Sunday, September 29, 2019

*ವಹಾಬಿ ಉಗ್ರವಾದ ಎಂದು ಕೇಳುವಾಗ ಸಲಫಿಗಳು ಬೆಚ್ಚಿ ಬೀಳುವುದೇಕೇ ?*

              *ಎಂ.ಎಂ.ಸಖಾಫಿ*

ಇತ್ತೀಚೆಗೆ ಹಿಂದುತ್ವವಾದಿ ಮುಖಂಡ ಸೂಲಿಬೆಲೆಯ ವೀಡಿಯೋ ತುಣುಕ್ಕೊಂದು ವೈರಲಾಯಿತು.ಸೂಲಿಬೆಲೆ ಏನೇ ಹೇಳಲಿ ಆತನನ್ನು ಎಲ್ಲಿ ಇಡಬೇಕೋ ಅಲ್ಲಿಯೇ  ಈ ಸಮುದಾಯ ಇಟ್ಟಿದೆ. ಆತನಿಗೆ ವಿಷೇಷ ಮಹತ್ವ ನೀಡಬೇಕಾದ ಅಗತ್ಯವಿಲ್ಲ.
ಆದರೆ ಸೂಲಿಬೆಲೆ ಮಾತಿನಿಂದ ತನ್ನ ಬುಡಕ್ಕೆ ಪೆಟ್ಟು ಬೀಳುತ್ತದೆಯೆಂದು ಅರಿತ ಕೆಲವು ಮರಿ ಸಲಫಿಗಳು ,ಆತನ ಮಾತಿನ ವರಸೆ ಬದಲಾಯಿಸಿ ಸುನ್ನೀಗಳ ತಲೆಗೆ ಕಟ್ಟಿದ್ದಾರೆ.ಸುನ್ನೀಗಳನ್ನು ಅಪಮಾನಿಸಲು ಸೂಲಿಬೆಲೆಯ ವೀಡಿಯೋ ಪ್ರಚಾರ ಮಾಡುವ ಗತಿಕೇಡು ಸಲಫಿಗಳಿಗೆ ಬಂದಿದೆ.

ಅಷ್ಟಕ್ಕೂ ವಿಷಯವೇನು ? ವಹಾಬಿ ಭಯೋತ್ಪಾದನೆಯ ಬಗ್ಗೆ ಸೂಲಿಬೆಲೆ ಮಾತ್ರ ಹೇಳಿದ್ದಾ ?

*ವಹಾಬಿ ಭಯೋತ್ಪಾದನೆ ಎಂಬುದು ಐತಿಹಾಸಿಕ ಸತ್ಯ.ಚಾರಿತ್ರಿಕ ದಾಖಲೆಗಳು ಅದನ್ನು ಸ್ಪಷ್ಟಪಡಿಸುತ್ತವೆ.ವಹಾಬಿಸಂನ ಹುಟ್ಟು,ಬೆಳವಣಿಗೆ ರಕ್ತಸಿಕ್ತವಾಗಿತ್ತೆಂದು ಸರ್ವ ಇತಿಹಾಸಕಾರರು ಸಮ್ಮತಿಸಿದ್ದಾರೆ.ಇಸ್ಲಾಮೀ ಉಗ್ರವಾದಕ್ಕೆ ಚಾಲನೆ ನೀಡಿದ್ದೇ ಸಲಫಿಸಂ ನ ಆಶಯಗಳು*.

*2009 ,ನವೆಂಬರ್* .
*ನ್ಯೂಡೆಲ್ಲಿಯಲ್ಲಿ ನಡೆದ ಅಂತರಾಷ್ಟ್ರೀಯ ಭಯೋತ್ಪಾದನ ವಿರುದ್ಧ ಸಮಾವೇಶದಲ್ಲಿ ಮಾಜಿ ಕೇಂದ್ರ ಸಚಿವ, ಪ್ರಖ್ಯಾತ ವಕೀಲ ರಾಮ್ ಜೆಠ್ಮಲಾನಿ ವಹಾಬಿ ಭಯೋತ್ಪದಾನೆಯ ಬಗ್ಗೆ ಮಾತನಾಡಿದರು.ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮಾರ್ಕೆಂಡ್ ಕಾಡ್ಜು ಕೂಡ ವಹಾಬಿ ಭಯೋತ್ಪಾದನೆಯ ಬಗ್ಗೆ ಜನರನ್ನು ಎಚ್ಚರಿಸಿದ್ದರು*.

ಕಳೆದ ದಶಕ ಕಂಡ ಭೀಕರ ಭಯೋತ್ಪಾದನೆ ಯ ರೂವಾರಿಗಳಾದ ಐಸಿಸ್ ಕೂಡಾ ವಹಾಬಿಸಂನ ಕೂಸೆಂದು ಸೌದಿಯ ವಹಾಬಿ ಮುಫ್ತಿಗಳೇ ಸಮ್ಮತಿಸಿದ್ದಾರೆ

https://youtu.be/0z3XwAABBq8

*ಇನ್ನೂ ಐಸಿಸ್‌ನ ಚರಿತ್ರೆ ನೋಡಿ.*
*ಐ‌ಸಿಸ್ ಹೆಚ್ಚಾಗಿ ಹಿಂಸೆ ತಾಂಡವಾಡಿದ್ದು ಸುನ್ನೀ ಮುಸ್ಲಿಮರ ವಿರುದ್ಧ. ನೂರಾರು ಸುನ್ನಿಗಳ ಕೊಲೆ, ಸೂಫಿ ಸಂತರ ಹತ್ಯೆ, ಹೆಣ್ಮಕ್ಕಳ ಮಾನಭಂಗದಂತಹ  ಕ್ರೂರ ಕೃತ್ಯ ನಡೆಸಿತು. ಸುನ್ನೀ ಸ್ಮಾರಕಗಳನ್ನು, ಮಹಾತ್ಮರ ಸನ್ನಿಧಿಗಳನ್ನು, ಸುನ್ನಿ ಮಸ್ಜಿದ್‌ಗಳನ್ನು ಧ್ವಂಸ ಮಾಡಿತು. ಸಮುದಾಯದ ಹೆಸರಲ್ಲಿ ಐಸಿಸ್ ಮಾಡಿದ ರಕ್ತ ಸಿಕ್ತ ದಾಂಧಲೆಯನ್ನು ನೋಡಿ ವಹ್ಹಾಬಿಯ ಹುಟ್ಟುರಾದ ಸೌದಿ ಅರೇಬಿಯ ಕೂಡ ವಹ್ಹಾಬಿಸಂ ನಿಂದ ದೂರ ನಿಂತಿತು. ಕೆಲವೆಡೆ ಅವರ ಪುಸ್ತಕಗಳು ಬ್ಯಾನ್ ಆದವು*. 

*ಕೇರಳದಿಂದ ಕೆಲವರು ಕಣ್ಮರೆಯಾಗಿ ಸಿರಿಯಕ್ಕೆ ಹೋಗಿ ಐಸಿಸ್ ಸೇರಿದ್ದು ಇದೇ ಸಲಫಿ ಕಾರ್ಯಕರ್ತರು. ಇದನ್ನು ತಿರಸ್ಕರಿಸಲು ಸಾಧ್ಯನಾ ? ದಾಯಿಷ್ ಎಂಬ ಉಗ್ರ ಗುಂಪಿಗೆ ಕೇರಳದಿಂದ ಸಲಫಿ ಯುವಕರು ಹೋಗಿ ಸೇರಿದ್ದನ್ನು ನಿಷೇಧಿಸಲು ಸಾಧ್ಯನಾ ? ಇಂತಹ ಉಗ್ರ ಚಿಂತನೆ ಮಂಗಳೂರಲ್ಲೂ ನಡೆಯುತ್ತದೆಯೆಂಬುದನ್ನು ಕರ್ನಾಟಕದ ಸಲಫಿ ಮುಖಂಡ ಇಸ್ಮಾಯಿಲ್ ಶಾಫಿಯೇ ಬಹಿರಂಗಪಡಿಸಿದ್ದಾರೆ*.

https://youtu.be/kvdEh7rHX-o

*ಇನ್ನು ಇವರಿಗೂ ನಮಗೂ ಸಂಬಂಧವಿಲ್ಲವೆಂದು ಸಲಫಿಗಳು ಹೇಳಬಹುದು. ಸಂಬಂಧ ರಕ್ತದಲ್ಲಿ ಇದೆ. ಜಾಗತಿಕ ಮುಸಲ್ಮಾನರು ಗೌರವಿಸುವ ಪವಿತ್ರ ರೌಳಾ ಶರೀಫ ನ್ನು ಧ್ವಂಸ ಮಾಡುವುದಾಗಿ ಹೇಳಿದ್ದು ಝಕರಿಯಾ   ಎಂಬ ಉಗ್ರ ಸಲಫಿ*
https://youtu.be/52oWKR7SMU0

*ಸುನ್ನೀ ಮದರಸಗಳಲ್ಲಿ ಕಲಿಯುವ ಮಕ್ಕಳನ್ನು ಕತ್ತು ಹಿಸುಕಿ ಕೊಳ್ಳಬೇಕೆಂದು ಹೇಳಿದು ಬಾಳುಶ್ಶೇರಿ ಎಂಬ ಮತ್ತೊಬ್ಬ ಉಗ್ರವಾದಿ*
https://youtu.be/4xh0o3XLFzA

*ದೇಶಾದ್ಯಂತ ವಿರುವ ಮಹಾತ್ಮರ ದರ್ಗಾಗಳನ್ನು ನಾಶ ಮಾಡಬೇಕೆಂದು ಕರೆ ನೀಡಿದ್ದು ಉಮರ್ ಮೌಲವಿ ಎಂಬ ಮತ್ತೊಬ್ಬ ಸಲಫಿ ನೇತಾರ*.

 ಹೀಗೆ ಸಲಫಿ ಪುಸ್ತಕಗಳು, ಭಾಷಣಗಳು, ಬರಹಗಳು ಉಗ್ರವಾದಕ್ಕೆ ಪ್ರೇರಣೆ ನೀಡಿವೆ. ಸುನ್ನಿಗಳು ಮುಶ್ರಿಕರು, ಮಕ್ಕಾ ಮುಶ್ರಿಕರಿಗಿಂತ ಕಡೆ, ಎಂಬ ವಾದ ಸರಣಿಗಳೇ ಅವರನ್ನು ಭೀಕರತೆಗೆ ಕೊಂಡೊಯ್ಯುತ್ತವೆ.
ಬಾಬಾ ಬುಡನ್‌ಗಿರಿ ವಿಷಯದಲ್ಲೂ ಆರ್‌ಎಸ್‌ಎಸ್ ಪರ ನಿಲುವು ತಾಳಿದ್ದು ಇದೇ ಸಲಫಿಗಳು. ಕೇರಳದಾದ್ಯಂತ ಅನೇಕ ಭಾಗಗಳಲ್ಲಿ ಮಖ್‌ಬರ ಧ್ವಂಸ ಮಾಡಿದ ಕುಖ್ಯಾತಿ ಇದೇ ಸಲಫಿಗಳಿಗಿದೆ

*ಒಟ್ಟಿನಲ್ಲಿ ಸಲಫಿ ಚಿಂತನೆಗಳು, ಆಶಯಗಳು ಜನರನ್ನು ಉಗ್ರವಾದಕ್ಕೆ ಪ್ರೇರೇಪಿಸಿವೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಈ ಆರೋಪ ಕೇಳುವಾಗ ಸಲಫಿಗಳಿಗೆ ಮುಜುಗರವಾಗುವುದಾದರೆ ಅವರು ಸಲಫಿಸಂ ನಿಂದ ಹೊರ ಬರುವುದಲ್ಲದೇ ಬೇರೆ ಮಾರ್ಗವಿಲ್ಲ*  .

No comments:

Post a Comment