Sunday, December 17, 2017

*ಪುತ್ತೂರಿಗೆ ಪೇರೋಡ್ ಉಸ್ತಾದ್ ಬರುತ್ತಿದ್ದಾರಂತೆ...!ಅದರಲ್ಲೇನು ವಿಶೇಷ...??*
*=================*

ಹೌದು ಸುಮಾರು ಮೂವತ್ತೈದು ನಲ್ವತ್ತು ವರ್ಷಗಳಿಂದ ಉಸ್ತಾದರು ಪ್ರಭಾಷಣ ಮಾಡುತ್ತಲೇ ಇದ್ದಾರೆ. ಆದರೆ ಈಗಲೂ ಉಸ್ತಾದರು ಬರುತ್ತಾರೆಂದರೆ ಎಲ್ಲರಿಗೂ ಎಲ್ಲಿಲ್ಲದ ಆವೇಶ!
ಎಲ್ಲರಿಗೂ ಅಂದರೆ ಅದೊಂದು ಆಲಂಕಾರಿಕವಾಗಿ ಹೇಳಿದ್ದಲ್ಲ.
ಗ್ರೂಫೀಸಂ ಅತೀತವಾಗಿ ಎಲ್ಲರೂ ಉಸ್ತಾದರ ಪ್ರಭಾಷಣಕ್ಕಾಗಿ ಕಾಯುತ್ತಾ ಇದ್ದಾರೆ.
ಹಾಗೆ ಕಾತರದಿಂದ ಕಾಯಲು ಕಾರಣವೂ ಇದೆ.
ಉಸ್ತಾದರ ಪ್ರತಿಯೊಂದು ವಿಷಯಗಳಿಗೆ ಅಧೀಕ್ರತ ಗ್ರಂಥಗಳ ಆಧಾರವಿರುತ್ತದೆ.

ಯಾರೋ ಎಲ್ಲಿಯೋ ಏನೋ ಹೇಳಿದರೆಂಬ ಅನುಮಾನಿತ ವಿಷಯಗಳ ಬಗ್ಗೆ ಅವರು ಯಾವತ್ತೂ ಹೇಳಲ್ಲ.
ಆದ್ದರಿಂದಲೇ ಯಾವುದೇ ಒಂದು ವಿಷಯದಲ್ಲಿ ತರ್ಕವಾದರೆ ಪೇರೋಡು ಉಸ್ತಾದರು ತನ್ನ ಉರ್ದಿಯಲ್ಲಿ ಹಾಗೆ ಹೇಳಿದ್ದಾರೆಂದು ಧ್ರಡಪಟ್ಟರೆ ತರ್ಕ ಅಲ್ಲಿಗೆ ಮುಗಿಯಿತು!
ಕಾರಣ ಅದು ಕಿತಾಬಿನಲ್ಲಿ ಇದ್ದೇ ಇರುತ್ತದೆ!
ಹಾಗಾಗಿಯೇ ದೊಡ್ಡ ದೊಡ್ಡ ಮುದರ್ರಿಸರು,ವಿದ್ವಾಂಸರು ಉಸ್ತಾದರ ಪ್ರಭಾಷಣ ಕೇಳಲಿಕ್ಕೆ ಬರುತ್ತಾರೆ.
ಪ್ರಭಾಷಣ ಕೇಳಲು ಉಲಮಾ ದಿಗ್ಗಜರೂ ಇದ್ದಾರೆಂಬ ನಿಟ್ಟಿನಲ್ಲಿ ಅವರಿಗೆ ಮಾತ್ರ ಅರ್ಥವಾಗುವಂತೆ ವಿಷಯ ಅವತರಿಸಿ,ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸುವ ಶೈಲಿ ಪೇರೋಡ್ ಉಸ್ತಾದರ ಪ್ರಭಾಷಣಕ್ಕೆ ಇಲ್ಲ.

ಪಂಡಿತರಿಗೂ,ಪಾಮರರಿಗೂ,
ಜನಸಾಮಾನ್ಯರಿಗೂ,ಎಲ್ಲರಿಗೂ ಅರ್ಥವಾಗುವ ವಿಶಿಷ್ಟ ಶೈಲಿಯಾಗಿದೆ ಉಸ್ತಾದರ ಪ್ಲಸ್ ಪೋಯಿಂಟ್!

ಬರೋಬ್ಬರಿ ಒಂದು ವರ್ಷದ ಮೇಲೆಯಾಯಿತು ಉಸ್ತಾದರ ಡೇಟಿಗಾಗಿ ಪ್ರಯತ್ನಿಸುತ್ತಿರುವುದು.
ದೇಲಂಪಾಡಿ ರಫೀಕ್ ಸ‌ಅದಿ ಉಸ್ತಾದ್ ಮತ್ತು
ಮಿತ್ತೂರು ಉಸ್ಮಾನ್ ಹಾಜಿ ಪುತ್ರ ಅಡ್ವೊಕೇಟ್ ಶಾಕಿರ್ ಹಾಜಿಯವರು ನಿರಂತರವಾಗಿ ಪೇರೋಡ್ ಉಸ್ತಾದರ ಡೇಟಿಗಾಗಿ ಸಂಪರ್ಕಿಸುತ್ತಲೇ ಇದ್ದರು.
ಕಳೆದ ತಿಂಗಳು ಉಪ್ಪಿನಂಗಡಿಯಲ್ಲಿ ನಡೆದ ಉಲಮಾ ಸಂಘಮಕ್ಕೆ ಪೇರೋಡ್ ಉಸ್ತಾದ್ ಬಂದಾಗ ನಿರಂತರವಾಗಿ ರಿಕ್ವೆಸ್ಟ್ ಮಾಡಿ ಅವರ ಮುಂಬಾಗದಲ್ಲಿ ಧರಣಿ ಕುಳಿತಂತೆ ಕುಳಿತಾಗಲೆಲ್ಲಾ ಉಸ್ತಾದರ ಉತ್ತರ ಮುಗುಳ್ನಗೆ ಮಾತ್ರವಾಗಿತ್ತು.
ಕಾರಣ ಎಡ್ಜಸ್ಟ್ ಮಾಡುವ ಡೇಟ್ ಉಸ್ತಾದರ ಬಳಿ ಇಲ್ಲವೆಂಬುದು ನಮಗೊತ್ತು. ಹಾಗಾಗಿಯೇ ಡೇಟ್ ಕೇಳುವಾಗ ಮುಗುಳ್ನಗುವುದು.
ಇತರರೂ ಕೂಡಾ ಡೇಟ್ ಪಡೆಯಲು ನಮ್ಮಂತೆಯೇ ಪರದಾಡಿರಬಹುದು!

ಆದರೂ ಯಾರೋ ಒಬ್ಬರು ಹೇಳಿದಂತೆ ಸಿಕ್ಕಿದರೆ ಒಂದು ಆನೆ ಹೋದರೆ ಒಂದು ಮಾತೆಂಬ ತತ್ವವನ್ನು ಶಾಕೀರ್ ಹಾಜಿ ನಿರಂತರವಾಗಿ ಯ್ಯೂಝ್ ಮಾಡಿದುದರ ಫಲವಾಗಿ *ಡಿಸೆಂಬರ್ 16 ರಂದು ಪಾಲಕ್ಕಾಡಿನಲ್ಲಿರುವ ಪ್ರಭಾಷಣ ಕಾರಣಾಂತರಗಳಿಂದ ರದ್ದುಗೊಂಡಿದ್ದರಿಂದ ಆ ಡೇಟ್ ಪುತ್ತೂರಿಗೆ ದಕ್ಕಿತು!*

ದೇಲಂಪಾಡಿ ಉಸ್ತಾದ್ ಮತ್ತು ಶಾಕಿರ್ ಹಾಜಿಯವರ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿತು.

ಹಾಜಿಯವರು *ಪೇರೋಡ್ ಉಸ್ತಾದರು ಪುತ್ತೂರಿಗೆ ಬರುತ್ತಾರೆಂಬ ಸಿಹಿ ಸುದ್ದಿಯನ್ನು ಕಾರ್ಯಕರ್ತರಾದ ನಮ್ಮೊಂದಿಗೆ ಹಂಚಿದಾಗ ಅಂದು ನಮಗೆ ಪೆರ್ನಾಲ್ ಆಗಿತ್ತು!*
ಉಸ್ತಾದರ ಡೇಟ್ ಸಿಕ್ಕಿದ ಕೂಡಲೇ ಕಾರ್ಯಕರ್ತರು ಚುರುಕಾದರು!
ಅಂದು ಬೆಳಗಿನ ಜಾವ ಮೂರು ಗಂಟೆಯವರೆಗೂ ಪುತ್ತೂರಿನ ಮೂಲೆ ಮೂಲೆಗಳಲ್ಲಿ ಫ್ಲಕ್ಸ್ ಹಾಕಲಾಯಿತು.
*ಪುತ್ತೂರು SSF ದ‌ಅವಾ ವಿಂಗ್ ಕಾರ್ಯಕರ್ತರು ಫ್ಲಕ್ಸ್ ಹಾಕುವಲ್ಲಿ ಸಕ್ರಿಯರಾಗಿದ್ದರು.ಮರು ದಿನವೂ ಅವರು ಫ್ಲಕ್ಸ್ ಹಾಕುವುದರಲ್ಲಿ ನಿರತರಾಗಿದ್ದಾಗ ನನಗೂ ಅವರ ಜತೆ ಸೇರಿ ಸೇವೆಗೆಯ್ಯುವ ಅವಕಾಶ ಸಿಕ್ಕಿತು.*

ನಿಜವಾಗಿಯೂ *SSF ಪುತ್ತೂರು ಡಿವಿಷನ್ ಗ್ರೇಟ್ ಕೆಲಸ ಮಾಡಿದೆ ಅವರಿಗೆ ಸೆಲ್ಯೂಟ್ ಕೊಡಲೇ ಬೇಕು👍*
ಡಿವಿಷನ್ ವತಿಯಿಂದ ನಡೆಸುವ ಪ್ರತಿಭೋತ್ಸವದ ಜೊತೆಗೆ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಮಾಡಿ ಅದಕ್ಕೆ ಪ್ರಭಾಷಣಗರನ್ನಾಗಿ ಪೇರೋಡ್ ಉಸ್ತಾದರನ್ನು ಆಯ್ಕೆ ಮಾಡಿ ಅವರು ಬರುವಂತೆ ಮಾಡಿದ್ದು ಅವರ ಸಾದನೆಯೇ ಸರಿ.
ಅಲ್ಲಾಹು ಅರ್ಹ ಪ್ರತಿಫಲ ನೀಡಿ ಅನುಗ್ರಹಿಸಲಿ ಆಮೀನ್.

*ನಾಳೆಯ(ಶನಿವಾರದ)*
ಸಂಜೆಗಾಗಿ ಎಲ್ಲರ ಚಿತ್ತ ಕಾಯುತ್ತಿದೆ!.

ಇವತ್ತು ಬೆಳಿಗ್ಗೆ ಪುತ್ತೂರು ಮಾರ್ಕೆಟ್ ಮಾರ್ಗದಲ್ಲಿ ನಡೆಯುವಾಗ ಮಿತ್ರರೊಬ್ಬರು ಹೇಳಿದರು...
*ಶಫಾ‌ಅತ್ ವಿಷಯದಲ್ಲಿ ಪೇರೋಡ್ ಉಸ್ತಾದರು ಎರಡು ನಿಮಿಷವಾದರೂ ವಿವರಣೆ ನೀಡಬೇಕೆಂದು ಹಿರಿಯರೊಬ್ಬರು ಹೇಳುತ್ತಾ ಇದ್ದಾರೆ.ಉಸ್ತಾದರ ವಿವರಣೆ ಅಧೀಕ್ರತ.ನೋ ಡೌಟ್!*

*ಮತ್ತೊಬ್ಬರು ಅಝಾನ್ ನಂತರದ ದುಆ ದ ಶ್ರೇಷ್ಠತೆ ಕುರಿತು ಕಲಿಯಲಿಕ್ಕೆ ಕಾತರರಾಗಿದ್ದಾರೆ ಅವರಿಗೂ ಪೇರೋಡ್ ಉಸ್ತಾದರ ಪ್ರಭಾಷಣದಿಂದಲೇ ಕೇಳಿ ಕಲಿಯಬೇಕಂತೆ! ಅವರು ಹೇಳಿದರೆ ಮಾತ್ರ ಮನಸ್ಸಿಗೆ ಸಮಾಧಾನ ಸಿಗುವುದಂತೆ!*

(ಇದು ಹೇಳುವವರು SSF ಸಂಘಟನೆಯ ವಕ್ತಾರರು ಅಲ್ಲವೆಂಬುದು ಗಮನಾರ್ಹ.)

ಹಾಗಾಗಿಯೇ ನಾನು ಹೇಳಿದ್ದು ಉಸ್ತಾದರ ಪ್ರಭಾಷಣವನ್ನು ಗ್ರೂಫಿಸಂ ಅತೀತವಾಗಿ ಎಲ್ಲರೂ ಆಗ್ರಹಿಸುತ್ತಾರೆ.

ಹೀಗೆ ನಾನಾ ವಿಧದ ಆಗ್ರಹಗಳನ್ನು ಮನಸ್ಸಲ್ಲಿಟ್ಟು ನಾಳೆಯ ಸಾಯಂಕಾಲವನ್ನು ಕಾಯುವವರು ಹಲವರು.ಎಲ್ಲರ
ನಿರೀಕ್ಷೆಗಳಿಗೂ ಉಸ್ತಾದ್ ಪರಿಹಾರ ನೀಡುವರೆಂಬ ಭರವಸೆ ಇದೆ.
ವರ್ಷಗಳ ಮುಂಚೆ ಕಮ್ಮಾಡಿ ಮೈದಾನದಲ್ಲಿ ಉಸ್ತಾದರ ಎರಡು ದಿವಸದ ಪ್ರಭಾಷಣ ಆಲಿಸಿದವರ ಆಶೆ ಈಗಲೂ ಮುಗಿಯಲಿಲ್ಲ.ಅದರ ನಂತರ ಇದೀಗ *ಹುಬ್ಬುರ್ರಸೂಲ್* ಎಂಬ ವಿಷಯದಲ್ಲಿ *ಪುತ್ತೂರು ಡಿವಿಷನ್ SSF*
ಪೇರೋಡ್ ಉಸ್ತಾದರ ಪ್ರಭಾಷಣ ಕೇಳುವ ಸುವರ್ಣಾವಕಾಶ ಒದಗಿಸಿಕೊಟ್ಟಿದೆ.

ಯಾರೂ ಮಿಸ್ ಮಾಡಬೇಡಿ....
ಎಲ್ಲರೂ ನಾಳೆ(ಶನಿವಾರ) ಸಂಜೆ 6 ಗಂಟೆಗೆ *ಪುತ್ತೂರು ಕಿಲ್ಲೆ ಮೈದಾನಕ್ಕೆ ಬನ್ನಿ....*

ಇನ್ಶಾಅಲ್ಲಾ ನಾನು ಅಲ್ಲಿ ಹಾಜರಾಗಿರುವೆನು.....
ನೀವು ಕೂಡಾ ಬರುವಿರಿ ತಾನೇ...?👍👍

- ಅಬೂಶಝ

No comments:

Post a Comment