Tuesday, March 27, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 3⃣1⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

ಹುಸೈನ್ (ರ)ರವರು ತಕ್ಷಣ ತಮ್ಮ ತಂಡದಲ್ಲಿದ್ದ ಇಬ್ನು ಅಬ್ಬಾಸ್ (ರ)ರನ್ನು ಕರೆದು ತಮ್ಮ ಕೈಲಿದ್ದ ಮಣ್ಣನ್ನು ಅವರ ಕೈಗೆ ಕೊಡುತ್ತಾ ಕೇಳಿದರು.... ⬇

*ಈ ಎರಡು ಮಣ್ಣಿನಲ್ಲಿ ಏನಾದರೂ ವ್ಯತ್ಯಾಸವಿದೆಯೇ?*

ಇಬ್ನು ಅಬ್ಬಾಸ್ (ರ)ರವರು ಸೂಕ್ಷ್ಮವಾಗಿ ಆ ಮಣ್ಣನ್ನು ಮತ್ತು ಆ ಸ್ಥಳದ ಮಣ್ಣನ್ನು ಪರಿಶೀಲಿಸಿದ ನಂತರ ಹೇಳಿದರು..

ಇಲ್ಲ..! ಎರಡೂ ಒಂದೇ ರೀತಿಯಿದೆ. ವ್ಯತ್ಯಾಸವೇ ಇಲ್ಲ. ಅಷ್ಟಕ್ಕೂ ಈ ಮಣ್ಣು ನಿಮಗೆಲ್ಲಿ ಸಿಕ್ಕಿತು? ಎಂದು ಕೇಳಿದರು ಇಬ್ನು ಅಬ್ಬಾಸ್ (ರ)

ಆಗ ಇಬ್ನು ಅಬ್ಬಾಸ್ (ರ)ರವರಿಗೆ ಆ ಮಣ್ಣಿನ ಹಿಂದಿರುವ ರಹಸ್ಯವನ್ನು ವಿವರಿಸಿದ ಹುಸೈನ್ (ರ) ಹೇಳಿದರು...

*ಅಲ್ಲಾಹನು ಇಚ್ಚಿಸಿರುವ ಆ ಸ್ಥಳ ಇದೇ ಆಗಿರಬಹುದೆಂದು ನನಗೆ ಅನ್ನಿಸುತ್ತಿದೆ. ಆದರಿಂದ ಇಲ್ಲಿಂದ ಮುಂದೆ ಸಾಗಲು ನಮ್ಮಿಂದ ಸಾದ್ಯವಿಲ್ಲ ಎಂದು ನನಗನಿಸುತ್ತದೆ. ಹಾಗಾಗಿ ಇಲ್ಲೇ ಡೇರೆ (ಟೆಂಟ್) ಹಾಕೇೂಣ ಎಂದರು.*

ಹಾಗೆ ಆ ಯೂಪ್ರಟಿಸ್ ನದಿ ತೀರದಲ್ಲಿ *ಹುಸೈನ್ (ರ) ರವರ* ಕುಟುಂಬ ಮತ್ತು ಅವರ ನೆರವಿಗಾಗಿ ಮಕ್ಕಾದಿಂದ ಅವರೊಂದಿಗೆ ಬಂದಿದ್ದ ಯಾತ್ರಾ ತಂಡದೊಂದಿಗೆ ಅಲ್ಲೇ ಟೆಂಟ್ ಹಾಕಿದರು.

*ಅಂದು ಹುಸೈನ್ (ರ)ರವರು ಟೆಂಟ್ ಹಾಕಿದ್ದ ಆ ಸ್ಥಳವೇ ಇಂದಿನ ಕರ್ಬಲ. ಕರ್ಬ್+ಬಲಾಅ "كرب بلاء" ಕರ್ಬ್ ಎಂದರೆ ವೇದನೆ, ಬಲಾಅ ಎಂದರೆ  ಪ್ರಯಾಸ. ವೇದನೆ ಮತ್ತು ಪ್ರಯಾಸಗಳ ಸಂಗಮವೇ ಕರ್ಬಲ.*

ಕೂಫ ನಿವಾಸಿಗಳ ಆಹ್ವಾನದ ಮೇರೆಗೆ ಹಾಲುಗಲ್ಲದ ಹಸುಗೂಸುಗಳೊಂದಿಗೆ ದೂರದ ಮಕ್ಕಾದಿಂದ ದಿನಗಟ್ಟಲೆ ಅಲೆಯುತ್ತಾ ಬಳಲಿ ಕೂಫಕ್ಕೆ ಬಂದಿದ್ದ ಈ ಅತಿಥಿಗಳು ಕೂಫ ಗಡಿಯಲ್ಲೇ ಎರಡು ದಿನಗಳಿಂದ ಬೀಡು ಬಿಟ್ಟಿದ್ದರೂ ಬರ ಮಾಡಿಕೊಳ್ಳಲು ಕೂಫದಿಂದ ಒಂದು ನರಪಿಳ್ಳೆಯೂ ಬರಲಿಲ್ಲ.

ಮಕ್ಕಾದಿಂದ ಹೊರಡುವಾಗಲೇ ಮಕ್ಕಾ ನಿವಾಸಿಗಳನೇಕರು ಕೂಫದವರ ವಂಚಕತನದ ಬಗ್ಗೆ ಎಚ್ಚರಿಸಿದ್ದರೂ ಹುಸೈನ್ (ರ)ರವರು ಅದನ್ನಷ್ಟು ಗಂಭೀರವಾಗಿ ಪರಿಗಣಿಸದೆ "ತಮ್ಮ ನೆರವಿಗೆ ಬಾರದಿದ್ದರೆ ನಾಳೆ ಅಲ್ಲಾಹನ ಬಳಿ ದೂರು ಸಲ್ಲಿಸುವೆವು ಎಂದು ಎಚ್ಚರಿಸಿದ್ದ ಆ ಎಚ್ಚರಿಕೆ"ಗೆ ಹೆಚ್ಚಿನ ಮಹತ್ವ ನೀಡಿದ್ದರು.

ಮಾತ್ರವಲ್ಲ, ಹುಸೈನ್ (ರ)ರವರ ಪ್ರತಿನಿಧಿಯಾಗಿ ಕೂಫಕ್ಕೆ ತೆರಳಿದ್ದ ಮುಸ್ಲಿಂ (ರ)ರವರು ಪತ್ರವನ್ನೂ ಬರೆದಿದ್ದರಿಂದ ಈ ಬಾರಿ ಕೂಫಾ ನಿವಾಸಿಗಳು ಖಂಡಿತಾ ವಂಚಿಸಲಾರರೆಂಬ ವಿಶ್ವಾಸದಿಂದ ಹೊರಟಿದ್ದರಿಂದ ಯಾತ್ರೆಯ ನಡುವೆ ಸೇವಿಸಲೆಂದು ಸ್ವಲ್ಪ ಆಹಾರವನ್ನಷ್ಟೇ ತಂದಿದ್ದರು. ಇತ್ತ ಕೂಫ ನಿವಾಸಿಗಳ ಸುಳಿವೇ ಇಲ್ಲದಿದ್ದರಿಂದ ತಂದಿದ್ದ ಆಹಾರವೂ ಮುಗಿಯುವ ಹಂತದಲ್ಲಿತ್ತು. ಹಾಗಾಗಿ ಮುಂದೆ ಯೂಪ್ರಟಿಸ್ ನದಿಯ ನೀರನ್ನಷ್ಟೇ ಕುಡಿದು ಜೀವವುಳಿಸಬೇಕಾದ ಪರಿಸ್ಥಿತಿ ಎದುರಾಗಿತ್ತು.

*ಅಂದು ಮಹರ್ರಮ್ ಮೂರು...*

ಹುಸೈನ್ (ರ) ಡೇರೆಯೊಳಗೆ ಕುಳಿತು ಕೂಫದ ಕಡೆ ನೇೂಡುತ್ತಿದ್ದರು. ಆಗ ದೂರದಲ್ಲಿ ಒಂದು ಯಾತ್ರಾ ತಂಡ ಕೂಫದ ಕಡೆಯಿಂದ ಬರುತ್ತಿರುವುದು ಕಾಣಿಸಿತು. ಬಹುಶಃ ತಮ್ಮನ್ನು ಬರ ಮಾಡಿಕೊಳ್ಳಲು ಬರುತ್ತಿರುವ ಕೂಫ ನಿವಾಸಿಗಳಾಗಿರಬಹುದೆಂದು ಭಾವಿಸಿ ಅವರತ್ತ ಹೇೂದರು.

ಆದರೆ ಹುಸೈನ್ (ರ)ರವರಿಂದ ಅಲ್ಪ ದೂರದಲ್ಲೇ ನಿಂತ ಆ ತಂಡದಿಂದ ಒಬ್ಬ ವ್ಯಕ್ತಿ *ಹುಸೈನ್ (ರ) ರವರ* ಹತ್ತಿರ ಬಂದನು.

ಅಸ್ಸಲಾಮು ಅಲೈಕುಮ್ ಯಾ ಹುಸೈನ್.. (ರ) ಎನ್ನುತ್ತಾ ಸಲಾಮಿನೊಂದಿಗೆ ಮಾತು ಆರಂಭಿಸಿದ ಆ ವ್ಯಕ್ತಿ ನನ್ನ ಹೆಸರು
*ಅಂರು ವಸಅದ್.* ತಾವು ಯಝಿದ್'ನ ದುರಾಡಳಿತವನ್ನು ಕೊನೆಗಾಣಿಸಿ ಕೂಫ ಜನತೆಯ ಹಿತ ಕಾಯಲು ಬಂದಿರುವಿರೆಂಬುದನ್ನು ನಾವೆಲ್ಲರೂ ಬಲ್ಲೆವು. ಯಝೀದ್'ನ ದುರಾಡಳಿತ ಕೊನೆಯಾಗಬೇಕೆನ್ನುವುದು ನಮ್ಮೆಲ್ಲರ ಹೆಬ್ಬಯಕೆಯೂ ಆಗಿದೆ.

ಆದರೆ..
ಸದ್ಯದ ಪರಿಸ್ಥಿತಿಯು ಮೊದಲಿನಂತಿರದೆ ತೀರಾ ವ್ಯತಿರಿಕ್ತವಾಗಿದೆ. ಅಲ್ಲಾಹನನ್ನು ಆರಾಧಿಸುತ್ತಾ ಅವನ ಹಬೀಬರನ್ನು ﷺ  ಪ್ರೀತಿಸುವ ನಾವೂ ಸಹ ಅನಿವಾರ್ಯ ಕಾರಣದಿಂದ ನಿಮ್ಮ ವಿರುದ್ಧ ಯುದ್ಧ ಮಾಡಲು ಬಂದವರಾಗಿದ್ದೇವೆ. ಆದರೆ ಪ್ರವಾದಿ ﷺ ರ ಕುಟುಂಬದೊಂದಿಗೆ ಯುದ್ಧ ಮಾಡಲು ನಮಗೆ ಆಸಕ್ತಿಯಿಲ್ಲ. ಆದರೆ ಯಝಿದ್'ನ ಸೇನಾ ಉಪನಾಯಕನಾಗಿರುವ ನಾನು ಖಲೀಫನ ಆಜ್ಞೆ, ಆದೇಶಗಳನ್ನು ಪಾಲಿಸಬೇಕಾದುದು ನನ್ನ ಕರ್ತವ್ಯವಲ್ಲವೇ?

ಆದ್ದರಿಂದ ತಮ್ಮಲ್ಲಿ ನಾನು ವಿನಂತಿಸಿಕೊಳ್ಳುವುದೇನೆಂದರೆ ಯಝೀದ್'ನ ವಿರುದ್ಧದ ಯುದ್ಧವನ್ನು ಕೈಬಿಟ್ಟು ತಾವು ತಮ್ಮ ತಂಡದೊಂದಿಗೆ ಮಕ್ಕಾಕ್ಕೆ ಹಿಂದಿರುಗಬೇಕು. ಇಲ್ಲದಿದ್ದಲ್ಲಿ ತಮ್ಮ ಕುಟುಂಬ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಬೇಕಾದೀತು.
ಮರಣವೂ ಕೂಡ ಸಂಭವಿಸುವ ಸಾಧ್ಯತೆಯಿದೆ. ಹಾಗಾಗಿ ತಾವು ದಯವಿಟ್ಟು ಹಿಂದಿರುಗಿರಿ..!! ಎಂದನು.

ಇದನ್ನು ಕೇಳಿದ *ಹುಸೈನ್ (ರ)* ನಿಸ್ತೇಜ ಭಾವದಿಂದ ಅವನ ಮುಖ ನೋಡುತ್ತಾ ಹೇಳಿದರು... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡

No comments:

Post a Comment