😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰 🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 3⃣7⃣
**********************
*صَـلــُّوا عَـلَـى النَّبِيِّ ﷺ وَآلـِهِ*
*اللَّهُمَّ صَلِّ عَلَى سَيِّدِنَا مُحَمَّدٍ*
*عَدَدَ مَا فِي عِلْمِ الله*
*صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔
( *ನಿನ್ನೆಯ ಸಂಚಿಕೆ ಭಾಗ 36 ಎಂದಿರಬೇಕಿದ್ದಲ್ಲಿ ಭಾಗ 37 ಎಂದು ತಪ್ಪಾಗಿ ನಮೂದಾಗಿತ್ತು. ಕಣ್ತಪ್ಪಿನಿಂದಾದ ತಪ್ಪಿಗೆ ವಿಷಾದಿಸುತ್ತೇನೆ -ಲೇಖಕ*
〰〰〰〰〰〰〰〰〰
ಇದನ್ನು ಕಂಡು ಅವಾಕ್ಕಾದ ಹುಸೈನ್ (ರ) ರವರು.. ⬇
ಇದನ್ನು ಕಂಡು ಅವಾಕ್ಕಾದ *ಹುಸೈನ್ (ರ)ರವರು* ಅಸಹಾಯಕತೆಯಿಂದ ಮಗುವನ್ನು ತಮ್ಮೆದೆಗೊತ್ತಿ ಹಿಡಿದು *ಅಲಿ ಅಸ್ಗರ್(ರ) ರವರ* ದೇಹಕ್ಕೆ ಹೊಕ್ಕಿದ ಬಾಣವನ್ನು ಕಿತ್ತೆಸೆಯುತ್ತಾ...
*ಬೇಡ ನನಗಿನ್ನು ನಿಮ್ಮ ನೀರಿನ ಅವಶ್ಯಕತೆಯಿಲ್ಲ ಎನ್ನುತ್ತಾ ಮಗುವನ್ನೆತ್ತಿಕೊಂಡು ಡೇರೆಗೆ ಹಿಂದಿರುಗಿದರು.*
ತಮ್ಮ ಕರುಳಿನ ಕುಡಿ ನೀರು ಕುಡಿದು ತೃಪ್ತಿಯಿಂದಿರಬಹುದೆಂದು ಭಾವಿಸಿದ್ದ ಬೀವಿ ಸಯ್ಯಿದತುನಾ ಶಹ್ರು ಬಾನು (ರ) ಡೇರೆಯೊಳಗೆ ಬಂದ ಹುಸೈನ್ (ರ) ರವರ ಕೈಯ್ಯಲ್ಲಿರುವ ಅಲಿ ಅಸ್ಗರ್ (ರ)ರವರಿಗೆ ಹೊದಿಸಿದ್ದ ಆ ಬಿಳಿ ವಸ್ತ್ರ ರಕ್ತದಲ್ಲಿ ತೇೂಯ್ದಿರುವುದನ್ನು ಕಂಡು ಹೌಹಾರುತ್ತಾ ಧಾವಿಸಿ ಬಂದು ರಕ್ತದ ಮಡುವಿನಲ್ಲಿ ಮಲಗಿರುವ ತಮ್ಮ ಕರುಳಿನ ಕುಡಿಯನ್ನು ಕಂಡು ದಿಗ್ಭ್ರಾಂತರಾದರು. ಹೆತ್ತ ಕರುಳಿನ ಸಂಕಟ ವರ್ಣನೆಗೆ ನಿಲುಕೀತೇ? ಮಹದಿ ಶಹ್ರುಬಾನ್ (ರ)ರವರ ರೇೂದನ ಹೇಳತೀರದು.
ತಮ್ಮ ಮನಸ್ಸಿನ ನೇೂವು ಮತ್ತು ಸಂಕಟವನ್ನು ತಾಳಲಾರದ ಬೀವಿ ಸಯ್ಯಿದತುನಾ ಶಹ್ರು ಬಾನು (ರ) ಕೇಳಿದರು...
*ಪ್ರಿಯರೇ....*
*ನನ್ನ ಮಗುವನ್ನು ನಾನು ನಿಮ್ಮ ಕೈಗಿತ್ತಿದ್ದು ಕೊಲ್ಲಿಸಲೆಂದೇ?*
ತಮ್ಮ ಪ್ರಿಯತಮೆಯಿಂದ ಈ ಮಾತನ್ನು ನಿರೀಕ್ಷಿಸಿರದ ಹುಸೈನ್ (ರ) ಹೇಳಿದರು...
*ಪ್ರಿಯೇ..*
*ಏನು ಹೇಳುತ್ತಿರುವೆ ನೀನು? ಅಲಿ ಅಸ್ಗರ್ (ರ) ನಿನ್ನಂತೆಯೇ ನನಗೂ ಕರುಳ ಕುಡಿಯಲ್ಲವೇ? ಆ ದುಷ್ಟ ಬಾಣ ಹೂಡುವುದನ್ನು ನಾನೇನಾದರೂ ಕಂಡಿದ್ದರೆ ಆ ಬಾಣಕ್ಕೆ ನನ್ನ ಎದೆಯೊಡ್ಡಿಯಾದರೂ ನಮ್ಮ ಕಂದಮ್ಮನ ಜೀವವುಳಿಸಲು ನಾನು ಶ್ರಮಿಸುತ್ತಿದ್ದೆ. ಆದರೆ ಆ ದುಷ್ಟ ಹಾಲುಗಲ್ಲದ ಹಸುಳೆಯೆಂಬುದನ್ನೂ ಪರಿಗಣಿಸದೆ ನಮ್ಮ ಕರುಳಿನ ಕುಡಿಗೆ ಬಾಣ ಹೂಡಿ ಕೊಂದು ಬಿಟ್ಟ ನಾನೇನು ಮಾಡಲಿ ಎನ್ನುತ್ತಾ ದುಃಖ ಸಹಿಸಲಾರದೆ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಾಗ..*
ಸಹನೆಯ ಸಹಧರ್ಮಿಣಿಯಾದ ಸಯ್ಯಿದತುನಾ ಬೀವಿ ಶಹ್ರುಬಾನು (ರ) ಹುಸೈನ್ (ರ)ರನ್ನು ಸಂತೈಸುತ್ತಾ,
ಪ್ರಿಯರೇ...
ಹೆತ್ತ ಕರುಳಲ್ಲವೇ ಸಂಕಟದಿಂದ ಹಾಗಂದೆ ದಯವಿಟ್ಟು ಕ್ಷಮಿಸಿ. ಅಲ್ಲಾಹನ ವಿಧಿಯಲ್ಲವೇ....? ಅಲ್ಲಾಹು ತೌಫೀಖ್ ನೀಡಿದರೆ ನಮ್ಮ ಮಕ್ಕಳನ್ನು ನಾವು ಸ್ವರ್ಗದಲ್ಲಿ ಭೇಟಿಯಾಗೇೂಣ ಇನ್ಷಾಅಲ್ಲಾಹ್....
ಎನ್ನುತ್ತಾ ಪತಿಯನ್ನು ಸಮಾಧಾನಿಸಿದರು.
_(ಪ್ರಿಯ ಓದುಗರೇ... ಯುದ್ಧರಂಗದಲ್ಲಿ ತಮ್ಮ ಕರುಳಿನ ಕುಡಿಗಳು ತಮ್ಮ ಕಣ್ಮುಂದೆಯೇ ಕೊಲ್ಲಲ್ಪಡುತ್ತಿದ್ದರೂ ಅಲ್ಲಾಹನ ವಿಧಿಯೆಂದು ಬಗೆದು ಅವನ ಪರೀಕ್ಷೆಗೆ ವಿಧೇಯರಾಗಿ ಇಷ್ಟೊಂದು ಸಹನೆ ಮತ್ತು ತಾಳ್ಮೆ ವಹಿಸಿದ ಧೀರ ಮಹದಿ ಮತ್ತೊಬ್ಬರಿಲ್ಲವೆಂದು ಚರಿತ್ರಾಕಾರರು ವ್ಯಾಖ್ಯಾನಿಸಿದ್ದಾರೆ)_
ನಂತರ *ಹುಸೈನ್ (ರ)* ಖಡ್ಗದಿಂದ ಖಬರ್ ತೇೂಡಿ ಅಹ್ಲ್'ಬೈತಿನ ಎರಡು ಕರುಳಿನ ಕುಡಿಗಳಾದ ಅಲಿ ಅಕ್ಬರ್ (ರ) ಮತ್ತು ಅಲಿ ಅಸ್ಗರ್ (ರ)ರವರ ಜನಾಝಗಳ ಅಂತ್ಯಕ್ರಿಯೆ ನೆರೆವೇರಿಸುವಾಗ, ವರ್ಷಧಾರೆಯಂತೆ ಹರಿಯುವ ಕಂಬನಿಯೊಂದಿಗೆ ತಮ್ಮ ನಾಡಿಮಿಡಿತದ ಒಡನಾಡಿಗಳಂತಹ ಮುದ್ದು ಕಂದಮ್ಮಗಳ ಜನಾಝವನ್ನು ಎದೆಗೊತ್ತಿ ಹಿಡಿದು ಹೇಳಿದರು....
*"ನನ್ನಂತರಂಗದ ಒಡನಾಡಿಯೇ.., ನಿನ್ನ ದಾಹ ಶಮನಕ್ಕೆ ನನ್ನ ಕಣ್ಣೀರ ಹನಿಗಳೇ ಸಾಲುತ್ತಿತ್ತು. ಆದರೇನು ಮಾಡಲಿ? ಅಲ್ಲಾಹನ ವಿಧಿಯನ್ನು ತಡೆಯಲು ನಮ್ಮಿಂದ ಸಾಧ್ಯವೇ? ಆ ದುಷ್ಟ ಬಾಣ ಹೂಡಿದ್ದನ್ನು ನಾನೇನಾದರೂ ಕಂಡಿದ್ದರೆ ಆ ಬಾಣಕ್ಕೆ ನನ್ನ ಎದೆಯೊಡ್ಡಿಯಾದರೂ ನಿನ್ನನ್ನು ಉಳಿಸಲು ನಾನು ಶ್ರಮಿಸುತ್ತಿದ್ದೆ. ಅಸಹಾಯಕನಾದ ನನ್ನಿಂದ ನಿಮ್ಮನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿಮ್ಮ ತಾಯಿ ಹೇಳಿದಂತೆ ಇನ್ಷಾ ಅಲ್ಲಾಹ್ ನಾಳೆ ಸ್ವರ್ಗದಲ್ಲಿ ಭೇಟಿಯಾಗೇೂಣ ಎನ್ನುತ್ತಾ...*
ಆ ಶುಹದಾಗಳ ಜನಾಝಗಳನ್ನು ಕರ್ಬಲಾದ ಮಣ್ಣಿನಲ್ಲಿ ದಫನ್ ಮಾಡಿ ಡೇರೆಗೆ ಮರಳಿದರು.
ಡೇರೆಯಲ್ಲಂತೂ ದಿವ್ಯ ಮೌನ ಆವರಿಸಿತ್ತು. ಯಾರ ಮುಖದಲ್ಲೂ ಕಳೆಯಿಲ್ಲ. ಕಾರಣ ಮಕ್ಕಾದಿಂದ ಹೊರಟು ಬಂದ ಈ ಯಾತ್ರಾ ತಂಡದ ಬಹುತೇಕ ಸದಸ್ಯರು ಶತ್ರುಗಳ ದಾಳಿಗೀಡಾಗಿ ಶಹೀದಾಗಿದ್ದರು.
ಮಗ್ರಿಬ್'ನ ಸಮಯ...
ಹುಸೈನ್ (ರ) ರವರ ಹಿರಿಯ ಮಗ ಝೈನುಲ್ ಆಬಿದೀನ್ (ರ) ರವರು ಜ್ವರದಿಂದ ಬಳಲುತ್ತಾ ಡೇರೆಯ ಒಂದು ಮೂಲೆಯಲ್ಲಿ ಮಲಗಿದ್ದರು..... ⤵
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
No comments:
Post a Comment