Friday, June 8, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 4⃣3⃣
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

ಶತ್ರು ಸೈನಿಕರಿಂದ ಯುದ್ಧ ಖೈದಿಗಳಾಗಿ ಬಂಧಿಯಾದ ಇತರ ಮಹದಿಯರೊಂದಿಗಿದ್ದ ಸಯ್ಯಿದತುನಾ ಝೈನಬಾ (ರ) ಒಡೆದ ಹೃದಯದೊಂದಿಗೆ ಕಂಬನಿಯ ಕೇೂಡಿ ಹರಿಸುತ್ತಾ ಅಸಹಾಯಕತೆಯಿಂದ  ಚಡಪಡಿಸುತ್ತಾ ಸರ್ವ ಶಕ್ತಿಯನ್ನೂ ಒಗ್ಗೂಡಿಸಿ ಕೂಗಿದರು.... ⬇

 "وَصَاحَتْ زَيْنَبُ أُخْتُهُ: يَا مُحَمَّدَاهُ صَلَّى عَلَيْكَ مَلَائِكَةُ السَّمَاءِ! هَذَا الْحُسَيْنُ بِالْعَرَاءِ، مُرَمَّلٌ بِالدِّمَاءِ، مُقَطَّعُ الْأَعْضَاءِ، وَبَنَاتُكَ سَبَايَا، وَذُرِّيَّتُكَ مُقَتَّلَةٌ تَسْفِي عَلَيْهَا الصَّبَا! فَأَبْكَتْ كُلَّ عَدُوٍّ وَصَدِيقٍ."

الكتاب: الكامل في التاريخ
المؤلف: أبو الحسن علي بن أبي الكرم محمد بن محمد بن عبد الكريم بن عبد الواحد الشيباني الجزري، عز الدين ابن الأثير (المتوفى: ٦٣٠هـ)
___________

"فَلَمَّا مَرُّوا بِمَكَانِ الْمَعْرَكَةِ رَأَوُا الْحُسَيْنَ وَأَصْحَابَهُ مُجَدَّلِينَ، هُنَالِكَ بَكَتْهُ النِّسَاءُ، وَصَرَخْنَ وَنَدَبَتْ زَيْنَبُ أَخَاهَا الْحُسَيْنَ وَأَهْلَهَا، فَقَالَتْ وَهِيَ تَبْكِي: يَا مُحَمَّدَاهُ، يَا مُحَمَّدَاهُ، صَلَّى عَلَيْكَ مَلَائِكَةُ السَّمَاءِ، هَذَا حُسَيْنٌ بِالْعَرَاءِ، مُزَمَّلٌ بِالدِّمَاءِ، مُقَطَّعُ الْأَعْضَاءِ، يَا مُحَمَّدَاهُ، وَبَنَاتُكَ سَبَايَا، وَذُرِّيَّتُكَ مُقَتَّلَةٌ تَسْفِي عَلَيْهَا الصَّبَا. قَالَ: فَأَبْكَتْ وَاللَّهِ كُلَّ عَدُوٍّ وَصَدِيقٍ."

الكتاب: البداية والنهاية
المؤلف: أبو الفداء إسماعيل بن عمر بن كثير القرشي البصري ثم الدمشقي (المتوفى: ٧٧٤هـ)

*ಓ... ಮುಹಮ್ಮದ್ ನಬಿಯವರೇ.. ﷺ, ಆಕಾಶದ ಮಲಾಇಕ್'ಗಳ ಸ್ವಲಾತ್ ತಮ್ಮ ಮೇಲೆ ಸದಾ ವರ್ಷಿಸುತ್ತಿರಲಿ....*
*ಯುದ್ಧರಂಗದಲ್ಲಿ ತಮ್ಮ ಪೌತ್ರರಾದ ಹುಸೈನ್ (ರ)ರವರ ಅಂಗಾಂಗಳು ತುಂಡು ತುಂಡಾಗಿ ಕತ್ತರಿಸಲ್ಪಟ್ಟು ರಕ್ತ ಮತ್ತು ಮಾಂಸದ ಮುದ್ದೆಯಂತೆ ಬಿದ್ದು ಮಲಗಿದ್ದಾರೆ.*

*ಓ.. ಮುಹಮ್ಮದ್ ನಬಿಯವರೇ ﷺ ತಮ್ಮ ಹೆಣ್ಣು ಮಕ್ಕಳನ್ನು (ಮೊಮ್ಮೊಕ್ಕಳನ್ನು) ಯುದ್ಧ ಖೈದಿಗಳನ್ನಾಗಿಸಿ ಜೀತದಾಳುಗಳನ್ನಾಗಿಸಲು ಅಥವಾ ಜೈಲಿನಲ್ಲಿ ಬಂಧಿಸಲು ಎಳೆದೊಯ್ಯುತ್ತಿದ್ದಾರೆ ನೆಬಿಯೇ ﷺ*
*ತಮ್ಮ ಮೊಮ್ಮೊಕ್ಕಳನ್ನು ಕೊಚ್ಚಿ ಕೊಚ್ಚಿ ಹಾಕಲಾಗಿದೆ ನೆಬಿಯೇ ﷺ*

ಕಂಬನಿಯ ಕೇೂಡಿ ಹರಿಸುತ್ತಾ ಆ ಮಹದಿಯ ಅಂತರಾಳದಿಂದ ಹೊರಟ ಈ ಮಾತುಗಳನ್ನು ಕೇಳಿದಾಗ ಮಿತ್ರರಲ್ಲಷ್ಟೇ ಅಲ್ಲ ಶತ್ರುಗಳ ಕಂಗಳಲ್ಲೂ ಕಣ್ಣೀರ ಕೇೂಡಿ ಹರಿಯಿತೆಂದು ಇತಿಹಾಸ ವರ್ಣಿಸುತ್ತದೆ.

*(ಇದನ್ನು ಇಮಾಂ ತ್ವಬ್ರಿ (ರ)ರವರ ತಾರೀಖಿನಲ್ಲೂ, ಇಮಾಂ ಮಾರಾಕಿಷಿ (ರ)ರವರ ಮಿಸ್ಬಾಹುಳ್ವಲಾಮಿನಲ್ಲೂ, ಇಬ್ನು ಅಸಿರ್ (ರ)ರವರ ತಾರಿಖಿನಲ್ಲೂ, ಹಾಫಿಳ್ ಇಬ್ನು ಕಸಿರ್ (ರ) ರವರ ಅಲ್ ಬಿದಾಯತು ವನ್ನಿಹಾಯದಲ್ಲೂ ಕಾಣಬಹುದು)*

_ಕರ್ಬಲದಲ್ಲಿ ಅಂದು ಸಾವಿರಾರು ಶತ್ರು ಸೈನಿಕರ ದಾಳಿಗೀಡಾದ ಸಯ್ಯದುನಾ ಹುಸೈನ್ (ರ) ರವರ ಮತ್ತು ಅವರ ಸಂಗಡಿಗರಾದ ಧೀರ ಶುಹದಾಗಳ ಆ ತ್ಯಾಗ ಮತ್ತು ಬಲಿದಾನಗಳ ಅಗಾಧತೆಯನ್ನು ಊಹಿಸಲೂ ನಮ್ಮಂಥವರಿಂದ ಸಾಧ್ಯವಿಲ್ಲ._

ಕರ್ಬಲಾ ಯುದ್ಧ ನಡೆದು ಸಾವಿರದ ಮುನ್ನೂರ ಎಂಬತ್ತೈದು ವರ್ಷ ಕಳೆದರೂ ಆ ಚರಿತ್ರೆಯನ್ನು ನೆನೆವಾಗ ಪ್ರತಿಯೊಬ್ಬ ವಿಶ್ವಾಸಿಯ ಹೃದಯವೂ ಕಂಬನಿ ಮಿಡಿಯದಿರದು.

*ಮುಂದೇನಾದೀತು ಎನ್ನುವುದಕ್ಕಿಂತಲೂ ತಮ್ಮ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಒಡನಾಡಿ ಗುಟುಕು ನೀರೂ ಸಿಗದೆ ಒದ್ದಾಡುತ್ತಾ ಶತ್ರುಗಳ ಖಡ್ಗದ ದಾಳಿಗೀಡಾಗಿ ತುಂಡು ತುಂಡಾಗಿ ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಅನಾಥವಾಗಿ ಬಿದ್ದಿರುವುದನ್ನು ಕಣ್ಣಾರೆ ಕಂಡವರ ಸ್ಥಿತಿ ವರ್ಣನೆಗೆ ನಿಲುಕೀತೇ? ಅದಕ್ಕೂ ಮಿಗಿಲಾಗಿ..* ⤵

ಮುಂದುವರಿಯುವುದು
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡

No comments:

Post a Comment