Monday, January 22, 2018

ಝಿಯಾರತ್ತ್ ಕೇಂದ್ರ 58 ಖಾಝಿ ಮುಹಮ್ಮದ್ (ರ) ಕುಟ್ಟಿಚ್ಚಿರ

*ಝಿಯಾರತ್ತ್ ಕೇಂದ್ರ​*
      *➡5⃣8⃣*
------------------------
 *#ಖಾಝಿ_ಮುಹಮ್ಮದ್ (ನ:ಮ) #ಕುಟ್ಟಿಚ್ಚಿರ_ಕಲ್ಲಿಕೋಟೆ*
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
===================

ಅರಬಿ ಮಲಯಾಳಂನ ಹೆಸರಾಂತ ಕೃತಿಯಾದ *ಮುಹಿಯುದ್ದೀನ್ ಮಾಲೆ*ಯು ಸುನ್ನೀ ಜನ ಮಾನಸದಲ್ಲಿ  ಜನಜನಿತವಾದ ಕೃತಿಗಳಲ್ಲೊಂದಾಗಿದೆ.

 ಅಲ್ಲಾಹನ ಇಷ್ಟದಾಸರಾದ ಔಲಿಯಾಗಳ ಪೈಕಿ ಅಲ್ಲಾಹನ ಸಂಪ್ರೀತಿಗೆ ಪಾತ್ರರಾಗಿ ಔಲಿಯಾಗಳ ನೇತಾರರೆಂಬ ಹೆಗ್ಗಳಿಕೆಗೆ ಪಾತ್ರರಾದ ಸಯ್ಯದುನಾ ಮುಹಿಯುದ್ದೀನ್ ಶೈಖ್ (ಖ.ಸಿ)ರ ಮದ್'ಹ್'ಗಳನ್ನೊಳಗೊಂಡ ಮುಹಿಯುದ್ದೀನ್ ಮಾಲೆಯ ಪಾರಾಯಣದಿಂದ ಆ ಮಹಾತ್ಮರೊಂದಿಗೆ ಆಂತರಂಗಿಕವಾದ ಅಗೇೂಚರ ಸಂಪರ್ಕ ಸಿದ್ಧಿಸುವುದರೊಂದಿಗೆ ಅವರ ಹಕ್ಕ್'ಜಾಹ್ ಬರ್ಕತ್'ನಿಂದ ದಾರಿದ್ಯ ವಿಮೇೂಚನೆ, ರೇೂಗ ಶಮನ ಸುಖ ಪ್ರಸವ, ಉದ್ದೇಶ ಸಫಲೀಕರಣವಾಗುತ್ತದೆ ಎನ್ನುವುದು ನಮ್ಮ ಹಿರಿಯರ ಅನುಭವದ ನುಡಿ.

ಹಾಗಾಗಿಯೇ ಹಿಂದೆ ನಮ್ಮ ತಾಯಂದಿರು ಸುಬಹಿ ನಮಾಜ್' ನಂತರ ಮತ್ತು ಮಗ್'ರಿಬ್, ಇಶಾ ನಡುವೆ ಮುಸಲ್ಲೆಯಲ್ಲಿ ಕುಳಿತು ಕುರ್ಆನ್ ಮತ್ತು ಮೌಲೀದ್'ನ ನಂತರ ನಫೀಸತ್ ಮಾಲೆ ಮತ್ತು ಮುಹಿಯುದ್ದೀನ್ ಮಾಲೆಯನ್ನೂ ನಿತ್ಯವೂ ಪಾರಾಯಣ ಮಾಡುತ್ತಿದ್ದರು. ಮುಹಿಯುದ್ದೀನ್ ಮಾಲೆಯು ಗೌಸುಲ್ ಅಅ್'ಳಂ ಅಶೈಖ್ ಮುಹಿಯುದ್ದೀನ್ ಅಬ್ದುಲ್ ಖಾದರ್ ಜೀಲಾನಿ (ಖ.ಸಿ)ರವರ ಜೀವನ ಚರಿತ್ರೆಯನ್ನಾಧರಿಸಿದ ಮದ್'ಹ್ ಎಂಬುದನ್ನು ನಾವು ಬಲ್ಲೆವಾದರೂ ಮುಹಿಯುದ್ದೀನ್ ಶೈಖ್ ರವರ ಜೀವನ ಚರಿತ್ರೆಯನ್ನು ಅಭ್ಯಸಿಸಿ ಅರಬಿ ಮಲಯಾಳದಲ್ಲಿ ರಚಿಸಿದ ಆ ಮಹಾತ್ಮರ ಹೆಸರು, ಕುಟುಂಬ, ಬದುಕು ಮತ್ತು ಬರಹಗಳ ಕುರಿತು ತಿಳಿದವರು ವಿರಳ.

ಮುಹಿಯುದ್ದೀನ್ ಮಾಲೆಯಲ್ಲಿ ಬರುವ
 *ಕಂಡಾಲ್ ಅರಿವಾಳನ್ ಕಾಟ್ಟಿತ್ತರುಮ್ ಪೇೂಲೆ, ಖಾಳಿ ಮುಹಮ್ಮದೆನ್ನು ಪೇರುಳ್ಳೇೂವರ್...... ಕೊಯಿಕೊಟ್ಟೆತ್ತುರ ತನ್ನಿಲ್ ಪಿರನ್ನೋವರ್, ಕೊರ್'ವ ಇದೊಕ್ಕೇಯುಂ ನೇೂಕಿಯೆಡುತ್ತೋವರ್*
ಎಂಬ ಕೆಲವು ಸಾಲುಗಳು ಲೇಖಕರನ್ನು ಚುಟುಕಾಗಿ ಪರಿಚಯಿಸುತ್ತದೆ.

ಸರ್ವಶಕ್ತನಾದ ಅಲ್ಲಾಹನ ದೀನ್ ಆದ ಪರಿಶುದ್ಧ ದೀನುಲ್ ಇಸ್ಲಾಮಿನ ಸಂದೇಶದೊಂದಿಗೆ ಭಾರತಕ್ಕೆ ಬಂದು ಇಸ್ಲಾಮಿನ ಸಂದೇಶವನ್ನು ಸಾರಿದ *ಅಲ್ಲಾಹನ ರಸೂಲ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ*ರ ಪ್ರಿಯ ಸ್ವಹಾಬಿ *ಸಯ್ಯದುನಾ ಮಾಲಿಕ್ ದೀನಾರ್ ರಲಿಯಲ್ಲಾಹು* ಅನ್ಹುರವರ ವಂಶ ಪರಂಪರೆಯಲ್ಲಿ ಜನಿಸಿದ ಇಸ್ಲಾಮಿಕ್ ಸಾಹಿತ್ಯ ರಚನೆಕಾರರಾದ *ಖಾಝಿ ಮುಹಮ್ಮದ್ (ನ.ಮ)* ಎಂಬ ಸೂಫಿವರ್ಯರು ಮುಹಿಯುದ್ದೀನ್ ಶೈಖ್ (ಖ.ಸಿ)ರವರ ಜೀವ ಚರಿತ್ರೆಯನ್ನಾಧರಿಸಿ ರಚಿಸಿದ ಕೃತಿಯಾಗಿದೆ ಮುಹಿಯುದ್ದೀನ್ ಮಾಲೆ.

ಹಿಜರಿ 980ರಲ್ಲಿ ಕಲ್ಲಿಕೇೂಟೆಯಲ್ಲಿ ಜನಿಸಿದ  ಮುಹಮ್ಮದ್ ಖಾಝಿ (ನ.ಮ) ಉಸ್ಮಾನ್ ಲಬ್ಬ ಖಾಹಿರಿ (ರ) ಮತ್ತು ಮಖ್ದೂಮ್ (ರ.ಅ) ಎಂಬ ಸೂಫಿವರ್ಯರ ಶಿಷ್ಯರಾಗಿ ಧಾರ್ಮಿಕ ಪಾಂಡಿತ್ಯ ಗಳಿಸಿದ ಮುಹಮ್ಮದ್ ಖಾಝಿ (ನ.ಮ) ನಂತರ ಕಲ್ಲಿಕೇೂಟೆಯ ಕುಟ್ಟಿಚ್ಚಿರದಲ್ಲಿ ಮುದರ್ರಿಸರಾಗಿಯೂ ಬಳಿಕ ಖಾಝಿಯಾಗಿಯೂ ಸೇವೆ ಸಲ್ಲಿಸಿದ ಮುಹಮ್ಮದ್ ಖಾಝಿ (ನ.ಮ) ತಮ್ಮ ಬದುಕಿನಲ್ಲಿ ಸುಮಾರು ಐನೂರು ಇಸ್ಲಾಮಿಕ್ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.

ಆ ಪೈಕಿ ಜಗತ್ತು ಕಂಡ ಪ್ರಮುಖ ಸೂಫಿವರ್ಯ ಕುತುಬುಲ್ ಅಖ್ತಾಬ್ ಗೌಸುಲ್ ಅಅ್'ಳಂ ಸಯ್ಯದುನಾ ಅಶೈಖ್  ಮೊಹಿಯುದ್ದೀನ್ ಅಬ್ದುಲ್ ಖಾದರ್ ಜೀಲಾನಿ (ಖ.ಸಿ) ರವರ ಜೀವನ ಚರಿತ್ರೆಯನ್ನಾಧರಿಸಿ ಕ್ರಿ.ಶ 1616 ರಚಿಸಿದ ಅರಬಿ ಮಲಯಾಳ ಕೃತಿಯಾದ *"ಮೊಹಿಯುದ್ದೀನ್ ಮಾಲೆ"*ಯು ಜನಜನಿತವೂ ಸಾರ್ವಕಾಲಿಕ ಮೌಲ್ಯವುಳ್ಳ ಹೆಸರಾಂತ ಕೃತಿಗಳಲ್ಲೊಂದಾಗಿದೆ.

ಅದೇ ರೀತಿ ಪಾಶ್ಚಿಮಾತ್ಯರಾದ ಪೇೂರ್ಚುಗೀಸರ ಆಕ್ರಮಣವನ್ನು ಎಳೆ ಎಳೆಯಾಗಿ ಬಿಡಿಸಿ ಜನ ಮಾನಸಕ್ಕೆ ತಲುಪಿಸುವಲ್ಲಿ  ಸಫಲವಾದ *ಪತ್'ಹುಲ್ ಮುಬೀನ್,* ವ್ಯಾಕರಣ ಶಾಸ್ತ್ರವನ್ನು ಸರಳ ಪದ್ಯ ಮುಖೇನ ಆವಿಷ್ಕರಿಸಿದ ಗ್ರಂಥಗಳಾದ *ನಳ್'ಮುಲ್ ಅವಾಮೀನ್, ನಳ್'ಮುಲ್ ಖತ್ವರುನ್ನದಾ, ನಳ್'ಮುಲ್ ಆಜ್'ನಾಸ್* ಮತ್ತು ಗಣಿತ ಶಾಸ್ತ್ರ ಕೃತಿಯಾದ *ಮನ್'ಳುಮತ್ತುನ್ ಫೀ ಇಲ್ಮಿನ್ ಅಫ್'ಹಿಸಾಬ್* ಮತ್ತು ಜ್ಯೇೂತಿ (ಪ್ರಕಾಶ) ಶಾಸ್ತ್ರಕ್ಕೆ ಸಂಬಂಧಿಸಿದ ಕೃತಿಯಾದ *ಮನ್'ಳು ಮತ್ತುಲ್ ಫೀ ಇಲ್ಮಿನ್ ಅಫ್'ಲಾಕಿ ವನ್ನುಜೂಮ್* ಇವರ ಪ್ರಮುಖ ಹಾಗೂ ಪ್ರಸಿದ್ಧ ಕೃತಿಯಾಗಿದೆ.

ಹಿಜರಿ 1025 ರಬೀವುಲ್ ಅವ್ವಲ್ 25 ರ ಬುಧವಾರ ವಫಾತಾದ ಮುಹಮ್ಮದ್ ಖಾಝಿ (ನ.ಮ)ರವರ ಕಾಲಾನಂತರ ಅವರ ಪುತ್ರ ಮೊಹಿಯುದ್ದೀನ್ ಖಾಝಿ (ನ.ಮ) ಕುಟ್ಟಿಚ್ಚಿರದ ಖಾಝಿಯಾಗಿ ನೇಮಕವಾದರು. ಖಾಝಿ ಮೊಹಿಯುದ್ದೀನ್ (ನ.ಮ) 1067ರಲ್ಲಿ ವಫಾತಾದ ನಂತರ ಮೊಹಿಯುದ್ದೀನ್ ಖಾಝಿ (ನ.ಮ)ರವರ ಪುತ್ರ ಖಾಝಿ ಅಬೂಬಕ್ಕರ್ ಕುಂಞಿ (ನ.ಮ) ಖಾಝಿಯಾದರು. ಹಿಜರಿ 1301ರಲ್ಲಿ ಅಬೂಬಕ್ಕರ್ ಕುಂಞಿ ಇಹಲೇೂಕ ತ್ಯಜಿಸಿದ ನಂತರ "ವಲಿಯ ಖಾಝಿ, ಚೆರಿಯೆ ಖಾಝಿ" ಎಂಬ ಸಂಪ್ರದಾಯ ಜಾರಿಗೆ ಬಂತು.

ಮುಹಮ್ಮದ್ ಖಾಝಿ (ನ.ಮ) ರವರ ತಂದೆ ಖಾಝಿ ಅಬ್ದುಲ್ ಅಝೀಝ್ ಮತ್ತು ಅವರ ತಂದೆ ಅಲ್ಲಾಮಾ ಶಿಹಾಬುದ್ದೀನ್ ಅಹ್ಮದ್ ಖಾಝಿ (ರ) ಸೇರಿದಂತೆ ಮೇಲ್ಕಂಡ ಎಲ್ಲಾ ಮಹಾತ್ಮರೂ "ಕುಟ್ಟಿಚ್ಚಿರ ಮಿಸ್ಕಾನ್ ಜುಮಾ" ಮಸೀದಿಯಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.

ದಾರಿ: ಮಿಸ್ಕಾನ್ ಜುಮಾ ಮಸೀದಿ, ಕುಟ್ಟಿಚ್ಚಿರ, ಕಲ್ಲಿಕೇೂಟೆ.

✳✳✳✳✳✳✳✳✳



No comments:

Post a Comment