Friday, September 22, 2017

ಇತಿಹಾಸ ಪ್ರಸಿದ್ಧ ಯಮಾಮ ಯುದ್ಧಭಾಗ- 01

🥗🥗🥗🥗🥗🥗🥗🥗🥗
⚔ *#ಇತಿಹಾಸ #ಪ್ರಸಿದ್ಧ*
    *#ಯಮಾಮ #ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
 ✍ ಗಫೂರ್ ಬಾಯಾರ್
➖➖➖➖➖➖➖➖➖

ಇಸ್ಲಾಮಿನ ಚರಿತ್ರೆಯಲ್ಲಿ ಮರೆಯಲಾಗದ
 ಒಂದು ಐತಿಹಾಸಿಕ ಘಟನೆಯಾಗಿದೆ
 *#ಯಮಾಮ ಯುದ್ಧ.*

ಸಾವಿರದ ನಾಲ್ಕುನೂರು ವರ್ಷಗಳ ಹಿಂದೆ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಪರಿಶುದ್ಧತೆಯ ಪ್ರತೀಕ ಮುಹಮ್ಮದ್ ಮುಸ್ತಫಾ ﷺ ರವರ ಕಾಲದಲ್ಲಿ ನಾನು ಪ್ರವಾದಿ ಎಂಬ ವಾದದೊಂದಿಗೆ ಆಗಮಿಸಿದ ಒಬ್ಬ ಕಳ್ಳ ಪ್ರವಾದಿಯ ಜೀವನ ಮತ್ತು ಅವನ ಅಂತ್ಯದ ಚರಿತ್ರೆಯಾಗಿದೆ *ಯಮಾಮ ಯುದ್ಧ*

ಹಳೆಯ ಕಾಲದಲ್ಲಿ ಇರಾಖಿನ ನಗರವಾದ ಬಸರ, ಕೂಫಾ, ಹಾಗು ಬಾಗ್ದಾದ್ ನಂತಹ ನಾಡುಗಳಿಗೆ ವ್ಯಾಪಾರ ಸಾಮಗ್ರಿಗಳೊಂದಿಗೆ ವ್ಯಾಪಾರಿಗಳು ಹೋಗಬೇಕಾದರೆ *ದಿಜಿಲ* ಎಂಬ ನದಿ ತೀರವನ್ನು ಅವಲಂಬಿಸಿಕೊಂಡು ಸಾಗಬೇಕಿತ್ತು.

ಈ ದಿಜಿಲ ನದಿಯ ತೀರದಲ್ಲಿ *ಉಮಾರಾ* ಎಂದು ಹೆಸರಿರುವ ಒಂದು ಸಣ್ಣ ಗ್ರಾಮವಿತ್ತು.

ಆ ಗ್ರಾಮದಲ್ಲಿ ಅಗ್ನಿಯನ್ನು ತನ್ನ ಸೃಷ್ಟಿಕರ್ತ ಎಂದು ಆರಾಧಿಸುವ *ಅದ್ನಾನ್ ಬಿನ್ ಹುಕ್'ಬಾ* ಎಂಬ ಮಜೂಸಿಯಾದ ವ್ಯಕ್ತಿಯಿದ್ದನು.

ಅವನಿಗೆ ಅತೀ ಸುಂದರಿಯಾದ  ಮಗಳಿದ್ದಳು ಅವಳ ಹೆಸರು *ಮಲಿಹಾ* ಎಂದಾಗಿತ್ತು...

ಮಲಿಹಾ ಚಿಕ್ಕವಳಿರುವಾಗಲೇ ಅವಳ ತಾಯಿ ಮರಣ ಹೊಂದಿದ್ದರಿಂದ ಅದ್'ನಾನಿಗೆ ಈ ಒಬ್ಬಳೆ ಮಗಳಿದ್ದಳು.

ಮದುವೆಯ ಪ್ರಾಯವಾದ ತನ್ನ ಮಗಳ ಮದುವೆ ಮಾಡಿಕೊಡಲು ಅದ್ನಾನ್ ಹಲವು ಬಾಗಿಲುಗಳನ್ನು ಮುಟ್ಟಿ ನೋಡಿದರೂ, ತನ್ನ ದಾರಿದ್ರ್ಯದ ಕಾರಣದಿಂದ ಮದುವೆಯ ದಿನ ಕೂಡಿ ಬರಲೇ ಇಲ್ಲ.

ಹೀಗಿರಲು ಒಂದು ದಿನ ಮಲಿಹಾ ದಿಜಿಲ ನದಿಯ ತೀರದಲ್ಲಿ ಒಂದು ಬಂಡೆ ಕಲ್ಲಿನ ಮೇಲೆ ಕುಳಿತು ಸಣ್ಣ ಕಲ್ಲುಗಳನ್ನು ಹೆಕ್ಕಿ ನೀರಿಗೆ ಎಸೆಯುತ್ತಾ.. ತುಂಬಾ ದುಃಖದಿಂದ ಚಿಂತಾಮಗ್ನಳಾಗಿದ್ದ ಸಂದರ್ಭದಲ್ಲಿ
ಇರಾಖಿನ ಪುರಾತನ ಸ್ಥಳವಾದ *ಅಹುವಾಸಿ*ಗೆ ಒಂದು ವ್ಯಾಪಾರ ತಂಡ ದಿಜಿಲ ನದಿಯ ಕಿನಾರೆಯಾಗಿ ದಾಟುತ್ತಿತ್ತು.

ಆ ವ್ಯಾಪಾರ ಸಂಘದ ನೇತಾರ ಕಲ್ಲು ಬಂಡೆಯ ಮೇಲೆ ಚಿಂತಾಮಗ್ನಳಾಗಿ ಕುಳಿತಿರುವ ಮಲಿಹಾಳನ್ನು ನೋಡಿದನು.

ಅವನು ಮೆಲ್ಲನೆ..⤵

ಮುಂದುವರಿಯುವುದು..

✍ಗಫೂರ್ ಬಾಯಾರ್
+974 6669 3010
ಸಹಾಯ: ಅಕ್ಬರ್ ಪಿ.ಎ.
🛡🛡🛡🛡🛡🛡🛡

No comments:

Post a Comment