*ದುಗ್ಗಲಡ್ಕ ತಂಙಳ್ ಪ್ರಭಾಷಣ ಮಾಫಿಯಾ ವಿರುಧ್ಧ ಗುಡುಗಿದ್ದಾರೆ! ಆದರೆ ನಾವೆಲ್ಲಾ ಮೂರ್ಖರೆಂದ ಮೇಲೆ ಮೂರ್ಖರಾಗಲೇ ಬೇಕು ತಾನೇ....?*
ಅದೆಷ್ಟೋ ವರ್ಷಗಳಿಂದ ಅವ್ರು ನಮ್ಮನ್ನು ಮೂರ್ಖರಾಗಿಸುತ್ತಾ ಇದ್ದಾರೆ.
ಮೂರ್ಖರಾಗಲು ನಾವು ಸದಾ ಸಿದ್ದವೆಂದು ಘೋಷಿಸಿದ ಮೇಲೆ ಅವ್ರಿಗೇನು ನಮ್ಮನ್ನು ವಂಚಿಸಲು ಮಹಾ ಕಷ್ಟ?
ಅವ್ರನ್ನೂ ದೂರಿ ಫಲವಿಲ್ಲ
ಅವ್ರ ಪಾದರಂವಿದಾಕ್ಕೆ ಬೀಳಲು ಶಪಥ ಬಿದ್ದ ನಮ್ಮನ್ನೇ ದೂರ ಬೇಕು ಹೊರತು;
ನಮ್ ಬಾಷೆ ಬ್ಯಾರಿ.
ಆದ್ರೆ;
ಬ್ಯಾರಿ ಉರ್ದಿ ನಮ್ಗೆ ಪಥ್ಯ ಆಗಲ್ಲ.!
ನಾವು ಕನ್ನಡದವ್ರು
ಕನ್ನಡ ಚೆನ್ನಾಗಿ ಅರ್ಥ ಆಗುತ್ತೆ
ಆದ್ರೆ ಕನ್ನಡ ಉರ್ದಿ ಬೇಡವೇ ಬೇಡ!!
ಡಿಮ್ಯಾಂಡ್ ಹೇಳದೆ ದಅವತ್ ನ ಉರ್ದಿ ಹೇಳಲು ಕೇರಳದಿಂದ ಬರುವ ನಮ್ಮ ಆದ್ಯಾತ್ಮಿಕ ಉಲಮಾಗಳಿದ್ದಾರೆ.
ಅವರನ್ನೂ ಕೂಡಾ ನಾವು ದೂರ ಮಾಡುತ್ತಿದ್ದೇವೆ.
ಕಾರಣ ಅವರದ್ದು ಬ್ಯುಸಿನೆಸ್ ಅಲ್ಲ,ಅವರಲ್ಲಿ ಬ್ರೋಕರ್ ರಗಳೆ ಇಲ್ಲ.
ಕಟ್ಟು ಕಥೆಗಳ ಭಾವುಕತೆ ಕೇಳಲ್ಲ.
ಅಲ್ಲಿ ಸಖತ್ ಕ್ವಿಕ್ಕ್ ಇಲ್ಲ!
ಹಾಗಾಗಿ ಅವರು ನಮಗೆ ಬೇಡ!
ಅದೇನಿದ್ದರೂ ಕೇರಳದ ಕಟ್ಟಕಡೆಯ ಊರಿನವ್ರು ಬಂದು 'ತಟ್ಟ' ಹಾಕಿ ಮೈಕ್ ಮುಂದೆ ಬೊಬ್ಬಿರಿದು ನಾಲ್ಕು ಮಲಯಾಳ ಸಾಹಿತ್ಯ ಸ್ಪೋಟಿಸಿದರೆ ಮಾತ್ರ ವಯಲ್!
ಅರ್ಥ ಆಗದಿದ್ದರೂ ಪರವಾಗಿಲ್ಲ.
ಆದ್ಯಾತ್ಮಿಕತೆಯ ಕಂಪಿನ ಸಿಂಚನ ಬೇಕಿಲ್ಲ.
ಮನಪರಿವರ್ತನೆಯ ಆವಶ್ಯಕತೆ ಇಲ್ಲ.
ಪರಲೋಕ ಚಿಂತೆ ಬರಲ್ಲ.
ಪವರ್ ಫುಲ್ ರಸಮಂಜರಿ ಸ್ಟೈಲ್ ಆದ್ರೆ ಸಾಕು.
ಸಖತ್ ಮಜಾ ಸಿಗಬೇಕು.
ಜನಸೇರ ಬೇಕು.
ಭರ್ಜರಿ ಕಲೆಕ್ಷನ್ ವಾಗ್ದಾನವಾಗಬೇಕು!
ದೀನು,ಆತ್ಮಿಯತೆ,ಬದಲಾವಣೆ, ಪರಲೋಕ ಚಿಂತೆ ಎಳ್ಳಷ್ಟು ಸೋಂಕದ ಆದುನಿಕತೆಯ ಮತಪ್ರಭಾಷಣ ಸ್ಟೈಲಿದು.
ಭರ್ಜರಿ ಲಾಭದ ಈ ಬ್ಯುಸಿನೆಸ್ಗೆ
ಹೆಸರು ಮಾತ್ರ
*ಧಾರ್ಮಿಕ ಮತಪ್ರಭಾಷಣ!*
ಇದರ ವಿರುದ್ಧ ಮೊನ್ನೆ ಮೊನ್ನೆ ಕೂರ್ನಡ್ಕ ಖತೀಬ್ ಜಲಾಲಿ ಉಸ್ತಾದ್ ಎಚ್ಚರಿಸಿದ್ದರು.
ಇದೀಗ ಸೆಯ್ಯದ್ ದುಗ್ಗಲಡ್ಕ ತಂಙಳ್ ಗುಡುಗಿದ್ದಾರೆ.
ಸಮುದಾಯ ಸಾಕಿಸಲಹಿದ ಉಸ್ತಾದರುಗಳು ಸಮುದಾಯಕ್ಕಾಗಿ ಉರ್ದಿ ಹೇಳುವುದು ಅವರ ಭಾದ್ಯತೆಯಾಗಿರುತ್ತದೆ.
ಅದಕ್ಕಾಗಿ ಲಕ್ಷಾಂತರ ರೂಪಾಯಿ ಡಿಮ್ಯಾಂಡ್ ಮಾಡುವುದು ಅಕ್ಷಮ್ಯ ಅಪರಾಧವೆಂದು ತಂಙಳ್ ಎಚ್ಚರಿಸಿದ್ದು ಸಕಾಲಿಕವಾಗಿತ್ತು.
ಸಮುದಾಯ ಬದಲಾವಣೆ ಬಯಸದ ಕಾಲವಷ್ಟೂ ಇದು ಕೂಡಾ ವರದಕ್ಷಿಣೆ ಪಿಡುಗಿನಂತೆ ತನ್ನ ಕರಾಳ ಕದಂಬವನ್ನು ಇನ್ನಷ್ಟು ವ್ಯಾಪಿಸುತ್ತಾ ಇರುತ್ತೆ.
ಸುಲಭದಲ್ಲಿ ಹಣ ಅಂತಸ್ತು ಸ್ಥಾನಮಾನ ಸಿಗುವ ದಂಧೆಯಾದುದರಿಂದಲೇ ಅದರ ಹಿಂದೆ ರಾಜಕೀಯದ ಕರಾಳಹಸ್ತ ತನ್ನ ಹಿಡಿತವನ್ನು ಸಹಜವಾಗಿಯೇ ಬಿಗಿಗೊಳಿಸಿದೆ.
ಇದೀಗ ಇವರನ್ನು ಕರೆಸಿದ ಕೆಲವೊಂದು ಊರಿನವರಿಗೆ ಕಹಿಯಾಗಿದೆ ಉಗುಳಲು ಅಸಾದ್ಯವಾಗುವಷ್ಟು!
ದೂರದ ಕೊಲ್ಲಂ ನಿಂದ ಕೊಲ್ಲಲಿಕ್ಕಾಗಿಯೇ ಬರುವವರನ್ನು ಆದರದಿಂದ ಸ್ವಾಗತಿಸುವ ನಮಗೆ ನಮ್ಮವರೆಂದರೆ ಅಸಹ್ಯ!
ಹಾಗಾಗಿಯೇ ಕೇರಳದ ಕೆಲವೊಂದು ಇನ್ಸ್ಟಿಟ್ಯೂಟ್ ಕೇಂದ್ರಗಳಲ್ಲಿ ಕನ್ನಡಿಗರ ರೂಮಿಗೆ
*'ಮಂಡನ್ ಮಾರುಡೆ ಮುರಿ"*
(ಮೂರ್ಖರ ರೂಮ್)
ಎಂದು ಕರೆಯಲಾಗುತ್ತದೆ.
ಇದರಿಂದ ನಮ್ ಸಮುದಾಯ ಪಾಠ ಕಲಿಯುತ್ತೆ ಎಂದು ನೀವು ಗ್ರಹಿಸಿದರೆ ನೀವು ಶತಮೂರ್ಖರು.
ಸದಾ ಮೂರ್ಖರಾಗಲಿಕ್ಕೆ ಪ್ರತಿಜ್ಞೆ ಕೈಗೊಂಡ ನಾವು ಮೂರ್ಖರಾಗದೆ ಬದುಕುವುದೆಂದರೆ ಅದು ಒಂಥರಾ ಸೇಮ್ ತಾನೇ?
ಅಬೂಶಝ
No comments:
Post a Comment