Sunday, September 29, 2019

ಇಲ್ಲೊಬ್ಬನ ಪ್ರಶ್ನೆ...
*ಸುಲ್ತಾನುಲ್ ಉಲಮಾ ಎಪಿ ಉಸ್ತಾದರನ್ನು ಗ್ರಾಂಡ್ ಮುಫ್ತಿ ಎಂದು ಘೋಷಿಸಬೇಕಾದರೆ, ಎಲ್ಲಾ ಉಲಮಾಗಳ ಅನುಮತಿ ಪಡೆಯಬೇಕಾಗಿಲ್ಲವೇ?*

ಉತ್ತರ..👇🏽

ಮಂಗಳೂರಿನ ಕೆಲವೊಂದು ಮೊಹಲ್ಲಾಗಳಿಗೆ *ತ್ವಾಖಾ ಅಹ್ಮದ್ ಮುಸ್ಲಿಯಾರ್* ರವರನ್ನು ಖಾಝಿಯಾಗಿ ನೇಮಿಸಲಾಗಿದೆ.
*ತ್ವಾಖಾ ಉಸ್ತಾದ್*  ರವರನ್ನು ಖಾಝಿಯಾಗಿ ನೇಮಿಸುವಾಗ ಆ ಮೊಹಲ್ಲಾದ ಎಲ್ಲಾ ಜನರ ಅನುಮತಿ ಪಡೆಯಲಾಗಿದೆಯಾ?
ಅಲ್ಲಿ *ತ್ವಾಖಾ ಉಸ್ತಾದ್* ರವರನ್ನು ವಿರೋಧಿಸುವ ಎಪಿ ವಿಭಾಗದವರು ಮತ್ತು ಇನ್ನಿತರ ಪಂಗಡದವರೂ ಇದ್ದಾರೆ ತಾನೇ. 
ಅಂದರೆ, ಇವರ್ಯಾರ ವಿರೋಧವನ್ನೂ ಪರಿಗಣಿಸದೆ, ಬಹುಸಂಖ್ಯಾತರ ಅಂಗೀಕಾರದೊಂದಿಗೆ *ತ್ವಾಖಾ ಉಸ್ತಾದ್* ರವರನ್ನು ಖಾಝಿಯಾಗಿ ನೇಮಿಸಲಾಗಿದೆ ಎಂಬುದಂತೂ ಸತ್ಯ.
ಅಂದರೆ, ಸಣ್ಣ ಸಂಖ್ಯೆಯ ಜನರ ವಿರೋಧವನ್ನು ಪರಿಗಣಿಸಬೇಕಾಗಿಲ್ಲ ಎಂಬುದು *ತ್ವಾಖಾ ಉಸ್ತಾದ್* ರವರನ್ನು ಖಾಝಿಯಾಗಿ ನೇಮಿಸಿದ ಕಾರಣದಿಂದ ನಮಗೆ ತಿಳಿದುಕೊಳ್ಳಬಹುದು.

ಸುಲ್ತಾನುಲ್ ಉಲಮಾ ಎಪಿ ಉಸ್ತಾದರನ್ನು "ನಾವು ಭಾರತದ ಗ್ರಾಂಡ್ ಮುಫ್ತಿಯಾಗಿ ಅಂಗೀಕರಿಸುವುದಿಲ್ಲ" ಎಂದು ವಿರೋಧಿಗಳು ಹೇಳುತ್ತಾರೆ.
*ಹಾಗಾದರೆ,  ಇದುವರೆಗೂ ಭಾರತದ ಗ್ರಾಂಡ್ ಮುಫ್ತಿ ಯಾಗಿದ್ದ ಬಹುಮಾನ್ಯ ತಾಜುಶ್ಯರೀಅ ಮುಫ್ತಿ ಮುಹಮ್ಮದ್ ಅಖ್ತರ್ ರಝಾ ಖಾನ್ ಖಾದಿರಿ, ಅಲ್ ಅಝ್'ಹರಿ ಎಂಬ ವಿದ್ವಾಂಸರನ್ನು ಈ ವಿರೋಧಿಗಳು ಗ್ರಾಂಡ್ ಮುಫ್ತಿ ಯಾಗಿ ಅಂಗೀಕರಿಸಿದ್ದರಾ?*
 ಅಥವಾ, ಇವರ ಅಂಗೀಕಾರ ಅಥವಾ ತಿರಸ್ಕಾರವನ್ನು ಹನಫಿಗಳು ಪರಿಗಣಿಸಿದ್ದರಾ? ಇಲ್ಲವಲ್ಲ.
ಅಂದಮೇಲೆ, ಎಪಿ ಉಸ್ತಾದರನ್ನು "ನಾವು ಗ್ರಾಂಡ್ ಮುಫ್ತಿಯಾಗಿ ಅಂಗೀಕರಿಸುವುದಿಲ್ಲ" ಎಂಬ ತಿರಸ್ಕಾರಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ..

ಭಾರತ ದೇಶದ ಮುಸ್ಲಿಮರ ಜನಸಂಖ್ಯೆಯ 90% ಜನರೂ ಸುನ್ನಿಗಳು. ಅದರಲ್ಲಿ 99% ಜನರು ಹನಫಿಗಳು. ಅಂದರೆ, ಇಲ್ಲಿ ಯಾವುದೇ ನಿರ್ಣಯಕ್ಕೆ ಹನಫಿಗಳ ಅಂಗೀಕಾರವೇ ಪ್ರಧಾನ.
ಭಾರತ ದೇಶದ ಪ್ರಗಲ್ಘರಾದ ಸುನ್ನೀ ಉಲಮಾಗಳು ಒಟ್ಟು ಸೇರಿ,  *ತಾಜುಶ್ಯರೀಅ* ರವರ ಉತ್ತರಾಧಿಕಾರಿಯಾಗಿ  ಶಾಫಿ ಹನಫೀ ವಲಯದಲ್ಲಿ ಮಾತ್ರವಲ್ಲದೆ, ವಿಶ್ವ ಉಲಮಾ ಒಕ್ಕೂಟದಲ್ಲೇ ಹೆಚ್ಚು ಅಂಗೀಕಾರವಿರುವ ಪ್ರಗಲ್ಭ ವಿದ್ವಾಂಸ ಬಹುಮಾನ್ಯ ಸುಲ್ತಾನುಲ್ ಉಲಮಾ ಎಪಿ ಉಸ್ತಾದರನ್ನು, ಭಾರತದ ಉಲಮಾ ಒಕ್ಕೂಟ ಗ್ರಾಂಡ್ ಮುಫ್ತಿ ಯಾಗಿ ಅವಿರೋಧವಾಗಿ ಆಯ್ಕೆಮಾಡಿದ್ದಾರೆ.

*ಗ್ರಾಂಡ್ ಮುಫ್ತಿ ವಿರೋಧಿಗಳು ಯಾರ್ಯಾರು?*
ಭಾರತದ ಮುಸ್ಲಿಮರ ಜನಸಂಖ್ಯೆಯ 5-10 ಶೇಕಡಾ ಮಾತ್ರ ನೂತನವಾದಿಗಳಿರುವುದು. ಅವರ ಮತ್ತು SK ಸಮಸ್ತದ ವಿರೋಧವನ್ನು ಬಿಟ್ಟರೆ, ಭಾರತ ದೇಶದ 90 ಶೇಕಡದಷ್ಟು ಬರುವ ಶಾಫೀ ಹನಫೀ ಸುನ್ನೀ ಪಂಗಡದವರು ಎಪಿ ಉಸ್ತಾದರನ್ನು ಅಂಗೀಕರಿಸುತ್ತಾರೆ. ಅಂದಮೇಲೆ, ಒಂದತ್ತು ಶೇಕಡಾ ಜನರ ವಿರೋಧವನ್ನು ಪರಿಗಣಿಸಬೇಕಾಗಿಲ್ಲ ತಾನೇ.
90% ಜನರ ಅಂಗೀಕಾರವನ್ನು ಪರಿಗಣಿಸಿ, ಕೇವಲ 10%  ಜನರ ಅನುಮತಿಯ ಅವಶ್ಯಕತೆ ಇಲ್ಲದೆ ಭಾರತದ ಗ್ರಾಂಡ್ ಮುಫ್ತಿ ಯಾಗಿ ಸುಲ್ತಾನುಲ್ ಉಲಮಾ ರನ್ನು  ಆಯ್ಕೆ ಮಾಡಲು ಸಾದ್ಯವಿದೆ ಎಂಬುದನ್ನು, ಮೊಹಲ್ಲಾದ ಬಹುಸಂಖ್ಯಾತರ ಅಭಿಪ್ರಾಯವನ್ನು ಪರಿಗಣಿಸಿ *ತ್ವಾಖಾ ಉಸ್ತಾದ್* ರವರನ್ನು ಖಾಝಿಯಾಗಿ ಆಯ್ಕೆಮಾಡಿದ ಮಾನ್ಯ SK ಯ ಕಾರ್ಯಕರ್ತರು ತಿಳಿದುಕೊಂಡರೆ ಒಳ್ಳೆಯದು.

*ಘೋಷಣೆ ನಡೆದದ್ದು ಗ್ರೌಂಡ್ ನಲ್ಲಿಯೇ?*
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ *SSF ನ ನವ ರಾಷ್ಟ್ರೀಯ ಸಮಿತಿ* ಯನ್ನು ಕೂಡಾ ಘೋಷಿಸಲಾಯಿತು. ಇದೇನು ಗ್ರೌಂಡ್ ನಲ್ಲಿ ಮಾಡಿದ ಆಯ್ಕೆಯೇ?. ಅಲ್ಲ. ಆಯ್ಕೆ ನಡೆಸಲು ಬೇರಯದೇ ಪ್ರಕ್ರಿಯೆ ಇದೆ. ಅಲ್ಲಿ ನಡೆದ ಆಯ್ಕೆಯನ್ನು ಸಾರ್ವಜನಿಕ ಸಭೆಯಲ್ಲಿ ಘೋಷಣೆ ಮಾಡಿದುದೆಂದು ಮಾತ್ರ.
ಅದೇರೀತಿ, ಸುಲ್ತಾನುಲ್ ಉಲಮಾ ಎಪಿ ಉಸ್ತಾದರನ್ನು ಗ್ರಾಂಡ್ ಮುಫ್ತಿ ಯಾಗಿ ಆಯ್ಕೆ ಮಾಡಿದ ಪ್ರಕ್ರಿಯೆ ಬೇರೆಯದೇ ಇದೆ. ಅದನ್ನು ಭಾರತದ ಪ್ರಮುಖ ಉಲಮಾಗಳು ಸೇರಿ ನಡೆಸಿರುವುದಾಗಿದೆ. ಅದನ್ನು ಘೋಷಿಸಿದ್ದು ಮಾತ್ರ ಒಂದು ಕಾರ್ಯಕ್ರಮದಲ್ಲಿ..

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment