Saturday, September 21, 2019

ಆತ ಹೇಳಿದ *ಪ್ರತಿರೋಧ ಅಪರಾಧ ಅಲ್ಲವೆಂದು*.

ನಾನು ಕೇಳಿದೆ *ಪ್ರತಿರೋಧ ಎಂದರೆ ಏನು?.*
ಆತ: *ನಮ್ಮ ಮೇಲೆ ಶತ್ರುಗಳು ದಾಳಿ ಮಾಡಲು ಬಂದರೆ ರಕ್ಷಣೆಗಾಗಿ ತಿರುಗಿ ದಾಳಿ ಮಾಡುವುದು. ಇದಕ್ಕೆ ಸಂವಿಧಾನವೇ ಅನುಮತಿಸುತ್ತದೆ. ಈ ವಿಷಯವನ್ನು ಪ್ರಪ್ರಥಮವಾಗಿ ಸಮುದಾಯಕ್ಕೆ ಹೇಳಿ ಕೊಟ್ಟವರೇ ನಾವು ಎಂದು ಹೇಳುತ್ತಾ ಬೀಗಿದ.*

ನಾನು ಕೇಳಿದೆ: *ಹೌದಾ, ನೀವು ಪ್ರತಿರೋಧ ಮಾಡಿದ ಒಂದು ಉದಾಹರಣೆಯನ್ನು ತೋರಿಸಬಹುದಾ.*
ಆತ: *ಇಲ್ಲಿ ಪ್ರತಿಯೊಂದಕ್ಕೂ ಪ್ರತಿಭಟನೆ ಮಾಡುವುದು, ಚಡ್ಡಿಗಳಿಗೆ ಬಹಿರಂಗ ಸವಾಲು ಹಾಕುವವರು ನಾವು ಮಾತ್ರ ಎಂದು ಜಂಭಕೊಚ್ಚಿಕೊಂಡ*
ಅದಕ್ಕೆ ನಾನಂದೆ, *ಪ್ರತಿಭಟನೆ ಇಲ್ಲಿ ಪ್ರತಿಯೊಂದು ರಾಜಕೀಯ ಸಂಘಟನೆಗಳೂ ಮಾಡುತ್ತವೆ. ಬೆರಳೆನಿಕೆಯ ಸದಸ್ಯರಿರುವ DYFI ಕೂಡಾ ಇಲ್ಲಿ ಪ್ರತಿಭಟನೆ ಮಾಡುತ್ತದೆ. ಮತ್ತೆ ಬಹಿರಂಗ ಸವಾಲು ಬಟ್ಟ ಕೂಡಾ ವರ್ಷಕ್ಕೆ ನೂರು ಸಲ ಹಾಕುತ್ತಾನೆ. ಅದನ್ನೆಲ್ಲಾ ಪ್ರತಿರೋಧ ಎನ್ನುವುದಿಲ್ಲ ಎಂದೆ.*

ನೋಡು ನಿಮ್ಮ ಸಂಘದ *ಮುಸ್ತಫಾ ಕಾವೂರ್, ಇಕ್ಬಾಲ್ ಬಂಟ್ವಾಳ, ಅಶ್ರಫ್ ಕಲಾಯಿ, ನೌಷಾದ್ ಖಾಸಿಂಜಿ, ಝುಬೈರ್ ಕೊಡಗು ಸೇರಿದಂತೆ ನೂರಾರು  ಕಾರ್ಯಕರ್ತರು ಶತ್ರುಗಳಿಂದ ಕೊಲೆಯಾಗಿ ಹೋಗಿದ್ದಾರೆ ಅಲ್ಲವೇ ಎಂದು ಕೇಳಿದೆ.*
ಆತ: *ಹೌದು ಹೌದು, ಅವರು ದೀನ್ ಗಾಗಿ ಶಹೀದ್ ಆಗಿದ್ದಾರೆ ಎಂದು  ಅಭಿಮಾನದಿಂದ ಹೇಳಿಕೊಂಡ.*

ಅದಕ್ಕೆ ನಾನೆಂದೆ: *ನೀವು ಪ್ರತಿರೋಧ ಅಪರಾಧ ಅಲ್ಲ ಎಂದು ಹೇಳಿ ಸಮುದಾಯವನ್ನು ಪ್ರಚೋದಿಸಿ ಮುಗ್ಧರ ಬಾಳನ್ನು ಹಾಲು ಮಾಡುವುದಕ್ಕಿಂತ ಮುಂಚೆ, ಸ್ವತಃ ನೀವು ಮೊದಲು ಪ್ರತಿರೋಧ ಮಾಡಲು ಕಳಿತು ಬನ್ನಿ. ನೋಡು ಇವಿಷ್ಟು ನಿಮ್ಮ ಕಾರ್ಯಕರ್ತರು ಶತ್ರುಗಳಿಂದ ಕೊಲೆಯಾಗಿ ಹೋದವರಾಗಿದ್ದಾರೆ. ಪ್ರತಿರೋಧ ಅಪರಾಧ ಅಲ್ಲವೆಂದು ಇವರಿಗೂ ಗೊತ್ತಿತ್ತು ತಾನೇ. ಮತ್ಯಾಕೆ ಇವರ ಮೇಲೆ ದಾಳಿ ಆಗುವಾಗ ಇವರು ಪ್ರತಿರೋಧಿಸದ್ದು.‌  ಪ್ರತಿರೋಧಿಸುವ ತಾಕತ್ತು ನಿಮ್ಮಲ್ಲಿದ್ದಿದ್ದರೆ, ಇಂದು ಇವರು ಕೂಡಾ ಬದುಕಿರುತ್ತಿದ್ದರು ಅಲ್ವ.  ನಿಮಗೇ ಸ್ವತಃ ಪ್ರತಿರೋಧಿಸುವ ತಾಕತ್ತು ಇಲ್ಲ, ಮತ್ತೆ ನಿಮ್ಮ ಸಲಹೆ ಸಮುದಾಯಕ್ಕೆ ಅಗತ್ಯವಿದೆಯಾ ಹೇಳು.* 

*ಹೋಗು ಮನೆಗೆ, ಸುಮ್ಮನೆ ಏನೆಲ್ಲಾ ಹೇಳಿ ಮುಗ್ಧ ಸಮುದಾಯವನ್ನು ದಾರಿ ತಪ್ಪಿಸಬೇಡ. ಪ್ರತಿರೋಧ ಅಪರಾಧವಲ್ಲ ಎಂದು ಇಲ್ಲಿ ಎಲ್ಲರಿಗೂ ಗೊತ್ತಿದೆ.  ಹಾಗಂತ ಕಾಲ್ಕೆರೆದು ಗಲಾಟೆ ಮಾಡಲು ಸಂವಿಧಾನವಾಗಲಿ ಧರ್ಮವಾಗಲಿ ಹೇಳಿಕೊಟ್ಟಿಲ್ಲ. ಎಂದು ಸ್ವಲ್ಪ ಖಾರವಾಗಿ ಹೇಳಿದೆ.*
ಏನೂ ಉತ್ತರ ಇಲ್ಲದ ಆತ, ತಲೆ ಕೆಳಗಾಕಿಕೊಂಡು  ಸೀದಾ ಮನೆಕಡೆಗೆ ನಡೆದ.‌

*ಪೀಪಿಗಳ ಭೃಮೆಯಿಂದ ಹೊರ ಬಂದವ.*

No comments:

Post a Comment