Sunday, June 14, 2020

ಝಿಯಾರತ್ತ್ ಕೇಂದ್ರ 84 ವಲಿಯುಲ್ಲಾಹಿ ಶೈಖ್ ಮಖ್ದೂಮ್ ಫರೀದ್ ಮಿಲಿಟರಿ ಬಾಬ (ಖ:ಸಿ) ಅರಿಕುಳಂ ಕೊಯಿಲಾಂಡಿ ಕಲ್ಲಿಕೋಟೆ ಜಿಲ್ಲೆ.

#ಝಿಯಾರತ್ತ್_ಕೇಂದ್ರ​​​
🔖🔖 8️⃣4️⃣ 🔖🔖
➖➖➖➖➖➖➖
#ವಲಿಯುಲ್ಲಾಹಿ_ಶೈಖ್_ಮಖ್ದೂಮ್ #ಫರೀದ್_ಮಿಲಿಟರಿ_ಬಾಬ (ಖ:ಸಿ) #ಅರಿಕುಳಂ_ಕೊಯಿಲಾಂಡಿ_ಕಲ್ಲಿಕೋಟೆ_ಜಿಲ್ಲೆ.
➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
**********************

ಮರಣಕ್ಕಿಂತ ಮುಂಚೆ ಸೃಷ್ಟಿಕರ್ತನಾದ ಅಲ್ಲಾಹನ ಹಬೀಬಾದ ನಬಿ ﷺِರನ್ನು ಕನಸಿನಲ್ಲಾದರೂ ಒಮ್ಮೆ ಕಾಣಬೇಕೆಂದು ಬಯಸದ ಮುಅ್‌ಮಿನ್‌‌‌ಗಳೇ ಇಲ್ಲ. ಆದರೆ ಕನಸಿನಲ್ಲಿ ಮಾತ್ರವಲ್ಲದೆ ನನಸಿನಲ್ಲೇ ಆ ಹಬೀಬ್ ﷺِ ರನ್ನು ಕಾಣುವ ಭಾಗ್ಯ ದೊರೆತರೆ ಅದಕ್ಕಿಂತ ದೊಡ್ಡ ಸೌಭಾಗ್ಯ ಇನ್ನೇನಿದೆ?

ಹಾಗೆ ಅಲ್ಲಾಹನ ಹಬೀಬ್ ﷺِ ರನ್ನು ಕನಸಿನಲ್ಲಿ ಮಾತ್ರವಲ್ಲದೆ ನನಸಿನಲ್ಲೂ ಕಂಡ ಅನೇಕ ಮಹಾತ್ಮರ ಬಗ್ಗೆ ನಾವು ಕೇಳಿದ್ದೇವೆ. ಅಂತಹ ಮಹಾತ್ಮರ ಪೈಕಿ ಕಲ್ಲಿಕೋಟೆಯ ಕೊಯಿಲಾಂಡಿ ಸಮೀಪದ ಅರಿಕುಳಂ ಎಂಬಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ವಲಿಯುಲ್ಲಾಹಿ ಶೈಖ್ ಮಖ್ದೂಂ ಫರೀದ್ ಮಿಲಿಟರಿ ಬಾಬಾ (ಖ.ಸಿ) ಸಹ ಒಬ್ಬರು.

ಕೇರಳದ ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್‌ ಒರುಮನಯೂರ್‌ ನಿವಾಸಿಯಾದ ಕುಂಞುಮೋನ್‌ ಹಾಜಿಯವರು, "ಮಖ್ದೂಮ್ ಮಿಲಿಟರಿ ಮಾಲ" ಎಂಬ ಸಣ್ಣ ಕೃತಿಯಲ್ಲಿ ಈ ಮಹಾನರನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ.

ಮಹಾನರ ಜನನ ತಾಯಿ ತಂದೆಯರ ಬಗ್ಗೆ ಹೆಚ್ಚಿನ ಮಾಹಿತಿ ಈ ಕೃತಿಯಲ್ಲಿ ಇಲ್ಲ. ಪೊನ್ನಾನಿ ಅಲ್ಲಾಮಾ ಮುಹಮ್ಮದ್ ಮುಸ್ಲಿಯಾರ್ (ಖ.ಸಿ)ರಿಂದ ಪೊನ್ನಾನಿ ದರ್ಸ್‌ನಲ್ಲಿ ತಫ್ಸೀರ್, ಫಿಖ್ಹ್‌ ಮತ್ತು ಹದೀಸ್‌ಗಳ ಅಧ್ಯಯನ ಮಾಡಿದರಲ್ಲದೆ ಪೊನ್ನಾನಿ ಮಕ್ಕಿ ಪಳ್ಳಿ ವಾಇಳ್ ಅಬ್ದುಲ್ಲಾ ಮುಸ್ಲಿಯಾರ್ (ಖ.ಸಿ) ಮತ್ತು ಅಬ್ದುಲ್ಲಾ ಯಮಾನಿಲ್‌(ಖ.ಸಿ)ರಿಂದ ಉರ್ದು, ಪಾರ್ಸಿ ಇತ್ಯಾದಿ ಭಾಷೆಗಳಲ್ಲೂ ಜ್ಞಾನಾರ್ಜನೆ ಮಾಡಿದರು.

ಇಹಲೋಕದಲ್ಲಿ ಈಗಲೂ ಜೀವಿಸಿರುವ ಖಿಳ್‌ರ್ ನಬಿ(ಅ)ರು ಆಗಾಗ ಅಲ್ಲಾಹನ ಔಲಿಯಾಗಳನ್ನು ಬೇಟಿ ಮಾಡುತ್ತಾ ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಿರುವ ಬಗ್ಗೆ ಔಲಿಯಾಗಳ ಚರಿತ್ರೆಯಿಂದ ತಿಳಿಯುತ್ತದೆ.

ಆ ಖಿಳ್‌ರ್ ನಬಿ (ಅ)ರನ್ನೂ ಕಂಡ ಮಹಾನರಲ್ಲೊಬ್ಬರಾಗಿದ್ದಾರೆ ವಲಿಯುಲ್ಲಾಹಿ ಶೈಖ್ ಮಖ್ದೂಂ ಫರೀದ್ ಮಿಲಿಟರಿ ಬಾಬಾ (ಖ.ಸಿ)ರವರು.

ಒಮ್ಮೆ ಮುಂಬೈನ ಸಮುದ್ರ ತೀರದ ಬಂಡೆ ಕಲ್ಲೊಂದರ ಮೇಲೆ ಇಬಾದತ್'ನಲ್ಲಿ ತಲ್ಲೀನರಾಗಿದ್ದಾಗ ಅಲ್ಲಿಗೆ ಆಗಮಿಸಿದ ಖಿಳ್‌ರ್ ನಬಿ (ಅ)ರು, ಮಹಾನರಿಗೆ ಆಹಾರವನ್ನು ತಂದು ಕೊಟ್ಟರಲ್ಲದೆ ಒಂದು ಕೋಲನ್ನು ಅವರ ಕೈಗಿಟ್ಟು, ಮಿಲಿಟರಿ ಸಮವಸ್ತ್ರ ಧರಿಸಿಕೊಂಡು ಸೇನಾಧಿಕಾರಿಗಳು ಮತ್ತು ಸೈನಿಕರ ಬಳಿ ತೆರಳಿ ಅವರಿಗೆ ಇಲ್ಮ್ ಮತ್ತು ತೌಹೀದನ್ನು ಕಲಿಸಲು ಸೂಚಿಸಿದರು. 

ಹಾಗೆ ಮಿಲಿಟರಿ ಕ್ಯಾಂಪಿಗೆ ಹೇೂಗಿ ಸೈನಿಕರಿಗೆ ಇಲ್ಮ್ ಕಲಿಸಲಾರಂಭಿಸಿದ ನಂತರ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದವರಲ್ಲಿ ಅನೇಕರು ಮಹಾನರ ಶಿಷ್ಯತ್ವ ಸ್ವೀಕರಿಸಿದರಲ್ಲದೆ ಮಹಾನರನ್ನು ಮಿಲಿಟರಿ ಬಾಬಾ ಎಂದೇ ಕರೆಯಲಾರಂಭಿಸಿದರು.

ನಂತರ ಸದಾ ಜನಜಂಗುಳಿಯಿಂದ ಗಿಜಿಗಿಡುತ್ತಾ ಪೊಲೀಸರಿಂದಲೂ ನಿಯಂತ್ರಿಸಲಾಗದ ಮುಂಬೈನ ಬೀದಿಗಳಲ್ಲಿ ಸಂಚರಿಸುತ್ತಾ ಖಿಳ್‌ರ್ ನಬಿ(ಅ)ರು ಕೊಟ್ಟ ಕೋಲನ್ನು ಹಿಡಿದು ಜನಜಂಗುಳಿಯನ್ನು ನಿಯಂತ್ರಣಕ್ಕೆ ತರುತ್ತಾ ಪೊಲೀಸರಿಗೆ ನೆರವಾಗುತ್ತಿದ್ದರು.

ಬರ್ಮಾ, ಚೀನಾ, ಸಿಲೋನ್, ಬಗ್ದಾದ್, ಮಕ್ಕಾ, ಮದೀನಾ ಹೀಗೆ ಪ್ರಪಂಚದ ನಾನಾ ಕಡೆ ಸಂಚರಿಸಿದ ಮಹಾನರು ಅಲ್ಲಾಹನ ರಸುಲರಾದ ಸಯ್ಯದುನಾ ಮುತ್ತು ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರನ್ನು ನನಸಿನಲ್ಲೇ ಕಂಡ ಮಹಾನರಾಗಿದ್ದಾರೆ.

ಹಿಜರಿ 1411ರ ರಬೀವುಲ್ ಅವ್ವಲ್ 23ರ ರವಿವಾರದಂದು ಮಗರಿಬ್‌ಗೆ ಅಲ್ಪ ಮುಂಚೆ ವಫಾತಾದ ಮಹಾನರು ತಮ್ಮ ಸ್ವಗೃಹದ ಮುಂಬಾಗದಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.

ಈ ಮಹಾನರ ಜೀವಿತ ಕಾಲದಲ್ಲಿ ಅವರ ಕರಾಮತ್ತುಗಳನ್ನು ಕಣ್ಣಾರೆ ಕಂಡವರು ಹಾಗೂ ಅವರಿಂದ ಕೇಳಿ ತಿಳಿದವರು ಮುಂಬೈಯ ವಿವಿಧ ಭಾಗಗಳಿಂದ ಜನರು ಝಿಯಾರತ್‌ಗಾಗಿ ಈ ಮಹಾನರ ಮಖಾಮಿಗೆ ಹೆಚ್ಚಿನ ಸಂಖ್ಯೆಯಲ್ಲಿ ಇಂದಿಗೂ ಆಗಮಿಸುತ್ತಿದ್ದಾರೆ.

ದಾರಿ: ಕೊಯಿಲಂಡಿ ಅರಿಕುಳಂ.
💢💢💢💢💢💢💢💢

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 19

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --19

📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  18:*_
*ಮನೆಯ ಸ್ಥಳ  ಉತ್ತಮವಾಗಿರಲಿ*

ಒಂದು ಮನೆ ಕಟ್ಟಿದರೆ ಜೀವನ ಪರ್ಯಂತ ಅದರ ಸುಖ ಅನುಭವಿಸಿಬೇಕಾದರೆ ಬಹಳ ಮುಖ್ಯವಾಗಿ ಗಮನಿಸಬೇಕಾ ಒಂದು ಅಂಶವಾಗಿದೆ ಮನೆ ಕಟ್ಟುವ ಸ್ಥಳ.
ಮನೆ ಕಟ್ಟುವಾಗ ಪ್ರಮುಖವಾಗಿ ಮಸೀದಿ ಸಮೀಪವಿದೆಯೇ ಎಂದು ಆಲೋಚಿಸಬೇಕು.
ಶಾಲೆ,ಅಂಗಡಿಮುಂಗಟ್ಟುಗಳು,ಆಸ್ಪತ್ರೆ ಎಲ್ಲವೂ ಮುಖ್ಯವೇ ಆಗಿದೆ.ಇತ್ತೀಚಿಗೆ ಒಂದು ಮನೆಯ ಜಾಹಿರಾತು ನೋಡಿದೆ.ಮನೆಯಿಂದ ಏರ್ಪೋರ್ಟ್'ಗೆ ಕೇಲವ 30 ಕಿಲೋಮೀಟರ್ ಅಂತ.
ಮನೆಗೆ ದಿನಾಲು ಫ್ಲೈಟಲ್ಲಿ ಬರುವವರಿದ್ದರೆ ಅಂತಹಾ ಮನೆ ಆಯ್ಕೆ ಮಾಡಬಹುದು.
ಪ್ರಮುಖವಾಗಿ ಗಮನಿಸಬೇಕಾದ ಹಲವನ್ನು ಕೆಲವರು ಗಮನಿಸುತ್ತಿಲ್ಲ.

ಮುಸ್ಲಿಮನ ಮನೆ ಸಮೀಪ ಮಸೀದಿಯಿದ್ದರೆ ಅಝಾನ್ ಚೆನ್ನಾಗಿ ಕೇಳಬಹುದು.ಸ್ವಲಾತ್,ದ್ಸಿಕ್ರ್ ಎಲ್ಲವೂ ಆಲಿಸಬಹುದು.
5 ವಕ್ತ್ ಜಮಾಅತ್ ನಮಾಝ್ ಗೆ ಸುಲಭವಾಗಿ ಹೋಗಬಹುದು.
ಮಹಿಳೆಯರಿಗೆ ಮಸೀದಿಯಿಂದ ಕೇಳುವ ಪ್ರವಚನಗಳನ್ನು ಆಲಿಸಬಹುದು.
ಮಸೀದಿಗೆ ತಾಗಿಕೊಂಡು ಮದ್ರಸ ಎಲ್ಲಾ ಕಡೆ ಇರುವುದರಿಂದ ಪುಟ್ಟ ಮಕ್ಕಳಿಗೆ ಮದ್ರಸಕ್ಕೆ ಹೋಗಲೂ ಸುಲಭವಾದೀತು.

ಮದೀನಾ ನಿವಾಸಗಳ ಪೈಕಿ ಕೆಲವರು  ಮಸೀದಿಗೆ ದೂರದಲ್ಲಿರುವ ಮನೆಗಳನ್ನು ಮಸೀದಿಯ ಸಮೀಪ ಕಟ್ಟಲು ಉದ್ದೇಶಿಸಿದ ಬಗ್ಗೆ ಪ್ರವಾದೀವರ್ಯರಿಗೆ ತಿಳಿದಾಗ ನಿಮ್ಮ ಮನೆ ಅಲ್ಲೇ ಇರಲಿ.ನೀವು ದೂರದ ಸ್ಥಳಗಳಿಂದ ಜಮಾಅತ್ ನಮಾಝ್ ಗೆ ಮಸೀದಿಗೆ ಬಂದರೆ ನಿಮ್ಮ ಒಂದೊಂದು ಹೆಜ್ಜೆಗೂ ಹಲವಾರು ಪ್ರತಿಫಲವಿದೆಯೆಂದು ಆ ಸ್ವಹಾಬಿಗಳಲ್ಲಿ ಹೇಳಿದಾಗ ಅವರು ಆ ತೀರ್ಮಾನದಿಂದ ಹಿಂದೆ ಸರಿದ ಬಗ್ಗೆ ಹದೀಸ್ ನಲ್ಲಿದೆ.
ಮಸೀದಿ ಸಮೀಪವಿದ್ದರೆ ಮಾತ್ರ ನಾವು ಮಸೀದಿಗೆ ಹೋಗುವೆವು.ದೂರದಲ್ಲಾದರೆ ಮನೆಯಲ್ಲೇ ನಮಾಝ್ ಮಾಡುವೆವು.
ಸ್ವಹಾಬತ್ ನಂತೆ ಈಮಾನ್ ನಮ್ಮಲ್ಲಿ ಇಲ್ಲದಿರುವುದರಿಂದ ನಮ್ಮ ಮನೆ ಮಸೀದಿ ಬಳಿಯೇ ಇದ್ದರೆ ಚೆನ್ನ ಎಂದು ನಾನು ಹೇಳಿದ್ದೇನೆ.
ದೂರದ ಸ್ಥಳದಿಂದ ಜಮಾಅತ್ ನಮಾಝ್'ಗೆ ಬಂದಲ್ಲಿ ಹಲವಾರು ಪ್ರತಿಫಲವಿದೆಯೆಂದು ನಾವು ತಿಳಿದಿರಬೇಕು.

ಪಿತ್ನ ಫಸಾದ್ ಕೋರರಿಂದ ನಮ್ಮ ಮನೆ ಮುಕ್ತವಾದಲ್ಲಿ ಮಾತ್ರ ನಮ್ಮ ಮನೆಯಲ್ಲಿ ಸಂತೋಷವಿರಬಹುದು.
(ನೆರೆಕರೆ ಹೇಗಿರಬೇಕೆಂದು 7 ನೇ ಭಾಗದಲ್ಲಿ ವಿವರಿಸಿದ್ದೇನೆ)

ಮನೆಯ ಒಳಗೆ ಮತ್ತು ಹೊರಗೆ ಬಹಳ ಮುಖ್ಯವಾಗಿ ಶುಚಿತ್ವ ಕಾಪಾಡಬೇಕು.
ಮೊರೋಕೋ ರಾಷ್ಟದಲ್ಲಿ ಮರಾಕಿಶ್ ಎಂಬ ಪಟ್ಟಣದ ಜನರಿಗೆ ರೋಗ ಬರುವುದು ಬಹಳ ಕಡಿಮೆಯಂತೆ.ಅಲ್ಲಿನ ಜನರಿಗೆ ಆ ಊರಿನಲ್ಲಿ ಆಸ್ಪತ್ರೆ ಎಲ್ಲಿ ಅಂತ ತಿಳಿದಿರುವುದು ಕಡಿಮೆ.ಕಾರಣ ಅವರ ಮನೆಯ ಒಳ ಮತ್ತು ಹೊರಗೆ ಅಷ್ಟು ಶುಚಿತ್ವವನ್ನು ಕಾಪಾಡುತ್ತಾರೆ.ಮಾರ್ಗದ ಬದಿಯಲ್ಲಿ ಒಂದೇ ಒಂದು ಹುಲ್ಲು ಕಡ್ಡಿ ಅಲ್ಲಿ ಕಾಣಲು ಸಾಧ್ಯವಿಲ್ಲ.
ದೂಳು ಮಣ್ಣುಗಳಿಲ್ಲ.
ಶುಚಿತ್ವ ಕಾಪಾಡಿದ್ದಲ್ಲಿ ಯಾವುದೇ ರೋಗಗಳು ಬರದು.
"ಮನೆಯ ಒಳಗೆ ಮತ್ತು ಹೊರಗೆ ಶುಚಿತ್ವ ಕಾಪಾಡಿ" ಎಂಬ ಒಂದು ಸೂತ್ರ ನಂತರದ ಭಾಗದಲ್ಲಿ ಬರಲಿದೆ.

ನಮ್ಮ ಮನೆ ತೆರೆದ ಮನೆಯಾಗಬಾರದು.
ಕಿಟಕಿಗಳಿಗೆ ಬಾಗಿಲುಗಳಿರಬೇಕು.
ಗ್ಲಾಸ್ ನಿಂದ ಕೂಡಿದ ಬಾಗಿಲುಗಳಾದಲ್ಲಿ ಅದಕ್ಕೆ ಪರದೆ ಹಾಕಬೇಕು.
ರೂಮಿನ ಲೈಟ್ ಹಾಕಿದ್ದಲ್ಲಿ ಹೊರಗಿನಿಂದ ರೂಮಿನೊಳಗಿರುವವರನ್ನು ಕಾಣದಂತೆ ಭದ್ರಗೊಳಿಸಬೇಕು.

ಕೆಲವು ಮನೆಯ ಹೊರಗೆ ನಿಂತರೆ ಒಳಗಿನ ಅಡುಗೆ ಕೋಣೆ ಸಹಿತ
ಎಲ್ಲವೂ ಕಾಣುತ್ತದೆ.
ಹಾಗಿದ್ದರೆ ಇದ್ದವರಿಗೂ ಬಂದವರಿಗೂ ತೊಂದರೆ.
ಆದುದರಿಂದ ಮನೆ ನಿರ್ಮಿಸುವಾಗ ಬಾಗಿಲುಗಳನ್ನು ಆಚೀಚೆ ಮಾಡಿ ಒಳಕೋಣೆ ಕಾಣದಂತೆ ಇಡುವುದು ಉತ್ತಮವಾಗಿದೆ.
ಹಾಗೆ ಮಾಡಿ ಆಗಿದ್ದಲ್ಲಿ ಬಾಗಿಲುಗಳ ಮೂಲಕ ಒಳಕೋಣೆಗಳು ಕಾಣದಂತೆ ಪರದೆ ಹಾಕುವುದು ಉತ್ತಮವಾಗಿದೆ.
ಪರದೆ ಇದ್ದರೂ ಕೆಲವು ಮನೆಗಳಲ್ಲಿ ಅದನ್ನು ಸುರುಟಿ ಎತ್ತಿ ಕಟ್ಟಿ ಹಾಕಿರುತ್ತಾರೆ.ಇದೂ ಕೂಡಾ ಸಲ್ಲದು.
ಮನೆಯ ಒಳಗೆ ಯಾವಾಗಲೂ ಪ್ರೈವಸಿ ಬೇಕು.
ವಿಶೇಷವಾಗಿಯೂ ಮಹಿಳೆಯರಿರುವ ಮನೆ.
ಅದಕ್ಕಾಗಿ ಒಳಗಿನ ಗುಟ್ಟನ್ನು ರಟ್ಟು ಮಾಡಬಾರದು.



*ಎಲ್ಲರಿಗೂ ಶೇರ್ ಮಾಡಿ*

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)


ಮುಂದುವರಿಯುವುದು........

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 18

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --18

📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  17:*_
*ಮಕ್ಕಳ ಎದುರಲ್ಲಿ ತಂದೆ-ತಾಯಿಯ ಕಲಹ ಇಲ್ಲದಿರಲಿ*

ಮನುಷ್ಯ ಸಾಮೂಹಿಕವಾಗಿ ಜೀವಿಸುವ ಜೀವಿಯಾಗಿದ್ದಾನೆ.ಮಗುವಾಗಿದ್ದಾಗ ತಂದೆ ತಾಯಿಯ ಮತ್ತು ಯುವಕ/ಯುವತಿಯಾದಾಗ ಪತಿ/ಪತ್ನಿಯ ಆಶ್ರಯದಲ್ಲೂ ಪ್ರಾಯವಾಗುವಗ ಮಕ್ಕಳ ಆಶ್ರಯದಲ್ಲೂ ಜೀವಿಸುವವನಾಗಿದ್ದಾನೆ.
ಸಮೂಹದ ಮಧ್ಯೆ ಜೀವಿಸುವಾಗ ಕುಂದು ಕೊರತೆಗಳುಂಟಾದಲ್ಲಿ ಸಹ ಜೀವನ ನಡೆಸುವವರಿಗೆ  ಕೆಲವೊಮ್ಮೆ ಹಿಡಿಸದು.ಆದುದರಿಂದಲೇ ಪರಸ್ಪರ ಅನಿಷ್ಟ ಸಂಗತಿಗಳು ನಡೆಯಲೂ ಬಹುದು.
ಪರಸ್ಪರ ವಿಶ್ವಾಸಕ್ಕೆ ತೆಗೆದು ಸ್ನೇಹ ,ಪ್ರೀತಿಯಿಂದ ಬಾಳಬೇಕು.
ಪತಿ-ಪತ್ನಿಯರ ನಡುವೆ ಸಿಲ್ಲಿ ವಿಷಯಗಳಲ್ಲಿ ಕಲಹವುಂಟಾಗುವುದು ಸಹಜ.
ಪರಸ್ಪರ ಕ್ಷಮಿಸಿ ಜೀವನ ನಡೆಸಿದರೆ ಯಾವುದೇ ತೊಂದರೆ ಬರಲಾರದು.

ಚಿಕ್ಕ ಪುಟ್ಟ ವಿಷಯಗಳಿಗೆ ಮನೆಯಲ್ಲಿ ನಾಯಿ- ಬೆಕ್ಕಿನಂತೆ ಕಚ್ಚಾಡುವ ದಂಪತಿಗಳಿದ್ದಾರೆ.
ಮಕ್ಕಳೆದುರಲ್ಲಿ ಕಚ್ಚಾಡುವ ಗುಣವಿರುವ ದಂಪತಿಗಳಾಗಿದ್ದರೆ ಖಂಡಿತವಾಗಿಯೂ ಆ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುವರು.
ಮಕ್ಕಳು ಶಾಲೆ ಮತ್ತು ಮದ್ರಸದಲ್ಲಿ ಕಲಿಕೆಯಲ್ಲಿ ಹಿಂದಿದ್ದಾರೆಂದಾರೆಂದರೆ ಇದೂ ಕೂಡಾ ಒಂದು ಕಾರಣವಾಗಿರಬಹುದು.
ಯಾವುದೇ ಕಾರಣಕ್ಕೆ ಮಕ್ಕಳ ಎದುರಲ್ಲಿ ಕಚ್ಚಾಡಬಾರದು.
ದಂಪತಿಗಳ ನಡುವೆ ಜಗಳವಿದ್ದರೆ ಅದನ್ನು ಸರಿಪಡಿಸುವ ದಾರಿಗಳನ್ನು ಇಸ್ಲಾಮ್ ಕಲಿಸಿಕೊಟ್ಟಿದೆ.ಆ ಮೂಲಕ ಅದಕ್ಕೆ ಪರಿಹಾರ ಮಾಡಬಹುದಾಗಿದೆ.

ದಂಪತಿಗಳ ನಡುವೆ ಇಬ್ಬರೂ ಹಟಮಾರಿಗಳಾಗಿದ್ದರೆ ಸರಿಪಡಿಸಲು ಕಷ್ಟಸಾಧ್ಯ.ಪತಿಯಯೊಂದಿಗೆ ಗೌರವವಿರುವ ಪತ್ನಿ ಪತಿಯೊಂದಿಗೆ ಜಗಳವಾಡಲಾರಳು.
ಪತ್ನಿಯೊಂದಿಗೆ ಸ್ನೇಹವಿರುವವನು ಪತ್ನಿಯೊಂದಿಗೆ ಜಗಳವಾಡಲಾರ.

ದಂಪತಿಗಳ ನಡುವೆ ಜಗಳವಿರುವ ಮಕ್ಕಳಿಗೆ ನೆಮ್ಮದಿ ಇರಲಾರದು.ಆ ಮನೆಯಲ್ಲಿ ಸಂತೋಷವಿರಲಾರದು.
ತರ್ಕ ಮತ್ತು ವಿವಾದಗಳು ಎಲ್ಲಿ ಸೃಷ್ಠಿಯಾಗುವವೋ ಅಲ್ಲಿ ನೆಮ್ಮದಿ ಇರಲಾರದು.
ಪವಿತ್ರ ರಂಝಾನಿನಲ್ಲಿ ಲೈಲತುಲ್ ಖದ್ರ್ ಎಂಬ ಪುಣ್ಯ ರಾತ್ರಿಯಿದೆ.ಅದು ಯಾವ ರಾತ್ರಿಯೆಂದು ಪ್ರವಾದೀ ವರ್ಯರಿಗೆ ತಿಳಿಸಿಕೊಡಲಾಗಿತ್ತು.
ಅದು ಹೇಳಲು ಸ್ವಹಾಬತ್'ನ ಬಳಿ ಪ್ರವಾದೀ ವರ್ಯರು ಬಂದಾಗ ಇಬ್ಬರು ಹಣದ ವಿಚಾರದಲ್ಲಿ ಜಗಳವಾಡುತ್ತಿದ್ದರು.
ಆ ತಕ್ಷಣವೇ ಪ್ರವಾದೀ ವರ್ಯರಿಗೆ ಆ ಪವಿತ್ರ ರಾತ್ರಿ ಯಾವಾಗ ಎಂಬುವುದು ಮರೆತು ಹೋಯಿತು.
ಇದು ಇಮಾಮ್ ಬುಖಾರಿ ವರದಿ ಮಾಡಿದ ಹದೀಸಿನಲ್ಲಿ ಇದೆ.
ಸಾಧ್ಯವಾದಷ್ಟು ತರ್ಕಗಳನ್ನು ತ್ಯಜಿಸಬೇಕು.
ಮಕ್ಕಳ ಎದುರಲ್ಲಿ ಪತ್ನಿಯನ್ನು ಅಶ್ಲೀಲ ಪದಗಳಿಂದ ಸಂಬೋಧನೆ ನಡೆಸಿದರೆ ಮಕ್ಕಳೂ ಕೂಡಾ ಆ ಮಾರ್ಗವನ್ನು ಸ್ವೀಕರಿಸುವರು.
ಮನೆಯಲ್ಲಿರುವ ಎಲ್ಲರ ಮಾತುಗಳು ಮುತ್ತಿನಂತಾಗಬೇಕು.ಕೊಳಕು ಭಾಷೆ,ಅಡ್ಡ ಹೆಸರುಗಳಿಂದ ಕೂಡಿದ ಮಾತುಗಾರಿಕೆಗಳು ಬಹಳ ಅಪಾಯ.
ಇಮಾಮ್ ಗಝ್ಝಾಲಿ (ರ)ರವರ ಇಹ್ಯಾ ಉಲೂಮಿದ್ದೀನ್ ನ 3 ನೇ ಭಾಗ 69, 70 ನೇ ಪುಟಗಳಲ್ಲಿ ಇದನ್ನು ವಿವರಿಸಿದ್ದಾರೆ.

كل مولود يولد على الفطرة فأبواه يهودانه أو ينصرانه
ಯಾವುದೇ ಮಗುವು ಹುಟ್ಟುವಾಗ ಇಸ್ಲಾಮ್ ನ ಸಂದೇಶ ಸ್ವೀಕರಿಸುವ ರೂಪದಲ್ಲಿ ಜನಿಸುತ್ತದೆ.ಅವನ ತಂದೆ ತಾಯಿ ಅವನನ್ನು ಯಹೂದಿ,ನಸ್ರಾನೀ ಮಾಡುತ್ತರೆಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ ಹದೀಸ್ ಇಮಾಮ್ ಬುಖಾರಿ ವರದಿ ಮಾಡಿದ್ದಾರೆ.




*ಎಲ್ಲರಿಗೂ ಶೇರ್ ಮಾಡಿ*

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)


ಮುಂದುವರಿಯುವುದು........

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 17

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --17

📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  16:*_

*ಮನೆಯಲ್ಲಿ ನಡೆಯುವ ಸಭೆ ಸಮಾರಂಭಗಳು ಇಸ್ಲಾಮಿನ ಚೌಕಟ್ಟಿನಲ್ಲಿರಲಿ*

ಮನೆಯ ಸದಸ್ಯರೆಲ್ಲರೂ ಸೇರಿ ಸಮಾಲೋಚನೆ ನಡೆಸಿ ಸಮಾರಂಭ ನಡೆಸಬೇಕೆಂದು 16 ನೇ ಭಾಗದಲ್ಲಿ ವಿವರಿಸಿದ್ದೇನೆ.
ಸಾವಿರಾರೂ ರುಪಾಯಿ ಖರ್ಚು ಮಾಡಿ ಮಾಡುವ ಸಮಾರಂಭಗಳು ಅನಿಸ್ಲಾಮಿಕವಾದರೆ ಅಲ್ಲಾಹನ ಬಳಿ ಆ ಖರ್ಚು ಮಾಡಿದ್ದಕ್ಕೆ ಲೆಕ್ಕ ಹೇಳಬೇಕು.ಆದುದರಿಂದಲೇ ನಮ್ಮ ಸಭೆ-ಸಮಾರಂಭಗಳು ಇಸ್ಲಾಮಿಯ್ಯತ್ ನ ಚೌಕಟ್ಟು ಮೀರಿರಬಾರದು.
ಸಮಾರಂಭದ ಜವಾಬ್ಧಾರಿ ಯಾರಿಗೆ ವಹಿಸಿಕೊಟ್ಟರೂ ಮೇಲಾಧಿಕಾರಿಯಂತೆ ತಂದೆ ಅಥವಾ ಮನೆಯ ಯಜಮಾನ ಇರಲೇ ಬೇಕು.
ಕುಂದು ಕೊರತೆಗಳು ಬರುವಾಗ ಮಕ್ಕಳನ್ನು ತಿದ್ದಲು ಆ ತಂದೆಗೆ ಸಾಧ್ಯವಾಗಬೇಕು.
ಬೇಡವಾದ ಸಂಗತಿಗಳು ನಡೆದರೆ ಮಕ್ಕಳ ಕಡೆ ಬೊಟ್ಟು ಮಾಡಿ,ಏನು ಮಾಡುವುದು ಉಸ್ತಾದ್!ಮಕ್ಕಳ ಕಾರುಬಾರು.ನಾವು ಹೇಳಿದರೆ ಮಕ್ಕಳು ಕೇಳುತ್ತಾರೆಯೇ? ಎಂಬ ಮಾತು ಯಜಮಾನನ ಬಾಯಿಯಿಂದ ಬರಲೇ ಬಾರದು.
ಅದಕ್ಕಾಗಿ ಮೊದಲಿನಿಂದಲೇ ಸಮಾರಂಭಗಳಲ್ಲಿ ಅನಿಸ್ಲಾಮಿಯ್ಯತ್ ಬರದಂತೆ ಜಾಗ್ರತೆ ವಹಿಸಬೇಕು.
ಮದುವೆಯಂತಹ ಅದ್ದೂರಿ ಸಮಾರಂಭಗಳ ವೇಳೆ ಹಲವಾರು ಅನಿಸ್ಲಾಮಿಕ ಕಾರ್ಯಗಳು ನಡೆಯಬಹುದು.
ಹೆಚ್ಚಾಗಿ ಸ್ತ್ರೀ ಪುರುಷರು ಒಟ್ಟಾಗಿ ಬೆರೆಯುವ ಸಂಪ್ರದಾಯಕ್ಕೆ ಕಡಿವಾಣ ಹಾಕಬೇಕು.
ನಮ್ಮ ಮನೆಗೆ ಆಗಮಿಸುವ ಅನ್ಯ ಸ್ತ್ರೀ ಪುರುಷರು  ಪರಸ್ಪರ ಕಾಣುವ ದಾರಿಗಳನ್ನು ಮುಚ್ಚಬೇಕು.

ನಮ್ಮ ಮನೆಯ ಕಂಪೌಂಡ್ ಗೆ 2 ಗೇಟ್ ಅತೀ ಮುಖ್ಯ.
1 ನೇ ಗೇಟ್ ದೊಡ್ಡ ಗೇಟಾದರೆ ಅದನ್ನು ಅಗತ್ಯದ ಸಂದರ್ಭದಲ್ಲಿ ಮಾತ್ರ ತೆರೆದರಾಯಿತು.
ಅದು ಸಮಾರಂಭಗಳ ವೇಳೆ ಪುರುಷರಿಗಾಗಿ ತೆರೆದಿಡಬಹುದು.
ಇನ್ನೊಂದು ಪುಟ್ಟ ಗೇಟ್ ಮಹಿಳೆಯರ ಬಾಗದಲ್ಲಿ ಇಡಬೇಕು.ಸಮಾರಂಭಗಳ ವೇಳೆ ಸ್ತ್ರೀಯರು ಪುರುಷರೊಂದಿಗೆ ಬೆರೆಯದಿರಲು ಇದು ಬಹಳ ಪ್ರಯೋಜನಕಾರಿ.

ನಮ್ಮ ಮನೆಯಲ್ಲಿ ಸಂಭ್ರಮ ನಡೆಯುವಾಗ ಪುರುಷರಿಗೆ ಮಹಿಳೆಯರು ಸೇರಿದ ಸ್ಥಳಗಳ ಪ್ರವೇಶವನ್ನು ನಿಷೇಧಿಸಬೇಕು.
ಪುರುಷರ ಭಾಗದ ನಿಯಂತ್ರಣ ಪುರುಷರು ಮತ್ತು ಮಹಿಳೆಯರ ಭಾಗದ ನಿಯಂತ್ರಣವನ್ನು ಮಹಿಳೆಯರಿಂದಲೇ ಮಾಡಬೇಕು.
ಮದುವೆಯೊಂದಕ್ಕೆ ಹೋದಾಗ ಪುರುಷರ ಕಡೆ ಸಪ್ಲೈ ಗೆ ಜನರೇ ಇರಲಿಲ್ಲ.
ಅವರೆಲ್ಲರೂ ಮಹಿಳೆಯರ ಕಡೆ ಸಪ್ಲೈ ಮಾಡುತ್ತಿದ್ದಾರೆ ಅಂತ ಒಬ್ಬರು ಹೇಳಿದ್ದು ನೆನಪಾಗುತ್ತಿದೆ.

ಔತಣ ಕೂಟದಲ್ಲಿ ಅನಿಸ್ಲಾಮಿಯ್ಯತ್ ಬಂದು ಸೇರಿದರೆ ವ್ಯಯಿಸಿದ ಹಣ ಮತ್ತು ಸಮಯ ಪೋಲು.ಅಲ್ಲಾಹನ ಬಳಿ ಅದಕ್ಕೆ ಉತ್ತರಿಸಬೇಕು.
ಮಾತ್ರವಲ್ಲ ಆ ಔತಣ ಕೂಟಕ್ಕೆ ಎಷ್ಟೇ ದೊಡ್ಡ ಸೆಯ್ಯಿದ್/ಆಲಿಂಗಳನ್ನು ಕರೆಸಿ ದುಆ ಮಾಡಿಸಿದರೂ ಪ್ರಯೋಜನವಾಗದು.

ಪ್ರಖ್ಯಾತ ಇಮಾಮ್ ಇಬ್ನ್ ಹಜರ್ (ರ) ತನ್ನ ತುಹ್ಫದಲ್ಲಿ ಹೇಳುವುದು ನೋಡಿ,
والظاهر أن سرها رجاء صلاح الزوجة ببركتها(تحفة)
ಲಭಿಸಿದ ಪತ್ನಿಯು ವಲೀಮದ ಬರ್ಕತ್ ನಿಂದ ಉತ್ತಮವಾಗಳು ವಲೀಮ ಇಸ್ಲಾಮ್ ಸುನ್ನತ್ ಮಾಡಿದೆ.
(ತುಹ್ಫಾ)

ಅನಿಸ್ಲಾಮಿಕ ಚಟುವಟಿಕೆಗಳು ಮದುವೆಯಲ್ಲಿ ಕೂಡಿದರೆ ಹೇಗೆ ತಾನೇ ಬರ್ಕತ್ ಲಭಿಸುವುದು?

*ನಮ್ಮ ಔತಣ ಕೂಟಗಳಲ್ಲಿ ಇವಿಷ್ಟು ಮಾಡಿ*

1.ಸಾತ್ವಿಕರನ್ನು ಆಹ್ವಾನಿಸಿ
2.ಕುಟುಂಬಸ್ಥರನ್ನು ಆಹ್ವಾನಿಸಿ
3.ಬಡವರನ್ನು ಅಹ್ವಾನಿಸಿ
4.ಕೌಟುಂಬಿಕ ಕಲಹ ಕಾರಣ ಕೋಪಿಸಿಕೊಂಡವರೊಂದಿಗೆ ರಾಜಿಯಾಗಿ ಆಹ್ವಾನಿಸಿ
5.ಬಂದವರಿಗೆಲ್ಲಾ ಊಟೋಪಚಾರ ಸಿಗುವಂತೆ ಮಾಡಿ
6.ಯಾವುದೇ ಆಹಾರಗಳು ಪೋಲಾಗದಂತೆ ನೋಡಿ
(ಒಂದು ಹೊತ್ತಿನ ಗಂಜಿ ಊಟಕ್ಕೆ ಅಲೆದಾಡುವ ಬಡವರಿದ್ದಾರೆ ಎಂಬುವುದು ನೆನಪಿರಲಿ)
7.ಬಂದ ನೆಂಟರನ್ನು ಸರಿಯಾಗಿ ಸತ್ಕರಿಸಿ
8.ಬಂದವರು ಹೊರಟು ಹೋಗುವಾಗ ಸಂತೋಷ ಪೂರ್ವಕ ಅವರನ್ನು ಕಳುಹಿಸಿ ಕೊಡಿ
9.ಬಂದ ಅತಿಥಿಗಳ ಜೊತೆ ಮನೆಯ ಸದಸ್ಯನೊಬ್ಬ ಕುಳಿತು ಆಹಾರ ಸೇವಿಸಬೇಕು.
10.ಆಹಾರದ ಮುಂಚೆ ಮನೆಯ ಸದಸ್ಯ ಮೊದಲು ಕೈ ತೊಳೆದು ಕುಳಿತುಕೊಳ್ಳಬೇಕು.
ಆಹಾರದ ನಂತರ ಎಲ್ಲರೂ ಎದ್ದ ನಂತರ ಮನೆಯ ಸದಸ್ಯ ಕೈ ತೊಳೆಯಬೇಕೆಂದು ಇಮಾಮ್ ಗಝ್ಝಾಲಿ (ರ)ವಿವರಿಸಿದ್ದಾರೆ.

*ಇದು ಮಾಡದಿರಿ*

1.ಅನ್ಯ ಸ್ತ್ರೀ ಪುರುಷರು ಬೆರೆಯುವಂತೆ ಯಾವ ಕಾರಣಕ್ಕೂ ಮಾಡದಿರಿ
2.ಸಮಾರಂಭದಲ್ಲಿ ಅನ್ಯ ಸ್ತ್ರೀಯರ ಪೊಟೋ/ವೀಡಿಯೋ ತೆಗೆಯದಿರಿ
(ನಮ್ಮ ಪತ್ನಿಯರ ವೀಡಿಯೋ ಇನ್ನೊಬ್ಬ ಮಾಡಿದರೆ ನಾವು ಸಹಿಸದಂತೆ ಇನ್ನೊಬ್ಬನ ಪತ್ನಿಯ ವೀಡಿಯೋ ನಾವು ಮಾಡಿದ್ದಲ್ಲಿ ಅವನು ಸಹಿಸಲಾರ ಎಂದು ನೆನಪಿಟ್ಟುಕೊಳ್ಳಿ)
3.ಬಂದ ಅತಿಥಿಗಳಿಗೆ ತೊಂದರೆಯುಂಟಾಗುವ ಯಾವುದೇ ಕಾರ್ಯವನ್ನು ಮಾಡದಿರಿ.
4.ಬಂದ ಆತಿಥಿಗಳನ್ನು ಕೂರಿಸಿ ಮಾಡಿಟ್ಟ ಆಹಾರ ಅವರ ಬಳಿ ಇಟ್ಟು ಬಿಡಿ.
ನಾವಾಗಿ ಅವರ ಬಟ್ಟಲಿಗೆ ಹಾಕದಿರೋಣ.ಕಾರಣ ನಮಗೆ ಇಷ್ಟವಾದ ವಸ್ತು ಆತನಿಗೆ ಹಿಡಿಸಬೇಕೆಂದಿಲ್ಲ.ಆತನಿಗೆ ಇಷ್ಟವಾದುದನ್ನು ಆತ ಹಾಕಿ ತಿನ್ನುವನು.
ಕೆಲವರು ಕೈ ತೊಳೆಯದೆ ಎಲ್ಲೆಂದರಲ್ಲಿ ಹಾಕಿದ್ದ ಕೈಯಿಂದ ಆಹಾರಗಳನ್ನು ಬಟ್ಟಲಿಗೆ ಹಾಕುತ್ತಾರೆ.ತೀರ ಅಸಹ್ಯವಾದ ಸಂಗತಿಯಾಗಿದೆ ಅದು.ಹಸಿದವನ ಬಳಿ ತಿನ್ನಿ ತಿನ್ನಿ ಎಂದು ಹೇಳಬೇಕಾದ ಅಗತ್ಯವೇನಿದೆ?
ಹಸಿದವನು ಬೇಕಾದಷ್ಟು ತಿನ್ನುವನು.
5.ಬೇಕಾದ ಆಹಾರ ಇಟ್ಟು ಬಿಡಬೇಕು.ಮನೆಯವರು ಅಲ್ಲಿ ನಿಲ್ಲಬಾರದು.ತುಂಬಾ ಹಸಿದವನ ಬಳಿ ನಿಂತು ಬಿಟ್ಟರೆ ಸಂಕೋಚದಿಂದ ಆತ ತಿನ್ನಲಾರ.
ಕೆಲವೊಂದು ಮನೆಗೆ ಹೋದರೆ ಡೈನಿಂಗ್ ಟೇಬಲ್ ನ ಬಳಿ ಮನೆಯವರೆಲ್ಲರೂ ನಿಂತು ನೋಡು ದೃಶ್ಯ ತುಂಬಾ ನಾಚಿಗೆಕೇಡು.
ಕೋರ್ಟ್ ಗೆ ಕರೆದು ಕೊಂಡು ಹೋಗುವ ಅಪರಾಧಿಯ ಸುತ್ತ ಪೋಲೀಸರು ನಿಲ್ಲುವಂತೆ ಮನೆಯವರು ನಿಂತರೆ ಬಂದ ಅತಿಥಿಗಳು ಹೇಗೆ ತಾನೇ ಆಹಾರ ತಿನ್ನುವರು?

6.ನಿಂತು ತಿನ್ನುವ ಸಂಪ್ರದಾಯಕ್ಕೆ ಕಡಿವಾಣ ಹಾಕಬೇಕು.
7.ಮದುವೆ ಮೆಹಂದಿಯ ಮನೆಯಲ್ಲಿ ಮದುಮಗಳನ್ನು ಸ್ಟೇಜ್ ಗೆ ಹತ್ತಿಸಿ ಪ್ರದರ್ಶನಕ್ಕಿಡುವುದನ್ನು ಕೊನೆಗೊಳಿಸಬೇಕು.
8.ಮದುಮಗಳಿಗೆ ಹಾರ ಹಾಕಲು ಮದುಮಗ ಹೋಗುವಾಗ ಆತನ ಗೆಳೆಯರು ಜತೆಯಾಗಿ ಹೋಗುವ ಸಂಪ್ರದಾಯ ನಿರ್ಮೂಲನೆ ಮಾಡಬೇಕು.
(ನೇರ ನೇರವಾಗಿ ಹೇಳಿದರೆ ಮದುಮಗನ ಗೆಳೆಯರು ಗಲಾಟೆ ಉಂಟು ಮಾಡಲು ಸಾಧ್ಯತೆಯಿರುವುದರಿಂದ ಮನೆಯ ಹಿರಿಯರ ಮೂಲಕ ಹಿಕ್ಮತ್ ನಿಂದ ಅದನ್ನು ಇಲ್ಲದಾಗಿಸಬಹುದು)
9.ಸಾಲ ಮಾಡಿ ಮದುವೆಯ ಮುಂಚಿನ ಮೆಹಂದಿ ಹಾಗೂ ಮದುವೆಯ ನಂತರದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕು.

ನಮ್ಮ ಸಮಾರಂಭಗಳ ಪೈಕಿ ನಮ್ಮ ಕಂಟ್ರೋಲ್ ಗೆ ಸಿಗದ ಸಮಾರಂಭ ಮದುವೆಯಾದುದರಿಂದ ಮದುವೆಯ ಬಗ್ಗೆ ಮಾತ್ರ ಸ್ವಲ್ಪ ಬರೆದೆ ಅಷ್ಟೇ.
ಎಲ್ಲಾ ಸಮಾರಂಭಗಳಲ್ಲೂ ಅಲ್ಲಾಹನ ಮತ್ತು ರಸೂಲರ ಪ್ರೀತಿ ಮಾತ್ರ ಉದ್ದೇಶಿಸಿ ಅಲ್ಲಾಹು ಇಷ್ಟಪಡುವುದನ್ನು ಮಾತ್ರ ಮಾಡಬೇಕು.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಊರಿಡೀ ಆಹ್ವಾನಿಸಿ ಎಲ್ಲರೂ ತಿಂದು ತೇಗಿ ಆಹಾರದ ಕೊರತೆಯನ್ನು ಹೇಳಿ ಮರಳಿ ಹೋದರೆ ನಿನಗೇನು ಅದರಿಂದ ಲಾಭ ಲಭಿಸಿತು?
ನಿನಗಾಗಿ,ನಿನ್ನ ಮನೆಯವರಿಗಾಗಿ ದುಆ ಮಾಡುವ ಒಬ್ಬನೂ ಆ ಪೈಕಿ ಇಲ್ಲದಿದ್ದರೆ ನಿನ್ನ ಮನೆಯಲ್ಲಿ ಸಂತೋಷ ಮತ್ತು ನೆಮ್ಮದಿಯಿರುವುದೇ?

ಮೊಹಲ್ಲಾದ ಎಲ್ಲರನ್ನೂ ಆಹ್ವಾನಿಸುವ ಕಾರ್ಯಕ್ರಮವಾದರೆ ಯಾವುದೇ ಮನೆಯು ಬಿಟ್ಟು ಹೋಗದಂತೆ ಎಚ್ಚರವಹಿಸಬೇಕು.
ನಮ್ಮ ಕಾರ್ಯಕ್ರಮಕ್ಕೆ ಬಂದು ಒಂದೊತ್ತಿನ ಊಟ ಸೇವಿಸಿದ ಮಾತ್ರಕ್ಕೆ ಅವರ ಉಳಿದ ದಿನದ ಹೊಟ್ಟೆ ತುಂಬುವುದಿಲ್ಲ.ಎಲ್ಲರನ್ನೂ ಆಹ್ವಾನಿಸಿ ಒಂದು ಮನೆ ಬಿಟ್ಟು ಬಿಟ್ಟರೆ ಅವರಿಗಾಗುವ ನೋವು ಅಷ್ಟಿಷ್ಟಲ್ಲ.
ಅದ್ಕಕಾಗಿ ಕಾರ್ಯಕ್ರಮಕ್ಕೆ ನಿಗದಿಯಾದ ದಿನದ ಎರಡು ದಿವಸಗಳ ಮುಂಚೆ ಮನೆಯಲ್ಲಿ ಒಂದು ಸಮಾಲೋಚನೆ ಅತ್ಯಗತ್ಯ.

*ಆಹಾರ ಪೋಲಾಗುವುದನ್ನು ಹೇಗೆ ತಪ್ಪಿಸುವುದು?*
ಕಾರ್ಯಕ್ರಮಕ್ಕೆ ಯಾರೆಲ್ಲ ಆಹ್ವಾನಿಸಿದ್ದಾರೋ ಅವರೆಲ್ಲಾ ಒಟ್ಟುಗೂಡಿ ಸಮಾಲೋಚನೆ ನಡೆಸಿ ಎಷ್ಟು ಮಂದಿಯನ್ನು ಆಹ್ವಾನಿಸಿದ್ದೇವೆ ಎಂಬ ಮಾಹಿತಿ ನೀಡಿದ್ದಲ್ಲಿ ಆಹ್ವಾನಿಸಬೇಕಾದ ಜನರ ಪೈಕಿ  ಬಿಟ್ಟು ಹೋದದ್ದನ್ನು ತಿಳಿಯಬಹುದು ಹಾಗೂ ಎಷ್ಟು ಜನರು ಸೇರಬಹುದು ಎಂಬ ಮಾಹಿತಿಯೂ ಲಭಿಸಬಹುದು.
ಅಷ್ಟು ಜನರ  ಲೆಕ್ಕ ಹಾಕಿ ಆಹಾರ ತಯಾರಿಸಬಹುದು.
ಸೆಯ್ಯಿದರೊಬ್ಬರ ಪುತ್ರನ ಮದುವೆಯ ಬಗ್ಗೆ ಒಬ್ಬರು ಈ ರೀತಿ ಹೇಳಿದರು.
"ಮದುವೆಗೆ ಆಗಮಿಸಿದವರಿಗೆ ಒಂದು ಬಟ್ಟಲು ಊಟ ಮಾತ್ರ.ಮುಗಿದ ನಂತರ ಬೇರೆ ಊಟ ಇಲ್ಲ.
ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರ ತನಕ
ಯಾರ ಬಟ್ಟಲಲ್ಲೂ ಊಟ ಬಾಕಿ ಇಲ್ಲ.ಯಾರಿಗೂ ಕೂಡಾ ಇನ್ನೂ ಊಟ ಬೇಕು ಎಂದು ಅನಿಸಲಿಲ್ಲ.
ಒಂದೇ ಒಂದು ಅಕ್ಕಿಯ ಊಟ ಪೋಲಾಗಲಿಲ್ಲ.ಆ ಸೆಯ್ಯಿದರು ಸುತ್ತಲು ನಡೆಯುತ್ತಾ ಅದನ್ನೆಲ್ಲಾ ಗಮನಿಸುತ್ತಿದ್ದರಂತೆ.
ಬಹುಷ ಆ ಸೆಯ್ಯಿದ್ ರವರ ಬರ್ಕತ್ ನಿಂದಾಗಿರಬಹುದು ಎಲ್ಲರೂ ಆ ಒಂದು ಬಟ್ಟಲು ಊಟದಿಂದ ಹೊಟ್ಟೆ ತುಂಬಿಸಿ ಈ ರೀತಿ ನಮಗೂ ಮಾಡಿ ನೋಡಬೇಕೆಂದು ಹೇಳುತ್ತಾ ಸಂತೃಪ್ತಿಯಿಂದ ಮರಳಿದರಂತೆ.
ಊರಲ್ಲಿ ಈ ಸಂಪ್ರದಾಯವಿಲ್ಲದಿದ್ದರೂ ನಮಗೂ ಟ್ರೈ ಮಾಡಿ ನೋಡಬಹುದಲ್ಲವೇ?



*ಎಲ್ಲರಿಗೂ ಶೇರ್ ಮಾಡಿ*

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)


ಮುಂದುವರಿಯುವುದು........

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 16

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --16

📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  15:*_
 *ಸಭೆ ಸಮಾರಂಭಗಳ ಬಗ್ಗೆ ಮನೆ ಮಂದಿಯೊಂದಿಗೆ  ಸಮಾಲೋಚನೆ ನಡೆಯಲಿ*

ನಮ್ಮ ಮನೆಗಳಲ್ಲಿ ಒಂದಲ್ಲೊಂದು ಕಾರ್ಯಕ್ರಮ ನಡೆಯುತ್ತಾ ಇರುತ್ತದೆ.
ಕುಟುಂಬಸ್ಥರನ್ನು ಮತ್ತು ನೆರೆಕರೆಯವರನ್ನು ಕರೆದು ಮಾಡುವ ಸಮಾರಂಭಗಳಿಗೆ ಮನೆಯಲ್ಲಿ ಮುಶಾವರ (ಸಮಾಲೋಚನೆ )ನಡೆಯಬೇಕು.
ನಮ್ಮ ಮನೆಗಳಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮಗಳು
1.ಮಗುವಿನ ಹೆಸರಿಡುವ ಕಾರ್ಯಕ್ರಮ
2.ಮುಂಜಿ ಕಾರ್ಯಕ್ರಮ
3.ವಿವಾಹ ನಿಶ್ಚಯ
4.ಮದುವೆ
5.ಮದುವೆಯ ನಂತರದ ಒಂದೆರಡು ಕಾರ್ಯಕ್ರಮ
6.ಗೃಹ ಪ್ರವೇಶ
7.ರಬೀವುಲ್ ಅವ್ವಲ್ ತಿಂಗಳಲ್ಲಿ ಮೌಲಿದ್
8.ರಬೀವುಲ್ ಆಕಿರ್ ನಲ್ಲಿ ರಾತೀಬ್
9.ರಮಳಾನಿನಲ್ಲಿ ಇಫ್ತಾರ್
10.ಮರಣ ಹೊಂದಿದರೆ 3,7,40 ರ ಕಾರ್ಯಕ್ರಮಗಳು
ಹೀಗೆ ಹಲವಾರು ಸಮಾರಂಭಗಳು  ನಡೆಯುತ್ತದೆ.
ಮನೆಯ ಯಜಮಾನ ಈ ಸಮಾರಂಭಗಳನ್ನು ಆಲೋಚಿಸುವಾಗ ಮನೆಯಲ್ಲಿರುವ ಪತ್ನಿ-ಮಕ್ಕಳೊಂದಿಗೆ ಸಮಾಲೋಚನೆ ನಡೆಸುವುದು ಅತೀ ಮಹತ್ವದ ಸಂಗತಿಯಾಗಿದೆ.
ಉದ್ದೇಶಿಸಿದ ಕಾರ್ಯಕ್ರಮಗಳು ನಾವು ಉದ್ದೇಶಿಸಿದಂತೆ ಯಶಸ್ವಿಯಾಗಬೇಕಾದರೆ ಸಮಾಲೋಚನೆ ಅತ್ಯಗತ್ಯ.
ಯಾರೊಂದಿಗೂ ಸಮಾಲೋಚನೆ ನಡೆಸದೆ ಸ್ವಂತ ತೀರ್ಮಾನ ಪ್ರಕಾರ ಯಾವ ಕಾರ್ಯಕಗಳನ್ನು ಮಾಡಿದರೂ ಒಂದಲ್ಲ ಒಂದು ರೀತಿಯಲ್ಲಿ ಅದರಲ್ಲಿ ಸೋಲು ಖಚಿತ.
ಸಮಾಲೋಚನೆ ನಡೆಸದೆ ಮನೆ ಕಟ್ಟಿ ಸೋತವರಿದ್ದಾರೆ.
ಸಮಾಲೊಚನೆಯಿಲ್ಲದೆ ಮದುವೆಯಾಗಿ ಸೋತವರು ಇದ್ದಾರೆ.ವಾಹನ ಖರೀದಿಸಿ  ಸೋತವರೂ ಇದ್ದಾರೆ.

ಸಮಾಲೋಚನೆಯಿಂದ ಸೋಲು ಅಥವಾ ಗೆಲುವು ಉಂಟಾಗಬಹುದು.
ಮೂರ್ಖರೊಂದಿಗೆ ಸಮಾಲೋಚನೆ ನಡೆಸಿದ್ದಲ್ಲಿ ಸೋಲು ಹಾಗೂ ಬುದ್ಧಿವಂತರೊಂದಿಗೆ ಸಮಾಲೋಚನೆ ನಡೆಸಿದ್ದಲ್ಲಿ ಗೆಲುವು ಖಚಿತ.

ಅನುಭವವಿರುವ ಮನೆಯ ಯಜಮಾನನ ಮೇಲ್ನೋಟದಲ್ಲಿ ಮಾಡುವ ಕಾರ್ಯಕ್ರಮ ಯಶಸ್ವಿಯಾದರೂ ಯಜಮಾನನ ಮರಣದ ನಂತರ ಮನೆಯಲ್ಲಿ ಮಕ್ಕಳು ಮಾಡುವ ಸಮಾರಂಭದಲ್ಲಿ ಆಗಬಾರದ ಅನಾಹುತ ಆಗಿ ಹೋಗುತ್ತದೆ.ಕಾರಣ ಮಕ್ಕಳಿಗೆ ಅನುಭವ ಕಡಿಮೆ.ಅನುಭವವಿದ್ದ ತಂದೆ ಮಕ್ಕಳಿಗೆ ಅದನ್ನು ಕಲಿಸಿ ಕೊಟ್ಟಿಲ್ಲ.ನೂರು ಜನರನ್ನು ಸೇರಿಸಿ ಯಾವ ರೀತಿಯಲ್ಲಿ ಕಾರ್ಯಕ್ರಮ ಮಾಡಬೇಕೆಂಬ ಸಮಾಲೋಚನೆ ಮಕ್ಕಳೊಂದಿಗೆ ಅವರು ನಡೆಸಿಲ್ಲ.

ಮನುಷ್ಯನ ಬುದ್ಧಿ ಅಪಾರ.
ಒಬ್ಬನಿಗೆ ತೋಚದ ಕಾರ್ಯ ಇನ್ನೊಬ್ಬನಿಗೆ ತೋಚುವುದುಂಟು.ಹಲವರು ಸೇರಿ ಸಮಾಲೋಚನೆ ನಡೆಸುವಾಗ ಹಲವಾರು ಉತ್ತಮ ಅಭಿಪ್ರಾಯಗಳು ಕೇಳಿ ಬರುತ್ತದೆ.ಅದರಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಬಹುದಾಗಿದೆ.

قال الحسن: "ما تشاور قوم إلا هداهم الله لأفضل ما يحضرهم". (الأدب المفرد)
ಜನರ ಸಮಾಲೋಚನೆ ಅತ್ಯುತ್ತಮವಾದುದಕ್ಕೆ ತಲುಪಿಸುತ್ತದೆ ಎಂಬ ಹಸನ್ (ರ)ರವರ ಮಾತನ್ನು ಇಮಾಮ್ ಬುಖಾರಿ ವರದಿ ಮಾಡಿದ್ದಾರೆ.

ನಮಾಝ್ ಗೆ ಪ್ರತಿಫಲವಿದ್ದಂತೆ ಸಮಾಲೋಚನೆಗೂ ಪ್ರತಿಫಲವಿದೆ ಎಂದು ಖುರ್'ಆನ್ ಕಲಿಸಿ ಕೊಟ್ಟಿದೆ.
وَالَّذِينَ اسْتَجَابُوا لِرَبِّهِمْ وَأَقَامُوا الصَّلَاةَ وَأَمْرُهُمْ شُورَى بَيْنَهُمْ وَمِمَّا رَزَقْنَاهُمْ يُنْفِقُونَ [الشورى : 38]

ಸತ್ಯವಿಶ್ವಾಸಿಗಳು ತಮ್ಮ ಕಾರ್ಯಗಳಲ್ಲಿ ಸಮಾಲೋಚನೆ ನಡೆಸುವರು ಎಂದು ಸೂರತುಶ್ಸೂರ ದ 38 ನೇ ಸೂಕ್ತದಲ್ಲಿದೆ.
وَشَاوِرْهُمْ فِي الأمْرِ فَإِذَا عَزَمْتَ فَتَوَكَّلْ عَلَى اللَّهِ.
ನಿಮ್ಮ ಕಾರ್ಯಗಳಲ್ಲಿ ಸಮಾಲೋಚನೆ ನಡೆಸಿರಿ.ನಂತರ ದೃಢ ತೀರ್ಮಾನಗೈದು ಅಲ್ಲಾಹನಿಗೆ ತವಕ್ಕುಲ್ ಮಾಡಿರಿ
(ಆಲು ಇಂಮ್ರಾನ್ 159)
 ಎಂದು ಖುರ್'ಆನ್ ಹೇಳಿದೆ.

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಪ್ರಮುಖ ಕಾರ್ಯಗಳಲ್ಲಿ ಸಮಾಲೋಚನೆ ನಡೆಸುತ್ತಿದ್ದರು.ಬದ್ರ್ ,ಉಹ್ದ್ ಯುದ್ಧಕ್ಕೆ ಹೊರಡುವ ವೇಳೆ ಸಮಾಲೋಚನೆ ನಡೆಸಿದ್ದು,ನಮಾಝ್ ಗೆ ಮಸೀದಿಗೆ ಆಹ್ವಾನಿಸಲು ಯಾವ ಮಾರ್ಗ ಸ್ವೀಕರಿಸಬೇಕೆಂದು ಸಮಾಲೋಚನೆ ನಡಿಸಿದ್ದು ಚರಿತ್ರೆಗಳಲ್ಲಿ ಬಹಳ ಪ್ರಸಿದ್ಧವಾಗಿದೆ.

ಕಾರ್ಯಕ್ರಮದ ಮುಂಚೆ ಸಮಾಲೋಚನೆ ನಡೆಸಿ ಒಂದೊಂದು ಕೆಲಸಗಳನ್ನು ಮನೆ ಮಂದಿಗೆ ವಹಿಸಿ ಕೊಟ್ಟರೆ ಎಲ್ಲವೂ ಒಬ್ಬನ  ಮೇಲೆ ಭಾರವಾಗುವುದು ತಪ್ಪುತ್ತದೆ.ಮಾತ್ರವಲ್ಲ ಅದರಿಂದ ಮನೆ ಮಂದಿಗೂ ಹೊಸ ಅನುಭವ ಲಭಿಸುತ್ತದೆ.

(ಮನೆಯಲ್ಲಿ ನಡೆಸುವ ಸಭೆ-ಸಮಾರಂಭ ಹೇಗೆ ಪ್ಲಾನ್ ಮಾಡಬಹುದು ಎಂಬುವುದನ್ನು ಮುಂದಿನ ಭಾಗದಲ್ಲಿ ನಿರೀಕ್ಷಿಸಿ)



*ಎಲ್ಲರಿಗೂ ಶೇರ್ ಮಾಡಿ*

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)


ಮುಂದುವರಿಯುವುದು........

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 15

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --15

📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  14:*_
 *ಮನೆಯಲ್ಲಿ ನಮಾಝ್ ಮಾಡಿರಿ*

ಇದು ನಾನು ಬರೆಯಬೇಕಾದರೆ ಲಾಕ್'ಡೌನ್ ನಾಲ್ಕನೇ ಹಂತದಲ್ಲಿದೆ.
ಮನೆಯಲ್ಲೇ ಇರಿ, ಸುರಕ್ಷಿತರಾಗಿರಿ ಎಂಬ ಸರಕಾರದ ಆಜ್ಞೆಯೊಂದಿಗೆ ಸಹಕರಿಸುತ್ತಾ 10 ನೇ ಶುಕ್ರವಾರವೂ ಜುಮಾ ನಮಾಝ್ ಇಲ್ಲದೆ ಮನೆಯಲ್ಲೇ ಎಲ್ಲಾ ಪ್ರಾರ್ಥನೆಗಳನ್ನು ನಿರ್ವಹಿಸುತ್ತಾ ಬಂದಿದ್ದೇವೆ.

ಇಲ್ಲಿ ನಾನು ಬರೆಯಲುದ್ದೇಶಿಸುವುದು ಅದಲ್ಲ.
ಪುರುಷರು ಫರ್ಳ್ ನಮಾಝ್ ಮಸೀದಿಯಲ್ಲಿ ನಿರ್ವಹಿಸಬೇಕು.ಸುನ್ನತ್ ನಮಾಝ್ ಗಳನ್ನು ಮನೆಯಲ್ಲೂ ನಿರ್ವಹಿಸಬೇಕು.ಮಹಿಳೆಯರ ಎಲ್ಲಾ ನಮಾಝ್ ಗಳು ಮನೆಯಲ್ಲೇ ಆಗಿರಬೇಕು.
ಇಮಾಮ್ ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ ಹದೀಸ್ ನೋಡಿ,
عَنْ زيدِ بنِ ثابتِ أَنَّ النَّبيَّ ﷺ قالَ: صلُّوا أَيُّها النَّاسُ فِي بُيُوتِكُمْ، فَإنَّ أفضلَ الصَّلاةِ صلاةُ المَرْءِ في بَيْتِهِ إِلاَّ المكْتُوبَةَ
(بخاري ,مسلم)
ಓ ಜನರೇ!ನೀವು ನಿಮ್ಮ ಮನೆಗಳಲ್ಲಿಯೇ ನಮಾಝ್ ನಿರ್ವಹಿಸಿ.ಫರ್ಳೇತರ ನಮಾಝ್ ಗಳು ಉತ್ತಮವಾದದ್ದು ಮನೆಯಲ್ಲೇ ಆಗಿರುತ್ತದೆ.
(ಬುಖಾರಿ,ಮುಸ್ಲಿಂ)

ಸುನ್ನತ್ ನಮಾಜುಗಳು ಹಲವಾರು ಇದೆ.ಮೇಲಿನ ಹದೀಸಿನ ಉದ್ದೇಶ ಫರ್ಳ್ ನಮಾಝ್'ಗಳ ಮುಂಚೆ ಮತ್ತು ನಂತರವಿರುವ ರವಾತಿಬ್ ನಮಾಝ್'ಗಳು ಮನೆಯಲ್ಲಿ ನಿರ್ವಹಿಸುವುದಾಗಿದೆ.ಸುನ್ನತ್ ಗಳ ನಮಾಜಿನ ಪೈಕಿ ತಹಿಯ್ಯತ್ ಎಂಬ ನಮಾಝ್ ಇದೆ.ಮಸೀದಿಯೊಳಗೆ ಪ್ರವೇಶಿಸಿದವನು ನಿರ್ವಹಿಸುವ ನಮಾಝಾಗಿದೆ ಅದು.ಅದು ಮಸೀದಿಯಲ್ಲೇ ನಿರ್ವಹಿಸಬೇಕು.
ಜಮಾಅತ್ ಆಗಿ ಸುನ್ನತ್ ಇರುವ ಸುನ್ನತ್ ನಮಾಝ್ ಗಳನ್ನು ಮಸೀದಿಯಲ್ಲಿ ನಿರ್ವಹಿಸುವುದು ಉತ್ತಮವಾಗಿದೆ.
ಜಮಾಅತ್ ಸುನ್ನತ್ ಇಲ್ಲದ ಸುನ್ನತ್ ನಮಾಜುಗಳನ್ನು ಮನೆಯಲ್ಲಿ ನಿರ್ವಹಿಸುವುದು ಉತ್ತಮವೆಂದು  ಇಮಾಮ್ ಇಬ್ನ್ ಹಜರ್ (ರ)ರವರ ಹೇಳಿಕೆಯನ್ನು ಹಲವಾರು ಇಮಾಮರು ಉಲ್ಲೆಖಿಸಿದ್ದಾರೆ.
-------------------------------------------------------
ಇನ್ನೊಂದು ಹದೀಸ್ ನೋಡಿ,
عَنْ أُمِّ سَلَمَةَ رَضِيَ اللهُ عَنْهَا: عَنْ رَسُولِ - صلى الله عليه وسلم - أَنَّهُ قَالَ: خَيرُ مَسَاجِدِ النِّسَاءِ قَعرُ بُيُوتِهِنَّ.(احمد)
ಉಮ್ಮು ಸಲಮ (ರ)ಹೇಳುತ್ತಾರೆ,ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಸ್ತ್ರೀಯರಿಗೆ ನಮಾಜಿಗೆ ಉತ್ತಮ ಅವರ ಮನೆಯೊಳಗಿರುವ ಕೋಣೆಯಲ್ಲಾಗಿದೆ.
(ವರದಿ ಇಮಾಮ್ ಅಹ್ಮದ್ 25331)

ಉಮ್ಮು ಸಲಮ ಬೀವಿ ಪ್ರವಾದೀ ವರ್ಯರ ಪತ್ನಿಯಾಗಿರುವರು.
 ಇತರ ಮಹಿಳೆಯರಿಗಿಂತ ಪ್ರವಾದೀ ಚರ್ಯೆ ತಿಳಿದಿರುವುದು ಪ್ರವಾದೀ ಪತ್ನಿಯರಿಗಾಗಿದೆ.
ಮಹಿಳೆಯರು ಮಸೀದಿಗೆ ತೆರಳುವುದಲ್ಲಿ ಯಾವುದಾದರೊಂದು ಪುಣ್ಯವಿರುತ್ತಿದ್ದಲ್ಲಿ ಪ್ರವಾದೀ ವರ್ಯರ ಪತ್ನಿಯರು ಮತ್ತು ಮಕ್ಕಳು ಮಸೀದಿಗೆ ತೆರಳುತ್ತಿದ್ದರು.ಅವರು ಯಾರೂ ಕೂಡಾ ಮಸೀದಿಗೆ ನಮಾಝಿಗೆ ತೆರಳಿಲ್ಲವೆಂದು ಇಮಾಮ್ ಶಾಫೀಈ (ರ)ಹೇಳಿದ್ದು ಎಲ್ಲರಿಗೂ ತಿಳಿದಿರುವ ವಿಚಾರ.

ಸ್ತ್ರೀಯರ ಮಸೀದಿಯಲ್ಲಿನ ಜುಮಾ- ಜಮಾಅತ್ ನ ಬಗ್ಗೆ ಇನ್ನಷ್ಟು ತಿಳಿಯಲು ನಾನು ಬರೆದ
*ಸ್ತ್ರೀ ಜುಮುಅ -ಜಮಾಅತ್ ಮಸೀದಿಯಲ್ಲಿ*
ಮತ್ತು
 *ಬೀವಿ ಆತಿಕ(ರ)* ಎಂಬ 2 ಲೇಖನವನ್ನು ಓದಿರಿ.
ಅದರ ಲಿಂಕ್ ಈ ಕೆಳಗೆ ಇದೆ.
👇
ಸ್ತ್ರೀ ಜುಮುಅ -ಜಮಾಅತ್ ಮಸೀದಿಯಲ್ಲಿ
http://gafoorbayar786.blogspot.com/2018/10/1_21.html?m=1

ಬೀವಿ ಆತಿಕ(ರ)
👇
http://sunniislamik.blogspot.com/2017/09/blog-post_16.html?m=1
--------------------------------------------------------

ಒಟ್ಟಿನಲ್ಲಿ ನಮ್ಮ ಮನೆಗಳಲ್ಲಿ ಧಾರಾಳವಾಗಿ ಸುನ್ನತ್ ನಮಾಜ್'ಗಳು ನಡೆಯಬೇಕು.
ನಮಾಝಿನ ಬರ್ಕತ್'ನಿಂದ ನಮ್ಮ ಮನೆಗಳಲ್ಲಿ ನೆಮ್ಮದಿ ಮತ್ತು ಸಂತೋಷ ಲಭಿಸುತ್ತದೆ.



*ಎಲ್ಲರಿಗೂ ಶೇರ್ ಮಾಡಿ*

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)


ಮುಂದುವರಿಯುವುದು........