😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰 🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 2⃣7⃣
**********************
*صَـلــُّوا عَـلَـى النَّبِيِّ ﷺ وَآلـِهِ*
*اللَّهُمَّ صَلِّ عَلَى سَيِّدِنَا مُحَمَّدٍ*
*وَعَلَى آلِ سَيِّدِنَا مُحَمَّدٍ*
*وَبَارِكْ وَسَلِّمْ عَلَيْه*
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔
ಪತಿ ಅಬ್ದುಲ್ಲನ ಮಾತು ಕೇಳಿ ಅಧೀರರಾದ ತುವಾಅ(ರ) ಕಂಬನಿ ಮಿಡಿಯುತ್ತಾ ಹೇಳಿದರು.. ⬇
ಮುದ್ದು ಮಕ್ಕಳೇ... ಹೀಗಾದೀತೆಂದು ನಾನು ನಿರೀಕ್ಷಿಸಲಿಲ್ಲ. ಆದ್ದರಿಂದ ನನ್ನನ್ನು ಕೊಂದ ಬಳಿಕವೂ ಈ ದುಷ್ಟ ನಿಮ್ಮನ್ನು ಆ ಉಬೈದ್'ನಿಗೆ ಒಪ್ಪಿಸಿದರೆ ಅಹ್ಲ್'ಬೈತಿನ ಕುಡಿಗಳಾದ ನೀವು ನಾಳೆ ಅಲ್ಲಾಹನ ನ್ಯಾಯಾಲಯದಲ್ಲಿ ನಿಮ್ಮ ಈ ತಾಯಿಯ ವಿರುದ್ಧ ಸಾಕ್ಷ್ಯ ಹೇಳದಿರಿ ಮಕ್ಕಳೇ..! ಎನ್ನುತ್ತಾ.. ಮಕ್ಕಳನ್ನು ಬಿಗಿದಪ್ಪಿ ಬಿಕ್ಕಿ ಬಿಕ್ಕಿ ಅಳುತ್ತಾ ಅಬ್ದುಲ್ಲನ ಕಡೆ ತಿರುಗಿ ಕೊನೆಯದಾಗಿಯೆಂಬಂತೆ ತುವಾಅ(ರ) ಹೇಳಿದರು,
*ಪ್ರಿಯರೇ... ಮಕ್ಕಳಿಲ್ಲದ ನಮಗೆ ಅಲ್ಲಾಹನೇ ಕರುಣಿಸಿದ ಸೌಭಾಗ್ಯವಿದೆಂದು ಭಾವಿಸಿ ಈ ಮಕ್ಕಳನ್ನು ನಾವು ಸಂರಕ್ಷಿಸಿ ಪೇೂಷಿಸಿ ಬೆಳೆಸೇೂಣ. ಹಾಗಾಗಿ ದಯವಿಟ್ಟು ಬಿಟ್ಟು ಬಿಡಿ ಎನ್ನುತ್ತಾ ಈಗಲಾದರೂ ಆತನ ಮನ ಕರಗೀತೆಂಬ ಆಶಾಭಾವನೆಯಿಂದ ಆಸೆಗಣ್ಣಿನಿಂದ ಅಂಗಾಲಾಚುತ್ತಾ ಬೇಡಿದರು*
ಆಗ ಮಕ್ಕಳಂತೂ ಭಯದಿಂದ ಬೆದರಿ ಕಂಪಿಸುತ್ತಾ ತುವಾಅ(ರ)ರವರ ಹಿಂದೆ ನಿಂತಿದ್ದವು.
ಇಲ್ಲ... ತುವಾಅ(ರ) ಎಷ್ಟು ಪರಿಪರಿಯಾಗಿ ಬೇಡಿದರೂ ಮದ್ಯದ ಅಮಲಿನಲ್ಲಿದ್ದ ಕಟು ಹೃದಯಿಯಾದ ಅಬ್ದುಲ್ಲನ ಮನಸ್ಸು ಕರಗಲೇ ಇಲ್ಲ.
ತುವಾಅ(ರ)ರನ್ನು ತಳ್ಳಿ ಮತ್ತೊಮ್ಮೆ ಮಕ್ಕಳನ್ನು ಎಳೆದೊಯ್ಯಲು ಅಬ್ದುಲ್ಲ ಶ್ರಮಿಸಿದಾಗ ಅಡ್ಡ ನಿಂತ ತುವಾಅ(ರ)ರವರ
ಕೊರಳಿನತ್ತ ಖಡ್ಗವನ್ನು ಬೀಸಿಯೇ ಬಿಟ್ಚ... 🗡
*ಮಕ್ಕಳನ್ನು ಪ್ರೀತಿಯಿಂದ ಸ್ನಾನ ಮಾಡಿಸಿ ಕೈತುತ್ತು ತಿನ್ನಿಸಿ, ಲಾಲಿಸಿ ಮುದ್ದಿಸುತ್ತಾ ತನ್ನ ಕೊನೆಯುಸಿರಿನ ತನಕವೂ ಆ ಮಕ್ಕಳ ಸಂರಕ್ಷಣೆಗಾಗಿ ಅಂಗಾಲಾಚುತ್ತಿದ್ದ ಆ ಮಹಾ ತಾಯಿ ಕೊನೆಗೂ ತನ್ನಿಂದ ಆ ಮಕ್ಕಳನ್ನು ರಕ್ಷಿಸಲಾಗಲಿಲ್ಲವಲ್ಲ ಎಂಬ ಅಸಹಾಯಕತೆಯಿಂದ ಕುಸಿದು ಬಿದ್ದು ಇಹಲೇೂಕದಿಂದ ನಿರ್ಗಮಿಸಿದರು.*
*ಇನ್ನಲಿಲ್ಲಾಹ್.....* 😰
ತಂದೆಯನ್ನು ಕಳೆದುಕೊಂಡು ತಾಯಿಯಿಂದಲೂ ದೂರಾಗಿ ಜೀವ ಭಯದಿಂದ ಕಂಪಿಸುತ್ತಾ ಅಪರಿಚಿತವಾದ ನಾಡಿನಲ್ಲಿ ಪ್ರೀತಿಯಿಂದ ಕಣ್ಣರೆಪ್ಪೆಯಂತೆ ಸಂರಕ್ಷಣೆ ನೀಡಿದ್ದ ಏಕೈಕ ಆಶಾಕಿರಣವಾಗಿದ್ದ ತುವಾಅ(ರ) ಕುಸಿದು ಬೀಳುತ್ತಿದ್ದಂತೆ ಜಂಘಾಬಲವೇ ಉಡುಗಿ ಹೇೂದಂತಾದ ಆ ಮಕ್ಕಳು ಅಸಹಾಯಕತೆಯಿಂದ ಅಳಲಾರಂಭಿಸಿದವು.
ಜೀವನ ಪರ್ಯಂತ ತನ್ನ ಸುಖ, ದುಃಖಗಳಲ್ಲಿ ಒಂದಾಗಿ ದೇಹವೆರಡಾದರೂ ಮನಸೊಂದೇ ಎಂಬಂತೆ ತನ್ನೊಂದಿಗೆ ಬದುಕಿ ಬಾಳ ಬೇಕಾಗಿದ್ದ ಬಾಳ ಸಂಗಾತಿಯನ್ನೇ ತನ್ನ ಹಠ ಸಾಧನೆಗಾಗಿ ಕೊಚ್ಚಿ ಕೊಂದ ಕಟು ಹೃದಯಿಯ ಮುಂದೆ ಆ ಅಮಾಯಕ ಕಂದಮ್ಮಗಳ ಅಸಹಾಯಕತೆ ಮತ್ತು ಮಾನಸಿಕ ತೊಳಲಾಟಕ್ಕೆಲ್ಲಿದೆ ಬೆಲೆ?
ರಕ್ಷಣೆಯ ಕೊನೆಯ ಆಶಾಕಿರಣವೂ ಕೈಬಿಟ್ಟು ಹೇೂದಾಗ ಅಸಹಾಯಕತೆಯಿಂದ ಕಂಗಾಲಾಗಿದ್ದ ಆ ಎರಡು ಮುದ್ದು ಕಂದಮ್ಮಗಳನ್ನು ಎಳೆದೊಯ್ದು ಕಾಡಿನ ನಡುವೆಯಿರುವ ಮರವೊಂದಕ್ಕೆ ಕಟ್ಟಿ ಹಾಕಿ ಹೇೂದ ಅಬ್ದುಲ್ಲ, ಒಂದು ದೊಡ್ಡ ಪಾತ್ರೆಯೊಂದಿಗೆ ಬಂದು
ಆ ಪಾತ್ರೆಯನ್ನು ಅಸಹಾಯಕರಾಗಿದ್ದ ಆ ಮಕ್ಕಳ ಎದುರಿಗಿಟ್ಟು ಹೇಳಿದ...
ಇದನ್ನು ನೋಡಿದಿರಾ...? ಇದು ನಾಳೆಯಿಂದ ನಾನು ಮನಸೇೂ ಇಚ್ಚೆ ಮದ್ಯಪಾನ ಮಾಡಲಿರುವ ಪಾತ್ರೆ. ಅದಕ್ಕಿರುವ ದಾರಿ ನಿಮ್ಮ ಎರಡು ತಲೆಗಳು ಎನ್ನುತ್ತಾ...
ಹನ್ನೊಂದು ವರ್ಷ ಪ್ರಾಯದ ಅಹ್ಲ್'ಬೈತಿನ ಕಂದಮ್ಮವಾದ ಇಬ್ರಾಹಿಂ (ರ)ರನ್ನು ಎಳೆದೊಯ್ದು ಆಗ ಆ ಮಗು ಬೇಡ ಬೇಡ ನನ್ನನ್ನು ಕೊಲ್ಲಬೇಡಿ. ನಮ್ಮನ್ನು ಬಿಟ್ಟು ಬಿಡಿ ಎಂದು ಅಂಗಾಲಾಚಿತು. ಆ ಮಕ್ಕಳ ದೀನ ರೇೂದನಕ್ಕೆ ಕಿವಿಗೊಡದ ಅಬ್ದುಲ್ಲ ಮದ್ಯದ ಆ ಪಾತ್ರೆಗೆ ಆ ಮಗುವಿನ ತಲೆಯನ್ನಿಟ್ಟು...
ಒಂಬತ್ತು ವರ್ಷ ಪ್ರಾಯದ ಮುಹಮ್ಮದ್ (ರ) ಭಯಾತಂಕದಿಂದ ಅಣ್ಣಾ... ಅಣ್ಣಾ.. ಎನ್ನುತ್ತಾ ಅಸಹಾಯಕತೆಯಿಂದ ಅರಚುತ್ತಿರುವಾಗಲೇ ಆ ಮಗುವಿನ ಕಣ್ಮುಂದೆಯೇ ಪ್ರಾಣಿಯನ್ನು ದ್ಸಬಹ್ ಮಾಡುವಂತೆ ಇಬ್ರಾಹಿಂ (ರ)ರವರ ತಲೆ ಕತ್ತರಿಸಿದ.
(ದುನಿಯಾ ಎಂದರೇನೆಂದೇ ಅರಿಯದ ಆ ಮಗುವಿನ ಒಡ ಹುಟ್ಟಿದ ಒಡನಾಡಿಯ ತಲೆಯನ್ನು ಕಣ್ಮುಂದೆಯೇ ಕತ್ತರಿಸುವಾಗ ಆ ಎಳೆ ಹೃದಯ ಅದೆಷ್ಟು ನೊಂದಿರಬಹುದು?)
ನಂತರ ಮುಹಮ್ಮದ್ (ರ)ರವರ ತಲೆಯನ್ನೂ ಕತ್ತರಿಸಿ ಆ ಪಾತ್ರೆಯಲ್ಲಿ ಹಾಕಿಕೊಂಡು *ದಾರುಲ್ ಇಮಾರ್'* ಗೆ ಹೇೂದ ಅಬ್ದುಲ್ಲ *ನುಅ್'ಮಾನ್ ಇಬ್ನು ಬಶೀರ್ (ರ)* ರನ್ನು ಕರೆದು ಮಕ್ಕಳ ತಲೆಗಳನ್ನು ತೇೂರಿಸುತ್ತಾ ಹೇಳಿದ....
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
No comments:
Post a Comment