*ಅಹ್ಲು ಬೈತ್*
ಭಾಗ --1
📝 *_ಮುನೀರ್ ಸಖಾಫಿ,ಸಾಲೆತ್ತೂರು._*
ಅಹ್ಲು ಬೈತ್ ಎಂಬುವುದರ ಉದ್ದೇಶ ಎರಡು ರೂಪದಲ್ಲಿ ಇಮಾಮರು ವಿವರಿಸಿದ್ದಾರೆ.
1.ಎಲ್ಲಾ ಸತ್ಯ ವಿಶ್ವಾಸಿಗಳು.(ಅಂತ್ಯ ದಿನದ ವರೆಗೆ ಬರುವ ಎಲ್ಲಾ ವಿಶ್ವಾಸಿಗಳು ಒಳಪಡುವರು.)
2.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಪಿತಾಮಹರಾದ ಅಬ್ದು ಮನಾಫ್ ಎಂಬವರ ಮಕ್ಕಳ ಪೈಕಿ ಹಾಶಿಂ ಮತ್ತು ಮುತ್ತಲಿಬ್ ಎಂಬ ಇಬ್ಬರು ಮಕ್ಕಳ ಸಂತಾನ ಪರಂಪರೆಯಲ್ಲಿರುವ ಸತ್ಯ ವಿಶ್ವಾಸಿಗಳಿಗೆ ಅಹ್ಲು ಬೈತ್ ಎನ್ನುವರು.(ಫತ್'ಹುಲ್ ಮುಈನ್ ,3)
ಈ ಎರಡನೇ ಅರ್ಥದಲ್ಲಿ ಹೇಳಿದವರಿಗೆ ಝಕಾತ್ ನೀಡುವುದು ನಿಷಿದ್ಧವಾಗಿದೆ.
ಇಮಾಮ್ ಶಾಫಿಈ (ರ) ಇದಕ್ಕೆ ಹಲವು ಪುರಾವೆಗಳನ್ನು ನೀಡಿದ್ದಾರೆ.
ಇಮಾಮ್ ಬುಖಾರಿ (ರ)ವರದಿ ಮಾಡಿದ ಹದೀಸಿನಲ್ಲಿ ಈ ರೀತಿ ಕಾಣಬಹುದು.
عن جبير بن مطعم قال مشيت أنا وعثمان بن عفان إلى رسول الله صلى الله عليه وسلم فقلنا يا رسول الله أعطيت بني المطلب وتركتنا ونحن وهم منك بمنزلة واحدة فقال رسول الله صلى الله عليه وسلم إنما بنو المطلب وبنو هاشم شيء واحد قال الليث حدثني يونس وزاد قال جبير ولم يقسم النبي صلى الله عليه وسلم لبني عبد شمس ولا لبني نوفل
(صحيح البخاري)
ಜುಬೈರ್ ಬಿನ್ ಮುತ್'ಯಿಮ್ (ರ)ಹೇಳುತ್ತಾರೆ;ನಾನು ಮತ್ತು ಉಸ್ಮಾನ್ ಬಿನ್ ಅಫ್ಫಾನ್ (ರ) ರವರು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಕೇಳಿದೆವು.ತಾವು ಮುತ್ತಲಿಬ್'ನ ಮಕ್ಕಳಿಗೆ ಗನೀಮತ್ (ಯುದ್ಧದಲ್ಲಿ ಲಭಿಸಿದ ಸಂಪತ್ತಿನಿಂದ ನಿಗದಿತ ಸಂಖ್ಯೆ) ನೀಡಿದ್ದೀರಿ.ನಮಗೆ ನೀಡಿಲ್ಲ.ನಾವು ಕೂಡಾ ಅವರಂತೆಯೇ ಅಲ್ಲವೇ?
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು, ಹಾಶಿಂನ ಮಕ್ಕಳು ಮತ್ತು ಮುತ್ತಲಿಬ್ ನ ಮಕ್ಕಳು ಒಂದೇ ರೀತಿಯಾಗಿದ್ದಾರೆ.
(ಬುಖಾರಿ 3311).
(ಅಬ್ದು ಮನಾಫ್ ಗೆ 4 ಮಕ್ಕಳಿದ್ದರು.
1.ಹಾಶಿಂ.
2.ಅಬ್ದ್ ಶಂಸ್
3.ಮುತ್ತಲಿಬ್
4.ನೌಫಲ್.
ಉಸ್ಮಾನ್ (ರ)ರವರು
ಈ ಪೈಕಿ ಅಬ್ದ್ ಶಂಸ್ ಎಂಬವರ ಪರಂಪರೆಯಲ್ಲಿ ಜನಿಸಿದವರಾಗಿದ್ದಾರೆ.
ಅವರ ಪರಂಪರೆಯನ್ನು ಈ ರೀತಿ ಓದಬಹುದಾಗಿದೆ.
1.ಉಸ್ಮಾನ್ (ರ)
2.ಅಫ್ಫಾನ್(ರ)
3.ಅಬುಲ್ ಆಸ್
4.ಉಮಯ್ಯತ್
5.ಅಬ್ದ್ ಶಂಸ್.
ಝಕಾತ್ ನೀಡಲ್ಪಡದ ವ್ಯಕ್ತಿಗಳಿಗೆ ಗನೀಮತ್ ನೀಡಲಾಗುತ್ತಿತ್ತು.
ಅಬ್ದು ಮನಾಫ್ ನ ಮಕ್ಕಳ ಪರಂಪರೆಯಲ್ಲಿರುವ ಅಹ್ಲು ಬೈತ್ ಗಳಿಗೆ ಝಕಾತ್ ನೀಡಲಾಗುತ್ತಿರಲಿಲ್ಲ.ಉಸ್ಮಾನ್ (ರ)ಈ ಹೇಳಿದ ಅಹ್ಲ್ ಬೈತ್ ಗೆ ಸೇರಿದವರಾಗಿರಲಿಲ್ಲ.
ಮತ್ತೊಬ್ಬರಾದ ಜುಬೈರ್ ಬಿನ್ ಮುತ್'ಯಿಮ್ (ರ)ಎಂಬವರು ಅಬ್ದು ಮನಾಫ್ ನ ನೌಫಲ್ ಎಂಬವರ ಪರಂಪರೆಯಲ್ಲಿ ಜನಿಸಿದವರು.ಅವರೂ ಕೂಡಾ ಅಹ್ಲು ಬೈತ್ ಗೆ ಸೇರಿದವರಾಗಿರಲಿಲ್ಲ.ಆದುದರಿಂದಲೇ ಈ ಇಬ್ಬರಿಗೂ ಗನೀಮತ್ ನೀಡಿಲ್ಲ.)
ಇಮಾಮ್ ಮುಸ್ಲಿಂ (ರ)ವರದಿ ಮಾಡಿದ ಹದೀಸ್ ನೋಡಿ,
قال لنا إن هذه الصدقات إنما هي أوساخ الناس وإنها لا تحل لمحمد ولا لآل محمد (مسلم)
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು;ಖಂಡಿತವಾಗಿಯೂ ಇದು (ಝಕಾತ್)ಜನರ ಕೊಳೆಯಾಗಿದೆ.ಇದು ಮುಹಮ್ಮದ್ (ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ)ಮತ್ತು ಅವರ ಕುಟುಂಬಕ್ಕೂ ಅನುವದನೀಯವಲ್ಲ.
(ಮುಸ್ಲಿಂ 2531)
ಇಮಾಮ್ ತ್ವಬ್'ರಾನಿ ವರದಿ,
عن ابن عباس رضي الله عنهما
من أن رسول الله صلى الله عليه وسلم قال لابني عمه: (لا يحل لكما أهل البيت من الصدقات شيء، ولا غسالة أيدي الناس، إن لكم في خمس الخمس لما يكفيكم(طبراني في الكبير)
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು.
ಓ ಅಹ್ಲು ಬೈತ್! ಜನರ ಕೊಳೆಯಾದ ಝಕಾತ್ ನಾನು ನಿಮಗೆ ಹಲಾಲ್ ಗೊಳಿಸಲಾರೆ.ನಿಮಗೆ ಐದರಲ್ಲೊಂದರ ಐದು ಭಾಗ (ಗನೀಮತ್ ನ ನಿಗದಿತ ಸಂಖ್ಯೆ) ನೀಡಲಾಗುವುದು.
(ತ್ವಬ್ ರಾನಿ11543)
*ಮೇಲೆ ಹೇಳಿದ ಹದೀಸುಗಳಿಂದ ಈ ಕೆಳಗಿನ ಕಾರ್ಯಗಳು ಸ್ಪಷ್ಟವಾಯಿತು.*
*1.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಕುಟುಂಬಕ್ಕೆ ಝಕಾತ್ ನೀಡುವುದು ನಿಷಿದ್ಧವಾಗಿದೆ.*
*2.ಝಕಾತ್ ನೀಷೇಧ ಮಾಡಲ್ಪಟ್ಟದ್ದು ಹಾಶಿಂ ಮತ್ತು ಮುತ್ತಲಿಬ್ ನ ಸಂತಾನ ಪರಂಪರೆಯಲ್ಲಿರುವ ಮಕ್ಕಳಿಗಾಗಿದೆ.*
*3.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಕುಟುಂಬವೆಂಬುವುದರ ತಾತ್ಪರ್ಯ ಹಾಶಿಂ ಮತ್ತು ಮುತ್ತಲಿಬ್ ನ ಸಂತಾನ ಪರಂಪರೆಯಲ್ಲಿರುವ ಸತ್ಯ ವಿಶ್ವಾಸಿಗಳಾಗಿದ್ದಾರೆ.*
*ಮುಂದುವರಿಯುವುದು...*
No comments:
Post a Comment