Saturday, February 10, 2018

ಝಿಯಾರತ್ತ್ ಕೇಂದ್ರ 62/01 ಅಬ್ದುಲ್ ಬಾರಿ ಮುಸ್ಲಿಯಾರ್ (ಖ:ಸಿ) ವಾಳಕುಳಂ

*​ಝಿಯಾರತ್ತ್ ಕೇಂದ್ರ​​*
ಸಮಸ್ತ ನಾಯಕರು = 10
      ​👉6⃣2⃣
ಭಾಗ= 01
➖➖➖➖➖➖➖➖➖
*#ಮೌಲಾನಾ_ಅಬ್ದುಲ್_ಬಾರಿ ಮುಸ್ಲಿಯಾರ್ (ಖ:ಸಿ), ವಾಳಕುಳಂ, ಪುತುಪ್ಪರಂಬ್, ಕೊಟ್ಟಕಲ್ ಮಲಪ್ಪುರಂ.*
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
🕎🕎🕎🕎🕎🕎🕎🕎🕎

✍ ಗಫೂರ್ ಬಾಯಾರ್
***********************

ಸಮಸ್ತದ ಕೇರಳ ಜಂಇಯ್ಯತುಲ್ ಉಲಮಾದ ಸ್ಥಾಪಕರಲ್ಲಿ ಪ್ರಮುಖರೂ ಅಗಾಧ ಪಾಂಡಿತ್ಯದ ವಿಧ್ವಾಂಸರೂ ಸೂಫಿವರ್ಯರೂ ಆದ *ಮೌಲಾನಾ ವಾಳಕುಳಂ ಅಬ್ದುಲ್ ಹಖ್ ಮುಹಮ್ಮದ್ ಅಬ್ದುಲ್ ಬಾರಿ (ಖ:ಸಿ)* ರವರು ಪಾಂಙಿಲ್ ಉಸ್ತಾದರ ಬಳಿಕ ಸುಧೀರ್ಘ ಇಪ್ಪತ್ಮೂರು ವರ್ಷಗಳ ಕಾಲ ಸಮಸ್ತದ ಅಧ್ಯಕ್ಷರಾಗಿ ಸುನ್ನತ್ ಜಮಾಅತಿನ ಏಳಿಗೆಗಾಗಿ ಶ್ರಮಿಸಿದ ಮಹಾನುಭಾವರು.

ಮಲಪ್ಪುರಂ ಜಿಲ್ಲೆಯ ಕೊಟ್ಟಕಲ್'ನ ಸಮೀಪದ ವಾಳಕುಳಂ (ಪುತುಪ್ಪರಂಬ್) ಎಂಬ ಊರಿನ ಸಾತ್ವಿಕರೂ, ಸೂಫಿವರ್ಯರೂ ಆಗಿದ್ದ 'ಖಾಜಾ ಅಹ್ಮದ್' ಎಂಬ ಕೋಯ ಕುಟ್ಟಿ ಮುಸ್ಲಿಯಾರ್ (ಖ:ಸಿ) ಮತ್ತು ಹಿಜರಿ 1275ರಲ್ಲಿ ಮಕ್ಕಾದಲ್ಲಿ ವಫಾತಾದ ವಾಳಕುಳಂ ಕಾರಾಟ್ಟು ಖಾಝಿಯಾಗಿದ್ದ ಅಬ್ದುರ್ರಹ್ಮಾನ್ ಮುಸ್ಲಿಯಾರ್ (ಖ.ಸಿ)ರವರ ಪುತ್ರಿ ಫಾತಿಮಾ ದಂಪತಿಗಳ ಪುತ್ರರಾಗಿ ಮುಹಮ್ಮದ್ ಅಬ್ದುಲ್ ಬಾರಿ (ಖ.ಸಿ) ರವರು ಹಿಜರಿ 1298 ಜುಮಾದುಲ್ ಆಖ್ರ್ 21ರಂದು ಜನಸಿದರು.

(ಸೂಫಿವರ್ಯರಾಗಿದ್ದ  ಮಹಾನರ ತಂದೆಯವರು ಆಧುನಿಕ ವ್ಯವಸ್ಥೆಗಳು ಯಾವುದೂ ಇಲ್ಲದ ಕಾಲದಲ್ಲೇ ಆರು ಸಲ ಹಜ್ಜ್  ನಿರ್ವಹಿಸಿದ್ದರು.

ಸಾತ್ವಿಕರಾಗಿದ್ದ  ತಂದೆಯವರು ಮಕ್ಕಾದ ಶೈಖ್ ಅಬ್ಬಾಸಿ ಬಿನ್ ಸಯ್ಯಿದ್ ಮುಹಮ್ಮದ್ ರಿಳ್'ವಾನ್ (ಖ.ಸಿ)ರಿಂದ ತ್ವರೀಖತ್ತಿನ ಅನುಮತಿ (ಇಜಾಝತ್) ಪಡೆದಿದ್ದರು. ಪರಪ್ಪನಂಗಾಡಿಯ ಅವು ಕೇೂಯ ಮುಸ್ಲಿಯಾರ್ (ಖ:ಸಿ) ಆಧ್ಯಾತ್ಮಿಕ ಗುರುವಾಗಿದ್ದರು.
88ನೇ ಪ್ರಾಯದಲ್ಲಿ 1348 ಜಮಾದುಲ್ ಆಖಿರ್ 20ಕ್ಕೆ ಇಹಲೋಕ ತ್ಯಜಿಸಿದ ತಂದೆಯವರು ಪುದುಪ್ಪರಂಬ್ ಜುಮಾ ಮಸೀದಿಯ ಪರಿಸರದಲ್ಲಿ ಅಂತ್ಯವಿಶ್ರಮ ಪಡೆಯುತ್ತಿದ್ದಾರೆ.)

 ಪ್ರಾಥಮಿಕ ವಿದ್ಯಾಭ್ಯಾಸ ತಂದೆಯಿಂದಲೇ ಕಲಿತ ಮೌಲಾನಾ ಅಬ್ದುಲ್ ಬಾರಿ(ಖ:ಸಿ)ರವರು  ನಾದಾಪುರಂ ಮುಹಮ್ಮದ್ ಶಿರಾಸಿ (ಖ:ಸಿ), ಕೊಡಾಂಚೆರಿ ಅಹ್ಮದ್ ಮುಸ್ಲಿಯಾರ್ (ಖ:ಸಿ), ಪೊನ್ನಾನಿ ಚೆರಿಯ ಅವರನ್ ಕುಟ್ಟಿ ಮುಸ್ಲಿಯಾರ್ (ಖ:ಸಿ)ರಂತಹ ವಿಧ್ವಾಂಸರಿಂದ ವಿದ್ಯಾರ್ಜನೆ ಮಾಡಿ ನಂತರ1316ರಲ್ಲಿ ವೆಲ್ಲೂರ್ ಬಾಖಿಯಾತ್ತುಲ್ ಸ್ವಾಲಿಹತ್ತ್'ಗೆ ಸೇರಿ1321ರಲ್ಲಿ "ಬಾಖವಿ" ಬಿರುದಿನೊಂದಿಗೆ ಹೊರ ಬಂದರು.

ನಂತರ ಕಲ್ಲಿಕೋಟೆ, ಅಯ್ಯಾಯ, ತಾನಾಳ್ಳೂರ್, ವಳವನ್ನೂರ್, ಕಾನಾಂಚೆರಿ ವಾಳಕುಳಂ ಪುತುಪ್ಪರಂಬ್ ಮೊದಲಾದೆಡೆ ದರ್ಸ್ ನಡೆಸಿದರು. ಚೆರೂರಿನಲ್ಲಿ ದೀರ್ಘಕಾಲ ಮುದರ್ರಿಸಾಗಿದ್ದರು. ಜನ್ಮನಾಡಾದ ವಾಳಕುಳಂ ಪುತುಪ್ಪರಂಬ್'ನಲ್ಲಿ 1921 ರಿಂದ ಸುದೀರ್ಘ ನಲವತ್ತು ವರ್ಷಗಳ ಕಾಲ ದರ್ಸ್ ನಡೆಸಿದ್ದರು.

ಈ ನಡುವೆ ಭಾರತ ಸ್ವಾತಂತ್ರ್ಯ ಸಂಗ್ರಾಮದ ಖಿಲಾಫತ್ತ್ ಚಳುವಳಿಯಲ್ಲೂ ಭಾಗಿಯಾಗಿದ್ದರು.
ಈಗಿನ ಚೆನೈನಲ್ಲಿ ನಡೆದ ಖಿಲಾಫತ್ತ್ ಸಮ್ಮೇಳನದಲ್ಲಿ ವಹ್ಹಾಬಿ ಮೌಲವಿಗಳು  ಕೇರಳಕ್ಕಾಗಿ ಜಂಇಯ್ಯತುಲ್ ಉಲಮಾ ಎಂಬ ಸಂಘಟನೆ ಸ್ಥಾಪಿಸಲು ತೀರ್ಮಾನಿಸಿದಾಗ  ಪ್ರತಿನಿಧಿಯಾಗಿ ಭಾಗವಹಿಸಿದ್ದ ಮೌಲಾನಾ ಅಬ್ದುಲ್ ಬಾರಿ ಉಸ್ತಾದ್ (ಖ:ಸಿ) ಅದನ್ನು ಖಂಡಿಸಿ ಕೇರಳದ ವಿಧ್ವಾಂಸರೊಂದಿಗೆ ಚರ್ಚಿಸದೆ ಯಾವ ಜಂಇಯ್ಯತುಲ್ ಉಲಮಾವೂ ಬೇಡ ಎಂದು ಪ್ರತಿಪಾದಿಸಿದರು.

ಆದರೆ ಆ ಮಹಾನರ ಅಭಿಪ್ರಾಯವನ್ನು ನಿರ್ಲಕ್ಷಿಸಿದ ವಹ್ಹಾಬಿ ಪ್ರಮುಖರು "ಕೇರಳ ಜಂಇಯ್ಯತುಲ್ ಉಲಮಾ" ಎಂಬ ಸಂಘಟನೆಗೆ ರೂಪು ಕೊಡಲು ತೀರ್ಮಾನಿಸಿದರು. ಇದರಿಂದ ಸುನ್ನತ್ ಜಮಾಅತಿನ ಆಶಯಕ್ಕೆ ತೊಡಕುಂಟಾಗಬಹುದೆಂದು ಮನಗಂಡ ಉಸ್ತಾದರು ಕೇರಳಕ್ಕೆ ಮರಳಿ ಸುನ್ನತ್ ಜಮಾಅತಿನ ವಿಧ್ವಾಂಸರು ಮತ್ತು ಪಂಡಿತರೊಂದಿಗೆ ಚರ್ಚಿಸಿ ಸಯ್ಯಿದ್ ವರಕ್ಕಲ್ ಮುಲ್ಲಕೋಯ ತಂಙಳ್ (ರ) ರವರ ಮುಂದಾಳತ್ವದಲ್ಲಿ *"ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ"* ಎಂಬ ಮಹನೀಯ ಸಂಘಟನೆ ಸ್ಥಾಪಿಸಲು ಒತ್ತು ನೀಡಿದರು.

ಅಗರ್ಭ ಶ್ರೀಮಂತರಾಗಿದ್ದ ಮೌಲಾನಾ ಅಬ್ದುಲ್ ಬಾರಿ(ಖ.ಸಿ) ಉಸ್ತಾದರು ಕೊಡುಗೈ ದಾನಿಯಾಗಿದ್ದು ಅಲ್ಲಾಹನು ನೀಡಿದ ಸಂಪತ್ತೆಲ್ಲವನ್ನೂ ದೀನೀ ಸೇವೆಗೆ ವಿನಿಯೇೂಗಿಸಿದ್ದರು.

1929ರಲ್ಲಿ ಪಾಲಕ್ಕಾಡ್ ಜಿಲ್ಲೆಯ ವಲ್ಲಪುಝ ಚೆಮ್ಮಮ್'ಕುಯಿ ಎಂಬಲ್ಲಿ ನಡೆದ ಸಮಸ್ತದ ಮಹಾ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.

ಇಂಗ್ಲೀಷ್, ಅರೇಬಿಕ್, ಉರ್ದು, ತಮಿಳು ಮತ್ತು ಪಾರ್ಸಿ ಭಾಷೆಗಳನ್ನು ಬಲ್ಲವರಾಗಿದ್ದ ಮಹಾನರು ಗ್ರಂಥಕರ್ತರೂ ಆಗಿದ್ದರು.
 ಅಲ್ಲಾಹನು ನೀಡಿದ ಅಗಾಧ ಜ್ಞಾನವನ್ನು ಸದುಪಯೋಗ  ಪಡಿಸಿಕೊಂಡು *2648 ಹದೀಸುಗಳನ್ನೊಳಗೊಂಡ ಸಿಹಾಹೂ ಶೈಖೈನಿ, ಜಂಉಲ್ ಬಾರಿ, ಅಲ್ ಮುತಫರ್'ರಿದ್ ಫಿಲ್ ಫಿಖ್ಹ್, ಅಲ್ ವಸೀಲತ್ತುಲ್ ಉಳ್'ಮ, ಅಲ್ ಮೌಲಿದುಲ್ ಮನ್'ಖೂಸ್, ಸ್ವಿರಾತ್ವುಲ್ ಇಸ್ಲಾಂ ಮೊದಲಾದ ಹಲವಾರು ಹೆಸರಾಂತ ಗ್ರಂಥಗಳನ್ನು ರಚಿಸಿದ್ದಾರೆ.*

ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ಸುನ್ನತ್ ಜಮಾಅತಿನ ಆಶಯ ಆದರ್ಶಗಳಿಗನುಗುಣವಾಗಿ ಲೇಖನಗಳನ್ನೂ ಬರೆಯುತ್ತಿದ್ದರು.

☪ಸಮಸ್ತದ ಪತ್ರವಾದ..

ಮುಂದುವರಿಯುವುದು
❇❇❇❇❇❇❇❇❇

No comments:

Post a Comment