Tuesday, January 23, 2018

ಝಿಯಾರತ್ತ್ ಕೇಂದ್ರ 59 ವರಕ್ಕಲ್ ಮುಲ್ಲಕೊಯ ತಂಗಳ್ (ರ)

*ಝಿಯಾರತ್ತ್ ಕೇಂದ್ರ​*
   ಸಮಸ್ತ ನಾಯಕರು = 07
〰〰〰〰〰〰〰〰〰
      *➡5⃣9⃣*
*#ವರಕ್ಕಲ್_ಮುಲ್ಲ_ಕೋಯ_ತಂಗಳ್. (ಖ:ಸಿ) ಪುಡಿಯಂಙಾಡಿ ಕಲ್ಲಿಕೋಟೆ.*
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
🕌🕌🕌🕌🕌🕌🕌🕌🕌
✍ ಗಫೂರ್ ಬಾಯಾರ್
〰〰〰〰〰〰〰〰〰

ಅಲ್ಲಾಹನ ರಸೂಲ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಕುಟುಂಬ ಪರಂಪರೆಯಾದ ಅಹ್ಲ್'ಬೈತ್ ಎಂಬ ಅತ್ಯುನ್ನತ ಕುಟುಂಬದಲ್ಲಿ ಜನಿಸಿದ *ವರಕ್ಕಲ್ ಮುಲ್ಲಕೇೂಯ ತಂಙಳ್  ಎಂದೇ ಪ್ರಸಿದ್ಧರಾದ ಸಯ್ಯದ್ ಅಬ್ದುಲ್ ರಹ್ಮಾನ್ ಬಾ ಅಲವಿ ಮುಲ್ಲಕೇೂಯ ತಂಙಳ(ಖ.ಸಿ)ರು* ಯಮನಿನ ಹಲರ್ ಮೌತಿನಿಂದ ಕೇರಳಕ್ಕೆ ಆಗಮಿಸಿದ ಮಹಾನರಾನರಾಗಿದ್ದಾರೆ.

ಹಿಜರಿ 1256ರಲ್ಲಿ ಜನಿಸಿದ  ವರಕ್ಕಲ್ ಮುಲ್ಲಕೇೂಯ ತಂಙಳ(ಖ.ಸಿ)ರು ಅರಬಿ, ಉರ್ದು, ಪಾರ್ಸಿ, ಇಂಗ್ಲೀಷ್, ಸೇರಿದಂತೆ ಹಲವಾರು ಭಾಷೆಗಳನ್ನು ಬಲ್ಲವರಾಗಿದ್ದ ಮಹಾನರ ಕರಾಮತ್ ಕೇರಳದ ಮುಸ್ಲಿಂ ವಿಧ್ವಾಂಸರ ನಡುವೆ ಚರ್ಚಾ ವಿಷಯವೂ ಆಗಿತ್ತು.

 ಸಮಸ್ತ ಕೇರಳ ಜಂಈಯತ್ತುಲ್ ಉಲಮಾದ ಸ್ಥಾಪಕ ಅಧ್ಯಕ್ಷರಾದ ವರಕ್ಕಲ್ ಮುಲ್ಲಕೇೂಯ ತಂಙಳ(ಖ.ಸಿ)ರು 1926ರಿಂದ 1932ರ ತನಕ ಅಧ್ಯಕ್ಷರಾಗಿ ಸಮುದಾಯಕ್ಕೆ ಸಮರ್ಥ ನಾಯಕತ್ವ ನೀಡಿ ಮುನ್ನಡೆಸಿದ ಮಹಾನರಾಗಿದ್ದಾರೆ.

 ಪರಿಶುದ್ಧ ಇಸ್ಲಾಮಿನ ಆದ್ಯಾತ್ಮಿಕ ರಂಗದಲ್ಲಿ ಪಾಂಡಿತ್ಯಗಳಿಸಿದ್ದ ಮಹಾನರ ಅನೇಕ ಖಾದಿಮ್''ಗಳೂ ಮಹತ್ವಪೂರ್ಣವಾದ ಔಲಿಯಾ ಎಂಬ ಉನ್ನತ ಪದವಿಗೆ ತಲುಪಿರುವುದನ್ನು ಕಾಣುವಾಗ ಮಹಾತ್ಮರ ಆದ್ಯಾತ್ಮಿಕ ಪಾಂಡಿತ್ಯ ಮತ್ತು ಕರಾಮತ್ತಿನ ಅರಿವಾಗುತ್ತದೆ.

   1932 ರಲ್ಲಿ ಅಂದರೆ 1352 ಶಅಬಾನ್ 17ರಂದು ವಫಾತಾದ ವರಕ್ಕಲ್ ಮುಲ್ಲಕೇೂಯ ತಂಙಳ್(ಖ:ಸಿ) ತಮ್ಮ ಕರಾಮತ್'ಗಳ ಮೂಲಕ ಕೇರಳ ಮುಸ್ಲಿಂ ಜನಮಾನಸದಲ್ಲಿ ಮರೆಯಲಾರದ ಮಹಾನುಭಾವರಾಗಿದ್ದಾರೆ.

ಒಮ್ಮೆ ದಕ್ಷಿಣ ಭಾರತದ ವ್ಯಾಪಾರಿಯೊಬ್ಬರು ವ್ಯಾಪಾರಕ್ಕಾಗಿ ಕಲ್ಲಿಕೋಟೆಗೆ ಬಂದಿದ್ದರು. ವ್ಯಾಪಾರ ಮುಗಿದ ನಂತರ ತಮ್ಮ ಹಣದ ಥೈಲಿಯೊಂದಿಗೆ ಕಲ್ಲಿಕೋಟೆ ಪುಝವಕತ್ತೆ ಎಂಬ ಸ್ಥಳದಲ್ಲಿರುವ ಮಸೀದಿಯಲ್ಲಿ ರಾತ್ರಿ ತಂಗಿದ್ದರು.
ಆದರೆ ಬೆಳಿಗ್ಗೆದ್ದು ನೇೂಡುವಾಗ ಅವರ ಹಣದ ಥೈಲಿಯನ್ನು ಯಾರೇೂ ಎಗರಿಸಿದ್ದರು.
ಕಷ್ಟಪಟ್ಟು ಸಂಪಾದಿಸಿದ ಸಂಪತ್ತು ಕಾಣೆಯಾಗಿದ್ದರಿಂದ ಆ ವ್ಯಾಪಾರಿಯ ಗೇೂಳು ಹೇಳತೀರದು. ಹಾಗೆ ಆ ವ್ಯಾಪಾರಿ ಕಂಬನಿ ಮಿಡಿಯುತ್ತಾ ಕುಳಿತಿರುವಾಗ ಅಲ್ಲಿಗಾಗಮಿಸಿದ ಮಸೀದಿಯ ಮುಅದ್ಝಿನ್ ಹೇಳಿದರು. ಚಿಂತಿಸದಿರಿ ಫಜರ್ ನಮಾಜಿನ ಬಳಿಕ ನಾವು ವರಕ್ಕಲ್ ತಂಙಳ್ (ಖ:ಸಿ)ರವರ ಹತ್ತಿರ ಹೋಗಿ ವಿಷಯ ತಿಳಿಸೇೂಣ ಅವರಿದಕ್ಕೇನಾದರೂ  ಪರಿಹಾರ ಸೂಚಿಸಬಹುದು ಎಂದು ಸಮಾಧಾನಿಸಿದರು.

ಹಾಗೆ ನಮಾಝ್'ನ ನಂತರ ಅವರಿಬ್ಬರು ವರಕ್ಕಲ್ ತಂಙಳ(ಖ.ಸಿ)ರ ಹತ್ತಿರ ಹೋಗಿ ನಡೆದ ವಿಷಯ ತಿಳಿಸಿದರು. ಆಗ  ತಂಙಳ್ ವ್ಯಾಪಾರಿಯವರ ಹತ್ತಿರ, "ಇಂದು ನೀವು ಊರಿಗೆ ಹೋಗದೆ ನಿನ್ನೆ ನೀವು ಮಲಗಿದ ಅದೇ ಸ್ಥಳದಲ್ಲಿ ಇಂದೂ ಮಲಗಿರಿ. ನಾಳೆ ಫಜರ್ ನಮಾಝ್'ಗೆಂದು ಮಸೀದಿಗೆ ಮೊದಲು ಬರುವ ವ್ಯಕ್ತಿಯನ್ನು ಹಿಡಿಯಿರಿ. ತಮ್ಮ ಹಣವನ್ನು ದೋಚಿದ ವ್ಯಕ್ತಿ ಆತನೇ ಆಗಿರುತ್ತಾನೆ ಎಂದರು.
ಹಾಗೆ.. ಅವರಿಬ್ಬರೂ ಹಿಂದಿರುಗಿ ತಂಙಳರು ಹೇಳಿದಂತೆಯೇ ಮಸೀದಿಯಲ್ಲಿ ಮಲಗಿದರು. ಮರುದಿನ ಫಜರ್ ನಮಾಝ್'ಗೆಂದು ಮಸೀದಿಗೆ ಆಗಮಿಸಿದ ವ್ಯಕ್ತಿಯನ್ನು ಹಿಡಿದರು. ಅಂದು ಮಸೀದಿಗೆ ಮೊದಲು ಬಂದ ಆ ವ್ಯಕ್ತಿ, ಹಲವಾರು ವರ್ಷಗಳಿಂದ ಆ ಮಸೀದಿಯ ಮುಖಾಂತರ ಜೀವಿಸುತ್ತಿರುವವರಾಗಿದ್ದರು. ವ್ಯಾಪಾರಿಯು ಆ ವ್ಯಕ್ತಿಯೊಂದಿಗೆ ತಮ್ಮ ಹಣವನ್ನು ಹಿಂದಿರುಗಿಸುವಂತೆ ಕೇಳಿಕೊಂಡರು. ಈ ಗೌಜು ಗದ್ದಲವನ್ನು ಕಂಡ ಇತರರೂ ಆ ವ್ಯಕ್ತಿಯನ್ನು ಗದರಿಸಿ ಕೇಳಿದರೂ ಆ ವ್ಯಕ್ತಿ ಮಾತ್ರ ತಾನು ಕಳ್ಳತನ ಮಾಡಿಯೇ ಇಲ್ಲ ಎಂದು ಆಣೆ ಹಾಕಿ ವಾದಿಸಲಾರಂಭಿಸಿದನು.
 ಕೊನೆಗೆ ವರಕ್ಕಲ್ ತಂಗಳವರ (ಖ:ಸಿ) ಹತ್ತಿರಕ್ಕೆ ಜನ ಅವನನ್ನು ಕರೆದೊಯ್ದರು.
ತಂಙಳವರು ಆ ವ್ಯಕ್ತಿಯೊಡನೆ "ನೀವು ಆ ಹಣವನ್ನು ಅವರಿಗೆ ಹಿಂದಿರುಗಿಸಿ." ಎಂದರು. ಆ ವ್ಯಕ್ತಿ ತಂಗಳರೊಂದಿಗೂ ಒಪ್ಪದೆ ತಾನು ಕಳ್ಳತನ ಮಾಡಿಯೇ ಇಲ್ಲ ಎಂದು ವಾದಿಸಲಾರಂಭಿಸಿದ.

 ಆಗ, ತಂಙಳರು ಜನರತ್ತ ತಿರುಗಿ ಹೇಳಿದರು: "ಕುಟ್ಟಿಚ್ಚಿರ ಕೊಳದ ಏಳನೇ ಮೆಟ್ಟಿಲಿನ ಸಾಲಿನಲ್ಲಿ ಒಂದು ಒಡೆದ ಕಲ್ಲಿದೆ. ಅದರ ನಡುವೆ ಈ ವ್ಯಾಪಾರಿಯ ಹಣವನ್ನು ಈ ನಿಂತಿರುವ ಮನುಷ್ಯ ಅಡಗಿಸಿಟ್ಟಿದ್ದಾನೆ. ಮುಳುಗು ಬಲ್ಲವರು ಆ ಕೊಳದಿಂದ ಹಣದ ಕಟ್ಟನ್ನು ತೆಗೆಯಿರಿ" ಎಂದರು.
 ನೆರೆದ ಜನ ತಂಗಳರು ಹೇಳಿದ ಹಾಗೆಯೇ ಕುಟ್ಟಿಚ್ಚಿರ ಕೊಳಕ್ಕಿಳಿದು ಹುಡುಕಿದಾಗ ಏಳನೇ ಮೆಟ್ಟಿಲಿನ ಒಡೆದ ಕಲ್ಲೊಂದರ ನಡುವೆ ಹಣದ ಥೈಲಿ ಸಿಕ್ಕಿತು. ಹಣ ಸಿಕ್ಕಿದಾಗ ವ್ಯಾಪಾರಿಯ ಸಂತೋಷಕ್ಕೆ ಪಾರವೇ ಇರಲಿಲ್ಲ.

ಪ್ರತಿಭೆ ಪಾಂಡಿತ್ಯ ಮತ್ತು ಕಠಿಣ ಪರಿಶ್ರಮದ ಮೂಲಕ ಅಲ್ಲಾಹನ ಇಷ್ಟದಾಸರಾದ ವರಕ್ಕಲ್ ಮುಲ್ಲಕೇೂಯ ತಂಙಳ(ಖ.ಸಿ)ರು ಇಂತಹ ಹಲವಾರು ಕರಾಮತ್ ಮೂಲಕ ಜನಜನಿತರಾಗಿ ಸುನ್ನೀ ಜನಮಾನಸದಲ್ಲಿ ಅಜರಾಮರರಾಗಿದ್ದಾರೆ.
ಮಹಾನುಭಾವರು ವರಕ್ಕಲ್ ಪುಡಿಯಂಙಾಡಿ ಮಖಾಮಿನಲ್ಲಿ ಅಂತ್ಯವಿಶ್ರಮ ಪಡೆಯುತ್ತಾರೆ.

ಸರ್ವಶಕ್ತನಾದ ಅಲ್ಲಾಹನು ಆ ಮಹಾತ್ಮರ ಹಕ್ಕ್'ಜಾಹ್ ಬರ್ಕತ್ತಿನಿಂದ ನಮ್ಮೆಲ್ಲರಿಗೂ ಎಲ್ಲಾ ತರದ ಆಪತ್ತು ಮತ್ತು ಮುಸೀಬತ್ತಿನಿಂದ ಸಂಪೂರ್ಣ ಸಂರಕ್ಷಣೆ ನೀಡಿ ಅನುಗ್ರಹಿಸಲಿ ಆಮೀನ್.

ದಾರಿ: ಪುದಿಯಂಙಾಡಿ
 ಕಲ್ಲಿಕೋಟೆ ನಗರ.

♻♻♻♻♻♻♻♻♻

No comments:

Post a Comment