😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰 🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 2⃣8⃣
**********************
*صَـلــُّوا عَـلَـى النَّبِيِّ ﷺ وَآلـِهِ*
*اللَّهُمَّ صَلِّ عَلَى سَيِّدِنَا مُحَمَّدٍ*
*عَدَدَ مَا فِي عِلْمِ الله*
*صَلاَةً دَائِمَةً بِدَوَامِ مُلْكِ الله*
☔☔☔☔☔☔☔☔☔
ನಂತರ ಮುಹಮ್ಮದ್ (ರ) ರವರ ತಲೆಯನ್ನೂ ಕತ್ತರಿಸಿ ಆ ಪಾತ್ರೆಯಲ್ಲಿ ಹಾಕಿಕೊಂಡು ದಾರುಲ್ ಇಮಾರ್'ಗೆ ಹೋದ ಅಬ್ದುಲ್ಲ ನುಅಮಾನ್ ಇಬ್ನು ಬಶೀರ್ (ರ) ರನ್ನು ಕರೆದು ಮಕ್ಕಳ ತಲೆಗಳನ್ನು ತೋರಿಸುತ್ತಾ ಹೇಳಿದ.... ⬇
*"ಆ ಮಕ್ಕಳ ಕತೆಯನ್ನು ನಾನು ಮಗಿಸಿದೆ"*
ಅಲ್ಲಾಹನನ್ನು ಆರಾಧಿಸುತ್ತಾ ಅವನ ರಸೂಲ್ ಕರೀಂ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರನ್ನು ಅನುಸರಿಸುತ್ತಾ ಅಹ್ಲ್'ಬೈತನ್ನು ಪ್ರಾಣಸಮವಾಗಿ ಪ್ರೀತಿಸುತ್ತಿದ್ದ *ನುಅ್'ಮಾನ್ ಇಬ್ನು ಬಶೀರ್ (ರ)* ಅಹ್ಲ್'ಬೈತಿನ ಕರುಳ ಕುಡಿಗಳಾದ ಆ ಎರಡು ಮುದ್ದು ಕಂದಮ್ಮಗಳ ತಲೆ ಕಂಡೊಡನೆ ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತರು.
ಅಷ್ಟರಲ್ಲಿ ಹೊರ ಬಂದ ಉಬೈದ್ ಮಕ್ಕಳ ತಲೆ ಕಂಡು ದಂಗಾಗಿ ಹೇೂದವನು, ತಲೆ ಮೇಲೆ ಕೈಯಿಟ್ಟು ಲೇ.. ದುಷ್ಟಾ... ಆ ಮಕ್ಕಳ ತಲೆ ಕಡಿಯಲು ನಿನಗೆ ಮನಸ್ಸಾದರೂ ಹೇಗೆ ಬಂತು? ಎಂದು ಕೇಳಿದ.
ಆಗ ಅಬ್ದುಲ್ಲ ಆ ವಿಷಯ ಹಾಗಿರಲಿ ಈ ಮಕ್ಕಳ ತಲೆಗೆ ಘೇೂಷಿಸಿದ್ದ ಸಾವಿರ ದೀನಾರ್ ಕೊಡಿ ಎಂದ.
ಆಗ ಉಬೈದ್ ಹೇಳಿದ..
*ಹೇ ದುಷ್ಟಾ ಮಕ್ಕಳನ್ನು ತಂದೊಪ್ಪಿಸಿದವರಿಗೆ ಸಾವಿರ ದೀನಾರ್ ಕೊಡುತ್ತೇನೆ ಎಂದು ನಾನು ಹೇಳಿದ್ದೆನೇ ಹೊರತು ಕೊಲ್ಲಲಿಕ್ಕಲ್ಲ.*
ಎನ್ನುತ್ತಾ ಮಾತು ಮುಂದುವರೆಸಿದ ಉಬೈದ್...
*ಈ ಮಕ್ಕಳನ್ನು ಮುಂದಿಟ್ಟು ಹುಸೈನ್ (ರ)ರವರು "ಯುದ್ಧದಿಂದ ಹಿಂದೆ ಸರಿಯದಿದ್ದರೆ ಈ ಮಕ್ಕಳನ್ನು ಕೊಲ್ಲುತ್ತೇನೆಂದು ಬೆದರಿಸಿ ಅವರನ್ನು ಹಿಮ್ಮೆಟ್ಟಿಸುವುದಾಗಿತ್ತು ನನ್ನ ಉದ್ದೇಶ. ಆಗ ಖಂಡಿತಾ ಅವರು ಯುದ್ಧದಿಂದ ಹಿಂದೆ ಸರಿಯುತ್ತಿದ್ದರು. ಈ ಮಕ್ಕಳನ್ನು ಕೊಂದು ಆ ಅವಕಾಶವನ್ನೂ ನೀನು ಮಣ್ಣುಪಾಲು ಮಾಡಿದೆ ಎಂದ ರೇೂಷದಿಂದ.*
ಆದರೆ ಮದ್ಯದ ಅಮಲಿನಲ್ಲಿದ್ದ ಅಬ್ದುಲ್ಲ ಇದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ ಮತ್ತೊಮ್ಮೆ ಹೇಳಿದ...
*"ಏನಾದರಾಗಲಿ ನನಗೆ ಆ ಸಾವಿರ ದೀನಾರನ್ನು ಕೊಟ್ಟು ಬಿಡಿ.*
ಮದ್ಯದ ಅಮಲು ತಲೆಗೇರಿರುವ ಈ ದುಷ್ಟನೊಂದಿಗೆ ಮಾತನಾಡಿ ಪ್ರಯೋಜನವಿಲ್ಲವೆಂದು ಭಾವಿಸಿದ ಉಬೈದ್ ಹೇಳಿದನು "ಸರಿ ಸ್ವಲ್ಪ ತಾಳು ಕೊಡುತ್ತೇನೆ" ಎನ್ನುತ್ತಾ ಒಳ ಹೇೂದ ಉಬೈದ್, ಸಾವಿರ ದೀನಾರ್'ಗಳ ಥೈಲಿಯನ್ನು ಎಡಗೈಯಲ್ಲೂ ಬಲಗೈಯ್ಯಲ್ಲೊಂದು ಖಡ್ಗವನ್ನೂ ಹಿಡಿದುಕೊಂಡು ಬಂದು ಹಣವನ್ನು ಅವನ ಮುಂದೆ ಚಾಚಿದನು.
ಹಣ ಪಡೆಯಲಿಕ್ಕಾಗಿ ಅಬ್ದುಲ್ಲ ಎರಡು ಕೈಯನ್ನು ಮುಂದೆ ಚಾಚುತ್ತಾ ಮುಂದಡಿ ಇಡುತ್ತಿದ್ದಂತೆ...
*ತಗೇೂ...* ಎನ್ನುತ್ತಾ ಖಡ್ಗವನ್ನು 🗡 ಬೀಸಿ ಅವನ ತಲೆ ಹಾರಿಸಿದ. ಹಾಗೆ ಸಾವಿರ ದೀನಾರಿಗಾಗಿ ಮೂರು ಜೀವಗಳನ್ನು ಬಲಿ ಪಡೆದಿದ್ದ ದುಷ್ಟ ಅಬ್ದುಲ್ಲ ಹೆಣವಾಗಿ ನೆಲಕ್ಕೊರಗಿದನು.
ನಂತರ ಉಬೈದ್...
*ಸೈನಿಕರನ್ನು ಕಳುಹಿಸಿ ಆ ಮಕ್ಕಳ ಮೃತ ಶರೀರವನ್ನು ಹುಡುಕಿಸಿ ಗೌರವಪೂರ್ವಕವಾಗಿ ದಫನ್ ಕಾರ್ಯ ನೆರೆವೇರಿಸಿದನು.*
(ಆದರೆ ಆ ಮಕ್ಕಳೊಂದಿಗೆ ಉಬೈದ್ ತೋರಿದ ಕರುಣೆ ನಂತರ ಅವನ ಗುಣ ನಡತೆಗಳಲ್ಲಿ ಕಂಡು ಬರಲಿಲ್ಲ.)
ಮುಸ್ಲಿಂ (ರ) ಮತ್ತು ಅವರ ಇಬ್ಬರು ಮಕ್ಕಳನ್ನು ಮತ್ತು ಅವರಿಗೆ ಅಭಯ ನೀಡಿದ ಹಾನಿಯಾ (ರ) ರವರನ್ನು ಉಬೈದುಲ್ಲಾಹಿ ಇಬ್ನು ಝಿಯಾದ್ ವಧಿಸಿರುವ ಸಂಗತಿಯ ಕುರಿತು *ಹುಸೈನ್ (ರ) ರವರಿಗೆ* ಯಾವುದೇ ಮಾಹಿತಿಯೂ ತಲುಪಿರಲಿಲ್ಲ.
ಹುಸೈನ್ (ರ)ರವರ ಪ್ರತಿನಿಧಿಯಾಗಿ ಮಕ್ಕಳೊಂದಿಗೆ ಕೂಫಕ್ಕೆ ತೆರಳಿದ್ದ ಮುಸ್ಲಿಂ ಇಬ್ನು ಉಹೈಲ್ (ರ) ರವರು
ಬರೆದಿದ್ದ ಪತ್ರವನ್ನು ನೇೂಡಿದ *ಹುಸೈನ್ (ರ) ರವರು* ತಮ್ಮ ಪರಿವಾರದೊಂದಿಗೆ ಮುಹರ್ರಂ ತಿಂಗಳಿನಲ್ಲಿ ಕೂಫಕ್ಕೆ ಯಾತ್ರೆ ಹೊರಡಲು ತೀರ್ಮಾನಿಸಿದರು.
ಹಾಗೆ ಹುಸೈನ್ (ರ)ರವರ ಕುಟುಂಬದ ಸದಸ್ಯರು, ಮತ್ತಿತರರನ್ನೊಳಗೊಂಡ ಯಾತ್ರಾ ಸಂಘವು ಯಾತ್ರೆಯ ಸಿದ್ಧತೆಯಲ್ಲಿರುವಾಗ
ಹುಸೈನ್ (ರ)ರವರ (ತಾಯಿಯ ಹೆಸರಿನ) ಮಗಳಾದ ಫಾತಿಮತ್ ಝಹ್ರ (ರ)ರಿಗೆ ಜ್ವರ ಬಾಧಿಸಿತ್ತು.
ಕೂಫ ಎಂಬ ವಂಚಕರ ನಾಡಿಗೆ ತೆರಳುತ್ತಿರುವುದರಿಂದ ತಮ್ಮ ಈ ಯಾತ್ರೆ ಎಲ್ಲಿಗೆ ತಲುಪೀತು ಮತ್ತು ಯಾವ ಕ್ಷಣದಲ್ಲಿ ಏನಾದೀತು ಎಂದೊಂದೂ ತಿಳಿಯದ ಗೊತ್ತು ಗುರಿಯಿಲ್ಲದಂತಹ
ಈ ಯಾತ್ರೆಗೆ ಅನಾರೇೂಗ್ಯ ಪೀಡಿತಳಾದ ಮಗಳನ್ನು ಕರೆದೊಯ್ಯಲು *ಹುಸೈನ್ (ರ)ರವರ* ಮನಸ್ಸು ಒಪ್ಪಲಿಲ್ಲ.
ಹಾಗಾಗಿ *ಹುಸೈನ್(ರ)* ಮಗಳ ಬಳಿ ಹೇಳಿದರು...
*ಮಗಳೇ....*
*ನಾವು ಕೂಫಕ್ಕೆ ಹೋಗುತ್ತಿದ್ದೇವೆ. ನಿನ್ನ ಆರೇೂಗ್ಯ ಸರಿಯಿಲ್ಲದಿರುವುದರಿಂದ ನೀನು ಸಯ್ಯಿದತುನಾ ಬೀವಿ ಉಮ್ಮು ಸಲಮ (ರ) ರವರ ಜೊತೆ ಇರು..!*
ನಿನ್ನ ಜ್ವರ ವಾಸಿಯಾಗುತ್ತಿದ್ದಂತೆಯೇ ಬಂದು ನಿನ್ನನ್ನೂ ನಾವು ಕರೆದೊಯ್ಯುತ್ತೇವೆ ಎಂದರು.
ಆದರೆ.. ⤵
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡

No comments:
Post a Comment