Monday, April 16, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 3⃣8⃣
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

ಮಗ್ರಿಬ್'ನ ಸಮಯ...

ಹುಸೈನ್ (ರ) ರವರ ಹಿರಿಯ ಮಗ ಝೈನುಲ್ ಆಬಿದೀನ್ (ರ) ರವರು  ಜ್ವರದಿಂದ ಬಳಲುತ್ತಾ ಡೇರೆಯ ಒಂದು ಮೂಲೆಯಲ್ಲಿ ಮಲಗಿದ್ದರು..... ⬇

ಮಗ್ರಿಬ್ ನಮಾಝ್ ನಿರ್ವಹಿಸಿ ಡೇರೆಯ ಒಂದು ಮೂಲೆಯಲ್ಲಿ ಒರಗಿ ಕುಳಿತಿದಿದ್ದ ಸಯ್ಯದುನಾ ಹುಸೈನ್ (ರ) ರಿಗೆ ನಿದ್ರೆಯ ಜೇೂಂಪು ಹತ್ತಿ ನಿದ್ರೆಗೆ ಜಾರಿದರು. ಆಗ ಅವರಿಗೊಂದು ಕನಸು.....

ಆ ಕನಸಿನಲ್ಲಿ ಅಲ್ಲಾಹನ ಹಬೀಬರೂ, ಅಂಬಿಯಾಗಳ ನೇತಾರರೂ ವಿಶ್ವ ಗುರುವೂ ಮತ್ತು ಹುಸೈನ್ (ರ)ರವರ ಪಿತಾಮಹರೂ ಆದ *ಅಶ್ರಫುಲ್ ಖಲ್ಖ್ ಸಯ್ಯದುನಾ ಮುಹಮ್ಮದ್ ಮುಸ್ತಫಾ ﷺ ತಂಙಳ ರು ಹುಸೈನ್ (ರ) ರವರ ಗಲ್ಲ ಹಿಡಿದು...*

*ಯಾ... ಹುಸೈನ್ (ರ).., ಏನಿದು ಗಡ್ಡದಲ್ಲಿ ರಕ್ತ ಕಲೆ..?? ನಿನ್ನ ಮುಖ ಮತ್ತು ಗಡ್ಡ ರಕ್ತದಲ್ಲಿ ತೇೂಯ್ದಿದೆಯಲ್ಲಾ....!?*

ಹುಸೈನ್ (ರ) ಮರು ಮಾತನಾಡದೆ ಅಲ್ಲಾಹನ ಹಬೀಬರ ﷺ ಆ ಪ್ರಸನ್ನ ವದನವನ್ನೇ ಬೆರಗುಗಣ್ಣಿನಿಂದ ನೇೂಡುತ್ತಿದ್ದರು.

*ಆಗ ಮಾತು ಮುಂದುವರೆಸಿದ ಸಯ್ಯದುನಾ ಮುಹಮ್ಮದ್ ಮುಸ್ತಫಾ ﷺ ರವರು ಮಗೂ... ನಿನಗೆ ಈ ಯುದ್ಧದಲ್ಲಿ ಜಯಶಾಲಿಯಾಗಬೇಕೆಂಬ ಆಕಾಂಕ್ಷೆಯಿದ್ದರೆ ಹೇಳು. ನಿನ್ನ ಗೆಲುವಿಗಾಗಿ ನಾನು ಅಲ್ಲಾಹನೊಂದಿಗೆ ಪ್ರಾರ್ಥಿಸುತ್ತೇನೆ..!*

*ಆದರೆ ನೀನು ಈ ಯುದ್ಧದಲ್ಲಿ ಜಯಶಾಲಿಯಾಗುವುದಕ್ಕಿಂತ ಅಪಾರ ಪುಣ್ಯಗಳೊಂದಿಗೆ ನೀನು ಬಹು ಬೇಗನೆ ನನ್ನ ಬಳಿ ಬರಬೇಕೆಂಬುದು ನನ್ನ ಆಕಾಂಕ್ಷೆಯಾಗಿದೆ. ಹಾಗಾಗಿ ನಿನಗಾಗಿ ನಾನು ಸ್ವರ್ಗದ ಕವಾಡಗಳನ್ನು ತೆರೆದಿಟ್ಟು ನಿನ್ನ ದಾರಿ ಕಾಯುತ್ತಿರುತ್ತೇನೆ." ಎನ್ನುತ್ತಿದ್ದಂತೆ*

ತಟ್ಟನೆ ನಿದ್ರೆಯಿಂದ ಎಚ್ಚೆತ್ತ ಸಯ್ಯದುನಾ ಹುಸೈನ್ (ರ)ರಿಗೆ ತಾವು ಇಹಲೇೂಕಕ್ಕೆ ವಿದಾಯ ಹೇಳುವ ಸಮಯ ಸನ್ನಿಹಿತವಾಗಿದೆಯೆನ್ನುವುದು ಮನದಟ್ಟಾಗಿ ನಿಶ್ಚಿಂತೆಯಿಂದ ನಿರಾಳರಾದರು.

*ಮರುದಿನ ಮುಹರ್ರಮ್ ಹತ್ತರ ಶುಕ್ರವಾರ.*

ಬೆಳಿಗ್ಗೆ ಬಹು ಬೇಗನೆ ಎದ್ದ ಸಯ್ಯದುನಾ ಹುಸೈನ್ (ರ) ತುಂಬು ಲವಲವಿಕೆ ಮತ್ತು ಉತ್ಸಾಹದಿಂದ ಫಜ್'ರ್ ನಮಾಝ್ ನಿರ್ವಹಿಸಿ ರಣರಂಗಕ್ಕೆ ಹೊರಡಲು ಪಡೆಯಂಗಿ ಧರಿಸುತ್ತಿರುವಾಗ ಹುಸೈನ್ (ರ)ರವರ ಬಾಳ ಸಂಗಾತಿಯಾದ ಮಹದಿ ಸಯ್ಯಿದತುನಾ ಬೀವಿ ಶಹ್ರುಭಾನು (ರ) ಕೇಳಿದರು, ತಾವು ಯುದ್ಧಕ್ಕೆ ಹೇೂಗುತ್ತಿರುವಿರಾ?

*"ಹೌದು" ಎಂದರು ಹುಸೈನ್ (ರ)*

ಆಗ ಅಲ್ಲೇ ಇದ್ದ ಹುಸೈನ್ (ರ)ರವರ ಸಹೋದರಿ ಸಯ್ಯಿದತುನಾ ಝೈನಬಾ ಬೀವಿ (ರ) ಕೇಳಿದರು...

*ಅನ್ನ ನೀರಿಲ್ಲದೆ ಪರದಾಡುತ್ತಾ ಪರವೂರಿನಲ್ಲಿ ಬೀಡು ಬಿಟ್ಟು ಅಸಹಾಯಕರಾಗಿರುವ ನಮಗೆ ಏಕೈಕ ಆಸರೆಯಾಗಿರುವ ತಾವೂ ಹೇೂದರೆ ನಮಗಿನ್ಯಾರು ದಿಕ್ಕು?*

*"ಹಸ್ಬಿಯಲ್ಲಾಹ್"....*

_ಅಲ್ಲಾಹನಿದ್ದಾನೆ. ಎಲ್ಲಕ್ಕೂ ಅವನು ಸಾಕು ಎನ್ನುತ್ತಾ ಹೊರಗೆ ಬಂದರು._

ಆಗ ಕುದುರೆಯೊಂದರಲ್ಲಿ ಒಬ್ಬ ವ್ಯಕ್ತಿ ಧಾವಿಸಿ ಇತ್ತ ಕಡೆಗೇ ಬರುತ್ತಿರುವುದನ್ನು ಕಂಡ ಹುಸೈನ್ (ರ)ರವರು ಒರೆಯಿಂದ ಖಡ್ಗವನ್ನು ಎಳೆದು ಅಲ್ಲೇ ನಿಂತರು.

ಬಂದ ಆ ವ್ಯಕ್ತಿಯು *ಹುಸೈನ್ (ರ) ರವರು* ಕುಟುಂಬದೊಂದಿಗೆ ಸಂತೇೂಷ ಮತ್ತು ಸಮಾಧಾನದಿಂದ ಮಕ್ಕಾದಲ್ಲಿರುವಾಗ ಕೂಫ ನಿವಾಸಿಗಳ ನೆರವಿಗಾಗಿ ತಾವು ಬರದಿದ್ದರೆ ನಾಳೆ ಅಲ್ಲಾಹನ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ಸಾಕ್ಷ್ಯ ನುಡಿಯುವೆವು ಎಂದು  ಕೊನೆಯದಾಗಿ ಪತ್ರ ಬರೆದಿದ್ದ *ಹಝ್ರತ್ ಹುರ್ರ್ (ರ)* ಆಗಿದ್ದರು.

*ಹುರ್ರ್ (ರ)ರವರನ್ನು* ಕಂಡೊಡನೆ ಖಡ್ಗವನ್ನು ಒರೆಗೆ ಹಾಕಿದ *ಹುಸೈನ್  (ರ)* ಹೇಳಿದರು..

ಯಾ *ಹುರ್ರ್ (ರ)..* ಭೇಷ್... ಅತಿಥಿಗಳನ್ನು ಅತ್ಯುತ್ತಮ ರೀತಿಯಲ್ಲಿ ಸತ್ಕಾರಿಸಿ ಬರ ಮಾಡಿಕೊಂಡಿದ್ದೀರಿ.. ನಿಮ್ಮ ನೆರವಿಗಾಗಿ ಮಕ್ಕದಿಂದ ಹೊರಟು ಬಂದ ನಮ್ಮ ತಂಡದಲ್ಲಿ ಇನ್ನು ಕೆಲವು ಮಹಿಳೆಯರು ಮತ್ತು ಮಕ್ಕಳು ಮಾತ್ರ ಉಳಿದಿದ್ದಾರೆ. ಅಸಹಾಯಕರಾದ ಅವರನ್ನು ಕೊಂದು ಮುಗಿಸುವುದು ಇನ್ನು ನಿಮಗೆ ಕಷ್ಟವೇನಲ್ಲ. ಕಾರಣ ನಿಮಗೆ ಪ್ರತಿರೇೂಧವೊಡ್ಡಲು ನನ್ನ ಹೊರತು ಇನ್ಯಾರೂ ಜೀವದೊಂದಿಗಿಲ್ಲ ಎಂದರು ಭಾವುಕರಾಗಿ...

ಹುಸೈನ್ (ರ)ರವರು ಭಾವುಕರಾಗಿ ನುಡಿದ ಆ ಮಾತುಗಳನ್ನು ಕೇಳಿದ *ಹುರ್ರ್ (ರ)* ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡

No comments:

Post a Comment