Sunday, September 29, 2019

*ಉಲಮಾಗಳು ಲಾಭಕ್ಕಾಗಿ ಮಾತನಾಡಿದ್ದಾರಾ ? ಉಲಮಾಗಳು ಮುಸ್ಲಿಂ ಸಮುದಾಯವನ್ನು ಗುಲಾಮರನ್ನಾಗಿಸಿದ್ದಾರಾ ?*

*ಉಲಮಾಗಳು.., العلماء ورثة الانبياء, ಪ್ರವಾದಿಗಳ ವಾರಿಸುದಾರರಾಗಿದ್ದಾರೆ*. ಉಲಮಾಗಳು. ಅಲ್ಲಾಹನ ಪವಿತ್ರವಾದ ದೀನುಲ್ ಇಸ್ಲಾಂ ನ ಪ್ರಚಾರ ಕಾರ್ಯಚಟುವಟಿಕೆಗಳೊಂದಿಗೆ ಮನುಷ್ಯರ ಹಿದಾಯತ್ ಗೆ ಬೇಕಾಗಿ, ಅವರನ್ನು ಒಳಿತಿನ ಪಥದತ್ತ ಕೊಂಡೊಯ್ಯಲು ಅಲ್ಲಾಹನು ನಿಯೋಗಿಸಿದವರಾಗಿದ್ದಾರೆ ಪ್ರವಾದಿಗಳು. ಒಂದು ಲಕ್ಷಕ್ಕೂ ಮಿಕ್ಕ ಪ್ರವಾದಿಗಳನ್ನು ಜಗತ್ತಿನ ನಾನಾ ಕಡೆಗಳಲ್ಲಿ ಅವನ ಇಸ್ಲಾಮಿನ ಪ್ರಚಾರಕ್ಕೆ ಅಲ್ಲಾಹನು ನಿಯೋಗಿಸಿದ್ದು, ಸಾಧ್ಯವಾದಷ್ಟು ಜನರಿಗೆ ಹಿದಾಯತ್ ನ ದಾರಿಯನ್ನು ಪ್ರವಾದಿಗಳು ತೋರಿಸಿಕೊಟ್ಟಿದ್ದಾರೆ.

ಪ್ರವಾದಿಗಳ ಪೈಕಿ ಅಂತ್ಯ ಪ್ರವಾದಿ ಮುಹಮ್ಮದುರ್ರಸೂಲುಲ್ಲಾಹಿ ಸ್ವಲ್ಲಲ್ಲಾಹು ಅಲೈಹಿ ವ ಸಲ್ಲಂ. ಅವರ ನಂತರ ಮತ್ತೊಬ್ಬರು ಪ್ರವಾದಿ ಇಲ್ಲ. ಅವರ ಕಾಲದ ನಂತರ ಸ್ವಹಾಬಿಗಳು, ತಾಬಿಉಗಳು ಹೀಗೆ ದೀನಿನ ವಿಷಯ, ವಿಚಾರಗಳಲ್ಲಿ ನೇತೃತ್ವ ನೀಡುತ್ತಾ ಬಂದರು. ಸಮಕಾಲೀನ ಜಗತ್ತಿನಲ್ಲಿ ಪ್ರವಾದಿಗಳ ಸೇವೆಗಳನ್ನು ಇಲ್ಲಿ ಚಾಚು ತಪ್ಪದೇ ನಿರ್ವಹಿಸುತ್ತುತ್ತಿರುವವರು ಉಲಮಾಗಳು. ಅದಾಗಿದೆ العلماء ورثة الانبياء, ಪ್ರವಾದಿಗಳ ವಾರಿಸುದಾರರಾಗಿದ್ದಾರೆ ಉಲಮಾಗಳು ಎಂಬುದರ ತಾತ್ಪರ್ಯ.

ಮುಸ್ಲಿಂ ಸಮುದಾಯದ ಸಬಲೀಕರಣಕ್ಕಾಗಿ ಏನೆಲ್ಲಾ ಮಾಡಲು ಸಾಧ್ಯವೋ, ಪ್ರವಾದಿಗಳು ನಿರ್ವಹಿಸಿದಂತೆ ಅವೆಲ್ಲವನ್ನೂ ಉಲಮಾಗಳು ನಿರ್ವಹಿಸುತ್ತಾ ಬಂದಿದ್ದಾರೆ. ಸ್ವಂತ ಲಾಭಕ್ಕಾಗಿ ಯಾವ ಉಲಮಾಗಳು ಕೂಡಾ ಯಾವ ವಿಷಯವನ್ನೂ ಪ್ರಸ್ತಾಪಿಸಿಲ್ಲ. ಯಾವ ಮಾತುಗಳನ್ನೂ ಆಡಿಲ್ಲ. ಸ್ವಂತ ಲಾಭಕ್ಕಾಗಿ ಈ ಸಮೂಹ, ಸಮುದಾಯವನ್ನು ಗುಲಾಮರನ್ನಾಗಿಸಿಯೂ ಇಲ್ಲ. ಅದು ಎಲ್ಲರಿಗೂ ತಿಳಿದ ವಿಚಾರ. ಉಲಮಾಗಳ ಉದ್ದೇಶ ಏನಿದ್ದರೂ ಅಲ್ಲಾಹನ ಬಳಿ ಖಬೂಲಿಯತ್ ಮಾತ್ರ. ಸಮುದಾಯ ಎಂದು ಬಾಯಿ ಮಾತುಗಳಲ್ಲಿ ಹೇಳಿದ ಮಾತ್ರಕ್ಕೆ ಯಾರೂ ಸಮುದಾಯ ಪ್ರೇಮಿಗಳು ಆಗುವುದಿಲ್ಲ. ಅದನ್ನು ಮಾಡಿ ತೋರಿಸಬೇಕು. ಆ ಕಾರ್ಯಚಟುವಟಿಕೆಗಳನ್ನು ಇಲ್ಲಿ ನಿರ್ವಹಿಸುತ್ತಿರುವವರು ಉಲಮಾಗಳಾಗಿದ್ದಾರೆ. ಉಲಮಾಗಳು ಮಾತ್ರವಾಗಿದ್ದಾರೆ.

ರಾಷ್ಟ್ರದ ಉದ್ದಗಲಕ್ಕೂ ಸಾಂತ್ವನ ಕೇಂದ್ರಗಳನ್ನು ನಿರ್ಮಿಸಿ, ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿರುವವರು ಉಲಮಾಗಳು. ಅಲ್ಲಾಹನಿಗೆ ಸುಜೂದ್ ನಿರ್ವಹಿಸಲು ಸ್ಥಳಗಳು ಇಲ್ಲದವರಿಗೆ ಬೇಕಾದ ಮಸೀದಿಗಳನ್ನು ನಿರ್ಮಿಸಿ, ಧಾರ್ಮಿಕ, ಲೌಕಿಕ ವಿದ್ಯಾಭ್ಯಾಸ ಕರಗತ ಮಾಡಲು ವ್ಯವಸ್ಥೆಗಳು ಇಲ್ಲದವರಿಗೆ ಬೇಕಾದ ಮದರಸಾ, ಶಾಲೆಗಳನ್ನು ನಿರ್ಮಿಸಿ, ವಾಸಿಸಲು ಜಾಗ ಇಲ್ಲದವರಿಗೆ ಮನೆಗಳನ್ನು ನಿರ್ಮಿಸಿ, ಕುಡಿಯಲು ನೀರಿಲ್ಲದವರಿಗೆ ಬೋರ್ ವೆಲ್, ಬಾವಿಗಳನ್ನು ನಿರ್ಮಿಸಿ ಕೊಟ್ಟವರು, ಕೊಡುತ್ತಿರುವವರು ಯಾರು ? ಸಾಂತ್ವನ ಸೇವೆಗಳು ಇಲ್ಲಿಗೆ ಮುಗಿಯುತ್ತಿಲ್ಲ. ಉಲಮಾಗಳು ನೇತೃತ್ವ ನೀಡುತ್ತಿರುವ ಒಂದೊಂದು ಸಂಸ್ಥೆಗಳಲ್ಲೂ ಹತ್ತು ಸಾವಿರ, ಇಪ್ಪತ್ತು ಸಾವಿರಕ್ಕೂ ಮಿಕ್ಕ ಅನಾಥ ಬಡ ನಿರ್ಗತಿಕ ಮಕ್ಕಳ, ವಿದ್ಯಾರ್ಥಿಗಳ ಏಳಿಗೆಗೆ ಬೇಕಾಗಿ ಆಹೋ ರಾತ್ರಿ ದುಡಿಯುತ್ತಿರುವವರು, ಶ್ರಮ ಪಡುತ್ತಿರುವವರು ಯಾರು ? ಉಲಮಾಗಳು ಮಾತ್ರ. ಅದು ಉಲಮಾಗಳಿಂದ ಮಾತ್ರ ಸಾಧ್ಯ. ಕಳೆದ ದಿನ ಕೇರಳದ ಹೈ ಕೋರ್ಟ್ ನಿಂದ ಅಡ್ವಕೇಟ್ ಗಳಾಗಿ ಎನ್ ರೋಲ್ ಆದ ವಿದ್ವಾಂಸರು. ಅದು ಉಲಮಾಗಳು ಈ ಸಮುದಾಯಕ್ಕೆ ನೀಡಿದ ಕೊಡುಗೆಗಳು. ಹೀಗೆ ಹತ್ತಾರು, ನೂರಾರು, ಸಾವಿರಾರು ಕೊಡುಗೆಗಳು ಇದೆ.

ರಾಜಕೀಯ ಲಾಭಕ್ಕಾಗಿ ಉಲಮಾಗಳನ್ನು ಕೀಳು ಮಟ್ಟದ ಮಾತುಗಳಿಂದ ನಿಂದನೆ ಮಾಡುವ ರಾಜಕಾರಣಿಗಳು, ನಾಚಿಕೆಯಾಗಬೇಕು ನಿಮಗೆ. ಇವರ ಗತಿಕೇಡು ಎಂದರೆ ಬೆಂಬಲ ಯಾಚಿಸಲು ಬೇಕಾಗಿ ಮೊದಲು ಬರುವುದು ಉಲಮಾಗಳ ಬಳಿ. ರಾಜಕೀಯದವರು ರಾಜಕೀಯ ಮಾಡಿ. ಉಲಮಾಗಳ, ಧಾರ್ಮಿಕ ವಿಷಯಗಳಲ್ಲಿ ನೀವು ಕೈ ಹಾಕಬೇಡಿ. ಇಲ್ಲಿ ಈ ಸಮುದಾಯಕ್ಕೆ ನೇತೃತ್ವ ನೀಡಲು ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ರಂತಹ ಉಲಮಾ ದಿಗ್ಗಜ ಶಿರೋಮಣಿಗಳು ಇದ್ದಾರೆ. ಈ ಸಮುದಾಯಕ್ಕೆ ಬೇಕಾದ ಎಲ್ಲ ನೇತೃತ್ವ ಅವರು ನೀಡುತ್ತಾರೆ, ನೀಡುತ್ತಿದ್ದಾರೆ. ನಿಮ್ಮದು ರಾಜಕೀಯ, ನೀವು ಅತ್ತ ಗಮನಹರಿಸಿದರೆ ಸಾಕು. ಅಲ್ಲಾಹು ನಮ್ಮೆಲ್ಲಾ ಉಲಮಾಗಳಿಗೆ ಆಫಿಯತ್ ನೊಂದಿಗೆ ಧೀರ್ಘಾಯುಸ್ಸು ಕರುಣಿಸಲಿ, ಆಮೀನ್.

*-ವೀಕ್ಷಕ

No comments:

Post a Comment