ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Monday, April 27, 2020
#ಜನಸಾಮಾನ್ಯರ_ಆರೋಗ್ಯ_ರಕ್ಷಣೆಯಲ್ಲಿ #CIPLA_ಎಂಬ_ಔಷಧ_ಕಂಪನಿಯ #ಶ್ಲಾಘನೀಯ_ಸೇವೆ
🏥🏥🏥🏥🏥🏥🏥
✍ ಗಫೂರ್ ಬಾಯಾರ್
〰️〰️〰️〰️〰️〰️〰️
ಆರೋಗ್ಯವು ಮಾನವನ ಹಕ್ಕುಗಳಲ್ಲಿ ಒಂದು. ಯಾರೊಬ್ಬರೂ ಸಹ ಆರೋಗ್ಯದಿಂದ ವಂಚಿತರಾಗಿ ಅನಾರೋಗ್ಯಕ್ಕೆ ಒಳಗಾಗಬಾರದು. ಆಕಸ್ಮಾತ್ ಅನಾರೋಗ್ಯಕ್ಕೆ ಒಳಗಾದರೂ ಸಹ ಅಗತ್ಯ ಚಿಕಿತ್ಸೆ ಮತ್ತು ಔಷಧ ದೊರೆಯದೆ ಸಾವಿಗೀಡಾಗಬಾರದು.
ಆರೋಗ್ಯ ಸೇವೆಯು ದುಬಾರಿಯಾದಾಗ ಹೆಚ್ಚಿನ ಸಂಕಷ್ಟ ಅನುಭವಿಸುವವರು ಬಡವರು. ಯಾವುದೇ ವ್ಯಕ್ತಿ ಅನಾರೋಗ್ಯಕ್ಕೊಳಗಾದರೆ ಚಿಕಿತ್ಸೆ ಮತ್ತು ಔಷಧಿಗಳಿಗಾಗಿಯೇ ಬಹಳಷ್ಟು ಹಣ ವ್ಯಯವಾಗುತ್ತದೆ. ಅನಾರೋಗ್ಯಕ್ಕೊಳಗಾದವನು ಬಡವನಾಗಿದ್ದರೆ ಆತನ ಜೀವನಶೈಲಿ ಕುಗ್ಗುವುದರ ಜೊತೆಗೆ ಅನಾರೋಗ್ಯವು ಆತನನ್ನು ಸಾಲದ ಕೂಪಕ್ಕೆ ತಳ್ಳುವ ಸಾಧ್ಯತೆಯೂ ಇರುವುದರಿಂದ ಮಾನಸಿಕವಾಗಿಯೂ ಆತ ಕುಗ್ಗಿಸುತ್ತದೆ. ಹಾಗಾಗಿ ಅದು ಭವಿಷ್ಯದಲ್ಲಿ ಆತನ ಮಕ್ಕಳನ್ನು ಸಂಕಷ್ಟಕ್ಕೀಡು ಮಾಡುವ ಸಾಧ್ಯತೆಯಿರುವುದರಿಂದ ದೇಶದ ಪ್ರಗತಿಗೂ ಅಡ್ಡಿಯಾಗುತ್ತದೆ.
ಆರೋಗ್ಯದ ಮೇಲೆ ಮಾಡುವ ಖರ್ಚನ್ನು ದುರಂತ ವೆಚ್ಚ ಎನ್ನುತ್ತಾರೆ. ಇದನ್ನು ಮನಗಂಡು ಬಡವ-ಶ್ರೀಮಂತ ಭೇದವಿಲ್ಲದೆ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಔಷಧಿ ದೊರಕಿಸಿ ಈ ದುರಂತ ವೆಚ್ಚವನ್ನು ತಗ್ಗಿಸಲು ತಮ್ಮಿಂದಾದ ನೆರವು ನೀಡಬೇಕೆಂಬ ಸದುದ್ದೇಶದೊಂದಿಗೆ ಔಷಧ ತಯಾರಿಕಾ ಕಂಪನಿಯೊಂದನ್ನು ಸ್ಥಾಪಿಸಿ ಎಲೆಮರೆಯ ಕಾಯಿಯಂತೆ ಸಮಾಜಕ್ಕೆ ತಮ್ಮಿಂದಾದ ಕೊಡುಗೆ ನೀಡಿದ ಸಾಧಕರಲ್ಲೊಬ್ಬರಾಗಿದ್ದಾರೆ ಖ್ವಾಜಾ ಹಮೀದ್.
ಮಹಾತ್ಮ ಗಾಂಧೀಜಿ ಮತ್ತು ಪಂಡಿತ್ ಜವಾಹರಲಾಲ್ ನೆಹರುರವರ ಆತ್ಮೀಯರಾಗಿದ್ದ ಖ್ವಾಜಾ ಹಮೀದ್ರವರು 1935ರಲ್ಲಿ CIPLA ಎಂಬ ಜೆನೆರಿಕ್ ಔಷಧ ಕಾರ್ಖಾನೆಯನ್ನು ಮುಂಬೈನಲ್ಲಿ ಪ್ರಾರಂಭಿಸಿದರು.
ಪ್ರಾರಂಭದಲ್ಲಿ Chemical, Industrial & Pharmaceutical Laboratories ಆಗಿದ್ದ ಅದು 1984ರಲ್ಲಿ CIPLA laboratories ಆಗಿ ರೂಪಾಂತರ ಹೊಂದಿತು.
CIPLA Laboratoriesನಲ್ಲಿ ಜೆನೆರಿಕ್ ಔಷಧಿಗಳನ್ನು ತಯಾರಿಸಲಾಂಭಿಸಿದಾಗ ಅಮೇರಿಕಾದ ಅಂದಿನ ಸರ್ಕಾರವು ಔಷಧಿ ತಯಾರಿಕೆಯನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಪೇಟೆಂಟ್ ಉಲ್ಲಂಘನೆಯ ಮೊಕದ್ದಮೆ ಹೂಡುವುದಾಗಿ ಬೆದರಿಕೆಯೊಡ್ಡಿತ್ತು. ಆಗ ಭಾರತದ ಪ್ರಧಾನ ಮಂತ್ರಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ಖ್ವಾಜಾ ಹಮೀದ್ರವರ ಪುತ್ರರಾದ ಯೂಸುಫ್ ಅಬ್ದುಲ್ ಹಮೀದ್ರನ್ನು ಕರೆದು ಚರ್ಚಿಸಿದಾಗ...
"ನನ್ನ ತಂದೆಯವರು ಈ ಔಷಧಿ ಕಂಪನಿಯನ್ನು ಪ್ರಾರಂಭಿಸಿದ್ದು ಲಾಭ ಗಳಿಕೆಯ ಉದ್ದೇಶದಿಂದ ಮಾತ್ರವಾಗಿರದೆ ಎಲ್ಲರಿಗೂ ಉತ್ತಮ ಗುಣಮಟ್ಟದ ಔಷಧಿಯು ಕೈಗೆಟಕುವ ಬೆಲೆಯಲ್ಲಿ ದೊರೆಯುವಂತಾಗಲಿ ಎಂಬ ಸದುದ್ದೇಶದಿಂದಾಗಿತ್ತು" ಅದನ್ನು ತಾವೂ ಮುಂದುವರಿಸುತ್ತಿರುವುದಾಗಿ ಹೇಳಿದರು.
ಈ ಮಾತು ಕೇಳಿದ ಪ್ರಧಾನಿ ಇಂದಿರಾಗಾಂಧಿಯವರು ಔಷಧಿ ತಯಾರಿಕೆಯನ್ನು ನಿಲ್ಲಿಸಬೇಕೆಂಬ ಅಮೆರಿಕದ ಮನವಿಯನ್ನು ತಿರಸ್ಕರಿಸುವುದರ ಯೂಸುಫ್ ಅಬ್ದುಲ್ ಹಮೀದ್'ರ ಒಡೆತನದ ಕಾರ್ಯವೈಖರಿಯನ್ನು ಪ್ರಶಂಸಿಸಿದ್ದರು.
1947ರ ಸ್ವಾತಂತ್ರ್ಯನಂತರ ಭಾರತ ವಿಭಜನೆಯ ಸಮಯದಲ್ಲಿ ಪಾಕಿಸ್ತಾನದ ಜನಕ ಮುಹಮ್ಮದ್ ಅಲಿ ಜಿನ್ನಾ ಹಮೀದ್ ಖ್ವಾಜಾರನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿದಾಗ ಆ ಆಹ್ವಾನವನ್ನು ಹಮೀದ್ ಖ್ವಾಜಾರವರು ತಿರಸ್ಕರಿಸಿ ಭಾರತದಲ್ಲೇ ಉಳಿದರು.
2015ರಲ್ಲಿ ಭಾರತದ ಹೆಸರಾಂತ ಬ್ರಾಂಡ್ (ಫಾರ್ಮಾಸ್ಯೂಟಿಕಲ್) ಮೂರನೇ ಸ್ಥಾನ ಗಳಿಸಿದ್ದ Cipla ವು, ಗುಣಮಟ್ಟ ಮತ್ತು ರಫ್ತು ಶ್ರೇಷ್ಟತೆ ಇತ್ಯಾದಿ ವಿಷಯಗಳಲ್ಲಿ ಈ ತನಕ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಭಾರತದ ಎಂಟು ಸ್ಥಳಗಳಲ್ಲಿ 34 ಉತ್ಪಾದನಾ ಘಟಕಗಳನ್ನು ಹೊಂದಿರುವ CIPLA Laboratories ನಲ್ಲಿ ಮಲೇರಿಯಾ, ಕ್ಷಯರೋಗ, HIV ಸೋಂಕು, ಉಸಿರಾಟದ ತೊಂದರೆ, ಹೃದಯ ಸಂಬಂಧಿ ಕಾಯಿಲೆ , ಸಂಧಿವಾತ, ಮಧುಮೇಹ , ತೂಕ ನಿಯಂತ್ರಣ ಮತ್ತು ಖಿನ್ನತೆಗೆ ಚಿಕಿತ್ಸೆ
ನೀಡಬಲ್ಲ ಉತ್ತಮ ಗುಣಮಟ್ಟದ ಔಷಧಿಗಳನ್ನು ತಯಾರಿಸಿ ದೇಶ ವಿದೇಶಗಳಿಗೆ ರಫ್ತು ಮಾಡುತ್ತಿದೆ.
ಇಂದು ಜಗತ್ತಿನಲ್ಲಿ ಭೀತಿ ಮೂಡಿಸಿ ಸಾವಿರಾರು ಪ್ರಾಣ ಹಾನಿ ಮಾಡಿ ಜಾಗತಿಕ ಅರ್ಥ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿರುವ ಕೋವಿಡ್-19ಗೂ ಸಹ ಮಲೇರಿಯಾ ಮತ್ತು ಹೆಚ್ಐವಿ ವೈರಸ್ಗಳಿಗೆ ನೀಡುವ ಆ್ಯಂಟಿ ವೈರಲ್ ಔಷಧಗಳನ್ನು Cipla ಕಂಪನಿ ತಯಾರಿಸಿ ದೇಶ-ವಿದೇಶಗಳಿಗೆ ರಫ್ತು ಮಾಡುತ್ತಾ ಅಮೂಲ್ಯವಾದ ಮಾನವ ಜೀವಗಳನ್ನು ಉಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.
ಅಷ್ಟೇ ಅಲ್ಲದೆ ಯೂಸುಫ್ ಅಬ್ದುಲ್ ಹಮೀದ್ರ ಒಡೆತನದ Cipla laboratories ಕೊರೋನಾ ಸೋಂಕು ಪರೀಕ್ಷಿಸುವ ಕಿಟ್ ಅನ್ನು ತಯಾರಿಸಿ ಮೂಲ ಬೆಲೆಯಲ್ಲಿ ಪೂರೈಸುವುದರ ಜೊತೆಗೆ ಜಗತ್ತಿನಲ್ಲಿ ಮರಣಮೃದಂಗ ಬಾರಿಸುತ್ತಿರುವ ಈ ಕೊರೋನಾ ವೈರಸ್ಗೆ ಔಷಧಿ ಕಂಡು ಹಿಡಿಯುವ ಸಲುವಾಗಿ ಸಂಶೋಧನೆ ನಡೆಸುತ್ತಿದೆ.
ಆದರೆ ಕೋವಿಡ್ 19 ಎಂಬ ಮಹಾಮಾರಿಯಿಂದಾಗಿ ಇಡೀ ಜಗತ್ತೇ ತಲ್ಲಣಿಸಿರುವಾಗ ಕಾಮಾಲೆ ಕಣ್ಣಿನ ಕೆಲ ಮಾಧ್ಯಮಗಳು ಮಾತ್ರ ಕೋರೋನಾ ವೈರಸ್ಸನ್ನು ಒಂದು ಸಮುದಾಯದ ತಲೆಗೆ ಕಟ್ಟಲು ವಿಫಲ ಪ್ರಯತ್ನ ನಡೆಸುತ್ತಿರುವುದು ವಿಪರ್ಯಾಸ.
🍂🍂🍂🍂🍂🍂🍂🍂
Labels:
ಆರೋಗ್ಯ.
Subscribe to:
Post Comments (Atom)


No comments:
Post a Comment