Sunday, December 24, 2017

*ಪ್ರಪಂಚ ಮೊದಲೋ? ಮಾನವನೋ ?*

ಈ ಕಾಣುವ ಆಕಾಶ, ಭೂಮಿ , ಹಾಗೂ  ಜಗತ್ತಿನ ಎಲ್ಲಾ ಜೀವಿಗಳನ್ನೂ ಸೃಷ್ಟಿಸಿ  ನಿಯಂತ್ರಿಸುತ್ತಿರುವ ಜಗದೊಡೆಯನೇ ಅಲ್ಲಾಹು.
ಇಸ್ಲಾಂ ಅಲ್ಲಾಹುವಿನ ಧರ್ಮವಾಗಿದೆ.ಈ ಜಗತ್ತನ್ನೇ ಸೃಷ್ಟಿಸಿದ ಸೃಷ್ಟಿಕರ್ತನೇ ಅಲ್ಲಾಹು.
ಅಲ್ಲಾಹು ಎಂಬ ಪದವನ್ನು ಎಲ್ಲೆಲ್ಲಾ ಉಪಯೋಗಿಸಲಾಗಿದೆಯೋ ಅಲ್ಲೆಲ್ಲಾ
ಮುಹಮ್ಮದ್ (ಸ.ಅ) ರವರ ನಾಮವನ್ನು ಉಪಯೋಗಿಸಲಾಗಿದೆ. ಅವರು ಅಂತ್ಯ ಪ್ರವಾದಿಯಾದರೆ ಅವರಿಗಿಂತ ಮುಂಚೆ ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ ಪ್ರವಾದಿಗಳು ಬಂದು  ಇಸ್ಲಾಂ ಧರ್ಮ ಭೋದನೆ ನಡೆಸಿದ್ದಾರೆ ಎಂಬುವುದಾಗಿ ಇಸ್ಲಾಮ್ ಚರಿತ್ರೆ ಹೇಳುತ್ತದೆ.

ಇಸ್ಲಾಂ ಎಂಬುವುದು ಸನಾತನ ಧರ್ಮ. ಹೌದು ಈ ಜಗತ್ತಿನಲ್ಲಿ ಮನುಷ್ಯ ಎಂದು ಆರಂಭಗೊಂಡಿದ್ದನೊ ಅಂದಿನಿಂದಲೇ ಈ ಇಸ್ಲಾಂ ಧರ್ಮವಿದೆ. ಇನ್ನು ಮನುಷ್ಯನೆಂಬ ಜೀವಿ ಅಹಂಕಾರಿಯಾಗುವುದಾದರೂ ಹೇಗೆ ?
ಮನುಷ್ಯನ ಹಿನ್ನಲೆ ಏನೆಂದು ಗೊತ್ತಿದೆಯೇ? ಮನುಷ್ಯನನ್ನು ಅಲ್ಲಾಹನು ಸೃಷ್ಟಿಸುವುದಕ್ಕಿಂತಲೂ ಅದೆಷ್ಟೋ ವರ್ಷಗಳ ಹಿಂದೆಯೇ ಈ ಪ್ರಪಂಚವನ್ನು ಅಲ್ಲಾಹನು ಸೃಷ್ಟಿಸಿದ್ದನು. ಮನುಷ್ಯನು ಈ ಪ್ರಪಂಚದ ಅತ್ಯಂತ ಕೊನೆಯ ಸೃಷ್ಟಿ.ಇದು ನಿಷೇಧಿಸಲು ಸಾಧ್ಯವಿಲ್ಲವೆಂದು ಕುರ್ ಆನ್ ಹೇಳುತ್ತದೆ.

ಕುರ್ ಆನ್ ವ್ಯಾಖ್ಯಾನಗಾರರು ಹೇಳುವ ಪ್ರಕಾರ ಸುಮಾರು 4600 ಮಿಲಿಯನ್ ವರ್ಷಗಳ ಹಿಂದೆಯೇ ಈ ಪ್ರಪಂಚ ಇದೆ.
ಆದರೆ ಮನುಷ್ಯನು ಹೆಚ್ಚೆಂದರೆ 1ಲಕ್ಷ ವರ್ಷದ ಹಿಂದೆ ಬಂದವನು.

ಎಲ್ಲವನ್ನೂ ಸೃಷ್ಟಿಸಿ ಕೊನೆಗೆ ಅಲ್ಲಾಹು ಮನುಷ್ಯನನ್ನು ಸೃಷ್ಟಿಸಿದ್ದೇ ಹೊರತು ಮೊದಲನೆಯಾಗಿ ಅಲ್ಲ.

ಮನುಷ್ಯನಿಲ್ಲದೆ ಅನಂತಾನಂತ ಕಾಲ ಈ ಭೂಮಿ ಕಳೆದಿದೆ.
ಮಣ್ಣೂ ಇಲ್ಲದ ಅನಂತ ಕಾಲ ಕಳೆದುಹೋಗಿದೆ.
ಮಣ್ಣನ್ನು ಸೃಷ್ಟಿಸಿದ ನಂತರ ಮನುಷ್ಯನು ಕೇವಲ ಹಸಿ ಮಣ್ಣಾಗಿ ಉಳಿದಿದ್ದನು. ಮಣ್ಣಾಗಿ ಅನಂತ ಕಾಲ ಉಳಿದಿದ್ದ ಮನುಷ್ಯನು ಆಗ
ಹೇಳಲಿಕ್ಕಿರುವಂತಹ ಏನೂ ಆಗಿರಲಿಲ್ಲ.
 ಆದಂ ನೆಬಿಯನ್ನು ಅಲ್ಲಾಹು ಮಣ್ಣಿನಿಂದ ಸೃಷ್ಠಿಸಿ ಕಣ್ಣು ಮೂಗು ಹಾಗೂ ಸರ್ವ ಅಂಗಾಂಗಗಳ ದೇಹವು ಜೀವ ಇಲ್ಲದ ಸ್ಥಿತಿಯಲ್ಲಿ ಸುಮಾರು 40 ವರ್ಷ ಕಾಲ ಹಾಗೇ ಬಿದ್ದುಕೊಂಡಿತ್ತು  ಎಂದು ಕುರ್ ಆನ್ ಹಾಗೂ ಇತರ ವೇದಗ್ರಂಥ ಗಳಲ್ಲೂ ಕಾಣಬಹುದು
ಮೊದಲು ಆದಂ ನೆಬಿಯನ್ನು ಸೃಷ್ಟಿಸಿದ ನಂತರ ಆದಂ ನೆಬಿಯ  ಒಂದು ಬೆನ್ನೆಲುಬನ್ನು ತೆಗೆದು ಅಲ್ಲಾಹು ಒಂದು ಹೆಣ್ಣನ್ನು  ಸೃಷ್ಟಿಸಿದ .ನಂತರ ಅಲ್ಲಾಹು ಮನುಷ್ಯನನ್ನು  ಪುರುಷನ ಅಂಡಾಣು ಹಾಗೂ ಸ್ತ್ರೀಯ ವೀರ್ಯಾಣುವಿನಿಂದ ಜನ್ಮ ಕೊಡುವನು ನಂತರದ ಬೆಳವಣಿಗೆಯ  ಪ್ರತಿಯೊಂದು  ಹಂತ ಹಂತವನ್ನು  ಕುರ್ ಆನ್ ಮೂಲಕ 1400 ವರ್ಷಗಳ ಹಿಂದೆಯೇ ಅಲ್ಲಾಹು ಮುಹಮ್ಮದ್ ನೆಬಿಯವರಿಗೆ ನೇರವಾಗಿ ಅರಿವು ನೀಡಿದ್ದಾರೆ ಎಂದರೆ ಈ ಆಧುನಿಕ ಯುಗದಲ್ಲಿ ಸಂಶೋಧಕರು ಲಕ್ಷಗಟ್ಟಲೆ ಹಣ ವ್ಯಯಿಸಿ ಆಧುನಿಕ ಉಪಕರಣ ಉಪಯೋಗಿಸಿ ಕಂಡು ಹುಡುಕಿದ ಕಾರ್ಯ ವನ್ನು ನಯಾ ಪೈಸೆ ಖರ್ಚಿಲ್ಲದೆ ಮದ್ರಸದಲ್ಲಿ ಕಲಿಯದೆ  1400 ವರ್ಷಗಳ ಹಿಂದೆಯೇ ಹೇಳಲು ಸಾಧ್ಯವಾಗಿದ್ದರೆ ಕುರ್ ಆನ್ ಅಧ್ಬುತ ಗ್ರಂಥ ಎಂಬುದು ಸಂಶಯವಿಲ್ಲ .ಆದ್ದರಿಂದಲೇ ಇಂದು ತಂತ್ರಜ್ಞಾನಗಳ ಬಳಕೆ ಮಿಂಚಿನ ಸಂಚಾರದಲ್ಲಿರುವಾಗಲೂ ಸನಾತನ ಇಸ್ಲಾಂ ಧರ್ಮದ ಸಂದೇಶಗಳನ್ನು ಕೆಲವು ಚಿಂತಕರು ಅವಲಂಬಿಸತೊಡಗಿದ್ದು.
ಚಿಂತಿಸುವವರಿಗೆ  ದೃಷ್ಟಾಂತವಿದೆ.

ಅಬ್ದುಲ್ ಜಬ್ಬಾರ್ .ಕೆ

No comments:

Post a Comment