Tuesday, December 26, 2017

📚📚📚📚📚📚📚📚📚📚📚
*ಅವುಲಿಯಾಗಳು ಧರ್ಮಪ್ರಚಾರಕರು*
📚📚📚📚📚📚📚📚📚📚📚

*﷽*

     ಮಾನವ ಜೀವನದ ನೈಜಗುರಿಯಾದ ಸಾರ್ವತ್ರಿಕ  ಮೋಕ್ಷಕ್ಕೆ ನಾಂದಿಯಾಗುವ ಸನ್ಮಾರ್ಗಕ್ಕೆ ಮಾರ್ಗದರ್ಶನ ನೀಡಲಿಕ್ಕಾಗಿ ಮಾನವ ಲೋಕದ ಆದಿಯಿಂದ ಅಂತ್ಯ  ಕಾಲದವರೆಗೂ ಮುಂಚೆ ಅಲ್ಲಾಹನು ತನ್ನ ಪ್ರತಿನಿಧಿಗಳಾಗಿ ಒಂದು ಕಾಲು ಲಕ್ಷಕ್ಕೂ ಮಿಕ್ಕ ಪ್ರವಾದಿಗಳನ್ನು ನಿಯೋಗಿಸಿದ್ದನು. ಈ ಪವಿತ್ರ ಸರಣಿಯಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರು ಕೊನೆಯವರಾಗಿದ್ಧರು .ಇನ್ನೂ ಲೋಕಾಂತ್ಯದವರೆಗೆ ಬೇರೊಬ್ಬ ಪ್ರವಾದಿವರ್ಯರ ಅಗತ್ಯವಿಲ್ಲ .ಸನ್ಮಾರ್ಗ ದರ್ಶನವಾದ ಇಸ್ಲಾಂ ಧರ್ಮವು ಅದರ ಅವತರಣ ಕಾಲದಲ್ಲಿದ್ದಂತೆ ಯಾವುದೇ ಬದಲಾವಣೆಗೆ ತುತ್ತಾಗದಂತೆ ಅಂತ್ಯ ಕಾಲದ ತನಕವೂ ಸುಸ್ತಿರವಾಗಿರುವುದೇ ಅದಕ್ಕೆ ಕಾರಣ. ಆದರೆ ಅಂತ್ಯ ಕಾಲದಲ್ಲಿ ಧರ್ಮಕ್ಕೆ ಚ್ಯುತಿ ಉಂಟಾಗುವುದು ಅಲ್ಲಾಹು ಎಂದು ಹೇಳುವ ಯಾವನೇ ಒಬ್ಬ ವಿಶ್ವಾಸಿ ಇಲ್ಲದಾಗುವ ಸಂದರ್ಭದಲ್ಲಿ ಮಾತ್ರ ಅಂತ್ಯ ದಿನ ಸಂಭವಿಸುವುದೆಂದು ಹದೀಸುಗಳಿಂದ ವ್ಯಕ್ತವಾಗಿದೆ. ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ ನಂತರ ಈ ಸುಂದರ ಧರ್ಮವನ್ನು ಪ್ರಚಾರ  ಪಡಿಸುವ ಹೊಣೆಯನ್ನು ಅವರು ತಮ್ಮ ಸಮುದಾಯದಲ್ಲಿರುವ ಉಲಮಾಗಳಿಗೆ  ವಹಿಸಿಕೊಟ್ಟಿದ್ದಾರೆ ಆಲಿಂ (ಧರ್ಮಜ್ಞಾನಿ) ಗಳು ಪ್ರವಾದಿಗಳ ವಾರಸುದಾರರಾಗಿದ್ದಾರೆ ಎಂಬ ಹದೀಸ್ ಇಲ್ಲಿ ಪ್ರಸ್ತುತ ಎನಿಸುತ್ತದೆ. ಇಂತಹ ಹದೀಸುಗಳಿಂದಲೂ ಪ್ರವಾದಿಯವರ ಹಜ್ಜತುಲ್ ವದಾಅ್ (ಬೀಳ್ಕೊಡುಗೆ ಹಜ್) ಅರ್ಥ ಗಂಭೀರ ಪ್ರಭಾಷಣದಿಂದಲೂ ಪ್ರಚೋದಿತರಾದ ಸ್ವಹಾಬಿವರ್ಯರು ಅರೇಬಿಯಾದ ಪ್ರಪಂಚದ ನಾನಾ ಕಡೆಗೆ ಸಂಚರಿಸಿ ಇಸ್ಲಾಮಿನ ಸುಂದರ ತತ್ವಾದರ್ಶಗಳನ್ನು ಮತ್ತು ಧರ್ಮದ ವಿಧಿ ವಿಧಾನಗಳನ್ನು ಉತ್ತಮ ರೀತಿಯಲ್ಲಿ  ಪ್ರಚಾರ ಮಾಡಿದರು. ಅವರ ಶಿಷ್ಯಂದಿರಾದ ತಾಬಿಉಗಳು ಅವುಲಿಯಾಗಳು ಆ ಕಾರ್ಯವನ್ನು ನಿರ್ಭಯದಿಂದ ಮಾಡಿದ್ದರಿಂದ ಸರ್ವ ಕಡೆಯಲ್ಲೂ ಇಸ್ಲಾಂ ವ್ಯಾಪಿಸಿತು . ಈ ಸಂದರ್ಭದಲ್ಲೇ ಭಾರತಕ್ಕೂ ಕೂಡ ಇಸ್ಲಾಮ್ ತಲುಪಿತು ಎಂಬುವುದು ಚರಿತ್ರೆಗಳಿಂದ ತಿಳಿದು ಬಂದಿದೆ ಸೂಫಿ ಸಂತರಾದ ಅವುಲಿಯಾಗಳು ಮಾದರಿಯೋಗ್ಯ ನಡುವಳಿ ಕ್ರಮದಿಂದ ದಕ್ಷಿಣ ಭಾರತದ ಕೇರಳದಲ್ಲಿ ಮಾಲಿಕ್ ದೀನಾರ್ (ರ) ಅವರ ಮುಂದಾಳತ್ವದಲ್ಲಿ ಭಾರತದಲ್ಲಿನ  ಕೆಲವು ಸಂಗಡಿಗರ ಸಹಾಯದಿಂದ ಇಸ್ಲಾಂ ಧರ್ಮವು ಪ್ರಚಾರಗೊಂಡಿತು. ಒಟ್ಟಿನಲ್ಲಿ ಈ ಜಗತ್ತಿನ ನಾನಾ ಕಡೆಗಳಲ್ಲಿ ಇಸ್ಲಾಂ ವ್ಯಾಪಿಸಿರುವುದು ಅಲ್ಲಾಹನ ಇಷ್ಟ ದಾಸರಾದ ಅವುಲಿಯಾ ಸಮೂಹದಿಂದಾಗಿದೆ. ನಿಶ್ಚಯವಾಗಿಯೂ ಅಲ್ಲಾಹನನ್ನು ಯಥಾರ್ಥ ರೂಪದಲ್ಲಿ ಅನುಸರಿಸುವವರು ಉಲಮಾಗಳಾಗಿದ್ದಾರೆ .ಆ ಉಲಮಾಗಳೇ ಅವುಲಿಯಾಗಳಾಗಿ ಅಂಬಿಯಾಗಳ ನೈಜ ವಾರಿಸುದಾರರಾಗಿದ್ದಾರೆ.
📚📚📚📚📚📚📚📚📚📚📚

No comments:

Post a Comment