_*ಜಾತ್ಯತೀತ ರಾಷ್ಟ್ರದ ಏಕತೆ ಮತ್ತು ಸೌಹಾರ್ಧತೆಗೊಂದು ಉದಾಹರಣೆ*_
✍ ಗಫೂರ್ ಬಾಯಾರ್
**********************
2002ರಲ್ಲಿ ನಡೆದ ಗುಜರಾತ್ ಗಲಭೆಯು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದಷ್ಟೇ ಅಲ್ಲದೆ ಆ ಗಲಭೆಯು ದೇಶದ ಸಾಮರಸ್ಯತೆ ಮತ್ತು ಸೌಹಾರ್ದತೆಯ ಬುಡವನ್ನೇ ಅಲುಗಾಡಿಸಿತ್ತು.
ಈ ಗಲಭೆಯು ಜಾಗತಿಕ ಮಟ್ಟದಲ್ಲಿ ಭಾರತದ ಸಾಮರಸ್ಯತೆ, ಸಹಬಾಳ್ವೆ ಮತ್ತು ಸೌಹಾರ್ದತೆಯ ಪರಂಪರೆಗೆ ಕಳಂಕವನ್ನೂ ತಂದಿತು.
ರಾಜಕೀಯ ಲಾಭಕ್ಕಾಗಿ ಫ್ಯಾಸಿಸ್ಟ್ ಶಕ್ತಿಗಳು ನಡೆಸಿದ ಈ ವ್ಯವಸ್ಥಿತ ಷಡ್ಯಂತ್ರದಿಂದಾಗಿ ಅಂದಿನ ತನಕ ಜಾತಿ-ಮತಭೇದವಿಲ್ಲದೆ ಅನ್ಯೋನ್ಯವಾಗಿ ಬದುಕುತ್ತಿದ್ದವರಲ್ಲೇ ಹಗೆ ಮತ್ತು ವೈರತ್ವ ಮೂಡಿಸಿ ತಮ್ಮ ಓಟ್ ಬ್ಯಾಂಕನ್ನು ಗಟ್ಟಿಗೊಳಿಸಿಕೊಳ್ಳುವಲ್ಲಿಫ್ಯಾಸಿಸ್ಟ್ ಶಕ್ತಿಗಳು ಸ್ವಲ್ಪಮಟ್ಟಿಗೆ ಯಶಸ್ವಿಯೂ ಆದವು.
ಪರಿಣಾಮವಾಗಿ ತಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಿದ್ದ ನೆರೆಮನೆ, ಅಂಗಡಿ ಮುಂಗಟ್ಟುಗಳು ಹೀಗೆ ಎಲ್ಲವನ್ನೂ ಪುರುಷರು ಮಾತ್ರವಲ್ಲದೆ ಸ್ತ್ರೀಯರೂ ಸಹ ಕೊಳ್ಳೆಹೊಡೆದು ಪುರುಷರು, ಗರ್ಭಿಣಿಯರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರೆಂದು ನೋಡದೆ ಸಾವಿರಾರು ಮುಸ್ಲಿಮರ ಮಾರಣ ಹೋಮ ನಡೆಸಿದ ಕುಖ್ಯಾತಿಗೂ ಗುಜರಾತ್ ಗಲಭೆ ಕಾರಣವಾಯಿತು.
ತಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಿದ್ದ ನೆರೆಮನೆಯವರೇ ದುಷ್ಕರ್ಮಿಗಳ ಗುಂಪಿನಲ್ಲಿ ಸೇರಿಕೊಂಡು ಕೊಳ್ಳೆ ಮತ್ತು ಕೊಲೆ ನಡೆಸುತ್ತಿದ್ದರಿಂದ ಅಂದು ದೌರ್ಜನ್ಯಕ್ಕೀಡಾಗುತ್ತಿದ್ದ ದಮನಿತರಿಗೆ ಯಾರ ನೆರವೂ ಸಿಗದಂತಾಗಿತ್ತು.
ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸಹ ಗೆಳೆಯರು ಮತ್ತು ನೆರೆಹೊರೆಯವರನ್ನು ದುಷ್ಕರ್ಮಿಗಳಿಂದ ರಕ್ಷಿಸಿ ಮಾನವೀಯತೆ ಮೆರೆದ ಅಪರೂಪದ ಘಟನೆಗಳೂ ಅಂದು ನಡೆದಿತ್ತು.
ಗುಲಾಮ್ ರಸೂಲ್ ಎಂಬುವವರ ಕುಟುಂಬದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಸಂಗತಿ ತಿಳಿದಾಗ ಗುಲಾಮ್ ರಸೂಲ್ರವರ ಗೆಳೆಯನಾದ ಮಹೇಂದ್ರ ಎಂಬಾತ ಗುಲಾಮ್ ರಸೂಲ್ರನ್ನು ತಮ್ಮ ಮನೆಯ ಎರಡನೆಯ ಮಹಡಿಯಲ್ಲಿರಿಸಿ ರಕ್ಷಣೆ ಕೊಟ್ಟಿದ್ದನು.
ಮಹೇಂದ್ರ ಅಂದುಕೊಂಡಂತೆ ಗೆಳೆಯ ಗುಲಾಮ್ ರಸೂಲ್ನ ಮನೆಯ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿಯೇ ಬಿಟ್ಟರು.
ಆಗ ಮಹೇಂದ್ರನ ಮನೆಯ ಎರಡನೇ ಮಹಡಿಯ ಮೇಲಿನ ಕೊಠಡಿಯಿಂದ ಗುಲಾಮ್ ರಸೂಲ್ ಕಿಟಕಿಯ ಮೂಲಕ ತನ್ನ ಮನೆಯತ್ತ ಕಣ್ಣು ಹಾಯಿಸಿ ತನ್ನ ಮನೆಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸುತ್ತಿರುವುದನ್ನು ಗುಲಾಮ್ ರಸೂಲ್ನ ಅಸಹಾಯಕನಾಗಿ ನೋಡುತ್ತಿದ್ದ.
ಗುಲಾಮ್ ರಸೂಲ್ನ ಮನೆಯ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಕೈಗೆ ಸಿಕ್ಕಿದ್ದನ್ನೆಲ್ಲ ಕೊಳ್ಳೆ ಹೊಡೆಯುತ್ತಿದ್ದರು.
ಆಶ್ಚರ್ಯದ ಸಂಗತಿಯೆಂದರೆ ಗುಲಾಮ್ ರಸೂಲ್ನ ಆತ್ಮೀಯ ಸ್ನೇಹಿತನಾದ ಓಂಪ್ರಕಾಶ್ ಎಂಬಾತನೂ ತನ್ನ ಎರಡು ಮಕ್ಕಳ ಜೊತೆಗೆ ದುಷ್ಕರ್ಮಿಗಳ ಜೊತೆ ಸೇರಿಕೊಂಡು ಗುಲಾಮ್ ರಸೂಲ್ನ ಮನೆಯಲ್ಲಿದ್ದ ಬೆಲೆಬಾಳುವ ಪೀಠೋಪಕರಣಗಳನ್ನು ಹೊತ್ತೊಯ್ಯುತ್ತಿರುವುದನ್ನು ಕಂಡು ದಂಗಾಗಿಹೋದನು.
ನಿನ್ನೆಯ ತನಕ ತನ್ನ ಮನೆಯ ಕಷ್ಟ-ಸುಖಗಳಿಗೆ ತನ್ನ ಬಳಿ ಬಂದು ನೆರವು ಪಡೆಯುತ್ತಿದ್ದ ಓಂ ಪ್ರಕಾಶ್ ಸಹ ದುಷ್ಕರ್ಮಿಗಳ ಜೊತೆ ಸೇರಿ ತನ್ನ ಮನೆಯನ್ನು ಕೊಳ್ಳೆ ಹೊಡೆಯುತ್ತಿರುವುದನ್ನು ಕಂಡಾಗ ಗುಲಾಮ್ ರಸೂಲ್ ಹೃದಯವೇ ಒಡೆದಂತಾಯಿತು. ಹಲವಾರು ದಿನಗಳ ಕಾಲ ಈ ಗಲಭೆ ಗುಜರಾತಿನಾದ್ಯಂತ ಎಗ್ಗಿಲ್ಲದೆ ಮುಂದುವರಿದಿತ್ತು.
ದಿನಗಳು ಉರುಳಿ ಗಲಭೆ ಹತೋಟಿಗೆ ಬಂದು ಪರಿಸ್ಥಿತಿ ಶಾಂತವಾಯಿತು. ಅಲ್ಲಿಯವರೆಗೂ ಗುಲಾಮ್ ರಸೂಲ್ ತನ್ನ ಸ್ನೇಹಿತನಾದ ಮಹೇಂದ್ರನ ಮನೆಯಲ್ಲೇ ಆಶ್ರಯ ಪಡೆದಿದ್ದ.
ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ನಂತರ ಗುಲಾಮ್ ರಸೂಲ್ ತನ್ನ ಮನೆಗೆ ಹೋಗಿ ನೋಡಿದಾಗ ತನ್ನ ಮನೆಯಲ್ಲಿ ಯಾವೊಂದು ವಸ್ತುಗಳೂ ಇರಲಿಲ್ಲ ಎಲ್ಲವನ್ನೂ ದುಷ್ಕರ್ಮಿಗಳು ಲೂಟಿ ಮಾಡಿದ್ದರು.
ಗಲಭೆಕೋರರು ತನ್ನ ಮನೆಯನ್ನು ಲೂಟಿ ಮಾಡಿದರು ಎನ್ನುವುದಕ್ಕಿಂತಲೂ ಮಿಗಿಲಾಗಿ ತನ್ನ ಆತ್ಮೀಯ ಸ್ನೇಹಿತನಾಗಿದ್ದ ಓಂ ಪ್ರಕಾಶ್ ಮಕ್ಕಳೊಂದಿಗೆ ಲೂಟಿ ಮಾಡಿದ್ದು ಗುಲಾಮ್ ರಸೂಲ್ನಿಗೆ ಸಹಿಸಲಾರದಷ್ಟು ನೋವನ್ನುಂಟು ಮಾಡಿತ್ತು.
ಅದೊಂದು ದಿನ ಗುಲಾಮ್ ರಸೂಲ್ನನ್ನು ಭೇಟಿಯಾಗಲೆಂದು ಆತನ ಮನೆಗೆ ಬಂದ ಓಂ ಪ್ರಕಾಶ್ ಗುಲಾಮ್ ರಸೂಲ್ನನ್ನು ತನ್ನ ಮನೆಗೆ ಬರುವಂತೆ ಆಹ್ವಾನಿಸಿದ.
ತನ್ನ ಮನೆಯ ಸಂಪತ್ತನ್ನು ಕೊಳ್ಳೆ ಹೊಡೆದಿದ್ದಲ್ಲದೆ ತನ್ನನ್ನು ವಧಿಸುವ ಸಲುವಾಗಿ ಏನಾದರೂ ನೆಪವೊಡ್ಡಿ ಈತ ಬಂದಿರಬಹುದೆಂದು ಭಾವಿಸಿದ ಗುಲಾಮ್ ರಸೂಲ್ ಹೆಚ್ಚೇನೂ ಮಾತನಾಡಲಿಲ್ಲ.
ಆದರೆ ಆತ್ಮೀಯ ಸ್ನೇಹಿತನಾಗಿದ್ದ ಓಂ ಪ್ರಕಾಶನ ಆಹ್ವಾನವನ್ನು ತಿರಸ್ಕರಿಸದೆ ಆದದ್ದಾಗಲಿ ಎಂಬ ಭಾವನೆಯಿಂದ ಗುಲಾಮ್ ರಸೂಲ್ ಓಂಪ್ರಕಾಶನೊಂದಿಗೆ ಆತನ ಮನೆಗೆ ಹೋದ.
ಓಂ ಪ್ರಕಾಶನ ಮನೆಯಲ್ಲಿ ನೋಡಿದರೆ ಗುಲಾಮ್ ರಸೂಲ್ನ ಮನೆಯ ಪೀಠೋಪಕರಣಗಳು ಮತ್ತು ಇತರ ಸಾಮಗ್ರಿಗಳನ್ನು ಸಾಲಾಗಿ ಜೋಡಿಸಿ ಇಡಲಾಗಿತ್ತು. ಇದನ್ನು ಕಾಣುತ್ತಿದ್ದಂತೆ ಗುಲಾಮ್ ರಸೂಲ್ ಏನೊಂದೂ ಮಾತೂ ಆಡದೆ ಮೌನವಾಗಿ ನಿಂತ.
ಆಗ ಗುಲಾಮ್ ರಸೂಲ್ನನ್ನು ಅಪ್ಪಿಕೊಂಡ ಓಂ ಪ್ರಕಾಶ್, ಗುಲಮ್ ಭಾಯ್... ಶಸ್ತ್ರಸಜ್ಜಿತರಾಗಿದ್ದ ಗಲಭೆಕೋರರು ತಮ್ಮ ಮನೆಯ ಮೇಲೆ ದಾಳಿ ಮಾಡುವುದನ್ನು ತಡೆಯಲು ನನ್ನಿಂದಾಗಲಿಲ್ಲ. ಹಾಗಾಗಿ ನಿಮ್ಮ ಮನೆಯ ಸಾಮಗ್ರಿಗಳ ಪೈಕಿ ಸಾಧ್ಯವಾದಷ್ಟನ್ನು ಲೂಟಿಕೋರಿಂದ ರಕ್ಷಿಸಬೇಕೆಂಬ ಉದ್ದೇಶದಿಂದ ನನ್ನ ಮಕ್ಕಳನ್ನು ಕರೆದೊಯ್ದು ಸಾಧ್ಯವಾದಷ್ಟು ಸಾಮಾನುಗಳನ್ನು ತಂದು ನಾವಿಲ್ಲಿ ಇಟ್ಟಿದ್ದೇವೆ. ನಿಮ್ಮ ಮನೆಯ ಸಾಮಗ್ರಿಗಳನ್ನು ನೀವು ಯಾವಾಗ ಬೇಕಿದ್ದರೂ ನಿಮ್ಮ ಮನೆಗೆ ತೆಗೆದುಕೊಂಡು ಹೋಗಬಹುದು ಎಂದ.
ಓಂ ಪ್ರಕಾಶನ ಮಾತು ಕೇಳಿದ ಗುಲಾಮ್ ರಸೂಲ್ ಗದ್ಗದಿತ ಕಂಠದಿಂದ ಭಾವುಕನಾಗಿ ಗೆಳೆಯಾ, ಮಕ್ಕಳೊಂದಿಗೆ ನೀನು ಈ ಸಾಮಗ್ರಿಗಳನ್ನು ತರುವುದನ್ನು ನಾನು ಮಹೇಂದ್ರನ ಮನೆಯ ಮಹಡಿಯ ಮೇಲಿನಿಂದ ನೋಡುತ್ತಿದ್ದೆ. ಈ ಹೊತ್ತಿನ ತನಕವೂ ನಾನದನ್ನು ತಪ್ಪಾಗಿ ಗ್ರಹಿಸಿದ್ದೆ ದಯವಿಟ್ಟು ನನ್ನನ್ನು ಕ್ಷಮಿಸು ಗೆಳೆಯ ಎನ್ನುತ್ತಾ ಗುಲಾಮ್ ರಸೂಲ್ ಬಿಕ್ಕಿ ಬಿಕ್ಕಿ ಅತ್ತ.
ವಿವಿಧತೆಯಲ್ಲಿ ಏಕತೆ ಎಂಬ ಸಂದೇಶವನ್ನು ಸಾರಿದ ಭಾರತದ ಜಾತ್ಯತೀತ ತತ್ವದ ಮೂಲ ತಳಹದಿ ಇದೇ ಅಲ್ಲವೇ?
ಅಧಿಕಾರಕ್ಕಾಗಿ ಫ್ಯಾಸಿಸ್ಟ್ ಶಕ್ತಿಗಳು ಏನೆಲ್ಲಾ ಕುತಂತ್ರ ಮಾಡಿದರೂ ಸಹ ಮಹೇಂದ್ರ ಮತ್ತು ಓಂಪ್ರಕಾಶ್ನಂತಹ ಮಾನವೀಯತೆಯ ಪ್ರತೀಕಗಳಿರುವ ತನಕವೂ ಈ ದೇಶದಲ್ಲಿ ಅಂತರ್ಗತವಾಗಿರುವ ಸಾಮರಸ್ಯತೆ ಸೌಹಾರ್ದತೆ ಮತ್ತು ಏಕತೆಯನ್ನು ಇಲ್ಲವಾಗಿಸಲು ಅದ್ಯಾವ ವಿಚ್ಛಿದ್ರಕಾರಿ ಶಕ್ತಿಗಳಿಂದಲೂ ಸಾಧ್ಯವಿಲ್ಲ.
*ಇತ್ತೀಚೆಗೆ ದೆಹಲಿಯಲ್ಲಿ ನಡೆದ ಗಲಭೆಯಲ್ಲಿಯೂ ಹೊರಗಿನಿಂದ ಬಂದು ಗಲಭೆ ನಡೆಸುತ್ತಿದ್ದ ಗಲಭೆಕೇೂರರಿಂದ ಎಲ್ಲಾ ಕಡೆಯೂ ಎಲ್ಲರನ್ನೂ ರಕ್ಷಿಸಲು ಸಾಧ್ಯವಾಗದಿದ್ದರೂ ಸಾಧ್ಯವಾದ ಕಡೆಯೆಲ್ಲ ಹಿಂದೂ, ಕ್ರೈಸ್ತ, ಮುಸ್ಲಿಂ ಮತ್ತು ಸಿಖ್ಖರು ಪರಸ್ಪರ ನೆರವಾಗಿ ಸೌಹಾರ್ಧತೆ ಮೆರೆದಿರಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.*
ಒಟ್ಟಿನಲ್ಲಿ ಹೇಳಬೇಕೆಂದರೆ ರಾಜಕೀಯ ಲಾಭಕ್ಕಾಗಿ ಫ್ಯಾಸಿಸ್ಟ್ ಶಕ್ತಿಗಳು ಈ ದೇಶದ ಭಾವೈಕ್ಯತೆಯನ್ನು ಒಡೆಯಲು ಅದ್ಯಾವ ಕುಟಿಲ ತಂತ್ರಗಳನ್ನು ಅನುಸರಿಸಿದರೂ ಸಹ ದೇಶದ ಜಾತ್ಯತೀತ ಪರಂಪರೆಯಲ್ಲಿ ನಂಬಿಕೆಯಿರುವ ಈ ದೇಶದ ಮೂಲ ನಿವಾಸಿಗಳು ಜಾತಿ ಭೇದ ಮರೆತು ಫ್ಯಾಸಿಸ್ಟ್ ಶಕ್ತಿಗಳ ಕುಟಿಲ ಕುತಂತ್ರಗಳಿಗೆ ಪ್ರತಿ ತಂತ್ರ ಹೂಡಿ ವಿಫಲಗೊಳಿಸುವುದರಲ್ಲಿ ಸಂಶಯವಿಲ್ಲ.
🇮🇳🇮🇳 ಜೈ ಹಿಂದ್, ಜೈ ಭಾರತ್ 🇮🇳🇮🇳
✊✊✊✊✊✊✊
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Tuesday, April 28, 2020
Subscribe to:
Post Comments (Atom)

No comments:
Post a Comment