*ಆಸಿಫಾ ಪ್ರಕರಣವನ್ನು ಹಿಂದು ಮುಸ್ಲಿಂ ಇಶ್ಯು ಮಾಡಿ ಕೋಮು ದ್ವೇಷ ಹರಡುವ ದುರುಳರಿದ್ದಾರೆ... ಎಚ್ಚರಿಕೆ!!*
ಇಡೀ ಜಗತ್ತೇ ಆಸಿಫಾಳಿಗಾಗಿ ಕಂಬನಿ ಮಿಡಿಯುತ್ತಿದೆ. ಮನುಷ್ಯ ರಕ್ತ ಹರಿಯುವ ಸರ್ವ ಮನಸ್ಸುಗಳು ಆಸಿಫಾಳಿಗಾಗಿ ಧ್ವನಿಯೆತ್ತುತ್ತಿವೆ. ಆಸಿಫಾಳ ಕೊಲೆ ಆಕಸ್ಮಿಕವಲ್ಲ. ಆ ಕಂದಮ್ಮಳ ಮೇಲೆ ನಡೆದ ಭೀಭತ್ಸವಾದ ಅತ್ಯಾಚಾರವೂ ಆ ಮಗುವಿನ ಉಬ್ಬು ತಬ್ಬುಗಳಲ್ಲಿ ಆಕರ್ಷಿತವಾಗಿ ಅಲ್ಲ. ಸಣ್ಣ ವಯಸ್ಸಿನ ಆ ಕಂದಮ್ಮಳಲ್ಲಿ ಆ ನೀಚರು ತೋರಿಸಿದ ಅಮಾನವೀಯತೆಯ ಹಿಂದೆ ಒಂದು ಸಮುದಾಯವನ್ನು ಉಚ್ಛಾಟನೆಗೆಯ್ಯುವ ಹಿಡನ್ ಅಜೆಂಡಾ ಇದೆ.
ಉತ್ತಮ ಹಿಂದುಗಳಾರೂ ಇದನ್ನು ಬೆಂಬಲಿಸಲ್ಲ...
ಯಾಕೆ ಬೆಂಬಲಿಸಲ್ಲ ಅಂತ ಗೊತ್ತಾ?
ಆಸಿಫಾಳ ಕೇಸನ್ನು ಅತ್ಯಂತ ಪಾರದರ್ಶಕವಾಗಿ ತನಿಖೆ ನಡೆಸಿ ಕಿರಾತಕ ಆರೋಪಿಗಳನ್ನು ಬಂಧಿಸಿದ್ದು ಒಬ್ಬ ಹಿಂದು ಅಧಿಕಾರಿಯಾಗಿದ್ದಾರೆ.
ಆಸಿಫಾಳ ಪರ ವಾದಿಸುವ ವಕೀಲೆ ಹಿಂದುವಾಗಿದ್ದಾಳೆ.
ಕೇಸನ್ನು ಕ್ರೈಂ ಬ್ರಾಂಚ್ ವರ್ಗಾಯಿಸಿದ ಡಿ.ಜಿ.ಪಿ. ಹಿಂದುವಾಗಿದ್ದಾರೆ.
ಅತ್ಯಂತ ಶೀಘ್ರದಲ್ಲಿ ವಿಚಾರಣೆ ನಡೆಸಿ ವರದಿ ಒಪ್ಪಿಸುವಂತೆ ಆಜ್ಞೆ ಹೊರಡಿಸಿದ ನ್ಯಾಯಮೂರ್ತಿ ಒಬ್ಬ ಹಿಂದುವಾಗಿದ್ದಾರೆ!
ಕಳೆದ ಎರಡು ತಿಂಗಳಿನಿಂದ ಈ ಕೇಸಿನೊಂದಿಗೆ ಸಹಕಾರ ಸಹಾಯ ನೀಡಿದ್ದು ಹಿಂದುಗಳಾಗಿದ್ದಾರೆ!
ನೀವೊಮ್ಮೆ ಸಾಮಾಜಿಕ ತಾಣ ತೆರೆದುನೋಡಿ... ಲಕ್ಷಾಂತರ ಹಿಂದುಗಳು ಆಸಿಫಾಳನ್ನು ನೆನೆದು ಅಳುತ್ತಿದ್ದಾರೆ!
ಪ್ರತಿಭಟಿಸುತ್ತಿದ್ದಾರೆ!
ಕ್ರಿಶ್ಚಿಯನ್ ಸಹೋದರರು ಅವರ ಚರ್ಚುಗಳಲ್ಲಿ ಆಸಿಫಾಳ ಫೋಟೋ ಇಟ್ಟು ಹೂಮಾಲೆ ಹಾಕಿ ಕಂಬನಿ ಮಿಡಿಯುತ್ತಿದ್ದಾರೆ.
ಸಿಖ್ಖರು ರೋಧಿಸುವ ದೃಶ್ಯ ಮನಕುಲುಕುವಂತಿದೆ!
ನಾನು FB ಯಲ್ಲಿ ಹಿಂದು ಸಹೋದರರೊಬ್ಬರ Live ನೋಡಿದೆ.
ಅಪ್ಪಟ ಬ್ರಾಹ್ಮಣ ಕುಟುಂಬದ ಆ ಹಿರಿಯ ವ್ಯಕ್ತಿ ತನ್ನ ಹೆಂಡತಿ ಮತ್ತು ಮಗುವನ್ನು ಮೊಬೈಲ್ ಎದುರು ನಿಲ್ಲಿಸಿ 18 ನಿಮಿಷ ಲೈವ್ ಕೊಡುತ್ತಾರೆ!
ಪತ್ನಿಯ ಕಣ್ಣಲ್ಲಿ ಕಂಬನಿ ಮಿಡಿಯುತ್ತಿದೆ.
ಮಾತನಾಡಲಾಗದೆ ತೊದಲುತ್ತಾರೆ!
ಎಲ್ಲರಿಗೂ ಹೇಳಲಿಕ್ಕಿರುವ ವಿಷಯ ಒಂದೇ ಆಸಿಫಾ.....
ಕೊನೆಗೆ ಅದೇ ವ್ಯಕ್ತಿ ರಾತ್ರಿ ಮಲಗಿದ್ದಲ್ಲಿಂದ ನಿದ್ರೆ ಬಾರದೆ ಪುನಃ ಮೂರು ನಿಮಿಷದ ಲೈವ್ ಗೆ ಬಂದು ಮನಸ್ಸನ್ನು ಹಿಡಿತಕ್ಕಿಡಲು ಸಾದ್ಯವಾಗದೆ ಬಿಕ್ಕಿ ಬಿಕ್ಕಿ ಅಳುತ್ತಾರೆ!
ಇಂತಹ ನಿಷ್ಕಳಂಕ ಮನಸ್ಸಿನ ಅದೆಷ್ಟೋ ಹಿಂದುಗಳು ಭಾರತದಲ್ಲಿ ಬದುಕುತ್ತಿದ್ದಾರೆ.
ಕೇವಲ ಎರಡು ಶೇಕಡಾ ಮಾತ್ರ ಆರ್.ಎಸ್.ಎಸ್, ಬಜರಂಗದಳದ ಕೊಳಕು ಮನಸ್ಸಿನವರಿದ್ದಾರೆ ಅಷ್ಟೇ.
ಅವರಿಗೆಲ್ಲರೂ ಛೀಮಾರಿ ಹಾಕುತ್ತಿದ್ದಾರೆ.
ಹಾಗಾಗಿಯೇ ಅವರು ಈ ಸಂಕಷ್ಟದಿಂದ ಪಾರಾಗಲು ಸದರಿ ವಿಷಯಕ್ಕೆ ಕೋಮು ಲೇಪ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.
ಅದಕ್ಕೆ ಮುಸ್ಲಿಂ ಯುವಕರು ಮಣೆ ಹಾಕಬಾರದು.
ಆಸಿಫಾಳ ಮೇಲೆ ಎರಗಿದ ಕಿರಾತಕರು ನೈಜ ಹಿಂದುಗಳಲ್ಲ..
ಹಾಗಿದ್ದರೆ ಅವರು ತಮ್ಮ ಅಮಾನವೀಯ ಕ್ರೂರ ವ್ಯಭಿಚಾರ, ಹತ್ಯೆಗೆ ಪವಿತ್ರ ಸ್ಥಳವಾದ ದೇವಸ್ಥಾನವನ್ನು ಉಪಯೋಗಿಸುತ್ತಿರಲಿಲ್ಲ!
ಅವರು ಏನಿದ್ದರೂ ನಕಲಿ ಧರ್ಮ ಪ್ರೇಮ ಪ್ರಕಟಿಸುವ ಮತಾಂಧರು!
ಮುಸಲ್ಮಾನರು ಯಾವತ್ತೂ ಹಿಂದೂ ದೇವರುಗಳನ್ನು ನಿಂದಿಸಲ್ಲ.
ಹಾಗೆ ನಿಂದಿಸಬಾರದೆಂಬ ಕಟ್ಟಪ್ಪಣೆ ಪವಿತ್ರ ಖುರ್ಆನಿನಲ್ಲಿದೆ.
ಆಸಿಫಾಳ ಹತ್ಯೆ, ಅತ್ಯಾಚಾರಕ್ಕಾಗಿ ಕ್ರೂರ ಮುಠ್ಠಾಳರು ದೇವಸ್ಥಾನವನ್ನು ಉಪಯೋಗಿಸಿದರು.
ಹಾಗಾಗಿಯೇ ಅಲ್ಲಿನ ದೇವರು ಎಲ್ಲಿದ್ದರು ಎಂಬ ರೀತಿಯ ಫ್ಲಕ್ಸ್ ಕಾಣಲು ಸಾದ್ಯವಾಯಿತು.
ಇಂತಹ ಫ್ಲಕ್ಸ್ ಗಳನ್ನು ಕೂಡಲೇ ತೆರವುಗೊಳಿಸಬೇಕು.
ಇದು ನಮ್ಮೆಡೆಯಲ್ಲಿ ಕೋಮು ವಿಷಬೀಜ ಬಿತ್ತಲು ಶ್ರಮಿಸುವ ಮತಾಂಧರ ಕೃತ್ಯಗಳು....
ಮತಾಂಧರಿಗೆ ಧರ್ಮ ಇಲ್ಲ...
ಅದು ಮುಸ್ಲಿಮರಾಗಲಿ ಹಿಂದುವಾಗಲಿ,
ಕ್ರಿಶ್ಚಿಯನ್ನರಾಗಲಿ...
ಕೇವಲ ಆವೇಶ ಮಾತ್ರ ಅವರನ್ನು ನಿಯಂತ್ರಿಸುತ್ತದೆ...
ಪ್ರಿಯ ಕಂದಮ್ಮ ಆಸಿಫಾಳ ಹತ್ಯೆಗೈದ ಕಿರಾತಕರಿಗೆ ಮಾದರಿ ಶಿಕ್ಷೆಯಾಗಲಿ....
ಒಂದು ಸಮುದಾಯವನ್ನೇ ಉಚ್ಛಾಟನೆಗೆಯ್ಯಲು
ಉದ್ದೇಶಿಸಿದವರ ಶಿರಸ್ಸುಗಳಿಗೆ ನೇಣುಗಂಬ ಗತಿಯಾಗಲಿ...
ಅವರ ಮನಸ್ಸಲ್ಲಿ ಭಯ ಆವರಿಸಲಿ...
ಇನ್ನು ಮುಂದೆ ಇಂತಹ ಹೀನಾಯ ಕ್ರೂರಕೃತ್ಯಗಳನ್ನು ಚಿಂತಿಸಲೂ ಭಯವಾಗುವಂತಹ ವಾತಾವರಣ ಸೃಷ್ಟಿಯಾಗಲಿ...
ಪ್ರಾರ್ಥಿಸಿರಿ...
ಆ ಕಂದಮ್ಮಳ ಕುಟುಂಬಕ್ಕೆ ನ್ಯಾಯ ಸಿಗಲಿ...
ನ್ಯಾಯಕ್ಕಾಗಿ ಹೋರಾಡುವ ಸಮುದ್ರ ಸಮಾನ ಮನಸ್ಸುಗಳೊಂದಿಗೆ ನಾವು ಕೂಡಾ ಬಿಂದುವಾಗುವ.....
-ಅಬೂಶಝ

No comments:
Post a Comment