Friday, July 12, 2019

ಖುರ್'ಆನ್ ಪ್ರಯೋಗಿಕ ಜೀವನದಲ್ಲಿ ಭಾಗ = 06

*ಖುರ್' ಆನ್ ಪ್ರಾಯೋಗಿಕ ಜೀವನದಲ್ಲಿ*

ಭಾಗ --6


*3.ಸೂರಾ ಆಲು ಇಂಮ್ರಾನ್*

_ಒಟ್ಟು ಆಯತ್'ಗಳು : 200_

_*ಮಹತ್ವ*_

ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ,
ಅಲ್ ಬಖರ ಮತ್ತು ಆಲು ಇಮ್ರಾನ್ ಪಾರಾಯಣ ಮಾಡುವವರಿಗೆ ಅದು ಶಫಾಅತ್ ಮಾಡಬಲ್ಲದು ಮತ್ತು ಅವರಿಗೆ ಅದು ಸಾಕ್ಷಿ ನಿಲ್ಲುವವು.
(ಮುಸ್ಲಿಂ 805)

ಆಲು ಇಮ್ರಾನ್ ಪಾರಾಯಣ ಮಾಡುವವರ ಆರ್ಥಿಕತೆ ಬಹಳ ಸುಧೃಢವಾಗಿರುತ್ತದೆ.(ಸುನನುದ್ದಾರಿಮಿ 2/544)

ಸೂರತುಲ್ ಕಂಝ್ ಎಂಬ ಹೆಸರಿನಲ್ಲೂ
(ಅಲ್ ಬಹ್ರುಲ್ ಮುಹೀತ್ 3/9) ತೈಬ,
ಅಲ್ ಅಮಾನ್,
ಅಲ್ ಮುಜಾದಲ,
ಅಲ್ ಇಸ್ತಿಗ್'ಫಾರ್,
ಅಲ್ ಮುಗ್ನಿಯ್ಯಿ ಮುಂತಾದ ಹೆಸರುಗಳಿಂದ ಈ ಸೂರತ್ ತಿಳಿಯಲ್ಪಡುತ್ತದೆ.

*ಉಪಯೋಗ ಮತ್ತು ಮಹತ್ವ*

1. ವಿಷಭಾಧೆ ತಗಲಿದ ವ್ಯಕ್ತಿಗೆ ಆಲು ಇಮ್ರಾನ್ ಪಾರಾಯಣ ಮಾಡಿದರೆ ಬಹಳ ಪ್ರಯೋಜನಕಾರಿಯಾಗಿದೆ.

2.ರಾತ್ರಿ ಆಲು ಇಮ್ರಾನ್ ನ ಕೊನೆಯ ಭಾಗ   ಪಾರಾಯಣ ಮಾಡುವುದರಿಂದ ರಾತ್ರಿ ಸಂಪೂರ್ಣ ನಮಾಝು ಮಾಡಿದ ಪ್ರತಿಫಲ ಲಭಿಸುವವು.(ಖುರ್ತುಬಿ4/4).

3.ಅಲ್ ಬಕರ ಸೂರತ್ತಿನ 163 ,ಆಲು ಇಮ್ರಾನ್ ನ 2 ನೇ ಆಯತ್ ನಲ್ಲಿ ಇಸ್ಮುಲ್ ಅಹ್'ಳಮ್ ಇದೆ.(ಇಬ್ನ್ ಮಾಜ)

4.ಆಲು ಇಮ್ರಾನ್ ನ 18 ನೇ ಆಯತ್  ( شهد الله)ರಾತ್ರಿ ಪಾರಾಯಣ ಮಾಡುವವರಿಗೆ 70 ಮಲಕುಗಳ ಪ್ರಾರ್ಥನೆಯಿದೆ.(ಖುರ್ತುಬಿ4/5).ಅದು ಸ್ವರ್ಗ ಪ್ರವೇಶಕ್ಕೆ ಕಾರಣವಾಗಿದೆ.(ಜಾಮಿಉಲ್ ಕಬೀರ್ 7/338)

5.ಆಹಾರ ಸೇವನೆಯ ನಂತರ ಪ್ರಸ್ತುತ ಆಯತ್ ಓದಿದರೆ ಅಜೀರ್ಣದ ತೊಂದರೆ ಇರಲಾರದು.(ಅತ್ತಿದ್ಸ್'ಕಾರ್246)

6.ಆಲು ಇಮ್ರಾನ್ ನ 18 ನೇ ಆಯತ್(شهد الله)
  ಮತ್ತು 26 ನೇ ಆಯತ್( قل اللهم )
,ಆಯತುಲ್ ಕುರ್ಸಿ,
ಫಾತಿಹ ಸೂರತ್ ನಮಾಝಿನ ನಂತರ ಓದಿದರೆ ಶತ್ರುಗಳ  ಉಪಟಳವಿರಲಾರದು ಹಾಗೂ ದೈನಂದಿನ 70 ಉದ್ದೇಶಗಳು ಈಡೇರಿಸಲ್ಪಡಲಾಗುತ್ತದೆ.
(ಅಮಲುಲ್ ಯೌಮಿ ವಲ್ಲೈಲ)

7.ಆಲು ಇಮ್ರಾನ್ ನ 26 ನೇ ಆಯತ್ ಎಲ್ಲಾ ದಿನ ಪಾರಾಯಣ ಮಾಡಿದರೆ ಬಹಳ ಬೇಗನೆ  ಸಾಲ ಸಂದಾಯವಾಗುತ್ತದೆ.(ಮಜ್'ಮಉಝ್ಝವಾಯಿದ್10/186)

8.ಆಲು ಇಮ್ರಾನ್ 83 ನೇ ಆಯತ್
ನಡವಳಿಕೆ ಸರಿಯಿಲ್ಲದ ಮೃಗದ ಕಿವಿಗೆ ಪಾರಾಯಣ ಮಾಡಿದರೆ ಉಪಕರಿಸುತ್ತದೆ.(ಅಮಲುಲ್ ಯೌಮಿ ವಲ್ಲೈಲ 510)

9.ಗರ್ಬಿಣಿಯರು ಆಲು ಇಮ್ರಾನ್ ನ 35 ರಿಂದ 37 ನೇ ಆಯತ್ ತನಕ ಬರೆದು ನೀರನ್ನು ಕುಡಿದರೆ  ಬಹಳ ಪ್ರಯೋಜನಕಾರಿ.(ಖವಾಸುಲ್ ಖುರ್'ಆನ್ 46)

10.ವಿಪತ್ತಿನ ವೇಳೆ ಆಲು ಇಮ್ರಾನ್ 173 ನೇ ಆಯತ್  ನ ಕೊನೆಯ ಭಾಗದ ( حسبنا ) ಪಾರಾಯಣ ಮಾಡುವುದು  ಬಹಳ ಪ್ರಯೋಜನಕಾರಿ.(ಅತ್ತಿದ್ಸ್'ಕಾರ್250)

11.ಮಲಗುವ ಮುಂಚೆ ಆಲು ಇಮ್ರಾನ್ ನ ಕೊನೆಯ 10 ಆಯತ್ ಪಾರಾಯಣ ಮಾಡುವುದರಿಂದ ರಾತ್ರಿ ಸಂಪೂರ್ಣ ನಮಾಝು ಮಾಡಿದ ಪ್ರತಿಫಲ ಲಭಿಸುತ್ತದೆ.
(ಸುನನ್ನುದ್ದಾರಿಮಿ)

12.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ನಿದ್ರೆ ಯಿಂದ ಎಚ್ಚರಗೊಂಡರೆ ಆಲು ಇಮ್ರಾನ್ ನ 19 ನೇ ಆಯತ್ ನಿಂದ 194 ತನಕದ ಅಯತ್ ಗಳು ಆಕಾಶಕ್ಕೆ ನೋಡಿ ಪಾರಾಯಣ ಮಾಡುತ್ತಿದ್ದರು.

13.ಯಾವುದಾದರೊಂದು ಉದ್ದೇಶ ಈಡೇರಬೇಕಾದಲ್ಲಿ ಗುರುವಾರ ಬೆಳಿಗ್ಗೆ  ಯಾತ್ರೆ ಹೊರಡಬೇಕು.ಹೊರಡುವ ಮುಂಚೆ  ಫಾತಿಹ,
ಆಯತುಲ್ ಕುರ್ಸಿ,
ಸೂರತುಲ್ ಖದ್ರ್,
ಆಲು ಇಮ್ರಾನ್ ನ ಕೊನೆಯ 5 ಆಯತ್ ಗಳು ಪಾರಾಯಣ ಮಾಡಿ ಹೊರಟರೆ ಉದ್ದೇಶಗಳೆಲ್ಲವೂ ಪೂರ್ತೀಕರಿಸಲಾಗುತ್ತದೆ.

_____________________

_ಬಾಕಿ ಮುಂದಿನ ಭಾಗದಲ್ಲಿ...._

No comments:

Post a Comment