Friday, June 8, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 4⃣2⃣
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

*ಕರ್ಬಲಾ ಯುದ್ಧದಲ್ಲಿ ಅಳಿದುಳಿದಿದ್ದ ಸಯ್ಯದುನಾ ಹುಸೈನ್ (ರ)ರವರ ಮಕ್ಕಳು ಮತ್ತಿತರರು ಆ ಶಿರಸ್ಸನ್ನು ಮದೀನಕ್ಕೆ ಒಯ್ದು ಜನ್ನತುಲ್ ಬಖೀಆದಲ್ಲಿ ದಫನಾ ಮಾಡಿದ್ದಾರೆಂದು ಕೆಲ ಚರಿತ್ರಾಕಾರರು ಉಲ್ಲೇಖಿಸಿದ್ದಾರೆ.* ⬇

ಸಯ್ಯದುನಾ ಹುಸೈನ್ (ರ)ರವರನ್ನು ವಧಿಸಿದ ನಂತರ ಶತ್ರುಪಡೆಯು ಡೇರೆ (ಟೆಂಟ್)ಯತ್ತ ಧಾವಿಸಿ ಡೇರೆಯನ್ನು ಸುತ್ತುವರಿದು ಡೆರೆಯೊಳಗೆ ನುಗ್ಗಲೆತ್ನಿಸಿದಾಗ ಸಯ್ಯದುನಾ ಝೈನುಲ್ ಆಬಿದೀನ್ (ರ) ತಂಙಳರು (ಮಕ್ಕದಿಂದ ಹೊರಡುವಾಗಲೇ ಜ್ವರ ಬಾಧಿತರಾಗಿದ್ದ ಹುಸೈನ್ (ರ)ರವರ ಹಿರಿಯ ಪುತ್ರ) ಖಡ್ಗದೊಂದಿಗೆ ಬಂದು ಡೇರೆಯ ಬಾಗಿಲಿನಲ್ಲಿ ನಿಂತರು.

ಆಗ ಶತ್ರು ಸೈನಿಕನೊಬ್ಬ ಸಯ್ಯದುನಾ ಝೈನುಲ್ ಆಬಿದೀನ್ (ರ)ರನ್ನು ಕೊಲ್ಲಲು ಮುಂದೆ ಬಂದಾಗ ಅಹ್ಲ್'ಬೈತನ್ನು ಪ್ರೀತಿಸುವ ಮತ್ತೊಬ್ಬ ಸೈನಿಕ ಅವನತ್ತ ಧಾವಿಸಿ ಬಂದು...

*ಏಯ್... ಜ್ವರದಿಂದ ಬಳಲುತ್ತಾ ಅಶಕ್ತರಾಗಿರುವ ಅಹ್ಲ್'ಬೈತಿನ ಕುಡಿಯದು. ಅವರನ್ನು ಮುಟ್ಟಿದರೆ ಪರಿಸ್ಥಿತಿ ನೆಟ್ಟಗಿರದು ಎಂದು ಘರ್ಜಿಸಿದಾಗ ವಿಚಲಿತನಾದ ಆತ ಹಿಂದೆ ಸರಿದನು.*

ಅನಾರೇೂಗ್ಯ ಒಂದೆಡೆಯಾದರೆ ಆಹಾರ ಮತ್ತು ನೀರಿಲ್ಲದೆ ನಿತ್ರಾಣರಾಗಿದ್ದ ಝೈನುಲ್ ಆಬಿದೀನ್ (ರ) ತಂಙಳರನ್ನು ಶತ್ರು ಪಡೆ ನಂತರ ಬಂಧಿಸಿತು. ಆಮೇಲೆ ಡೇರೆಯ ಒಳಗೆ ಅಸಹಾಯಕತೆಯಿಂದ ಬೆದರಿ ಅಡಗಿದ್ದ ಮಹದಿಯರಾದ *ಸಯ್ಯಿದತುನಾ ಬೀವಿ ಶಹ್ರು ಬಾನು (ರ), ಝೈನಬಾ ಬೀವಿ (ರ)* ಮತ್ತಿತರರನ್ನೆಲ್ಲ ಬಂಧಿಸಿದರು.

ಹಾಗೆ ಡೇರೆಯಲ್ಲಿ ಅಸಹಾಯಕರಾಗಿದ್ದವರನ್ನೆಲ್ಲಾ ಯುದ್ಧ ಖೈದಿಗಳನ್ನಾಗಿಸಿ ಕರೆದೊಯ್ಯುತ್ತಿರುವಾಗ ಯುದ್ಧರಂಗದಲ್ಲಿ ಶತ್ರುಗಳ ದಾಳಿಯಿಂದ ಛಿದ್ರವಾದ ಸಯ್ಯದುನಾ ಹುಸೈನ್ (ರ) ಮತ್ತಿತರರ ಜನಾಝಗಳನ್ನು ಕಂಡಾಗ ಹುಸೈನ್ (ರ)ರವರನ್ನೇ ಆಶ್ರಯಿಸಿದ್ದ ಅಬಲೆಯರಾದ ಪತ್ನಿ, ಸಹೇೂದರಿ ಮತ್ತು ಹೆಣ್ಣು ಮಕ್ಕಳ ಜಂಘಾಬಲವೇ ಹುದುಗಿ ಹೇೂದಂತಾಗಿ ರೇೂದಿಸಲಾರಂಭಿಸಿದರು.

ಕಲ್ಲಿನ ಹೃದಯವೂ ಕರಗಬಹುದಾದ ಆ ಸನ್ನಿವೇಶವನ್ನು ಕಂಡಾಗ ಎಲ್ಲರೂ ಕಂಬನಿಗರೆಯುತ್ತಾ ಅಸಹಾಯಕತೆಯಿಂದಿರುವಾಗ ಯಾರಿಗೆ ಯಾರು ತಾನೆ ಸಾಂತ್ವಾನ ಹೇಳಿಯಾರು?

ಮುತ್ತು ನಬಿ ಸಯ್ಯದುನಾ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಮೊಮ್ಮೊಗಳಾದ ಸಯ್ಯಿದತುನಾ ಝೈನಬಾ ಬೀವಿ (ರ) ರವರು, ಅಲ್ಲಾಹನ ರಸೂಲರೂ ತಮ್ಮ ಪಿತಾಮಹರೂ ಆದ *ನಬಿ ಸಯ್ಯದುನಾ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರೊಂದಿಗೆ ನಡೆಸಿದ 'ಇಸ್ತಿಗಾಸವು'* ಇಂದಿನ ಕಾಲಘಟ್ಟದಲ್ಲಿ ದಿನಕ್ಕೊಂದು ನಿಯಮ ರೂಪಿಸುತ್ತಾ ಹೊಸ ಹೊಸ ನಾಟಕದೊಂದಿಗೆ ಇಸ್ಲಾಮಿನ ಆಶಯಾದರ್ಶಗಳನ್ನು ಮನ ಬಂದಂತೆ ವ್ಯಾಖ್ಯಾನಿಸುತ್ತಾ ಸಮುದಾಯದ ನಡುವೆ ಭಿನ್ನತೆ ಮೂಡಿಸಿ ಸುನ್ನತ್ ಜಮಾಅತಿನ ಆಶಯಗಳಲ್ಲೊಂದಾದ ಇಸ್ತಿಗಾಸವನ್ನೇ ಅಲ್ಲಗಳೆದು ಜನರನ್ನು ಮರುಳು ಮಾಡಿ ಸತ್ಯಪಥದಿಂದ ಜನತೆಯನ್ನು 
ದಾರಿ ತಪ್ಪಿಸಲೆತ್ನಿಸುವ ನೂತನವಾದಿಗಳೆಂಬ ಸೇೂಗಲಾಡಿಗಳ ದುರ್ವ್ಯಾಖ್ಯಾನಗಳಿಗೆ ದಿಟ್ಟ ಉತ್ತರ ನೀಡುತ್ತದೆ.

*ಮಾತ್ರವಲ್ಲ ಪಾಂಡಿತ್ಯ ಸಾಗರಗಳಂತ ಘಟಾನುಘಟಿ ಇಮಾಮರುಗಳು ಉಲ್ಲೇಖಿಸಿರುವ ಆ ಇಸ್ತಿಗಾಸವು ಸುನ್ನತ್ ಜಮಾಅತ್'ವೊಂದೇ ಸತ್ಯದ ಹಾದಿ ತೇೂರುವ ದಾರಿ ದೀಪವೆನ್ನುವುದಕ್ಕೆ ಪುಷ್ಟಿ ನೀಡುತ್ತದೆ.*

ರಣರಂಗದಲ್ಲಿ ರಕ್ತದೇೂಕುಳಿಯ ನಡುವೆ ಮಾಂಸದ ಮುದ್ದೆಯಂತೆ ಹೊಟ್ಟೆಯೊಳಗಿನ ಅವಯವಗಳೆಲ್ಲ ಹೊರಬಿದ್ದ ಸ್ಥಿತಿಯಲ್ಲಿದ್ದ ಹಝ್ರತ್ ಹುಸೈನ್ (ರ)ರವರ ದೇಹವನ್ನು ಕಂಡಾಗ... 😰😰

*ಶತ್ರು ಸೈನಿಕರಿಂದ ಯುದ್ಧ ಖೈದಿಗಳಾಗಿ ಬಂಧಿಯಾದ ಇತರ ಮಹದಿಯರೊಂದಿಗಿದ್ದ ಸಯ್ಯಿದತುನಾ ಝೈನಬಾ (ರ) ಒಡೆದ ಹೃದಯದೊಂದಿಗೆ ಕಂಬನಿಯ ಕೇೂಡಿ ಹರಿಸುತ್ತಾ ಅಸಹಾಯಕತೆಯಿಂದ  ಚಡಪಡಿಸುತ್ತಾ ಸರ್ವ ಶಕ್ತಿಯನ್ನೂ ಒಗ್ಗೂಡಿಸಿ ಕೂಗಿದರು....*

ಮುಂದುವರಿಯುವುದು
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡

No comments:

Post a Comment