*ನನ್ನ ಮತ ನನ್ನ ಸಮುದಾಯಕ್ಕಾಗಿ...*
ನಮಗೆ ಯಾವುದೇ ಪಕ್ಷದೊಂದಿಗೆ ಪ್ರತ್ಯೇಕ ಒಲವೋ, ವಿರೋಧವೋ ಇಲ್ಲ.
ಆದರೂ ಯಾವುದಾದರೊಂದು ಪಕ್ಷಕ್ಕೆ ಓಟು ಹಾಕುವುದು ನಮ್ಮ ಮೇಲೆ ಕರ್ತವ್ಯವಾಗಿದೆ.
ಸದ್ಯಕ್ಕೆ ಮುಸ್ಲಿಮರ ಬಗ್ಗೆ ವಿಶೇಷ ಕಾಳಜಿ ವಹಿಸುವಂತಹ ಪಕ್ಷ ಯಾವುದೂ ಇಲ್ಲವಾದರೂ, ಇರುವುದರಲ್ಲಿ ಸ್ವಲ್ಪ ಸೂಕ್ತವಾದ ಪಕ್ಷಕ್ಕೆ ನಾವು ಓಟು ಹಾಕಬೇಕಾಗಿದೆ.
*ಹಾಗಾದರೆ ನಾವು ಯಾರಿಗೆ ಓಟು ಹಾಕಬೇಕು?*
ಸದ್ಯ ದ.ಕ ದವರಾದ ನಮ್ಮ ಮುಂದೆ ಇರುವ ಪಕ್ಷ ಮೂರು ಮಾತ್ರ. *1. ಬಿಜೆಪಿ, 2. SDPI, 3. ಕಾಂಗ್ರೆಸ್.*
*1. ಬಿಜೆಪಿ*
ಬಿಜೆಪಿ ಗೆ 99% ದಷ್ಟು ಮುಸ್ಲಿಮರು ಓಟು ಹಾಕಲ್ಲ.
ಕಾರಣ, ಅವರು ಮುಸ್ಲಿಮರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಮುಸ್ಲಿಮರ್ಯಾರೂ ಮರೆಯಲು ಸಾದ್ಯವಿಲ್ಲ. ಬಿಜೆಪಿ ಪ್ರಬಲವಾಗುವುದಕ್ಕಿಂತ ಮುಂಚೆ ಇಲ್ಲಿ ಮುಸ್ಲಿಮರು ಅದೆಷ್ಟೋ ನೆಮ್ಮದಿಯಿಂದ ಬದುಕುತ್ತಿದ್ದರು.
ಬಿಜೆಪಿ ಯಾವಾಗ ಪ್ರಬಲವಾಗುತ್ತಾ ಬಂತೋ, ಅಲ್ಲೆಲ್ಲಾ ಮುಸ್ಲಿಮರ ಬದುಕು ಶೋಚನೀಯಾವಸ್ಥೆಗೆ ತಲುಪಿದೆ.
ಮುಸ್ಲಿಮರನ್ನು ಸಜೀವ ದಹನ ಮಾಡಲಾಗುತ್ತಿದೆ. ದನದ ಹೆಸರಲ್ಲಿ ಕಂಡಕಂಡಲ್ಲಿ ಹಲ್ಲೆ ಕೊಲೆ ಮಾಡಲಾಗುತ್ತಿದೆ. ಜೀವಂತ ಅಂಗಾಂಗಗಳನ್ನು ಕತ್ತರಿಸಿ ಹಿಂಸೆ ಕೊಡಲಾಗುತ್ತಿದೆ.
ಅದೂ ಅಲ್ಲದೆ, ಮುಸ್ಲಿಮರ ಶರಿಹತ್ ವಿಷಯದಲ್ಲೂ ಬಹಳಷ್ಟು ಹಸ್ತಕ್ಷೇಪ ನಡೆಲಾಗುತ್ತಿದೆ. ಈ ಎಲ್ಲಾ ಕಾರಣಕ್ಕೆ ಮುಸ್ಲಿಮರು ಬಿಜೆಪಿ ಯನ್ನು ದೂರ ಇಡಬೇಕೆಂದೇ ಬಯಸುತ್ತಾರೆ.
*2. SDPI..*
ನಮ್ಮ ಮುಂದೆ ಇರುವ ಮತ್ತೊಂದು ಆಯ್ಕೆ SDPI.
SDPI ಕಳೆದ ಸಾಲಿನಲ್ಲಿ ಪಡೆದ ಮತ 26 ಸಾವಿರ. ಅಂದರೆ, ಜಯದ ಐದು ಶೇಕಡದ ಹತ್ತಿರ ಕೂಡಾ ತಲುಪಿಲ್ಲ. ಈ ಬಾರಿ ಅದರ ದುಪ್ಪಟ್ಟು ಮತ ಪಡೆದರೂ ಆಗುವುದು 50 ಸಾವಿರದಷ್ಟು ಮಾತ್ರ. ಅಂದರೆ, ಇದರಿಂದ ಬಿಜೆಪಿ ಯನ್ನು ಸೋಲಿಸಲು ಸಾದ್ಯವಿಲ್ಲ.
ಅದೂ ಅಲ್ಲದೇ, SDPI ಬಗ್ಗೆ 95% ಮುಸ್ಲಿಮರಿಗೆ ಯಾವುದೇ ಒಲವು ಇಲ್ಲ. ಯಾವಾಗಲೂ ಉಲಮಾಗಳ ತಂಙಳ್ ಗಳ ಮೇಲೆ ಸವಾರಿ ಮಾಡುವ ಈ ಪಕ್ಷವನ್ನು ಜನರು ವಿರೋಧಿಸುತ್ತಿರುವುದೇ ಹೆಚ್ಚು.
ಜಯ ಗಳಿಸಲು ಸಾಧ್ಯವಿಲ್ಲದ SDPI ಗೆ ಓಟು ಹಾಕಿದರೆ, ಅದು ಪರೋಕ್ಷವಾಗಿ ಬಿಜೆಪಿ ಗೆ ಸಹಕಾರ ಮಾಡಿದಂತಾಗುತ್ತದೆ.
ಯಾಕೆಂದರೆ, SDPI ಗೆ ಬಿಜೆಪಿ ಗೆ ಸಿಗುವ ಒಂದು ಮತವೂ ಬೀಳುವುದಿಲ್ಲ ಎಂಬುದು ಕಚಿತ. ಇನ್ನು ಬಿದ್ದರೆ, ಅದು ಕಾಂಗ್ರೆಸ್ ಗೆ ಸಿಗಬೇಕಾದ ಮತವಾಗಿರುತ್ತದೆ. ಕಾಂಗ್ರೆಸ್ ಗೆ ಎಷ್ಟು ಮತ ನಷ್ಟವಾಗುತ್ತದೋ ಅಷ್ಟೂ ಅದು ಬಿಜೆಪಿ ಗೆ ಪ್ಲಸ್ ಪಾಯಿಂಟ್.
*3. ಕಾಂಗ್ರೆಸ್*
ಸದ್ಯ ಬಿಜೆಪಿ ಯನ್ನು ಸೋಲಿಸಬೇಕಾದರೆ, ಅದಕ್ಕೆ ಪರ್ಯಾಯವಾಗಿ ನಮ್ಮ ಮುಂದೆ ಇರುವ ಆಯ್ಕೆ ಕಾಂಗ್ರೆಸ್ ಪಕ್ಷ ಮಾತ್ರ.
*ಹಾಗಾಗಿ ಈ ಸಂದರ್ಭದಲ್ಲಿ ನಾವು ಓಟು ಹಾಕಬೇಕಾದ ಪಕ್ಷ ಕಾಂಗ್ರೆಸ್ ಅಲ್ಲದೆ ಬೇರೆ ಯಾವುದೂ ಇಲ್ಲ.* ಅದು ಕಾಂಗ್ರೆಸ್ ನ ಮೇಲೆ ಪ್ರೀತಿಯಿಂದಲ್ಲ. ಬದಲಾಗಿ, ನಮ್ಮ ಸಮುದಾಯಕ್ಕಾಗಿ.
ನಮ್ಮ ಭಾರತ ದೇಶದಲ್ಲಿ ಅದೆಷ್ಟೋ ನಮ್ಮ ಸಹೋದರರು ಬಿಜೆಪಿ ಆರೆಸ್ಸೆಸ್ ನವರಿಂದ ನಿತ್ಯ ಹಿಂಸೆ ಗಳನ್ನು ಅನುಭವಿಸುತ್ತಿರುವ ವಿಚಾರ ನಮಗೆಲ್ಲಾ ಗೊತ್ತಿರುವಂತದ್ದೇ. ಬಿಜೆಪಿ ಯನ್ನು ಸೋಲಿಸುವುದಲ್ಲದೆ ಇದಕ್ಕೆ ಬೇರೆ ಪರ್ಯಾಯ ಮಾರ್ಗವಿಲ್ಲ. ಬಿಜೆಪಿ ಯನ್ನು ಸೋಲಿಸಬೇಕಾದರೆ, ಸದ್ಯಕ್ಕೆ ನಾವು ಓಟು ಹಾಕಿ ಜಯಗಳಿಸುವಂತೆ ಮಾಡಬೇಕಾದ ಪಕ್ಷ ಕಾಂಗ್ರೆಸ್ ಮಾತ್ರ ವಾಗಿದೆ.
ಹೌದು, ಅದು ನಮಗಾಗಿ ಅಲ್ಲ.
*ಭಾರತ ದೇಶದ ಮುಕ್ಕು ಮೂಲೆಯಲ್ಲಿ ಜೀವಿಸುತ್ತಿರುವ, ಆರೆಸ್ಸೆಸ್ ನವರ ಹಿಂಸೆಯಿಂದ ನಲುಗಿ ಹೋದ ನನ್ನ ಸಮುದಾಯದ ನಾಳೆಯ ನೆಮ್ಮದಿಗಾಗಿ, ನನ್ನ ಧರ್ಮದ ಸಂರಕ್ಷಣೆಗಾಗಿ...*
ಸಹೋದರರೇ, ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವಾಗ, ಒಂದು ಕ್ಷಣ ಉತ್ತರ ಭಾರತದ ನಮ್ಮ ಸಹೋದರರ ಜೀವನಕ್ಕೊಮ್ಮೆ ಕಣ್ಣಾಯಿಸಿ. ಅವರು ಅನುಭವಿಸುತ್ತಿರುವ ಕಷ್ಟ ಹಿಂಸೆಗಳನ್ನು ಒಮ್ಮೆ ನೆನೆಸಿಕೊಳ್ಳಿ. ಅವರ ನೆಮ್ಮದಿಗಾಗಿ ನಾವು ಯಾವ ಪಕ್ಷಕ್ಕೆ ಓಟು ಹಾಕುವುದು ಸೂಕ್ತ ಎಂದು ನೀವೇ ತೀರ್ಮಾನಿಸಿ, ಮತ ಚಲಾಯಿಸಿ. ನಮ್ಮ ಪ್ರತಿಷ್ಠೆ ತೋರಿಸಬೇಕಾದ ಸಮಯವೂ ಇದಲ್ಲ ಎಂಬುದು ನೆನಪಿರಲಿ.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
No comments:
Post a Comment