ಇಮಾಮ್ ಹಂಬಲೀ (ರ.ಅ)ರವರು ಇಷಾ ನಮಾಝಿನ ನಂತರ ನನಗೆ ಹಸಿವಾಗುತ್ತಿದೆ ಏನಾದರೂ ತಿನ್ನಲು ಆಹಾರವಿದೆಯೇ.?ಮನೆಯವರಲ್ಲಿ ಕೇಳಿದರು.ತಿನ್ನಲು ರೊಟ್ಟಿ ತಂದು ಇಟ್ಟಾಗ ಹಂಬಲೀ ರ.ಅ ರವರು ಕೇಳಿದರು ಈ ರೊಟ್ಟಿಯನ್ನು ಯಾರು ತಂದು ಕೊಟ್ಟ ಗೋದಿಯಿಂದ ತಯಾರಿಸಿದ್ದೀರಿ.? ಮನೆಯವರ ಉತ್ತರ ಅದು ನೀವೇ ತಂದು ಕೊಟ್ಟಿದ್ದೀರಿ ಅದರಿಂದಲೇ ತಯಾರಿಸಿದೆವು.ಹಾಗಾದರೆ ಇದಕ್ಕೆ ಸೇರಿಸಿದ ನೀರು...? ಅದು ಸಾರ್ವಜನಿಕರು ಉಪಯೋಗಿಸುತ್ತಿದ್ದ ಬಾವಿಯಿಂದಾಗಿತ್ತು.ಆಗ ಇಮಾಮ್ ಹಂಬಲೀ ರ.ಅ ರವರು ಕೇಳಿದರು ಯಾಕೆ ನಮ್ಮ ಬಾವಿಯಲ್ಲಿ ನೀರು ಇರಲಿಲ್ಲವೇ.? ಇತ್ತು ಆದರೂ ಎಲ್ಲರೂ ತೆಗೆಯುವಾಗ ನಾವು ಕೂಡ ತೆಗೆದು ಬಿಟ್ಟೆವು.ಆಗ ಇಮಾಮ್ ಹಂಬಲೀ ರ.ಅ ರವರು ನನಗೆ ಈ ಆಹಾರ (ರೊಟ್ಟಿ) ಬೇಡವೆಂದು ಹೋಗಿ ಮಳಗಿ ಕೊಂಡರು.ತಂದೆಯವರಿಗೆ ಬೇಡವಾದದ್ದು ನಮಗೂ ಬೇಡವೆಂದು ಮನೆಯವರೆಲ್ಲರೂ ಅಂದು ಉಪವಾಸವಾಗಿ ಮಳಗಿದರು.
ಮರುದಿವಸ ಬೆಳಗ್ಗೆ ಕೆಲವು ಫಕೀರರು ಬಿಕ್ಷೆ ಬೇಡುತ್ತಾ ಮನೆಯ ಪಕ್ಕ ಬಂದಾಗ ರಾತ್ರಿ ತಿನ್ನದೇ ಇಟ್ಟಿದ್ದ ರೊಟ್ಟಿಯನ್ನು ಮನೆಯವರು ಫಕೀರರಿಗೆ ಕೊಟ್ಟರು.ಫಕೀರರಲ್ಲಿ ಒಬ್ಬ ಕೇಳಿದ ನಮಗೆ ಯಾರಾದರೂ ರೊಟ್ಟಿ ಕೊಟ್ಟರೂ ಒಂದೆರಡು ಕೊಡ ಬಹುದು ಇದೇನು ಇದರಲ್ಲಿ ತುಂಬಾ ರೊಟ್ಟಿ ಇದೆ. ಏನಾದರೂ ಇದರಲ್ಲಿ ಮೋಸವಿರ ಬೇಕು. ನಾವಿದನ್ನು ಉಪಯೋಗಿಸುವುದು ಬೇಡ ಸಮುದ್ರಕ್ಕೆ ಎಸೆದು ಬಿಡೋನವೆಂದು ಸಮುದ್ರಕ್ಕೆ ಎಸೆದರು.
ಹೀಗೆ ಇಮಾಮ್ ಹಂಬಲೀ ರ.ಅ ರವರು ಮನೆಗೆ ಬಂದು ನಿನ್ನೆ ರಾತ್ರಿಯ ರೊಟ್ಟಿ ಏನು ಮಾಡಿದ್ದೀರಿ ಎಂದು ವಿಚಾರಿಸಿದಾಗ ನಾವು ಅದನ್ನು ಫಕೀರರಿಗೆ ಧಾನ ಮಾಡಿದೆವು ಎಂದು ಹೇಳಿದರು.ಇಮಾಮ್ ಹಂಬಲೀ ರ.ಅ ರವರು ಫಕೀರರನ್ನು ಹುಡುಕುತ್ತಾ ಹೋದರು. ಫಕೀರರನ್ನು ಕಂಡಾಗ ರೊಟ್ಟಿಯ ವಿಷಯ ಕೇಳಿದರು.ಆಗ ಫಕೀರರು ನಾವು ಅದನ್ನು ಪಕ್ಕದ ಸಮುದ್ರಕ್ಕೆ ಎಸೆದೆವು ಎಂದು ಹೇಳಿದರು.ಅಂದಿನಿಂದ ಮರಣದ ವರೆಗೂ ಇಮಾಮ್ ಹಂಬಲೀ ರ.ಅ ರವರು ಮೀನು ತಿನ್ನುವುದನ್ನೇ ಬಿಟ್ಟು ಬಿಟ್ಟರು ಎಂದು ಇತಿಹಾಸ....
ಸ್ನೇಹಿತರೇ...
ಇಮಾಮ್ ಹಂಬಲೀ ರ.ಅ ರವರು ಸಾರ್ವಜನಿಕವಾಗಿ ಉಪಯೋಗಿಸಿದ ನೀರು ಹರಾಮ್ ಎಂದು ಭಾವಿಸಿ ಆಹಾರವನ್ನು ತಿರಸ್ಕರಿಸಿದ್ದೂ ಅಲ್ಲ.ಫಕೀರರ ಹಿಂದೆ ಹೋಗಿ ನೀವು ಅದನ್ನೇನು ಮಾಡಿದ್ದೀರಿ..? ಸಮುದ್ರಕ್ಕೆ ಎಸೆದುದರಿಂದ ಆ ಆಹಾರವನ್ನು ಮೀನು ತಿಂದಿದ್ದರಿಂದ ನಂತರ ಮರಣದ ಸಮಯವರೆಗೂ ಮೀನು ತಿನ್ನಲಿಲ್ಲ ವೆಂದರೆ ..?
ಕೇವಲ ಮನೆಯಲ್ಲಿ ಇದ್ದ ನೀರನ್ನು ಉಪಯೋಗಿಸದೆ ಸಾರ್ವಜನಿಕರು ಪಡೆಯುವ ನೀರು ಯಾಕೆ ಉಪಯೋಗಿಸಿದಕ್ಕೆ ಇಷ್ಟೆಲ್ಲಾ ಜಾಗೃತ ವಹಿಸಿದ ಇಮಾಮರ ಜೀವನ ಶೈಲಿಗೂ ನಮ್ಮ ಜೀವನ ಶೈಲಿಗೂ ಅಜಗಜಾಂತರ ವ್ಯತ್ಯಾಸವಿದೆ ನೋಡಿ...
ಧರ್ಮಕ್ಕೆ ಸಿಕ್ಕಿದರೆ ಏನೇ ಇರಲಿ, ಏನೇ ಬರಲಿ ಟೋಟಲ್ #ಬಂಜಿದುಲಯಿ_ಪೋಂಡಯಾವು.
ಹಾಗೆ ನಮ್ಮ ಬದುಕು ಅಲ್ಲವೇ.? ಸರಕಾರ ಬಡವರಿಗೆ ಕೊಡುವ ಸವಲತ್ತನ್ನು ಕಾಲು ಭಾಗ ಬಡವರಿಗೆ ಮುಕ್ಕಾಲು ಭಾಗ ಯಾರಿಗೆ..? ನೀರಿಲ್ಲದ ಕಡೆ ಹೋಗುವ ನೀರನ್ನು ತಡೆದು ನಮ್ಮ ಮನೆಗೆ ಹಾಕುವ ಅದೆಷ್ಟು ಪಂಚಾಯತಿನ ಮೆಂಬರುಗಳಿರಬಹುದು,ಕಾರ್ಪೋರೇಟರ್ ಗಳಿರ ಬಹುದು.? ನಮ್ಮ ಮನೆಯಲ್ಲಿ ಬೇಕಾದ ಸವಲತ್ತುಗಳಿದ್ದರೂ ಇನ್ನೊಬ್ಬನಿಗೆ ಸರಕಾರ ನಿಯೋಜಿಸಿದ್ದನ್ನು ತನಗೂ ಬೇಕೆಂದು ಜೊಲ್ಲು ಸುರಿಸುವ ರಾಜಕೀಯದ ಪುಡಾರಿಗಳಿರಬಹುದಲ್ಲವೇ...?
ಒಮ್ಮೆ ಅವಲೋಕಿಸಿ ನೋಡಿ ನಾಳೆ ಕಬರಲ್ಲಿ ಯಾವುದೂ ನೀವು ಕೂಡಿಸಿಟ್ಟ ಆಸ್ತಿ ಪಾಸ್ತಿ ಪಡ ಕೊಂಡು ಹೋಗೋಕ್ಕಾಗಲ್ಲ. ನೀವು ಮಾಡಿದ ಪುಣ್ಯ ಮಾತ್ರ ನಿಮಗೆ ಉಪಕಾರ ಕೊಡುವುದು.ನಿಮ್ಮ ಕಬರಲ್ಲಿ ಶಿಕ್ಷೆಗೆ ಬಡವರ ಕಣ್ಣೀರಿನ ಒಂದು ಹನಿ ಸಾಕು.....
ಅಲ್ಲಾಹು ನಮ್ಮೆಲ್ಲರನ್ನೂ ಕಾಪಾಡಲಿ. ಆಮಿನ್..
#ಇಸ್ಮಾಯಿಲ್_ಉಳ್ಳಾಲ್
No comments:
Post a Comment