Tuesday, November 14, 2017

ವಹ್ಹಾಬಿಗಳಿಗೆ ಇಬ್ಲೀಸ್ ಬರೆದ ಪತ್ರ ಬಹಿರಂಗವಾಯಿತು..!

✍ ಎಂ. ಬದ್ಯಾರ್

ನನ್ನ ಪ್ರೀತಿಯ ವಹ್ಹಾಬಿ ಮಿತ್ರರು ಅರಿತುಕೊಳ್ಳಲು ನಾನು ನಿಮ್ಮ ಪ್ರೀತಿಯ ಇಬ್ಲೀಸ್..👹
ವಸಂತ ತುಂಬಿದ ಪುಣ್ಯ ರಬೀಉಲ್ ಅವ್ವಲ್ ಆಗತವಾಗುತ್ತಿದೆ.....😌
ಈ ತಿಂಗಳಲ್ಲಿ ನಾನು ಬೇಸರಿಸುವಂತೆ ನೀವೂ ಕೂಡ ಬೇಸರದಲ್ಲಿರುವ ಸಂಗತಿ ನನಗೆ ತಿಳಿದಿದೆ. ಅದಕ್ಕಾಗಿ ಈ ಪತ್ರ ಬರೆಯುತಿದ್ದೇನೆ.
ಪುಣ್ಯ ರಬೀವುಲ್ ಅವ್ವಲ್ ತಿಂಗಳಲ್ಲಿ ಪೂರ್ವಿಕ ಮಹಾನರು ಸೇರಿದಂತೆ ಇಂದಿನವರೆಗೂ ಬಂದ ಎಲ್ಲ ಸತ್ಯವಿಶ್ವಾಸಿಗಳು ಮೌಲೂದ್ ಪಠಿಸುವ ಮೂಲಕ ವಿಜೃಂಭಣೆಯಿಂದ ಈದ್ ಮಿಲಾದ್ ಆಚರಿಸುತ್ತಾರೆ. ಆದರೆ ಇದನ್ನು ಮೊಟಕುಗೊಳಿಸುವಲ್ಲಿ ನಮ್ಮ ಪಾತ್ರ ಇನ್ನು ಅಭಿವೃದ್ಧಿಯಾಗಬೇಕಿದೆ. ನಮ್ಮ ಈ ಮೌನ ನಿರರ್ಥಕ. ಮೌದೂದಿಗಳೊಂದಿಗೆ ಸೇರಿ ನಾವು ತಂತ್ರ ರೂಪಿಸಬೇಕು.ಉಪಯುಕ್ತ ಯೋಜನೆಗಳನ್ನು ಜಾರಿ ಮಾಡಬೇಕು.

ಅದೆಷ್ಟೋ ವರ್ಷ ಗಳ ಮುಂಚೆಯೆ ನನ್ನ ಹೆಸರು ಕೇಳುವಾಗ ಲಅನತುಲ್ಲಾಹಿ ಅಲೈಹಿ
ಎಂದು ಅವರು ಹೇಳುವಾಗ ನೀವು ಕೂಡ ಹೇಳುತ್ತೀರಿ ಎಂಬುದರಲ್ಲಿ ಖೇದವಿದೆ.
ಸುಜೂದ್ ಅಲ್ಲಾಹನಿಗೆ ಮಾತ್ರ ಎಂಬ ಉದಾತ್ತವಾದ ಸಂದೇಶವನ್ನು ಮಂತ್ರಿಸಿದಕ್ಕಾಗಿ ನಾನು ಶಪಿಸಲ್ಪಟ್ಟಿರೂದು ಎಂದು ನಿಮಗೆ ತಿಳಿದ ವಿಚಾರವಲ್ಲವೇ?
ಸಹಾಯಾಭ್ಯರ್ಥನೆ ಅಲ್ಲಾಹನಲ್ಲಿ ಮಾತ್ರ  ಎಂಬ ನಿಮ್ಮ ವಾದಕ್ಕಿಂತಲೂ ಉತ್ತಮವಾದ ಸಂದೇಶವಾಗಿತ್ತು ನನ್ನದು.
ಒಂದೇ ವಾದದೊಂದಿಗೆ ಮುಗ್ಧ ಸುನ್ನಿಗಳ ವಿಶ್ವಾಸವನ್ನು ಕಬಳಿಸಲು ಅಹರ್ನಿಶಿ ದುಡಿಯುತ್ತಿರುವ  ನಾನು ಮತ್ತು ನೀವು  ಯಾವತ್ತು ಐಕ್ಯತೆಯಿಂದ ಇರುವುದು ಒಳಿತಲ್ಲವೇ... ನಮ್ಮ ಉದ್ದೇಶ ಈಡೇರಲು ತುಂಬಾ ಸಹಕಾರಿಯಾಗುತ್ತದೆ..
ಆದಂ ನೆಬಿ (ಅ)ರಿಗೆ ಸುಜೂದ್ ಸುಜೂದ್ ತಿರಸ್ಕರಿಸಿದ್ದು ಒಂದು ಮಹಾ ಪಾಪವೆಂದು  ನನಗೆ ತೋಚುತ್ತಿಲ್ಲಾ!!! ಯಾಕೆಂದರೆ
ಅಲ್ಲಾಹ್ ಅಲ್ಲದವನಿಗೆ ಸುಜೂದ್ ನಿರ್ವಹಿಸೂದು ಶಿರ್ಕ್ ಎಂಬೂದು ನಿಮಗೆ ತಿಳಿದ ವಿಚಾರ ವಲ್ಲವೇ...?
ಇನ್ನೊಂದು ವಿಚಾರವೇನೆಂದರೆ ನಿಮ್ಮ ಮೌಲವಿಗಳ ಆದರ್ಶಕ್ಕೂ ನನ್ನ ಆದರ್ಶಕ್ಕೂ ಯಾವುದೇ ರೀತಿಯ ವ್ಯತ್ಯಾಸವಿಲ್ಲ ಎಂಬುದು ನನಗೆ ತಿಳಿದ ವಿಚಾರ .
ಅಲ್ಲಾಹು ಅವನ ಪ್ರವಾದಿಗಳ ಮೂಲಕ ಇಸ್ಲಾಮಿನ ಸುಂದರ ಆಶಯ ಆದರ್ಶಗಳನ್ನು ಪ್ರಚಾರ ಪಡಿಸಿ ಮತ್ತು ಹುತಾತ್ಮರನ್ನು, ಇಮಾಮಿಗಳನ್ನೂ  ಔಲಿಯಾ ಶ್ರೇಷ್ಠರನ್ನು ಗೌರವಿಸಬೇಕೆಂದೂ ಅವರನ್ನು ಸಹಾಯಕ್ಕಾಗಿ ಕರೆಯಬೇಕೆಂದು ಕಲಿಸಿಯೂ ಕೂಡ ನೀವು ಮಾಡದೆ ಇರುವುದು ದುರಹಂಕಾರದ ಪರಮಾವಧಿಯಲ್ಲವೇ....???
ಅಂದರೆ ನಮ್ಮ ಎರಡು ವಿಭಾಗದ ಆದರ್ಶವು ಸರಿಸಮಾನವಿದೆ ಎಂದರ್ಥ
ಕೆಲವೊಮ್ಮೆ ನೀವೂ ಹೇಳಬಹುದು,  ಅದಂ ನೆಬಿ (ಅ) ಗೌರವಿಸದಿರೂವುದು ನನ್ನ ಅಹಂಕಾರದಿಂದಾಗಿದೆ ಎಂದು.
ನಾನು ಅದನ್ನು ನಾನು ಒಪ್ಪಿಕೊಳ್ಳುತ್ತೇನೆ!
ಆದರೆ ನಿಮ್ಮ ಕಾರ್ಯವೋ... ಮಝ್ಹಬಿನ ಇಮಾಮರನ್ನೂ ಅಂಗೀಕರಿಸದೇ  ಅವರಿಗಿಂತಲೂ ಹೆಚ್ಚಿನ  ಜ್ಞಾನ ನಿಮಗಿದೆ ಎಂಬ‌ ಅಹಂಕಾರದಿಂದಲ್ಲವೇ...?
ತರಾವೀಹ್ ಇಪ್ಪತ್ತು ರಕ ಅತ್ತ್ ನಿರ್ವಹಣೆ ಮಾಡದೇ,  ಜುಮುಅಕ್ಕೆ ಎರಡು ಅಝಾನ್ ಕರೆ ಕೊಡದೇ ಇರುವುದು
ಖಲೀಪ ಉಮರ್, ಉಸ್ಮಾನ ರಿಗಿಂತಲೂ ಹೆಚ್ಚಿನ  ಜ್ಞಾನ ನಿಮಗಿದೆ ಎಂಬ ಅಹಂ ಅಲ್ಲವೇ..?
ನಿಮ್ಮ ಅಹಂಕಾರದ ಪಟ್ಟಿಗೆ ತುಂಬಾ ದೀರ್ಘವಿದೆ, ನಾನು ಈಗ ವಿವರಣೆ ಮಾಡುವುದಿಲ್ಲಾ‌...
ಆದ್ದರಿಂದ ಅಹಂಕಾರದ ವಿಷಯದಲ್ಲಿ ನನಗಿಂತಲೂ ಒಂದು ಹೆಜ್ಜೆ ನೀವೇ ಮುಂದಿದ್ದೀರಿ.... ತುಂಬಾ ಸಂತೋಷವಾಗುತ್ತಿದೆ
ನಾನು ಆದಂನನ್ನು ಮಾತ್ರ ವಾಗಿದೆ ನಿಂದಿಸಿರುವುದು.. ಅದರೆ ನೀವೊ...!
ಸ್ವಹಾಬಿಗಳನ್ನು, ತಾಬಿಗಳನ್ನು ಲಕ್ಷ ಗಟ್ಟಲೇ ಹದೀಸ್ ಕಂಠಪಾಠ ಮಾಡಿದ ಇಮಾಮರುಗಳನ್ನು, ಔಲಿಯಾಗಳನ್ನು, ಶುಹದಾಗಳನ್ನು,‌ ಉಲಮಾಗಳನ್ನೂ...!
ಎಲ್ಲಾ ಒಳಿತುಗಳೂ ಸ್ವೀಕರಿಸಲ್ಪಡುವುದು ನಿಯ್ಯತ್ ಮೂಲಕ ಎಂದಲ್ಲವೇ ಇಸ್ಲಾಂ ಕಲಿಸುವುದು.. 
ಅದಕ್ಕಾಗಿ ಅವರ ನಿಯ್ಯತ್ತನ್ನೇ ಇಲ್ಲವಾಗಿಸಲು ಹಲವಾರು ರೀತಿಗಳಲ್ಲಿ ನಾನು  ಪ್ರಯತ್ನಿಸಿದೆ, ಆದರೆ ನೀವು  ಉಪವಾಸಕ್ಕೂ, ನಮಾಝಿಗೂ, ವುಝೂವಿಗೂ ಯಾವುದಕ್ಕೂ ನಿಯ್ಯತ್ತು ಅಗತ್ಯವಿಲ್ಲ ಎಂದು ಕಲಿಸಿಕೊಟ್ಟು ನನ್ನ ದಾರಿಯನ್ನು ಸುಗಮಗೊಳಿಸಿದ್ದೀರಿ... ನಿಮಗೆ ಹೇಗೆ ಧನ್ಯವಾದ ತಿಳಿಸಲಿ ಎಂದು ತೋಚುತ್ತಿಲ್ಲ..
ಇನ್ನು ಸ್ವಲಾತ್ ಹೇಳುವುದಂತೂ ಕೇಳುವಾಗ ನನ್ನ ಮೈಯೆಲ್ಲಾ ಉರಿಯುತ್ತದೆ..... ಅದನ್ನು ಇನ್ನಿಲ್ಲದಂತೆ ಮಾಡಲು ಹಲವಾರು ರೀತಿಯ ಕುತಂತ್ರ ಪ್ರಯೋಗಿಸಿದೆ. ಆದರೆ ನೀವು ಸ್ವಲಾತ್ ಮಜ್ಲಿಸ್, ಝಿಕ್ರ್ ಹಲ್ಕ ಬಿದ್ಅತ್ ಅಗಿದೆ ಎಂದು ಹೇಳುತ್ತಾ ನನ್ನ ಬೆಂಬಲಕ್ಕೆ ನಿಂತಿದ್ದೀರಿ..... ನಿಮ್ಮ ಈ ಬೆಂಬಲ ಹೀಗೆ ಮುಂದುವರಿಯಲಿ ಎಂದು ಹಾರೈಸುತ್ತೇನೆ...
ಒಟ್ಟು ಸೇರಿ ಸ್ವಲಾತ್ ಹೇಳುವುದನ್ನು ವಿಮರ್ಷನೆ ಮಾಡುತ್ತಿರುವ ನೀವುಗಳು ಒಬ್ಬಂಟಿಯಾಗಿಯೂ ಸ್ವಲಾತ್ ಹೇಳುತ್ತಿಲ್ಲವಲ್ಲಾ  ಎಂಬುದರಲ್ಲಿ ಅಪಾರ ಸಂತೋಷವಿದೆ... ಹೀಗೆ ಮುಂದುವರಿಯಲಿ ನಿಮ್ಮ ಪಯಣ, ನಿಮ್ಮ ಅಂಗರಕ್ಷಕನಾಗಿ ನಾನು ಇಬ್ಲೀಸ್ ಸದಾ ಇರುತ್ತೇನೆ.
ಅದೇ ರೀತಿ ರಮಲಾನಿನಲ್ಲಿ ಹನ್ನೊಂದು ರಕ ಅತ್ತ್ ಗಿಂತಲೂ ಹೆಚ್ಚು ನಮಾಝ್ ನಿರ್ವಹಣೆ ಮಾಡಿದರೆ ನರಕಕ್ಕೆ ಹೋಗುತ್ತಾರೆ ಎಂದು ಹೇಳುವ ನಿಮ್ಮನ್ನು ನಾನು ಹೇಗೆ ಅಭಿನಂದಿಸದಿರಲಿ...?
ಅಲ್ ಪಾತಿಹ ಎಂದು ಕುರಾನ್ ಪಠಿಸುವಾಗ ನನಗಿಂತಲೂ ವೇಗವಾಗಿ ನೀವು ಓಡುವುದು ಕಾಣುವಾಗ ನನ್ನ ಸಂತೋಷಕ್ಕೆ ಪಾರವೇ ಇರುವುದಿಲ್ಲ...
ನನ್ನ ಸೈನ್ಯದ ರುಂಡ ಮುಂಡ ಚೆಂಡಾಡಿದ ಬದರ್ ದಿನ, ಮಿಅ್ರಾಜ್ ರಾತ್ರಿ ಬರಾ ಅತ್ ರಾತ್ರಿ ಮುಂತಾದ ಪುಣ್ಯ ರಾತ್ರಿಗಳಲ್ಲಿ ಆರಾಧನೆಯಲ್ಲಿ ತಲ್ಲೀನರಾಗುವವರನ್ನು ಕಾಣುವಾಗ ನಾನು ಬೇಸರದಿಂದ ತಲೆ ತಗ್ಗಿಸುತ್ತೇನೆ, ನನ್ನ ಅಟ್ಟಹಾಸ ಮುಗಿಲು ಮುಟ್ಟುತ್ತದೆ...
ಆದರೆ ಆ ದಿವಸಗಳಿಗೆ ಪ್ರಾಮುಖ್ಯತೆ ಇಲ್ಲ ಎಂದು ಹೇಳಿ ನೈಜ ವಿಶ್ವಾಸಿಗಳನ್ನು ವಂಚಿಸಿ ಸುನ್ನತ್ ಉಪವಾಸವನ್ನು, ಅವರ ಆರಾಧನೆ ಗಳನ್ನು ಮೊಟಕುಗೊಳಿಸುವ  ನಿಮ್ಮನ್ನು ನಾನು ಹೇಗೆ ಅಭಿನಂದಿಸದಿರಲಿ ಎಂದು ಅರ್ಥವಾಗುತ್ತಿಲ್ಲ..

ಇಷ್ಟು ನಾನಿಲ್ಲಿ ಬರೆದಿರೂದು ಒಂದೇ ಆದರ್ಶ ಆಶಯವು ಇರುವ ನಾವುಗಳು ಐಕ್ಯತೆಯಿಂದ ಬಾಳುವವರಾಗಬೇಕು  ಎಂದು ತಿಳಿಸಲು ಮಾತ್ರವಾಗಿದೆ.

ಮುಂದಿನ ದಿನಗಳಲ್ಲಿ ಮೌದೂದಿ, ತಬ್ಲೀಗರನ್ನು ಒಗ್ಗೂಡಿಸುವ ರಣತಂತ್ರವನ್ನು ರೂಪಿಸುತ್ತಿದ್ದೇನೆ.
ಐಕ್ಯತೆಗೆ ತಯ್ಯಾರಿ ಇರುವ ಎಲ್ಲರನ್ನು ಒಟ್ಟು ಸೇರಿಸಿ ಒಂದಾಗಿ ನಾವು ಬಾಳಬೇಕು ...
ನಾಳೆ ಮಹ್ಶರಾದಲ್ಲಿ ಮನುಷ್ಯ ರು ಸಹಾಯ ಅಭ್ಯರ್ತನೆ ನಡೆಸಿ ಪ್ರವಾದಿಗಳ ಹಿಂದೆ ನಡೆಯುವರು.
ಅದ್ದರಿಂದ ಅದು ಶಿರ್ಕೇಂದು ನನಗಿಂತ ಹೆಚ್ಚಾಗಿ ನಿಮಗೆ ಗೊತ್ತಿದೆ ಅಲ್ಲವೇ..?
ಆವಾಗಲೂ ಅದೇ ಆಶಯ ಆದರ್ಶದಲ್ಲಿ ಮುನ್ನುಗ್ಗುವವರಾಗಬೇಕು...

ನಿಮ್ಮನ್ನು ಮುಟ್ಟಿಸುವಲ್ಲಿಗೆ ಮುಟ್ಟಿಸೂದರಲ್ಲಿ ನಾನು ಸಫಲನಾಗಿದ್ದೇನೆ......

🌹🌹🌹🌹🌹🌹

ಮೂಲ: ಮಳಯಾಲಂ
✍ ಕನ್ನಡಕ್ಕೆ: ಮರ್ಝೂಕ್ ಬದ್ಯಾರ್

No comments:

Post a Comment