*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
ಭಾಗ --17
📝 _ಮುನೀರ್ ಸಖಾಫಿ ಸಾಲೆತ್ತೂರು_
_*ಸೂತ್ರ 16:*_
*ಮನೆಯಲ್ಲಿ ನಡೆಯುವ ಸಭೆ ಸಮಾರಂಭಗಳು ಇಸ್ಲಾಮಿನ ಚೌಕಟ್ಟಿನಲ್ಲಿರಲಿ*
ಮನೆಯ ಸದಸ್ಯರೆಲ್ಲರೂ ಸೇರಿ ಸಮಾಲೋಚನೆ ನಡೆಸಿ ಸಮಾರಂಭ ನಡೆಸಬೇಕೆಂದು 16 ನೇ ಭಾಗದಲ್ಲಿ ವಿವರಿಸಿದ್ದೇನೆ.
ಸಾವಿರಾರೂ ರುಪಾಯಿ ಖರ್ಚು ಮಾಡಿ ಮಾಡುವ ಸಮಾರಂಭಗಳು ಅನಿಸ್ಲಾಮಿಕವಾದರೆ ಅಲ್ಲಾಹನ ಬಳಿ ಆ ಖರ್ಚು ಮಾಡಿದ್ದಕ್ಕೆ ಲೆಕ್ಕ ಹೇಳಬೇಕು.ಆದುದರಿಂದಲೇ ನಮ್ಮ ಸಭೆ-ಸಮಾರಂಭಗಳು ಇಸ್ಲಾಮಿಯ್ಯತ್ ನ ಚೌಕಟ್ಟು ಮೀರಿರಬಾರದು.
ಸಮಾರಂಭದ ಜವಾಬ್ಧಾರಿ ಯಾರಿಗೆ ವಹಿಸಿಕೊಟ್ಟರೂ ಮೇಲಾಧಿಕಾರಿಯಂತೆ ತಂದೆ ಅಥವಾ ಮನೆಯ ಯಜಮಾನ ಇರಲೇ ಬೇಕು.
ಕುಂದು ಕೊರತೆಗಳು ಬರುವಾಗ ಮಕ್ಕಳನ್ನು ತಿದ್ದಲು ಆ ತಂದೆಗೆ ಸಾಧ್ಯವಾಗಬೇಕು.
ಬೇಡವಾದ ಸಂಗತಿಗಳು ನಡೆದರೆ ಮಕ್ಕಳ ಕಡೆ ಬೊಟ್ಟು ಮಾಡಿ,ಏನು ಮಾಡುವುದು ಉಸ್ತಾದ್!ಮಕ್ಕಳ ಕಾರುಬಾರು.ನಾವು ಹೇಳಿದರೆ ಮಕ್ಕಳು ಕೇಳುತ್ತಾರೆಯೇ? ಎಂಬ ಮಾತು ಯಜಮಾನನ ಬಾಯಿಯಿಂದ ಬರಲೇ ಬಾರದು.
ಅದಕ್ಕಾಗಿ ಮೊದಲಿನಿಂದಲೇ ಸಮಾರಂಭಗಳಲ್ಲಿ ಅನಿಸ್ಲಾಮಿಯ್ಯತ್ ಬರದಂತೆ ಜಾಗ್ರತೆ ವಹಿಸಬೇಕು.
ಮದುವೆಯಂತಹ ಅದ್ದೂರಿ ಸಮಾರಂಭಗಳ ವೇಳೆ ಹಲವಾರು ಅನಿಸ್ಲಾಮಿಕ ಕಾರ್ಯಗಳು ನಡೆಯಬಹುದು.
ಹೆಚ್ಚಾಗಿ ಸ್ತ್ರೀ ಪುರುಷರು ಒಟ್ಟಾಗಿ ಬೆರೆಯುವ ಸಂಪ್ರದಾಯಕ್ಕೆ ಕಡಿವಾಣ ಹಾಕಬೇಕು.
ನಮ್ಮ ಮನೆಗೆ ಆಗಮಿಸುವ ಅನ್ಯ ಸ್ತ್ರೀ ಪುರುಷರು ಪರಸ್ಪರ ಕಾಣುವ ದಾರಿಗಳನ್ನು ಮುಚ್ಚಬೇಕು.
ನಮ್ಮ ಮನೆಯ ಕಂಪೌಂಡ್ ಗೆ 2 ಗೇಟ್ ಅತೀ ಮುಖ್ಯ.
1 ನೇ ಗೇಟ್ ದೊಡ್ಡ ಗೇಟಾದರೆ ಅದನ್ನು ಅಗತ್ಯದ ಸಂದರ್ಭದಲ್ಲಿ ಮಾತ್ರ ತೆರೆದರಾಯಿತು.
ಅದು ಸಮಾರಂಭಗಳ ವೇಳೆ ಪುರುಷರಿಗಾಗಿ ತೆರೆದಿಡಬಹುದು.
ಇನ್ನೊಂದು ಪುಟ್ಟ ಗೇಟ್ ಮಹಿಳೆಯರ ಬಾಗದಲ್ಲಿ ಇಡಬೇಕು.ಸಮಾರಂಭಗಳ ವೇಳೆ ಸ್ತ್ರೀಯರು ಪುರುಷರೊಂದಿಗೆ ಬೆರೆಯದಿರಲು ಇದು ಬಹಳ ಪ್ರಯೋಜನಕಾರಿ.
ನಮ್ಮ ಮನೆಯಲ್ಲಿ ಸಂಭ್ರಮ ನಡೆಯುವಾಗ ಪುರುಷರಿಗೆ ಮಹಿಳೆಯರು ಸೇರಿದ ಸ್ಥಳಗಳ ಪ್ರವೇಶವನ್ನು ನಿಷೇಧಿಸಬೇಕು.
ಪುರುಷರ ಭಾಗದ ನಿಯಂತ್ರಣ ಪುರುಷರು ಮತ್ತು ಮಹಿಳೆಯರ ಭಾಗದ ನಿಯಂತ್ರಣವನ್ನು ಮಹಿಳೆಯರಿಂದಲೇ ಮಾಡಬೇಕು.
ಮದುವೆಯೊಂದಕ್ಕೆ ಹೋದಾಗ ಪುರುಷರ ಕಡೆ ಸಪ್ಲೈ ಗೆ ಜನರೇ ಇರಲಿಲ್ಲ.
ಅವರೆಲ್ಲರೂ ಮಹಿಳೆಯರ ಕಡೆ ಸಪ್ಲೈ ಮಾಡುತ್ತಿದ್ದಾರೆ ಅಂತ ಒಬ್ಬರು ಹೇಳಿದ್ದು ನೆನಪಾಗುತ್ತಿದೆ.
ಔತಣ ಕೂಟದಲ್ಲಿ ಅನಿಸ್ಲಾಮಿಯ್ಯತ್ ಬಂದು ಸೇರಿದರೆ ವ್ಯಯಿಸಿದ ಹಣ ಮತ್ತು ಸಮಯ ಪೋಲು.ಅಲ್ಲಾಹನ ಬಳಿ ಅದಕ್ಕೆ ಉತ್ತರಿಸಬೇಕು.
ಮಾತ್ರವಲ್ಲ ಆ ಔತಣ ಕೂಟಕ್ಕೆ ಎಷ್ಟೇ ದೊಡ್ಡ ಸೆಯ್ಯಿದ್/ಆಲಿಂಗಳನ್ನು ಕರೆಸಿ ದುಆ ಮಾಡಿಸಿದರೂ ಪ್ರಯೋಜನವಾಗದು.
ಪ್ರಖ್ಯಾತ ಇಮಾಮ್ ಇಬ್ನ್ ಹಜರ್ (ರ) ತನ್ನ ತುಹ್ಫದಲ್ಲಿ ಹೇಳುವುದು ನೋಡಿ,
والظاهر أن سرها رجاء صلاح الزوجة ببركتها(تحفة)
ಲಭಿಸಿದ ಪತ್ನಿಯು ವಲೀಮದ ಬರ್ಕತ್ ನಿಂದ ಉತ್ತಮವಾಗಳು ವಲೀಮ ಇಸ್ಲಾಮ್ ಸುನ್ನತ್ ಮಾಡಿದೆ.
(ತುಹ್ಫಾ)
ಅನಿಸ್ಲಾಮಿಕ ಚಟುವಟಿಕೆಗಳು ಮದುವೆಯಲ್ಲಿ ಕೂಡಿದರೆ ಹೇಗೆ ತಾನೇ ಬರ್ಕತ್ ಲಭಿಸುವುದು?
*ನಮ್ಮ ಔತಣ ಕೂಟಗಳಲ್ಲಿ ಇವಿಷ್ಟು ಮಾಡಿ*
1.ಸಾತ್ವಿಕರನ್ನು ಆಹ್ವಾನಿಸಿ
2.ಕುಟುಂಬಸ್ಥರನ್ನು ಆಹ್ವಾನಿಸಿ
3.ಬಡವರನ್ನು ಅಹ್ವಾನಿಸಿ
4.ಕೌಟುಂಬಿಕ ಕಲಹ ಕಾರಣ ಕೋಪಿಸಿಕೊಂಡವರೊಂದಿಗೆ ರಾಜಿಯಾಗಿ ಆಹ್ವಾನಿಸಿ
5.ಬಂದವರಿಗೆಲ್ಲಾ ಊಟೋಪಚಾರ ಸಿಗುವಂತೆ ಮಾಡಿ
6.ಯಾವುದೇ ಆಹಾರಗಳು ಪೋಲಾಗದಂತೆ ನೋಡಿ
(ಒಂದು ಹೊತ್ತಿನ ಗಂಜಿ ಊಟಕ್ಕೆ ಅಲೆದಾಡುವ ಬಡವರಿದ್ದಾರೆ ಎಂಬುವುದು ನೆನಪಿರಲಿ)
7.ಬಂದ ನೆಂಟರನ್ನು ಸರಿಯಾಗಿ ಸತ್ಕರಿಸಿ
8.ಬಂದವರು ಹೊರಟು ಹೋಗುವಾಗ ಸಂತೋಷ ಪೂರ್ವಕ ಅವರನ್ನು ಕಳುಹಿಸಿ ಕೊಡಿ
9.ಬಂದ ಅತಿಥಿಗಳ ಜೊತೆ ಮನೆಯ ಸದಸ್ಯನೊಬ್ಬ ಕುಳಿತು ಆಹಾರ ಸೇವಿಸಬೇಕು.
10.ಆಹಾರದ ಮುಂಚೆ ಮನೆಯ ಸದಸ್ಯ ಮೊದಲು ಕೈ ತೊಳೆದು ಕುಳಿತುಕೊಳ್ಳಬೇಕು.
ಆಹಾರದ ನಂತರ ಎಲ್ಲರೂ ಎದ್ದ ನಂತರ ಮನೆಯ ಸದಸ್ಯ ಕೈ ತೊಳೆಯಬೇಕೆಂದು ಇಮಾಮ್ ಗಝ್ಝಾಲಿ (ರ)ವಿವರಿಸಿದ್ದಾರೆ.
*ಇದು ಮಾಡದಿರಿ*
1.ಅನ್ಯ ಸ್ತ್ರೀ ಪುರುಷರು ಬೆರೆಯುವಂತೆ ಯಾವ ಕಾರಣಕ್ಕೂ ಮಾಡದಿರಿ
2.ಸಮಾರಂಭದಲ್ಲಿ ಅನ್ಯ ಸ್ತ್ರೀಯರ ಪೊಟೋ/ವೀಡಿಯೋ ತೆಗೆಯದಿರಿ
(ನಮ್ಮ ಪತ್ನಿಯರ ವೀಡಿಯೋ ಇನ್ನೊಬ್ಬ ಮಾಡಿದರೆ ನಾವು ಸಹಿಸದಂತೆ ಇನ್ನೊಬ್ಬನ ಪತ್ನಿಯ ವೀಡಿಯೋ ನಾವು ಮಾಡಿದ್ದಲ್ಲಿ ಅವನು ಸಹಿಸಲಾರ ಎಂದು ನೆನಪಿಟ್ಟುಕೊಳ್ಳಿ)
3.ಬಂದ ಅತಿಥಿಗಳಿಗೆ ತೊಂದರೆಯುಂಟಾಗುವ ಯಾವುದೇ ಕಾರ್ಯವನ್ನು ಮಾಡದಿರಿ.
4.ಬಂದ ಆತಿಥಿಗಳನ್ನು ಕೂರಿಸಿ ಮಾಡಿಟ್ಟ ಆಹಾರ ಅವರ ಬಳಿ ಇಟ್ಟು ಬಿಡಿ.
ನಾವಾಗಿ ಅವರ ಬಟ್ಟಲಿಗೆ ಹಾಕದಿರೋಣ.ಕಾರಣ ನಮಗೆ ಇಷ್ಟವಾದ ವಸ್ತು ಆತನಿಗೆ ಹಿಡಿಸಬೇಕೆಂದಿಲ್ಲ.ಆತನಿಗೆ ಇಷ್ಟವಾದುದನ್ನು ಆತ ಹಾಕಿ ತಿನ್ನುವನು.
ಕೆಲವರು ಕೈ ತೊಳೆಯದೆ ಎಲ್ಲೆಂದರಲ್ಲಿ ಹಾಕಿದ್ದ ಕೈಯಿಂದ ಆಹಾರಗಳನ್ನು ಬಟ್ಟಲಿಗೆ ಹಾಕುತ್ತಾರೆ.ತೀರ ಅಸಹ್ಯವಾದ ಸಂಗತಿಯಾಗಿದೆ ಅದು.ಹಸಿದವನ ಬಳಿ ತಿನ್ನಿ ತಿನ್ನಿ ಎಂದು ಹೇಳಬೇಕಾದ ಅಗತ್ಯವೇನಿದೆ?
ಹಸಿದವನು ಬೇಕಾದಷ್ಟು ತಿನ್ನುವನು.
5.ಬೇಕಾದ ಆಹಾರ ಇಟ್ಟು ಬಿಡಬೇಕು.ಮನೆಯವರು ಅಲ್ಲಿ ನಿಲ್ಲಬಾರದು.ತುಂಬಾ ಹಸಿದವನ ಬಳಿ ನಿಂತು ಬಿಟ್ಟರೆ ಸಂಕೋಚದಿಂದ ಆತ ತಿನ್ನಲಾರ.
ಕೆಲವೊಂದು ಮನೆಗೆ ಹೋದರೆ ಡೈನಿಂಗ್ ಟೇಬಲ್ ನ ಬಳಿ ಮನೆಯವರೆಲ್ಲರೂ ನಿಂತು ನೋಡು ದೃಶ್ಯ ತುಂಬಾ ನಾಚಿಗೆಕೇಡು.
ಕೋರ್ಟ್ ಗೆ ಕರೆದು ಕೊಂಡು ಹೋಗುವ ಅಪರಾಧಿಯ ಸುತ್ತ ಪೋಲೀಸರು ನಿಲ್ಲುವಂತೆ ಮನೆಯವರು ನಿಂತರೆ ಬಂದ ಅತಿಥಿಗಳು ಹೇಗೆ ತಾನೇ ಆಹಾರ ತಿನ್ನುವರು?
6.ನಿಂತು ತಿನ್ನುವ ಸಂಪ್ರದಾಯಕ್ಕೆ ಕಡಿವಾಣ ಹಾಕಬೇಕು.
7.ಮದುವೆ ಮೆಹಂದಿಯ ಮನೆಯಲ್ಲಿ ಮದುಮಗಳನ್ನು ಸ್ಟೇಜ್ ಗೆ ಹತ್ತಿಸಿ ಪ್ರದರ್ಶನಕ್ಕಿಡುವುದನ್ನು ಕೊನೆಗೊಳಿಸಬೇಕು.
8.ಮದುಮಗಳಿಗೆ ಹಾರ ಹಾಕಲು ಮದುಮಗ ಹೋಗುವಾಗ ಆತನ ಗೆಳೆಯರು ಜತೆಯಾಗಿ ಹೋಗುವ ಸಂಪ್ರದಾಯ ನಿರ್ಮೂಲನೆ ಮಾಡಬೇಕು.
(ನೇರ ನೇರವಾಗಿ ಹೇಳಿದರೆ ಮದುಮಗನ ಗೆಳೆಯರು ಗಲಾಟೆ ಉಂಟು ಮಾಡಲು ಸಾಧ್ಯತೆಯಿರುವುದರಿಂದ ಮನೆಯ ಹಿರಿಯರ ಮೂಲಕ ಹಿಕ್ಮತ್ ನಿಂದ ಅದನ್ನು ಇಲ್ಲದಾಗಿಸಬಹುದು)
9.ಸಾಲ ಮಾಡಿ ಮದುವೆಯ ಮುಂಚಿನ ಮೆಹಂದಿ ಹಾಗೂ ಮದುವೆಯ ನಂತರದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕು.
ನಮ್ಮ ಸಮಾರಂಭಗಳ ಪೈಕಿ ನಮ್ಮ ಕಂಟ್ರೋಲ್ ಗೆ ಸಿಗದ ಸಮಾರಂಭ ಮದುವೆಯಾದುದರಿಂದ ಮದುವೆಯ ಬಗ್ಗೆ ಮಾತ್ರ ಸ್ವಲ್ಪ ಬರೆದೆ ಅಷ್ಟೇ.
ಎಲ್ಲಾ ಸಮಾರಂಭಗಳಲ್ಲೂ ಅಲ್ಲಾಹನ ಮತ್ತು ರಸೂಲರ ಪ್ರೀತಿ ಮಾತ್ರ ಉದ್ದೇಶಿಸಿ ಅಲ್ಲಾಹು ಇಷ್ಟಪಡುವುದನ್ನು ಮಾತ್ರ ಮಾಡಬೇಕು.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಊರಿಡೀ ಆಹ್ವಾನಿಸಿ ಎಲ್ಲರೂ ತಿಂದು ತೇಗಿ ಆಹಾರದ ಕೊರತೆಯನ್ನು ಹೇಳಿ ಮರಳಿ ಹೋದರೆ ನಿನಗೇನು ಅದರಿಂದ ಲಾಭ ಲಭಿಸಿತು?
ನಿನಗಾಗಿ,ನಿನ್ನ ಮನೆಯವರಿಗಾಗಿ ದುಆ ಮಾಡುವ ಒಬ್ಬನೂ ಆ ಪೈಕಿ ಇಲ್ಲದಿದ್ದರೆ ನಿನ್ನ ಮನೆಯಲ್ಲಿ ಸಂತೋಷ ಮತ್ತು ನೆಮ್ಮದಿಯಿರುವುದೇ?
ಮೊಹಲ್ಲಾದ ಎಲ್ಲರನ್ನೂ ಆಹ್ವಾನಿಸುವ ಕಾರ್ಯಕ್ರಮವಾದರೆ ಯಾವುದೇ ಮನೆಯು ಬಿಟ್ಟು ಹೋಗದಂತೆ ಎಚ್ಚರವಹಿಸಬೇಕು.
ನಮ್ಮ ಕಾರ್ಯಕ್ರಮಕ್ಕೆ ಬಂದು ಒಂದೊತ್ತಿನ ಊಟ ಸೇವಿಸಿದ ಮಾತ್ರಕ್ಕೆ ಅವರ ಉಳಿದ ದಿನದ ಹೊಟ್ಟೆ ತುಂಬುವುದಿಲ್ಲ.ಎಲ್ಲರನ್ನೂ ಆಹ್ವಾನಿಸಿ ಒಂದು ಮನೆ ಬಿಟ್ಟು ಬಿಟ್ಟರೆ ಅವರಿಗಾಗುವ ನೋವು ಅಷ್ಟಿಷ್ಟಲ್ಲ.
ಅದ್ಕಕಾಗಿ ಕಾರ್ಯಕ್ರಮಕ್ಕೆ ನಿಗದಿಯಾದ ದಿನದ ಎರಡು ದಿವಸಗಳ ಮುಂಚೆ ಮನೆಯಲ್ಲಿ ಒಂದು ಸಮಾಲೋಚನೆ ಅತ್ಯಗತ್ಯ.
*ಆಹಾರ ಪೋಲಾಗುವುದನ್ನು ಹೇಗೆ ತಪ್ಪಿಸುವುದು?*
ಕಾರ್ಯಕ್ರಮಕ್ಕೆ ಯಾರೆಲ್ಲ ಆಹ್ವಾನಿಸಿದ್ದಾರೋ ಅವರೆಲ್ಲಾ ಒಟ್ಟುಗೂಡಿ ಸಮಾಲೋಚನೆ ನಡೆಸಿ ಎಷ್ಟು ಮಂದಿಯನ್ನು ಆಹ್ವಾನಿಸಿದ್ದೇವೆ ಎಂಬ ಮಾಹಿತಿ ನೀಡಿದ್ದಲ್ಲಿ ಆಹ್ವಾನಿಸಬೇಕಾದ ಜನರ ಪೈಕಿ ಬಿಟ್ಟು ಹೋದದ್ದನ್ನು ತಿಳಿಯಬಹುದು ಹಾಗೂ ಎಷ್ಟು ಜನರು ಸೇರಬಹುದು ಎಂಬ ಮಾಹಿತಿಯೂ ಲಭಿಸಬಹುದು.
ಅಷ್ಟು ಜನರ ಲೆಕ್ಕ ಹಾಕಿ ಆಹಾರ ತಯಾರಿಸಬಹುದು.
ಸೆಯ್ಯಿದರೊಬ್ಬರ ಪುತ್ರನ ಮದುವೆಯ ಬಗ್ಗೆ ಒಬ್ಬರು ಈ ರೀತಿ ಹೇಳಿದರು.
"ಮದುವೆಗೆ ಆಗಮಿಸಿದವರಿಗೆ ಒಂದು ಬಟ್ಟಲು ಊಟ ಮಾತ್ರ.ಮುಗಿದ ನಂತರ ಬೇರೆ ಊಟ ಇಲ್ಲ.
ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರ ತನಕ
ಯಾರ ಬಟ್ಟಲಲ್ಲೂ ಊಟ ಬಾಕಿ ಇಲ್ಲ.ಯಾರಿಗೂ ಕೂಡಾ ಇನ್ನೂ ಊಟ ಬೇಕು ಎಂದು ಅನಿಸಲಿಲ್ಲ.
ಒಂದೇ ಒಂದು ಅಕ್ಕಿಯ ಊಟ ಪೋಲಾಗಲಿಲ್ಲ.ಆ ಸೆಯ್ಯಿದರು ಸುತ್ತಲು ನಡೆಯುತ್ತಾ ಅದನ್ನೆಲ್ಲಾ ಗಮನಿಸುತ್ತಿದ್ದರಂತೆ.
ಬಹುಷ ಆ ಸೆಯ್ಯಿದ್ ರವರ ಬರ್ಕತ್ ನಿಂದಾಗಿರಬಹುದು ಎಲ್ಲರೂ ಆ ಒಂದು ಬಟ್ಟಲು ಊಟದಿಂದ ಹೊಟ್ಟೆ ತುಂಬಿಸಿ ಈ ರೀತಿ ನಮಗೂ ಮಾಡಿ ನೋಡಬೇಕೆಂದು ಹೇಳುತ್ತಾ ಸಂತೃಪ್ತಿಯಿಂದ ಮರಳಿದರಂತೆ.
ಊರಲ್ಲಿ ಈ ಸಂಪ್ರದಾಯವಿಲ್ಲದಿದ್ದರೂ ನಮಗೂ ಟ್ರೈ ಮಾಡಿ ನೋಡಬಹುದಲ್ಲವೇ?
*ಎಲ್ಲರಿಗೂ ಶೇರ್ ಮಾಡಿ*
ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)
ಮುಂದುವರಿಯುವುದು........
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)
No comments:
Post a Comment