Saturday, September 21, 2019

*SSF ನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಸ್ಗರ್ ಎನ್ನುವ ಓರ್ವ ಬಿಜೆಪಿ ಯ ಕಾರ್ಯಕರ್ತ,  ಕೇಂದ್ರದಲ್ಲಿ ಬಿಜೆಪಿ ಜಯಗಳಿಸಬೇಕು ಎಂಬ  ವಾಯ್ಸೊಂದು ಬಿಟ್ಟಿದ್ದನಂತೆ. ಸಮಯ ಸಾಧಕರಿಗೆ ಇವಿಷ್ಟೇ ಬೇಕಾದದ್ದು. ಆತ SSF ನ ವೇದಿಕೆಯಲ್ಲಿರುವ ಫೋಟೋ ವನ್ನು ಶೇರ್ ಮಾಡುತ್ತಾ, SSF ನವರು ಅದೇನೋ ಮಹಾ ಪಾಪ ಮಾಡಿದವರಂತೆ ಅರಚಾಡುತ್ತಿದ್ದಾರೆ.* 
*ಇರಲಿ, ಅವರ ಕೆಲಸವಂತೂ ಅದೇ. ಅದನ್ನು ತಡೆಯಲು ಯಾರಿಂದಲೂ ಸಾದ್ಯವಿಲ್ಲ.* ‌

ಇಲ್ಲಿ ನನ್ನ ಪ್ರಶ್ನೆ ಏನೆಂದರೆ, ಓರ್ವ ಮುಸ್ಲಿಂ ವ್ಯಕ್ತಿ BJP ಜಯಗಳಿಸಬೇಕು ಎಂದು ಹೇಳಿದ ತಕ್ಷಣ ಆತ ಅಲ್ಲಾಹನ ಮುಂದೆ ಮಹಾ ಅಪರಾಧಿ ಆಗಿಬಿಡುತ್ತಾನಾ? ಹೌದಾಗಿದ್ದರೆ, ಅದಕ್ಕೆ ಇಸ್ಲಾಮಿನಲ್ಲಿ ಆಧಾರ ಇರಲೇಬೇಕು ಅಲ್ವ. ಆಧಾರ ಇಲ್ಲದಿದ್ದರೆ, ಅವರವರಿಗೆ ಇಷ್ಟ ಬಂದಂತೆ ಹೇಳುವುದಾದರೆ, ಅದಕ್ಕೂ ಇಸ್ಲಾಂ ಧರ್ಮಕ್ಕೂ ಯಾವುದೇ ಬಂಧ ಇರುವುದಿಲ್ಲ.
ಅವರವರಿಗೆ ಇಷ್ಟ ಬಂದಂತೆ ದೀನ್ ಹೇಳಲು ಇದು ಫಾದ್ರಿ ಧರ್ಮವಲ್ಲ ಎಂದು ಅಂತಹವರು ಅರ್ಥಮಾಡಿಕೊಳ್ಳುವುದು ಒಳಿತು.

ಆತ ಹೇಳಿದ್ದನ್ನು ನಾನು ಬೆಂಬಲಿಸುತ್ತಿಲ್ಲ. ಯಾಕೆಂದರೆ, ಮುಸ್ಲಿಮರಿಗೆ ಸಾಕಷ್ಟು ಅನ್ಯಾಯ ಮಾಡಿರುವ ಬಿಜೆಪಿ,  ಇಲ್ಲಿ ಅಧಿಕಾರಕ್ಕೆ ಬರಬಾರದೆಂಬುದೇ ಇಲ್ಲಿನ ಸಮಸ್ತ ಮುಸ್ಲಿಮರ ಮತ್ತು ಜಾತ್ಯಾತೀತ ಮನೋಭಾವದವರ ಅಭಿಲಾಷೆ. ಆದರೆ, ಆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿದ ತಕ್ಷಣ, ಮತ್ತು ಹಾಗೆ ಹೇಳಿದ ವ್ಯಕ್ತಿ SSF ನ ವೇದಿಕೆಯಲ್ಲಿ ಇದ್ದ ಮಾತ್ರಕ್ಕೆ ಅದು ಮಹಾ ಪಾಪ ಆಗುವುದು ಹೇಗೆ ಎಂಬುದು ಮಾತ್ರ ಅರ್ಥವಾಗದ ಪ್ರಶ್ನೆ.

ಬಿಜೆಪಿಯನ್ನು ಬೆಂಬಲಿಸಿದ ವ್ಯಕ್ತಿ SSF ನ ವೇದಿಕೆಯಲ್ಲಿ ಇದ್ದ ಮಾತ್ರಕ್ಕೆ, SSF ನವರು ಮಾಡಿದ್ದು ಮಹಾ ಅಪರಾಧ ಎಂದು ಹೇಳುವವರು, ಇಲ್ಲಿ ಅದೇ ಬಿಜೆಪಿ ಯೊಂದಿಗೆ ಸಂಪರ್ಕ ಇರುವವರೊಂದಿಗೆ, ಇಸ್ಲಾಂ ವಿರುದ್ಧ ನಿಲುವು ವ್ಯಕ್ತಪಡಿಸುವವರೊಂದಿಗೆ ಸ್ನೇಹದಿಂದ, ಪರಸ್ಪರ ಸಹಕಾರ ಮಾಡುತ್ತಾ ಇಲ್ವ.
SSF ನ್ನು ವಿರೋಧಿಸುವ ಸಂಘಟನೆಗಳ ಅದೆಷ್ಟೋ ಕಾರ್ಯಕರ್ತರು ಇಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಾರೆ. ಅವರೇನು ಕೇವಲ ಮುಸ್ಲಿಮರೊಂದಿಗೆ ಮಾತ್ರ ವ್ಯವಹಾರ ನಡೆಸುವುದಾ.
ಅವರಿಗೆ ಪರಸ್ಪರ ವ್ಯಾಪಾರ ವಹಿವಾಟು ನಡೆಸುವವರಲ್ಲಿ  ಅದೆಷ್ಟೋ ಮುಸ್ಲಿಂ ವಿರೋಧಿಗಳಾದ ಬಿಜೆಪಿ ಆರೆಸ್ಸೆಸ್ ನವರು ಕೂಡಾ ಇದ್ದಾರೆ. ಅಂದರೆ, ಬಿಜೆಪಿ ಆರೆಸ್ಸೆಸ್ ನವರೊಂದಿಗೆ ಪರಸ್ಪರ ವ್ಯಾಪಾರ ವ್ಯವಹಾರ ನಡೆಸಬಹುದು. ಅವಾಗ ಅದು ಇವರಿಗೆ ಹರಾಂ ಆಗುವುದಿಲ್ಲ. 
ಅದೂ ಅಲ್ಲದೇ, ಮುಸ್ಲಿಮರನ್ನು ಕಠಿಣವಾಗಿ ವಿರೋಧಿಸುವ ವಜ್ರದೇಹಿ ಸ್ವಾಮೀಜಿಯ ಕೈಕೈ ಹಿಡಿದು ನಡೆದಿಲ್ಲವೇ. ಅದು ಇವರ ಕಾನೂನು ಪ್ರಕಾರ ತಪ್ಪಾಗುವುದಿಲ್ಲವೇ.
SSF ನವರ ವೇದಿಕೆಯಲ್ಲಿ ಇದ್ದರೆ ಮಾತ್ರ, ಅದು ಮಹಾ ಹತ್ತು ಅಪರಾಧಗಳಲ್ಲಿ ಒಂದರಂತೆ ವರ್ತಿಸುತ್ತಾರೆ.

ಅಸ್ಗರ್ ರವರು ಬಿಜೆಪಿ ಪರ ವಾಯ್ಸ್ ಬಿಟ್ಟರೆ ಮಾತ್ರ ಅವರು ಧರ್ಮ ದ್ರೋಹಿ, ಸಮುದಾಯ ದ್ರೋಹಿಯಾ?
ಕೋಮುವಾದಿ ಪಕ್ಷ ಬಿಜೆಪಿ ಯ ಮುಂದೆ ಒಂದು ದೊಡ್ಡ ಜಾತ್ಯಾತೀತ ಪಕ್ಷ ಓಟಿಗೆ ನಿಂತಿರುವಾಗ, ಅದರ ಮಧ್ಯೆ ಜಾತ್ಯಾತೀತ ಪಕ್ಷದ ಓಟನ್ನು ವಿಭಜಿಸಿ ಪರೋಕ್ಷವಾಗಿ ಬಿಜೆಪಿ ಗೆ ಸಹಕಾರಿಯಾಗುವಂತೆ ಮತ್ತೊಂದು ಜಾತ್ಯಾತೀತ ಪಕ್ಷ ಓಟಿಗೆ ನಿಲ್ಲುವುದು ಕೂಡಾ ಕೋಮುವಾದಿ,  ಮುಸ್ಲಿಂ ವಿರೋಧಿ ಬಿಜೆಪಿ ಗೆ ಸಹಕರಿಸಿದಂತೆ ಆಗುವುದಿಲ್ವ.  ಇಲ್ಲ ಅಂತ ಓಟಿಗೆ ನಿಲ್ಲುವವರು ಒಂದು ವೇಳೆ ಹೇಳಬಹುದು. ಆ ಬಗ್ಗೆ ಇಲ್ಲಿನ ಸಮಸ್ತ ಮುಸ್ಲಿಮರ ಅಭಿಪ್ರಾಯ ಸಂಗ್ರಹಿಸಲಿ, ಅವಾಗ ಗೊತ್ತಾಗುತ್ತದೆ ಎಷ್ಟು ಮುಸ್ಲಿಮರು ಇದನ್ನು ಬೆಂಬಲಿಸುತ್ತಾರೆ, ವಿರೋಧಿಸುತ್ತಾರೆಂದು.
 ಈ ರೀತಿ ಪರೋಕ್ಷವಾಗಿ ಬಿಜೆಪಿ ಗೆ ಸಹಕಾರ ಮಾಡುವವರಿಗೆ ಅಸ್ಗರ್ ರವರನ್ನು ವಿರೋಧಿಸುವ ನೈತಿಕ ಹಕ್ಕು ಇದೆಯಾ. ಖಂಡಿತಾ ಇಲ್ಲ.

ಇಲ್ಲಿ ಯಾರಿಗೂ ಎಷ್ಟು ಸಂಘಟನೆ ಬೇಕಾದರೂ ಕಟ್ಟಬಹುದು. ಅವರಿಗೆ ಬೇಕಾದಂತಹ ನಿಯಮಗಳನ್ನು ಕೂಡಾ ಸೃಷ್ಟಿಸಬಹುದು. ಅದನ್ನು ಇಲ್ಲಿ ಯಾರಿಗೂ ವಿರೋಧಿಸಲು ಸಾದ್ಯವಿಲ್ಲ.
ಆದರೆ, ಜಾಹಿಲ್ ಗಳೆಲ್ಲಾ ಕಟ್ಟುವ ಸಂಘಟನೆಗೆ ಮತ್ತು ಅವರ ಭೂಲೋಕದ ಲಾಭಕ್ಕೋಸ್ಕರ ಅವರು ಸೃಷ್ಟಿಸುವ ಕಾನೂನುಗಳಿಗೆ  ಉಲಮಾಗಳು ಕೂಡಾ ಸಹಕರಿಸಬೇಕು ಎಂದು ಬಯಸುವುದು ಮೂರ್ಖತನವಾಗಿದೆ.
ಉಲಮಾಗಳು ಹತ್ತು ಹದಿನೈದು ವರ್ಷಗಳ ಕಾಲ ಧಾರ್ಮಿಕ ವಿದ್ಯೆ ಕಲಿತು ಬರುವುದು, ಯಾವುದೋ ಜಾಹಿಲ್ ಗಳು (ಅವಿದ್ಯಾವಂತರು) ಸೇರಿ ತಯಾರಿಸುವ ಸಂಘಟನೆ ಮತ್ತು ಅವರಿಗೆ ಬೇಕಾದಂತಹ ಕಾನೂನನ್ನು ಬೆಂಬಲಿಸಲು ಅಲ್ಲ. ವಿಪರ್ಯಾಸವೆಂದರೆ, ಜಾಹಿಲ್ ಗಳು ತಯಾರಿಸಿದ ಕಾನೂನನ್ನು ಬೆಂಬಲಿಸಲು ಕೂಡಾ ಉಲಮಾಗಳೆನಿಸಿದವರು ಸಿಗುತ್ತಿದ್ದಾರಲ್ವ.

ಕೆಲವೊಂದು ಉಲಮಾಗಳೆನಿಸಿದವರು ಜಾಹಿಲ್ ಗಳ ಹಿಂದೆ ಬಿದ್ದಿದ್ದಾರೆಂದು ನೈಜ ಉಲಮಾಗಳು ಕೂಡಾ ಜಾಹಿಲ್ ಗಳ ಹಿಂದೆ ಬೀಳುತ್ತಾರೆಂದು ಯಾರೂ ಹಗಲು ಕನಸು ಕಾಣಬೇಡಿ.  ಅದೇನು ಟೀಕೆ ವಿಮರ್ಶೆ, ಹಿಂಸೆ, ಅಕ್ರಮ, ಅಪವಾದ ಗಳನ್ನು ಹೊರಿಸಿದರೂ, ಅಲ್ಲಾಹನನ್ನು ಭಯ ಪಡುವ ಉಲಮಾಗಳು ಜಾಹಿಲ್ ಗಳಿಗೆ ಭಯಪಟ್ಟು ಅವರಿಗೆ ಬೇಕಾದಂತೆ ದೀನ್ ಹೇಳಲಾರರು, ಮತ್ತು ಅವರಿಗೆ ಸಹಕರಿಸಲಾರರು.
ನಮ್ಮಲ್ಲಿ ಉಲಮಾಗಳು ದೀನ್ ಹೇಳುತ್ತಾರೆ. ಜಾಹಿಲ್ ಗಳು ಅದನ್ನು ಅನುಸರಿಸುತ್ತಾರೆ.
ಜಾಹಿಲ್ ಗಳು ದೀನ್ ಹೇಳುವುದು, ಅದನ್ನು ಉಲಮಾಗಳೆನಿಸಿದವರು ಅನುಸರಿಸುವಂತಹ ಗತಿಕೇಡು ನಮ್ಮ ಉಲಮಾಗಳಿಗೆ ಬಂದಿಲ್ಲ.
ಶರೀರ ಬಾಲವನ್ನು ಅಲುಗಾಡಿಸಬೇಕೇ ಹೊರತು,
ಬಾಲ ಶರೀರವನ್ನು ಅಲುಗಾಡಿಸಬಾರದು.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment