*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
ಭಾಗ --18
📝 _ಮುನೀರ್ ಸಖಾಫಿ ಸಾಲೆತ್ತೂರು_
_*ಸೂತ್ರ 17:*_
*ಮಕ್ಕಳ ಎದುರಲ್ಲಿ ತಂದೆ-ತಾಯಿಯ ಕಲಹ ಇಲ್ಲದಿರಲಿ*
ಮನುಷ್ಯ ಸಾಮೂಹಿಕವಾಗಿ ಜೀವಿಸುವ ಜೀವಿಯಾಗಿದ್ದಾನೆ.ಮಗುವಾಗಿದ್ದಾಗ ತಂದೆ ತಾಯಿಯ ಮತ್ತು ಯುವಕ/ಯುವತಿಯಾದಾಗ ಪತಿ/ಪತ್ನಿಯ ಆಶ್ರಯದಲ್ಲೂ ಪ್ರಾಯವಾಗುವಗ ಮಕ್ಕಳ ಆಶ್ರಯದಲ್ಲೂ ಜೀವಿಸುವವನಾಗಿದ್ದಾನೆ.
ಸಮೂಹದ ಮಧ್ಯೆ ಜೀವಿಸುವಾಗ ಕುಂದು ಕೊರತೆಗಳುಂಟಾದಲ್ಲಿ ಸಹ ಜೀವನ ನಡೆಸುವವರಿಗೆ ಕೆಲವೊಮ್ಮೆ ಹಿಡಿಸದು.ಆದುದರಿಂದಲೇ ಪರಸ್ಪರ ಅನಿಷ್ಟ ಸಂಗತಿಗಳು ನಡೆಯಲೂ ಬಹುದು.
ಪರಸ್ಪರ ವಿಶ್ವಾಸಕ್ಕೆ ತೆಗೆದು ಸ್ನೇಹ ,ಪ್ರೀತಿಯಿಂದ ಬಾಳಬೇಕು.
ಪತಿ-ಪತ್ನಿಯರ ನಡುವೆ ಸಿಲ್ಲಿ ವಿಷಯಗಳಲ್ಲಿ ಕಲಹವುಂಟಾಗುವುದು ಸಹಜ.
ಪರಸ್ಪರ ಕ್ಷಮಿಸಿ ಜೀವನ ನಡೆಸಿದರೆ ಯಾವುದೇ ತೊಂದರೆ ಬರಲಾರದು.
ಚಿಕ್ಕ ಪುಟ್ಟ ವಿಷಯಗಳಿಗೆ ಮನೆಯಲ್ಲಿ ನಾಯಿ- ಬೆಕ್ಕಿನಂತೆ ಕಚ್ಚಾಡುವ ದಂಪತಿಗಳಿದ್ದಾರೆ.
ಮಕ್ಕಳೆದುರಲ್ಲಿ ಕಚ್ಚಾಡುವ ಗುಣವಿರುವ ದಂಪತಿಗಳಾಗಿದ್ದರೆ ಖಂಡಿತವಾಗಿಯೂ ಆ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುವರು.
ಮಕ್ಕಳು ಶಾಲೆ ಮತ್ತು ಮದ್ರಸದಲ್ಲಿ ಕಲಿಕೆಯಲ್ಲಿ ಹಿಂದಿದ್ದಾರೆಂದಾರೆಂದರೆ ಇದೂ ಕೂಡಾ ಒಂದು ಕಾರಣವಾಗಿರಬಹುದು.
ಯಾವುದೇ ಕಾರಣಕ್ಕೆ ಮಕ್ಕಳ ಎದುರಲ್ಲಿ ಕಚ್ಚಾಡಬಾರದು.
ದಂಪತಿಗಳ ನಡುವೆ ಜಗಳವಿದ್ದರೆ ಅದನ್ನು ಸರಿಪಡಿಸುವ ದಾರಿಗಳನ್ನು ಇಸ್ಲಾಮ್ ಕಲಿಸಿಕೊಟ್ಟಿದೆ.ಆ ಮೂಲಕ ಅದಕ್ಕೆ ಪರಿಹಾರ ಮಾಡಬಹುದಾಗಿದೆ.
ದಂಪತಿಗಳ ನಡುವೆ ಇಬ್ಬರೂ ಹಟಮಾರಿಗಳಾಗಿದ್ದರೆ ಸರಿಪಡಿಸಲು ಕಷ್ಟಸಾಧ್ಯ.ಪತಿಯಯೊಂದಿಗೆ ಗೌರವವಿರುವ ಪತ್ನಿ ಪತಿಯೊಂದಿಗೆ ಜಗಳವಾಡಲಾರಳು.
ಪತ್ನಿಯೊಂದಿಗೆ ಸ್ನೇಹವಿರುವವನು ಪತ್ನಿಯೊಂದಿಗೆ ಜಗಳವಾಡಲಾರ.
ದಂಪತಿಗಳ ನಡುವೆ ಜಗಳವಿರುವ ಮಕ್ಕಳಿಗೆ ನೆಮ್ಮದಿ ಇರಲಾರದು.ಆ ಮನೆಯಲ್ಲಿ ಸಂತೋಷವಿರಲಾರದು.
ತರ್ಕ ಮತ್ತು ವಿವಾದಗಳು ಎಲ್ಲಿ ಸೃಷ್ಠಿಯಾಗುವವೋ ಅಲ್ಲಿ ನೆಮ್ಮದಿ ಇರಲಾರದು.
ಪವಿತ್ರ ರಂಝಾನಿನಲ್ಲಿ ಲೈಲತುಲ್ ಖದ್ರ್ ಎಂಬ ಪುಣ್ಯ ರಾತ್ರಿಯಿದೆ.ಅದು ಯಾವ ರಾತ್ರಿಯೆಂದು ಪ್ರವಾದೀ ವರ್ಯರಿಗೆ ತಿಳಿಸಿಕೊಡಲಾಗಿತ್ತು.
ಅದು ಹೇಳಲು ಸ್ವಹಾಬತ್'ನ ಬಳಿ ಪ್ರವಾದೀ ವರ್ಯರು ಬಂದಾಗ ಇಬ್ಬರು ಹಣದ ವಿಚಾರದಲ್ಲಿ ಜಗಳವಾಡುತ್ತಿದ್ದರು.
ಆ ತಕ್ಷಣವೇ ಪ್ರವಾದೀ ವರ್ಯರಿಗೆ ಆ ಪವಿತ್ರ ರಾತ್ರಿ ಯಾವಾಗ ಎಂಬುವುದು ಮರೆತು ಹೋಯಿತು.
ಇದು ಇಮಾಮ್ ಬುಖಾರಿ ವರದಿ ಮಾಡಿದ ಹದೀಸಿನಲ್ಲಿ ಇದೆ.
ಸಾಧ್ಯವಾದಷ್ಟು ತರ್ಕಗಳನ್ನು ತ್ಯಜಿಸಬೇಕು.
ಮಕ್ಕಳ ಎದುರಲ್ಲಿ ಪತ್ನಿಯನ್ನು ಅಶ್ಲೀಲ ಪದಗಳಿಂದ ಸಂಬೋಧನೆ ನಡೆಸಿದರೆ ಮಕ್ಕಳೂ ಕೂಡಾ ಆ ಮಾರ್ಗವನ್ನು ಸ್ವೀಕರಿಸುವರು.
ಮನೆಯಲ್ಲಿರುವ ಎಲ್ಲರ ಮಾತುಗಳು ಮುತ್ತಿನಂತಾಗಬೇಕು.ಕೊಳಕು ಭಾಷೆ,ಅಡ್ಡ ಹೆಸರುಗಳಿಂದ ಕೂಡಿದ ಮಾತುಗಾರಿಕೆಗಳು ಬಹಳ ಅಪಾಯ.
ಇಮಾಮ್ ಗಝ್ಝಾಲಿ (ರ)ರವರ ಇಹ್ಯಾ ಉಲೂಮಿದ್ದೀನ್ ನ 3 ನೇ ಭಾಗ 69, 70 ನೇ ಪುಟಗಳಲ್ಲಿ ಇದನ್ನು ವಿವರಿಸಿದ್ದಾರೆ.
كل مولود يولد على الفطرة فأبواه يهودانه أو ينصرانه
ಯಾವುದೇ ಮಗುವು ಹುಟ್ಟುವಾಗ ಇಸ್ಲಾಮ್ ನ ಸಂದೇಶ ಸ್ವೀಕರಿಸುವ ರೂಪದಲ್ಲಿ ಜನಿಸುತ್ತದೆ.ಅವನ ತಂದೆ ತಾಯಿ ಅವನನ್ನು ಯಹೂದಿ,ನಸ್ರಾನೀ ಮಾಡುತ್ತರೆಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ ಹದೀಸ್ ಇಮಾಮ್ ಬುಖಾರಿ ವರದಿ ಮಾಡಿದ್ದಾರೆ.
*ಎಲ್ಲರಿಗೂ ಶೇರ್ ಮಾಡಿ*
ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)
ಮುಂದುವರಿಯುವುದು........
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)
No comments:
Post a Comment