Tuesday, May 5, 2020

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 09

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --9


📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  8:*_
*ಕಾರ್ಮಿಕನ ವೇತನ ಸರಿಯಾಗಿ ನೀಡಿ*

ಒಂದು ಮನೆ ಕಟ್ಟುವಾಗ ಮಣ್ಣಿನ ಕೆಲಸದಿಂದ ಹಿಡಿದು ಮರಕೆಲಸ ತನಕ ಎಲ್ಲವೂ ನಡೆಯುತ್ತದೆ.
ಮನೆಯ ಅಡಿಪಾಯಕ್ಕೆ ಮಣ್ಣು ಅಗೆಯುವವರು,ಕಲ್ಲು ಕಟ್ಟುವವರು,ಕಲ್ಲು ಕೋರೆಯಿಂದ ತಲುಪಿಸುವವರು,ಹೊಯ್ಗೆ,ಮರ,ಎಲೆಕ್ಟಿಷಿಯನ್ ಅದೇ ರೀತಿ ಕೊಳಾಯಿಗಾರ ಸಹಿತ ನೂರಾರು ಕಾರ್ಮಿಕರ ಅಗತ್ಯ ಬರುತ್ತದೆ.
ಮನೆಕೆಲಸಕ್ಕೆ ಕರೆಸಿದ ಕಾರ್ಮಿಕರಿಗೆ ಅನ್ನ ಪಾನೀಯಗಳ ಜತೆಗೆ ಅವರ ವೇತನವನ್ನು ಕೂಡಾ ಸರಿಯಾದ ಸಮಯಕ್ಕೆ ಕೊಡಲೇಬೇಕು.

ಕಟ್ಟಿದ ಮನೆಯಲ್ಲಿ ನೆಮ್ಮದಿ ಇಲ್ಲ ಎಂದಾದಲ್ಲಿ ಯಾವುದೋ ಕಾರ್ಮಿಕನಿಗೆ ಕೊಡಬೇಕಾದ ಸಂಬಳ ಬಾಕಿ ಇದೆ ಎಂದು ತಿಳಿಯಬೇಕಾಗಿದೆ.

ಕೆಲವರು ಮನೆಕಟ್ಟಿಸಿ ಬಹಳ ವಿಜ್ರಂಭಣೆಯಿಂದ ಗ್ರಹ ಪವೇಶ ನಡೆಸುತ್ತಾರೆ.
ಮನೆ ಸಂಪೂರ್ಣ ಲೈಟಿಂಗ್ಸ್ ನಿಂದ ಅಲಂಕರಿಸುತ್ತಾರೆ.
ಆದರೆ ಬಡವನಾದ ಕಾರ್ಮಿಕನಿಗೆ ಕೊಡಬೇಕಾದ ವೇತನ ಕೇಳುವಾಗ ಬೆಧರಿಕೆ ಮತ್ತು ಸತಾಯಿಸುವಿಕೆ ಮಾಡುವುದಾದಲ್ಲಿ ಯಾವ ನೆಮ್ಮದಿ ಆ ಮನೆಯಲ್ಲಿ ನಿರೀಕ್ಷಸಬೇಕು?

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಒಂದು ಹದೀಸ್ ನೋಡಿ,
عن عبد الله بن عمر ـ رضي الله عنهما  قال: قال رسول الله  صلى الله عليه وسلم : أعطوا الأجير أجره قبل أن يجف عرقه (ابن ماجه)
ಕಾರ್ಮಿಕನ ಬೆವರು ಒಣಗುವ ಮುಂಚೆ ಆತನ  ವೇತನವನ್ನು ನೀಡಿರಿ
(ವರದಿ :ಇಬ್ನ್ ಮಾಜ)
------------------------------------------------------------
ಇನ್ನೊಂದು ಹದೀಸ್ ನೋಡಿ
عن أبي هريرة ـ رضي الله عنه ـ عن النبي ـ صلى الله عليه وسلم ـ قال: قال الله تعالى: ثلاثة أنا خصمهم يوم القيامة: رجل أعطى بي ثم غدر، ورجل باع حرا فأكل ثمنه، ورجل استأجر أجيرا فاستوفى منه ولم يعطه أجره 
(البخاري)
ಅಬೂಹುರೈರ(ರ) ರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಂದ ವರದಿ ಮಾಡುತ್ತಾರೆ,
ಅಲ್ಲಾಹನು ಹೇಳಿರುವನು,
ಅಂತ್ಯದಿನದಲ್ಲಿ 3 ವಿಭಾಗ ಜನರು ನನ್ನ ವಿರೋಧಿಯಾಗಿರುವರು.
1.ನನ್ನ ಹೆಸರಲ್ಲಿ ಆಣೆ ಹಾಕಿ ಹೇಳಿ ಅದಕ್ಕೆ ವಿರುದ್ಧವಾಗಿ ನಡೆದವರು.
2.ಸ್ವತಂತ್ರ ವ್ಯಕ್ತಿಯನ್ನು ಮಾರಾಟ ಮಾಡಿ ಆ ಹಣದಿಂದ ತಿಂದವನು.
3.ಕೂಲಿ ಕೆಲಸಕ್ಕಾಗಿ ಒಬ್ಬನನ್ನು ಕರೆಸಿ ಕೆಲಸ ಮಾಡಿಸಿ ಸಂಬಳ ಕೊಡದವನು.
(ಬುಖಾರಿ)
------------------------------------------------------------------
ಅರಿವಿಲ್ಲದೆ ಕಾರ್ಮಿಕರ ಸಂಬಳ ಕೊಡದೆ ಬಾಕಿಯಿಟ್ಟಿದ್ದಲ್ಲಿ ಅದನ್ನು ಅವರಿಗೆ ಕೊಡಲೇ ಬೇಕು.

ಇಮಾಮ್ ಬುಖಾರಿ ತನ್ನ ಸ್ವಹೀಹ್ ನಲ್ಲಿ ವರದಿ ಮಾಡಿದ ಒಂದು ಹದೀಸಿನಲ್ಲಿ 3 ಜನರು ಗುಹೆಯೊಳಗೆ ಬಂದಿಯಾದ ಒಂದು ಚರಿತ್ರೆಯಿದೆ.ಆ 3 ಜನರು ಅಲ್ಲಿಂದ ರಕ್ಷೆಹೊಂದಲು ಅವರು ತಮ್ಮ ಜೀವನದಲ್ಲಿ ಮಾಡಿದ ಸತ್ಕರ್ಮಗಳನ್ನು ಮುಂದಿಟ್ಟು ಅಲ್ಲಾಹನಲ್ಲಿ ತವಸ್ಸುಲ್ ಮಾಡಿ ಪ್ರಾರ್ಥಿಸಿದರು.
ಅದರೊಲ್ಲಬ್ಬರು ಪ್ರಾರ್ಥಿಸಿದ ಪ್ರಾರ್ಥನೆ ಹೀಗಿತ್ತು,
فقال:  اللهم استأجرت أجراء وأعطيتهم أجرهم غير رجل واحد ترك الذي له وذهب، فثمرت أجره حتى كثرت منه الأموال، فجاءني بعد حين، فقال: يا عبد الله، أد إليّ أجري، فقلت: كل ما ترى من أجرك من الإبل والبقر والغنم والرقيق، فقال: يا عبد الله، لا تستهزئ بي! فقلت: لا أستهزئ بك، فأخذه كله فاستاقه فلم يترك منه شيئا، اللهم إن كنت فعلت ذلك ابتغاء وجهك فافرج عنَّا ما نحن فيه، فانفرجت الصخرة فخرجوا يمشون .
( البخاري)
ಅಲ್ಲಾಹನೇ!
 ನನ್ನ ಮನೆಗೆ ಒಂದು ದಿವಸ ಹಲವಾರು ಕಾರ್ಮಿಕರನ್ನು ಕೆಲಸಕ್ಕೆ ಕರೆಸಿದೆ.ಎಲ್ಲರಿಗೂ ಅವರವರ ವೇತನ ನೀಡಿದೆ.ಒಬ್ಬರಿಗೆ ಮಾತ್ರ ನೀಡಿಲ್ಲ.ಅವರಿಗೆ ನೀಡಬೇಕಾದ ಆ ಹಣದಿಂದ ನಾನು ಆಡು,ಹಸು,ಒಂಟೆಗಳನ್ನು ಖರೀದಿಸಿದೆ.
ವರ್ಷಗಳ ಬಳಿಕ ಆ ವ್ಯಕ್ತಿ ನನ್ನ ಬಳಿ ಬಂದು ತನ್ನ ವೇತನವನ್ನು ಕೇಳಿದ.
ನಾನು ಆತನಿಗೆ ನೀಡಬೇಕಾದ ಹಣದಿಂದ ಖರೀದಿಸಿದ ಎಲ್ಲಾ ಮೃಗಗಳನ್ನು ತೋರಿಸಿ ಹೇಳಿದೆ.ಇದೆಲ್ಲವೂ ನಿನ್ನದ್ದಾಗಿದೆ.ಇದನ್ನು ಕೊಂಡು ಹೋಗು.
ಆಗ ಆತ ಕೇಳಿದ,ನನ್ನನ್ನು ಹಿಯಾಳಿಸುತ್ತೀಯಾ? ನಾನು ಹೇಳಿದೆ,
 ಖಂಡಿತಾ ಅಲ್ಲ.ಇದೆಲ್ಲವೂ ನಿನ್ನ ಹಣದಿಂದ ಖರೀದಿಸಿದ್ದಾಗಿದೆ.
ಇದು ಹೇಳಿದಾಗ ಆ ವ್ಯಕ್ತಿ ಬಹಳ ಸಂತೋಷದಿಂದ ಅದನ್ನೆಲ್ಲಾ ಕೊಂಡು ಹೋದ.
ಅಲ್ಲಾಹನೇ!ನಾನು ಮಾಡಿದ ಆ ಸತ್ಕರ್ಮ ನೀನು ಇಷ್ಟಪಟ್ಟಿರುವೆಯಾದರೆ ನಮ್ಮ ಈ ಗುಹೆಯ ಬಾಗಿಲನ್ನು ತೆರೆದು ಕೊಡು.
ಆವಾಗ ಮುಚ್ಚಲ್ಪಟ್ಟ ಗುಹೆಯ ಬಾಗಿಲುಗಳು ತೆರೆಯಿತು.
(ಬುಖಾರಿ) -------------------------------------------------------------
عن أبي أمامة بن ثعلبة الحارثي رضي الله عنه  أن رسول الله صلى الله عليه وسلم ـ قال: من اقتطع حقّ مسلم بيمينه، حرم الله عليه الجنة، وأوجب له النّار، قالوا: وإن كان شيئا يسيرا؟، قال: وإن كان قضيبا من أراك.
 (مسلم )
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು,ಆಣೆ ಹಾಕಿ ಇನ್ನೊಬ್ಬನ ಹಖ್ಖನ್ನು ಯಾರು ಕಸಿಯುವನೋ ಅವನಿಗೆ ನರಕ ಕಡ್ಡಾಯವಾಗಿದೆ.
ಆವಾಗ ಸ್ವಹಾಬತ್ ಕೇಳಿದರು,ಅದು ಅತೀ ಚಿಕ್ಕದಾದರೂ ಅವನಿಗೆ ನಕರ ಕಡ್ಡಾಯವೇ?
ಹೌದು!ಅದು ಹಲ್ಲುಜ್ಜುವ ಪುಟ್ಟ ಮರದ ತುಂಡಾದರೂ ಸರಿ ಎಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಉತ್ತರಿಸಿದರು.
(ಮುಸ್ಲಿಂ)
-------------------------------------------------------------
ಕುಟುಂಬದ ಜವಬ್ದಾರಿ ಹೊತ್ತ ಕಾರ್ಮಿಕ ನಮ್ಮ ಮನೆಯ ಕೂಲಿ ಕೆಲಸ ಮಾಡಿ ಬರೀ ಕೈಯಲ್ಲಿ ಆತ ಮರಳುವುದಾದರೆ ಹಾಯಾಗಿ ಆ ಮನೆಯಲ್ಲಿ ವಾಸಿಸಬಹುದೆಂದು ಸ್ವಪ್ನದಲ್ಲೂ ಕೂಡಾ ಯಾರು ಭಾವಿಸಬೇಡಿ.
ಆತನ ಮತ್ತು ಕುಟುಂಬದ ಶಾಪವೇ ಧಾರಾಳ ಸಾಕು.




ಎಲ್ಲರಿಗೂ ಶೇರ್ ಮಾಡಿ

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)

ಮುಂದುವರಿಯುವುದು........

No comments:

Post a Comment