Friday, November 24, 2017

*ಮುಹಮ್ಮದರನ್ನು ಪ್ರೀತಿಸಲು ಮುಸಲ್ಮಾನನಾಗಬೇಕೆಂಬ ಷರತ್ತಿಲ್ಲ*

ಅದು ಬ್ರಿಟೀಷರು ಭಾರತವನ್ನಾಳುತ್ತಿದ್ದ ಸಮಯ. ಲಾಹೋರಿನಲ್ಲಿ ಹುಟ್ಟಿ ದೆಹಲಿಯಲ್ಲಿ ಪ್ರಸಿದ್ದರಾದ ಹಿಂದೂ ಕವಿಯೊಬ್ಬರಿದ್ದರು. ಬಹೂರ್ ರಾಮ್ ಎಂಬವರ ಪುತ್ರ ದಿಲ್ಲೂ ರಾಮ್. ‘ಕೌಸರೀ’ ಎಂಬ ಕಾವ್ಯ ನಾಮ ಅವರದ್ದಾಗಿತ್ತು. ಈ ಕವಿ ಹೆಚ್ಚಾಗಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಪ್ರಶಂಸಿಸಿ ಕವನ ರಚಿಸುತ್ತಿದ್ದರು. ಈ ಬಗ್ಗೆ ಅವರ ಧರ್ಮಿಯರಿಗೆ ಅಸಮಾಧಾನವಿತ್ತು. ಅವರು ಯಾಕೆ ನೀನು ಮುಸ್ಲಿಮರ ಪ್ರವಾದಿಯ ಬಗ್ಗೆ ಕವಿತೆ ಬರೆಯುತ್ತಿ ಎಂದು ಪ್ರಶ್ನಿಸಿದಾಗ ದಿಲ್ಲೂರಾಮ್ ‘ನೀವು ನನ್ನನ್ನು ಅದರಿಂದ ತಡೆಯದಿರಿ, ಏಕೆಂದರೆ; ನನ್ನನು ಅಂತಹ ಕವಿತೆ ರಚಿಸುವಂತೆ ಒತ್ತಾಯಪಡಿಸಲಾಗುತ್ತಿದೆ ಎಂದರು. ಯಾರು ಒತ್ತಾಯ ಪಡಿಸುವವರು? ಎಂದು ಪ್ರಶ್ನೆ ಬಂದಾಗ ನನ್ನ ಪ್ರೀತಿ ಎಂದು ಉತ್ತರಿಸಿದರು. ನಾನು ಆ ಎರಡು ಕಿಬ್ಲಾಗಳ ಇಮಾಮ್‍ನ ಪ್ರೀತಿಯಲ್ಲಿ ಬಿದ್ದಿದ್ದೇನೆ ಅಂದರು ಆ ಹಿಂದೂ ಕವಿ.
ಅದೇಗೆ ಹಿಂದೂವಾಗಿಯೂ ಪ್ರವಾದಿ ಪ್ರೀತಿಯಲ್ಲಿ ಬಿದ್ದೆ ಎಂದು ಕೇಳಿದರೆ ‘ಮೌಲ್ವಿ’ ಎಂಬ ಉರ್ದು ಪತ್ರಿಕೆಯಲ್ಲಿ ಪ್ರಕಟಿಸಿದ ಚೌಪದಿಯ ಮೂಲಕ ಉತ್ತರ ಕೊಟ್ಟರು;
*_ಕುಚ್ ಇಷ್ಕ್ ಹೇ ಮುಹಮ್ಮದ್ ಮೇ ನಹೀ ಶರ್ತ್ ಹೇ ಮುಸಲ್ಮಾನ್_*
*_ಹೇ ಕೌಸರಿ ಹಿಂದೂ ಭೀ ತಲಬ್‍ಗಾರ್-ಎ-ಮುಹಮ್ಮದ್_*
*_ಅಲ್ಲಾರೇ! ಕ್ಯಾ ರೌನಕ್ ಹೇ ಬಾಝಾರ್-ಎ-ಮುಹಮ್ಮದ್_*
*_ಕೇ ಮಾಬೂದ್ ಎ ಜಹಾನ್ ಬಿ ಹೇ ಖರೀದಾರ್ ಎ ಮುಹಮ್ಮದ್_*
“ ಆ ನೆಬಿಯವರಲ್ಲಿ ಪ್ರೀತಿಯುಂಟಾಗಲು ಮುಸಲ್ಮಾನನಾಗಬೇಕೆಂಬ ಷರತ್ತಿಲ್ಲ, ಈ ಕೌಸರಿ ಹಿಂದೂವಾಗಿಯೂ ಮುಹಮ್ಮದರನ್ನು ಹುಡುಕಿ ಬಂದವನು, ಅಲ್ಲಾಹ್! ಎಂತ ಆನಂದ ಮುಹಮ್ಮದರ ಬಾಝಾರಲ್ಲಿ, ಸೃಷ್ಟಿಕರ್ತನೇ ಖರೀದಿದಾರನಲ್ಲಿ”

ಇದೇ ಪತ್ರಿಕೆ ಪ್ರಕಟಿಸಿದ ಮತ್ತೊಂದು ಕವಿತೆ ದಿಲ್ಲೂರಾಮರನ್ನು ವಿವಾದಕ್ಕೆ ಸಿಲುಕಿಸಿತ್ತು. ನಾಡಿನ ಹಿಂದೂಗಳು ಮುಸ್ಲಿಮರು ಅವರನ್ನು ವಿರೋದಿಸಿದರು
*_ರಹ್ಮತುಲ್ ಆಲಮಿನ್ ಕೇ ಹಾಶರ್ ಮೇ ಮಹನಾ ಕುಲೇ_*
*_ಖಲ್ಕ್ ಸಾರಿ ಶಫಾ-ಎ-ರೋಝ್-ಎ-ಜಝಾ ಕೆ ಸಾತ್ ಹೆ_*
*_ಕೆ ದಿಲ್ಲೂರಾಮ್‍ಕೋ ಜನ್ನತ್ ಮೇ ಜಬ್ ಹಝ್ರತ್ ಗಯೇ_*
*_ಮಾಲೂಮ್ ಹುವಾ ಕೆ ಹಿಂದೂ ಭಿ ಮಹ್ಬೂಬ್-ಎ-ಖುದಾ ಕಿ ಸಾಥ್ ಹೇ_*
“ ರಹ್ಮತುಲ್ ಆಲಮೀನ್ ಇದರ ಅರ್ಥ ವಿಧಿ ನಿರ್ಣಯದ ದಿನ ತಿಳಿಯಲಿದೆ. ಎಲ್ಲರೂ ಬಿಡುಗಡೆಗಾಗಿ ಬಿನ್ನಹ ಸಲ್ಲಿಸುವಾಗ, ಆ ಪ್ರೇಮ ಸ್ವರೂಪಿಯು  ದಿಲ್ಲೂರಾಮನನ್ನು ಕೈಹಿಡಿದು ಸ್ವರ್ಗಕ್ಕೆ ಕರೆದೊಯ್ಯಲಿದ್ದಾರೆ. ಗೊತ್ತಾಗಲಿದೆ ಒಬ್ಬ ಹಿಂದೂವು ಅಲ್ಲಾಹನ ಪ್ರೀತಿಪಾತ್ರರ ಜೊತೆಗಿದ್ದಾನೆ “
ಈ ಚೌಪದಿ ದೇಶದಲ್ಲಿ ತಲ್ಲಣ ಉಂಟು ಮಾಡಿತು. ಸ್ವಧರ್ಮಿಯರು ಪ್ರವಾದಿ ಪ್ರಶಂಸೆಗಳನ್ನು ಬರೆಯುವುದರ ಕುರಿತು ವಿವಾದ ಉಂಟು ಮಾಡಿದರೆ; ಒಬ್ಬ ಹಿಂದುವಾಗಿಯೂ ವಿಧಿ ನಿರ್ಣಯ ದಿನದ ಕುರಿತು, ಸ್ವರ್ಗ ಪ್ರವೇಶದ ಕುರಿತು ಮಾತನಾಡಿದ್ದು ಮುಸ್ಲಿಮರನ್ನು ಕೆರಳಿಸಿತು.
ಈ ಎಲ್ಲಾ ವಿವಾದಗಳನ್ನು ಕಡೆಗಣಿಸಿ ದಿಲ್ಲೂರಾಮ್ ಪ್ರವಾದಿ ಪ್ರಶಂಸೆಯ ಕವನ ಹೊಸೆದರು. ಕುಟುಂಬ ಅವರನ್ನು ಹುಚ್ಚನೆಂದು ಸಂಕೋಲೆಗೆ ಹಾಕಿತು. ದಿಲ್ಲಿ ಬಜಾರಿನ ಮಧ್ಯೆ ಕೊರಳಿಗೆ ಸುತ್ತಿದ್ದ ಸಂಕೋಲೆಯೊಂದಿಗೆ ದೊಡ್ಡ ಧ್ವನಿಯಲ್ಲಿ ಈ ಕೆಳಗಿನ ಅರ್ಥ ಬರುವ ಕವಿತೆ ಉಚ್ಚರಿಸುತ್ತಾ ದಿಲ್ಲೂರಾಮ್ ಕಂಡುಬಂದರು, ಜನತೆ ಅಕ್ರೋಶದಿಂದ ಅವರೆಡೆಗೆ ಕಲ್ಲುಬೀಸುತ್ತಿದ್ದರು;
*_ಮುಹಮ್ಮದ್ ಮುಹಮ್ಮದ್ ಮುಹಮ್ಮದ್_*
*_ನಿಜ ಮುಹಮ್ಮದರು ಅಲ್ಲಾಹನಿಗೆ ಪ್ರೀತಿಪಾತ್ರರು_*
*_ಮುಹಮ್ಮದರು ಮಾತ್ರ ಅಲ್ಲಾಹನಿಗೆ ಪ್ರೀತಿ ಪಾತ್ರರು_*
*_ನಿಮಗೆ ಅಲ್ಲಾಹನ ಪ್ರೀತಿ ಬೇಕೇ? ಮುಹಮ್ಮದರನ್ನು ಪ್ರೀತಿಸಿ._*
ವೃದ್ಧಾಪ್ಯದಿಂದ, ರೋಗಶಯ್ಯೆಯಲ್ಲಿ ಏಳಲಾಗದೇ ಮಲಗಿದ್ದ ದಿಲ್ಲೂರಾಮರು ಒಂದು ದಿನ ಸುತ್ತಲಿದ್ದವರು ದಿಗ್ಮೂಢರಾಗುವಂತೆ ಪ್ರಸನ್ನವದನದೊಂದಿಗೆ ದಿಗ್ಗನೆ ಎದ್ದು ನಿಂತರು. ಎಲ್ಲರೂ ಏನಾಯ್ತು ಏನಾಯ್ತು ಎಂದು ಕೇಳಿದರು. ಆಗ ತಡೆಂi
ರದ ಅಳುವಿನೊಂದಿಗೆ ದಿಲ್ಲೂರಾಮ್ ಹೇಳಿದರು” ನನ್ನ ಸೌಭಾಗ್ಯ. ನನ್ನ ಜೀವನವಿಡೀ ಯಾರ ಪ್ರಶಂಸೆಗೆ ಮೀಸಲಿಟ್ಟೇನೋ ಅವರೇ ಅನುಗ್ರಹೀತೆ ಫಾತಿಮಾರ ಪ್ರೀತಿಯ ತಂದೆ ಆ ಲೋಕನಾಯಕರು ನನ್ನ ಬಳಿ ಬಂದಿದ್ದರು. ಅವರ ಧರ್ಮವನ್ನು ನಾನು ಸ್ವೀಕರಿಸದಿದ್ದರೂ ಕೂಡಾ. ಅವರೆಷ್ಟು ಕರುಣಾಮಯಿ. ಆ ಪ್ರೇಮದ ಗಣಿ ನನ್ನಲ್ಲಿ ಹೇಳಿದರು ದಿಲ್ಲೂ ರಾಮ್ ನಿನ್ನ ಸಮಯ ಮುಗಿಯುತ್ತಿದೆ. ಅಝ್ರಾಈಲ್ ನಿನ್ನನು ಸಮೀಪಿಸುತ್ತಿದ್ದಾರೆ. ನಿನ್ನಂತೆ ಬದುಕನ್ನು ನನ್ನ ಪ್ರಶಂಸೆಗೆ ಮಿಸಲಿಟ್ಟವರನ್ನು ನರಕಾಗ್ನಿ ಸುಡುವುದು ನನಗೆ ಇಷ್ಟವಿಲ್ಲ. ನಿನ್ನನು ಸ್ವರ್ಗಕ್ಕೊಯ್ಯಬೇಕೆಂದು ನನ್ನ ಆಶೆ. ನಾನು ಕಲಿಮಾ ಹೇಳಿದೆ ಅಲ್ ಹಮ್ದುಲಿಲ್ಲಾಹ್. ನಾನು ನಾಯಕರಲ್ಲಿ ಬಿನ್ನಹವಿತ್ತೆ ಯಾ ರಸೂಲುಲ್ಲಾಹ್ ನೀವು ನನಗೆ ಕಲಿಮಾ ಹೇಳಿಕೊಟ್ಟಿರಿ. ನನಗೆ ಒಂದು ಹೆಸರನ್ನು ಸೂಚಿಸಿ ಎಂದು ಅವರು ನನ್ನನು ಕೌಸರ್ ಅಲೀ ಕೌಸರಿ ಎಂದು ಕರೆದರು.
ಅವರ ಹೆಸರು ಬರೇಲ್ವಿ ಸುನ್ನಿಗಳ ನಡುವೆ ಮನೆಮಾತಾಯಿತು. 1931ರಲ್ಲಿ ಲಾಹೋರಿನಲ್ಲಿ ನಿಧನರಾದರು.

*ಸಲಾಮುನ್ ಅಲೈಕ ಯಾ ರಸೂಲುಲ್ಲಾ*

:ವೆಬ್ ಮೂಲ:

ಇರ್ಶಾದ್ ಪತ್ರಿಕೆಯಲ್ಲಿ ಪ್ರಕಟಿತ

*ಮುಸ್ತಫಾ ಗಡಿಯಾರ್*

No comments:

Post a Comment