*ಅಹ್ಲು ಬೈತ್*
ಭಾಗ --3
📝 *_ಮುನೀರ್ ಸಖಾಫಿ,ಸಾಲೆತ್ತೂರು._*
_*ಅಹ್ಲು ಬೈತ್ ಕೊನೆಗೊಂಡಿದೆಯೇ?*_
ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಪರಂಪರೆ ಕೊನೆಗೊಂಡಿಯೆಂದು ಕೆಲವರು ಹೇಳುವುದುಂಟು.ಅದು ಸತ್ಯಕ್ಕೆ ವಿರುದ್ಧವಾದ ವಾದವಾಗಿದೆ.
ಪ್ರವಾದೀ ಮೊಮ್ಮಗ ಹುಸೈನ್ (ರ) ಕರ್ಬಲ ಯುದ್ಧದಲ್ಲಿ ರಕ್ತಸಾಕ್ಷಿಯಾದ ವೇಳೆ ಅವರ ಮಕ್ಕಳೂ ಅದರಲ್ಲಿ ಮರಣಗೊಂಡಿದ್ದರು ಎಂದಾಗಿದೆ ಅವರ ವಾದ.
ವಾಸ್ತವದಲ್ಲಿ ಹುಸೈನ್ (ರ)ರವರ ಪುತ್ರ ಅಲಿಯ್ಯ್ ಝೈನುಲ್ ಆಬಿದೀನ್ ಎಂಬವರು ಜ್ವರ ಕಾರಣ ಕರ್ಬಲ ಯುದ್ಧದಲ್ಲಿ ಭಾಗವಹಿಸಿರಲಿಲ್ಲ.ಅವರ ನಂತರವೂ ಜೀವಿಸಿದ್ದರು.ಅವರಿಗೆ 14 ಮಕ್ಕಳಿದ್ದರು.
10 ಗಂಡು ಮಕ್ಕಳು ಮತ್ತು ನಾಲ್ಕು ಹೆಣ್ಣು ಮಕ್ಕಳು ಅವರಿಗಿದ್ದರು.ಇವರ ಮೂಲಕ ಸಯ್ಯಿದ್ ಕುಟುಂಬ ಅಂತ್ಯ ದಿನದ ವರೆಗೆ ನೆಲೆಗೊಳ್ಳುವುದು.
ಅಬೂದಾವೂದ್ (ರ)ವರದಿ ನೋಡಿ;
حدثنا أحمد بن محمد بن حنبل ثنا يعقوب بن إبراهيم بن سعد قال حدثني أبي عن الوليد بن كثير قال حدثني محمد بن عمرو بن حلحلة الدؤلي أن ابن شهاب حدثه
*أن علي بن الحسين* رضي الله عنهما حدثه أنهم حين قدموا المدينة من عند يزيد بن معاوية مقتل الحسين بن علي رضي الله عنهما لقيه المسور بن مخرمة فقال له هل لك إلي من حاجة تأمرني بها؟
قال: فقلت له :لا
قال: هل أنت معطي سيف رسول الله ﷺ؟ فإني أخاف أن يغلبك القوم عليه، وإيم الله لئن أعطيتنيه لا يخلص إليه أبدا حتى يبلغ إلى نفسي، إن علي بن أبي طالب رضي الله عنه خطب بنت أبي جهل على فاطمة رضي الله عنها ،فسمعت رسول الله ﷺ وهو يخطب الناس في ذلك على منبره هذا وأنا يومئذ محتلم فقال " إن فاطمة مني وأنا أتخوف أن تفتن في دينها "
(ابو داود 1772)
ಇಬ್ನ್ ಶಿಹಾಬ್ (ರ), ಮುಹಮ್ಮದ್ ಬಿನ್ ಅಮ್ರ್ ಬಿನ್ ಹಲ್'ಹತ್(ರ) ರೊಂದಿಗೆ ಹೇಳಿದರು;ಹುಸೈನ್ (ರ)ರವರ ಪುತ್ರ ಅಲೀ(ಝೈನುಲ್ ಆಬಿದೀನ್(ರ)ರವರು ) ಹುಸೈನ್ (ರ)ರನ್ನು ವಧಿಸಲ್ಪಟ್ಟ ನಂತರ ಯಝೀದನ ಬಳಿಯಿಂದ ಮದೀನಾಗೆ ಬಂದಾಗ ಮಿಸ್'ವರ್ ಬಿನ್ ಮಖ್'ರುಮ (ರ)ರವರು ಅವರನ್ನು ಕಂಡಾಗ ನಾನು ನಿಮಗೇನಾದರೂ ಮಾಡಿಕೊಡಬೇಕೆ? ಎಂದು ಕೇಳಿದರು.ಆಗ ಝೈನುಲ್ ಅಬಿದೀನ್ (ರ)ಹೇಳಿದರು;"ಬೇಡ".
ಮಿಸ್'ವರ್(ರ) ಕೇಳಿದರು;ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಖಡ್ಗ ನೀವು ನನಗೆ ನೀಡುವಿರಾ?
ಕಾರಣ ನಿಮ್ಮ ಕೈಯಿಂದ ಅಕ್ರಮವಾಗಿ ಅದನ್ನು ಜನರು ವಶಪಡಿಸುವುದನ್ನು ನಾನು ಹೆದರುತ್ತೇನೆ.
ಅಲ್ಲಾಹನಾಣೆ!ನೀವು ಅದನ್ನು ನನಗೆ ನೀಡುವುದಾದರೆ ಮರಣದ ತನಕ ನನ್ನಿಂದ ಯಾರಿಗೂ ಅದನ್ನು ಕೈವಶಪಡಿಸಲು ಸಾಧ್ಯವಿಲ್ಲ.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಪ್ರೀತಿಯ ಪುತ್ರಿ ಫಾತಿಮಾ ಬೀವಿ ಇರುವಾಗಲೇ ಅಲಿಯ್ಯ್ (ರ) ರವರು ಅಬೂ ಜಹಲನ ಪುತ್ರಿಯನ್ನು ವಿವಾಹ ಆಲೋಚನೆ ನಡೆಸಿದಾಗ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಈ ಮಿಂಬರಿಗೆ ಹತ್ತಿ ಈ ರೀತಿ ಹೇಳಿದನ್ನು ನಾನು ಕೇಳಿದ್ದೇನೆ.
"ನಿಶ್ಚಯವಾಗಿಯೂ ಫಾತಿಮಾ (ರ)ನನ್ನ ಭಾಗವಾಗಿದ್ದಾಳೆ.ಅವರ ದೀನಿನ ಕಾರ್ಯದಲ್ಲಿ ಫಿತ್ನ ಉಂಟಾಗುವುದರಲ್ಲಿ ನಾನು ಹೆದರುತ್ತೇನೆ.
ಹುಸೈನ್ (ರ)ರವರ ಪುತ್ರ ಝೈನುಲ್ ಅಬಿದೀನ್ (ರ)ಕರ್ಬಲ ಯುದ್ದದಲ್ಲಿ ಶಹೀದ್ ಆಗಿರಲಿಲ್ಲ.ನಂತರವೂ ಜೀವಿಸಿದ್ದರು ಎಂಬುವುದು ಇದರಿಂದ ಬಹಳ ಸ್ಪಷ್ಟವಾಯಿತು.
*ಮುಂದುವರಿಯುವುದು...*
No comments:
Post a Comment