Tuesday, December 26, 2017

*ಮುಖ್ತಾರ್ ಅಬ್ಬಾಸ್ ನಖ್ವಿ ಯೊಂದಿಗೆ ಎಪಿ ಉಸ್ತಾದ್..!*

ಸುನ್ನೀ ಏರರರಿಗೆ ಸಲಾಂ ಹೇಳಬಾರದು, ಬಾಂಧವ್ಯ ಇಟ್ಟುಕೊಳ್ಳಬಾರದೆಂದು ಹೇಳುವವರೇ, ತಮ್ಮ ಸ್ಥಾಪನೆಗೆ ಶಿಯಾ ವಿಶ್ವಾಸಿಯನ್ನು ಕರೆ ತಂದದ್ದು ತಪ್ಪಲ್ಲವೇ ಎಂಬುದು ಕೆಲವರ ಸಂಶಯ.

ಉತ್ತರ 👇🏾👇🏾👇🏾,
*ಉದಾಹರಣೆ 1,*
ನಾವು ಒಂದು ಅಗತ್ಯ ವಿಷಯಕ್ಕೆ DC ಯನ್ನು ಬೇಟಿಯಾಗಬೇಕು. ಆ DC ನೂತನವಾದಿಯಾಗಿದ್ದರೆ, ಅವರು ನೂತನವಾದಿಯೆಂದು ಅವರನ್ನು ಬೇಟಿಯಾಗದೆ ನಮ್ಮ ಅಗತ್ಯ ಕೆಲಸ ಕಾರ್ಯವನ್ನು ಮೊಟಕುಗೊಳಿಸಲು ಸಾದ್ಯವಿದೆಯಾ? ಇಲ್ಲ.
ಅಂತಹ ಸಂದರ್ಭದಲ್ಲಿ (ನೂತನವಾದಿ DC ಗೆ ಬದಲಾಗಿ ಬೇರೆ DC ಇರದ ಕಾರಣ) DC ಯ ಜಾತಿ, ಧರ್ಮ, ಪಂಗಡವನ್ನು ನೋಡದೆ ವ್ಯವಹರಿಸುವುದು ಅವಶ್ಯಕವಾಗಿದೆ.

*ಉದಾಹರಣೆ 2,*
Insurance ಇಸ್ಲಾಮಿನಲ್ಲಿ ನಿಷಿದ್ಧವಾಗಿದೆ.
ಭಾರತದಂತಹ ರಾಷ್ಟ್ರದಲ್ಲಿ ಜೀವಿಸುವಾಗ ಇಲ್ಲಿನ ಕಾನೂನಿನನುಗುಣವಾಗಿ ನಾವು ವ್ಯವಹರಿಸಬೇಕಾದದ್ದು ಅವಶ್ಯಕ.
ಭಾರತ ದೇಶದಲ್ಲಿ ವಾಹನಗಳಿಗೆ insurance ಕಟ್ಟುವುದು ಕಡ್ಡಾಯ. ಅಂತಹ ಸಂದರ್ಭದಲ್ಲಿ insurance ಕಟ್ಟದಿರಲು ಬೇರೆ ದಾರಿ ಇಲ್ಲದಿರುವುದರಿಂದ ವಾಹನಗಳಿಗೆ insurance ಕಟ್ಟುವುದಕ್ಕೆ ವಿರೋಧವರೆನೂ ಇರುವುದಿಲ್ಲ.

*ಉದಾಹರಣೆ 3,*
ನಮಗೆ ಮಾತ್ರೆಯೊಂದು ತಗೋಬೇಕು. ಅಲ್ಲಿ ನೂತನವಾದಿಯ ಮೆಡಿಕಲ್ ಅಂಗಡಿ ಬಿಟ್ಟರೆ ಬೇರೆ ಯಾವ ಮೆಡಿಕಲ್ ಕೂಡಾ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ನಾವು ಮೆಡಿಕಲ್ ಅಂಗಡಿಯವನ ಜಾತಿ, ಧರ್ಮ, ಪಂಗಡವನ್ನು ನೋಡದೆ ಮೆಡಿಕಲ್ ಗೆ ಹೋಗುವುದು ಅನಿವಾರ್ಯವಾಗುತ್ತದೆ. ಮೆಡಿಕಲ್ ಅಂಗಡಿಯವನು ನೂತನವಾದಿಯೆಂದು ಮೆಡಿಕಲ್ ಗೆ ಬದಲಾಗಿ ಬೇಕರಿ ಗೆ ಹೋಗಲು ಆಗುವುದಿಲ್ಲವಲ್ಲ.

ಅದರಂತೆ,
*ಮುಖ್ತಾರ್ ಅಬ್ಬಾಸ್ ನಖ್ವಿ ಯವರು ಕೇಂದ್ರದ ಓರ್ವ ಅಲ್ಪಸಂಖ್ಯಾತ ಮಂತ್ರಿಯಾಗಿದ್ದಾರೆ. ಅಲ್ಪಸಂಖ್ಯಾತರ ಸವಲತ್ತುಗಳ ವಿಷಯಕ್ಕೆ ಸಂಬಂಧಪಟ್ಟು ಚರ್ಚಿಸಬೇಕಾದರೆ, ಮುಖ್ತಾರ್ ಅಬ್ಬಾಸ್ ನಖ್ವಿ ಯವರನ್ನೇ ಬೇಟಿಯಾಗುವುದು, ಆಹ್ವಾನಿಸುವುದು ಎಪಿ ಉಸ್ತಾದ್ ಸಹಿತ ಭಾರತದ ಪ್ರತಿಯೊಂದು ಪ್ರಜೆಗೂ ಅತ್ಯಾವಶ್ಯಕವಾಗಿದೆ.* ಮುಖ್ತಾರ್ ಅಬ್ಬಾಸ್ ನಖ್ವಿ ಯವರು ಶಿಯಾ ವಿಶ್ವಾಸಿಯೆಂದು ಅಲ್ಪಸಂಖ್ಯಾತ ಸವಲತ್ತುಗಳ ವಿಷಯಕ್ಕೆ ಸಂಬಂಧಪಟ್ಟು ಅವರನ್ನು ಬೇಟಿಯಾಗದೆ/ಕರೆತರದೆ, ಅವರ ಬದಲಿಗೆ ಗೃಹ ಮಂತ್ರಿಯನ್ನೋ, ಆರೋಗ್ಯ ಮಂತ್ರಿಯನ್ನೋ ಅಥವಾ ಇನ್ನಿತರ ಮಂತ್ರಿಯನ್ನೊ ಕರೆ ತರುವುದಕ್ಕೆ ಅರ್ಥವಿಲ್ಲ.
*ಅದು, ಮಾತ್ರೆ ತೆಗೆದುಕೊಳ್ಳಲು ಮೆಡಿಕಲ್ ಗೆ ಬದಲಾಗಿ ಬೇಕರಿ ಗೆ ಹೋಂದತೆ ಆಗಬಹುದು.*

ಒಂದು ವಿಷಯಕ್ಕೆ ಸಂಬಂಧಪಟ್ಟು ಓರ್ವ ಮಂತ್ರಿಯನ್ನು ಬೇಟಿಯಾಗುವಾಗ ಅವರ ಹುದ್ದೆಯನ್ನು ಪರಿಗಣಿಸಬೇಕಾಗುತ್ತದೆಯೇ ಹೊರತು, ಅವರ ಜಾತಿ, ಧರ್ಮ, ಪಂಗಡಗಳನ್ನು ನೋಡುವ ಅವಶ್ಯಕತೆ ಇಲ್ಲ ಎಂದು ಬುದ್ಧಿ ಇರುವ ಪ್ರತಿಯೊಬ್ಬ ಮನುಷ್ಯನಿಗೂ ಗೊತ್ತಿರುವಂತಹದ್ದೇ.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment