Tuesday, February 13, 2018

📚📚📚📚📚📚📚📚📚📚📚📚
*ಅನಂತ ಸಾಗರವಿದು....*

                     *🚇(ಯಾತ್ರಾ ಡೈರಿ)🚇*
          *ಹೌದು* ಇದು ಕೇರಳ ಕೋಝಿಕ್ಕೋಡ್ ಕುಟ್ಯಾಡಿ ಎನ್ನುವ ಪ್ರದೇಶ. ಒಂದೇ ಒಂದು  ಸುನ್ನೀ ಮಸೀದಿ,ಸಂಸ್ಥೆಗಳು ಇಲ್ಲದ ಸಮಯ,ಟೊಪ್ಪಿ ಧರಿಸಿದವನ ಕಂಡರೆ ಕಂಡಲ್ಲಿ ಕೊಲೆಗೈಯ್ಯುವ ನಿಮಿಷ,ಅಜ್ಞಾನದ ಜ್ಞಾನ ಮಾತ್ರ ಪಸರಿಸಲು ಅವಕಾಶವಿದ್ದ ಸಂದರ್ಭ. ಕೇವಲ ಬೆರಳೆಣಿಕೆಯ ವಿದ್ಯಾರ್ಥಿಗಳೊಂದಿಗೆ  ಕುಟ್ಯಾಡಿಯ ಹೃದಯ ಭಾಗದಲ್ಲಿ ಸಣ್ಣ ಗುಡಿಸಲಿನಲ್ಲಿ ಪ್ರಾರಂಭಗೊಂಡ ಸಿರಾಜುಲ್ ಹುದಾ ಎನ್ನುವ ಸಂಸ್ಥೆಯಿಂದು ಭಾಹುಳ್ಯವಾಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯನ್ನು ನೀಡಿ ಅವರ ಭವಿಷ್ಯವನ್ನು ಬೆಳಗಿಸುವಲ್ಲಿ ಯಶಸ್ವಿಯಾಗಿ,ಜ್ಞಾನದ ಕೋಟೆಯನ್ನೇ ಕಟ್ಟಿದೆ.

*ನವೀನರ ಪೊಳ್ಳಿಗೆ ಕಲ್ಲು*

ಕುಟ್ಯಾಡಿ, ನಾದಾಪುರಂ ಎನ್ನುವ ಪ್ರದೇಶ ಸುಪ್ರಸಿದ್ಧ ನಾಡು.ಬಿದ'ಈ ಆಶಯಗಳು
ಪಸರಿಸುವ ಬೀಡು.
ಅವರವರದೇ ಆದ ನವ ಆದರ್ಶ ವಾದಗಳು ಜನರಮುಂದಿಟ್ಟು ಈಮಾನಿಗೆ ತಕರಾರಿರಿಸಿ ಬೊಬ್ಬಿರಿಸುತ್ತಿರುವಾಗ
ಸುನ್ನೀ ಜಗತ್ತು ಕಂಡ ನಾಯಕ,
ಉಲಮಾ ದಿಗ್ಗಜರುಗಳ ಶಿಷ್ಯತ್ವ ಲಭಿಸಿದ ಗಣ್ಯ ವ್ಯಕ್ತಿತ್ವ,ಎಳೆಯ  ಪ್ರಾಯದಿಂದಲೇ ಆದರ್ಶ ತರಗತಿಯಲ್ಲಿ ತೇರ್ಗಡೆಯಾದ ಅಪ್ರತಿಮ,ಕೇರಳ ಕರ್ನಾಟಕ ವೆಂದಲ್ಲ ದೇಶ,ವಿದೇಶಕ್ಕೆ ವಿದ್ಯೆ ಹಬ್ಬಿಸುವ ಮಹನೀಯ ಗುರು

*ಶೈಖುನಾ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದ್*

ಧಾರ್ಮಿಕ ತಿಳುವಳಿಕೆಯ ಕೊರತೆಯಿಂದ ಅಧಾರ್ಮಿಕತೆಯ ಹಾದಿ ತುಳಿಯುತ್ತಿದ್ದ ಸಮುದಾಯಕ್ಕೆ ಧಾರ್ಮಿಕ ಅರಿವನ್ನು ಕಲಿಸಿಕೊಟ್ಟ ಸರಸಾಟಿಯಿಲ್ಲದ ಪ್ರಭಾಷಣಕಾರ.
ಅದೆಷ್ಟೋ ಪ್ರಭಾಷಣಕಾರರನ್ನು ಸೃಷ್ಟಿಸಿದ ಭಾರತದ ಮಣ್ಣಿಗೆ  ಸರಿಸುಮಾರು ಅರ್ಧ ದಶಕಗಳಷ್ಟು ಕಾಲ ಅದೇ ಶೈಲಿ ,ನಿರರ್ಗಳವಾದ ಮಾತುಗಾರಿಕೆ, ಅದೆಂತಹ ಕಲ್ಲು ಮನಸ್ಸುಗಳನ್ನು ಕರಗಿಸಬಲ್ಲ ವಾಕ್ಚಾತುರ್ಯಗಳಿಂದ ಸಹಸ್ರಾರು ಜನರನ್ನು  ಭಾಷಣದತ್ತ ಸೆಳೆದ ಅಪ್ರತಿಮ ವಾಗ್ಮಿ  ಪೇರೋಡ್ ಉಸ್ತಾದರ ಭಾಷಣ ಕೇಳಲು ಅದೆಷ್ಟೋ ಕಿಲೋ ಮೀಟರ್ ಗಟ್ಟಲೆ ಹೋಗಲು ತಯಾರಿರುವ ಜನರನ್ನು ಇಂದಿಗೂ ನಮಗೆ ಕಾಣಿಸಲು ಸಾಧ್ಯ. ಕಳೆದ ಮೂರೂವರೆ  ದಶಕಗಳಿಂದ ಭಾಷಣರಂಗದಲ್ಲಿ  ಅದೆಷ್ಟೋ ವೇದಿಕೆಗಳಲ್ಲಿ ಸುದೀರ್ಘವಾದ ಭಾಷಣಗಳನ್ನು ನಡೆಸುತ್ತಾ ಬಂದಿರುವ ಉಸ್ತಾದರ ಭಾಷಣಗಳನ್ನು ಕೇಳಲು ಇಂದಿಗೂ ಸಹಸ್ರಾರು ಜನರು ಕಾದು ಕುಳಿತಿರುತ್ತಾರೆ ಅಂದರೆ ಅವರ ಪ್ರಭಾಷಣಗಳು ಕೇಳುಗರ ಮನಸ್ಸುಗಳನ್ನು ಅದೆಷ್ಟು ಆಕರ್ಷಣೆಗೊಳಿಸುತ್ತದೆಯೆನ್ನುವುದನ್ನು ಅರ್ಥೈಸಲು ಸಾಧ್ಯವಾಗಬಹುದು.
ರಾತ್ರಿ-ಹಗಲೆನ್ನದೆ ತುಸು ವಿಶ್ರಾಂತಿಯಿಲ್ಲದೆ ಹಗಲಿರುಳು ದೀನೀ ಪ್ರಚಾರ ರಂಗದಲ್ಲಿ ಮುಂದೆ ನಿಂತು  ಜನಮನಕ್ಕೆ ಸತ್ಯದ ತಂತಿಯನು ನಾಟಿ,ವಿಷ ಬೀಜದ ಆಹಾರದ ರಸವನ್ನು ಉಗುಳಿಸಿ ಸನ್ಮಾರ್ಗದ ಸುಗಮ ಹಾದಿಯೊಳು ತಲುಪಿಸಿದ ಭದ್ರತಾ ಕವಚವೆನ್ನಬಹುದು ಈ ಉಸ್ತಾದ್.

*ಉಲಮಾರುಗಳ ನೇತೃತ್ವದಲ್ಲಿ*

ಈ ಮಣ್ಣು ಹಲಗಣ್ಯರುಗಳ ಪಾದಬಿಂಬವುಳ್ಳ ಕಣ್ಣು
ತಾಜುಲ್ ಉಲಮಾ,ನೂರುಲ್ ಉಲಮಾ,ರ'ಈಸುಲ್ ಉಲಮಾ,ಝೈನುಲ್ ಉಲಮಾರಂತಹ ಅಗ್ರಗಣ್ಯ ಉಲಮಾರುಗಳ ಸವಿನೋಟ ಬೆಸೆದು ಈ ಸಂಸ್ಥೆಯ ಉನ್ನತಿಯ ನೋಟ ವಿರಿಸಿದರು ಈ ಮಹನೀಯರು

*ಮೊಳಕೆಯೊಡೆದು ರೆಂಬೆಗಳು ಸಮಾಜಕ್ಕೆ*

ಸಹಸ್ರಾರು ವಿದ್ಯಾರ್ಥಿಗಳು,ಮುತಲ್ಲಿಮರು ಅವರದೇ ಆದ ಜ್ಞಾನವನು ಜನಸಮೂಹಕ್ಕರ್ಪಿಸಲು ಮುಂದಾಗುವ ಪ್ರತಿಭೆಗಳು ಕೇರಳ,ಕರ್ನಾಟಕದುದ್ದಕ್ಕೂ ಜ್ಞಾನರಶ್ಮಿಯು ಪಸರಿಸಿ ಸಮಾಜದ ಅಭಿವೃದ್ಧಿಗೆ ಭಾಗಿಯಾಗಿ ಜನಸಮುದಾಯವನ್ನು ಒಳಿತಿನೆಡೆ ಮುನ್ನುಗ್ಗಿಸಿ ವಿದ್ಯಾಧಾಹಿಗಳ ದಾಹವನ್ನು ನೀಗಿಸಿದರು.ಆದರ್ಶ ರಂಗದಲ್ಲೂ,ಬರಹಲೋಕದಲ್ಲೂ,ಪ್ರಭಾಷನದಲ್ಲೂ ಉತ್ತುಂಗಕ್ಕೇರಿ ಈ ಸಂಸ್ಥೆಯ ಅಭಿಮಾನಕ್ಕೆ ಮುಖ್ಯ ಕಾರಣರಾಗಿದ್ದಾರೆ. ಕರುಣಾಡ ಮಣ್ಣಿನ ಕಣ್ಮಣಿಗಳಾದ  ಸ್ವಲಾಹುದ್ದೀನ್ ಸಖಾಫಿ,ಶರೀಫ್ ಸಖಾಫಿ ಮಾಣಿ ದರ್ಸ್ ರಂಗದಲ್ಲಿ,ಬೇಂಗಿಲ ಸಿದ್ದೀಕ್ ಸಖಾಫಿ, ಮೆದು ಮದನಿ, ಇಸ್ಹಾಖ್ ಸುಹ್ರೀ ಸೂರಿಂಜೆ ರಂತಹಾ ಸಾಹಿತಿಗಳು ಬರಹದಲ್ಲೂ,ನವಾಝ್ ಸಖಾಫಿ ಕಾಜೂರು ಪ್ರಭಾಷನ ವೇದಿಕೆಯಲ್ಲೂ, ಅಬ್ದುಲ್ ರಶೀದ್ ವಿಟ್ಲ ರವರ ಆದರ್ಶ ರಂಗದ ಮುಖಾಮುಖಿಯೂ ಆವೇಶಭರಿತವಾಗಿದೆ.
ಎಲ್ಲಾ ವಿಷಯಕ್ಕೂ ತಗ್ಗು ಬಗ್ಗದೆ ಮುಂದೆ ನಡೆಯುತ್ತಿದೆ ಈ ಸಂಸ್ಥೆ.

*ಸನ್ಮಾರ್ಗದ ದಾರಿದೀಪ*
  *ಸಿರಾಜುಲ್ ಹುದಾ*

ಹೆಸರಿಗೆ ಮಾತ್ರವಲ್ಲ ಇದು ಸನ್ಮಾರ್ಗಕ್ಕೆ ದಾರಿದೀಪ.ಅಂದಿದ್ದ ಕಾರ್ಗತ್ತಲ ಪ್ರದೇಶವನ್ನು ವಿಜ್ಞಾನದ ಬೆಳಕನ್ನಾಗಿ ಪರಿವರ್ತಿಸಿ ಬಡಜನ, ಅನಾಥರುಗಳಿಗೆ ನಂದಾದೀಪವಾಗಿ ಅವರ ಬಾಳಿಗೆ ಬೆಳ್ಳಿದೀಪವನ್ನುರಿಸಿ ಸದಾ ಯಶಸ್ವಿಯತ್ತ ಸಾಗುವ ಈ ಸುಂದರ ಸಮುಚ್ಚಯ ಇಂದು ೨೬ ರ ಹೊಸ್ತಿಲಲ್ಲಿರುವಾಗ ಸಾವಿರಕ್ಕೂ ಮಿಕ್ಕ ಉಲಮಾರುಗಳನ್ನು ಸಮಾಜಕ್ಕರ್ಪಿಸಿದೆ ಈ ಸಂಸ್ಥೆ.

*ನಾ ಕಂಡ ರಮಣೀಯತೆ*

ಇಲ್ಲಿಗೆ ಬಂದವರಿಗೇ ಗೊತ್ತು ಇದರ ಮಹಿಮೆ ಅಬ್ಬಾಬ್ಬಾ ಹೇಗೆಂದು ಬಣ್ಣಿಸಲಿ ಇಲ್ಲಿಯ ಪ್ರಕೃತಿ ಸೊಬಗನ್ನು,ಅಲ್ಲಲ್ಲಿರುವ ಮರಗಳು,ಕೃಷಿಗಳು,ಗಿಡಗಳು,೨-೩ ಹಂತಸ್ತಿನ ವಿದ್ಯಾಲಯವು ಕಂಡು ಕಂಗೊಳಿಸಿತು.ಬರೀ ಎರಡು ದಿನದ ಕ್ಲಾಸ್ ನಿಮಿತ್ತ ಪ್ರಯಾಣದಲ್ಲಿ ಹಲವು ವಿಸ್ಮಯಗಳಿಗೆ ಈ ಕಣ್ಣು ಸಾಕ್ಷಿಯಾಯಿತು.ಇಲ್ಲಿಯ ವಿದ್ಯಾರ್ಥಿಗಳಾದರೆ ಸೌಮ್ಯನಡತೆ,ಶ್ವೇತ ವಸ್ತ್ರದಾರಿಯಾಗಿ ಸಾಲುಸಾಲಾಗಿ ಬರುವಾಗ ನೋಡು
ಗರ ದೃಷ್ಟಿಗೆ ದುನಿಯಾ ಸ್ವರ್ಗದಂತೆ ಈ ಸಂಸ್ಥೆ ತೋಚುತ್ತದೆ.

*✍🏽ಸಿ.ಎ.ಎನ್ ಚಾರ್ಮಾಡಿ*

No comments:

Post a Comment