Thursday, January 25, 2018

*بِسْمِ اللّٰهِ الرَّحْمَٰنِ الرَّحِيمْ*

*ಹದೀಸ್ ವಿದ್ವಾಂಸರುಗಳಾದ ಇಮಾಮರುಗಳ ಸಂಕ್ಷಿಪ್ತ ಪರಿಚಯ*...
2⃣0⃣
📚📚📚📚📚📚📚📚📚📚

8⃣ *ಇಮಾಂ ನವವೀ(ರ.ಅ)* :

             *ಡಮಾಸ್ಕಸ್ ವಿಶ್ವವಿಖ್ಯಾತ ವಿದ್ವಾಂಸರು, ಸೂಫೀವರ್ಯರು ಹಾಗೂ ನಾಯಕರು ಹುಟ್ಟಿ ಬೆಳೆದ ನೆಲವಾಗಿದೆ. ಡಮಾಸ್ಕಸ್ ನ ಮಸೀದಿಗಳು ಅಂದಿನ ವಿಶ್ವವಿದ್ಯಾನಿಲಯಗಳಾಗಿದ್ದವು. ಜಗತ್ತಿನ ನಾನಾ ಪ್ರದೇಶಗಳ ಜ್ಞಾನದಾಹಿಗಳು ಅಲ್ಲಿಗೆ ಆಗಮಿಸುತ್ತಿದ್ದರು. ಆ ಕಾಲದಲ್ಲಿ ಇಮಾಂ ನವವೀ(ರ.ಅ) ಎಂಬ ಹೆಸರಿನಲ್ಲಿ ಜಗತ್ರ್ಪಸಿದ್ಧರಾದ ಯಹ್ಯಾರವರು ಕೂಡಾ ಅಲ್ಲಿಗೆ ಬಂದು ಅಧ್ಯಯನವನ್ನು ಆರಂಭಿಸಿದರು*.

               *ನವ ಎಂಬುದು ಡಮಾಸ್ಕಸ್ ನ ಒಂದು ಕುಗ್ರಾಮವಾಗಿದೆ. ನವದಲ್ಲಿ ಓರ್ವ ವರ್ತಕರಾಗಿದ್ದ ಶರಫ್ ಬಿನ್ ಮುರ್ರ್ ರವರಿಗೆ ಧರ್ಮಭಕ್ತೆಯಾದ ಪತ್ನಿಯಲ್ಲಿ ಹಿಜಿರಾ 631 ಮುಹರ್ರಂ ನಲ್ಲಿ ಒಂದು ಗಂಡು ಮಗು ಜನಿಸಿತು. ಆ ಮಗುವಿಗೆ ಯಹ್ಯಾ ಎಂದು ನಾಮಕರಣ ಮಾಡಿದರು*.

              *ಯಹ್ಯಾರವರು ಬಾಲ್ಯದಲ್ಲಿ ಮಾತಾಪಿತರಿಂದ ಶಿಕ್ಷಣವನ್ನು ಪಡೆದರು. ಹುಟ್ಟೂರಿನಲ್ಲಿ ಹೇಳಿ ಕೊಳ್ಳುವಂತಹ ವಿದ್ವಾಂಸರಾಗಲೀ, ಶಿಕ್ಷಣ ಕೇಂದ್ರವಾಗಲೀ  ಇರಲಿಲ್ಲ. ಆದುದರಿಂದ ಮಾತಾಪಿತರು ಯಹ್ಯಾರ ಉನ್ನತ ಶಿಕ್ಷಣದ ಬಗ್ಗೆ ಯೋಚಿಸಿರಲಿಲ್ಲ*.

         *ಶರಫ್ ಯಹ್ಯಾರವರನ್ನು ಅವರ ತಂದೆ ತನ್ನ ವ್ಯಾಪಾರದಲ್ಲಿ ಸಹಾಯಕನಾಗಿ ಬಳಸಿಕೊಳ್ಳುವ ಉದ್ದೇಶವನ್ನಿಟ್ಟುಕೊಂಡು ಅಂಗಡಿಯಲ್ಲಿ ನಿಲ್ಲಿಸಿದರು. ಆದರೆ ಯಹ್ಯಾರವರಿಗೆ ವ್ಯಾಪಾರದಲ್ಲಿ ಕಿಂಚಿತ್ ಆಸಕ್ತಿ ಇರಲಿಲ್ಲ. ಖುರಾನ್ ಪಾರಾಯಣದಲ್ಲಿ ಸಂತೋಷವನ್ನು ಅರಸುತ್ತಿದ್ದ ಆ ಬಾಲಕನಿಗೆ ಗ್ರಾಹಕರಿಗೆ ವಸ್ತುಗಳನ್ನು ತೆಗೆದುಕೊಡಲು ಸಮಯವಿರಲಿಲ್ಲ. ತುಂಬಾ ಬುದ್ಧಿವಂತರಾಗಿದ್ದ ಅವರು ಬಾಲ್ಯದಲ್ಲಿಯೇ ವಿನಯ, ಶಿಸ್ತು, ಸೌಮ್ಯತೆ ಮೊದಲಾದ ಸದ್ಗುಣಗಳ ವಕ್ತಾರರಾಗಿದ್ದರು*.

ಒಂದು ಉಪದೇಶದ ಪರಿಣಾಮ : 👇

*ಯಾಸಿರ್ ಬಿನ್ ಯೂಸುಫ್ ಅಲ್ ಮರಾಕಿಸಿ ಓರ್ವ ಮಹಾ ವಿದ್ವಾಂಸರಾಗಿದ್ದರು. ಅವರು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಒಂದೆಡೆ ಮಕ್ಕಳೆಲ್ಲ ಸೇರಿಕೊಂಡು ಆಟವಾಡುತ್ತಿದ್ದರು. ಆದರೆ ಓರ್ವ ಹುಡುಗ ಮಾತ್ರ ಅವರಿಂದ ಬೇರ್ಪಟ್ಟು ದೂರದಲ್ಲಿ ನಿಂತಿರುವುದನ್ನು ಅವರು ಗಮನಿಸಿದರು. ಬಹುಶಃ 10 ವರ್ಷ  ಪ್ರಾಯವಾಗಿರಬಹುದು. ಬೇರೆ ಮಕ್ಕಳು ಆತನನ್ನು ಆಡಲು ಬಲವಂತ ಪಡಿಸುತ್ತಿದ್ದರು. ಆ ಹುಡುಗ ಮಾತ್ರ ಅದಕ್ಕೆ ಮಣಿಯದೇ ಅವರ ಕೈ ಕೊಸರಿಕೊಂಡು ಅಲ್ಲಿಂದ ಓಟಕ್ಕಿತ್ತನು. ಆಗಲೂ ಆತ ಖುರಾನ್ ಪಾರಾಯಣವನ್ನು ಮರೆತಿರಲಿಲ್ಲ*.

           *ಈ ಸನ್ನಿವೇಶವು ಶೈಖ್ ಯಾಸಿನ್ ರವರ ಮನ ಕಲಕಿತು. ಅವರು ಯಹ್ಯಾರನ್ನು ಮಕ್ಕಳ ಆಕ್ರಮಣದಿಂದ ರಕ್ಷಿಸಿ ಓರ್ವ ಖುರಾನ್ ವಿದ್ವಾಂಸರಲ್ಲಿಗೆ ಕರೆದುಕೊಂಡು ಹೋಗಿ ಅವರೊಂದಿಗೆ ಹೀಗೆಂದರು ; "ಈ ಮಗು ಮಹಾ ವಿದ್ವಾಂಸ ಹಾಗೂ ಪಾವನ ಪುರುಷನಾಗುತ್ತಾನೆ. ಇವನಿಂದ ಜನರಿಗೆ ತುಂಬಾ ಉಪಕಾರ ಲಭಿಸಲಿಕ್ಕಿದೆ"*.

            *ಆಗ ಆ ಖುರಾನ್ ವಿದ್ವಾಂಸರು ನೀವು ಜ್ಯೋತಿಷಿಯೇ ಎಂದು ಪ್ರಶ್ನಿಸಿದಾಗ ಶೈಖ್ ಯಾಸಿನ್ ರವರು ): "ನಾನು ಜ್ಯೋತಿಷಿಯೇನೂ ಅಲ್ಲ, ಆದರೆ ಅಲ್ಲಾಹನು ನನ್ನಿಂದ ಹಾಗೆ ಹೇಳಿಸಿದ್ದಾನೆ" ಎಂದರು. ಆ ವಿದ್ವಾಂಸರು ಪ್ರಸ್ತುತ ವಿಷಯವನ್ನು ಯಹ್ಯಾರ ತಂದೆಯ ಗಮನಕ್ಕೆ ತಂದು, ಹುಡುಗನನ್ನು ಉನ್ನತ ಶಿಕ್ಷಣಕ್ಕಾಗಿ ಡಮಾಸ್ಕಸ್ ಗೆ ಕಳುಹಿಸಿಕೊಡಬೇಕೆಂದು ಉಪದೇಶಿಸಿದರು. ಅನಂತರ ಅವರ ತಂದೆ ಯಹ್ಯಾರನ್ನು ಅಂಗಡಿಯಲ್ಲಿ ನಿಲ್ಲಬೇಕೆಂದು ಒತ್ತಾಯಿಸಲಿಲ್ಲ. ಆ ಬಾಲಕ ಅಧ್ಯಯನದಲ್ಲಿ ನಿರತರಾದರು*.

            *ಉಸ್ತಾದರ ಸಲಹೆಯಂತೆ ಯಹ್ಯಾರವರು ಉನ್ನತ ಶಿಕ್ಷಣಕ್ಕಾಗಿ ಡಮಾಸ್ಕಸ್ ಗೆ (ಹಿಜಿರಾ 649) ತೆರಳಿದರು*.

*ಮುಂದುವರಿಯುವುದು*....

📚📚📚📚📚📚📚📚📚📚

No comments:

Post a Comment