Saturday, September 21, 2019

*ಬಹುಸಂಖ್ಯಾತ ಹನಫಿಗಳಿಗೂ,  ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ನಾಯಕ..!*

*ಭಾರತದ ಸುಲ್ತಾನ್* ಖ್ಯಾತಿಯ *ಅಜ್ಮೀರ್ ಖ್ವಾಜಾ (ರ)* ರವರ *807 ನೇ ಉರೂಸ್ ಸಮಾರಂಭ* ದ ಮುಖ್ಯ ಅತಿಥಿಯಾಗಿ *ಇಂಡಿಯನ್ ಗ್ರ್ಯಾಂಡ್ ಮುಫ್ತಿ* ಶೈಖುನಾ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಭಾಗವಹಿಸಲಿದ್ದಾರೆ ಎಂದು ಕೇಳುವಾಗ ಮನದಲ್ಲೇನೋ ಒಂತರ ಸಂತೋಷ, ಅಭಿಮಾನ. 

ಭಾರತೀಯ ಮುಸ್ಲಿಮರ ಜನಸಂಖ್ಯೆಯ 99% ದಷ್ಟು ಬರುವವರು ಹನಫಿಗಳು. ಶಾಫಿಗಳ ಜನಸಂಖ್ಯೆ ಏನಿದ್ದರೂ 1% ಕ್ಕೆ ಮೀಸಲು, ಅಥವಾ ಅದಕ್ಕಿಂತಲೂ ಕಡಿಮೆ.  ಆ ಒಂದು ಶೇಕಡದಷ್ಟಿರುವ ಶಾಫಿ ವಿಭಾಗದ ಓರ್ವ ಆಲಿಂ, ಬಹುಸಂಖ್ಯಾತ ಹನಫಿಗಳಿಗೆ ನೇತೃತ್ವಕೊಡುವುದೆಂದರೆ,
 ಮತ್ತು, ಭಾರತದ ಅತ್ಯಂತ ಪ್ರಮುಖ ಮತ್ತು ಅತೀ ದೊಡ್ಡ ಜನಸಂದಣಿ ಇರುವಂತಹ  *ಅಜ್ಮೀರ್ ಉರೂಸ್*  ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸುವುದೆಂದರೆ, ಅದೊಂದು ಸಣ್ಣ ಗೌರವವೇನಲ್ಲ. 

*ಎಪಿ ಉಸ್ತಾದರ ಉನ್ನತಿ ಒಂದು ಆಶ್ಚರ್ಯವೇ..!*
ಈ ಭೂಮಿ ಮೇಲೆ ಇನ್ನೇನು ಆರೋಪಗಳನ್ನು ಕೇಳಲೂ ಬಾಕಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಟೀಕೆ ವಿಮರ್ಶನೆ ಅಪವಾದಗಳನ್ನು ಎದುರಿಸಿದವರಾಗಿದ್ದಾರೆ ಬಹುಮಾನ್ಯರಾದ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್.
ಹತ್ತೈವತ್ತು ವರ್ಷಗಳಿಂದ ಸಾವಿರಾರು ಆರೋಪ, ಅಪವಾದಗಳನ್ನು ಹೊರಿಸಲ್ಪಟ್ಟರೂ, ಇದುವರೆಗೂ ಅದ್ಯಾವುದೂ ಉಸ್ತಾದರ ಉನ್ನತಿಗೆ ತಡೆಯಾಗಿಲ್ಲ ಎಂಬುದು ಒಂದಾಶ್ಚರ್ಯವೇ.

*ಎಪಿ ಉಸ್ತಾದರ ಈ ಉನ್ನತಿಗೆ ಪ್ರಮುಖ ಕಾರಣ ಉಸ್ತಾದರ ಕ್ಷಮೆ ಎಂದರೆ ತಪ್ಪಾಗಲಾರದು.*
ಯಾರೇನೇ ಟೀಕಿಸಿದರೂ, ನಿಂದಿಸಿದರೂ, ವಿಮರ್ಶಿಸಿದರೂ,  ಅದೆಲ್ಲವನ್ನೂ, ಅವರೆಲ್ಲರನ್ನೂ ಕ್ಷಮಿಸಿ ಮುಗುಲ್ನಗೆಯೊಂದಿಗೆ ಮುನ್ನುಗ್ಗುವ ಉಸ್ತಾದರ ಗುಣವಂತೂ ಅದ್ಭುತ. 
ಎಪಿ ಉಸ್ತಾದ್,  ಇದುವರೆಗೂ ತನ್ನ ಟೀಕಾಕಾರರಿಗೆ ಒಂದಕ್ಷರ ತಿರುಗಿ ಟೀಕಿಸಿದ್ದನ್ನು ತೋರಿಸಲು ಖಂಡಿತಾ ಯಾರಿಂದಲೂ ಸಾದ್ಯವಿಲ್ಲ.  ಯಾರನ್ನು ಕೂಡಾ ಎಪಿ ಉಸ್ತಾದ್ ವೈಯುಕ್ತಿಕವಾಗಿ ಟೀಕಿಸಿದವರಲ್ಲ, ವಿಮರ್ಶಿಸಿದವರೂ ಅಲ್ಲ.
 ಇದಾಗಿದೆ,  ಅಲ್ಲಾಹು ಎಪಿ ಉಸ್ತಾದರ ಪದವಿಯನ್ನು ಎತ್ತರಕ್ಕೇರಿಸುತ್ತಾ ಹೋಗಲು ಪ್ರಮುಖ ಕಾರಣ.

ಒಂದು ವೇಳೆ, ಎಪಿ ಉಸ್ತಾದೇನಾದರೂ ತನ್ನನ್ನು ಟೀಕಿಸಿದವರಿಗೆ  ಒಂದಕ್ಷರ ತಿರುಗಿ ಟೀಕಿಸಿದ್ದರೆ, ಅಥವಾ ವಿಮರ್ಶಿಸಲು ಸಮಯ ಕಂಡುಕೊಂಡಿದ್ದರೆ,  ಎಪಿ ಉಸ್ತಾದ್ ಎಂಬ ಆ ಮಹಾ ನಾಯಕನ ಹೆಸರೇ ಈ ಭೂಮಿ ಮೇಲೆ ಕೇಳಲು ಸಾಧ್ಯವಾಗುತ್ತಿರಲಿಲ್ಲವೇನೋ.
ಆದರೆ, ಎಪಿ ಉಸ್ತಾದರ ಬಂಡೆಕಲ್ಲಿನಂತಹ ಕ್ಷಮೆಯ ಮುಂದೆ ಎಲ್ಲವೂ ಸೋತು ಸುಣ್ಣವಾಗಿ ಹೋದವು. ಉಸ್ತಾದ್ ಮಾತ್ರ ದಿನದಿಂದ ದಿನಕ್ಕೆ ಎತ್ತರಕ್ಕೇರುತ್ತಲೇ ಸಾಗಿದರು.
*ಅಲ್ಲಾಹು ಉಸ್ತಾದರ ಪದವಿಯನ್ನು ಇನ್ನಷ್ಟು ಉನ್ನತಿಗೇರಿಸಲಿ, ಆಮೀನ್.*

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment