*ಝಿಯಾರತ್ತ್ ಕೇಂದ್ರ*
♦️♦️ 8️⃣8️⃣ ♦️♦️
➖➖➖➖➖➖➖
#ವಲಿಯುಲ್ಲಾಹಿ_ಮಾಹಿನ್_ಪೋಕರ್ (ಖ:ಸಿ) ಝಿಯಾರತ್ತುಂಗರ ಪಳ್ಳಿ, ಮಾಂಬ ಚಕ್ಕರಕ್ಕಲ್ ಕಣ್ಣೂರ್ ಜಿಲ್ಲೆ.
➖➖➖➖➖➖➖➖
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
☪☪☪☪☪☪☪☪☪
✍ ಗಫೂರ್ ಬಾಯಾರ್
▪️▪️▪️▪️▪️▪️▪️
ಕೇರಳದ ಕಣ್ಣೂರಿನಿಂದ 18 ಕಿಲೋಮೀಟರ್ ದೂರವಿರುವ ಕಿಯಾಕ್ ಮುಯಪ್ಪಾಲ ಬಝಾರಿನಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ಮಾಂಬ ಎಂಬ ಸ್ಥಳದಲ್ಲಿರುವ ಝಿಯಾರತ್ತುಂಗರ ಜುಮಾ ಮಸೀದಿಯ ಕಾಂಪೌಂಡಿನೊಳಗಿರುವ ದರ್ಗಾ ಶರೀಫ್ ಸರ್ವ ಧರ್ಮಿಯರ ಅಭಯ ಕೇಂದ್ರವಾಗಿದೆ.
ಹಲವಾರು ಕಶ್ಫ್ ಕರಾಮತ್ತುಗಳನ್ನು ಕಾಣಿಸಿರುವ ಮಾಹಿನ್ ಪೋಕರ್ ಶಹೀದ್ (ರ) ಎಂಬ ಮಹಾನರ ದರ್ಗಾ ಶರೀಫ್ ಇದಾಗಿದ್ದು ಈ ಮಹಾನರ ಮಖಾಮಿನ ಸನಿಹದಲ್ಲೇ ಅವರ ಶಿಷ್ಯಂದಿರೂ ಹಾಗೂ ಶುಹದಾಗಳೂ (ಹುತಾತ್ಮ) ಆದ ಸಿರಾಜುದ್ದೀನ್ (ರ) ಮತ್ತು ಅಬ್ದುಲ್ಲ (ರ) ಎಂಬ ಮಹಾನರಿಬ್ಬರೂ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
ಕಣ್ಣೂರು ಪೊನ್ನಿಲಗತ್ತ್ ಎಂಬ ಮನೆತನದಲ್ಲಿ ತಾಯಿ ತಂದೆಯರಿಗೆ ಏಕೈಕ ಪುತ್ರನಾಗಿ ಜನಿಸಿದ ವಲಿಯುಲ್ಲಾಹಿ ಮಾಹಿನ್ ಪೋಕರ್ (ರ) ರವರು ಸರ್ವ ಧರ್ಮೀಯರನ್ನು ಬಹಳ ಗೌರವದಿಂದ ಕಾಣುತ್ತಾ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು.
ಬಾಲ್ಯದಿಂದಲೇ ಇಲಾಹಿ ಸ್ಮರಣೆಯನ್ನು ಮೈಗೂಡಿಸಿಕೊಂಡಿದ್ದ ಅವರು ಅಧ್ಯಯನಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದರಲ್ಲದೆ ಸದಾ ಆರಾಧನೆಯಲ್ಲಿ ತಲ್ಲೀನರಾಗಿರುತ್ತಿದ್ದರು. ಶರೀಅತ್ ನಿಯಮದ ಪ್ರಕಾರ ಪ್ರಾಯ ಪೂರ್ತಿಯಾಗುತ್ತಿದ್ದಂತೆಯೇ ಅಲ್ಲಾಹನ ಇಷ್ಟ ದಾಸರಾದ ಔಲಿಯಾ ಎಂಬ ಪದವಿ ಪಡೆದಿದ್ದರು.
ಬ್ರಿಟೀಷರಿಗಿಂತಲೂ ಬಹಳ ಮುನ್ನವೇ ವ್ಯಾಪಾರ ನಿಮಿತ್ತ ಭಾರತಕ್ಕೆ ಬಂದಿದ್ದ ಪೋರ್ಚುಗೀಸರು ನಿಧಾನವಾಗಿ ಭಾರತವನ್ನು ತಮ್ಮ ವಶಕ್ಕೆ ತೆಗೆದು ಕೊಂಡರಲ್ಲದೆ ಭಾರತೀಯರನ್ನು ಅಪಮಾನಕರವಾಗಿ ನಡೆಸಿಕೊಳ್ಳಲಾರಂಭಿಸಿದ್ದರು. ಇದನ್ನು ಕಂಡು ಸಿಡಿದೆದ್ದ ಮಾಹಿನ್ ಪೋಕರ್ (ರ) ಪೋರ್ಚುಗೀಸರ ವಿರುದ್ಧ ಹೋರಾಟಕ್ಕಿಳಿದಿದ್ದರು.
ತಾಯಿನಾಡಿನ ಉಳಿವಿಗಾಗಿ ಪರಕೀಯರ ವಿರುದ್ಧ ಹೋರಾಟಕ್ಕಿಳಿದಿದ್ದ ಮಾಹಿನ್ ಪೋಕರ್ (ರ)ರವರು ಹದಿನಾರನೇ ವಯಸ್ಸಿನಲ್ಲಿ ಚೊರಯಾನ್ ಕುಂಡ್ ಎಂಬಲ್ಲಿ ಪೋರ್ಚುಗೀಸರ ವಿರುದ್ಧದ ಹೋರಾಟವೊಂದರಲ್ಲಿ ಶಹೀದಾದರು.
ಹಾಗೆ ಶಹೀದಾದ ಮಹಾನರ ಗೌರವಾರ್ಥ ಅವರ ಜನಾಝದ ಅಂತ್ಯಕ್ರಿಯೆಗಾಗಿ ಅಂದಿನ ನಾಡದೊರೆ ಕೊಕುರಚ್ಚನ್ ಎಂಬುವರು ಮಾಂಬ ಎಂಬ ಊರಿನಲ್ಲಿ ದಾನವಾಗಿ ನೀಡಿದ ಸ್ಥಳದಲ್ಲಿ ದಫನ ಮಾಡಲಾಯಿತು.
ಶಹೀದಾದ ಮಾಹಿನ್ ಪೋಕರ್ (ರ)ರವರು ಜನಿಸಿದ ಮನೆತನವು ನಂತರ *"ಶಹೀದೊರಕಂ"* ಎಂಬ ಗೌರವನಾಮದಿಂದ ಪ್ರಸಿದ್ಧಿ ಪಡೆಯಿತು.
ಮಹಾನರ ಮಖಾಮಿನ ಕೆಳಭಾಗದಲ್ಲಿ ಅವರ ಶಿಷ್ಯಂದಿರೂ, ಹುತಾತ್ಮರೂ ಆದ ಸಿರಾಜುದ್ದೀನ್ (ರ) ಮತ್ತು ಅಬ್ದುಲ್ಲ (ರ) ಎಂಬಿಬ್ಬರು ಮಹಾನರೂ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
No comments:
Post a Comment