Sunday, January 21, 2018

*☘ಹಿರಿನುಡಿಗಳು☘*

1)ಮಾನವನನ್ನು ದಾರಿಗೆಡಿಸುವುದಕ್ಕೆ ಶೈತಾನನು ಬಳಸುವ ಅತ್ಯಂತ ದೊಡ್ಡ ಅಸ್ತ್ರವೆಂದರೆ ನಾಲಗೆ!
_ *ಇಮಾo ಗಝ್ಝಾಲಿ (ರ)*

2)ಗುಣನಡತೆ ಒಂದು ಅಂಗಡಿಯಿದ್ದಂತೆ. ನಾಲಗೆ ಅದರ ಕೀಲಿಕೈ. ಬೀಗ ತೆರೆದಾಗಲೇ, ಅದು ಚಿನ್ನದಂಗಡಿಯೋ ಅಥವಾ ಬೇರೆ ಅಂಗಡಿಯೋ ಎಂದು ತಿಳಿಯುತ್ತದೆ. _*ಅಲೀ (ರ)*

3)ಬುದ್ದಿವಂತ ಮೌನ ಪಾಲಿಸಿದನೆಂದರೆ ಅಲ್ಲಾಹನ ಮಹಿಮೆಯ ಬಗ್ಗೆ ಯೋಚಿಸುತ್ತಿರುತ್ತಾನೆ. _ *ಅಲೀ(ರ)*

4)ಖಡ್ಗವು ದೇಹವನ್ನು ಗಾಯಗೊಳಿಸಿದರೆ ಮಾತು ಆತ್ಮವನ್ನು ಘಾಸಿಗೊಳಿಸುತ್ತದೆ. *_ಉಸ್ಮಾನ್(ರ)*

5)ನೀನು ಇಹಲೋಕದಲ್ಲಿ ವಿರಾಗಿಯಾಗಿರು.ಪರಲೋಕದ ವಿಷಯದಲ್ಲಿ ಅತ್ಯಾಗ್ರಹಿಯಾಗಿರು.ನಿನ್ನ ಪ್ರತಿಯೊಂದು ವಿಷಯದಲ್ಲೂ ಅಲ್ಲಾಹನಲ್ಲಿ ವಿಶ್ವಾಸವಿಡು.ಹಾಗಿದ್ದರೆ ಸುರಕ್ಷಿತರ ಜತೆಗಿರುವೆ. _ *ಇಮಾಂ ಶಾಫಿಈ (ರ)*

6) ನಾನು ಮೌನವಹಿಸಿದ ಕಾರಣಕ್ಕೆ ಯಾವತ್ತೂ ದುಃಖಿಸಬೇಕಾಗಿ ಬಂದಿಲ್ಲ.ಆದರೆ ಮಾತನಾಡಿದ್ದಕ್ಕೆ ಹಲವು ಬಾರಿ ದುಃಖಿಸಬೇಕಾಗಿ ಬಂದಿತ್ತು. *_ಉಮರ್(ರ)*

7)ಸಾವಿರ ಸಾರಿ ಕಡಲಿನಿಂದ ನೀರು ತೆಗೆದರೂ ಮುತ್ತುರತ್ನಗಳು ಸಿಗಲಾರವು.ಅವು ಸಿಗಬೇಕಾದರೆ ಸಾಮರ್ಥ್ಯವೂ, ಸೌಭಾಗ್ಯವೂ ಇರುವ ಮುಳುಗು ತಜ್ಞನೇ ಆಗಬೇಕು.ಜ್ಞಾನವೆಂಬ ಮುತ್ತು ಕೂಡ ಹಾಗೆಯೇ. *_ಶೈಖ್ ಜಲಾಲುಧ್ಧೀನ್* *ರೂಮಿ (ರ)*

8)ಯಾರಾದರೂ ನಿನ್ನ ಮನಸ್ಸಿಗೆ ನೋವುಂಟು ಮಾಡಿದರೆ ದುಃಖಿಸದಿರು.ಯಾಕೆಂದರೆ ಯಾವ ಮರದ ಫಲ ಹೆಚ್ಚು ರುಚಿಯಾಗಿರುತ್ತೋ, ಆ ಮರಕ್ಕೆ ಜನರು ಹೆಚ್ಚು ಕಲ್ಲುಗಳನ್ನು ಎಸೆಯುತ್ತಾರೆ.ಇದು ಪೃಕೃತಿ ನಿಯಮ *. _ ಅಲೀ (ರ)*

9)ನನ್ನ ಪ್ರಾರ್ಥನೆಗಳು ಈಡೇರಿದಾಗ ನಾನು ಖುಷಿ ಪಡುತ್ತೇನೆ.ಕಾರಣ ಅದು ನನ್ನ ಇಚ್ಛೆ. ನನ್ನ ಪ್ರಾರ್ಥನೆಗಳು ಈಡೇರದೇ ಇದ್ದಾಗಲೂ ನಾನು ಖುಷಿಪಡುತ್ತೇನೆ.ಏಕೆಂದರೆ, ಅದು ಅಲ್ಲಾಹನ ಇಚ್ಛೆ!. *_ಅಲೀ (ರ)*

10)ನೀನು ಜ್ಣಾನಿಗಳಿಸು. ನೀನು ಬಡವನಾಗಿದ್ದರೆ ಅದು ನಿನಗೆ ಸಂಪತ್ತಾಗುವುದು.ನೀನು ಧನಿಕನಾಗಿದ್ದರೆ,ಅದು ನಿನಗೆ ಅಲಂಕಾರವಾಗುವುದು_*ಅ* *ಬೂಬಕರ್ ಸಿಧ್ಧೀಕ್ (ರ)*

No comments:

Post a Comment