🏵 *ಪ್ರವಾದಿ ಸಂದೇಶ*🏵
🌀 *ಆಲೋಚಿಸುವವರಿಗೆ*🌀🌀🌀🌀🌀🌀🌀🌀🌀 *ದೃಷ್ಟಾಂತವಿದೆ.*🌀🌀
*بِسْمِ اللّٰهِ الرَّحْمَانِ الرَّحِيمْ*
*ಸಂಚಿಕೆ -4⃣*
*ಮೊಸಳೆ ಬಾಯಿ ಮುಚ್ಚಿ ಹಕ್ಕಿ ಸತ್ತು ಹೋಗದಂತೆ ಮುಳ್ಳಿನಿಂದ ಸಂರಕ್ಷಣೆ ನೀಡಿದವನಾದರೂ ಯಾರು..? ಚಿಂತಿಸುವವರಿಗೆ ಅನೇಕಾರು ದೃಷ್ಟಾಂತಗಳಿವೆ. ಇದು ದೇವರಿಂದಲ್ಲದೇ ಸಾಧ್ಯವಿಲ್ಲ. ಅದೂ ಏಕದೇವನಿಂದ ಮಾತ್ರ. ಇಬ್ಬರು ದೇವರಾದರೆ ಅಲ್ಲಿ ಅವರ ನಡುವೆ ತರ್ಕಗಳೇ ಮುಗಿಯಲಾರದು. ಒಬ್ಬ ಮಳೆ ವರ್ಷಿಸಲು ಮುಂದಾಗುವಾಗ ಮತ್ತೊಬ್ಬ ಬಿಸಿಲು ನೀಡಲು ತೀರ್ಮಾನಿಸಿದರೆ.? ಒಬ್ಬ ರಾತ್ರಿಯಾಗಿಸಲು ಬಯಸಿದಾಗ ಇನ್ನೊಬ್ಬ ಹಗಲಾಗಿಸಲು ಮುಂದಾದರೆ.? ಇಡೀ ಪ್ರಪಂಚದ ತಾಳವೇ ತಪ್ಪಿ ಹೋಗಬಹುದು. ಒಂದು ಮನೆಗೆ ಇಬ್ಬರು ಯಜಮಾನರಿದ್ದರೆ, ಒಂದು ರಾಜ್ಯಕ್ಕೆ ಎರಡು ಮುಖ್ಯಮಂತ್ರಿಯಿದ್ದರೆ, ಆ ಮನೆಯ, ಆ ರಾಜ್ಯದ ಸ್ಥಿತಿಯೇನಾಗಬಹುದು.? ಯಾವುದೇ ಅಭಿವೃದ್ದಿ ಕಾರ್ಯಗಳೂ ನಡೆಯದೆ ಸದಾ ತರ್ಕವಿತರ್ಕಗಳು, ಗೌಜಿ ಗದ್ದಲಗಳೇ ತುಂಬಿ ಹೋಗಬಹುದು. ಆದ್ದರಿಂದ ನಿಜವಾದ ಏಕದೇವನಲ್ಲಿ ವಿಶ್ವಾಸ ತಾಳುವುದಲ್ಲದೇ ಮನುಷ್ಯನಿಗೆ ನಿರ್ವಾಹವಿಲ್ಲ. ಆಕಾಶ ಭೂಮಿಗಳಿಗೆ ಅಲ್ಲಾಹನಲ್ಲದೇ ಬೇರೆ ದೇವರಿದ್ದಿದ್ದರೆ ಎಲ್ಲವೂ ನಾಶವಾಗಿ ಹೋಗುತ್ತಿತ್ತು. ಎಂದು ಖುರ್ ಆನ್ ವಿವರಿಸಿದೆ.*
*ಮನುಷ್ಯನು ತನ್ನ ಬುದ್ಧಿ ಉಪಯೋಗಿಸಿ ಏಕದೇವನ ಅಸ್ತಿತ್ವವನ್ನು ಮನಗಾಣಬೇಕಿದೆ. ಪ್ರಪಂಚಕ್ಕೆ ದೇವರೇ ಇಲ್ಲ ಎಂಬ ನಾಸ್ತಿಕ ವಾದದಿಂದಲೂ ಕಲ್ಲು ಮುಳ್ಳುಗಳಲ್ಲಿ ದೈವತ್ವವನ್ನು ಕಾಣುವ ಅಂಧವಿಶ್ವಾಸಗಳಿಂದಲೂ ಹೊರಬಲಬೇಕಿದೆ. ಯಾರೋ ಹೇಳಿಕೊಟ್ಟ ವಿಶ್ವಾಸಗಳನ್ನು ಪಾಲಿಸುವುದಕ್ಕಿಂತ ತಂದೆ ತಾಯಿಗಳ ಪರಂಪರಾಗತ ವಿಶ್ವಾಸವನ್ನು ಅವಲಂಬಿಸುವುದಕ್ಕಿಂತ ತಾನು ನಂಬಿರುವ ವಿಶ್ವಾಸವೂ ಸರಿಯೋ ತಪ್ಪೋ ಎಂದು ಬುದ್ಧಿ ಉಪಯೋಗಿಸಿ ಆಲೋಚಿಸುವ ಹಂತಕ್ಕೆ ತಲುಪಬೇಕು. ತನ್ನ ಬುದ್ಧಿಯನ್ನು ಯಾರದೊ ಕಾಲಡಿಯಲ್ಲಿ ಒತ್ತೆಯಿಡಲೇಬಾರದು. ಅತ್ಯಂತ ವ್ಯವಸ್ಥಾಪಿತವಾಗಿ ರೂಪಿಸಲ್ಪಟ್ಟ ಪ್ರಪಂಚವೂ ಸ್ವಯಂ ತಾನೇ ನಿರ್ಮಿತವಾಯಿತು ಎಂಬ ವಾದಕ್ಕೆ ಒಗ್ಗಿಕೊಲ್ಲಳು ಬುದ್ಧಿಯಿರುವವನಿಗೆ ಹೇಗೆ ತಾನೇ ಸಾಧ್ಯ..? ಒಂದು ಸಣ್ಣ ಗ್ಲೋಬ್ ಕೂಡಾ ಸ್ವತಃ ಉಂಟಾಗಲು ಸಾಧ್ಯವಿಲ್ಲ.*
*ಒಂದು ಸಣ್ಣ ಗಾರ್ಡನ್, ಮನೆ, ಕಟ್ಟಡ ಯಾವುದೂ ಕೂಡಾ ತಾನಾಗಿಯೇ ಉಂಟಾಗದು ಹೀಗಿರುವಾಗ ಹೇಗೆ ತಾನೇ ಅತೀ ಸಂಕೀರ್ಣವಾದ ಈ ಪ್ರಪಂಚ ಸೃಷ್ಟಿಕರ್ತನಿಲ್ಲದೇ ಉಂಟಾಗುವುದು..!?*
*{ಮುಂದುವರೆಯುವುದು}*
No comments:
Post a Comment