ್ದಾರೆ.
ಅವರು ಅಲ್ಲಾಹನ ಬಳಿ ಅತ್ಯಂತ ಸ್ಥಾನವಿರುವವರೂ ಆವರ ಪ್ರಾರ್ಥನೆಗೆ ವಿಶೇಷ ಉತ್ತರಗಳು ಲಭಿಸುತ್ತದೆ.
ಆದುದರಿಂದ ಸಾತ್ವಿಕ ಪುರುಷರೊಂದಿಗೆ ನಮಗೆ ಸದಾ ಭಾಂದವ್ಯವಿರಬೇಕು.
ಅವರನ್ನು ನಮ್ಮ ಮನೆಗೆ ಆಗಾಗ ಆಹ್ವಾನಿಸಿ ಅವರಿಂದ ಪ್ರಾರ್ಥಿಸಿಕೊಳ್ಳಬೇಕು.
ಖಂಡಿತವಾಗಿಯೂ ಅಂತಹಾ ಮನೆಗಳಲ್ಲಿ ಬರ್ಕತ್ ಮತ್ತು ನೆಮ್ಮದಿ ಇರುತ್ತದೆ.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಸ್ವಹಾಬತ್ ಬರ್ಕತ್'ಗಾಗಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸಂದರ್ಶಿಸುತ್ತಿದ್ದರು ಹಾಗೂ ಅವರ ಮನೆಗಳಿಗೆ ಪ್ರವಾದೀ ವರ್ಯರನ್ನು ಆಹ್ವಾನಿಸುತ್ತಿದ್ದರು.
ಇಮಾಮ್ ಮುಸ್ಲಿಂ ವರದಿ ಮಾಡಿದ ಹದೀಸ್ ನೋಡಿ,
عَنْ أَنَسٍ قَالَ دَخَلَ النَّبِيُّ صَلَّى اللَّهُ عَلَيْهِ وَسَلَّمَ عَلَيْنَا وَمَا هُوَ إِلَّا أَنَا وَأُمِّي وَأُمُّ حَرَامٍ خَالَتِي فَقَالَتْ أُمِّي يَا رَسُولَ اللَّهِ خُوَيْدِمُكَ ادْعُ اللَّهَ لَهُ قَالَ فَدَعَا لِي بِكُلِّ خَيْرٍ وَكَانَ فِي آخِرِ مَا دَعَا لِي بِهِ أَنْ قَالَ اللَّهُمَّ أَكْثِرْ مَالَهُ وَوَلَدَهُ وَبَارِكْ لَهُ فِيهِ(مسلم 2481)
ಅನಸ್ (ರ)ಹೇಳುತ್ತಾರೆ,ನನ್ನ ಮನೆಗೆ ಪ್ರವಾದೀ ವರ್ಯರು ಬಂದರು.ಆಗ ನನ್ನ ಮನೆಯಲ್ಲಿ ನಾನು,ತಾಯಿ ಹಾಗೂ ನನ್ನ ಚಿಕ್ಕಮ್ಮ ಇದ್ದರು.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ನನ್ನ ತಾಯಿ ಈ ರೀತಿ ಹೇಳಿದರು,
ಓ ಪ್ರಾವದೀ ವರ್ಯರೇ!ನಿಮ್ಮ ಸೇವಕ ಅನಸ್ ಗಾಗಿ ತಾವು ದುಆ ಮಾಡಿರಿ.ಆಗ ಪ್ರವಾದೀ ವರ್ಯರು ನನ್ನ ಎಲ್ಲಾ ಒಳಿತಿಗಾಗಿ ದುಆ ಮಾಡಿದರು.
(ಮುಸ್ಲಿಂ 2481)
ಬದ್ರ್ ಯುದ್ಧದಲ್ಲಿ ಭಾಗವಹಿಸಿದ ಇತ್'ಬಾನ್ (ರ) ರವರಿಗೆ ಕಣ್ಣಿನ ದೃಷ್ಠಿ ಕಳೆದುಹೋದಾಗ ಪ್ರವಾದೀ ವರ್ಯರ ಬಳಿ ಬಂದು ನನಗೆ ಮಸೀದಿಗೆ ಬರಲು ಸಾಧ್ಯವಾಗುತ್ತಿಲ್ಲ.ತಾವು ನನ್ನ ಮನೆಗೆ ಬಂದು ನನ್ನ ಮನೆಯಲ್ಲಿ ನಮಾಝ್ ಮಾಡಿ ನನ್ನನ್ನು ಆಶಿರ್ವದಿಸಿ ಎಂದು ಬೇಡಿಕೆಯಿಟ್ಟ ಘಟನೆ ಇಮಾಮ್ ಬುಖಾರಿ ವರದಿ ಮಾಡಿದ್ದು,ಅದನ್ನು ಇದೇ ಲೇಖನದ 5 ನೇ ಭಾಗದಲ್ಲಿ ವಿವರಿಸಿದ್ದೇನೆ.
ಪ್ರಸ್ತುತ ಹದೀಸ್'ಗೆ ಇಮಾಮ್ ಇಬ್ನ್ ಹಿಬ್ಬಾನ್ ಅಧ್ಯಾಯ ನೀಡಿದ್ದು ಈ ರೀತಿಯಾಗಿದೆ,
ذكر ما يستحب للامام من اعطاء رعيته ما ياملونه من الاسباب التي بها يتبركون من ناحيته
ಬರ್ಕತ್ ಉದ್ದೇಶವಿಟ್ಟು ಅನುಯಾಯಿಗಳು ನಾಯಕನಲ್ಲಿ ಒಂದು ಸ್ಥಳ ನಿರ್ಣಯಿಸುವಂತೆ ಬೇಡಿಕೆಯಿಟ್ಟರೆ ಅನುಯಾಯಿಗಳ ಬೇಡಿಕೆಯನ್ನು ಈಡೇರಿಸುವುದು ನಾಯಕನಿಗೆ ಸುನ್ನತ್ ಆಗಿದೆ.
(ಸ್ವಹೀಹ್ ಇಬ್ನ್ ಹಿಬ್ಬಾನ್)
ಬರ್ಕತ್ ಗಾಗಿ ಸಾತ್ವಿಕರನ್ನು ಮನೆಗೆ ಆಹ್ವಾನಿಸಿದರೆ ಆ ಕರೆಗೆ ಉತ್ತರಿಸುವುದು ಸಾತ್ವಿಕರ ಬಾಧ್ಯತೆಯಾಗಿದೆ ಎಂದು ಈ ಹದೀಸ್ ನ ವ್ಯಾಖ್ಯಾನದಲ್ಲಿ ಇಮಾಮ್ ಇಬ್ನ್ ಬತ್ತಾಲ್ (ರ)ಹೇಳಿದ್ದಾರೆ.
من دعي من الصالحين الي شيئ يتبرك به منه فله ان يجيب اذا امن الفتنة من العجب
(ಫತ್'ಹುಲ್ ಬಾರಿ 2/77)
ವಹ್ಹಾಬಿಗಳ ನಾಯಕ ಶೌಕಾನಿ ತನ್ನ ನೈಲುಲ್ ಔತಾರ್ ನ 3/95 ರಲ್ಲಿ ಕೂಡಾ ಇದನ್ನೇ ಹೇಳಿದ್ದಾರೆ.
ಒಟ್ಟಿನಲ್ಲಿ ನಮ್ಮ ಮನೆಗೆ ಸಜ್ಜನರಾದ ವ್ಯಕ್ತಿಗಳನ್ನು ಆಹ್ವಾನಿಸಿ ಅವರಿಗೆ ಅನ್ನ-ಪಾನೀಯ ನೀಡಿ ಅವರಿಂದ ಪ್ರಾರ್ಥಿಸಿಕೊಂಡಲ್ಲಿ ಆ ಮನೆಯಲ್ಲಿ ಸದಾ ಸಂತೋಷ ಮತ್ತು ಸಮೃದ್ಧಿ ನೆಲೆಗೊಳ್ಳುವವು.
----------------------------------------------------------
*ಪ್ರತ್ಯೇಕ ಗಮನಕ್ಕೆ*
ಭಾಗ 2 ರಲ್ಲಿ ಒಂದು ಹದೀಸ್ ಗೆ ಅರ್ಥ ನೀಡುವಲ್ಲಿ
الدُّنيا متاعٌ، وخيرُ متاعِ الدُّنيا المرأةُ الصَّالحة،
*ಪ್ರಪಂಚದಲ್ಲಿರುವ ಸರಕುಗಳ ಪೈಕಿ ಉತ್ತಮವಾದ ಸರಕು ಉತ್ತಮ ಸ್ತ್ರೀಯಾಗಿದ್ದಾಳೆ*
ಎಂದು ಬರೆದಿದ್ದೆ.
ಮಿತ್ರರೊಬ್ಬರು ಮೆಸೇಜ್ ಮಾಡಿ ಮಹಿಳೆಯನ್ನು ನೀವು ಸರಕುಗಳಾಗಿ ಕಂಡದ್ದು ತಪ್ಪೆಂದು ಸೂಚಿಸಿದ್ದರು.
ವಾಸ್ತವದಲ್ಲಿ ಆ ಬರೆದದ್ದು ತಪ್ಪಾಗಿರಲಿಲ್ಲ.
ಕಾರಣ "ಸರಕು" ಎಂದರೆ ಅಷ್ಟೊಂದು ಕೀಳುಮಟ್ಟದ ಪದವಲ್ಲ.
ಯಾವುದೇ ಸರಕುಗಳಿಗೆ ಬೆಲೆ ಇದೆ.
ಬೆಲೆಯಿಲ್ಲದ ಸರಕು ಪ್ರಪಂಚದಲ್ಲಿ ಯಾವುದಿದೆ?
ಸರಕು ಅಂದರೆ ಬೆಲೆಯಿರುವ ವಸ್ತು ಎಂದೇ ಅಲ್ಲಿ ಉದ್ದೇಶಿಸಲಾಗಿತ್ತು.
ಅಂದರೆ, ಪ್ರಪಂಚದಲ್ಲಿರುವ ಬೆಲೆ ಬಾಳುವ ವಸ್ತುಗಳ ಪೈಕಿ ಅತ್ಯಂತ ಬೆಲೆಯಿರುವ ವಸ್ತು ಸಜ್ಜನ ಮಹಿಳೆಯಾಗಿದ್ದಾಳೆ ಎಂದಾಗಿದೆ ಅದರ ಅರ್ಥ.
ಆ ರೀತಿ ಅರ್ಥಮಾಡಿಕೊಂಡರೆ ಯಾವುದೇ ಸಮಸ್ಯೆಯಿಲ್ಲ.
ಸೂಕ್ಮತೆಯಿಂದ ಓದಿ ಅಭಿಪ್ರಾಯ ತಿಳಿಸಿದ್ದಕ್ಕಾಗಿ ಆ ಮಿತ್ರನಿಗೆ ಧನ್ಯವಾದಗಳು.
*ಎಲ್ಲರಿಗೂ ಶೇರ್ ಮಾಡಿ*
ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)
ಮುಂದುವರಿಯುವುದು........
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
ಭಾಗ --13
📝 _ಮುನೀರ್ ಸಖಾಫಿ ಸಾಲೆತ್ತೂರು_
_*ಸೂತ್ರ 12:*_
*ಸಾತ್ವಿಕರನ್ನು ಮನೆಗೆ ಕರೆಸಿ*
ಭೂಮಿಯ ಮೇಲೆ ಅಲ್ಲಾಹನು ಸಾವಿರಾರು ಜೀವಿಗಳನ್ನು ಸೃಷ್ಥಿಸಿದ್ದಾನೆ.ಅವುಗಳ ಪೈಕಿ ಶ್ರೇಷ್ಠತೆಯ ಜೀವಿ ಮನುಷ್ಯನಾಗಿದ್ದಾನೆ.
ಮನುಷ್ಯರೆಲ್ಲರೂ ಒಂದೇ ರೀತಿಯಲ್ಲಿ ಅಲ್ಲ.
ಕೆಲವರನ್ನು ಅಲ್ಲಾಹನು ಉನ್ನತಗೊಳಿಸಿದ್ದಾನೆ.ಪ್ರವಾದಿಗಳ ಪೈಕಿ ಉಲುಲ್ ಅಝ್ಮ್,ಮುರ್ಸಲ್ ಗಳು,ಅಂಬಿಯಾಗಲು ವ್ಯತ್ಯಸ್ಥ ಸ್ಥಾನದಲ್ಲಿರುವವರಾಗಿದ್ದಾರೆ.ಸರ್ವ ಸೃಷ್ಟಿಗಳ ಪೈಕಿ ಉನ್ನತರು ಹಝ್ರತ್ ಪೈಗಂಬರ್ ಸಲ್ಲಲಾಹು ಅಲೈಹಿವಸಲ್ಲಮರಾಗಿದ್ದಾರೆ.
ಅವರ ಕುಟುಂಬಸ್ಥರಾದ ಅಹ್ಲು ಬೈತ್ ನಲ್ಲಿ ಒಳಪಟ್ಟವರು ಮಹೋನ್ನತಾರಾಗಿದ್ದಾರೆ.
(ಅಹ್ಲು ಬೈತ್ ನ ಬಗ್ಗೆ ಸವಿಸ್ತಾರವಾಗಿ ನಾನು ಲೇಖನ ಬರೆದಿದ್ದು,ಹೆಚ್ಚಿನ ವಿವವರಗಳಿಗಾಗಿ ಅದನ್ನು ಓದಿರಿ)
ಔಲಿಯಾಗಳು ಕೂಡಾ ಶ್ರೇಷ್ಠ ವ್ಯಕ್ತಿಗಳಾಗಿದ್ದಾರೆ.
ಅವರು ಅಲ್ಲಾಹನ ಬಳಿ ಅತ್ಯಂತ ಸ್ಥಾನವಿರುವವರೂ ಆವರ ಪ್ರಾರ್ಥನೆಗೆ ವಿಶೇಷ ಉತ್ತರಗಳು ಲಭಿಸುತ್ತದೆ.
ಆದುದರಿಂದ ಸಾತ್ವಿಕ ಪುರುಷರೊಂದಿಗೆ ನಮಗೆ ಸದಾ ಭಾಂದವ್ಯವಿರಬೇಕು.
ಅವರನ್ನು ನಮ್ಮ ಮನೆಗೆ ಆಗಾಗ ಆಹ್ವಾನಿಸಿ ಅವರಿಂದ ಪ್ರಾರ್ಥಿಸಿಕೊಳ್ಳಬೇಕು.
ಖಂಡಿತವಾಗಿಯೂ ಅಂತಹಾ ಮನೆಗಳಲ್ಲಿ ಬರ್ಕತ್ ಮತ್ತು ನೆಮ್ಮದಿ ಇರುತ್ತದೆ.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಸ್ವಹಾಬತ್ ಬರ್ಕತ್'ಗಾಗಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸಂದರ್ಶಿಸುತ್ತಿದ್ದರು ಹಾಗೂ ಅವರ ಮನೆಗಳಿಗೆ ಪ್ರವಾದೀ ವರ್ಯರನ್ನು ಆಹ್ವಾನಿಸುತ್ತಿದ್ದರು.
ಇಮಾಮ್ ಮುಸ್ಲಿಂ ವರದಿ ಮಾಡಿದ ಹದೀಸ್ ನೋಡಿ,
عَنْ أَنَسٍ قَالَ دَخَلَ النَّبِيُّ صَلَّى اللَّهُ عَلَيْهِ وَسَلَّمَ عَلَيْنَا وَمَا هُوَ إِلَّا أَنَا وَأُمِّي وَأُمُّ حَرَامٍ خَالَتِي فَقَالَتْ أُمِّي يَا رَسُولَ اللَّهِ خُوَيْدِمُكَ ادْعُ اللَّهَ لَهُ قَالَ فَدَعَا لِي بِكُلِّ خَيْرٍ وَكَانَ فِي آخِرِ مَا دَعَا لِي بِهِ أَنْ قَالَ اللَّهُمَّ أَكْثِرْ مَالَهُ وَوَلَدَهُ وَبَارِكْ لَهُ فِيهِ(مسلم 2481)
ಅನಸ್ (ರ)ಹೇಳುತ್ತಾರೆ,ನನ್ನ ಮನೆಗೆ ಪ್ರವಾದೀ ವರ್ಯರು ಬಂದರು.ಆಗ ನನ್ನ ಮನೆಯಲ್ಲಿ ನಾನು,ತಾಯಿ ಹಾಗೂ ನನ್ನ ಚಿಕ್ಕಮ್ಮ ಇದ್ದರು.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ನನ್ನ ತಾಯಿ ಈ ರೀತಿ ಹೇಳಿದರು,
ಓ ಪ್ರಾವದೀ ವರ್ಯರೇ!ನಿಮ್ಮ ಸೇವಕ ಅನಸ್ ಗಾಗಿ ತಾವು ದುಆ ಮಾಡಿರಿ.ಆಗ ಪ್ರವಾದೀ ವರ್ಯರು ನನ್ನ ಎಲ್ಲಾ ಒಳಿತಿಗಾಗಿ ದುಆ ಮಾಡಿದರು.
(ಮುಸ್ಲಿಂ 2481)
ಬದ್ರ್ ಯುದ್ಧದಲ್ಲಿ ಭಾಗವಹಿಸಿದ ಇತ್'ಬಾನ್ (ರ) ರವರಿಗೆ ಕಣ್ಣಿನ ದೃಷ್ಠಿ ಕಳೆದುಹೋದಾಗ ಪ್ರವಾದೀ ವರ್ಯರ ಬಳಿ ಬಂದು ನನಗೆ ಮಸೀದಿಗೆ ಬರಲು ಸಾಧ್ಯವಾಗುತ್ತಿಲ್ಲ.ತಾವು ನನ್ನ ಮನೆಗೆ ಬಂದು ನನ್ನ ಮನೆಯಲ್ಲಿ ನಮಾಝ್ ಮಾಡಿ ನನ್ನನ್ನು ಆಶಿರ್ವದಿಸಿ ಎಂದು ಬೇಡಿಕೆಯಿಟ್ಟ ಘಟನೆ ಇಮಾಮ್ ಬುಖಾರಿ ವರದಿ ಮಾಡಿದ್ದು,ಅದನ್ನು ಇದೇ ಲೇಖನದ 5 ನೇ ಭಾಗದಲ್ಲಿ ವಿವರಿಸಿದ್ದೇನೆ.
ಪ್ರಸ್ತುತ ಹದೀಸ್'ಗೆ ಇಮಾಮ್ ಇಬ್ನ್ ಹಿಬ್ಬಾನ್ ಅಧ್ಯಾಯ ನೀಡಿದ್ದು ಈ ರೀತಿಯಾಗಿದೆ,
ذكر ما يستحب للامام من اعطاء رعيته ما ياملونه من الاسباب التي بها يتبركون من ناحيته
ಬರ್ಕತ್ ಉದ್ದೇಶವಿಟ್ಟು ಅನುಯಾಯಿಗಳು ನಾಯಕನಲ್ಲಿ ಒಂದು ಸ್ಥಳ ನಿರ್ಣಯಿಸುವಂತೆ ಬೇಡಿಕೆಯಿಟ್ಟರೆ ಅನುಯಾಯಿಗಳ ಬೇಡಿಕೆಯನ್ನು ಈಡೇರಿಸುವುದು ನಾಯಕನಿಗೆ ಸುನ್ನತ್ ಆಗಿದೆ.
(ಸ್ವಹೀಹ್ ಇಬ್ನ್ ಹಿಬ್ಬಾನ್)
ಬರ್ಕತ್ ಗಾಗಿ ಸಾತ್ವಿಕರನ್ನು ಮನೆಗೆ ಆಹ್ವಾನಿಸಿದರೆ ಆ ಕರೆಗೆ ಉತ್ತರಿಸುವುದು ಸಾತ್ವಿಕರ ಬಾಧ್ಯತೆಯಾಗಿದೆ ಎಂದು ಈ ಹದೀಸ್ ನ ವ್ಯಾಖ್ಯಾನದಲ್ಲಿ ಇಮಾಮ್ ಇಬ್ನ್ ಬತ್ತಾಲ್ (ರ)ಹೇಳಿದ್ದಾರೆ.
من دعي من الصالحين الي شيئ يتبرك به منه فله ان يجيب اذا امن الفتنة من العجب
(ಫತ್'ಹುಲ್ ಬಾರಿ 2/77)
ವಹ್ಹಾಬಿಗಳ ನಾಯಕ ಶೌಕಾನಿ ತನ್ನ ನೈಲುಲ್ ಔತಾರ್ ನ 3/95 ರಲ್ಲಿ ಕೂಡಾ ಇದನ್ನೇ ಹೇಳಿದ್ದಾರೆ.
ಒಟ್ಟಿನಲ್ಲಿ ನಮ್ಮ ಮನೆಗೆ ಸಜ್ಜನರಾದ ವ್ಯಕ್ತಿಗಳನ್ನು ಆಹ್ವಾನಿಸಿ ಅವರಿಗೆ ಅನ್ನ-ಪಾನೀಯ ನೀಡಿ ಅವರಿಂದ ಪ್ರಾರ್ಥಿಸಿಕೊಂಡಲ್ಲಿ ಆ ಮನೆಯಲ್ಲಿ ಸದಾ ಸಂತೋಷ ಮತ್ತು ಸಮೃದ್ಧಿ ನೆಲೆಗೊಳ್ಳುವವು.
----------------------------------------------------------
*ಪ್ರತ್ಯೇಕ ಗಮನಕ್ಕೆ*
ಭಾಗ 2 ರಲ್ಲಿ ಒಂದು ಹದೀಸ್ ಗೆ ಅರ್ಥ ನೀಡುವಲ್ಲಿ
الدُّنيا متاعٌ، وخيرُ متاعِ الدُّنيا المرأةُ الصَّالحة،
*ಪ್ರಪಂಚದಲ್ಲಿರುವ ಸರಕುಗಳ ಪೈಕಿ ಉತ್ತಮವಾದ ಸರಕು ಉತ್ತಮ ಸ್ತ್ರೀಯಾಗಿದ್ದಾಳೆ*
ಎಂದು ಬರೆದಿದ್ದೆ.
ಮಿತ್ರರೊಬ್ಬರು ಮೆಸೇಜ್ ಮಾಡಿ ಮಹಿಳೆಯನ್ನು ನೀವು ಸರಕುಗಳಾಗಿ ಕಂಡದ್ದು ತಪ್ಪೆಂದು ಸೂಚಿಸಿದ್ದರು.
ವಾಸ್ತವದಲ್ಲಿ ಆ ಬರೆದದ್ದು ತಪ್ಪಾಗಿರಲಿಲ್ಲ.
ಕಾರಣ "ಸರಕು" ಎಂದರೆ ಅಷ್ಟೊಂದು ಕೀಳುಮಟ್ಟದ ಪದವಲ್ಲ.
ಯಾವುದೇ ಸರಕುಗಳಿಗೆ ಬೆಲೆ ಇದೆ.
ಬೆಲೆಯಿಲ್ಲದ ಸರಕು ಪ್ರಪಂಚದಲ್ಲಿ ಯಾವುದಿದೆ?
ಸರಕು ಅಂದರೆ ಬೆಲೆಯಿರುವ ವಸ್ತು ಎಂದೇ ಅಲ್ಲಿ ಉದ್ದೇಶಿಸಲಾಗಿತ್ತು.
ಅಂದರೆ, ಪ್ರಪಂಚದಲ್ಲಿರುವ ಬೆಲೆ ಬಾಳುವ ವಸ್ತುಗಳ ಪೈಕಿ ಅತ್ಯಂತ ಬೆಲೆಯಿರುವ ವಸ್ತು ಸಜ್ಜನ ಮಹಿಳೆಯಾಗಿದ್ದಾಳೆ ಎಂದಾಗಿದೆ ಅದರ ಅರ್ಥ.
ಆ ರೀತಿ ಅರ್ಥಮಾಡಿಕೊಂಡರೆ ಯಾವುದೇ ಸಮಸ್ಯೆಯಿಲ್ಲ.
ಸೂಕ್ಮತೆಯಿಂದ ಓದಿ ಅಭಿಪ್ರಾಯ ತಿಳಿಸಿದ್ದಕ್ಕಾಗಿ ಆ ಮಿತ್ರನಿಗೆ ಧನ್ಯವಾದಗಳು.
*ಎಲ್ಲರಿಗೂ ಶೇರ್ ಮಾಡಿ*
ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)
ಮುಂದುವರಿಯುವುದು........
ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 12
*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
ಭಾಗ --12
📝 _ಮುನೀರ್ ಸಖಾಫಿ ಸಾಲೆತ್ತೂರು_
_*ಸೂತ್ರ 11:*_
*ಮನೆಯಲ್ಲಿ ಇಸ್ಲಾಮಿಕ್ ಲೈಬ್ರರಿಗಳಿರಲಿ*
ಓದುವ ಹವ್ಯಾಸವಿರುವವನು ಪುಸ್ತಕ ಖರೀದಿಸುವನು.ಎಷ್ಟೇ ಕಷ್ಟಪಟ್ಟಾದರೂ ಪುಸ್ತಕ ಸಂಗ್ರಹಿಸುವನು.
ಒಂದು ಉತ್ತಮ ಲೈಬ್ರರಿ ಮನೆಯಲ್ಲಿದ್ದರೆ ಮನೆಯಲ್ಲಿರುವವರಿಗೆ ಮತ್ತು ಅತಿಥಿಗಳಿಗೆ ಬಹಳ ಪ್ರಯೋಜನಕಾರಿಯಾದೀತು.
ಈಗ ಓದುವ ಹವ್ಯಾಸ ಬಹಳ ಕಡಿಮೆ.ಪುಸ್ತಕ ಖರೀದಿಸುವ ಹವ್ಯಾಸವೂ ಮಾಯವಾಗಿ ಬಿಟ್ಟಿದೆ.
ಮುಂಚೆ ನಾನು ಎಲ್ಲಿ ಸಮ್ಮೇಳನಗಳಿಗೆ ಹೋದರು ಮೊದಲು ಅಲ್ಲಿ ಹುಡುಕುತ್ತಿದ್ದದ್ದು ಸಮ್ಮೇಳನ ಪ್ರಯುಕ್ತ ಹೊರತಂದ ಪುಸ್ತಕಗಳು ಎಲ್ಲಿ ಸಿಗುತ್ತವೆ ಎಂದಾಗಿತ್ತು.ಉಪಯುಕ್ತ ಮಾಹಿತಿಗಳು ಆ ಸುವನೀರ್ ಗಳಿಂದ ಲಭಿಸುತ್ತಿದ್ದವು.ಈಗೀಗ ಸುವನೀರ್ ಗಳು ಕಡಿಮೆ.ಇದ್ದರೂ ಪ್ರಯೋಜನಕಾರಿಯಾದ ಬರಹಗಳು ಕಡಿಮೆ.ದರ್ಸ್ ನಲ್ಲಿ ಕಲಿಯುವಾಗ ಮಂಗಳೂರಿನ ಅತ್ರಿ ಬುಕ್ ಸ್ಟಾಲ್ ಗೆ ಹೋಗಿ ಹಲವಾರು ಪುಸ್ತಕ ಖರೀದಿಸಿದ್ದೆ.
ಅದೇ ರೀತಿ ಒಮ್ಮೆ ಬೆಂಗಳೂರಿಗೆ ಪ್ರವಾಸ ಹೋದಾಗ ಬೆಂಗಳೂರಿನ ಸಪ್ನ ಬುಕ್ ಸ್ಟಾಲ್'ಗೂ ಹೋಗಿ ಪುಸ್ತಕ ಖರೀದಿಸಿದ್ದೆ.
ಅದು ಈಗಲೂ ಜೋಪಾನವಾಗಿಟ್ಟಿದ್ದೇನೆ.
ಈಗ ಓದುವ ಹವ್ಯಾಸದಿಂದ ಹಿಂದೆ ಸರಿದು ಏನಿದ್ದರೂ ಮೊಬೈಲ್ಗಳಲ್ಲಿಯೇ ತಲ್ಲೀಣರಾಗಿದ್ದೇವೆ.
ನಮ್ಮ ಮನೆಗಳಲ್ಲಿನ ಲೈಬ್ರರಿಗಳಲ್ಲಿ ಉಪಯುಕ್ತ ಪುಸ್ತಕಗಳನ್ನಿಟ್ಟರೆ ಅದರಿಂದ ತುಂಬಾ ಪ್ರಯೋಜನವಿದೆ.
ಬುದ್ಧಿ ಶಕ್ತಿ ಮತ್ತು ನೆನಪು ಶಕ್ತಿ ಓದುವಿಕೆಯಿಂದ ಹೆಚ್ಚುತ್ತದೆ.
ಮಿತ್ರರೊಬ್ಬರು ಹೇಳಿದ ಒಂದು ತಮಾಷೆ ಈ ರೀತಿ ಇದೆ.
ಕೇರಳಿಗನ ಒಬ್ಬನ ಕೈಯಲ್ಲಿ ಹತ್ತು ಪತ್ರಿಕೆಗಳಿದ್ದರೆ ಕನ್ನಡಿಗರು ಹತ್ತು ಜನರು ಸೇರಿ ಒಂದು ಪೇಪರ್ ಖರೀದಿಸುತ್ತಾರೆ.
ಪವಿತ್ರ ಖುರ್'ಆನಿನ ಮೊದಲನೇ ಸೂಕ್ತ ಓದುವುದನ್ನು ಪ್ರೋತ್ಸಾಹಿಸುವ ಸೂಕ್ತವಾಗಿದೆ.
اقرا باسم ربك الذي خلق
ಎಂದಾಗಿತ್ತು ಪ್ರಥಮ ಸೂಕ್ತ.
ಓ ಪ್ರವಾದೀ ವರ್ಯರೇ!ತಮ್ಮನ್ನು ಸೃಷ್ಠಿಸಿದ ಅಲ್ಲಾಹನ ನಾಮದಿಂದ ಓದಿರಿ
---------------------------------------------------------
ಬರಹ ಮತ್ತು ಓದುವಿಕೆಗೆ ಬಹಳಷ್ಟು ಪ್ರಾಮುಖ್ಯ ಇಸ್ಲಾಮ್ ನೀಡಿದೆ.
ಬದ್ರ್ ನಲ್ಲಿ ಸೆರೆ ಸಿಕ್ಕ ಶತ್ರುಗಳನ್ನು ವಿಮೋಚಿಸಲು ಶತ್ರುಗಳು ಬೇಡಿಕೆಯಿಟ್ಟಾಗ ಅವರಿಂದ ಹಣವನ್ನು ಪಡೆಯುವ ಬದಲು
ಓದು -ಬರಹ ಗೊತ್ತಿಲ್ಲದ ಅನಕ್ಷರಸ್ಥರಿಗೆ ಓದು -ಬರಹ ಕಲಿಸುವಂತೆ ಆ ಶತ್ರುಗಳೊಂದಿಗೆ ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಆಜ್ಞಾಪಿಸಿದರು.
---------------------------------------------------------
ಉತ್ತಮ ದಿನ ಪತ್ರಿಕೆಗಳನ್ನೂ ನಮ್ಮ ಮನೆಯ ಲೈಬ್ರರಿಗೆ ತರಿಸಬಹುದು.
ಸಕಾಲಿಕ ವಿಷಯಗಳ ಬಗ್ಗೆ ತಿಳುವಳಿಕೆಗಾಗಿ ಪತ್ರಿಕೆಗಳ ಸಂಪಾದಕೀಯವನ್ನು ಓದುವುದು ಬಹಳ ಪ್ರಯೋಜನಕಾರಿ.
ಕಳೆದ ಭಾಗದಲ್ಲಿ ವಿವರಿಸಿದಂತೆ ಇಸ್ಲಾಮ್ ದೀನಿನ ಕುರಿತು ಆಳವಾಗಿ ಚರ್ಚಿಸಲ್ಪಡುವ ಪುಸ್ತಗಳು ನಮ್ಮ ಬಳಿ ಇರಬೇಕು.
ವಾರಪತ್ರಿಕೆ ,ಪಾಕ್ಷಿಕ ಪತ್ರಿಕೆ,ತಿಂಗಳ ಪತ್ರಿಕೆ ಗಳೂ ತರಿಸಬಹುದು.
ಪವಿತ್ರ ಸುನ್ನತ್ ಜಮಾಅತ್ ಗೆ ವಿರುದ್ಧವಾದ ನೂತನವಾದಿಗಳ ಪತ್ರಿಕೆಗಳನ್ನು ಓದಬಾರದು.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಮತ್ತು ಅಂಬಿಯಾ - ಔಲಿಯಾಗಳನ್ನು ಅವಹೇಳಿಸುವ ನೂತನವಾದಿಗಳ ಭಾಷಣ ಅಥವಾ ಅವರ ಪುಸ್ತಕಗಳನ್ನು ಓದಿ ಇರುವ ಈಮಾನ್ ನಷ್ಟಪಡಿಸಬಾರದು.
ನಮ್ಮ ಮನೆಗಳ ಲೈಬ್ರರಿಯಲ್ಲಿ ಈ ಪುಸ್ತಕಗಳು ಇರಲಿ.
1.ಖುರ್'ಆನ್ ಗೆ ಸಂಭಂಧಪಟ್ಟ ಪುಸ್ತಕ.
2.ಹದೀಸ್ ಗೆ ಸಂಭಂಧಪಟ್ಟ ಪುಸ್ತಕ.
3.ಅಖಾಇದ್
4.ಫಿಖ್'ಹ್
5..ಚರಿತ್ರೆ
ಹಾಗೂ ಇನ್ನಿತರ ಜನರಲ್ ನಾಲೇಡ್ಜ್ ನ ಪುಸ್ತಕಗಳು.
ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಪಾನವಾಗಿಟ್ಟರೆ ಅದರಿಂದುಂಟಾಗುವ ನೆಮ್ಮದಿ ಅಷ್ಟಿಷ್ಟಲ್ಲ.
ನಾವು ಕಲಿತ ಎಲ್ಲಾ ಪುಸ್ತಕ,ಕಿತಾಬ್ ಗಳನ್ನು ತೆಗೆದಿರಿಸಬೇಕು.
ನಾವು ಎಷ್ಟೇ ಕಂಠಪಾಟ ಮಾಡಿದ್ದರೂ ಕಲಿತ ಪುಸ್ತಕಗಳನ್ನು ಎಲ್ಲೆಂದರಲ್ಲಿ ಹಾಕಿ ನಾಶಪಡಿಸಬಾರದು.
ನಮಗಲ್ಲದಿದ್ದರೂ ಇನ್ನೊಬ್ಬರಿಗೆ ಅದರಿಂದ ಉಪಕರಿಸಬಹುದು.
*ಎಲ್ಲರಿಗೂ ಶೇರ್ ಮಾಡಿ*
ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)
ಮುಂದುವರಿಯುವುದು........
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
ಭಾಗ --12
📝 _ಮುನೀರ್ ಸಖಾಫಿ ಸಾಲೆತ್ತೂರು_
_*ಸೂತ್ರ 11:*_
*ಮನೆಯಲ್ಲಿ ಇಸ್ಲಾಮಿಕ್ ಲೈಬ್ರರಿಗಳಿರಲಿ*
ಓದುವ ಹವ್ಯಾಸವಿರುವವನು ಪುಸ್ತಕ ಖರೀದಿಸುವನು.ಎಷ್ಟೇ ಕಷ್ಟಪಟ್ಟಾದರೂ ಪುಸ್ತಕ ಸಂಗ್ರಹಿಸುವನು.
ಒಂದು ಉತ್ತಮ ಲೈಬ್ರರಿ ಮನೆಯಲ್ಲಿದ್ದರೆ ಮನೆಯಲ್ಲಿರುವವರಿಗೆ ಮತ್ತು ಅತಿಥಿಗಳಿಗೆ ಬಹಳ ಪ್ರಯೋಜನಕಾರಿಯಾದೀತು.
ಈಗ ಓದುವ ಹವ್ಯಾಸ ಬಹಳ ಕಡಿಮೆ.ಪುಸ್ತಕ ಖರೀದಿಸುವ ಹವ್ಯಾಸವೂ ಮಾಯವಾಗಿ ಬಿಟ್ಟಿದೆ.
ಮುಂಚೆ ನಾನು ಎಲ್ಲಿ ಸಮ್ಮೇಳನಗಳಿಗೆ ಹೋದರು ಮೊದಲು ಅಲ್ಲಿ ಹುಡುಕುತ್ತಿದ್ದದ್ದು ಸಮ್ಮೇಳನ ಪ್ರಯುಕ್ತ ಹೊರತಂದ ಪುಸ್ತಕಗಳು ಎಲ್ಲಿ ಸಿಗುತ್ತವೆ ಎಂದಾಗಿತ್ತು.ಉಪಯುಕ್ತ ಮಾಹಿತಿಗಳು ಆ ಸುವನೀರ್ ಗಳಿಂದ ಲಭಿಸುತ್ತಿದ್ದವು.ಈಗೀಗ ಸುವನೀರ್ ಗಳು ಕಡಿಮೆ.ಇದ್ದರೂ ಪ್ರಯೋಜನಕಾರಿಯಾದ ಬರಹಗಳು ಕಡಿಮೆ.ದರ್ಸ್ ನಲ್ಲಿ ಕಲಿಯುವಾಗ ಮಂಗಳೂರಿನ ಅತ್ರಿ ಬುಕ್ ಸ್ಟಾಲ್ ಗೆ ಹೋಗಿ ಹಲವಾರು ಪುಸ್ತಕ ಖರೀದಿಸಿದ್ದೆ.
ಅದೇ ರೀತಿ ಒಮ್ಮೆ ಬೆಂಗಳೂರಿಗೆ ಪ್ರವಾಸ ಹೋದಾಗ ಬೆಂಗಳೂರಿನ ಸಪ್ನ ಬುಕ್ ಸ್ಟಾಲ್'ಗೂ ಹೋಗಿ ಪುಸ್ತಕ ಖರೀದಿಸಿದ್ದೆ.
ಅದು ಈಗಲೂ ಜೋಪಾನವಾಗಿಟ್ಟಿದ್ದೇನೆ.
ಈಗ ಓದುವ ಹವ್ಯಾಸದಿಂದ ಹಿಂದೆ ಸರಿದು ಏನಿದ್ದರೂ ಮೊಬೈಲ್ಗಳಲ್ಲಿಯೇ ತಲ್ಲೀಣರಾಗಿದ್ದೇವೆ.
ನಮ್ಮ ಮನೆಗಳಲ್ಲಿನ ಲೈಬ್ರರಿಗಳಲ್ಲಿ ಉಪಯುಕ್ತ ಪುಸ್ತಕಗಳನ್ನಿಟ್ಟರೆ ಅದರಿಂದ ತುಂಬಾ ಪ್ರಯೋಜನವಿದೆ.
ಬುದ್ಧಿ ಶಕ್ತಿ ಮತ್ತು ನೆನಪು ಶಕ್ತಿ ಓದುವಿಕೆಯಿಂದ ಹೆಚ್ಚುತ್ತದೆ.
ಮಿತ್ರರೊಬ್ಬರು ಹೇಳಿದ ಒಂದು ತಮಾಷೆ ಈ ರೀತಿ ಇದೆ.
ಕೇರಳಿಗನ ಒಬ್ಬನ ಕೈಯಲ್ಲಿ ಹತ್ತು ಪತ್ರಿಕೆಗಳಿದ್ದರೆ ಕನ್ನಡಿಗರು ಹತ್ತು ಜನರು ಸೇರಿ ಒಂದು ಪೇಪರ್ ಖರೀದಿಸುತ್ತಾರೆ.
ಪವಿತ್ರ ಖುರ್'ಆನಿನ ಮೊದಲನೇ ಸೂಕ್ತ ಓದುವುದನ್ನು ಪ್ರೋತ್ಸಾಹಿಸುವ ಸೂಕ್ತವಾಗಿದೆ.
اقرا باسم ربك الذي خلق
ಎಂದಾಗಿತ್ತು ಪ್ರಥಮ ಸೂಕ್ತ.
ಓ ಪ್ರವಾದೀ ವರ್ಯರೇ!ತಮ್ಮನ್ನು ಸೃಷ್ಠಿಸಿದ ಅಲ್ಲಾಹನ ನಾಮದಿಂದ ಓದಿರಿ
---------------------------------------------------------
ಬರಹ ಮತ್ತು ಓದುವಿಕೆಗೆ ಬಹಳಷ್ಟು ಪ್ರಾಮುಖ್ಯ ಇಸ್ಲಾಮ್ ನೀಡಿದೆ.
ಬದ್ರ್ ನಲ್ಲಿ ಸೆರೆ ಸಿಕ್ಕ ಶತ್ರುಗಳನ್ನು ವಿಮೋಚಿಸಲು ಶತ್ರುಗಳು ಬೇಡಿಕೆಯಿಟ್ಟಾಗ ಅವರಿಂದ ಹಣವನ್ನು ಪಡೆಯುವ ಬದಲು
ಓದು -ಬರಹ ಗೊತ್ತಿಲ್ಲದ ಅನಕ್ಷರಸ್ಥರಿಗೆ ಓದು -ಬರಹ ಕಲಿಸುವಂತೆ ಆ ಶತ್ರುಗಳೊಂದಿಗೆ ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಆಜ್ಞಾಪಿಸಿದರು.
---------------------------------------------------------
ಉತ್ತಮ ದಿನ ಪತ್ರಿಕೆಗಳನ್ನೂ ನಮ್ಮ ಮನೆಯ ಲೈಬ್ರರಿಗೆ ತರಿಸಬಹುದು.
ಸಕಾಲಿಕ ವಿಷಯಗಳ ಬಗ್ಗೆ ತಿಳುವಳಿಕೆಗಾಗಿ ಪತ್ರಿಕೆಗಳ ಸಂಪಾದಕೀಯವನ್ನು ಓದುವುದು ಬಹಳ ಪ್ರಯೋಜನಕಾರಿ.
ಕಳೆದ ಭಾಗದಲ್ಲಿ ವಿವರಿಸಿದಂತೆ ಇಸ್ಲಾಮ್ ದೀನಿನ ಕುರಿತು ಆಳವಾಗಿ ಚರ್ಚಿಸಲ್ಪಡುವ ಪುಸ್ತಗಳು ನಮ್ಮ ಬಳಿ ಇರಬೇಕು.
ವಾರಪತ್ರಿಕೆ ,ಪಾಕ್ಷಿಕ ಪತ್ರಿಕೆ,ತಿಂಗಳ ಪತ್ರಿಕೆ ಗಳೂ ತರಿಸಬಹುದು.
ಪವಿತ್ರ ಸುನ್ನತ್ ಜಮಾಅತ್ ಗೆ ವಿರುದ್ಧವಾದ ನೂತನವಾದಿಗಳ ಪತ್ರಿಕೆಗಳನ್ನು ಓದಬಾರದು.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಮತ್ತು ಅಂಬಿಯಾ - ಔಲಿಯಾಗಳನ್ನು ಅವಹೇಳಿಸುವ ನೂತನವಾದಿಗಳ ಭಾಷಣ ಅಥವಾ ಅವರ ಪುಸ್ತಕಗಳನ್ನು ಓದಿ ಇರುವ ಈಮಾನ್ ನಷ್ಟಪಡಿಸಬಾರದು.
ನಮ್ಮ ಮನೆಗಳ ಲೈಬ್ರರಿಯಲ್ಲಿ ಈ ಪುಸ್ತಕಗಳು ಇರಲಿ.
1.ಖುರ್'ಆನ್ ಗೆ ಸಂಭಂಧಪಟ್ಟ ಪುಸ್ತಕ.
2.ಹದೀಸ್ ಗೆ ಸಂಭಂಧಪಟ್ಟ ಪುಸ್ತಕ.
3.ಅಖಾಇದ್
4.ಫಿಖ್'ಹ್
5..ಚರಿತ್ರೆ
ಹಾಗೂ ಇನ್ನಿತರ ಜನರಲ್ ನಾಲೇಡ್ಜ್ ನ ಪುಸ್ತಕಗಳು.
ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಪಾನವಾಗಿಟ್ಟರೆ ಅದರಿಂದುಂಟಾಗುವ ನೆಮ್ಮದಿ ಅಷ್ಟಿಷ್ಟಲ್ಲ.
ನಾವು ಕಲಿತ ಎಲ್ಲಾ ಪುಸ್ತಕ,ಕಿತಾಬ್ ಗಳನ್ನು ತೆಗೆದಿರಿಸಬೇಕು.
ನಾವು ಎಷ್ಟೇ ಕಂಠಪಾಟ ಮಾಡಿದ್ದರೂ ಕಲಿತ ಪುಸ್ತಕಗಳನ್ನು ಎಲ್ಲೆಂದರಲ್ಲಿ ಹಾಕಿ ನಾಶಪಡಿಸಬಾರದು.
ನಮಗಲ್ಲದಿದ್ದರೂ ಇನ್ನೊಬ್ಬರಿಗೆ ಅದರಿಂದ ಉಪಕರಿಸಬಹುದು.
*ಎಲ್ಲರಿಗೂ ಶೇರ್ ಮಾಡಿ*
ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)
ಮುಂದುವರಿಯುವುದು........
ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 11
*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
ಭಾಗ --11
📝 _ಮುನೀರ್ ಸಖಾಫಿ ಸಾಲೆತ್ತೂರು_
_*ಸೂತ್ರ 10:*_
*ಮನೆಯಲ್ಲೊಂದು ದೀನೀ ಕ್ಲಾಸ್ ಇರಲಿ*
ಅಲ್ಲಾಹನು ಹೇಳುತ್ತಾನೆ,
يَا أَيُّهَا الَّذِينَ آمَنُوا قُوا أَنفُسَكُمْ وَأَهْلِيكُمْ نَارًا (التحريم 6)
ಓ ಸತ್ಯ ವಿಶ್ವಾಸಿಗಳೇ!ನಿಮ್ಮ ಮತ್ತು ನಿಮ್ಮವರ ಶರೀರರವನ್ನು ನರಕಾಗ್ನಿಯಿಂದ ರಕ್ಷಿಸಿರಿ
(ಸೂರಾ ಅತ್ತಹ್'ರೀಮ್ 6)
ಮನೆಯಲ್ಲಿರುವ ಪತ್ನಿ ಮಕ್ಕಳು ಸಹಿತ ಎಲ್ಲರಿಗೂ ದೀನಿನ ಬಗ್ಗೆ ಕಲಿಸಿಕೊಡಬೇಕೆಂದು ಪ್ರಸ್ತುತ ಸೂಕ್ತ ತಿಳಿಸಿಕೊಡುತ್ತದೆ.
ಯಾವುದೇ ಆರಾಧನಾ ಕರ್ಮ ನಿರ್ವಹಿಸಬೇಕಾದರೂ ಇಲ್ಮ್ ಅತ್ಯಗತ್ಯ.
ಕಲಿಯದೆ ಆರಾಧನೆ ನಿರ್ವಹಿಸಿದರೆ ಅದೆಲ್ಲವೂ ನಿಷ್ಫಲ.
ನಮ್ಮ ಮನೆಯಲ್ಲಿ ದಿನ ನಿತ್ಯ ಅಥವಾ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಕುಟುಂಬ ತರಗತಿ ನಡೆಸಬೇಕು.
ವಿಶೇಷ ದಿನಗಳ ಮಹತ್ವ ಮತ್ತು ಆ ದಿವಸಗಳಲ್ಲಿ ಮಾಡಬೇಕಾದ ಆರಾಧನೆಗಳನ್ನು ವಿವರಿಸುವ ತರಗತಿ ಪ್ರಸ್ತುತ ಮಜ್ಲಿಸ್ ನಲ್ಲಿ ನಡೆಸಬಹುದು.
ಎಲ್ಲರಿಗೂ ಕುಳಿತುಕೊಳ್ಳಲು ಸೌಕರ್ಯವಿರುವ ಒಂದು ಸ್ಥಳದಲ್ಲಿ ಆ ಕ್ಲಾಸ್ ನಡೆಸಬಹುದು.ಮನೆಯಲ್ಲಿ ಕಲಿತವರು ಇದ್ರೆ ಅವರೇ ಅದನ್ನು ನಡೆಸಬಹುದು.
ಕಲಿತವರು ಇಲ್ಲದಿರುವ ಸಂದರ್ಭದಲ್ಲಿ ಮಹಿಳೆಯರಿಗಾಗಿ ಮಾತ್ರ ಕಲಿಸಲು ಮಹಿಳಾ ಆಲಿಮತನ್ನು ಕರೆಸಿ ಕ್ಲಾಸ್ ನಡೆಸಬಹುದು.
(ಪುರುಷರಿಗೆ ಮಸೀದಿಗಳಲ್ಲಿ ತರಗತಿಗಳು ಲಭ್ಯವಿದ್ದು ಅದರ ಸದುಪಯೋಗ ಪಡೆಯಬಹುದಾಗಿದೆ.)
ಮಹಿಳಾ ಆಲಿಮತ್ ಗಳು ನಡೆಸುವ ಕ್ಲಾಸ್ ಆಗಿದ್ದರೆ ಪುರುಷರು ಅಲ್ಲಿ ಸೇರಬಾರದು.
ತರಗತಿ ನಡೆಸುವವರು ಪುರುಷ ಆಲಿಮ್ ಆಗಿದ್ದರೆ ಫರ್ಳ್ ಕಾರ್ಯಗಳನ್ನು ಕಲಿಸುವ ತರಗತಿ ಆಗಿದ್ದರೆ ಮಾತ್ರ ಮಹಿಳೆಯರನ್ನು ದರ್ಶಿಸಬಹುದು.ಇನ್ನಿತರ ಕಲಿಯಲು ಕಡ್ಡಾಯವಲ್ಲದ ಸುನ್ನತ್ತಾದ ಇಲ್ಮನ್ನು ಕಲಿಸಲು ಅನ್ಯ ಮಹಿಳೆಯರ ಮುಖ ನೋಡುವಂತಿಲ್ಲ.
ಇದು ಇಮಾಮ್ ಝೈನುದ್ದೀನ್ ಮಕ್ದೂಮ್ (ರ) ಫತ್'ಹುಲ್ ಮುಈನ್ ನಲ್ಲಿ ವಿವರಿಸಿದ್ದಾರೆ.
ಖಡ್ಡಾಯ ಇಲ್ಮ್ ಅಲ್ಲದಿದ್ದರೂ ಹಲವಾರು ಮಹಿಳೆಯರು ಸೇರುವ ಕ್ಲಾಸ್ ಆಗಿದ್ದರೆ ಪರದೆಯ ಹಿಂದೆ ಮಹಿಳೆಯರು ಕುಳಿತು ಇಲ್ಮ್ ಆಲಿಸುವುದರಲ್ಲಿ ಯಾವುದೇ ತಪ್ಪಿಲ್ಲ.
ಇಮಾ ಬುಖಾರಿಯ ಒಂದು ಹದೀಸ್ ನೋಡಿ,
عَنْ أَبِي سَعِيدٍ الْخُدْرِيِّ قَالَتْ النِّسَاءُ لِلنَّبِيِّ صَلَّى اللَّهُ عَلَيْهِ وَسَلَّمَ غَلَبَنَا عَلَيْكَ الرِّجَالُ فَاجْعَلْ لَنَا يَوْمًا مِنْ نَفْسِكَ فَوَعَدَهُنَّ يَوْمًا لَقِيَهُنَّ فِيهِ فَوَعَظَهُنَّ وَأَمَرَهُنَّ.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಳಿ ಬಂದು ಮಹಿಳೆಯರು ಈ ರೀತಿ ಭಿನ್ನವಿಸಿಕೊಂಡರು,
ಓ ಪ್ರವಾದೀ ವರ್ಯರೇ!
ಪುರುಷರು ಎಲ್ಲಾ ಕಡೆ ತಮ್ಮೊಂದಿಗೆ ಕುಳಿತು ಇಲ್ಮ್ ಕಲಿಯುವರು.ನಮಗೂ ಅಲ್ಪ ಇಲ್ಮ್ ಹೇಳಿ ಕೊಡುವಿರಾ?
ಆವಾಗ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಮಹಿಳೆಯರಿಗಾಗಿ ಒಂದು ದಿನವನ್ನು ಗೊತ್ತು ಪಡಿಸಿದರು
(ಬುಖಾರಿ 101)
ನಮ್ಮ ದೈನಂದಿನ ಆರಾಧನೆಗಳಲ್ಲಿ ನಮ್ಮಿಂದ ಎಷ್ಟೋ ತಪ್ಪುಗಳು ಸಂಭವಿಸುತ್ತಾ ಇರುತ್ತದೆ.
ಕಿರಿಯ ಪ್ರಾಯದಲ್ಲಿ ಮದ್ರಸಗಳಲ್ಲಿ ಕಲಿತ ಇಲ್ಮ್ ಪ್ರಾಯೋಗಿಕ ರೂಪದಲ್ಲಿ ಪ್ರಯೋಗಿಸುವಾಗ ಅದು ಮರೆತುಬಿಟ್ಟಿರುತ್ತದೆ.
ಕೆಲವರಿಗೆ ಚಿಕ್ಕ ಪುಟ್ಟ ವಿಷಯಗಳನ್ನು ಎಷ್ಟೇ ಮನವರಿಕೆ ಮಾಡಿಕೊಟ್ಟರೂ ಪುನಃ ತಪ್ಪುಗಳನ್ನೇ ಮಾಡುವವರಿದ್ದಾರೆ.
ಆದುದರಿಂದ ನಾವು ದೈನಂದಿನ ಮಾಡವ ಇಬಾದತ್ ಗಳಲ್ಲಿ ತಪ್ಪುಗಳು ಬಾರದಂತೆ ಎಚ್ಚರವಹಿಸಿ ನಿರ್ವಹಿಸಬೇಕು.
ಅದಕ್ಕಾಗಿ ಇಲ್ಮ್ ನಾವು ಕಲಿತಿರಬೇಕು.
ಕಲಿತ ಇಲ್ಮ್ ಮರೆತು ಹೋಗುವುದಕ್ಕಾಗಿ ಇನ್ನಷ್ಟು ಕಲಿಯಬೇಕು.ಕಲಿತದ್ದನ್ನು ಜೀವನದಲ್ಲಿ ಅಳವಡಿಸಬೇಕು.
ಒಂದು ಉತ್ತಮ ಆಲಿಮ್ ಒಬ್ಬರ ಮೊಬೈಲ್ ನಂಬರ್ ನಮ್ಮ ಬಳಿ ಇದ್ದರೆ ಬಹಳ ಉತ್ತಮ.ಸಂಶಯ ಬರುವಾಗ ಅವರಿಂದ ಅದನ್ನು ಕೇಳಿ ಸಂಶಯ ನೀಗಿಸಲು ಸಹಾಯಕಾರಿಯಾದೀತು.
ಮಹಿಳೆಯರು ಕರೆ ಮಾಡಿ ಪುರುಷ ಆಲಿಮರೊಂದಿಗೆ ಸಂಶಯ ಕೇಳಲೇ ಬಾರದು.
ಕಾರಣ ,ಅದು ಕೆಡುಕನ್ನು ಅಹ್ವಾನಿಸುತ್ತದೇ ಹೊರತು ಅದರಿಂದ ಒಳಿತಿಲ್ಲ.
ನಾನು ಒಂದು ಉಸ್ತಾದರ ಮನೆಗೆ ಹೋಗಿದ್ದೆ.
ಮನೆಯಲ್ಲಿ ಮಹಿಳೆಯರು ಕುಳಿತುಕೊಳ್ಳುವ ಹಿಂಬದಿಯಲ್ಲಿ ಒಂದು ಬೋರ್ಡ್ ತೋರಿಸಿ ಉಸ್ತಾದ್ ಹೇಳಿದರು,
ವಿಶೇಷ ದಿನಗಳ ಮಹತ್ವ ಮತ್ತು ಆ ದಿನಗಳಲ್ಲಿ ಮಾಡಬೇಕಾದ ಕಾರ್ಯಗಳನ್ನು ಚುಟುಕಾಗಿ ಈ ಬೋರ್ಡಲ್ಲಿ ನಾನು ಬರೆದುಕೊಡುತ್ತೇನೆ.
ಮಕ್ಕಳು ಅದು ನೋಡಿ ಕಲಿಯುತ್ತಾರೆ.
ನನ್ನ ಪತ್ನಿ ಅದನ್ನು ಅವಳ ಗೆಳತಿಯರಿಗೆ ಮೆಸೇಜ್ ಮಾಡಿ ಅವರಿಗೂ ಕಲಿಸಿಕೊಡುತ್ತಾಳೆ.
ನಮ್ಮ ಮನೆಯಲ್ಲೂ ಈ ರೀತಿಯ ಉಪಕರಣಗಳಿದ್ದರೆ ತುಂಬಾ ಉತ್ತಮವಲ್ಲವೇ?
ಎಲ್ಲರಿಗೂ ಶೇರ್ ಮಾಡಿ
ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)
ಮುಂದುವರಿಯುವುದು........
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
ಭಾಗ --11
📝 _ಮುನೀರ್ ಸಖಾಫಿ ಸಾಲೆತ್ತೂರು_
_*ಸೂತ್ರ 10:*_
*ಮನೆಯಲ್ಲೊಂದು ದೀನೀ ಕ್ಲಾಸ್ ಇರಲಿ*
ಅಲ್ಲಾಹನು ಹೇಳುತ್ತಾನೆ,
يَا أَيُّهَا الَّذِينَ آمَنُوا قُوا أَنفُسَكُمْ وَأَهْلِيكُمْ نَارًا (التحريم 6)
ಓ ಸತ್ಯ ವಿಶ್ವಾಸಿಗಳೇ!ನಿಮ್ಮ ಮತ್ತು ನಿಮ್ಮವರ ಶರೀರರವನ್ನು ನರಕಾಗ್ನಿಯಿಂದ ರಕ್ಷಿಸಿರಿ
(ಸೂರಾ ಅತ್ತಹ್'ರೀಮ್ 6)
ಮನೆಯಲ್ಲಿರುವ ಪತ್ನಿ ಮಕ್ಕಳು ಸಹಿತ ಎಲ್ಲರಿಗೂ ದೀನಿನ ಬಗ್ಗೆ ಕಲಿಸಿಕೊಡಬೇಕೆಂದು ಪ್ರಸ್ತುತ ಸೂಕ್ತ ತಿಳಿಸಿಕೊಡುತ್ತದೆ.
ಯಾವುದೇ ಆರಾಧನಾ ಕರ್ಮ ನಿರ್ವಹಿಸಬೇಕಾದರೂ ಇಲ್ಮ್ ಅತ್ಯಗತ್ಯ.
ಕಲಿಯದೆ ಆರಾಧನೆ ನಿರ್ವಹಿಸಿದರೆ ಅದೆಲ್ಲವೂ ನಿಷ್ಫಲ.
ನಮ್ಮ ಮನೆಯಲ್ಲಿ ದಿನ ನಿತ್ಯ ಅಥವಾ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಕುಟುಂಬ ತರಗತಿ ನಡೆಸಬೇಕು.
ವಿಶೇಷ ದಿನಗಳ ಮಹತ್ವ ಮತ್ತು ಆ ದಿವಸಗಳಲ್ಲಿ ಮಾಡಬೇಕಾದ ಆರಾಧನೆಗಳನ್ನು ವಿವರಿಸುವ ತರಗತಿ ಪ್ರಸ್ತುತ ಮಜ್ಲಿಸ್ ನಲ್ಲಿ ನಡೆಸಬಹುದು.
ಎಲ್ಲರಿಗೂ ಕುಳಿತುಕೊಳ್ಳಲು ಸೌಕರ್ಯವಿರುವ ಒಂದು ಸ್ಥಳದಲ್ಲಿ ಆ ಕ್ಲಾಸ್ ನಡೆಸಬಹುದು.ಮನೆಯಲ್ಲಿ ಕಲಿತವರು ಇದ್ರೆ ಅವರೇ ಅದನ್ನು ನಡೆಸಬಹುದು.
ಕಲಿತವರು ಇಲ್ಲದಿರುವ ಸಂದರ್ಭದಲ್ಲಿ ಮಹಿಳೆಯರಿಗಾಗಿ ಮಾತ್ರ ಕಲಿಸಲು ಮಹಿಳಾ ಆಲಿಮತನ್ನು ಕರೆಸಿ ಕ್ಲಾಸ್ ನಡೆಸಬಹುದು.
(ಪುರುಷರಿಗೆ ಮಸೀದಿಗಳಲ್ಲಿ ತರಗತಿಗಳು ಲಭ್ಯವಿದ್ದು ಅದರ ಸದುಪಯೋಗ ಪಡೆಯಬಹುದಾಗಿದೆ.)
ಮಹಿಳಾ ಆಲಿಮತ್ ಗಳು ನಡೆಸುವ ಕ್ಲಾಸ್ ಆಗಿದ್ದರೆ ಪುರುಷರು ಅಲ್ಲಿ ಸೇರಬಾರದು.
ತರಗತಿ ನಡೆಸುವವರು ಪುರುಷ ಆಲಿಮ್ ಆಗಿದ್ದರೆ ಫರ್ಳ್ ಕಾರ್ಯಗಳನ್ನು ಕಲಿಸುವ ತರಗತಿ ಆಗಿದ್ದರೆ ಮಾತ್ರ ಮಹಿಳೆಯರನ್ನು ದರ್ಶಿಸಬಹುದು.ಇನ್ನಿತರ ಕಲಿಯಲು ಕಡ್ಡಾಯವಲ್ಲದ ಸುನ್ನತ್ತಾದ ಇಲ್ಮನ್ನು ಕಲಿಸಲು ಅನ್ಯ ಮಹಿಳೆಯರ ಮುಖ ನೋಡುವಂತಿಲ್ಲ.
ಇದು ಇಮಾಮ್ ಝೈನುದ್ದೀನ್ ಮಕ್ದೂಮ್ (ರ) ಫತ್'ಹುಲ್ ಮುಈನ್ ನಲ್ಲಿ ವಿವರಿಸಿದ್ದಾರೆ.
ಖಡ್ಡಾಯ ಇಲ್ಮ್ ಅಲ್ಲದಿದ್ದರೂ ಹಲವಾರು ಮಹಿಳೆಯರು ಸೇರುವ ಕ್ಲಾಸ್ ಆಗಿದ್ದರೆ ಪರದೆಯ ಹಿಂದೆ ಮಹಿಳೆಯರು ಕುಳಿತು ಇಲ್ಮ್ ಆಲಿಸುವುದರಲ್ಲಿ ಯಾವುದೇ ತಪ್ಪಿಲ್ಲ.
ಇಮಾ ಬುಖಾರಿಯ ಒಂದು ಹದೀಸ್ ನೋಡಿ,
عَنْ أَبِي سَعِيدٍ الْخُدْرِيِّ قَالَتْ النِّسَاءُ لِلنَّبِيِّ صَلَّى اللَّهُ عَلَيْهِ وَسَلَّمَ غَلَبَنَا عَلَيْكَ الرِّجَالُ فَاجْعَلْ لَنَا يَوْمًا مِنْ نَفْسِكَ فَوَعَدَهُنَّ يَوْمًا لَقِيَهُنَّ فِيهِ فَوَعَظَهُنَّ وَأَمَرَهُنَّ.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಳಿ ಬಂದು ಮಹಿಳೆಯರು ಈ ರೀತಿ ಭಿನ್ನವಿಸಿಕೊಂಡರು,
ಓ ಪ್ರವಾದೀ ವರ್ಯರೇ!
ಪುರುಷರು ಎಲ್ಲಾ ಕಡೆ ತಮ್ಮೊಂದಿಗೆ ಕುಳಿತು ಇಲ್ಮ್ ಕಲಿಯುವರು.ನಮಗೂ ಅಲ್ಪ ಇಲ್ಮ್ ಹೇಳಿ ಕೊಡುವಿರಾ?
ಆವಾಗ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಮಹಿಳೆಯರಿಗಾಗಿ ಒಂದು ದಿನವನ್ನು ಗೊತ್ತು ಪಡಿಸಿದರು
(ಬುಖಾರಿ 101)
ನಮ್ಮ ದೈನಂದಿನ ಆರಾಧನೆಗಳಲ್ಲಿ ನಮ್ಮಿಂದ ಎಷ್ಟೋ ತಪ್ಪುಗಳು ಸಂಭವಿಸುತ್ತಾ ಇರುತ್ತದೆ.
ಕಿರಿಯ ಪ್ರಾಯದಲ್ಲಿ ಮದ್ರಸಗಳಲ್ಲಿ ಕಲಿತ ಇಲ್ಮ್ ಪ್ರಾಯೋಗಿಕ ರೂಪದಲ್ಲಿ ಪ್ರಯೋಗಿಸುವಾಗ ಅದು ಮರೆತುಬಿಟ್ಟಿರುತ್ತದೆ.
ಕೆಲವರಿಗೆ ಚಿಕ್ಕ ಪುಟ್ಟ ವಿಷಯಗಳನ್ನು ಎಷ್ಟೇ ಮನವರಿಕೆ ಮಾಡಿಕೊಟ್ಟರೂ ಪುನಃ ತಪ್ಪುಗಳನ್ನೇ ಮಾಡುವವರಿದ್ದಾರೆ.
ಆದುದರಿಂದ ನಾವು ದೈನಂದಿನ ಮಾಡವ ಇಬಾದತ್ ಗಳಲ್ಲಿ ತಪ್ಪುಗಳು ಬಾರದಂತೆ ಎಚ್ಚರವಹಿಸಿ ನಿರ್ವಹಿಸಬೇಕು.
ಅದಕ್ಕಾಗಿ ಇಲ್ಮ್ ನಾವು ಕಲಿತಿರಬೇಕು.
ಕಲಿತ ಇಲ್ಮ್ ಮರೆತು ಹೋಗುವುದಕ್ಕಾಗಿ ಇನ್ನಷ್ಟು ಕಲಿಯಬೇಕು.ಕಲಿತದ್ದನ್ನು ಜೀವನದಲ್ಲಿ ಅಳವಡಿಸಬೇಕು.
ಒಂದು ಉತ್ತಮ ಆಲಿಮ್ ಒಬ್ಬರ ಮೊಬೈಲ್ ನಂಬರ್ ನಮ್ಮ ಬಳಿ ಇದ್ದರೆ ಬಹಳ ಉತ್ತಮ.ಸಂಶಯ ಬರುವಾಗ ಅವರಿಂದ ಅದನ್ನು ಕೇಳಿ ಸಂಶಯ ನೀಗಿಸಲು ಸಹಾಯಕಾರಿಯಾದೀತು.
ಮಹಿಳೆಯರು ಕರೆ ಮಾಡಿ ಪುರುಷ ಆಲಿಮರೊಂದಿಗೆ ಸಂಶಯ ಕೇಳಲೇ ಬಾರದು.
ಕಾರಣ ,ಅದು ಕೆಡುಕನ್ನು ಅಹ್ವಾನಿಸುತ್ತದೇ ಹೊರತು ಅದರಿಂದ ಒಳಿತಿಲ್ಲ.
ನಾನು ಒಂದು ಉಸ್ತಾದರ ಮನೆಗೆ ಹೋಗಿದ್ದೆ.
ಮನೆಯಲ್ಲಿ ಮಹಿಳೆಯರು ಕುಳಿತುಕೊಳ್ಳುವ ಹಿಂಬದಿಯಲ್ಲಿ ಒಂದು ಬೋರ್ಡ್ ತೋರಿಸಿ ಉಸ್ತಾದ್ ಹೇಳಿದರು,
ವಿಶೇಷ ದಿನಗಳ ಮಹತ್ವ ಮತ್ತು ಆ ದಿನಗಳಲ್ಲಿ ಮಾಡಬೇಕಾದ ಕಾರ್ಯಗಳನ್ನು ಚುಟುಕಾಗಿ ಈ ಬೋರ್ಡಲ್ಲಿ ನಾನು ಬರೆದುಕೊಡುತ್ತೇನೆ.
ಮಕ್ಕಳು ಅದು ನೋಡಿ ಕಲಿಯುತ್ತಾರೆ.
ನನ್ನ ಪತ್ನಿ ಅದನ್ನು ಅವಳ ಗೆಳತಿಯರಿಗೆ ಮೆಸೇಜ್ ಮಾಡಿ ಅವರಿಗೂ ಕಲಿಸಿಕೊಡುತ್ತಾಳೆ.
ನಮ್ಮ ಮನೆಯಲ್ಲೂ ಈ ರೀತಿಯ ಉಪಕರಣಗಳಿದ್ದರೆ ತುಂಬಾ ಉತ್ತಮವಲ್ಲವೇ?
ಎಲ್ಲರಿಗೂ ಶೇರ್ ಮಾಡಿ
ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)
ಮುಂದುವರಿಯುವುದು........
Subscribe to:
Comments (Atom)