Saturday, September 21, 2019

*ಶಿಲಾನ್ಯಾಸ ಫಲಕದಲ್ಲಿ ಎಪಿ ಉಸ್ತಾದ್ ರವರನ್ನು ಗ್ರ್ಯಾಂಡ್ ಮುಫ್ತಿ ಎಂದು ಉಲ್ಲೇಖಿಸಲಾಗಿಲ್ಲವಂತೆ..!*

*ಸುಲ್ತಾನುಲ್ ಉಲಮಾ ಎಪಿ ಉಸ್ತಾದ್* ರವರ *ಗ್ರ್ಯಾಂಡ್ ಮುಫ್ತಿ* ಪದವಿಯನ್ನು ಅಲ್ಲಗಳೆಯಲು ವಿರೋಧಿಗಳು ಕಂಡುಕೊಂಡ ಒಂದು ಕುಂಟುನೆಪವಾಗಿದೆ, ಶಿಲಾನ್ಯಾಸ ಫಲಕದಲ್ಲಿ *ಗ್ರ್ಯಾಂಡ್ ಮುಫ್ತಿ* ಎಂದು ಉಲ್ಲೇಖಿಸಿಲ್ಲ ಎಂಬುದು.

*ಸುಲ್ತಾನುಲ್ ಉಲಮಾ ಎಪಿ ಉಸ್ತಾದ್* ರವರನ್ನು ಹಲವಾರು ವಿಶೇಷ ಗೌರವ ನಾಮ ಗಳಿಂದ ಗುರುತಿಸುತ್ತಾರೆ.   ವಿಶ್ವದಲ್ಲೇ ಇಷ್ಟೊಂದು ವಿಷೇಶ ನಾಮಗಳಿಂದ ಗುರುತಿಸಲ್ಪಡುವ ಓರ್ವ ಆಲಿಂ ಇದ್ದರೆ, ಅದು *ಎಪಿ ಉಸ್ತಾದ್* ಮಾತ್ರವಾಗಿರಬಹುದು.
*ಶೈಖ್ ಅಬೂಬಕರ್ ಅಹ್ಮದ್*
*ಸುಲ್ತಾನುಲ್ ಮಶಾಇಖ್*
*ಸುಲ್ತಾನುಲ್ ಉಲಮಾ*
*ಖಮರುಲ್ ಉಲಮಾ*
*ತಾಜುಲ್ ಮಶಾಇಖ್*
*ಅಬುಲ್ ಐತಾಂ*
*ಖಾಯಿದುಝ್ಝಮಾನ್*
*ಶೈಖೇ ಖಬೀರ್ ಗ್ರ್ಯಾಂಡ್ ಮುಫ್ತಿ*
ಹಾಗೂ..
*ಜನರಲ್ ಸೆಕ್ರೆಟರಿ, ಅಖಿಲ ಭಾರತ ಜಂಹಿಯ್ಯತುಲ್ ಉಲಮಾ.*
*ಜನರಲ್ ಸೆಕ್ರೆಟರಿ, ಸಮಸ್ತ ಕೇರಳ ಜಂಹಿಯ್ಯತುಲ್ ಉಲಮಾ.*
*Chancellor markazussaqafathi ssunniya*
Etc.

ಪ್ರತಿಯೊಂದು ನಾಮ ಗಳೂ ಉಸ್ತಾದರ ಮಹತ್ವವನ್ನು ಎತ್ತಿತೋರಿಸುತ್ತದೆ. ಒಬ್ಬೊಬ್ಬರು ಒಂದೊಂದು ಗೌರವ ನಾಮದಿಂದ ಉಸ್ತಾದರನ್ನು ಗುರುತಿಸುತ್ತಾರೆ. ಅದರಂತೆ, ಅವರಿಗೆ ಸಂಬಂಧಪಟ್ಟ ದಾಖಲೆಯಲ್ಲಿ ಉಸ್ತಾದರ ಯಾವುದಾದರೊಂದು ಗೌರವ  ನಾಮವನ್ನು ಮುದ್ರಿಸುತ್ತಾರೆ. ಪ್ರತಿಯೊಂದು ಗೌರವ ನಾಮವನ್ನು ಪ್ರತಿಯೊಂದಕ್ಕೂ ಯಾರೂ ಹಾಕುವುದಿಲ್ಲ ಎಂದೂ, ಹಾಗೆ ಹಾಕಲು ಸಾದ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವಂತಹದ್ದೇ.

ಯಾವುದಾದರೊಂದು ಗೌರವ ನಾಮವನ್ನು ಸೇರಿಸಿದಾಕ್ಷಣ, ಮತ್ತೊಂದಕ್ಕೆ ಮಹತ್ವ ಇಲ್ಲವೆಂದೋ, ಅಥವಾ ಅವರು ಇನ್ನುಳಿದ ಗೌರವ ನಾಮಗಳನ್ನು ಸ್ವೀಕರಿಸಿಲ್ಲವೆಂದೋ ಅರ್ಥವಲ್ಲ.
ಅಥವಾ ಒಂದು ದೊಡ್ಡದು, ಮತ್ತೊಂದು ಚಿಕ್ಕದು ಎಂದೂ ಅಲ್ಲ. ಎಲ್ಲವೂ ಪ್ರಮುಖ ಉಲಮಾಗಳು, ಅವುಲಿಯಾ ಶ್ರೇಷ್ಠರೇ ಹೆಸರಿಟ್ಟಂತಹದ್ದು. ಹಾಗಾಗಿ ಪ್ರತಿಯೊಂದು ಗೌರವ ನಾಮಗಲೂ ಉಸ್ತಾದರ ಪಾಲಿಗೆ ಅತೀ ಮಹತ್ವವುಳ್ಳವುಗಳೇ ಆಗಿವೆ. 

*ಚೇಲಾರಿ ಸಮಸ್ತ ಅದ್ಯಕ್ಷರಾದ ಜಿಫ್ರಿ ತಂಙಳ್ ಹಾಗೂ ಪ್ರಧಾನ ಕಾರ್ಯದರ್ಶಿ ಆಲಿಕುಟ್ಟಿ ಮುಸ್ಲಿಯಾರ್ ರನ್ನು ಮುಸ್ಲಿಮರು ಗುರುತಿಸುವುದೇ ಸಮಸ್ತದ ಅದ್ಯಕ್ಷರು ಮತ್ತು ಪ್ರ:ಕಾರ್ಯದರ್ಶಿ ಗಳಾಗಿ.  ಖಾಝಿ ಗಳಾಗಿ ಎಲ್ಲಿಯೂ ಗುರುತಿಸಿಕೊಳ್ಳದ ಕಾರಣ ಅವರ ಖಾಝಿ ಸ್ಥಾನವು ಮಹತ್ವ ಕಳೆದುಕೊಳ್ಳುತ್ತದೆಯಾ. ಇಲ್ಲವಲ್ಲ*

*ಸುಲ್ತಾನುಲ್ ಉಲಮಾ ಎಪಿ ಉಸ್ತಾದ್* ಭಾರತದ ಗ್ರ್ಯಾಂಡ್ ಮುಫ್ತಿಯಾಗಿ ನೇಮಕಗೊಳ್ಳುವ ವರೆಗೆ, ಅದುವರೆಗೂ ಭಾರತದಲ್ಲಿ *ಗ್ರ್ಯಾಂಡ್ ಮುಫ್ತಿ*  ಎಂಬ ಪದವಿಯೊಂದಿದೆ ಎಂದೂ,  ಅದುವರೆಗೂ ಆ ಸ್ಥಾನವನ್ನು ತುಂಬಿದವರು *ತಾಜುಶ್ಯರೀಅ ಮುಫ್ತಿ ಅಕ್ತರ್ ರಝಾಖಾನ್, ಬರೇಲ್ವಿ*  ಯವರು ಎಂದು ಯಾರಿಗಾದರೂ ಗೊತ್ತಿತ್ತಾ.
*ತಾಜುಶ್ಯರೀಅ* ರವರು ಮರಣ ಹೊಂದಿದಾಗಲೂ *ಮುಫ್ತಿ ಅಕ್ತರ್ ರಝಾಖಾನ್* ಮರಣ ಹೊಂದಿದರು ಎಂದು ವಾರ್ತೆ ಬಿತ್ತರಿಸಲಾಗಿತ್ತೇ ಹೊರತು, *ಭಾರತದ ಗ್ರ್ಯಾಂಡ್ ಮುಫ್ತಿ* ಯವರು  ಮರಣ ಹೊಂದಿದರು ಎಂದು ಎಲ್ಲೂ ಉಲ್ಲೇಖಿಸಲಾಗಿರಲಿಲ್ಲ.
ಅದೇರೀತಿ ಅವರನ್ನು ಹೆಚ್ಚಾಗಿ ಗುರುತಿಸಲಾಗುತ್ತಿದ್ದದ್ದೇ *ತಾಜುಶ್ಯರೀಅ* ಎಂಬ ಗೌರವ ನಾಮದಿಂದ.  *ಭಾರತದ ಗ್ರ್ಯಾಂಡ್ ಮುಫ್ತಿ* ಎಂಬ ಪದವಿಯಿಂದ ಗುರುತಿಸಿಕೊಳ್ಳದ ಕಾರಣ, ಅವರ *ಗ್ರ್ಯಾಂಡ್ ಮುಫ್ತಿ* ಸ್ಥಾನ ಮಹತ್ವ ಕಳೆದುಕೊಂಡಿತ್ತಾ.?

ಇಲ್ಲೊಂದು ಲಿಂಕ್ ಕೊಟ್ಟಿದ್ದೇನೆ.
ಅದು *ahlussunnah world* ಎಂಬ ವಿಶ್ವದ ಸುನ್ನತ್ ಜಮಾಹತ್ ಗೆ ಸಂಬಂಧಪಟ್ಟ ವಾರ್ತೆಗಳನ್ನು ಬಿತ್ತರಿಸುವ *Facebook page*  ನಲ್ಲಿ  ಬಂದ *ತಾಜುಶ್ಯರೀಅ* ರವರ ಮರಣ ವಾರ್ತೆಯ ರಿಪೋರ್ಟಾಗಿದೆ. ಅದರಲ್ಲಿ *ಮುಫ್ತಿ ಅಖ್ತರ್ ರಝಾಖಾನ್ ರವರು ಮರಣ ಹೊಂದಿದರು* ಎಂದು ಉಲ್ಲೇಖಿಸಲಾಗಿತ್ತೇ ಹೊರತು, *ಭಾರತದ ಗ್ರ್ಯಾಂಡ್ ಮುಫ್ತಿ ಯವರು ಮರಣ ಹೊಂದಿದರು* ಎಂದು ಉಲ್ಲೇಖಿಸಲಾಗಿರಲಿಲ್ಲ.
ಅದರರ್ಥ ಅವರು *ಗ್ರ್ಯಾಂಡ್ ಮುಫ್ತಿ* ಆಗಿಲ್ಲ ಎಂದೋ, ಅಥವಾ ಅವರ *ಗ್ರ್ಯಾಂಡ್ ಮುಫ್ತಿ* ಪದವಿಗೆ ಮಹತ್ವ  ಇಲ್ಲವೆಂದೊ ಅರ್ಥವಲ್ಲ ಎಂಬುದು ತಲೆಯಲ್ಲಿ ಬುದ್ದಿಯಿರುವವರಿಗೆ ತಿಳಿಯಬಹುದು.

https://www.facebook.com/394382137353099/posts/943789745745666/

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment