ನಿಜವಾಗಿಯೂ ಸಂತೋಷವಾಗುತ್ತಿದೆ.
ಕುಂಬ್ರ ಮರ್ಕಝ್ ಪದವಿ ಪ್ರಧಾನ ಸಮಾರಂಭವನ್ನು ಇಷ್ಟೊಂದು ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಿರ್ವಹಿಸುವಲ್ಲಿ SYS,SSF ನ ಕಾರ್ಯಕರ್ತರನ್ನೊಳಗೊಂಡ ದಅವಾ ವಿಂಗ್ ಟೀಂ ನ ಕಠಿಣವಾದ ಪರಿಶ್ರಮ ಇತ್ತು.
ಮರ್ಕಝ್ ಸ್ವಾಗತ ಸಮಿತಿ ನೇತಾರರ ಸಂಪೂರ್ಣ ಬೆಂಬಲ ಮತ್ತು ಸಹಕಾರದೊಂದಿಗೆ ಎಲ್ಲರೂ ಒಂದೇ ಮನಸ್ಸಿನೊಂದಿಗೆ ಟೀಮ್ ವರ್ಕ್ ನಡೆಸಿದಾಗ ಕುಂಬ್ರ ಮರ್ಕಝ್ ಕಾರ್ಯಕ್ರಮಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿತು.
ಮರ್ಕಝ್ ಸಾರಥಿಗಳ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಮಹಿಳೆಯರ ಪ್ರವಾಹವೇ ಹರಿದು ಬಂದಾಗಲೂ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಲು ಸಾದ್ಯವಾಯಿತು.
ಮರ್ಕಝ್ ಕುಂಬ್ರ ಸಾರಥಿಗಳಾದ ಝೈನಿ ಉಸ್ತಾದ್, ಹಾಜಿ ಅಬ್ದುರ್ರಹ್ಮಾನ್ ಅರಿಯಡ್ಕ,ಬಶೀರ್ ಹಾಜಿ,ಶಾಕಿರ್ ಹಾಜಿ,ಬಲ್ಕಾಡ್ ಸಅದಿ ಮುಂತಾದವರು ನಿರಂತರವಾಗಿ ಕಾರ್ಯಕರ್ತಲ್ಲಿ ಸಂಪರ್ಕವಿಟ್ಟು ಅವರಲ್ಲಿ ಹೊಸ ಆವೇಶ ಮೂಡಿಸಿದಾಗ ಎಲ್ಲಾ ಕಾರ್ಯಗಳು ಬಹಳ ಸುಂದರವಾಗಿ ನಡೆಯಿತು.
ಅಲ್ಲಾಹು ಸ್ವೀಕರಿಸಲಿ.... ಆಮೀನ್.
ಬೆಳಿಗ್ಗೆಯಿಂದಲೂ ಉರಿಯುವ ಬಿಸಿಲಿನಲ್ಲಿನಿಂತು ಕೊಂಡ ಕಾರ್ಯಕರ್ತರು ಬರುವ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಹಾಗೂ ಟ್ರಾಫಿಕ್ ಕ್ಲಿಯರನ್ಸ್ ಸಟ್ಟಪ್ಪನ್ನು ಬಹಳ ಸುಸೂತ್ರವಾಗಿ ನಿರ್ವಹಿಸಿ ಮಾದರಿಯಾಗಿದ್ದರು.
ನಂತರ ಸಾವಿರಾರು ಆಹಾರ ಪೊಟ್ಟಣಗಳನ್ನು ಬಹಳ ತ್ವರಿತಗತಿಯಿಂದ ಪ್ಯಾಕ್ ಮಾಡಿದ ಕಾರ್ಯಕರ್ತರು ಮಧ್ಯಾಹ್ನ 2 ಗಂಟೆ ಆದಾಗ ಎಪಿ ಉಸ್ತಾದರನ್ನು ಸ್ವೀಕರಿಸುವ ಜಾಥಕ್ಕೆ ವೈಟ್& ವೈಟ್ ಹಾಕಿ ರೆಡಿಯಾಗಿದ್ದರು!
ಬೆಳಿಗ್ಗೆಯಿಂದ ಉರಿಬಿಸಿಲಲ್ಲಿ ನಿಂತು ಕಾರ್ಯಚರಿಸಿದ ಆಯಾಸ ಅವರ ಮುಖದಲ್ಲಿ ಇರಲೇ ಇಲ್ಲ!!
ಬದಲಿಗೆ ಆವೇಶವಿತ್ತು!!!
ಕೆಲವರು ಊಟಕೂಡ ಮಾಡಿರಲಿಲ್ಲ!!
ಸುನ್ನತ್ ಜಮಾತಿನ ಈ ಆವೇಶದ ಗಡಸುತನಕ್ಕೆ ಇನ್ನಷ್ಟು ಶಕ್ತಿ ನೀಡು ಯಾ ಅಲ್ಲಾಹ್.
ಕರ್ನಾಟಕ ಯಾತ್ರೆಯನ್ನು ನೆನಪಿಸುವಂತಹ ಶುಭ್ರವಸ್ತ್ರಧಾರಿಗಳಾದ ಕಾರ್ಯಕರ್ತರ ದಂಡನ್ನೇ ಕಣ್ಣುತುಂಬಾ ಕಾಣಲು ಸಾದ್ಯವಾಯಿತು.
ಯುವಕರ ಆವೇಶ ಕಂಡು ಶೈಖುನಾ ಎಪಿ ಉಸ್ತಾದರಿಗೆ ಸಂತೋಷವಾಯಿತು.
ಮನದಾಳದ ದುಆ ಸಿಕ್ಕಿತು.
ಆ ಯುವಕರಿಗೂ ಅದೇ ಬೇಕಿತ್ತು....
ಅವರ ಹ್ರದಯವೂ ತುಂಬಿ ಬಂತು....
ಸ್ವಯಂ ಸೇವಕ ತಂಡವನ್ನು ರಚಿಸಿ ಅದನ್ನು ಅತ್ಯಂತ ಶಿಸ್ತು ಬಧ್ಧವಾಗಿ ಕಾರ್ಯಚರಿಸಲು ನೇತೃತ್ವ ನೀಡಿದ ಇಕ್ಬಾಲ್ ಬಪ್ಪಳಿಗೆ ಹಾಗೂ ದಅವಾ ವಿಂಗ್ ನೇತೃತ್ವಕ್ಕೆ ಅಭಿನಂದನೆ ಸಲ್ಲಿಸಲೇಬೇಕು.
ಅದೇ ರೀತಿ ಅವರಿಗೆ ಬೆನ್ನಲುಬಾಗಿ ಕಾರ್ಯಚರಿಸಿದ SYS SSFನ ನಿಷ್ಠಾವಂತ ಕಾರ್ಯಕರ್ತರಿಗೂ....
ಅಲ್ಲಾಹು ಸ್ವೀಕರಿಸಲಿ ಆಮೀನ್.
ಅಬೂಶಝ.
No comments:
Post a Comment