Saturday, September 21, 2019

*ಸುಲ್ತಾನುಲ್ ಉಲಮಾ ಎಪಿ ಉಸ್ತಾದರಿಗೆ ಗ್ರ್ಯಾಂಡ್ ಮುಫ್ತಿ ಎಂಬ ಬಿರುದು ಸಿಗಲು ಕಾರಣ ಎಂದು ಹೇಳಿ ಖಾದಿಯಾನಿ ಚಲಫಿಯೋರ್ವ ಹಾಕಿದ ಪೋಷ್ಟ್ ಗೆ ಪ್ರತ್ಯುತ್ತರ..*

 *,ಸಲಪಿ.*
*1)* _ಲೋಕನಾಯಕ ಅಲ್ಲಾಹನ ಪ್ರವಾದಿ(ಸ)ರವರ ಹೆಸರಲ್ಲಿ ತಂದ ವ್ಯಾಜ್ಯ ಕೂದಲಿಗೆ ಪ್ರವಾದಿಯಿಂದ  ಕಾಂತಪುರರ ವರೆಗೆ ಮುಟ್ಟುವಂತಹ ಕಳ್ಳ ಸನದ್ ಮಾಡಿದ ಕಾರಣಕ್ಕೆ ಗ್ರಾಂಡ್ ಮುಫ್ತಿಯಾಗಿ ಪರಿಗಣಿಸಲಾಯಿತು ಈ ಸಾಧನೆಯನ್ನು ನೋಡಲು ಈ ಲಿಂಕ್ ಉಪಯೋಗಿಸಿ..._👇
https://youtu.be/7wmAKrhziLg

  *ಉತ್ತರ..👇🏽*
*ವಿಶ್ವದಲ್ಲೇ ಸಾಟಿಯಿಲ್ಲದ ಓರ್ವ ಪ್ರಗಲ್ಭ ಆಲಿಂ ಆಗಿದ್ದಾರೆ ಎಪಿ ಉಸ್ತಾದ್. ಅಂತಹಾ ಪಾಂಡಿತ್ಯವಿರುವ ಎಪಿ ಉಸ್ತಾದ್ ಗೆ ಒಂದು ಸನದ್ ರಚಿಸಲು,  ಯಾರಿಗೂ ಪರಿಚಯವಿಲ್ಲದ, ಅದುವರೆಗೂ ಯಾರೂ ಕೇಳಿರದ/ನೋಡಿರದ ಮಲಯಮ್ಮ ಎಂಬ ಸಖಾಫಿಯ ಅಗತ್ಯವಿದೆಯೇ.*
*ಹಾಗೆ ಕಳ್ಳ ಸನದ್ ರಚಿಸುವುದಾದರೆ, ಅದನ್ನು ಎಪಿ ಉಸ್ತಾದ್ ರವರಿಗೆ ಸ್ವತಃ ರಚಿಸಬಹುದಿತ್ತಲ್ವ. ಎಪಿ ಉಸ್ತಾದ್ ಗಿಂತ ಪ್ರಗಲ್ಭ ಆಲಿಂ ಇನ್ಯಾರೂ ಇಲ್ಲ ಎಂಬುದು ನಿಷೇಧಿಸಲಾಗದ ಸತ್ಯತಾನೇ. ಇನ್ನು ಬೇರೆಯವರ ಸಹಾಯ ಪಡೆಯುವುದಾದರೂ, ಎಪಿ ಉಸ್ತಾದರೊಂದಿಗೆ ನಿಕಟ ಸಂಪರ್ಕವಿರುವ ಪೇರೋಡ್ ಉಸ್ತಾದ್, ಚುಲ್ಲಿಕ್ಕೋಡ್ ಉಸ್ತಾದ್ ರಂತಹ ಪ್ರಗಲ್ಭರಿದ್ದಿಲ್ಲವೇ. ಇದೆಲ್ಲಾ ನೋಡುವಾಗ, ಎಪಿ ಉಸ್ತಾದರ ವಿರೋಧಿಗಳ ಮಧ್ಯೆ ಅಂಗೀಕಾರ ಪಡೆಯಲು ಮಲಯಮ್ಮ ಎಂಬ ಸಖಾಫಿ ಸೃಷ್ಟಿಸಿದ ಮಹಾ ಡ್ರಾಮಾ ಎಂಬುದು ಅರ್ಥವಾಗುತ್ತದೆ.*
*ಇನ್ನು ಈ ಸನದ್ ವಿಷಯದಲ್ಲಿ ಚರ್ಚಿಸಲು ಯಾರಿಗಾದರೂ ಗಂಡೆದೆ  ಇದ್ದರೆ, ಅಂತಹವರು, ಕಝ್ರಜಿ ಯವರ ಈ ಪಂತಾಹ್ವಾನವನ್ನು ಸ್ವೀಕರಿಸಲಿ.*
https://youtu.be/qJPS5WjZ3aQ

 *ಚಲಪಿ...*
*2)*_ಪ್ರವಾದಿ(ಸ)ರವರ ಹೆಸರಲ್ಲಿ ಕಳ್ಳ ಸನದು ಮಾಡಲು ಒಪ್ಪದ ಶಿಷ್ಯ ಮಲಯಮ್ಮ ಸಖಾಫಿ ಎಂಬ ಮರ್ಕಝಿನ ಮುದರ್ರಿಸ್ ರವರನ್ನು ಕೊಲೆಮಾಡಲು ಪ್ರಯತ್ನ ಪ್ರಯತ್ನ ಪಟ್ಟ ಕಾರಣಕ್ಕಾಗಿ ಗ್ರಾಂಡ್ ಮುಫ್ತಿ ಪಟ್ಟಾ,_
👉 https://youtu.be/5yvHYyfeUh4

*ಉತ್ತರ....*👇🏽

*ಈ ವಿಷಯದಲ್ಲಿ ವ್ಯವಹರಿಸಲು ಇಲ್ಲಿ ಕಾನೂನು ಇದೆಯಲ್ವ. ಒಂದು ಕೆಲಸಮಾಡಿ, ಇಲ್ಲಿರುವ ಎಪಿ ಉಸ್ತಾದರ ವಿರೋಧಿಗಳನ್ನೆಲ್ಲಾ ಸೇರಿಸಿ ಎಪಿ ವಿಭಾಗದ ವಿರುದ್ಧ ಕೊಲೆ ಯತ್ನದ ಬಗ್ಗೆ ಒಂದು ಕೇಸು ಕೊಟ್ಟು ಬಿಡಿ. ಅವಾಗ, ಇಂತಹ ಆರೋಪದ ಒಳಮರ್ಮ ಹೊರಬರುತ್ತದೆ. ಎಪಿ ಉಸ್ತಾದ್ ನಿಂತರೂ ಕೂತರೂ ಪತ್ರಿಕಾ ಗೋಷ್ಟಿ ಮಾಡಿ ಉಸ್ತಾದರನ್ನು ಬಂದಿಸಲು ಆಗ್ರಹಿಸುವವರಿಗೆ, ಈ ಕೊಲೆ ಯತ್ನದ ಸ್ಪಷ್ಟ ಕಾರಣ ತಮ್ಮಲ್ಲಿರುವಾಗ, ಆ ಬಗ್ಗೆ ಕೇಸು ಕೊಟ್ಟು ಉಸ್ತಾದರನ್ನು ಬಂದಿಸಲು ಯಾಕೆ ಪ್ರಯತ್ನಿಸಬಾರದಿತ್ತು.?*

*ಚಲಪಿ..*
*3)* _ಕಾಫಿರಾದ ಸುನ್ನತ್ ಮಾಡದ ದಾಮೋದರ ಪಿಳ್ಳೇ ಅಯ್ಯಪ್ಪಾ ಎಂಬ ಕುಪ್ಪ ಸ್ವಾಮಿಯನ್ನು  ಔಲಿಯಾ ಎಂದು ಕಾಂತಪುರ ಘೋಷಿಸಿ ಎಪಿ ಸುನ್ನಿಗಳಿಗೆ ಇಸ್ತಿಗಾಸ ಮಾಡಲು ಹೊಸ ದರ್ಗಾ ನಿರ್ಮಿಸಿ ಉರೂಸ್ ಮಾಡಿದ ಸಾಧನೆಗಾಗಿ ಗ್ರಾಂಡ್ ಮುಫ್ತಿ ಪಟ್ಟ ನೀಡಲಾಯಿತು ..ಈ ಸಾಧನೆಯನ್ನು ಕಣ್ಣಾರೆ ನೋಡಲು ಈ ಲಿಂಕ್ ತೆರೆಯಿರಿ_ 👇
https://youtu.be/OweOctOVguI

*ಉತ್ತರ..* 👇🏽

*ಕಾಫಿರಾದ ಅನ್ಯ ಧರ್ಮದ ಓರ್ವ ವ್ಯಕ್ತಿಯನ್ನು ಯಾರಾದರೂ ಮುಸ್ಲಿಮರ ದಫನ ಭೂಮಿಯಲ್ಲಿ ಧಫನ ಮಾಡಿ ದರ್ಗಾ ಕಟ್ಟುತ್ತಾರೆಯೇ? ಹಾಗೆ ಮಾಡಲು ಮೊಹಲ್ಲಾದವರ ತಲೆಯಲ್ಲಿ ಹುಳ ಬಿದ್ದಿದೆಯಾ?  ಒಂದುವೇಳೆ,  ದರ್ಗಾ ಮಾಡಬೇಕಿದ್ದರೆ ಆ ಮೊಹಲ್ಲಾದವರಿಗೆ ಮುಸ್ಲಿಂ ವ್ಯಕ್ತಿಗಳು ಸಿಗುವುದಿಲ್ಲವೇ. ಇದೆಲ್ಲಾ ನಂಬುವಂತ ವಿಷಯವೇ. ಆ ಊರಿನ ಮೊಹಲ್ಲಾದ ಎಲ್ಲಾ ಜನರ ಸರ್ವ ಸಮ್ಮತದೊಂದಿಗೆ ದಫನಮಾಡಿ ದರ್ಗಾ ಕಟ್ಟಿದ್ದಾರೆಂದರೆ, ಅವರು ಓರ್ವ ಮಹಾನ್ ವ್ಯಕ್ತಿ ಆಗಿರಲೇಬೇಕು ಅಲ್ವ.*
*ಓಚರ ಉಪ್ಪಾಪರ ವಿಷಯ ಬಿಟ್ಟು ಬಿಡಿ,  ಇನ್ನು ಈ ಖಾದಿಯಾನಿ ಚಲಪಿಗಳಿಗೆ ಬೇರೆ ಯಾವುದಾದರೂ ಅಲ್ಲಾಹನ ಅವುಲಿಯಾಗಳ ಮೇಲೆ ವಿಶ್ವಾಸವಿದೆಯಾ.? ಇಲ್ಲಿ ಯಾರಿಗೂ ತರ್ಕವಿಲ್ಲದ ಓರ್ವ ಮಹಾನ್ ವಲಿಯ್ಯ್ ಸಿಎಂ (ರ) ರವರ ಬಗ್ಗೆ ಈ ಖಾದಿಯಾನಿ ಚಲ್ಪಿಗಳೊಂದಿಗೆ ಕೇಳಿನೋಡಿ. ಆ ಸಿಎಂ ವಲಿಯುಲ್ಲಾಹಿಯವರನ್ನು ಕೂಡಾ ಈ ಚಲ್ಪಿಗಳು ಅದೇ ರೀತಿ ನಿಂದಿಸುವವರಾಗಿದ್ದಾರೆ.*
*ಓಚರ ಉಪ್ಪಾಪ ಎಂಬ ಆ ಮಹಾನ್ ವ್ಯಕ್ತಿಯ ಬಗ್ಗೆ ಸವಿಸ್ತಾರವಾಗಿ ತಿಳಿಯಲು ಈ ಲಿಂಕ್ ತೆರೆದು ನೋಡಿ.*
https://youtu.be/AMZguRQ6j_Y

*ಚಲಪಿ..*
*4)* _ನಬಿ(ಸ.ಅ)ರ ಅಸಾರ್ ಎಂದು ಹೇಳಿ ಮುಂಬೈ ಜಾಲಿಯಾವಾಲನಿಂದ ಯಾವುದೋ ಕೂದಲು ತಂದು ಅದನ್ನು ನೀರಿಗೆ ಮುಳುಗಿಸಿ ಬರೀ ಒಂದು ಕೂದಲಿನಲ್ಲಿ ಕೋಟಿ ಕೋಟಿ ಸಂಪಾದಿಸಿ ದಾಖಲೆ ನಿರ್ಮಿಸಿದ ಈ ಸಾಧನೆ ಮಾಡಿದ ಏಕೈಕ ವ್ಯಕ್ತಿ ಎಂಬ ಕಾರಣಕ್ಕಾಗಿ ಗ್ರಾಂಡ್ ಮುಫ್ತಿ ಎಂಬ ಬಿರುದು ನೀಡಲಾಯಿತು...ಈ ಸಾಧನೆಯನ್ನು ನೋಡಲು ಈ ಲಿಂಕ್ ಉಪಯೋಗಿಸಿ..._👇
https://youtu.be/f2ZMmmIxQzM

*ಉತ್ತರ..👇🏽*

*ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ರವರು ಮುನ್ನಡೆಸುವ ಮರ್ಕಝ್ ನಲ್ಲಿ ಪ್ರತೀ ವರ್ಷ ರಬಿವುಲ್ ಅವ್ವಲ್ ತಿಂಗಳಲ್ಲಿ ಪ್ರವಾದಿ ರವರ ﷺ ಪುಣ್ಯ ಕೇಶ ಮುಳುಗಿಸಿದ ನೀರನ್ನು ವಿತರಣೆ ಮಾಡಲಾಗುತ್ತದೆ. ‌ಇದು ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ‌ಇದುವರೆಗೂ ಯಾವೊಬ್ಬನಿಂದಲೂ ಒಂದು ನಯಾಪೈಸೆ ಪಡೆದ ಚರಿತ್ರೆ ಇಲ್ಲ.   ಇನ್ನು ಯಾರಾದರೂ ಇದರಿಂದ ಕೋಟಿ ಕೋಟಿ ಸಂಪಾದಿಸಲಾಗಿದೆ ಎಂದು ಆರೋಪಿಸುವುದಾದರೆ, ಅಂತಹವರು ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಿದರೆ, ಮತ್ತು ಅದೇರೀತಿ, ಮುಂಬೈಯ ಇಕ್ಬಾಲ್ ಜಾಲಿಯಾವಾಲ ರವರಿಂದ ತಂದ ಶಹ್ರೇ ಮುಬಾರಕ್ ಪ್ರವಾದಿ ﷺ ರದಲ್ಲವೆಂದೂ ಸಾಬೀತು ಪಡಿಸಿದರೆ,   ಅಂತಹವರಿಗೆ ಕೋಟಿ ರೂಪಾಯಿ ಬಹುಮಾನ ಕೊಡಲು ಸುನ್ನೀ ಮಕ್ಕಳು ಸಿದ್ದರಿದ್ದಾರೆ. ಗಂಡೆದೆ ಇರುವವರಿಗೆ ಮುಂದೆ ಬರಬಹುದು.*

*ಚಲಪಿ..*
*5)* _ಕೇಶಕ್ಕಾಗಿ ರೋಮಮಂದಿರ ಸ್ಥಾಪಿಸುತ್ತೇವೆ ಎಂದು ವಿಶ್ವದಾಧ್ಯಂತ ಕೋಟಿ ಕೋಟಿ ಹಣಸಂಗ್ರಹ ಮಾಡಿ ಹಣ ಗುಲುಂ ಮಾಡಿದ ಕಾಂತಪುರರ ಈ ಸಾಧನೆಯನ್ನು ಕೂಡ ಪರಿಗಣಿಸಲಾಯಿತು,_👉  https://youtu.be/gxM1fLCeRno
👉 https://youtu.be/ZDzV4QEK0ZU

*ಉತ್ತರ..* 👇🏽

*ಮಸ್ಜಿದುಲ್ ಆಸರ್ ನಿರ್ಮಾಣ ಖಂಡಿತಾ ನಡೆಯುತ್ತದೆ. ಆ ವಿಷಯದಲ್ಲಿ ಯಾರಿಗೂ ಸಂಶಯಬೇಡ. ಯಾರಿಗಾದರೂ ಈ ಬಗ್ಗೆ ಸಂಶಯ ಇದ್ದರೆ, ಅಂತಹವರು ಒಂದು ಸಲ ನಾಲೇಜ್ ಸಿಟಿ ಸಂದರ್ಶಿಸಿ ಬಂದರೆ ಸಾಕು. ತದನಂತರ ನೀವೇ ಹೇಳುವಿರಿ,  ಮಸ್ಜಿದುಲ್ ಆಸಾರ್ ನಿರ್ಮಾಣವಾಗುತ್ತದೋ ಇಲ್ಲವೋ,  ನಿರ್ಮಾಣ ವಾದರೆ ಅದರ ಕರ್ಚು 40 ಕೋಟಿಯದ್ದೋ, 80 ಕೋಟಿಯದ್ದೋ ಎಂದು. ಇರಲಿ, ಈ ಕುತೂಹಲ ಇನ್ನೊಂದೆರಡು ವರ್ಷದಲ್ಲಿ ತಣಿಯಬಹುದು in sha Allah.*

*ಚಲಪಿ...*
*6)* _ಪವಿತ್ರವಾದ ಮದೀನಾ ಮುನವ್ವರದ ನಬಿ (ಸ.ಅ)ರವರ ರೌಳಾಶರೀಪ್ ನಿಂದ ಹುಡಿ (ಮಣ್ಣು) ಮತ್ತು ಶ್ರೀಗಂಧದ ಬೂದಿ ತಂದಿದ್ದೇವೆ( ಕಳೆದ 900 ವರ್ಷ ಗಳಿಂದ ಸಂಪೂರ್ಣಯಾರಿಗೂ ಪ್ರವೇಶ ಇಲ್ಲದ ಪ್ರದೇಶ)ದಿಂದ ತಂದಿದ್ದೇನೆಂದು ಪೊಳ್ಳು ಪ್ರಚಾರ ನಡೆಸಿದ ಮುಗ್ದ ಜನರನ್ನು ವಂಚಿಸಿ ಮತ್ತೇ ಕೋಟಿ ಕೋಟಿ ಬಾಚಿದ ಈ ಸಾಧನೆಗಾಗಿ ಗ್ರಾಂಡ್ ಮುಫ್ತಿ ಬಿರುದು ನೋಡಲಾಯಿತು,_

*ಉತ್ತರ...👇🏽*

*ಹೌದು, ಯಾರಿಗೂ ಪ್ರವೇಶವಿಲ್ಲದಂತಹ ಪವಿತ್ರ ರೌಲಾ ಶರೀಫಿನ ಒಳಗೆ ಪ್ರವೇಶಿಸಲು ಪ್ರತ್ಯೇಕ ಅಕಾಶವನ್ನು ಪಡೆದ ಮಹಾ ಭಾಗ್ಯವಂತರಾಗಿದ್ದಾರೆ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್.  ಉಸ್ತಾದ್ ರವರ ಈ ಪ್ರವೇಶವನ್ನು ಸುಳ್ಳು ಎಂದು ವಾದಿಸುವವರು, ಅಧಿಕೃತ ಮೂಲಗಳಿಂದ ಅದನ್ನು ಸಾಬೀತು ಪಡಿಸಲಿ. ಅದೇರೀತಿ ಅಲ್ಲಿಂದ ತಂದ ಸುಗಂಧ ವನ್ನು ಪವಿತ್ರ ಕೇಶ ಮುಳುಗಿಸಿದ ನೀರಿನಲ್ಲಿ ಹಾಕಿ  ರಬಿವುಲ್ ಅವ್ವಲ್ ನಲ್ಲಿ   ಉಚಿತವಾಗಿ ವಿತರಿಸಲಾಗುತ್ತದೆ. ಯಾರೊಂದಿಗಾದರೂ ಒಂದು ನಯಾ ಪೈಸೆ ಪಡೆದುದಾಗಿ ಸಾಬೀತು ಪಡಿಸಿದರೆ, ಕೋಟಿ ರೂಪಾಯಿ ಬಹುಮಾನ ಕೊಡಲು ಸುನ್ನೀ ಮಕ್ಕಳು ತಯಾರಿದ್ದಾರೆ. ಚಾಲೆಂಜ್ ಸ್ವೀಕರಿಸುವವರು ಮುಂದೆ ಬರಬಹುದು.*
(ಮುಂದುವರೆಯುವುದು...)

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment