*ಝಿಯಾರತ್ತ್ ಕೇಂದ್ರ*
_ಸಮಸ್ತ ನಾಯಕರು = 11_
👉6⃣3⃣ ಭಾಗ 01
➖➖➖➖➖➖➖➖➖
*"#ಶಂಸುಲ್_ಉಲಮ" ಈ.ಕೆ. ಅಬೂಬಕ್ಕರ್ ಉಸ್ತಾದ್(ಖ:ಸಿ). ವರಕ್ಕಲ್, ಪುತಿಯಂಗಾಡಿ. ಕಲ್ಲಿಕೋಟೆ.*
*********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
☪☪☪☪☪☪☪☪☪
✍ ಗಫೂರ್ ಬಾಯಾರ್
***********************
ಮುಸ್ಲಿಮ್ ಸಮುದಾಯದ ಸರ್ವತೇೂಮುಖ ಅಭಿವೃದ್ಧಿ ಮತ್ತು ಏಳಿಗೆಗಾಗಿ ಉದಯಿಸಿದ "ಸಮಸ್ತ ಕೇರಳ ಜಂಇಯತ್ತುಲ್ ಉಲಮಾ" ಎಂಬ ದೀನೀ ಸಂಘಟನೆಯ ಅಗ್ರಗಣ್ಯ ಸಾರಥಿಯಾಗಿ ಸುನ್ನತ್ ಜಮಾಅತಿನ ಏಳಿಗೆಗಾಗಿ ಬದುಕನ್ನೇ ಮಡಿಪಾಗಿರಿಸಿ ಮುಸ್ಲಿಂ ಜನಮಾನಸದಲ್ಲಿ ಚಿರಕಾಲಕ್ಕೂ ಚಿರಂತನವಾಗಿ ಚಿರನೂತನವಾಗಿ ಚಿರಸ್ಮರಣೀಯರಾದ ಪಂಡಿತ ಶಿರೇೂಮಣಿ ಅಹ್ಲ್ ಸುನ್ನತ್ ವಲ್ ಜಮಾಅತಿನ ವಿಶ್ವವಿಖ್ಯಾತ ವಿಧ್ವಾಂಸರೂ, *"ಶಂಸುಲ್ ಉಲಮಾ"* ಎಂಬ ಬಿರುದಾಂಕಿತರೂ ಆದ ಶೈಖುನಾ ಈ.ಕೆ. ಅಬೂಬಕ್ಕರ್ ಮುಸ್ಲಿಯಾರ್ (ಖ.ಸಿ)ರವರ ಹೆಸರು ಕೇಳದವರು ವಿರಳ.
ಈಮಾನಿನ ಪ್ರಕಾಶದಿಂದ ಪುಳಕಿತವಾದ ಯೆಮನಿನ ಹಲರ್ ಮೌತ್'ನಿಂದ ಕೇರಳಕ್ಕಾಗಮಿಸಿದ ವಿಧ್ವಾಂಸ ಕುಟುಂಬ ಪರಂಪರೆಯ ಎಝುತ್ತಚ್ಚನ್ ಕಂಡಿ (E.K.) ಮನೆತನದ ಪ್ರಮುಖ ಕೊಂಡಿಯೂ ಖಾದಿರಿಯ್ಯಾ ತ್ವರೀಕತ್ತಿನ ಶೈಖ್ ಆಗಿದ್ದ ಕೇೂಯ ಕುಟ್ಟಿ ಮುಸ್ಲಿಯಾರ್ (ಖ.ಸಿ) ರವರ ಪುತ್ರರಾದ ಶೈಖುನಾ ಈ.ಕೆ. ಉಸ್ತಾದ್ (ಖ.ಸಿ) ಹಿಜರಿ 1333 ರಲ್ಲಿ (ಕ್ರಿ.ಶ.1914) ರಲ್ಲಿ ಜನಿಸಿದರು.
ಈ.ಕೆ. ಎಂಬ ಅಕ್ಷರದಲ್ಲಿ ಚುಟುಕಾಗಿ ಪರಿಚಯಿಸಲ್ಪಡುವ ಜ್ಞಾನ ಸಾಗರವೇ ಆಗಿದ್ದ ಈ ವಿಶ್ವವಿಖ್ಯಾತ ಪಂಡಿತ ಶಿರೇೂಮಣಿ ಕಲ್ಲಿಕೇೂಟೆಯ ಪರಂಬಕಡವಿಲ್ ಎಂಬಲ್ಲಿ ದರ್ಸ್ ನಡೆಸುತ್ತಿದ್ದ ತಮ್ಮ ತಂದೆಯಿಂದಲೇ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಮಡವೂರು ಶೈಖ್ ಸಿ.ಎಂ. ವಲಿಯುಲ್ಲಾಹಿ (ಖ.ಸಿ) ರವರ ತಂದೆಯಾದ ಮಡವೂರ್ ಕುಂಞಾಯಿನ್ ಕೇೂಯ ಮುಸ್ಲಿಯಾರ್ (ಖ.ಸಿ)ರವರ ದರ್ಸ್ ಸೇರಿದರು. ಅನಂತರ ಪಳ್ಳಿಪ್ಪುರಂ ಅಬ್ದುಲ್ ಖಾದಿರ್ ಮುಸ್ಲಿಯಾರ್ (ಖ.ಸಿ) ದರ್ಸ್ ನಡೆಸುತ್ತಿದ್ದ ವಾಯಕಾಡ್'ನ ದಾರುಲ್ ಉಲೂಮ್'ನಲ್ಲಿ ವ್ಯಾಸಂಗ ಮುಂದುವರೆಸಿದರು. ತದನಂತರ ಕಣ್ಣೀಯತ್ ಅಹ್ಮದ್ ಉಸ್ತಾದ್ (ಖ.ಸಿ) (ಮಟ್ಟೂಲ್'ನಲ್ಲಿ), ಅಬ್ದುಲ್ ಅಲಿ ಕೇೂಯ ಮುಸ್ಲಿಯಾರ್ (ಖ.ಸಿ) ಮತ್ತು ಅಯತಿಕಾಡ್ ಇಬ್ರಾಹಿಂ ಮುಸ್ಲಿಯಾರ್ (ಖ.ಸಿ)ರವರ ದರ್ಸ್'ಗಳಲ್ಲೂ ಶಿಕ್ಷಣ ಪಡೆದರು.
ಬಳಿಕ ಉನ್ನತ ಶಿಕ್ಷಣಕ್ಕಾಗಿ ವೆಲ್ಲೂರ್ ಬಾಖಿಯಾತ್ತು ಸ್ವಾಲಿಹಾತ್ತುಲ್'ನಲ್ಲಿ ಸೇರಿ ಶಿಕ್ಷಣ ಮುಂದುವರೆಸಿದ ಮಹಾನರು ಶೈಖ್ ಅಬ್ದುರಹೀಮ್ ಹಝ್ರತ್ತ್ (ಖ:ಸಿ), ಶೈಖ್ ಅಬ್ದುಲ್ ಅಲಿ ಹಝ್ರತ್ತ್ (ಖ:ಸಿ), ಶೈಖ್ ಅಹ್ಮದ್ ಕೋಯ ಶಾಲಿಯಾತಿ (ಖ:ಸಿ) ಮೊದಲಾದ ವಿದ್ವಾಂಸರೊಂದಿಗೆ ಹತ್ತಿರದ ಬಾಂದವ್ಯ ಹೊಂದಿದ್ದು ಅವರಿಂದ ತ್ವರಿಖತ್ತ್ ಮತ್ತು ಇಜಾಝತ್ತನ್ನು ಪಡೆದಿದ್ದರು.
ವೆಲ್ಲೂರಿನಲ್ಲಿ ಮುತಅಲ್ಲಿಮಾಗಿದ್ದಾಗ ಮಹಾನುಭಾವರ ಅಪಾರವಾದ ಬುದ್ದಿಶಕ್ತಿ ಮತ್ತು ಅಗಾಧ ಜ್ಞಾನಕ್ಕೆ ಮನಸೇೂತ ಅಲ್ಲಿನ ಉಸ್ತಾದರುಗಳು ಕೆಲವು ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲು ಮಹಾನರನ್ನೇ ನಿಯೇೂಗಿಸಿದ್ದರು.
ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದು ತೇರ್ಗಡೆಯಾದ ಮಹಾನರಿಗೆ ಬಿರುದು ಪ್ರಧಾನ ಮಾಡುವಾಗ ಶೈಖ್ ಝಿಯಾಉದ್ದೀನ್ ಹಝ್ರತ್ತ್ (ಖ:ಸಿ)ರವರು. ಮಹಾನರೊಂದಿಗೆ
"ಈ ಕಾಲೇಜಿಗೆ ತಮ್ಮಂತಹ ವಿಧ್ವಾಂಸರ ಅಗತ್ಯತೆಯಿದೆ. ಹಾಗಾಗಿ ತಾವು ಆದ್ಯಾತ್ಮಿಕ ರಂಗದ ಸೇವೆಯನ್ನು ಇಲ್ಲಿಂದಲೇ ಆರಂಭಿಸಿರಿ." ಎಂದರು. ಹಾಗಾಗಿ ಬಿರುದು ಪಡೆದ ನಂತರ ಬಾಖಿಯಾತ್ತಿನಲ್ಲೇ ಮುದರ್ರಿಸ್ ಆಗಿ ಈ.ಕೆ. ಉಸ್ತಾದರು (ಖ:ಸಿ) ನಿಯೋಗಿಸಲ್ಪಟ್ಟರು. ಕೊಟ್ಟುಮಲ ಅಬೂಬಕ್ಕರ್ ಮುಸ್ಲಿಯಾರ್ (ಖ:ಸಿ), ನೆಲ್ಲಿಕುತ್ತ್ ಮುಹ್ಯಿದ್ದೀನ್ ಮುಸ್ಲಿಯಾರ್ (ಖ:ಸಿ), ಓ.ಕೆ. ಝೈನುದ್ದೀನ್ ಮುಸ್ಲಿಯಾರ್ (ಖ:ಸಿ), ಮೊದಲಾದವರು ಬಾಖಿಯಾತ್ತಿನಲ್ಲಿ ಮಹಾನರ ಶಿಷ್ಯರಾಗಿದ್ದರು.
ಬಾಖಿಯಾತ್ತಿನಲ್ಲಿ ಮುದರ್ರಿಸ್ ಆಗುವುದರ ಜತೆಗೆ ಇಸ್ಲಾಮಿನ ವಿಧಿಗಳಲ್ಲಿ ಫತ್ವಾ ನೀಡುವ ಉತ್ತರಾಧಿಕಾರಿಯನ್ನಾಗಿಯೂ ಮಹಾನರನ್ನು ನೇಮಿಸಲಾಗಿತ್ತು.
ನಂತರ ಅನಾರೋಗ್ಯ ಕಾರಣ ವೆಲ್ಲೂರ್ ಬಿಟ್ಟ ಮಹಾನರು ಕೇರಳಕ್ಕೆ ತೆರಳಿ ದೀನೀ ಪ್ರಬೋಧನೆಯಲ್ಲಿ ನಿರತರಾಗಿ ತಳಿಪ್ಪರಂಬ್ ಖುವ್ವತ್ತುಲ್ ಇಸ್ಲಾಂ, ಪಾರಕಾಡ್ ಜುಮಾ ಮಸೀದಿ ಮುಂತಾದೆಡೆ ಮುದರ್ರಿಸರಾಗಿ ಸೇವೆ ಸಲ್ಲಿಸಿದರು.
1963ರಿಂದ 1977ವರೆಗೆ ಪಟ್ಟಿಕಾಡ್ ಜಾಮಿಅ ನೂರಿಯ್ಯ ಅರಬಿಕ್ ಕಾಲೇಜಿನಲ್ಲಿ ಪ್ರಾಂಶುಪಾಲಗಿದ್ದರು.
ಅನಂತರ ರಾಜಕೀಯ ಕುತಂತ್ರದ ಭಾಗವಾಗಿ ಕೆಲವರ ಸಂಕುಚಿತ ಮನಸ್ಥಿತಿಯಿಂದಾಗಿ ನಡೆದ ಕೆಲ ವಿಲಕ್ಷಣ ವಿದ್ಯಮಾನಗಳಿಂದ ಮನನೊಂದು ಪಟ್ಟಿಕ್ಕಾಡ್ ಜಾಮಿಯ ನೂರಿಯ್ಯ ಅರೇಬಿಕ್ ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆಯಿಂದ ಪಾಂಡಿತ್ಯದ ಸಾಗರವಾಗಿದ್ದ ಮಹಾನರು ಕಾಸರಗೇೂಡಿನ ಪೂಚಕ್ಕಾಡ್'ನ ಚಿಕ್ಕ ಜುಮಾ ಮಸೀದಿಯಲ್ಲಿ ಮುದರ್ರಿಸರಾಗಿ ಸೇವೆ ಸಲ್ಲಿಸಲಾರಂಭಿಸಿದರು.
ಕೆಲವು ಸಮಯದ ನಂತರ ಸುನ್ನತ್ ಜಮಾಅತಿನ ಉಲಮಾ ಮತ್ತು ಉಮರಾಗಳು ಉಸ್ತಾದರ ಮನವೊಲಿಸಿ ನಂದಿ ದಾರುಸ್ಸಲಾಂ ಅರೇಬಿಕ್ ಕಾಲೇಜಿನ ಪ್ರಿನ್ಸಿಪಾಲರಾಗಿ ಮುಂದುವರಿಯಬೇಕೆಂದು ಮನವಿ ಸಲ್ಲಿಸಿದ್ದರಿಂದ ಸುನ್ನತ್ ಜಮಾಅತಿನ ಏಳಿಗೆಯ ಹಿತದೃಷ್ಟಿಯಿಂದ ನಂದಿ ದಾರುಸ್ಸಲಾಂ ಅರೇಬಿಕ್ ಕಾಲೇಜಿಗೆ ಮರಳಿ ವಫಾತಿನ ತನಕವೂ ಅಲ್ಲಿ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು.
ಈ.ಕೆ. ಹಸನ್ ಮುಸ್ಲಿಯಾರ್ (ಖ:ಸಿ), ಕೆ.ಕೆ. ಅಬೂಬಕ್ಕರ್ ಹಝ್ರತ್ತ್ (ಖ:ಸಿ), ಕೊಟ್ಟುಮಲ ಅಬೂಬಕ್ಕರ್ ಮುಸ್ಲಿಯಾರ್ (ಖ:ಸಿ), ಮಡವೂರ್ ಸಿ.ಎಂ. ವಲಿಯುಲ್ಲಾಹಿ (ಖ:ಸಿ), ಸಯ್ಯಿದ್ ಉಮರಲಿ ಶಿಹಾಬ್ ತಂಙಳ್ (ಖ:ಸಿ), ಉಳ್ಳಾಲ ತಂಙಳ್ (ಖ:ಸಿ) ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್, ಎ.ಕೆ. ಅಬ್ದುರಹ್ಮಾನ್ ಮುಸ್ಲಿಯಾರ್, ಕೆ. ಆಲಿ ಕುಟ್ಟಿ ಮುಸ್ಲಿಯಾರ್ ಮೊದಲಾದ ಅಸಂಖ್ಯ ಬಾಖವಿ, ಫೈಝಿ, ದಾರಿಮಿ ಬಿರುದುದಾರಿ ವಿಧ್ವಾಂಸರು ಮಹಾನವರ ಶಿಷ್ಯರಾಗಿದ್ದಾರೆ.
1957ರಿಂದ 1996ರ ತನಕ ಅಂದರೆ.. ⤵
☪ ಮುಂದುವರಿಯುವುದು.
💢💢💢💢💢💢💢💢💢
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)


No comments:
Post a Comment