😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰 🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 3⃣9⃣
**********************
*صَـلــُّوا عَـلَـى النَّبِيِّ ﷺ وَآلـِهِ*
*اللَّهُمَّ صَلِّ عَلَى سَيِّدِنَا مُحَمَّدٍ*
*عَدَدَ مَا فِي عِلْمِ الله*
*صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔
ಸಯ್ಯದುನಾ ಹುಸೈನ್ (ರ)ರವರು ಭಾವುಕರಾಗಿ ನುಡಿದ ಆ ಮಾತುಗಳನ್ನು ಕೇಳಿದ ಹಝ್ರತ್ ಹುರ್ರ್ (ರ) ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು... ⬇
ತುಸು ಹೊತ್ತಿನ ನಂತರ *ಹುರ್ರ್ (ರ)* ಹೇಳಿದರು....
*ಯಾ ಹುಸೈನ್ (ರ) ರವರೇ...* ಆ ಪತ್ರವನ್ನು ನಾನು ನನ್ನ ಕೈಯಾರೆ ಬರೆದುದಾದರೂ, ಕೂಫ ನಿವಾಸಿಗಳ ಒಕ್ಕೊರಲ ಅಪೇಕ್ಷೆಯ ಮೇರೆಗೆ ಮತ್ತು ಅವರ ಹೇಳಿಕೆಯ ಆಧಾರದಿಂದ ನಾನು ಆ ಪತ್ರ ಬರೆದಿದ್ದೆ. ಮಾತ್ರವಲ್ಲ ಸಾವಿರಾರು ಸಂಖ್ಯೆಯ ಕೂಫಾ ನಿವಾಸಿಗಳು ಆ ಪತ್ರಕ್ಕೆ ಸಹಿ ಹಾಕಿದ್ದುದನ್ನು ತಾವು ಗಮನಿಸಿರಬಹುದು.
ಆದರೆ.. ನಂತರ ತಾವು ಮಕ್ಕದಿಂದ ಹೊರಟು ಬಂದಿದ್ದಾಗಲೀ ಮತ್ತು ಅನಂತರ ನಡೆದ ಅಹಿತಕರ ಘಟನೆಗಳಾಗಲೀ ನನ್ನ ಗಮನಕ್ಕೆ ಬಂದಿರಲಿಲ್ಲ. ಕಾರಣ ನಾನು ವ್ಯಾಪಾರದ ನಿಮಿತ್ತ ಹೋಗಿದ್ದೆ. ಹಿಂದಿರುಗುವಾಗ ದಾರಿ ಮಧ್ಯೆ ವಿಷಯಗಳೆಲ್ಲ ತಿಳಿಯುತ್ತಿದ್ದಂತೆ ಮನೆಗೂ ಹೇೂಗದೆ ನೇರವಾಗಿ ತಮ್ಮನ್ನು ಕಂಡು ತಮಗೆ ನನ್ನಿಂದಾದ ನೆರವು ನೀಡುವ ಸದುದ್ದೇಶದಿಂದ ಇಲ್ಲಿಗೆ ಬಂದೆ. ಆದ್ದರಿಂದ ಈಗ ತಾವು ಏಕಾಂಗಿಯಲ್ಲ ತಮ್ಮೊಂದಿಗೆ ನಾನೂ ಇದ್ದೇನೆ. ದಯವಿಟ್ಟು ನನಗೊಂದು ಖಡ್ಗವನ್ನು ಕೊಡಿ ಆ ವಂಚಕರ ವಿರುದ್ಧ ನಾನೂ ಹೇೂರಾಡುತ್ತೇನೆ.
ಅಲ್ಲಾಹನು ಅನುಗ್ರಹಿಸಿದರೆ ಮತ್ತೆ ಸ್ವರ್ಗದಲ್ಲಿ ಭೇಟಿಯಾಗೇೂಣ ಎನ್ನುತ್ತಾ ಖಡ್ಗವೊಂದನ್ನು ಪಡೆದು ರಣರಂಗಕ್ಕೆ ಧುಮುಕಿದ *ಹಝ್ರತ್ ಹುರ್ರ್ (ರ)* ತಮ್ಮ ಕಂಚಿನ ಕಂಠದಿಂದ ಘರ್ಜಿಸುತ್ತಾ ಹೇಳಿದರು...
*ಓ.. ವಂಚಕರೇ..*
*ನಿಮ್ಮ ಮಾತಿನ ಮೇಲೆ ವಿಶ್ವಾಸವಿರಿಸಿದ ಕಾರಣದಿಂದಲ್ಲವೇ ಅಲ್ಲಾಹನ ರಸೂಲರ ಪೌತ್ರರಾದ ಹುಸೈನ್ (ರ) ರನ್ನು ನಾನಿಲ್ಲಿಗೆ ಕರೆಸಿದ್ದು..? ನಾನು ಬರೆದ ಪತ್ರವನ್ನು ನೇೂಡಿ ನಮ್ಮ ನೆರವಿಗಾಗಿ ಧಾವಿಸಿ ಬಂದ ಅಹ್ಲ್'ಬೈತಿನ ಕುಡಿಯನ್ನು ಇಷ್ಟು ಕಠೇೂರವಾಗಿ ಸ್ವಾಗತಿಸುವುದೇ...?*
*ಹಾಗಾಗಿ ನಿಮ್ಮಂತಹ ನಯವಂಚಕರಲ್ಲೊಬ್ಬನಾಗಲು ನನ್ನಿಂದ ಸಾಧ್ಯವಿಲ್ಲ. ಹುಸೈನ್ (ರ)ರವರ ತಂಡದ ಸದಸ್ಯರನ್ನು ಕೊಂದ ವೀರಾಧಿವೀರರು ಈಗ ಬನ್ನಿ. ನೀವೆಸಗಿದ ವಂಚನೆಗೆ ಈ ಖಡ್ಗದಿಂದ ನಾನು ಉತ್ತರ ನೀಡುತ್ತೇನೆ. ಎಂದು ಘರ್ಜಿಸುತ್ತಾ ಎದುರಿಗೆ ಬಂದ ಒಬ್ಬೊಬ್ಬ ಶತ್ರು ಸೈನಿಕನನ್ನೂ ಬಿಡದೆ ಸದೆ ಬಡಿಯುತ್ತಾ ಕೊನೆಗೊಬ್ಬ ಶತ್ರು ಸೈನಿಕನ ಖಡ್ಗದ 🗡 ದಾಳಿಗೀಡಾಗಿ ಶಹೀದಾದರು.* 😰
ಡೇರೆಯ ಹತ್ತಿರ ಇದೆಲ್ಲವನ್ನೂ ಗಮನಿಸುತ್ತಿದ್ದ ಐವತ್ನಾಲ್ಕು ವರ್ಷದ ಅಹ್ಲ್'ಬೈತಿನ ಕಣ್ಮಣಿಯಾದ ಇತಿಹಾಸ ಪುರುಷ ಸಯ್ಯದುನಾ ಹುಸೈನ್ (ರ)ರವರು ಹುರ್ರ್ (ರ) ಶಹೀದಾಗುತ್ತಿದ್ದಂತೆ ಸ್ವತಃ ಹಸೈನ್ (ರ)ರವರೇ ರಣರಂಗಕ್ಕೆ ನೇರವಾಗಿ ಧುಮುಕಿ ಶತ್ರು ಸೈನ್ಯದ ವಿರುದ್ಧ ವೀರಾವೇಶದಿಂದ ಹೇೂರಾಡುತ್ತಾ ಹಲವಾರು ಶತ್ರು ಸೈನಿಕರನ್ನು ಕೊಚ್ಚಿ ಹಾಕುತ್ತಾ ಮುನ್ನುಗ್ಗಿದರಾದರೂ.....
ಆರು ದಿನಗಳಿಂದ ಆಹಾರವಿಲ್ಲದೆ, ನಾಲ್ಕು ದಿನಗಳಿಂದ ಗುಟುಕು ನೀರೂ ಕುಡಿಯದೆ ಬಳಲಿ ಬೆಂಡಾಗಿದ್ದ ಸಯ್ಯದುನಾ ಹುಸೈನ್ (ರ)ರವರು ಸ್ವಲ್ಪ ಹೊತ್ತಿನಲ್ಲೇ ಆಯಾಸದಿಂದ ಬಳಲಿದರು.
ಆಯಾಸ ಸಹಿಸಲಾರದಾದಾಗ ಕೊನೆಗೆ ನೀರಿಗಾಗಿ ಯೂಪ್ರಟಿಸ್ ನದಿಯತ್ತ ತಮ್ಮ ಕುದುರೆಯನ್ನು ತಿರುಗಿಸಿದರು.
ಇದನ್ನು ಕಂಡ ಉಬೈದ್ ತನ್ನ ಸೈನಿಕರನ್ನುದ್ದೇಶಿಸಿ ಹೇಳಿದನು.
ಹೇಯ್.. ನೇೂಡಲ್ಲಿ
*ಹುಸೈನ್ (ರ)* ನೀರಿಗಾಗಿ ನದಿಯತ್ತ ಹೋಗುತ್ತಿದ್ದಾರೆ.
ಆಹಾರ ಮತ್ತು ನೀರಿಲ್ಲದೆ ಇಷ್ಟು ಹೊತ್ತು ಹೇೂರಾಡಿ ನಮ್ಮ ಅನೇಕ ಸೈನಿಕರನ್ನು ಕೊಂದು ಹಾಕಿದ *ಹುಸೈನ್ (ರ) ರವರ* ಶಕ್ತಿಯನ್ನು ನೀವು ಗಮನಿಸಿದಿರಲ್ಲವೇ?
ಒಂದು ವೇಳೆ ಅವರೇನಾದರೂ ನೀರು ಕುಡಿದು ಸುಧಾರಿಸಿಕೊಂಡರೆ ಮತ್ತೆ ಅವರನ್ನು ಎದುರಿಸಲು ನಮ್ಮಿಂದ ಸಾಧ್ಯವಾಗದು. ಹಾಗಾಗಿ ಯಾವ ಅಸ್ತ್ರ ಪ್ರಯೇೂಗಿಸಿಯಾದರೂ ಸರಿ ನದಿಗಿಳಿಯದಂತೆ ಅವರನ್ನು ತಡೆಯಲೇಬೇಕು ಎಂದನು.
ಆಗ ನದಿ ದಂಡೆಯಲ್ಲಿ ಬಿಲ್ಲು ಬಾಣಗಳೊಂದಿಗೆ ಕಾವಲು ಕಾಯುತ್ತಿದ್ದ ಶತ್ರು ಸೈನಿಕರು ಹುಸೈನ್ (ರ)ರವರತ್ತ ಬಾಣ ಮತ್ತು ಈಟಿಗಳಿಂದ ದಾಳಿ ಮಾಡಲಾರಂಭಿಸಿದರು.
ನೂರಾರು ಸೈನಿಕರು ಏಕಕಾಲದಲ್ಲಿ ಅಸಂಖ್ಯ ಬಾಣಗಳ ಸುರಿಮಳೆಗೈದರೆ ತಪ್ಪಿಸಿಕೊಳ್ಳಲು ಅವಕಾಶವೆಲ್ಲಿದೆ?
*ಹಲವಾರು ಬಾಣಗಳು ಸಯ್ಯದುನಾ ಹುಸೈನ್ (ರ)ರವರ ದೇಹಕ್ಕೆ ಹೊಕ್ಕಿದವು. ಒಂದು ಬಾಣವಂತೂ ಅಲ್ಲಾಹನ ರಸೂಲ್ ﷺರ ಹೃದಯ ಕುಸುಮವಾದ ಸಯ್ಯದುನಾ ಹುಸೈನ್ (ರ)ರವರ ಹಣೆಯನ್ನು ಕೊರೆದು ತಲೆಯೊಳಗೆ ಹೊಕ್ಕಿತು.*
ಆಗ... ⤵
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
No comments:
Post a Comment