#ಸುಖ_ಸಂಸಾರದ_ಸೂತ್ರ
🤝🤝🤝🤝🤝🤝🤝
ಕನ್ನಡಕ್ಕೆ
✍️ ಗಫೂರ್ ಬಾಯಾರ್
〰️〰️〰️〰️〰️〰️〰️
ಒಮ್ಮೆ ಮಗನೊಬ್ಬ ತನ್ನ ತಾಯಿಯೊಡನೆ ಕೇಳಿದನಂತೆ, ನಮಗಾಗಿ ಅತಿಹೆಚ್ಚು ತ್ಯಾಗ ಮತ್ತು ಕಷ್ಟ ಅನುಭವಿಸಿದ್ದು ಅಮ್ಮನೋ ಅಥವಾ ಅಪ್ಪನೋ ಅಂತ.
ನಿನ್ನ ತಂದೆಯನ್ನು ನಾನು ವಿವಾಹವಾಗಿ ಬರುವಾಗ ತಂದೆಯವರು ಹೀಗಿನಂತಿರದೆ ತನ್ನ ಸ್ವಂತ ಹಿತಾಸಕ್ತಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ವಿವಾಹಾನಂತರ ಅವರು ತಮ್ಮ ಸ್ವಂತ ಹಿತಾಸಕ್ತಿಗಳನ್ನು ನನಗಾಗಿ ಮೀಸಲಿಟ್ಟರು. ಆಮೇಲೆ ನೀವೆಲ್ಲರೂ ಜನಿಸಿದ ನಂತರ ನಿಮ್ಮ ಆಹಾರ, ವಸ್ತ್ರ, ಶಿಕ್ಷಣ ಹೀಗೆ ಎಲ್ಲಾ ಅಗತ್ಯಗಳನ್ನು ಪೂರೈಸುವ ಸಲುವಾಗಿ ತಮ್ಮೆಲ್ಲ ಸುಖ ಸಂತೋಷಗಳನ್ನೂ ಬದಿಗಿಟ್ಟು ನಮ್ಮ ಸುಖ ಸಂತೋಷಗಳಲ್ಲಿ ಸಂತೃಪ್ತರಾದರು. ಅಂದರೆ ನಮ್ಮ ಈ ಸುಖ ಸಂತೋಷಗಳೆಲ್ಲವೂ ಅವರ ಬೆವರಿನ ಫಲವಾಗಿದೆ.
ತಾಯಿಯ ಅನಿಸಿಕೆ ತಿಳಿದ ನಂತರ ಆ ಮಗ ತನ್ನ ತಂದೆಯ ಬಳಿ ಹೋಗಿ ಇದೇ ಪ್ರಶ್ನೆ ಕೇಳಿದಾಗ....
ಅಪ್ಪ ಹೇಳಿದನಂತೆ ನಿಮ್ಮನ್ನು ಹೊತ್ತು ಹೆತ್ತು ಸಾಕಿ ಸಲಹಿ ಬೆಳೆಸಿ ದೊಡ್ಡವರನ್ನಾಗಿಸಲು ನಿಮ್ಮ ತಾಯಿ ಸಹಿಸಿದ ತ್ಯಾಗದ ಒಂದಂಶವನ್ನೂ ನಾನು ಸಹಿಸಿಲ್ಲ. ಅವಳ ಸಹನೆ, ತಾಳ್ಮೆ ಮತ್ತು ಪರಿಶ್ರಮದ ಫಲದಿಂದಾಗಿ ಈ ಕುಟುಂಬವು ಇಂದು ಇಷ್ಟೊಂದು ಸಂತೋಷದಿಂದಿರಲು ಸಾಧ್ಯವಾಗಿದೆ. ತನ್ನೆಲ್ಲ ಸುಖ ಸಂತೋಷಗಳನ್ನೂ ಕುಟುಂಬಕ್ಕಾಗಿ ತ್ಯಾಗ ಮಾಡಿದ ಅವಳು ಈ ತನಕ ತನಗಾಗಿ ಏನನ್ನೂ ಅಪೇಕ್ಷಿಸಿದವಳಲ್ಲ. ಅದೇ ರೀತಿ ನನಗಿಲ್ಲವೆಂದು ಕೊರಗಿದವಳೂ ಅಲ್ಲ. ನನ್ನ ಅಲ್ಪ ವರಮಾನವನ್ನು ಸಂತೋಷದಿಂದ ಸ್ವೀಕರಿಸಿದ ಕುಟುಂಬದ ಬೇಕು-ಬೇಡಗಳನ್ನು ಸರಿದೂಗಿಸಿ ಮುನ್ನಡೆಸುತ್ತಿರುವ ಅವಳ ತ್ಯಾಗದ ಮುಂದೆ ನನ್ನದೇನೂ ಅಲ್ಲ ಎಂದರಂತೆ.
*ಅಪ್ಪ-ಅಮ್ಮಂದಿರ ಈ ಮಾತನ್ನು ಕೇಳಿದ ಆ ಮಗ ಹೋಗಿ ತನ್ನ ಸಹೋದರರೊಂದಿಗೆ ಹೇಳಿದನಂತೆ ಈ ಜಗತ್ತಿನಲ್ಲಿ ಅತಿ ದೊಡ್ಡ ಸೌಭಾಗ್ಯವಂತ ಮಕ್ಕಳು ನಾವು. ಏಕೆಂದರೆ ತಂದೆಯ ಪರಿಶ್ರಮವನ್ನು ಅರ್ಥಮಾಡಿಕೊಳ್ಳುವ ತಾಯಿ, ಹಾಗೂ ತಾಯಿಯ ತ್ಯಾಗವನ್ನು ಅರ್ಥಮಾಡಿಕೊಳ್ಳುವ ತಂದೆ. ಇಂತಹ ತಾಯಿ-ತಂದೆಯರ ಮಕ್ಕಳಾದ ನಾವು ನಿಜವಾದ ಸೌಭಾಗ್ಯಶಾಲಿಗಳಲ್ಲವೇ ಎಂದನಂತೆ.*
No comments:
Post a Comment